Homeಕರ್ನಾಟಕಶ್ರದ್ಧಾಂಜಲಿ; ಗಾಂಧಿವಾದಿ ಚಳುವಳಿಯ ಪಿತಾಮಹ ಎಚ್ ಎಸ್ ದೊರೆಸ್ವಾಮಿ

ಶ್ರದ್ಧಾಂಜಲಿ; ಗಾಂಧಿವಾದಿ ಚಳುವಳಿಯ ಪಿತಾಮಹ ಎಚ್ ಎಸ್ ದೊರೆಸ್ವಾಮಿ

- Advertisement -
- Advertisement -

ನಿನ್ನೆ ನಿಧನರಾದ ಎಚ್.ಎಸ್. ದೊರೆಸ್ವಾಮಿ ತಮ್ಮೊಂದಿಗೆ, ಇನ್ನು ಮುಂದೆ ಕಂಡುಕೊಳ್ಳಲು ಕಷ್ಟ ಎನಿಸುವ ಒಂದು ವಿದ್ಯಮಾನ, ಒಂದು ಪರಂಪರೆ ಮತ್ತು ಒಂದು ರೀತಿಯ ಆಕರ್ಷಣೆಯನ್ನೂ ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದಾರೆ. ನ್ಯಾಯಕ್ಕಾಗಿ ಶಾಶ್ವತ ಹೋರಾಟಗಾರ, ಶೇಕಡಾ 100 ರಷ್ಟು ಗಾಂಧಿವಾದಿ (ಅವರ ನಮ್ರತೆ ಮತ್ತು ಪ್ರಾಮಾಣಿಕತೆ ಅದನ್ನು ಸ್ವೀಕರಿಸಲು ಒಪ್ಪಲಾರದು) ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲವನ್ನೂ ಗಮನಿಸುವ  ತೀಕ್ಷ್ಣ ದೃಷ್ಟಿ ಮತ್ತು ಅವರ ಮಾಗಿದ ವಯಸ್ಸಿನಲ್ಲಿಯೂ ಎಲ್ಲವನ್ನೂ ತಿಳಿಯುವ ಹಂಬಲ ಹೊಂದಿರುವ ವ್ಯಕ್ತಿಯಾಗಿದ್ದರು. ಅವರು ಅಕ್ಷರಶಃ ಮತ್ತು ಸಾಂಕೇತಿಕವಾಗಿಯೂ ಎತ್ತರದ ವ್ಯಕ್ತಿ.  ಅವರು ಆಸ್ಪತ್ರೆಗೆ ದಾಖಲಾಗುವುದು ಇತ್ತೀಚೆಗೆ ಹೆಚ್ಚಾಗಿತ್ತಾದರೂ, ಅವರು ಕೋವಿಡ್ ಜಯಿಸಿದ್ದರು, ಅವರ ಆಮ್ಲಜನಕದ ಮಟ್ಟವು ಅತ್ಯುತ್ತಮವಾಗಿತ್ತು, ಸಕ್ಕರೆ ಅಂಶ ಮತ್ತು ಬಿಪಿ 20 ವರ್ಷದ ಯುವಕನಿಗಿರುವಂತೆ ಸಾಮಾನ್ಯವಾಗಿತ್ತು. ರಾಜಕೀಯ ಅಥವಾ ಸೈದ್ಧಾಂತಿಕವಾಗಿ ನಮ್ಮ ಸಮಾಜವನ್ನು ಹಾಳುಗೆಡವುತ್ತಿರುವ ಎಲ್ಲಾ ರೀತಿಯ ವೈರಸ್‌ಗಳ ವಿರುದ್ಧ ಹೋರಾಡಿದ ಅವರು ಅಂತಿಮವಾಗಿ ಮಾರಣಾಂತಿಕ ವೈರಸ್‌ಗೆ ಬಲಿಯಾಗಲಿಲ್ಲ ಎಂಬುದು ಗಮನಾರ್ಹ.

ಕೋವಿಡ್ ಕಾರಣದಿಂದಾಗಿ, ಯಾವ ಹಂತದ ಹೋರಾಟಕ್ಕೂ ಸಿದ್ಧವಿದ್ದ ತಾವು ಆಳವಾಗಿ ಪ್ರೀತಿಸುವ ಜನರೊಂದಿಗೆ ಇರಲು ಸಾಧ್ಯವಾಗದ ಕಾರಣ ಮತ್ತು ಆ ಜನರ ನೋವುಗಳಿಗೆ ಸ್ಪಂದಿಸಲು ಆಗದ ಕಾರಣ ಅವರು ಸ್ವಲ್ಪ ಕುಗ್ಗಿದರೇನೋ? ಅಲ್ಲದೆ, ಸಾರ್ವಜನಿಕ ಚಟುವಟಿಕೆಯೇ ತನ್ನನ್ನು ಜೀವಂತವಾಗಿಟ್ಟಿದೆ ಎಂದು ಅವರು ಆಗಾಗ ತಮಾಷೆ ಮಾಡುತ್ತಿದ್ದರು. ಕುವೆಂಪು ಅವರ ಪ್ರಸಿದ್ಧ ಸಾಲುಗಳು, ‘ಓ ನನ್ನ ಚೇತನ, ಆಗು ನೀ ಅನಿಕೇತನ’ ಎಂಬುದನ್ನು ಅದರ ಸಂಪೂರ್ಣ ಅರ್ಥದಲ್ಲಿ ಅವರಿಗೆ ಅನ್ವಯಿಸಬಹುದು. ಅವರು ತಮ್ಮ ಜೀವನದುದ್ದಕ್ಕೂ ಬಾಡಿಗೆ ಮನೆಯಲ್ಲಿ ವಾಸಿಸಿದರು ಮತ್ತು ಅವರಿಗೆ ಮನೆಯನ್ನು ಮಂಜೂರು ಮಾಡುವುದಾಗಿ ತಿಳಿಸಿದ ಸರ್ಕಾರದ ಕೊಡುಗೆಯನ್ನು ದೃಢವಾಗಿ ನಿರಾಕರಿಸಿದ್ದರು. ‘ಅಂತಹ ಉಡುಗೊರೆಯನ್ನು ಸ್ವೀಕರಿಸುವುದಾದರೆ, ನೀನು ಅಲ್ಲಿ ವಾಸಿಸಲು ಸ್ವತಂತ್ರಳು. ಆದರೆ ನಾನು ಹೋಗಿ ಗಾಂಧಿ ಭವನದಲ್ಲಿ ವಾಸಿಸುತ್ತೇನೆ’ ಎಂದು ಅವರು ತಮ್ಮ ಹೆಂಡತಿಗೆ ಹೇಳಿದ್ದರು.

ಅವನ ದೃಢತೆ ಹೇಗಿತ್ತೆಂದರೆ, ವೃದ್ಧಾಪ್ಯದಲ್ಲಿ ಸಹಜವಾಗಿರುವ ಪ್ರಕೃತಿ ಕರೆಯನ್ನೂ ಹಿಮ್ಮೆಟ್ಟಿಸಿ ಒಂದು ಸ್ಥಳದಲ್ಲಿ (ಸಾರ್ವಜನಿಕ ಸಭೆಗಳಲ್ಲಿ) ಹಲವು ಗಂಟೆಗಳ ಕಾಲ ಕೂತುಕೊಳ್ಳುತ್ತಿದ್ದರು. ಅವರು ಕನ್ನಡಕವಿಲ್ಲದೆ ಓದಬಲ್ಲವರಾಗಿದ್ದರು, ಒದಗಿಸಿದ ಯಾವ ಆಹಾರವನ್ನಾದರೂ ತಿನ್ನುತ್ತಿದ್ದರು. ಆದರೆ ಅವರು ಸಿಹಿತಿಂಡಿಗಳನ್ನು ಇಷ್ಟಪಡುತ್ತಿದ್ದರು. ಎಷ್ಟೆಂದರೆ, ಹಲವು ಜಾಮೂನುಗಳನ್ನು ಅವರು ಒಟ್ಟಿಗೆ ಸವಿಯುತ್ತಿದ್ದುದನ್ನು ನೋಡಿದ ಅವರ ಅರ್ಧ ವಯಸ್ಸಿನವರೂ ಸೋಜಿಗ ಪಡುತ್ತಿದ್ದರು.

ಅವರನ್ನು ಯಾವುದೇ ಸಮಯದಲ್ಲಿ ನೋಡಲು ಹೋದ ಯಾರಾದರೂ, ಅವರ ಸ್ಮರಣೆಯಿಂದ ಹಲವು ಸಂಗತಿಗಳನ್ನು ಪಡೆಯುತ್ತಿದ್ದರು. ಜಾದೂಗಾರ ತನ್ನ ಟೋಪಿಯಿಂದ ಹೊರ ತೆಗೆಯುವಂತೆ ಅವರು ತಮ್ಮ ಹಳೆಯ ನೆನಪುಗಳನ್ನು ತೆರೆಯುತ್ತಿದ್ದರು. ಅವರ ನೆನಪು ಅಸಾಧಾರಣವಾಗಿತ್ತು. ಗೋಡ್ಸೆ ಪುಣೆಯಿಂದ ರೈಲಿನಿಂದ ಬಂದು  ಯಶವಂತಪುರದ ರೈಲ್ವೆ ನಿಲ್ದಾಣದಲ್ಲಿ ಇಳಿದ ದಿನಾಂಕವನ್ನು ಅವರು ನೆನಪಿಟ್ಟುಕೊಂಡಿದ್ದರು. ‘ಅವನು (ಗೋಡ್ಸೆ) ಪ್ರಮುಖ ವ್ಯಕ್ತಿಯಲ್ಲದಿದ್ದರೆ ಅವನನ್ನು ಸ್ವೀಕರಿಸಲು ಜನಸಮೂಹ ಏಕೆ ಇತ್ತು?’ ಎಂಬುದು ಅವರ ವಾದವಾಗಿತ್ತು. ಆಗ ಗೋಡ್ಸೆಯನ್ನು ಸ್ವಾಗತಿಸಿದ ಸಂಸ್ಥೆ ನಂತರದ ದಿನಗಳಲ್ಲಿ ಗೋಡ್ಸೆಯಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸಿದೆ. ಈ ಘಟನೆಯ ನೆನಪು ಗಾಂಧೀಜಿಯವರನ್ನು ದ್ವೇಷಿಸುವ ಕೆಲವು ವರ್ಗದ ಜನರಿಗೆ ಇಷ್ಟವಾಗುವುದು ಸಾಧ್ಯವಿಲ್ಲ. ಅವರ ಬಗ್ಗೆ ಬಿಜೆಪಿಯ ಹಿರಿಯ ರಾಜಕಾರಣಿಯೊಬ್ಬ ದೇಶ ವಿರೋಧಿ ಮತ್ತು ನಕಲಿ ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳಿದ್ದರು! ಆರೋಪಿಸಿದ ವ್ಯಕ್ತಿ ನಗೆಪಾಟಿಲಿಗೆ ಈಡಾದರು. ಆರೋಪಿತ ಹೊಸ ಚೈತನ್ಯ ಮತ್ತು ಹುರುಪಿನೊಂದಿಗೆ ತಮ್ಮ ಕೆಲಸ ಮುಂದುವರೆಸಿದರು.

ಜನರು ತಮ್ಮ ಮೇಲೆ ಸುರಿಸಿದ ಪ್ರೀತಿ ಗೌರವಾದರಗಳನ್ನು ಅವರು (ದೊರೆಸ್ವಾಮಿ) ಆನಂದಿಸಿದರು. ಇದು ಅವರು ಸ್ವ-ಆಸಕ್ತಿ ಹೊಂದಿದ್ದರೆಂದಲ್ಲ, ಆದರೆ ಅವರು ಜನರನ್ನು ಪ್ರೀತಿಸುತ್ತಿದ್ದರು, ಜನರು ಬಯಸಿದ ಯಾವುದೇ ಸಮಯದಲ್ಲಿ ಅಥವಾ ಸ್ಥಳದಲ್ಲಿ ಅವರೊಂದಿಗೆ ಇರಲು ಮತ್ತು ಗಾಂಧಿವಾದಿ ತತ್ವಗಳ ಆಧಾರದಲ್ಲಿ ನಡೆಯುವ ಹೋರಾಟದಲ್ಲಿ ಪಾಲ್ಗೊಳ್ಳಲು ಅವರು ಉತ್ಸುಕರಾಗಿದ್ದರು.

ಸುಮಾರು ಒಂಬತ್ತು ದಶಕಗಳವರೆಗಿನ ಅವರ ಸಾರ್ವಜನಿಕ ಜೀವನ ವಿವಿಧ ಮಜಲುಗಳನ್ನು ಹೊಂದಿದೆ. ಸ್ವಾತಂತ್ರ್ಯ ಹೋರಾಟದ ಆರಂಭಿಕ ವರ್ಷಗಳಲ್ಲಿ ಯುವ ಪತ್ರಕರ್ತನಾಗಿ, ಇತ್ತೀಚಿನ ಕೃಷಿ ಹೋರಾಟವನ್ನು ಬೆಂಬಲಿಸುವವರೆಗೆ ಅದು ಹರಡಿತ್ತು. ಬಹುಶಃ ನಮ್ಮ ಕಾಲದಲ್ಲಿ ಇದು ಅತ್ಯಂತ ದೀರ್ಘ ಹೋರಾಟ ಆಗಿದೆ.

ದೊರೆಸ್ವಾಮಿ, doreswamy

ಕಳೆದ ಮೂವತ್ತು ವರ್ಷಗಳಿಂದ ನಾನು ಅವರನ್ನು ಬಲ್ಲೆನಾಗಿದ್ದರೂ, ನಕ್ಸಲರನ್ನು ‘ಮುಖ್ಯವಾಹಿನಿಗೆ’ ಮರಳಿಸಲು ರಚಿಸಿದ ಸಮಿತಿಯ ಸದಸ್ಯನಾಗಿ, ಅವರನ್ನು ಸೂಕ್ಷ್ಮವಾಗಿ  ಗಮನಿಸಿ ತಿಳಿಯುವ ಅವಕಾಶ ಸಿಕ್ಕಿತು. ಅವರು ಎಷ್ಟು ಸೂಕ್ಷ್ಮದ ಮಟ್ಟಿಗೆ ವಿವರಗಳನ್ನು ಕಲೆಹಾಕುತ್ತಿದ್ದರು ಎಂಬುದು ಮತ್ತು  ಅವರ ಒಳನೋಟಗಳು ಉನ್ನತ ಮಟ್ಟದ ವಕೀಲರನ್ನು ನಾಚಿಸುವಂತೆ ಇದ್ದವು. ಅವರನ್ನು ಯಾವ ವಿಷಯದಲ್ಲಾದರೂ ಕನ್ವಿನ್ಸ್ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ, ಆದರೆ ಒಮ್ಮೆ ಮನವರಿಕೆಯಾದರೆ, ಅವರು ಎಂದೂ ತಮ್ಮ ನಿಲುವನ್ನು ಬಿಟ್ಟುಕೊಡುತ್ತಿರಲಿಲ್ಲ. ಅವರು ಇಬ್ಬರು ಕ್ರಾಂತಿಕಾರಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ಚಿಕ್ಕಮಗಳೂರು ಡಿಸಿಗೆ ಹಸ್ತಾಂತರಿಸಿದರು, ಅವರನ್ನು ಒಳ್ಳೆಯ ರೀತಿಯಲ್ಲಿ ನೋಡಿಕೊಳ್ಳುವಂತೆ ಪ್ರೀತಿಯಿಂದ ಆದೇಶಿಸಿದರು.

ಗೌರಿ ಮೆಮೋರಿಯಲ್ ಟ್ರಸ್ಟ್ ನ ಅಧ್ಯಕ್ಷರಾಗಲು ಅವರು ಒಪ್ಪಿಕೊಂಡ ಸಂದರ್ಭದಲ್ಲಿ ಮತ್ತೆ ಅವರ ಒಡನಾಟ ಲಭಿಸಿತು. ಅವರು ವೃತ್ತಿಪರ ಇಂಗ್ಲಿಷ್ ಶಿಕ್ಷಕರಂತೆ ಟ್ರಸ್ಟ್ ಡೀಡ್ ನ ಕರಡನ್ನು ಓದಿಕೊಂಡರು ಮತ್ತು ಆತ್ಮೀಯ ಹೆಡ್ ಮಾಸ್ಟರ್ ತರಹ ಟ್ರಸ್ಟ್ ಸಭೆಗಳನ್ನು ನಡೆಸಿದರು.

ಅವರು ಮೂಲತಃ ಪರಮ ಜಾತ್ಯತೀತರು, ಹಿಂದುತ್ವ ರಾಜಕಾರಣದ ಕೋಮುವಾದಿ ಫ್ಯಾಸಿಸ್ಟ್ ಕಾರ್ಯಸೂಚಿಯನ್ನು ವಿರೋಧಿಸಿದರು ಮತ್ತು ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿಯಿಂದ ಮೈಲಿ ದೂರ ಸರಿದ ಕಾಂಗ್ರೆಸ್ ಅಥವಾ ಇತರ ಯಾವುದೇ ಪಕ್ಷವಾಗಲೀ ತರಾಟೆಗೆ ತೆಗೆದುಕೊಳ್ಳುವುದನ್ನು ಬಿಡುತ್ತಿರಲಿಲ್ಲ. ಬಹಳ ಹಿಂದೆಯೇ ದೇಶ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದರಿಂದ ದೇಶಕ್ಕೆ ಎರಡನೇ ಸ್ವಾತಂತ್ರ್ಯ ಹೋರಾಟದ ಅಗತ್ಯವಿದೆ ಎಂದು ಅವರು ದೃಢವಾಗಿ ನಂಬಿದ್ದರು.

ಅವರು ಸರಳ ಜೀವನವನ್ನು ನಡೆಸಿದರು, ಆದರೆ ತಮ್ಮ ಚಿಂತನೆಗಳು ಮತ್ತು ಅನುಭವದಿಂದ ಅವರು ಶ್ರೀಮಂತರು. ಅವರ ಜೀವನ ಕಥೆಯು ತಂಪಾದ ರಾತ್ರಿಯಲ್ಲಿ ಹೇಳಬೇಕಾದ ತಣ್ಣನೆಯ ಕಥೆಯಲ್ಲ, ಅದು ಎಂದೂ ರಾಜಿಯಾಗದ, ಆದರೆ ಸರಿಯಾದ ಅಲೋಚನೆಯುಳ್ಳ ಮತ್ತು ಕಾರ್ಯ ಪ್ರವೃತ್ತರಾಗಲು ಆಹ್ವಾನ ನೀಡುವ ಬೆಚ್ಚಗಿನ ಅಧ್ಯಯನದ ಕತೆ. ಈ ಸಂದರ್ಭದಲ್ಲಿ ನಮ್ಮ ನಡುವೆ ಇಂತಹ ಮನುಷ್ಯ ಇದ್ದರು ಎಂಬುದನ್ನು ಮುಂದಿನ ತಲೆಮಾರಿಗೆ ನಂಬುವುದಕ್ಕೆ ಕಷ್ಟವಾಗಬಹುದು. ಗಾಂಧೀಜಿ ಕುರಿತ ಐನ್‌ಸ್ಟೆöÊನ್ ಅವರ ಪ್ರಸಿದ್ಧ ಸಾಲುಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು: ‘ಹಲವು ತಲೆಮಾರುಗಳ ನಂತರ, ಇಂತಹ ಮನುಷ್ಯ ಈ ಭೂಮಿಯ ಮೇಲೆ ಜೀವಂತವಾಗಿ ನಡೆದಾಡಿದ್ದಾನೆ ಎಂಬುದನ್ನು ನಂಬುವುದು ಕಷ್ಟವಾಗಬಹುದು’

ಅನುವಾದ: ಪಿ ಮಲ್ಲನಗೌಡರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...