Homeಕರ್ನಾಟಕಜಿಂದಾಲ್‍ಗೆ ಭೂಮಿ: ಕೊಟ್ಟರೋ, ಬಿಟ್ಟರೊ? ಈಗೇನಾಗುತ್ತಿದೆ ಗೊತ್ತೆ?

ಜಿಂದಾಲ್‍ಗೆ ಭೂಮಿ: ಕೊಟ್ಟರೋ, ಬಿಟ್ಟರೊ? ಈಗೇನಾಗುತ್ತಿದೆ ಗೊತ್ತೆ?

ಬೆಂಗಳೂರಿನ ರಾಚೇನಹಳ್ಳಿಯಲ್ಲಿ ಡಿನೋಟಿಫೈ ಆದ ಭೂಮಿಯನ್ನು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪದ ಹತ್ತಿರದ ಸಂಬಂಧಿ 40 ಲಕ್ಷಕ್ಕೆ ಖರೀದಿಸಿ ನಂತರ ಜಿಂದಾಲ್‍ನ ಅಂಗಸಂಸ್ಥೆ ಸೌಥ್ ವೆಸ್ಟ್ ಮೈನಿಂಗ್ ಕಂಪನಿಗೆ 20 ಕೋಟಿ ರೂ.ಗೆ ಮಾರಿದ್ದರು.

- Advertisement -
- Advertisement -

| ಮಲ್ಲನಗೌಡರ್ |

ಜಿಂದಾಲ್‍ಗೆ ಭೂಮಿ ಮಾರುವ ಸರ್ಕಾರದ ನಡೆ ವಿರುದ್ಧ ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿಯನ್ನು ಬಿಜೆಪಿ ನಡೆಸಿದೆ. ರಾಜ್ಯ ಸರ್ಕಾರ ಸಚಿವ ಸಂಪುಟದ ಉಪಸಮಿತಿಯ ಮೊರೆ ಹೋಗಿದೆ. ಇದರ ನಡುವೆ ಹಿಂದಿನ ದಶಕದ ‘ಗಣಿ ವೈಭವದ’ ಕತೆಗಳು ಪರಸ್ಪರ ಆರೋಪಾಧನೆಯಲ್ಲಿ ಜಿಟಿಜಿಟಿ ಮಳೆಯ ರೂಪದಲ್ಲಿ ಪ್ರಚಲಿತಕ್ಕೆ ಬಂದಿವೆ. ಆದರೆ, ಅಕ್ರಮ ಅದಿರಿನ ವ್ಯವಹಾರದ ಕಡತಗಳ ಮೇಲಿನ ಧೂಳು ಕೊಡವಲೂ ಯಾರದೂ ಒತಾಯ್ತವೇ ಇಲ್ಲ…

ಆಡಳಿತ ಮತ್ತು ವಿಪಕ್ಷಗಳು ಈಗ ಜೊಂದಾಲ್ ಭೂಮಿ ಪ್ರಕರಣದಲ್ಲಿ ಎಚ್ಚರಿಕೆಯ ನಡೆಯನ್ನೇ ಇಡುತ್ತಿವೆ. ಇದರ ವಿರುದ್ಧ ರಾಜ್ಯಾದ್ಯಂತ ಬಿರುಗಾಳಿಯಂತಹ ಪ್ರತಿಭಟನೆ ಮಾಡಬೇಕಿದ್ದ ಬಿಜೆಪಿ ಬೆಂಗಳೂರಿನ ಸರ್ಕಲ್‍ವೊಂದರಲ್ಲಿ ಹಾಸು ಹೊದ್ದಿ ಮಲಗಿ ಎದ್ದು ಹೋಗಿದೆ. ಸರ್ಕಾರ ಉಪಸಮಿತಿ ಎಂಬ ಜಿಟಿಜಿಟಿ ಮಳೆ ಉದುರಿಸಿ ಕಾಲ ತಳ್ಳಲು ಹೊರಟಿದೆ. ಜಿಂದಾಲ್ ಗೆ ಭೂಮಿ ಕೊಡುವುದನ್ನು ವಿರೋಧಿಸಿ ಬಳ್ಳಾರಿಗೆ ಪಾದಯಾತ್ರೆ ಮಾಡುವುದಿಲ್ಲ, ನಮ್ಮ ಹೋರಾಟ ಇಷ್ಟೇ ಎಂದು ಯಡಿಯೂರಪ್ಪ ಘೋಷಿಸಿದ್ದಾರೆ. ಭಾರಿ ಬಿರುಗಾಳಿ ಎಬ್ಬಿಸಲು ಯಾರಿಗೂ ಮನಸ್ಸಿಲ್ಲ. ಈ ಬಿರುಗಾಳಿ ಬಳ್ಳಾರಿಯ ಅಕ್ರಮ ಗಣಿ ಕಡತಗಳ ಮೇಲೆ ವ್ಯವಸ್ಥೆಯೇ ಕೃತಕವಾಗಿ ಹರಡಿರುವ ಧೂಳನ್ನು ಹುಡಿ ಎಬ್ಬಿಸಿ ಬಿಡುತ್ತದೋ ಎಂಬ ಭಯ!

ಸಿಎಂ ಪ್ರಚೋದನೆ: ಯಡಿಯೂರಪ್ಪಗೆ ‘ಪ್ರೇರಣೆ’
ಚನ್ನಪಟ್ಟಣದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಜಿಂದಾಲ್ ಜೊತೆ ಲೀಸ್ ಕಮ್ ಸೇಲ್ ಒಪ್ಪಂದ ಮಾಡಿಕೊಂಡಿದ್ದು ಯಡಿಯೂರಪ್ಪ ಅವಧಿಯಲ್ಲಿ. ಈಗ ಅವರೇ ಸೇಲ್ ಬೇಡ ಎನ್ನುತ್ತಿದ್ದಾರೆ… ಯಡಿಯೂರಪ್ಪ ಜಿಂದಾಲ್‍ನಿಂದ 20 ಕೋಟಿ ಪಡೆದಿದ್ದರು..’ ಎಂದು ಹೇಳಿದ ಕೂಡಲೇ ಅಹೋರಾತ್ರಿಯೇ ‘ಪ್ರೇರಣೆ’ಗೊಂಡ ಯಡಿಯೂರಪ್ಪ, ಆ ಪ್ರಕರಣದಲ್ಲಿ ಸಿಬಿಐ ಕೋರ್ಟು ತನಗೆ ಕ್ಲೀನ್‍ಚಿಟ್ ನೀಡಿದೆ’ ಎಂದು ಪ್ರತ್ಯುತ್ತರ ನೀಡಿದ್ದಾರೆ. ಆದರೆ 2016ರಲ್ಲಿ ಸಿಬಿಐ ಕೋರ್ಟು ಈ ಪ್ರಕರಣದಲ್ಲಿ ಯಡಿಯೂರಪ್ಪ, ಅವರ ಮಗ ರಾಘವೇಂದ್ರ ಮತ್ತು ಅಳಿಯ ಸೋಹಲ್‍ರನ್ನು ಮುಕ್ತಿಗೊಳಿಸಿತ್ತು. ಪ್ರಾಸಿಕ್ಯೂಷನ್ ಸರಿಯಾದ ಸಾಕ್ಷ್ಯ ಒದಗಿಸಿಲ್ಲ ಎಂಬುದು ಕೋರ್ಟಿನ ವಿವರಣೆಯಾಗಿತ್ತು. ತಮ್ಮ ಅಧಿಕಾರ ಬಳಸಿ ಯಡಿಯೂರಪ್ಪ ಜಿಂದಾಲ್‍ಗೆ ಫೆವರ್ ಮಾಡಿದರು ಅಥವಾ ಜಿಂದಾಲ್ ಆ ಕಾರಣಕ್ಕೆ ಪ್ರೇರಣಾಕ್ಕೆ 20 ಕೋಟಿ ದೇಣಿಗೆ ನೀಡಿತ್ತು ಎಂಬುದಕ್ಕೆ ಆಧಾರಗಳಿಲ್ಲ ಎಂಬುದಷ್ಟೇ ಅದರ ಸಾರಾಂಶವಾಗಿತ್ತು.

ಬೆಂಗಳೂರಿನ ರಾಚೇನಹಳ್ಳಿಯಲ್ಲಿ ಡಿನೋಟಿಫೈ ಆದ ಭೂಮಿಯನ್ನು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪದ ಹತ್ತಿರದ ಸಂಬಂಧಿ 40 ಲಕ್ಷಕ್ಕೆ ಖರೀದಿಸಿ ನಂತರ ಜಿಂದಾಲ್‍ನ ಅಂಗಸಂಸ್ಥೆ ಸೌಥ್ ವೆಸ್ಟ್ ಮೈನಿಂಗ್ ಕಂಪನಿಗೆ 20 ಕೋಟಿ ರೂ.ಗೆ ಮಾರಿದ್ದರು. ಯಡಿಯೂರಪ್ಪ ಪುತ್ರ ರಾಘವೇಂದ್ರ ಮತ್ತು ಅಳಿಯ ಸೋಹನ್ ಒಡೆತನದ ಪ್ರೇರಣಾ ಟ್ರಸ್ಟ್‍ಗೆ ಜಿಂದಾಲ್ ದೇಣಿಗೆ ನೀಡಿತ್ತು. ಇದೆಲ್ಲ 2008-11ರ ಅವಧಿಯಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನಡೆದ ಘಟನೆಗಳು.
ಅದಿರು ಧೂಳು ಕೊಡವಲು ಸಿದ್ಧರಿಲ್ಲ!

ಗಣಿ ಅಕ್ರಮಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಿದ್ದರಾಮಯ್ಯ ರಚಿಸಿದ್ದ ಉಪಸಮಿತಿಯ ವರದಿಯ ಶಿಫಾರಸುಗಳನ್ನು ಇಂದಿಗೂ ಜಾರಿಗೆ ತಂದಿಲ್ಲ. ಹತ್ತಾರು ಗಣಿಗಳ್ಳರು ಮತ್ತು 700 ಚಿಲ್ಲರೆ ಅಧಿಕಾರಿಗಳ ಮೇಲೆ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ. ಇದೆಲ್ಲ ಮೂರೂ ಪಕ್ಷಗಳಿಗೂ ಬೇಡವಾದ ಸಂಗತಿಯೇ ಆಗಿದೆ. ಇನ್ನು ಮೈಸೂರ್ ಮಿನರಲ್ಸ್‍ಗೆ (ಎಂಎಂಎಲ್) ಜಿಂದಾಲ್ ವಂಚಿಸಿದ ಕತೆ ಶುರುವಾಗಿದ್ದು 2001ರಿಂದಲೇ. 2001-10ರ ಅವಧಿಯಲ್ಲಿ ಜಿಂದಾಲ್ ಎಂಎಂಎಲ್‍ಗೆ ಕಡಿಮೆ ಪ್ರಿಮಿಯಮ್ ದರದಲ್ಲಿ ಅದಿರನ್ನು ನೀಡಿತ್ತು. ಈ ಅವಧಿಯಲ್ಲಿ 1,059.89 ಕೋಟಿ ಮೌಲ್ಯದ 9.25 ಮಿಲಿಯನ್ ಟನ್ ಅದಿರನ್ನು ಮೈನಿಂಗ್ ಮಾಡಿದ್ದ ಜಿಂದಾಲ್ ಎಂಎಂಎಲ್‍ಗೆ ಕೇವಲ 62.17 ಕೋಟಿ ಪ್ರಿಮಿಯಮ್ ನೀಡಿತ್ತು, ಜಿಂದಾಲ್ ಈ ವ್ಯವಹಾರದಲ್ಲಿ 879.19 ಕೋಟಿ ಅನಾಮತ್ತು ಲಾಭ ಪಡೆದಿತ್ತು ಎಂದು 2013ರಲ್ಲಿ ಸಿಎಜಿ ವರದಿ ಹೇಳಿತ್ತು. ಆದರೆ ಸಿದ್ದರಾಮಯ್ಯ ಸರ್ಕಾರವೂ ಕ್ರಮ ಕೈಗೊಳ್ಳಲಿಲ್ಲ, ಎರಡೂ ವಿಪಕ್ಷಗಳಿಗೂ ಇದು ಬೇಕಾಗಿರಲಿಲ್ಲ.

ರಾಜ್ಯ ಅಧೀನದ ಸಂಸ್ಥೆ ಎಂಎಂಎಲ್‍ಗೆ ವಂಚನೆ ಎಂದರೆ ರಾಜ್ಯದ ಬೊಕ್ಕಸಕ್ಕೆ ವಂಚನೆ. ನಮ್ಮದೇ ಸಂಸ್ಥೆಯನ್ನು ತುಳಿದು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವುದೇ ಖಾಸಗೀಕರಣದ ಮೊದಲ ಪಾಠ. ಈ ಪಾಠದ ಅಂತ್ಯದಲ್ಲಿ ಕಿಕ್‍ಬ್ಯಾಕ್ ಪಕ್ಕಾ ಎಂದು ಅಲಿಖಿತ ಸಾಲೂ ಇದೆ! ಒಟ್ಟಿಗೆ ಎಂಎಂಎಲ್‍ಗೆ 1,200 ಕೋಟಿ (ಬಡ್ಡಿ ಸೇರಿದರೆ ಅಂದಾಜು 2 ಸಾವಿರ ಕೋಟಿ) ಹಣವನ್ನು ಜಿಂದಾಲ್‍ನಿಂದ ಕಕ್ಕಿಸುವ ಕೆಲಸಕ್ಕೆ ಯಾರಿಗೂ ಆಸಕ್ತಿಯೇ ಇಲ್ಲವೇ? ಅಷ್ಟು ಹಣ ಸರ್ಕಾರದ ಬೊಕ್ಕಸಕ್ಕೆ ಬಂದರೆ ನೂರಾರು ಅಭಿವೃದ್ದಿ ಕೆಲಸಗಳನ್ನು ಮಾಡಬೇಕಲ್ಲವೇ? ಜಿಂದಾಲ್ ಬಳಿ ಕೊಡಲು ಅಷ್ಟು ಹಣವಿಲ್ಲವೇ? ಆದರೂ 2001ರಿಂದ 2019ರವರೆಗೆ ಈಗಿನ ಕುಮಾರಸ್ವಾಮಿ ಸೇರಿ ಎಂಟು ಮುಖ್ಯಮಂತ್ರಿಗಳು ಆಳಿದ್ದಾರೆ/ಆಳುತ್ತಿದ್ದಾರೆ. ಯಾರಿಗೂ ತಾರ್ಕಿಕ ಅಂತ್ಯಕ್ಕೆ ಹೋಗಲು ಇಷ್ಟವಿಲ್ಲ.

ಜಿಂದಾಲ್‍ಗೆ ಭೂಮಿ ಮಾರಾಟದ ಸುದ್ದಿ ಜಿಟಿ ಜಿಟಿ ಮಳೆಯಲ್ಲಿ ಹಿಂದಕ್ಕೆ ಸರಿಯುತ್ತದೆ, ಉಪ ಸಮಿತಿ ‘ಸಮಾಲೋಚನೆ’ ನಡೆಸುತ್ತದೆ. ಆ ಹೊತ್ತಿಗೆ ಮತ್ತೆ ಆಪರೇಷನ್ ಕಮಲದ 14ನೇ ಅಂಕ ಶುರುವಾಗಿರುತ್ತದೆ. ಗಣಿ ಧೂಳಲ್ಲಿ ಎಲ್ಲ ಮರೆತೇ ಹೋಗುತ್ತದೆ. ದೆಹಲಿಯಲ್ಲಿ ಸಜ್ಜನ್ ಮುಖದಲ್ಲಿ ಸಿಂಚನ ಅರಳುತ್ತದೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...