Homeಅಂಕಣಗಳುನೂರು ನೋಟ | ಎಚ್.ಎಸ್.ದೊರೆಸ್ವಾಮಿಹೊಲಸು ಚುನಾವಣಾ ಆಯೋಗದ ನೀತಿಗೆ ಇತಿಶ್ರೀ ಹಾಡಬೇಡವೇ? - ಎಚ್.ಎಸ್ ದೊರೆಸ್ವಾಮಿ

ಹೊಲಸು ಚುನಾವಣಾ ಆಯೋಗದ ನೀತಿಗೆ ಇತಿಶ್ರೀ ಹಾಡಬೇಡವೇ? – ಎಚ್.ಎಸ್ ದೊರೆಸ್ವಾಮಿ

ಈ ದುರವಸ್ಥೆಯಿಂದ ಪಾರಾಗಲು ಇರುವುದು ಒಂದೇ ದಾರಿ. ಜನತಾ ಆಂದೋಲನವೊಂದನ್ನು ದೀರ್ಘಾವಧಿ ಹೋರಾಟಕ್ಕೆ ಅಣಿಮಾಡಬೇಕು. ಇದಕ್ಕೆ ಎಲ್ಲ ಸಂಘಟನೆಯವರೂ ಕೈಜೋಡಿಸಬೇಕು.

- Advertisement -
- Advertisement -

ಯಾಕೆ ನಮ್ಮ ಸಾಮಾಜಿಕ ಕಾರ್ಯಕರ್ತರು, ಆಯ್ದ ಕೆಲ ರಾಜಕೀಯ ನಾಯಕರು, ರಾಜಕೀಯ ಸಿದ್ಧಾಂತಿಗಳು, ಕಾರ್ಮಿಕ ಸಂಘಟನೆಗಳು ನಮ್ಮ ದುಷ್ಟ ಚುನಾವಣಾ ಪದ್ಧತಿಯನ್ನು ರದ್ದುಮಾಡಲು ಸರ್ಕಾರದ ಮೇಲೆ, ಚುನಾವಣಾ ಆಯೋಗದ ಮೇಲೆ ಒತ್ತಡ ತರಲು ಮನಸ್ಸು ಮಾಡಿಲ್ಲ? ಅವರಿಗೆಲ್ಲ ಈಗಿನ ಚುನಾವಣಾ ಪದ್ಧತಿ ವಾಕರಿಕೆ ಹುಟ್ಟುಸುತ್ತಿಲ್ಲವೇ? ಎಲ್ಲ ರಾಜಕೀಯ ಪಕ್ಷಗಳೂ ಮತದಾರರನ್ನು ಭ್ರಷ್ಟರನ್ನಾಗಿ ಪರಿವರ್ತಿಸಿರುವುದು ನಿಮಗೆ ತಿಳಿದಿಲ್ಲವೇ? ಪಾರ್ಲಿಮೆಂಟ್ ಸದಸ್ಯರು ಮತ್ತು ಕಾರ್ಪೊರೆಟ್‌ಗಳ ನಡುವೆ ಒಂದು ಅನೈತಿಕ ಸಂಬಂಧ ಇರುವುದು ನಿಮಗೆ ತಿಳಿಯದ ವಿಚಾರವೇ? ಸರ್ಕಾರಗಳಲ್ಲಿ ಪದೇಪದೇ ಹಗರಣಗಳು ನಡೆಯುತ್ತಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೇ? ಈ ಹಗರಣಗಳನ್ನು ಪದೇಪದೇ ಹೊರಹಾಕುವ ನೀವು ಅದನ್ನು ತಡೆಗಟ್ಟಲು ಚುನಾವಣಾ ಆಯೋಗದ ಮೇಲೆ ಏಕೆ ಒತ್ತಡ ತರುತ್ತಿಲ್ಲ? ಪ್ರತಿಯೊಬ್ಬ ಶಾಸಕ ಮತ್ತು ಪಾರ್ಲಿಮೆಂಟ್ ಸದಸ್ಯ ತಾನು ಚುನಾವಣೆ ವೇಳೆಗೆ ತನ್ನ ಸಂಪತ್ತು ಹಿಂದಿನದಕ್ಕಿಂತ ಶೇಕಡ ನೂರರಿಂದ ಶೇಕಡ ೫೦೦ಪಟ್ಟು ಹೆಚ್ಚಿರುವುದಾಗಿ ಘೋಷಿಸುತ್ತಾನೆ. ಅದು ಯಾವ ಯಾವ ಬಾಬಿತ್ತಿನಿಂದ ಬಂತು ಎಂದು ಚುನಾವಣಾ ಆಯೋಗ ಕೇಳುತ್ತಿಲ್ಲ. ಅದು ಅವರ ಕರ್ತವ್ಯವಲ್ಲವೇ?

ಅಮೀನ್‌ಮಟ್ಟು ಪ್ರಜಾವಾಣಿ ಪತ್ರಿಕೆಯಲ್ಲಿದ್ದಾಗ ಒಂದು ಚುನಾವಣೆಯ ಸಮೀಕ್ಷೆ ನಡೆಸುತ್ತಾರೆ. ಅವರು ಹೇಳುತ್ತಾರೆ ಬೆಳಗಾವಿ ಜಿಲ್ಲೆಯಲ್ಲಿ ಪ್ರಜಾಪ್ರಭುತ್ವ ಪಾಳೇಗಾರ ಶಾಸಕರ ಸುಪರ್ದಿನಲ್ಲಿದೆ ಎಂದು. ಹುಕ್ಕೇರಿ ಕತ್ತಿ ಸಹೋದರರು, ಗೋಕಾಕಿನ ಜಾರಕಿಹೊಳಿ ಸಹೋದರರು, ಪ್ರಭಾಕರ್ ಕೋರೆ, ಪ್ರಕಾಶ್ ಹುಕ್ಕೇರಿ ಈ ಸಿಂಡಿಕೇಟಿನ ಇತರ ಸದಸ್ಯರು ಎಂಬುದನ್ನು ವರದಿ ಮಾಡಿದ್ದಾರೆ. ಇವರೆಲ್ಲ ತಮ್ಮ ಉದ್ಯಮ ಮತ್ತು ರಾಜಕೀಯ ಸಾಮ್ರಾಜ್ಯ ರಕ್ಷಣೆಗಾಗಿ ರಾಜಕೀಯ ’ಸಿಂಡಿಕೇಟ್ ಕಟ್ಟಿಕೊಂಡಿದ್ದಾರೆ. ಜಾತ್ಯತೀತವಾದ ಪಕ್ಷಾತೀತವಾದದ ಸಿಂಡಿಕೇಟ್ ಇದು. ಈ ಸಿಂಡಿಕೇಟ್ ಯಾವ ದಾಖಲೆಯಲ್ಲೂ ಇಲ್ಲ. ಯಾರ ಕಣ್ಣಿಗೂ ಬೀಳುವುದಿಲ್ಲ. ಗ್ರಾಮಪಂಚಾಯ್ತಿಯಿಂದ ಲೋಕಸಭೆವರೆಗೆ, ಸಹಕಾರಿ ಬ್ಯಾಂಕಿನಿಂದ ಹಾಲಿನ ಸೊಸೈಟಿವರೆಗೆ ನಡೆಯುವ ಎಲ್ಲ ಚುನಾವಣೆಯಲ್ಲೂ ಇವರ ಕೈವಾಡವಿದೆ. ಉಮೇಶ್ ಕತ್ತಿ ಸಹೋದರರು ಕಳೆದ ಐದು ಚುನಾವಣೆಗಳಲ್ಲಿ ಐದು ಬೇರೆ ಬೇರೆ ಪಾರ್ಟಿಗಳಿಂದ ಗೆದ್ದು ಬಂದಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವರ ಹಿಕ್ಮತ್‌ನಿಂದ ಒಟ್ಟು 363 ಕ್ಷೇತ್ರಗಳಲ್ಲಿ 196 ಕ್ಷೇತ್ರಗಳು ಇವರ ಪಾಲಾಗಿದೆ. ಈ ಕ್ಷೇತ್ರಗಳಲ್ಲಿ ಬೇರೆ ಬೇರೆ ಪಕ್ಷಗಳ ಶಾಸಕರಿದ್ದಾರೆ. ತಮ್ಮ ಪಕ್ಷದ ಶಾಸಕರೇ ಇಲ್ಲ. ಈ ಕ್ಷೇತ್ರಗಳಲ್ಲಿ ಪಕ್ಷೇತರರೆಲ್ಲ ಕತ್ತಿಯವರ ಹಸ್ತಕರು.

ರಾಜಕೀಯ ವಿರೋಧಿಗಳನ್ನು ನಿರ್ನಾಮ ಮಾಡುವುದು, ಜನತೆಯ ಪಾಲುಗಾರಿಕೆ ಇರುವ ಎಲ್ಲ ಸಂಸ್ಥೆಗಳ ಮೇಲೆ ನಿಯಂತ್ರಣ, ಪಕ್ಷಾತೀತವಾಗಿ ರಾಜಕೀಯ ನಾಯಕರೊಡನೆ ಹೊಂದಾಣಿಕೆ ಇದು ಇವರ ಹುನ್ನಾರದ ವೈಖರಿ. ಇವರ ಹುನ್ನಾರ ಎಲ್ಲರಿಗೂ ಗೊತ್ತಿದ್ದರೂ ಜನ ಅಸಹಾಯಕರಾಗಿದ್ದಾರೆ. ಈ ಗುಲಾಮಗಿರಿಯಿಂದ ಪಾರಾಗಲು ಜನ ಕುದುರೆ ಏರಿಬರುವ ನಾಯಕನೊಬ್ಬನಿಗಾಗಿ ಕಾಯುತ್ತಿದ್ದಾರೆ ಎನ್ನುತ್ತಾರೆ ಮಟ್ಟು. ರಿಪಬ್ಲಿಕ್ ಆಫ ಬಳ್ಳಾರಿ ಇದ್ದ ಹಾಗೆ ಇವರದೂ ಒಂದು ರಿಪಬ್ಲಿಕ್.

ಇವು ಒಂದು ವರ್ಷದ ಚುನಾವಣೆಯಲ್ಲಿ ಬೆಳಕಿಗೆ ಬಂದಿರುವ ಅಪರಾಧಗಳು. ಇವೆಲ್ಲ ಬೆಂಗಳೂರೊಂದರಲ್ಲಿ ನಡೆದಿರುವವು.
1) ವಾರೆಂಟನ್ನು 597 ಜನರ ಮೇಲೆ ಜಾರಿ ಮಾಡಲಾಯಿತು. ಇದರ ಪೈಕಿ 570 ಬೆಂಗಳೂರು ನಗರ ಜಿಲ್ಲೆಯಲ್ಲಿ.
2) ಎಲೆಕ್ಷನ್ ಕೋಡ್ ನಿರ್ಲಕ್ಷ್ಯ ಮಾಡಿದ್ದಕ್ಕಾಗಿ 1010 ಜನರ ಮೇಲೆ ನಾನ್‌ಬೈಲಬಲ್ ವಾರಂಟ್.
3) 492 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಯಿತು.
5) 3221 ಚೀಲ ಅಕ್ಕಿ, 18 ಚೀಲ ಮೈದಾಹಿಟ್ಟು, 123 ಚೀಲ ತೊಗರಿಬೇಳೆ, 34 ಚೀಲ ಬೆಲ್ಲ, 100 ಪ್ಯಾಕೆಟ್ ಅಡಿಗೆ ಎಣ್ಣೆ: ಇದರ ಅಂದಾಜು ಬೆಲೆ 26.44 ಲಕ್ಷರೂ. ಮಹದೇವಪುರದ ಚುನಾವಣಾ ಕ್ಷೇತ್ರದ ಒಂದು ಗೋಡಾನ್‌ನಲ್ಲಿ ಇವೆಲ್ಲವನ್ನೂ ಇಡಲಾಗಿತ್ತು.
5) 500 ಚೀಲ ಅಕ್ಕಿಯ ಅಂದಾಜು ಬೆಲೆ 5 ಲಕ್ಷ; ಬ್ಯಾಟರಾಯನಪುರ ಚುನಾವಣಾ ಕ್ಷೇತ್ರದ ಒಂದು ತೋಟದಲ್ಲಿ ಇಡಲಾಗಿತ್ತು.

ಕಳೆದ ಚುನಾವಣೆಯ ಸಂದರ್ಭದಲ್ಲಿ 11 ಏಪ್ರಿಲ್ 2019 ರವರೆಗೆ 6.35 ಕೋಟಿ ರೂ ನಗದು ಮತ್ತು ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು. ಎರಡು ದಿನನ ಕಾರ್ಯಾಚರಣೆಯಲ್ಲಿ ಟಿ.ನರಸಿಪುರದ ಬಳಿ 5 ಲಕ್ಷ ರೂ, ಬೆಳಗಾವಿಯಲ್ಲಿ 7 ಲಕ್ಷ ರೂ, ಚಿತ್ರದುರ್ಗದ ಬಳಿ 3.5 ಲಕ್ಷ ರೂ, ಅಥಣಿ ತಾಲೂಕಿನಲ್ಲಿ 20 ಲಕ್ಷ ರೂ, ನೇಸರ್ಗಿಯಲ್ಲಿ ಒಂದು ಕೋಟಿ ರೂ, ಬಾಗಲಕೋಟೆಯಲ್ಲಿ 21 ಲಕ್ಷ ರೂ ವಶಪಡಿಸಿಕೊಳ್ಳಲಾಯಿತು. ಬೆಳಗಾವಿಯಲ್ಲಿ ಖೊಟ್ಟಿ ನಂಬರ್ ಪ್ಲೇಟ್ ಹಾಕಿದ್ದ ಕಾರಿನಲ್ಲಿ 1 ಕೋಟಿ ರೂ ಪತ್ತೆಯಾಯಿತು. ಈ ಹಣಕ್ಕೆ ಸಂಬಂಧಪಟ್ಟ ಯಾವುದೇ ದಾಖಲೆ ಅವರಲ್ಲಿರಲಿಲ್ಲ.

ಇದು 2-3ಜಿಲ್ಲೆಗಳಲ್ಲಿ ನಡೆದಿರುವ ಪ್ರಕರಣಗಳು ಇಡೀ ಭಾರತದಲ್ಲಿ ಇಂಥದು ಎಷ್ಟು ಪ್ರಕರಣಗಳು ನಡೆದಿರಬಹುದು. ಈ ಅಪರಾಧಿಗಳಲ್ಲಿ ಯಾರಿಗೂ ಶಿಕ್ಷೆಯಾದ ಸುದ್ದಿ ಹೊರಬಂದೆ ಇಲ್ಲ. 60 ವರ್ಷಗಳಿಂದ ಚುನಾವಣಾ ಆಯೋಗ ಇದನ್ನು ಗಮನಿಸಿಯೇ ಇಲ್ಲ. ಚುನಾವಣೆಯಿಂದ ಚುನಾವಣೆಗೆ ಭ್ರಷ್ಟಾಚಾರ ಹೆಚ್ಚುತ್ತಲೇ ಹೋಗುತ್ತಿದೆ. ಚುನಾವಣಾ ಆಯೋಗ ನಿದ್ರ್ರಾವಸ್ಥೆಯಲ್ಲಿದೆಯೇ, ಮರಣಶಯ್ಯೆಯಲ್ಲಿದೆಯೋ ಗೊತ್ತಿಲ್ಲ. ಜನಪ್ರತಿನಿಧಿಗಳು ಆಡಿದ್ದೇ ಆಟ. ಕರ್ನಾಟಕದಲ್ಲಿ ಹತ್ತಾರು ಸಾವಿರ ಹೋರಾಟ ಸಂಸ್ಥೆಗಳಿದ್ದರೂ ಅವುಗಳಿಗೆ ಚುನಾವಣಾ ಭ್ರಷ್ಟಾಚಾರ ತಾರಕಕ್ಕೇರಿದೆ ಎಂಬ ಆತಂಕವಿಲ್ಲ. ಅಂದ ಮೇಲೆ ಈ ದುಷ್ಟಪದ್ಧತಿ ಮುಂದುವರಿದುಕೊಂಡು ಹೋಗಲಿ ಎಂದು ಹತಾಶರಾಗಿಬಿಟ್ಟಿದ್ದೀರಾ ಎಂದು ಕೇಳಬೇಕಿದೆ.

ಲೋಕಪಾಲ್ ಮಸೂದೆಯಲ್ಲೂ ಚುನಾವಣಾ ಪದ್ಧತಿಯನ್ನು ಶುದ್ಧಗೊಳಿಸುವ ಪ್ರಸ್ತಾಪ ಇಲ್ಲ.
ಅಡ್ವಾನಿ ಮತ್ತು ಇಂದ್ರಜಿತ್ ಗುಪ್ತಾ ಕೂಡಿ ಬರೆದ ಚುನಾವಣಾ ಸುಧಾರಣೆ ವರದಿ ಕಸದ ಬುಟ್ಟಿ ಸೇರಿದೆ. 6 ವರ್ಷ ರಾಜ್ಯಭಾರ ಮಾಡಿದ ಬಿಜೆಪಿಯಾಗಲಿ, ಗೃಹಮಂತ್ರಿಯಾಗಿದ್ದ ಅಡ್ವಾನಿಯಾಗಲಿ ಚುನಾವಣಾ ಸುಧಾರಣೆ ಬಗೆಗೆ ತುಟಿಕ್‌ಪಿಟಕ್ ಎನ್ನಲಿಲ್ಲ.

ಈ ಚುನಾವಣೆಗಳಲ್ಲಿ ಬಡವರು, ಮಧ್ಯಮವರ್ಗದವರು ಉಮೇದುದಾರರಾಗಲು ಸಾಧ್ಯವೇ ಇಲ್ಲ. ಸಂಸತ್‌ನಲ್ಲಿ 1996ರಲ್ಲಿ ಅಪರಾಧ ಮಾಡಿರುವವರ ಸಂಖ್ಯೆ ಶೇ.10 ಇದ್ದದ್ದು 2009ಕ್ಕೆ ಶೇ.30ರಷ್ಟಾಯಿತು. ಈಗ ಬಹುಶಃ ಅದು ಶೇ.50 ಆಗಿರಬಹುದು. ವಾಣಿಜ್ಯ ಸಂಸ್ಥೆಯವರು ಹಾಗೂ ಪಾರ್ಲಿಮೆಂಟ್ ಮತ್ತು ಶಾಸನ ಸಭೆಗಳ ಸದಸ್ಯರ ನಡುವಣ ಹೊಂದಾಣಿಕೆಯಿಂದಾಗಿ ಜನಪ್ರತಿನಿಧಿಗಳ ಆಸ್ತಿ ಚುನಾವಣೆಯಿಂದ ಚುನಾವಣೆಗೆ ನೂರುಪಟ್ಟು ಮತ್ತು ಸಾವಿರಪಟ್ಟು ಹೆಚ್ಚಿದೆ.

ಆದ್ದರಿಂದ ಈ ದುರವಸ್ಥೆಯಿಂದ ಪಾರಾಗಲು ಇರುವುದು ಒಂದೇ ದಾರಿ. ಜನತಾ ಆಂದೋಲನವೊಂದನ್ನು ದೀರ್ಘಾವಧಿ ಹೋರಾಟಕ್ಕೆ ಅಣಿಮಾಡಬೇಕು. ಇದಕ್ಕೆ ಎಲ್ಲ ಸಂಘಟನೆಯವರೂ ಕೈಜೋಡಿಸಬೇಕು.

ಚುನಾವಣಾ ಪದ್ಧತಿಯನ್ನು ಆಮೂಲಾಗ್ರವಾಗಿ ಬದಲಾಯಿಸದೆ ಇದ್ದರೆ ಮುಂದೆ ಕೋಟ್ಯಾಧಿಪತಿಗಳು, ಭ್ರಷ್ಟರು, ಕ್ರಿಮಿನಲ್‌ಗಳು, ಕೊಲೆಗಡುಕರು ಇವರೇ ಆಳಲು ಬರುತ್ತಾರೆ ಎಂಬುದು ತಿಳಿದಿರಲಿ.


ಇದನ್ನೂ ಓದಿ: ಬಹುಜನ ಭಾರತ: ಇತಿಹಾಸದ ಕಟಕಟೆಯಲ್ಲಿ ಅರುಣ್ ಮಿಶ್ರ ಎಂಬ ನ್ಯಾಯಮೂರ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...