Homeಕರ್ನಾಟಕಎನ್‍ಡಿಎ: 223, ಯುಪಿಎ: 187, ಇತರೆ: 133. ಇದು ಪೊಲಿಟಿಷಿಯನ್ಸ್ ಪೋಲ್ ವಿಡಿಯೋ ನೋಡಿ

ಎನ್‍ಡಿಎ: 223, ಯುಪಿಎ: 187, ಇತರೆ: 133. ಇದು ಪೊಲಿಟಿಷಿಯನ್ಸ್ ಪೋಲ್ ವಿಡಿಯೋ ನೋಡಿ

ಒಟ್ಟಿನಲ್ಲಿ ಮೇ 23ರ ರಾತ್ರಿ ಆಟದ ಅಂತಿಮ ಹಂತ ನಡೆಯಲಿದೆ. ಈಗ ಇದು ಯಾರ ಆಟವೂ ಅಲ್ಲ. ಕೊನೆ ಕ್ಷಣದಲ್ಲಷ್ಟೇ ಅಂತಿಮ ಸತ್ಯ ಸಿಗಲಿದೆ. ಮೊದಲಿಗೆ ರಾಷ್ಟ್ರಪತಿ ಎನ್‍ಡಿಎಗೆ ಆಹ್ವಾನಿಸುವುದಂತೂ ಖಚಿತ...

- Advertisement -
- Advertisement -

| ನಾನುಗೌರಿ ಡೆಸ್ಕ್ |

ರಾಜಕೀಯ ಚಿಂತಕ ಸುಜಿತ್ ನಾಯರ್ ಮತ್ತು ಅವರ ತಂಡ ವಿಭಿನ್ನ ರೀತಿಯಲ್ಲಿ ಚುನಾವಣಾ ಸಮೀಕ್ಷೆ ಮಾಡುತ್ತದೆ. ಅದು ರಾಜಕೀಯ ಕಾರ್ಯಕರ್ತರ ಜೊತೆ ವರ್ಷ ಕಾಲ ಸಂಪರ್ಕ ಇಟ್ಟುಕೊಂಡು ಗ್ರೌಂಡ್‍ಲೆವೆಲ್ ಮಾಹಿತಿ ಆಧರಿಸಿ ಸಮೀಕ್ಷೆ ಮಾಡುತ್ತದೆ. ಅದರ ಪ್ರಕಾರ, 187 ಸೀಟು ಪಡೆಯಲಿರುವ ಯುಪಿಎಗೆ ಹೆಚ್ಚಿನ ಅಡ್ವಾಂಟ್ವೇಜ್ ಇದೆ…

ಈ ಹಿಂದೆ ಕರ್ನಾಟಕ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ, ಚುನಾವಣೆ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಸರ್ಕಾರ ಮಾಡಲಿವೆ ಎಂದು ಈ ತಂಡ ಮೊದಲೇ ಹೇಳಿತ್ತು. ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲಿವೆ ಎಂದು ಸಾಕಷ್ಟು ಮೊದಲೇ ಹೇಳಿತ್ತು.

ಸುಜಿತ್‍ರವರು ಯುಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಿರುವ ವಿಡಿಯೋದ ಸಾರಾಂಶ ಇಲ್ಲಿದೆ.
ಕಳೆದ ಒಂದು ವರ್ಷದಿಂದ ಹಿರಿಯ ರಾಜಕೀಯ ನಾಯಕರು, ಮಧ್ಯಮ ಹಂತದ ನಾಯಕರು, ಕಾರ್ಯಕರ್ತರ ಜೊತೆ ಸಂಪರ್ಕ, ಚುನಾವಣೆ ವೇಳೆ ಬೂತ್ ಏಜೆಂಟರೊಂದಿಗೆ ಸಂಪರ್ಕ ಇಟ್ಟುಕೊಂಡು ಈ ಸಮೀಕ್ಷೆ ಮಾಡಲಾಗಿದೆ.

ಎನ್‍ಡಿಎ, ಯುಪಿಎ ಮತ್ತು ಎನ್‍ಎಪಿ( ಯುಪಿಎ, ಎನ್‍ಡಿಎ ಹೊರತಾದ ಪಕ್ಷಗಳು) ಎಂದು ವಿಭಾಗಿಸಿ, ರಾಜ್ಯವಾರು ಯಾವುದಕ್ಕೆ ಎಷ್ಟು ಸೀಟು ಎಂದು ವಿವರಿಸಲಾಗಿದೆ. ರಾಜ್ಯದ ಹೆಸರಿನ ಪಕ್ಕದ ಬ್ರಾಕೆಟಿನಲ್ಲಿ ಒಟ್ಟು ಸೀಟುಗಳ ಸಂಖ್ಯೆಯಿದೆ.

ಅಂಡಮಾನ್ ನಿಕೋಬಾರ್ (1)
ಎನ್‍ಡಿಎ: 0 ಯುಪಿಎ: 1

ಆಂಧಪ್ರದೇಶ (25)
ಎನ್‍ಡಿಎ: 0 ಯುಪಿಎ:2 ಎನ್‍ಎಪಿ: ವೈಎಸ್‍ಆರ್‍ಸಿ: 15, ಟಿಡಿಪಿ: 8

ಅರುಣಾಚಲ ಪ್ರದೇಶ (2)
ಎನ್ಡಿಎ: 1, ಎನ್‍ಎಪಿ: 1

ಛತ್ತೀಸ್‍ಗಡ್ (11)
ಎನ್ಡಿಎ: 04 ಯುಪಿಎ:07

ದಾದ್ರಾ (1)
ಎನ್‍ಡಿಎ: 1 ಯುಪಿಎ: 0

ಚಂಡಿಗಡ್ (1)
ಎನ್‍ಡಿಎ: 0, ಯುಪಿಎ: 1

ಬಿಹಾರ್ (40)
ಎನ್ಡಿಎ: 20 (ಬಿಜೆಪಿ: 8, ಜೆಡಿಯು: 11, ಎಲ್‍ಜೆಪಿ: 1), ಯುಪಿಎ: 19 ( ಕಾಂಗ್ರೆಸ್ 06, ಆರ್‍ಜೆಡಿ: 13), ಇತರೆ: 1

ಗೋವಾ (2)
ಎನ್‍ಡಿಎ: 1, ಯುಪಿಎ: 1

ಗುಜರಾತ್ (26)
ಎನ್‍ಡಿಎ: 19, ಯುಪಿಎ: 07

ದಾಮನ್-ಡಿಯು( 1)
ಎನ್‍ಡಿಎ : 1

ದೆಹಲಿ (7)
ಎನ್‍ಡಿಎ: 3, ಯುಪಿಎ: 1, ಇತರೆ (ಆಪ್): 3

ಜಮ್ಮು-ಕಾಶ್ಮೀರ (6)
ಎನ್‍ಡಿಎ: 02, ಯುಪಿಎ: 03, ಇತರೆ: 01

ಜಾರ್ಖಂಡ್( 14)
ಎನ್‍ಡಿಎ :04, ಯುಪಿಎ: 10 (ಕಾಂಗ್ರೆಸ್ :04, ಜೆಎಂಎಂ: 06)

ಹರ್ಯಾಣ (10)
ಎನ್‍ಡಿಎ: 03, ಯುಪಿಎ:À 06 ಇತರೆ: 01

ಹಿಮಾಚಲ ಪ್ರದೇಶ (4)
ಎನ್‍ಡಿಎ: 03, ಯುಪಿಎ: 01

ಲಕ್ಷದ್ವೀಪ (1)
ಎನ್ಡಿಎ: 0. ಯುಪಿಎ: 1

ಮಹಾರಾಷ್ಟ್ರ ( 48)
ಎನ್‍ಡಿಎ: 28 (ಬಿಜೆಪಿ: 16, ಶಿವಸೇನಾ: 12), ಯುಪಿಎ: 18 (ಕಾಂಗ್ರೆಸ್: 09, ಎನ್‍ಸಿಪಿ: 09),
ಇತರೆ: 02

ಕರ್ನಾಟಕ (28)
ಎನ್ಡಿಎ: 18, ಯುಪಿಎ: 10 (ಕಾಂಗ್ರೆಸ್ 07, ಜೆಡಿಎಸ್: 03)

ಕೇರಳ (20)
ಎನ್‍ಡಿಎ: 01, ಯುಪಿಎ: 13, ಇತರೆ( ಸಿಪಿಐ/ಸಿಪಿಎಂ): 06

ಮಿಜೊರಾಂ (1)
ಇತರೆ: 01

ಮಧ್ಯಪ್ರದೇಶ (29)
ಎನ್‍ಡಿಎ: 19, ಯುಪಿಎ: 10

ಮಣಿಪುರ (2)
ಯುಪಿಎ: 02

ಮೇಘಾಲಯ (2)
ಯುಪಿಎ: 02

ಪುದುಚೇರಿ (1)
ಯುಪಿಎ: 01

ಪಂಜಾಬ್ (13)
ಎನ್‍ಡಿಎ: 03, ಯುಪಿಎ: 09, ಇತರೆ(ಆಪ್): 01

ಒರಿಸ್ಸಾ (21)
ಎನ್‍ಡಿಎ: 06, ಯುಪಿಎ: 01, ಇತರೆ (ಬಿಜೆಡಿ): 14

ರಾಜಸ್ತಾನ್ ( 25)
ಎನ್‍ಡಿಎ: 16, ಯುಪಿಎ:09

ತಮಿಳುನಾಡು (39)
ಎನ್‍ಡಿಎ: 07 (ಬಿಜೆಪಿ: 1. ಎಐಎಡಿಎಂಕೆ: 6), ಯುಪಿಎ: 29 (ಡಿಎಂಕೆ: 25, ಕಾಂಗ್ರೆಸ್: 04),
ಇತರೆ: 01

ತೆಲಂಗಾಣ(17)
ಎನ್‍ಡಿಎ: 01, ಯುಪಿಎ: 02, ಇತರೆ: 13( ಟಿಆರ್‍ಎಸ್: 12, ಎಐಎಂಎಂ: 01)

ಸಿಕ್ಕಿಂ(1)
ಇತರೆ: 01

ಉತ್ತರಪ್ರದೇಶ(80)
ಎನ್‍ಡಿಎ: 40, ಯುಪಿಎ: 05, ಇತರೆ: 35 (ಬಿಎಸ್‍ಪಿ: 20, ಕಾಂಗ್ರೆಸ್: 15)

ಉತ್ತರಾಖಂಡ(5)
ಎನ್‍ಡಿಎ: 03, ಯುಪಿಎ: 02

ತ್ರಿಪುರ(2)
ಎನ್‍ಡಿಎ: 01, ಯುಪಿಎ: 01

ಪಶ್ಚಿಮ ಬಂಗಾಳ(42)
ಎನ್‍ಡಿಎ: 13, ಯುಪಿಎ:02, ಇತರೆ( ಟಿಎಂಸಿ): 27

ಯಾವ ಕೂಟಕ್ಕೆ ಎಷ್ಟು? ಎನ್‍ಡಿಎ:

223, ಯುಪಿಎ: 187, ಎನ್‍ಎಪಿ( ಇತರೆ): 133

ಎನ್‍ಡಿಎಗೆ ಸರಳ ಬಹುಮತಕ್ಕೆ 49 ಸೀಟು ಕೊರತೆ. ಅದು ಯಾರ ಬೆಂಬಲ ಪಡೆಯಬಹುದು?
ಬಿಜೆಡಿ(14), ಟಿಆರ್‍ಎಸ್(13), ವೈಎಸ್‍ಆರ್‍ಸಿ(15), ಆಶ್ಚರ್ಯಕರವಾಗಿ ಬಿಎಸ್‍ಪಿ(20), ಇದೆಲ್ಲ ಸೇರಿದರೆ 62 ಸೀಟು.
ಆಗ ಎನ್ಡಿಎ: 223 + 62= 285 ( ಮಾಯಾವತಿಗೆ ಉಪ ಪ್ರಧಾನಿ ಪಟ್ಟ ಕೊಡಬಹುದು)

ಯುಪಿಎಗೆ ಸರಳ ಬಹುಮತಕ್ಕೆ 85 ಸೀಟುಗಳ ಕೊರತೆ. ಅದಕ್ಕೆ ಯಾರ್ಯಾರು ಬೆಂಬಲ ಕೊಡಬಹದು?
ಟಿಎಂಸಿ(27),ಟಿಡಿಪಿ(08), ಆಪ್(04), ಬಿಎಸ್‍ಪಿ(20), ಎಸ್‍ಪಿ(15), ಬಿಜೆಡಿ(14), ಟಿಆರ್‍ಎಸ್(13), ವೈಎಸ್‍ಆರ್‍ಸಿ(15), ಇದೆಲ್ಲ ಸೇರಿದರೆ 116.
ಆಗ ಯುಪಿಎ: 187 + 116= 303,  ಅಡ್ವಂಟೇಜ್ ಎಂದರೆ, ಕಾಂಗ್ರೆಸ್ ಪಕ್ಷ ಪ್ರಧಾನಿ ಹುದ್ದೆಯನ್ನು ಇತರರಿಗೆ ಬಿಟ್ಟು ಕೊಡಲು ರೆಡಿ ಇರುವುದು. ಎನ್‍ಡಿಎದಲ್ಲಿ ಸದ್ಯಕ್ಕೆ ಇದು ಅಸಾಧ್ಯ.

ಇನ್ನು ಥರ್ಡ್ ಫ್ರಂಟ್ ವಿಚಾರ. ಈ ಸಲ ಇದು ಅಸಾಧ್ಯ ಅನಿಸುತ್ತದೆ. ಯುಪಿಎ ಮತ್ತು ಎನ್‍ಡಿಎಗಳಿಂದ ಸಮಾನ ದೂರ ಕಾಯ್ದುಕೊಂಡ ಈ ಗುಂಪಿಗೆ 133 ಸೀಟು ಸಿಗಲಿವೆ. ಯುಪಿಎ ಬಾಹ್ಯ ಬೆಂಬಲ ಪಡೆಯುವ ಸಾಧ್ಯತೆಯೂ ಅಷ್ಟಾಗಿಲ್ಲ. ಯುಪಿಎ ಮತ್ತು ಎನ್‍ಡಿಎನಲ್ಲಿರುವ ಮಿತ್ರಪಕ್ಷಗಳನ್ನು ಸೆಳೆಯುವುದೂ ಕಷ್ಟ…

ಒಟ್ಟಿನಲ್ಲಿ ಮೇ 23ರ ರಾತ್ರಿ ಆಟದ ಅಂತಿಮ ಹಂತ ನಡೆಯಲಿದೆ. ಈಗ ಇದು ಯಾರ ಆಟವೂ ಅಲ್ಲ. ಕೊನೆ ಕ್ಷಣದಲ್ಲಷ್ಟೇ ಅಂತಿಮ ಸತ್ಯ ಸಿಗಲಿದೆ. ಮೊದಲಿಗೆ ರಾಷ್ಟ್ರಪತಿ ಎನ್‍ಡಿಎಗೆ ಆಹ್ವಾನಿಸುವುದಂತೂ ಖಚಿತ…
ಮೇ 23ಕ್ಕೆ ಕಾಯೋಣ…

ರಾಜಕಾರಣಿಗಳ ಎಕ್ಸಿಟ್ ಪೋಲ್: ಎನ್.ಡಿ.ಎ ಗೆ 223. ಇದೇ ಸತ್ಯಕ್ಕೆ ಹತ್ತಿರವಾ?

ಅವರೇನು ಹೇಳುತ್ತಾರೆ ನೋಡೋಣ. ವಿಡಿಯೋ ನೋಡಿ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...