Homeಮುಖಪುಟಜಿಡಿಪಿ 4.5%, ಆರ್ಥಿಕ ಹಿಂಜರಿಕೆಯತ್ತ ಭಾರತ?

ಜಿಡಿಪಿ 4.5%, ಆರ್ಥಿಕ ಹಿಂಜರಿಕೆಯತ್ತ ಭಾರತ?

- Advertisement -
- Advertisement -

| ಬಿ.ಸಿ .ಬಸವರಾಜ್ |

ಕೇಂದ್ರ ಸರ್ಕಾರ ಇನ್ನೂ ಕೂಡ ನಮ್ಮ ಆರ್ಥಿಕತೆಯ ಗಂಭೀರತೆಯನ್ನು ಗುರುತಿಸುವ ಕೆಲಸವನ್ನೇ ಮಾಡದಿರುವುದರಿಂದ, ಇದಕ್ಕೆ ತಕ್ಕ ಪರಿಹಾರಗಳನ್ನು ಹುಡುಕುವ ಕೆಲಸವೂ ಸರ್ಕಾರದ ಕೈಯಲ್ಲಿ ಆಗುತ್ತಿಲ್ಲ. ಇದರಿಂದಾಗಿ, ಮುಂಬರುವ ದಿನಗಳು ಮತ್ತಷ್ಟು ನಿರುದ್ಯೋಗದ, ಬಡತನದ ದಿನಗಳಾಗಲಿವೆ ಎಂದೇ ಅನಿಸುತ್ತಿದೆ.

ಇತ್ತೀಚೆಗೆ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್‍ರವರು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ” ಈಗ ಉಂಟಾಗಿರುವುದು ಕೇವಲ ಆರ್ಥಿಕ ಅಭಿವೃದ್ಧಿಯಲ್ಲಿ ಇಳಿಕೆಯೇ ಹೊರತು ಇದು ಆರ್ಥಿಕ ಹಿಂಜರಿತವಲ್ಲ. ಕೇಂದ್ರ ಸರ್ಕಾರ ಈ ಅಭಿವೃದ್ಧಿಯ ಇಳಿತವನ್ನು ಸರಿಪಡಿಸಲು ಎಲ್ಲ ಅಗತ್ಯ ಕ್ರಮಗಳನ್ನೂ ಕೈಗೊಂಡಿದ್ದು ಅದರ ಒಳ್ಳೆಯ ಫಲಿತಾಂಶಗಳು ಈಗ ಬರುತ್ತಿವೆ. ಆದ್ದರಿಂದ ಭಾರತ ಸದ್ಯದಲ್ಲಿ ಆರ್ಥಿಕ ಹಿಂಜರಿತಕ್ಕೆ ಒಳಗಾಗುವ ಪ್ರಶ್ನೆಯೇ ಇಲ್ಲ” ಎಂದಿದ್ದಾರೆ.

ವಿತ್ತ ಮಂತ್ರಿಯವರು ಈ ಹೇಳಿಕೆ ನೀಡಿದನಂತರ ಬಿಡುಗಡೆಯಾದ ಜಿಡಿಪಿ ಅಂಕಿಅಂಶಗಳು 2019-20 ರ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಕೇವಲ 4.5% ರಷ್ಟೆಂದು ಹೇಳಿವೆ. ಹೋದವರ್ಷ ಅಂದರೆ 2018-19 ರ ಇದೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರ 7.1% ರಷ್ಟಿತ್ತು. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ 5% ರಷ್ಟಿದ್ದ ಜಿಡಿಪಿ ಈಗ 4.5% ರಷ್ಟಾಗಿರುವುದು ನೋಡಿದಾಗ ಕೇಂದ್ರ ಸರ್ಕಾರ ಆರ್ಥಿಕ ಅಭಿವೃದ್ಧಿಗೆ ಕೆಲ ತಿಂಗಳ ಹಿಂದೆ ತೆಗೆದುಕೊಂಡ ಕ್ರಮಗಳು ಏನೂ ಪರಿಣಾಮ ಉಂಟುಮಾಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ತಾಂತ್ರಿಕವಾಗಿ ನೋಡಿದಾಗ ವಿತ್ತ ಮಂತ್ರಿಯವರು ಹೇಳಿದಂತೆ ಇದು ಆರ್ಥಿಕ ಹಿಂಜರಿಕೆಯಲ್ಲ. ಸತತ ಎರಡು ತ್ರೈಮಾಸಿಕಗಳಲ್ಲಿ ಜಿಡಿಪಿಯು ಹೋದವರ್ಷಕ್ಕಿಂತ ಕಡಿಮೆಯಾದರೆ ಅಂದರೆ ನಕಾರಾತ್ಮಕ ಬೆಳವಣಿಗೆ (Negative growth) ತೋರಿಸಿದರೆ ಆಗ ಅರ್ಥಶಾಸ್ತ್ರೀಯವಾಗಿ ಅದನ್ನು ಆರ್ಥಿಕ ಹಿಂಜರಿತ (Recession) ಎನ್ನುತ್ತಾರೆ. ಹಾಗಾಗಿ ಭಾರತದಂತ ಬೆಳೆಯುತ್ತಿರುವ ಆರ್ಥಿಕತೆ ಸಾಮಾನ್ಯವಾಗಿ ಹಿಂಜರಿತದ ಮಟ್ಟಕ್ಕೆ ಹೋಗುವುದಿಲ್ಲ. ಆದರೆ, ಕಳೆದ ಆರೇಳು ತ್ರೈಮಾಸಿಕಗಳಿಂದ ಸತತವಾಗಿ ಇಳಿಯುತ್ತಿರುವ ಜಿಡಿಪಿ ಭಾರತದಂತ ಬೃಹತ್ ದೇಶಕ್ಕೆ ಆರ್ಥಿಕ ಹಿಂಜರಿತದಷ್ಟೇ ಕೆಟ್ಟ ಪರಿಣಾಮ ಉಂಟುಮಾಡುತ್ತದೆ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ.

ಈಗಲಂತೂ ನಮ್ಮ ಆರ್ಥಿಕ ಪರಿಸ್ಥಿತಿ ಹಿಂಜರಿಕೆಗೆ ಹತ್ತಿರವಿರುವಷ್ಟು ಗಂಭೀರವಾಗಿದೆ ಎಂಬುದು ಒಂದೆರಡು ಮುಖ್ಯ ಅಂಶಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಮೊದಲನೆಯದಾಗಿ, ತಯಾರಿಕಾ ಕ್ಷೇತ್ರ (Manufacturing sector) ಹೋದ ವರ್ಷದ (2018-19) ಎರಡನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ವರ್ಷ -1% ಬೆಳವಣಿಗೆ ತೋರಿಸಿದೆ. ಅಂದರೆ ಶೇ ಒಂದರಷ್ಟು ಬೆಳವಣಿಗೆ ಇಳಿಮುಖವಾಗಿದ್ದು (Negative growth) ಈ ವಲಯ ಹಿಂಜರಿತವನ್ನು ತೋರಿಸುತ್ತಿದೆ. ತಯಾರಿಕಾ ಕ್ಷೇತ್ರ ಒಟ್ಟು ಕೈಗಾರಿಕಾ ವಲಯದ ಪ್ರಮುಖ ಭಾಗವಾಗಿದ್ದು ಇದರ ನೆಗೆಟಿವ್ ಗ್ರೋಥ್‍ನಿಂದಾಗಿಯೇ ಕೈಗಾರಿಕಾ ಕ್ಷೇತ್ರ ಒಟ್ಟಾರೆಯಾಗಿ ಈಗ ಕೇವಲ 0.52% ರಷ್ಟು ಮಾತ್ರ ಬೆಳವಣಿಗೆ ದಾಖಲಿಸಿದೆ.

ಜೊತೆಗೆ ತಯಾರಿಕಾ ಕ್ಷೇತ್ರ ದೇಶದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿ ಮಾಡುವ ಕ್ಷೇತ್ರವೂ ಆಗಿದ್ದು ಇಲ್ಲಿಯ ಹಿಂಜರಿತ ಮತ್ತಷ್ಟು ಉದ್ಯೋಗ ನಷ್ಟಕ್ಕೆ ಎಡೆಮಾಡಿಕೊಡಲಿದೆ. ಇದರಿಂದಾಗಿ ಇಡೀ ದೇಶದಲ್ಲಿ ಮತ್ತಷ್ಟು ನಿರುದ್ಯೋಗ, ಮತ್ತಷ್ಟು ಇಳಿಮುಖವಾಗುವ ಗ್ರಾಹಕ ಬೇಡಿಕೆ ಮತ್ತು ಅದರಿಂದಾಗಿ ಮತ್ತಷ್ಟು ಆರ್ಥಿಕ ಹಿಂಜರಿಕೆ. ಹೀಗೆ, ಈಗಿನ ಆರ್ಥಿಕ ಅಭಿವೃದ್ಧಿ ಇಳಿಕೆ ಆರ್ಥಿಕ ಹಿಂಜರಿತವಾಗುವ ಲಕ್ಷಣಗಳು ಇಲ್ಲಿ ಕಾಣಿಸುತ್ತಿವೆ.

ಇನ್ನು, ಈಗಿನ ಒಟ್ಟು ಜಿಡಿಪಿಯ 4.5% ನಲ್ಲಿ ಸರ್ಕಾರದ ವೆಚ್ಚವನ್ನು (Government expenditure) ಕಳೆದು ನೋಡಿದರೆ ಕಂಡುಬರುವ ಜಿಡಿಪಿ ಬೆಳವಣಿಗೆ ದರ ಕೇವಲ 3%. ಉಳಿದ ಸರ್ಕಾರೇತರ ಜಿಡಿಪಿಯಲ್ಲಿ ಖಾಸಗಿ ಬಳಕೆಯ ವೆಚ್ಚ (private consumption expenditure), ಖಾಸಗಿ ಬಂಡವಾಳ (private investment ) ಮತ್ತು ಒಟ್ಟು ರಫ್ತು (Net exports) ಬರುತ್ತವೆ.

ಈ ಸರ್ಕಾರೇತರ ಜಿಡಿಪಿಯ ಭಾಗದ ಬೆಳವಣಿಗೆ ಈ ಎರಡನೇ ತ್ರೈಮಾಸಿಕದಲ್ಲಿ ಕೇವಲ 3% ಇದೆ. ಯಾವಾಗಲೂ ದೇಶದ ಜಿಡಿಪಿಯಲ್ಲಿ ಸರ್ಕಾರೇತರ ಜಿಡಿಪಿಯ ಪಾಲು ಶೇ 87 ರಿಂದ ಶೇ 92 ರಷ್ಟಿರುತ್ತದೆ. ಈ ತ್ರೈಮಾಸಿಕದಲ್ಲಿ ಇದರ ಪಾಲು ಶೇ 87 ರಷ್ಟಿದೆ.

ಅಂದರೆ, ದೇಶದ ಜಿಡಿಪಿಯಲ್ಲಿ ಶೇ 87 ರಷ್ಟಿರುವ ಸರ್ಕಾರೇತರ ಜಿಡಿಪಿ ಕೇವಲ 3% ರಷ್ಟು ಮಾತ್ರ ಬೆಳವಣಿಗೆಯಾಗಿದೆ ಎಂದರೆ, ದೇಶದ ಆರ್ಥಿಕ ಸ್ಥಿತಿಯ ಗಂಭೀರತೆಯನ್ನು ನಾವು ಅರ್ಥ ಮಾಡಿಕೊಳ್ಳಬಹುದು.

ತಯಾರಿಕಾ ಕ್ಷೇತ್ರದ ನಕಾರಾತ್ಮಕ ಬೆಳವಣಿಗೆ ಮತ್ತು ಉಳಿದೆಲ್ಲ ಕ್ಷೇತ್ರಗಳ ಕನಿಷ್ಟ ಬೆಳವಣಿಗೆ ಮೇಲಿನ ಅಂಶವನ್ನು ಸ್ಪಷ್ಟಪಡಿಸುತ್ತಿವೆ.

ಅದೇ ಸರ್ಕಾರೀ ವೆಚ್ಚ ಈ ಆರ್ಥಿಕ ವರ್ಷದಲ್ಲಿ 12.3% ವೇಗದಲ್ಲಿ ಬೆಳೆದಿದೆ. ಇದರ ಕೊಡುಗೆಯ ಫಲವಾಗಿಯೇ ಜಿಡಿಪಿ 4.5% ರಷ್ಟಾದರೂ ಇದೆ. ಆದರೆ ಈ ಸರ್ಕಾರೀ ವೆಚ್ಚ ಆಡಳಿತ, ರಕ್ಷಣೆ ಮತ್ತು ಇತರ ಕೆಲವು ಸೇವೆಗಳಿಗೆ ಮಾತ್ರ ಹಂಚಲ್ಪಟ್ಟಿರುವುದರಿಂದ ಜನಸಾಮಾನ್ಯರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವಲ್ಲಿ ಸೋತಿದೆ.

ಇದೇ ಸರ್ಕಾರೀ ವೆಚ್ಚವು ಗ್ರಾಮೀಣ ಉದ್ಯೋಗ ಖಾತ್ರಿ ಮತ್ತು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಯತ್ತ ಕಡೆ ಗಮನ ಕೇಂದ್ರೀಕರಿಸಿದ್ದರೆ ಜನಗಳ ಕೈಯಲ್ಲಿ ಕೊಳ್ಳುವ ಶಕ್ತಿ ಹೆಚ್ಚಾಗಿ ಆರ್ಥಿಕ ಮುಂಚಲನೆ ಸಾಧ್ಯವಾಗುತ್ತಿತ್ತು.

ಜೊತೆಗೆ ಬಂಡವಾಳ ಹೂಡಿಕೆಯ ವೇಗವು ಕೇವಲ 1.02% ರಷ್ಟಿದ್ದು ಇದು ಆರ್ಥಿಕ ಹಿಂಜರಿಕೆಯಿಂದ ಪಾರುಮಾಡುವುದಕ್ಕಾಗಲೀ ಮತ್ತು ಉದ್ಯೋಗ ಸೃಷ್ಟಿಗಾಗಲೀ ಏನೇನೂ ಸಾಲದೆನಿಸಿದೆ.ಒಟ್ಟಾರೆಯಾಗಿ, ದೇಶ ತಾಂತ್ರಿಕವಾಗಿ ಆರ್ಥಿಕ ಹಿಂಜರಿತಕ್ಕೆ ಒಳಗಾಗದೆ ಇದ್ದರೂ, ವಲಯಾವಾರು ಪರಿಸ್ಥಿತಿಯನ್ನು ಗಮನಿಸಿದಾಗ ಅಂತಹ ಹಿಂಜರಿತದಷ್ಟೇ ಸ್ಥಿತಿ ಗಂಭೀರವಾಗಿದೆ.ಆದರೆ, ಕೇಂದ್ರ ಸರ್ಕಾರ ಇನ್ನೂ ಕೂಡ ನಮ್ಮ ಆರ್ಥಿಕತೆಯ ಗಂಭೀರತೆಯನ್ನು ಗುರುತಿಸುವ ಕೆಲಸವನ್ನೇ ಮಾಡದಿರುವುದರಿಂದ, ಇದಕ್ಕೆ ತಕ್ಕ ಪರಿಹಾರಗಳನ್ನು ಹುಡುಕುವ ಕೆಲಸವೂ ಸರ್ಕಾರದ ಕೈಯಲ್ಲಿ ಆಗುತ್ತಿಲ್ಲ.ಇದರಿಂದಾಗಿ, ಮುಂಬರುವ ದಿನಗಳು ಮತ್ತಷ್ಟು ನಿರುದ್ಯೋಗದ, ಬಡತನದ ದಿನಗಳಾಗಲಿವೆ ಎಂದೇ ಅನಿಸುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...