Homeನ್ಯಾಯ ಪಥಪುಟಕ್ಕಿಟ್ಟ ಪುಟಗಳು: ಶುಭ ಸಂದೇಶ ಹೊಸ ಒಡಂಬಡಿಕೆ - ಯೋಗೇಶ್ ಮಾಸ್ಟರ್

ಪುಟಕ್ಕಿಟ್ಟ ಪುಟಗಳು: ಶುಭ ಸಂದೇಶ ಹೊಸ ಒಡಂಬಡಿಕೆ – ಯೋಗೇಶ್ ಮಾಸ್ಟರ್

ಬಸವನ ಕುರುಹನ್ನು ಉಳಿಸಿ ವಿಜೃಂಭಿಸಲು ಪ್ರಾರಂಭದ ಬಸವಪ್ರೇಮಿಗಳು ಪುರಾಣದ ಮೊರೆ ಹೋದಂತೆ ಪ್ರಾರಂಭದ ಕ್ರೈಸ್ತರು ಕ್ರಿಸ್ತನ ಮಹತ್ವವನ್ನು ವಿಜೃಂಭಿಸಲು ಪವಾಡಗಳ ಮೊರೆ ಹೋದರು.

- Advertisement -
- Advertisement -

ಅತ್ಯಂತ ಹೆಚ್ಚು ಮುದ್ರಣವಾದ ಪುಸ್ತಕ ಬೈಬಲ್. ಅದರ ಪ್ರತಿಗಳಷ್ಟು ಕ್ರೈಸ್ತರಿರದಿದ್ದರೂ, ಧರ್ಮಪ್ರಚಾರದ ಕರ್ತವ್ಯದಿಂದ ಪಾದ್ರಿಗಳು ಭಾಷೆಗಳನ್ನು ಕಲಿತು ಬೈಬಲ್ಲನ್ನೂ ಮತ್ತು ಕ್ರಿಸ್ತನನ್ನೂ ಜನರಿಗೆ ಪರಿಚಯಿಸಿದರು. ಇದರ ಅಡ್ಡಪರಿಣಾಮಗಳಾಗಿ ನಿಘಂಟುಗಳು ಪ್ರಾದೇಶಿಕ ಭಾಷೆಗಳಿಗೆ ಲಭ್ಯವಾದವು ಮತ್ತು ಅಕ್ಷರವಂಚಿತ ವರ್ಗದವರು ಸುಶಿಕ್ಷಿತರಾದರು. ಕನ್ನಡಕ್ಕೆ ಕಿಟ್ಟಲ್ ನಿಘಂಟನ್ನು ನೀಡಿದಂತೆ ಕ್ರೈಸ್ತರು ಬಹಳಷ್ಟು ಭಾಷೆಗಳಿಗೆ ನಿಘಂಟುಗಳನ್ನು ನೀಡಿದರು.

ಶುಭ ಸಂದೇಶವೆಂದರೆ ಕ್ರಿಸ್ತನ ಜೀವನ ಮತ್ತು ಅವನ ಆಪ್ತ ಶಿಷ್ಯರು ತಮ್ಮ ಗುರುವಿನ ಶುಭ ಸಂದೇಶವನ್ನು ಪ್ರಚಾರ ಮಾಡಿದ ಕತೆ. ಇದನ್ನು ಒಡಂಬಡಿಕೆ ಅಥವಾ ಒಪ್ಪಂದ ಎನ್ನುವುದು. ಏಕೆಂದರೆ, ದೇವರು ಮಾನವರೊಂದಿಗೆ ಮಾಡಿಕೊಂಡಿರುವ ಹೊಸ ಒಪ್ಪಂದ ಎಂದು. ಮನುಷ್ಯರ ಬಾಳ್ವೆಗೆ ಬೇಕಾದ ಸತ್ಯವನ್ನೇ ದೇವರೆಂದು, ಅದರ ಮಗನಾಗಿ ಗುರುತಿಸಿಕೊಂಡ ಯೇಸು ತನ್ನಪ್ಪನ ಒಲವ ಪಡೆಯಲು ತಾನೇ ಬೆಳಕು ಮತ್ತು ಮಾರ್ಗವಾದ.

ಯೇಸು ದೇವಾಲಯಗಳಲ್ಲಿನ ವ್ಯಾಪಾರಿ ಧೋರಣೆಗಳನ್ನು ಖಂಡಿಸಿ ಆ್ಯಂಗ್ರೀ ಯಂಗ್‍ಮ್ಯಾನ್‍ನಂತೆ ಅಲ್ಲಿ ವಸ್ತುಗಳನ್ನೆಲ್ಲಾ ಚೆಲ್ಲಾಡಿ, ಚಾಟಿ ಬೀಸಿ ಕೂಗಾಡುತ್ತಾನೆ “ದೇವಾಲಯವನ್ನು ಸಂತೆಯನ್ನಾಗಿಸಬೇಡಿ” ಎಂದು. ರೋಮ್ ಚಕ್ರಾಧಿಪತ್ಯದ ಅಂಕೆಯಲ್ಲಿದ್ದ ಯೆಹೂದಿಗಳು ಮೌಢ್ಯ ಮತ್ತು ಸಂಪ್ರದಾಯಗಳಲ್ಲಿ ಬಿದ್ದಿದ್ದಾರೆಂದು ಅರ್ಥವಾಗಿ ಯೇಸುವೂ ಕಲ್ಯಾಣದ ಬಸವಣ್ಣನಂತೆ ಸಮಾಜದಿಂದ ಬಹಿಷ್ಕೃತರೊಂದಿಗೆ, ತಳವರ್ಗದವರೊಂದಿಗೆಯೇ ಸೇರಿ ಕಣ್ಣು ತೆರೆಸಲು ಪ್ರಾರಂಭಿಸುತ್ತಾನೆ.

ಅವನ ಬೆಟ್ಟದ ಮೇಲಿನ ಬೋಧನೆ ಮತ್ತು ಸಂದರ್ಭಾನುಸಾರ ನೀಡುವ ತಿಳುವಳಿಕೆ ಈಗೂ ಅತ್ಯದ್ಭುತ ಮತ್ತು ಸೂಕ್ಷ್ಮ ಒಳನೋಟಗಳು. ತಲೆ ಮೇಲೆ ಆಣೆ ಮಾಡಿದರೆ ಕಪ್ಪು ಕೂದಲನ್ನು ಬೆಳ್ಳಗಾಗಿಸದು, ಬಿಳಿಯದನ್ನು ಕಪ್ಪಾಗಿಸದು ಎನ್ನುತ್ತಾ ಮೌಢ್ಯವನ್ನು ಧಿಕ್ಕರಿಸಿದರೆ, ದೇವರಿಗೆ ನೈವೇದ್ಯ ನೀಡುವಾಗ ಮೊದಲು ನಿನ್ನ ನೆರೆಯವನೊಂದಿಗಿನ ವ್ಯಾಜ್ಯವನ್ನು ಬಗೆಹರಿಸಿ ಆರಾಧನೆ ಸಲ್ಲಿಸು ಎನ್ನುತ್ತಾ ದೇವರಿಗಿಂತ ಮುಖ್ಯ ಮಾನವನೊಂದಿಗಿನ ನಿನ್ನ ಸಂಬಂಧ ಎಂದು ಸೌಹಾರ್ದತೆ ತೋರುತ್ತಾನೆ. ಹಾದರದವಳಿಗೆ ಕಲ್ಲೊಗೆಯುವ ಮಂದಿಗೆ ತಪ್ಪು ಮಾಡದವರು ಮೊದಲು ಕಲ್ಲು ಬೀರಲಿ ಎಂದು ಸಮಾಜದ ಸೋಗಲಾಡಿ ನೈತಿಕತೆಯನ್ನು ಪ್ರಶ್ನಿಸುತ್ತಾನೆ. ಭೀತಿಯ ದೇವರನ್ನು ಪ್ರೀತಿಯ ತಂದೆಯನ್ನಾಗಿಸಿ ಸಾಂಪ್ರದಾಯಕ ಪರಿಕಲ್ಪನೆಯನ್ನು ತೊಲಗಿಸಿಬಿಡುತ್ತಾನೆ. ಬದುಕು ಮತ್ತು ಬೋಧನೆಗಳ ಪೂರ್ತಿ ಪ್ರೀತಿ, ಸಾಮರಸ್ಯ, ಕ್ಷಮೆ, ಆತ್ಮಾವಲೋಕನ, ಪಶ್ಚಾತ್ತಾಪದಂತಹ ಮೌಲ್ಯಗಳನ್ನೇ ಪ್ರತಿಪಾದಿಸುತ್ತಾನೆ.

ಮ್ಯಾಥ್ಯೂ, ಮಾರ್ಕ್, ಲೂಕ್ ಮತ್ತು ಜಾನ್ ಅವರದ್ದನ್ನೇ ಪ್ರಧಾನವಾಗಿ ಬೈಬಲ್ಲಿನಲ್ಲಿ ಹೊಂದಿದ್ದರೂ ಅವರ ಬರವಣಿಗೆಗಳಲ್ಲಿಯೇ ವ್ಯತ್ಯಾಸಗಳಿವೆ. ಯೇಸುವಿನ ಕಾಲದಲ್ಲಿ ಬದುಕಿದ್ದ ಜೋಸೆಫಸ್‍ನ ಬರವಣಿಗೆಗಳನ್ನು ಇವರು ತೆಗೆದುಕೊಳ್ಳದೇ ಇರುವುದಕ್ಕೆ ಕಾರಣ ಧಾರ್ಮಿಕತೆಯನ್ನು ಗಟ್ಟಿಗೊಳಿಸದೇ ವಾಸ್ತವದ ಶೈಲಿಯಲ್ಲಿರಬಹುದು. ಯೇಸುವೇ ಪವಾಡಗಳನ್ನು ಅಲ್ಲಗಳೆಯುವಾಗ ಬೈಬಲ್ಲು ಪವಾಡಗಳಿಂದಲೇ ತುಂಬಿವೆ. ಉತ್ಪ್ರೇಕ್ಷೆ ಮತ್ತು ರೂಪಕಗಳಲ್ಲಿ ನಾವು ಯೇಸುವನ್ನು ಗುರುತಿಸಬೇಕು.

ಕರ್ನಾಟಕದಲ್ಲಿ ಬಸವಣ್ಣನ ಮರಣಾನಂತರ ಶರಣರು ಚೆಲ್ಲಾಪಿಲ್ಲಿಯಾದಂತೆ ಕ್ರಿಸ್ತನ ಮರಣಾನಂತರವೂ ಅವನ ಶಿಷ್ಯರು ಚೆಲ್ಲಾಪಿಲ್ಲಿಯಾಗಿದ್ದರು. ಬಸವನ ಕುರುಹನ್ನು ಉಳಿಸಿ ವಿಜೃಂಭಿಸಲು ಪ್ರಾರಂಭದ ಬಸವಪ್ರೇಮಿಗಳು ಪುರಾಣದ ಮೊರೆ ಹೋದಂತೆ ಪ್ರಾರಂಭದ ಕ್ರೈಸ್ತರು ಕ್ರಿಸ್ತನ ಮಹತ್ವವನ್ನು ವಿಜೃಂಭಿಸಲು ಪವಾಡಗಳ ಮೊರೆ ಹೋದರು. ಗುಟ್ಟಾಗಿ ಒಟ್ಟಾಗುತ್ತಾ ಧರ್ಮಸಭೆಗಳನ್ನು ಮಾಡುತ್ತಾ ಹೊರಗಿನ ಸಮಾಜಕ್ಕೆ ಬಂದಿದ್ದು ಅವರ ತ್ಯಾಗ ಬಲಿದಾನಗಳ ಕತೆಯೇ.

ಕ್ರಿಸ್ತನೆಂಬ ಕ್ರಾಂತಿಯೋಗಿ ತನ್ನ ಜೀವಿತಾವಧಿಯಲ್ಲಿ ಪ್ರೀತಿ, ಕರುಣೆ, ಸೌಹಾರ್ದ, ಕ್ಷಮೆ, ಪಶ್ಚಾತ್ತಾಪ, ಸಮಾನತೆ ಇವುಗಳೆಲ್ಲವನ್ನೂ ಹೊಂದಿರುವ ವ್ಯಕ್ತಿಗಳನ್ನು ರೂಪಿಸಲು, ಸಮಾಜವನ್ನು ಕಟ್ಟಲು ಯತ್ನಿಸಿದ್ದೇ ಪವಾಡ. ಇದೇ ಶುಭ ಸಂದೇಶದ ಪುಟಗಳಲ್ಲಿ ಪುಟಕ್ಕಿಟ್ಟಂತೆ ಹೊಳೆಯುವುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...