Homeಅಂಕಣಗಳುಗೌರಿ ಕಾರ್ನರ್: ನಮ್ಮನ್ನೆಲ್ಲ ತಿದ್ದಿ ಗೆಳೆಯರಂತೆ ನೋಡಿಕೊಳ್ಳುತ್ತಿದ್ದರು...

ಗೌರಿ ಕಾರ್ನರ್: ನಮ್ಮನ್ನೆಲ್ಲ ತಿದ್ದಿ ಗೆಳೆಯರಂತೆ ನೋಡಿಕೊಳ್ಳುತ್ತಿದ್ದರು…

ಅವರು ಬಿಸಿ ರಕ್ತದ ಯುವಜನರಿಗೆ ಸೈದ್ಧಾಂತಿಕವಾಗಿ ಇರಬೇಕಾದ ಸ್ಪಷ್ಟತೆಯ ಬಗ್ಗೆ ತಿಳಿಹೇಳಿದ್ದರು. ಅಲ್ಲದೇ ತಮ್ಮದೇ ಉದಾಹರಣೆಯನ್ನು ನೀಡುತ್ತಾ ತಮಗೆ ಗೊತ್ತಿಲ್ಲದ್ದನ್ನು ಗೊತ್ತಿಲ್ಲ ಎಂದು ಧೈರ್ಯವಾಗಿಯೇ ದಾಖಲಿಸುತ್ತಿದ್ದರು.

- Advertisement -
- Advertisement -

ಬಲಪಂಥೀಯವಾದವನ್ನು ವಿರೋಧಿಸುವ ಭರದಲ್ಲಿ ಒಮ್ಮೊಮ್ಮೆ ನಾವು ಕುರುಡಾಗುವುದುಂಟು. ಮೋದಿ ಮಾಡಿದ್ದೆವೂ ತಪ್ಪು, ಆತನ ಕುರಿತು ಏನಾದರು ಸಿಕ್ಕರೆ ಸಾಕು ತಮಾಷೆ ಮಾಡಲು ಕಾಯುತ್ತಿದ್ದ ನಮ್ಮಂಥ ಯುವಕರಿಗೆ ಗೌರಿ ಮೇಡಂ ನಮ್ಮ ವಿರೋಧ ಏನಿದ್ದರೂ ಸೈದ್ಧಾಂತಿಕವಾದದ್ದು ಎನ್ನುವ ಪಾಠ ಕಲಿಸಿದ್ದರು! ’ಬೂಸಿ ಬಸ್ಯಾ ಮೋದಿ’ ಎನ್ನುವ ಕಾಲಂಅನ್ನು 50 ವಾರದ ಗಡಿಯವರೆಗೂ ಪ್ರಕಟಿಸಿದ್ದ ಗೌರಿ ಮೇಡಂ, ನರೇಂದ್ರ ಮೋದಿ ಒಮ್ಮೆ ಶ್ರೀಲಂಕಾ ಪ್ರವಾಸದಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡುತ್ತಾ ಮಾಡಿದ ಯಡವಟ್ಟಿನ ಭಾಷಣದ ತುಣುಕು ಹಿಡಿದುಕೊಂಡು ನಾವೆಲ್ಲ ತಮಾಷೆ ಮಾಡುವಾಗ, “ಭಾಷೆ ಬರಲ್ಲ ಅನ್ನುವ ಕಾರಣಕ್ಕೆ ಹಾಗೆಲ್ಲ ಆಡಿಕೊಳ್ಳಬಾರದು ಮರಿ” ಎಂದು ಎಚ್ಚರಿಸಿದ್ದರು. ಅಲ್ಲದೆ ಅವರು ಈ ಕುರಿತ ತಮಾಷೆಯನ್ನು ತಮ್ಮ ಫೇಸ್ಬುಕ್ ವಾಲ್ ಹಾಗೂ ಅಂಕಣದಲ್ಲಿಯೂ ದಾಖಲಿಸಿ ಗಟ್ಟಿದನಿಯಲ್ಲಿಯೇ ವಿರೋಧಿಸಿದ್ದರು. “ತಾವು ಬೆಳೆದಿರುವ ವಾತಾವರಣ ಮತ್ತು ಅವಕಾಶಗಳ ಕಾರಣಕ್ಕಾಗಿ ವ್ಯಕ್ತಿಯ ಭಾಷೆಯು ವಿಕಾಸವಾಗುತ್ತದೆ. ನಾನು ಕನ್ನಡ ಪತ್ರಿಕೋದ್ಯಮಕ್ಕೆ ಕಾಲಿಟ್ಟಾಗ ಕಾಗುಣಿತ ತಪ್ಪುಗಳನ್ನು ಮಾಡುತ್ತಿದ್ದೆ. ಇಂದಿಗೂ ನನಗೆ ಕನ್ನಡ ಇಂಗ್ಲಿಷ್‌ನಷ್ಟು ಸುಲಭವಲ್ಲ ಎನ್ನುವುದು ಅವರ ಅಭಿಪ್ರಾಯವಾಗಿತ್ತು.

ಹೀಗೆ ಹೇಳುತ್ತಾ ಅವರು ಬಿಸಿ ರಕ್ತದ ಯುವಜನರಿಗೆ ಸೈದ್ಧಾಂತಿಕವಾಗಿ ಇರಬೇಕಾದ ಸ್ಪಷ್ಟತೆಯ ಬಗ್ಗೆ ತಿಳಿಹೇಳಿದ್ದರು. ಅಲ್ಲದೇ ತಮ್ಮದೇ ಉದಾಹರಣೆಯನ್ನು ನೀಡುತ್ತಾ ತಮಗೆ ಗೊತ್ತಿಲ್ಲದ್ದನ್ನು ಗೊತ್ತಿಲ್ಲ ಎಂದು ಧೈರ್ಯವಾಗಿಯೇ ದಾಖಲಿಸುತ್ತಿದ್ದರು. ರೋಹಿತ್ ವೇಮುಲಾನ ಸಾಂಸ್ಥಿಕ ಹತ್ಯೆಯ ಘಟನೆಗೆ ಸಂಬಂಧಿಸಿದಂತೆ ಗೌರಿ ಮೇಡಂ ದಲಿತ ಯುವ ಹೋರಾಟಗಾರರನ್ನು ಒಂದು ಕಡೆ ಸೇರಿಸಿ ಸಭೆ ಕರೆದಿದ್ದರು. ಸಭೆಯಲ್ಲಿ ಮುಂದಿನ ನಮ್ಮ ಹೋರಾಟದ ಕುರಿತು ಒಂದು ನೋಟ್ ಬರೆಯಬೇಕು ಎಂದು ತೀರ್ಮಾನವಾದಾಗ ಗೌರಿ ಮೇಡಂ ಬರಿಯಬೇಕು ಎನ್ನುವುದು ಎಲ್ಲರ ಅಭಿಪ್ರಾಯವಾಗಿತ್ತು. ಆಗ ಗೌರಿ ಮೇಡಂ “ಹೇಯ್ ಇಲ್ಲಪ್ಪ ಅದೆಲ್ಲ ನನಿಗೆ ಬರಿಯೋಕೆ ಬರಲ್ಲ. ನನ್ನ ಕೈಲಿ ಆಗಲ್ಲ, ಸರೋವರ್ ಅಥವಾ ಹುಲಿಕುಂಟೆ ಮೂರ್ತಿ ಬರೆಯಲಿ” ಎಂದರು.

ಸಂಘಟನೆ ಹೋರಾಟಗಳಿಗೆ ಹೊಸಬನಾಗಿದ್ದ ನನಗೂ ಏನು ಬರೆಯುವುದೆಂದು ತಿಳಿದಿರಲಿಲ್ಲ. ಒಳಗೆ ಪುಕಪುಕ ಎನ್ನುತ್ತಿದ್ದರೂ ಬರಿಯೋಕೆ ಬರಲ್ಲ ಎನ್ನುವ ಧೈರ್ಯ ನಾನು ಮಾಡಲಿಲ್ಲ. ಅಷ್ಟರಲ್ಲಿ ಹುಲಿಕುಂಟೆ ಮೂರ್ತಿ ಅವರು ಬರೆಯಲು ಒಪ್ಪಿಕೊಂಡಾಗ ಸಮಾಧಾನವಾಯಿತು. ಆದರೆ ಗೌರಿ ಮೇಡಂನಿಂದಾಗಿ ಅಂದು ನಾನು ಗೊತ್ತಿಲ್ಲದ್ದನ್ನು ಗೊತ್ತಿಲ್ಲ ಎಂದು ಹೇಳುವ ಧೈರ್ಯವನ್ನು ತೋರಿಸಬೇಕು ಎನ್ನುವುದನ್ನು ಕಲಿತುಕೊಂಡೆ. ಅಷ್ಟೇ ಅಲ್ಲದೆ ಯುವ ಬರಹಗಾರರಿಗೆ ಅವಕಾಶ ನೀಡುವುದು ಅವರ ಉದ್ದೇಶವಾಗಿತ್ತು ಎನ್ನುವುದನ್ನೂ.

ಇನ್ನು ಅವರು ತಮ್ಮ ಮೇಲೆ ಬರುವ ವಿಮರ್ಶೆಯನ್ನು ಬಹಳ ಸ್ಪೋರ್ಟಿವ್ ಆಗಿ ತಗೆದುಕೊಳ್ಳುತ್ತಿದ್ದರು. ಪತ್ರಿಕೆಯಲ್ಲಿ ತಪ್ಪಾದಾಗ ’ತಪ್ಪಾಯಿತು ತಿದ್ಕೋತೀವಿ’ ಎನ್ನುವ ತಲೆಬರಹದಲ್ಲಿಯೇ ಪ್ರಕಟಣೆ ಮಾಡುತ್ತಿದ್ದದ್ದು ನಮಗೆಲ್ಲಾ ತಿಳಿದೇ ಇದೆ. ಹೆಚ್.ಎಲ್.ಕೆ ಅವರ ನೆನಪಿನಲ್ಲಿ ಫೇಸ್ಬುಕ್‌ನಲ್ಲಿ ಅವರ ಕುರಿತು ಟಿಪ್ಪಣಿ ಬರೆದು ಹಂಚಿಕೊಂಡಿದ್ದೆ. ಅದರಲ್ಲಿ ನಾನು “ಗೆಳೆಯರು ಗೌರಿ ಲಂಕೇಶ್ ಪತ್ರಿಕೆಯನ್ನು ನಿಯತವಾಗಿ ಓದಬೇಕು ಎನ್ನುವ ಸಲುವಾಗಿ ಪತ್ರಿಕೆ ಕೊಂಡುಕೊಂಡು ಓದಲು ಪ್ರಯತ್ನಿಸುತ್ತಿದ್ದೆ. ಆದರೆ ಶಿವಸುಂದರ್, ಗೌರಿ ಲಂಕೇಶರ ಲೇಖನಗಳು ತಲೆಬುಡ ಅರ್ಥವಾಗುತ್ತಿರಲಿಲ್ಲ. ವ್ಯಂಗ್ಯ ಮತ್ತು ಆಡುಭಾಷೆಯಲ್ಲಿ ನಮಗೆ ರಾಜಕೀಯವನ್ನು ಅರ್ಥ ಮಾಡಿಕೊಳ್ಳಲು ಕಾರಣವಾಗಿದ್ದು ಎಚ್.ಎಲ್.ಕೆ ಅವರಿಂದ” ಎಂದು ಬರೆದಿದ್ದೆ. ಅದನ್ನು ಓದಿದ ಗೌರಿ ಮೇಡಂ ಶಿವಸುಂದರ್ ಅವರ ಫೋನಿನಿಂದ ಕಾಲ್ ಮಾಡಿಸಿ, “ಏನೋ ನಾನು ಬರಿಯೋದು ತಲೆಬುಡ ಅರ್ಥವಾಗಲ್ವ, ನನ್ನ ಕೈಗೆ ಸಿಗು ನಿನ್ನ ಕೈಕಾಲು ಮುರೀತೀನಿ ಮಗನೆ” ಎಂದು ಹೇಳಿ ನಕ್ಕರು. ಓದು ನನಗೆ ಹೊಸದಾಗಿದ್ದರಿಂದ ಹಾಗೆ ಅನ್ನಿಸಿತ್ತೇ ಹೊರತು ಗೌರಿ ಮೇಡಂ ಕೂಡ ಎಲ್ಲರಿಗೂ ಅರ್ಥವಾಗುವಂತೆ ಅತ್ಯಂತ ಸರಳವಾಗಿ ಬರೆಯುತ್ತಿದ್ದರು ಮತ್ತು ಅದನ್ನು ಅವರು ಭೇಟಿಯಾದಾಗ ಹೇಳಿದೆ ಕೂಡ. ಹೀಗೆ ಅವರು ತಮಗೆ ಬರುತ್ತಿದ್ದ ವಿಮರ್ಶೆಯನ್ನು ಮುಕ್ತವಾಗಿ ತೆಗೆದುಕೊಳ್ಳುತ್ತಿದ್ದರು ಮತ್ತು ಅದರ ಕುರಿತು ಗಂಭೀರವಾಗಿ ಯೋಚಿಸುತ್ತಿದ್ದರೂ ಕೂಡ.

ದಾವಣಗೆರೆಯ ಕಾರ್ಯಕ್ರಮವೊಂದರಲ್ಲಿ ಯೋಗೇಶ್ ಮಾಸ್ಟರ್ ಅವರ ಮೇಲೆ ಕೆಲ ಕಿಡಿಗೇಡಿಗಳು ಮಸಿ ಎರಚಿ ದಾಳಿ ಮಾಡಲು ಮುಂದಾಗಿದ್ದರು. ಅವರನ್ನು ಬಂಧಿಸಿದ ನಂತರ ಗೌರಿ ಮೇಡಂ ಆ ದಾಳಿಕೋರ ಹುಡುಗರನ್ನು ನೋಡಿಕೊಂಡು ಹೊರಗೆ ಬಂದಾಗ “ಛೇ ಪಾಪ ಎಲ್ಲಾ ಎಳೆ ಮಕ್ಕಳು. ಬಡವರು. ಆಟೋ ಓಡಿಸಿಕೊಂಡು ಜೀವನ ಮಾಡುವ ಹುಡುಗರು ಇದ್ದಾರೆ. ಕೋಮುವಾದಿ ರಾಜಕಾರಣಿಗಳು ಧರ್ಮದ ಅಮಲು ತುಂಬಿಸಿ ಈ ಹುಡುಗರ ಭವಿಷ್ಯ ಹಾಳು ಮಾಡುತ್ತಿದ್ದಾರಲ್ಲ ಎಂದು ಮರುಕಪಟ್ಟರು.

ಕಾರ್ಯಕ್ರಮ ಮುಗಿಸಿಕೊಂಡು ದಾವಣಗೆರೆಯಿಂದ ಬೆಂಗಳೂರಿಗೆ ಕಾರಿನಲ್ಲಿ ವಾಪಸ್ಸಾಗುವಾಗ ಟಿ.ಕೆ.ದಯಾನಂದ್ ಅವರು ಮಾಡಿದ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಶುರುವಾಯಿತು. ಯೋಗೇಶ್ ಮಾಸ್ಟರ್ ಅವರ ಫೋಟೋದೊಂದಿಗೆ ಬಲಪಂಥೀಯರಿಗೆ ಕೌಂಟರ್ ಕೊಡುವ ಪೋಸ್ಟರ್ ಆಗಿತ್ತು ಮತ್ತು ತುಂಬಾ ತಮಾಷೆಯಾಗಿಯೂ ಇತ್ತು. ಇದನ್ನು ನೋಡಿ ಗೌರಿ ಮೇಡಂ ಜೋರಾಗಿ ನಗುತ್ತಲೇ ಇದ್ದರು. ನಗುತ್ತಾ ನಗುತ್ತಾ ವಾಂತಿಯೇ ಮಾಡಿಕೊಂಡರು! (ಸ್ವಲ್ಪ ಆರೋಗ್ಯವೂ ಕೆಟ್ಟಿತ್ತು). ಆ ದಯಂಗೆ ಕಾಲ್ ಮಾಡಿ ಅವನ ಪೋಸ್ಟರ್ ಇಂದ ನಕ್ಕು ನಾನು ವಾಂತಿ ಮಾಡಿಕೊಂಡೆ ಅಂತ ಹೇಳಿ, ನಾನು ಚನ್ನಾಗಿ ಬೈದೆ ಅಂತ ಅವನಿಗೆ ಹೇಳು ಎಂದರು. ನಂತರ “ಅಲ್ಲೋ ಸರೋವರ ನೀನು ಮತ್ತು ದಯಾ ಊರೋರಿಂದೆಲ್ಲಾ ಫೋಟೋ ಹಾಕಿ ಪೋಸ್ಟರ್ ಮಾಡ್ತೀರ ನಂದು ಒಂದಾದ್ರೂ ಮಾಡಿದ್ದೀರೇನೋ?” ಎಂದು ಕೇಳಿದರು. ನಾನು ಆಗ “ಓಕೆ ಬಿಡಿ ಮೇಡಂ ನಿಮ್ಮದೂ ಒಂದು ಮಾಡ್ತೀನಿ” ಎಂದಿದ್ದೆ.

ಆದರೆ ಅವರ ಪೋಸ್ಟರ್ ಮಾಡಲು ಸಾಧ್ಯವಾಗಿದ್ದು ಯಾವಾಗ?!! ಸೆಪ್ಟೆಂಬರ್ 5 ರಂದು! ಗೌರಿ ಮೇಡಂ ಹತ್ಯೆಯಾದ ಮರು ದಿನ ಟೌನ್‌ಹಾಲ್ ಮುಂದೆ ಜನರು ತಮ್ಮ ಕೈಗಳಲ್ಲಿ ಹಿಡಿದಿದ್ದ ಪೋಸ್ಟರ್‌ಗಳು ಬ್ಯಾನರ್‌ಗಳು ಬಹುತೇಕ ಎಲ್ಲವನ್ನೂ ನಾನು ಅಂದು ಡಿಸೈನ್ ಮಾಡಬೇಕಾಗಿ ಬಂತು. ಆವತ್ತು ನನ್ನದೂ ಪೋಸ್ಟರ್ ಮಾಡ್ರೋ ಎಂದು ಕೇಳಿದ್ರಲ್ಲ ನೋಡಿ ಇಲ್ಲಿ ಎಂದು ಮನಸ್ಸಿನಲ್ಲೇ ಹೇಳಿಕೊಂಡೆನು. ಅದೇ ಪ್ರತಿಭಟನೆಯಲ್ಲಿ ಗೌರಿ ಮೇಡಂ ಟೌನ್‌ಹಾಲ್‌ನ ಮೆಟ್ಟಿಲಿನ ಮೇಲೆ ಮುಂದಿನ ಸಾಲಿನಲ್ಲಿ ಕೂತಿರುತ್ತಾರೆ ಬಿಡು ಎಂದು ನನ್ನಂತೆಯೇ ನೂರಾರು ಜನಕ್ಕೆ ಅಂದು ಅನಿಸಿರಲು ಸಾಧ್ಯ. ಇಂದಿಗೂ ಅವರು ನಮ್ಮ ಎಲ್ಲಾ ಪ್ರತಿಭಟನೆಯಲ್ಲಿ ಮುಂದಿನ ಸಾಲಿನಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ಅದೆಲ್ಲೋ ಮೂಲೆಯಲ್ಲಿ ಕುರ್ಚಿಯ ಮೇಲೆ ಕೂತು ಎಲ್ಲವನ್ನೂ ಆಲಿಸುತ್ತಿರುತ್ತಾರೆ.

  • ಸರೋವರ್ ಬೆಂಕಿಕೆರೆ

ಇದನ್ನೂ ಓದಿ: ವಿದ್ಯಾರ್ಥಿ ಮಿತ್ರರಾಗಿ ಸ್ಫೂರ್ತಿ ತುಂಬುತ್ತಿದ್ದ ಗೌರಿ ಮೇಡಂ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...