Homeಕರ್ನಾಟಕಎನ್‍ಡಿಎ: 223, ಯುಪಿಎ: 187, ಇತರೆ: 133. ಇದು ಪೊಲಿಟಿಷಿಯನ್ಸ್ ಪೋಲ್ ವಿಡಿಯೋ ನೋಡಿ

ಎನ್‍ಡಿಎ: 223, ಯುಪಿಎ: 187, ಇತರೆ: 133. ಇದು ಪೊಲಿಟಿಷಿಯನ್ಸ್ ಪೋಲ್ ವಿಡಿಯೋ ನೋಡಿ

ಒಟ್ಟಿನಲ್ಲಿ ಮೇ 23ರ ರಾತ್ರಿ ಆಟದ ಅಂತಿಮ ಹಂತ ನಡೆಯಲಿದೆ. ಈಗ ಇದು ಯಾರ ಆಟವೂ ಅಲ್ಲ. ಕೊನೆ ಕ್ಷಣದಲ್ಲಷ್ಟೇ ಅಂತಿಮ ಸತ್ಯ ಸಿಗಲಿದೆ. ಮೊದಲಿಗೆ ರಾಷ್ಟ್ರಪತಿ ಎನ್‍ಡಿಎಗೆ ಆಹ್ವಾನಿಸುವುದಂತೂ ಖಚಿತ...

- Advertisement -
- Advertisement -

| ನಾನುಗೌರಿ ಡೆಸ್ಕ್ |

ರಾಜಕೀಯ ಚಿಂತಕ ಸುಜಿತ್ ನಾಯರ್ ಮತ್ತು ಅವರ ತಂಡ ವಿಭಿನ್ನ ರೀತಿಯಲ್ಲಿ ಚುನಾವಣಾ ಸಮೀಕ್ಷೆ ಮಾಡುತ್ತದೆ. ಅದು ರಾಜಕೀಯ ಕಾರ್ಯಕರ್ತರ ಜೊತೆ ವರ್ಷ ಕಾಲ ಸಂಪರ್ಕ ಇಟ್ಟುಕೊಂಡು ಗ್ರೌಂಡ್‍ಲೆವೆಲ್ ಮಾಹಿತಿ ಆಧರಿಸಿ ಸಮೀಕ್ಷೆ ಮಾಡುತ್ತದೆ. ಅದರ ಪ್ರಕಾರ, 187 ಸೀಟು ಪಡೆಯಲಿರುವ ಯುಪಿಎಗೆ ಹೆಚ್ಚಿನ ಅಡ್ವಾಂಟ್ವೇಜ್ ಇದೆ…

ಈ ಹಿಂದೆ ಕರ್ನಾಟಕ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ, ಚುನಾವಣೆ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಸರ್ಕಾರ ಮಾಡಲಿವೆ ಎಂದು ಈ ತಂಡ ಮೊದಲೇ ಹೇಳಿತ್ತು. ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲಿವೆ ಎಂದು ಸಾಕಷ್ಟು ಮೊದಲೇ ಹೇಳಿತ್ತು.

ಸುಜಿತ್‍ರವರು ಯುಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಿರುವ ವಿಡಿಯೋದ ಸಾರಾಂಶ ಇಲ್ಲಿದೆ.
ಕಳೆದ ಒಂದು ವರ್ಷದಿಂದ ಹಿರಿಯ ರಾಜಕೀಯ ನಾಯಕರು, ಮಧ್ಯಮ ಹಂತದ ನಾಯಕರು, ಕಾರ್ಯಕರ್ತರ ಜೊತೆ ಸಂಪರ್ಕ, ಚುನಾವಣೆ ವೇಳೆ ಬೂತ್ ಏಜೆಂಟರೊಂದಿಗೆ ಸಂಪರ್ಕ ಇಟ್ಟುಕೊಂಡು ಈ ಸಮೀಕ್ಷೆ ಮಾಡಲಾಗಿದೆ.

ಎನ್‍ಡಿಎ, ಯುಪಿಎ ಮತ್ತು ಎನ್‍ಎಪಿ( ಯುಪಿಎ, ಎನ್‍ಡಿಎ ಹೊರತಾದ ಪಕ್ಷಗಳು) ಎಂದು ವಿಭಾಗಿಸಿ, ರಾಜ್ಯವಾರು ಯಾವುದಕ್ಕೆ ಎಷ್ಟು ಸೀಟು ಎಂದು ವಿವರಿಸಲಾಗಿದೆ. ರಾಜ್ಯದ ಹೆಸರಿನ ಪಕ್ಕದ ಬ್ರಾಕೆಟಿನಲ್ಲಿ ಒಟ್ಟು ಸೀಟುಗಳ ಸಂಖ್ಯೆಯಿದೆ.

ಅಂಡಮಾನ್ ನಿಕೋಬಾರ್ (1)
ಎನ್‍ಡಿಎ: 0 ಯುಪಿಎ: 1

ಆಂಧಪ್ರದೇಶ (25)
ಎನ್‍ಡಿಎ: 0 ಯುಪಿಎ:2 ಎನ್‍ಎಪಿ: ವೈಎಸ್‍ಆರ್‍ಸಿ: 15, ಟಿಡಿಪಿ: 8

ಅರುಣಾಚಲ ಪ್ರದೇಶ (2)
ಎನ್ಡಿಎ: 1, ಎನ್‍ಎಪಿ: 1

ಛತ್ತೀಸ್‍ಗಡ್ (11)
ಎನ್ಡಿಎ: 04 ಯುಪಿಎ:07

ದಾದ್ರಾ (1)
ಎನ್‍ಡಿಎ: 1 ಯುಪಿಎ: 0

ಚಂಡಿಗಡ್ (1)
ಎನ್‍ಡಿಎ: 0, ಯುಪಿಎ: 1

ಬಿಹಾರ್ (40)
ಎನ್ಡಿಎ: 20 (ಬಿಜೆಪಿ: 8, ಜೆಡಿಯು: 11, ಎಲ್‍ಜೆಪಿ: 1), ಯುಪಿಎ: 19 ( ಕಾಂಗ್ರೆಸ್ 06, ಆರ್‍ಜೆಡಿ: 13), ಇತರೆ: 1

ಗೋವಾ (2)
ಎನ್‍ಡಿಎ: 1, ಯುಪಿಎ: 1

ಗುಜರಾತ್ (26)
ಎನ್‍ಡಿಎ: 19, ಯುಪಿಎ: 07

ದಾಮನ್-ಡಿಯು( 1)
ಎನ್‍ಡಿಎ : 1

ದೆಹಲಿ (7)
ಎನ್‍ಡಿಎ: 3, ಯುಪಿಎ: 1, ಇತರೆ (ಆಪ್): 3

ಜಮ್ಮು-ಕಾಶ್ಮೀರ (6)
ಎನ್‍ಡಿಎ: 02, ಯುಪಿಎ: 03, ಇತರೆ: 01

ಜಾರ್ಖಂಡ್( 14)
ಎನ್‍ಡಿಎ :04, ಯುಪಿಎ: 10 (ಕಾಂಗ್ರೆಸ್ :04, ಜೆಎಂಎಂ: 06)

ಹರ್ಯಾಣ (10)
ಎನ್‍ಡಿಎ: 03, ಯುಪಿಎ:À 06 ಇತರೆ: 01

ಹಿಮಾಚಲ ಪ್ರದೇಶ (4)
ಎನ್‍ಡಿಎ: 03, ಯುಪಿಎ: 01

ಲಕ್ಷದ್ವೀಪ (1)
ಎನ್ಡಿಎ: 0. ಯುಪಿಎ: 1

ಮಹಾರಾಷ್ಟ್ರ ( 48)
ಎನ್‍ಡಿಎ: 28 (ಬಿಜೆಪಿ: 16, ಶಿವಸೇನಾ: 12), ಯುಪಿಎ: 18 (ಕಾಂಗ್ರೆಸ್: 09, ಎನ್‍ಸಿಪಿ: 09),
ಇತರೆ: 02

ಕರ್ನಾಟಕ (28)
ಎನ್ಡಿಎ: 18, ಯುಪಿಎ: 10 (ಕಾಂಗ್ರೆಸ್ 07, ಜೆಡಿಎಸ್: 03)

ಕೇರಳ (20)
ಎನ್‍ಡಿಎ: 01, ಯುಪಿಎ: 13, ಇತರೆ( ಸಿಪಿಐ/ಸಿಪಿಎಂ): 06

ಮಿಜೊರಾಂ (1)
ಇತರೆ: 01

ಮಧ್ಯಪ್ರದೇಶ (29)
ಎನ್‍ಡಿಎ: 19, ಯುಪಿಎ: 10

ಮಣಿಪುರ (2)
ಯುಪಿಎ: 02

ಮೇಘಾಲಯ (2)
ಯುಪಿಎ: 02

ಪುದುಚೇರಿ (1)
ಯುಪಿಎ: 01

ಪಂಜಾಬ್ (13)
ಎನ್‍ಡಿಎ: 03, ಯುಪಿಎ: 09, ಇತರೆ(ಆಪ್): 01

ಒರಿಸ್ಸಾ (21)
ಎನ್‍ಡಿಎ: 06, ಯುಪಿಎ: 01, ಇತರೆ (ಬಿಜೆಡಿ): 14

ರಾಜಸ್ತಾನ್ ( 25)
ಎನ್‍ಡಿಎ: 16, ಯುಪಿಎ:09

ತಮಿಳುನಾಡು (39)
ಎನ್‍ಡಿಎ: 07 (ಬಿಜೆಪಿ: 1. ಎಐಎಡಿಎಂಕೆ: 6), ಯುಪಿಎ: 29 (ಡಿಎಂಕೆ: 25, ಕಾಂಗ್ರೆಸ್: 04),
ಇತರೆ: 01

ತೆಲಂಗಾಣ(17)
ಎನ್‍ಡಿಎ: 01, ಯುಪಿಎ: 02, ಇತರೆ: 13( ಟಿಆರ್‍ಎಸ್: 12, ಎಐಎಂಎಂ: 01)

ಸಿಕ್ಕಿಂ(1)
ಇತರೆ: 01

ಉತ್ತರಪ್ರದೇಶ(80)
ಎನ್‍ಡಿಎ: 40, ಯುಪಿಎ: 05, ಇತರೆ: 35 (ಬಿಎಸ್‍ಪಿ: 20, ಕಾಂಗ್ರೆಸ್: 15)

ಉತ್ತರಾಖಂಡ(5)
ಎನ್‍ಡಿಎ: 03, ಯುಪಿಎ: 02

ತ್ರಿಪುರ(2)
ಎನ್‍ಡಿಎ: 01, ಯುಪಿಎ: 01

ಪಶ್ಚಿಮ ಬಂಗಾಳ(42)
ಎನ್‍ಡಿಎ: 13, ಯುಪಿಎ:02, ಇತರೆ( ಟಿಎಂಸಿ): 27

ಯಾವ ಕೂಟಕ್ಕೆ ಎಷ್ಟು? ಎನ್‍ಡಿಎ:

223, ಯುಪಿಎ: 187, ಎನ್‍ಎಪಿ( ಇತರೆ): 133

ಎನ್‍ಡಿಎಗೆ ಸರಳ ಬಹುಮತಕ್ಕೆ 49 ಸೀಟು ಕೊರತೆ. ಅದು ಯಾರ ಬೆಂಬಲ ಪಡೆಯಬಹುದು?
ಬಿಜೆಡಿ(14), ಟಿಆರ್‍ಎಸ್(13), ವೈಎಸ್‍ಆರ್‍ಸಿ(15), ಆಶ್ಚರ್ಯಕರವಾಗಿ ಬಿಎಸ್‍ಪಿ(20), ಇದೆಲ್ಲ ಸೇರಿದರೆ 62 ಸೀಟು.
ಆಗ ಎನ್ಡಿಎ: 223 + 62= 285 ( ಮಾಯಾವತಿಗೆ ಉಪ ಪ್ರಧಾನಿ ಪಟ್ಟ ಕೊಡಬಹುದು)

ಯುಪಿಎಗೆ ಸರಳ ಬಹುಮತಕ್ಕೆ 85 ಸೀಟುಗಳ ಕೊರತೆ. ಅದಕ್ಕೆ ಯಾರ್ಯಾರು ಬೆಂಬಲ ಕೊಡಬಹದು?
ಟಿಎಂಸಿ(27),ಟಿಡಿಪಿ(08), ಆಪ್(04), ಬಿಎಸ್‍ಪಿ(20), ಎಸ್‍ಪಿ(15), ಬಿಜೆಡಿ(14), ಟಿಆರ್‍ಎಸ್(13), ವೈಎಸ್‍ಆರ್‍ಸಿ(15), ಇದೆಲ್ಲ ಸೇರಿದರೆ 116.
ಆಗ ಯುಪಿಎ: 187 + 116= 303,  ಅಡ್ವಂಟೇಜ್ ಎಂದರೆ, ಕಾಂಗ್ರೆಸ್ ಪಕ್ಷ ಪ್ರಧಾನಿ ಹುದ್ದೆಯನ್ನು ಇತರರಿಗೆ ಬಿಟ್ಟು ಕೊಡಲು ರೆಡಿ ಇರುವುದು. ಎನ್‍ಡಿಎದಲ್ಲಿ ಸದ್ಯಕ್ಕೆ ಇದು ಅಸಾಧ್ಯ.

ಇನ್ನು ಥರ್ಡ್ ಫ್ರಂಟ್ ವಿಚಾರ. ಈ ಸಲ ಇದು ಅಸಾಧ್ಯ ಅನಿಸುತ್ತದೆ. ಯುಪಿಎ ಮತ್ತು ಎನ್‍ಡಿಎಗಳಿಂದ ಸಮಾನ ದೂರ ಕಾಯ್ದುಕೊಂಡ ಈ ಗುಂಪಿಗೆ 133 ಸೀಟು ಸಿಗಲಿವೆ. ಯುಪಿಎ ಬಾಹ್ಯ ಬೆಂಬಲ ಪಡೆಯುವ ಸಾಧ್ಯತೆಯೂ ಅಷ್ಟಾಗಿಲ್ಲ. ಯುಪಿಎ ಮತ್ತು ಎನ್‍ಡಿಎನಲ್ಲಿರುವ ಮಿತ್ರಪಕ್ಷಗಳನ್ನು ಸೆಳೆಯುವುದೂ ಕಷ್ಟ…

ಒಟ್ಟಿನಲ್ಲಿ ಮೇ 23ರ ರಾತ್ರಿ ಆಟದ ಅಂತಿಮ ಹಂತ ನಡೆಯಲಿದೆ. ಈಗ ಇದು ಯಾರ ಆಟವೂ ಅಲ್ಲ. ಕೊನೆ ಕ್ಷಣದಲ್ಲಷ್ಟೇ ಅಂತಿಮ ಸತ್ಯ ಸಿಗಲಿದೆ. ಮೊದಲಿಗೆ ರಾಷ್ಟ್ರಪತಿ ಎನ್‍ಡಿಎಗೆ ಆಹ್ವಾನಿಸುವುದಂತೂ ಖಚಿತ…
ಮೇ 23ಕ್ಕೆ ಕಾಯೋಣ…

ರಾಜಕಾರಣಿಗಳ ಎಕ್ಸಿಟ್ ಪೋಲ್: ಎನ್.ಡಿ.ಎ ಗೆ 223. ಇದೇ ಸತ್ಯಕ್ಕೆ ಹತ್ತಿರವಾ?

ಅವರೇನು ಹೇಳುತ್ತಾರೆ ನೋಡೋಣ. ವಿಡಿಯೋ ನೋಡಿ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಹರಿಯಾಣದ ಮೋಸ್ಟ್ ವಾಂಟೆಡ್ ‘ಗ್ಯಾಂಗ್‌ಸ್ಟರ್’ ಸಾಹಿಲ್ ಚೌಹಾಣ್ ಥೈಲ್ಯಾಂಡ್ ನಿಂದ ಗಡೀಪಾರು; ದೆಹಲಿಯಲ್ಲಿ ವಶಕ್ಕೆ ಪಡೆಯಲಿರುವ ಎಸ್‌ಟಿಎಫ್

ಭಾರತೀಯ ಭದ್ರತಾ ಸಂಸ್ಥೆಗಳಿಗೆ ಒಂದು ಪ್ರಮುಖ ಪ್ರಗತಿಯಲ್ಲಿ, ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಸಾಹಿಲ್ ಚೌಹಾಣ್‌ನನ್ನು ಥೈಲ್ಯಾಂಡ್‌ನಿಂದ ಗಡೀಪಾರು ಮಾಡಿದ ನಂತರ ಭಾರತಕ್ಕೆ ಕರೆತರಲಾಗುತ್ತಿದೆ. ಅಧಿಕಾರಿಗಳ ಪ್ರಕಾರ, ಚೌಹಾಣ್ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ...

ಛತ್ತೀಸ್‌ಗಢ: 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ: ಜೀವಂತ ಇರುವಾಗಲೇ ಗೋಣಿಚೀಲದಲ್ಲಿ ತುಂಬಿ ಬಾವಿ ಬಳಿ ಎಸೆದಿದ್ದ ಆರೋಪಿ ಬಂಧನ

ಛತ್ತೀಸ್‌ಗಢದ ದುರ್ಗ ಜಿಲ್ಲೆಯಲ್ಲಿ ಐದು ವರ್ಷದ ಬಾಲಕಿಯನ್ನು ಅಪಹರಿಸಿ ವ್ಯಕ್ತಿಯೊಬ್ಬ ಅತ್ಯಾಚಾರ ಮಾಡಿ, ನಂತರ ಮಗು ಜೀವಂತ ಇರುವಾಗಲೇ ಗೋಣಿಚೀಲದಲ್ಲಿ ಹಾಕಿ ಬಾವಿಯ ಬಳಿ ಎಸೆದಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಉತೈ...

ಉತ್ತರಪ್ರದೇಶ: ಪ್ರೇಮ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಪ್ರತೀಕಾರ: ಮನೆಗೆ ನುಗ್ಗಿ 23ವರ್ಷದ ಯುವತಿ ಮತ್ತು ತಾಯಿಯ ಮೇಲೆ ಆಸಿಡ್ ದಾಳಿ; ಯುವತಿ ಸಾವು

ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ 23 ವರ್ಷದ ಯುವತಿಯೊಬ್ಬಳು ಪ್ರಾಣ ಕಳೆದುಕೊಂಡು ಆಕೆಯ ತಾಯಿ ಗಂಭೀರವಾಗಿ ಗಾಯಗೊಂಡ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಗುರುವಾರ ರಾತ್ರಿ...

ಬೆಂಗಳೂರಿನ ಪ್ರವಾಹ ಕಾಮಗಾರಿ ಮೇ 30ರೊಳಗೆ ಪೂರ್ಣಗೊಳಿಸಿ, ಇಲ್ಲದಿದ್ದರೆ ಅಮಾನತು ಎದುರಿಸಿ; ಅಧಿಕಾರಿಗಳಿಗೆ ಎಸಿಎಸ್ ತುಷಾರ್ ಗಿರಿನಾಥ್ ಎಚ್ಚರಿಕೆ

ಬೆಂಗಳೂರು: ಮೇ 30 ರೊಳಗೆ ಬಾಕಿ ಇರುವ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿ, ಇಲ್ಲದಿದ್ದರೆ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಯಲಹಂಕದ ಕೇಂದ್ರೀಯ ವಿಹಾರ, ಟಾಟಾ...

ಮರ್ಯಾದೆಗೇಡು ಹತ್ಯೆ ತಡೆಯುವ ʼಇವ ನಮ್ಮವ ಇವ ನಮ್ಮವʼ ವಿಧೇಯಕಕ್ಕೆ ರಾಜ್ಯಪಾಲರಿಂದ ಸಹಿ

ರಾಜ್ಯ ವಿಧಾನಮಂಡಲ ಅಂಗೀಕರಿಸಿದ ವಿಧೇಯಕಗಳ ಪೈಕಿ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರ ಬದಲಿಗೆ ಮತಪತ್ರ ಬಳಕೆ ಕಡ್ಡಾಯಗೊಳಿಸುವ ‘2026ರ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ’ ಹೊರತುಪಡಿಸಿ ಉಳಿದವುಗಳಿಗೆ...

ಶಾತವಾಹನ ವಿವಿ ವಿವಾದ: ಬಲಪಂಥೀಯರಿಂದ ದಲಿತ ಪ್ರಾಧ್ಯಾಪಕಿ ಮತ್ತು ವಿದ್ಯಾರ್ಥಿಗೆ ‘ನಗರ ನಕ್ಸಲರು’ ಎಂಬ ಹಣೆಪಟ್ಟಿಯಲ್ಲಿ ನಿರಂತರ ಕಿರುಕುಳ

ತೆಲಂಗಾಣದ ಶಾತವಾಹನ ವಿಶ್ವವಿದ್ಯಾಲಯದಲ್ಲಿ ದಲಿತ ಮಹಿಳಾ ಪ್ರಾಧ್ಯಾಪಕಿ ಮತ್ತು ದಲಿತ ವಿದ್ಯಾರ್ಥಿನಿಯನ್ನು "ನಗರ ನಕ್ಸಲರು" ಎಂದು ಹಣೆಪಟ್ಟಿ ಕಟ್ಟಿ ನಿರಂತರ ಕಿರುಕುಳ ನೀಡಿದ ನಂತರ ವಿವಾದ ಭುಗಿಲೆದ್ದಿದ್ದು, ಇದಕ್ಕೆ ಶಿಕ್ಷಣ ತಜ್ಞರು ಮತ್ತು...

ಕೇಂದ್ರದ ಹೊಸ ಕಾಯ್ದೆಯಿಂದ ಸಂಕಷ್ಟ : ಇಬ್ಬರು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳಿಗೆ ಹಾರ್ಮೋನ್ ಚಿಕಿತ್ಸೆ ಮುಂದುವರಿಸಲು ಕೇರಳ ಹೈಕೋರ್ಟ್ ಅನುಮತಿ

ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ವಿಧೇಯ, 2026 ಅಂಗೀಕಾರಗೊಂಡ ನಂತರ ಆಸ್ಪತ್ರೆಗಳು ತಮ್ಮ ಚಿಕಿತ್ಸೆಯನ್ನು ಸ್ಥಗಿತಗೊಳಿಸಿವೆ ಎಂದು ಆರೋಪಿಸಿದ್ದ ಇಬ್ಬರು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ ಹಾರ್ಮೋನ್ ಬದಲಿ ಚಿಕಿತ್ಸೆಯನ್ನು ಮುಂದುವರಿಸಲು ಕೇರಳ ಹೈಕೋರ್ಟ್...

ಮಾದಕವಸ್ತು ತನಿಖೆಗೆ ಸಹಾಯಕವಾಗಿ AI ಆಧಾರಿತ ಅಪ್ಲಿಕೇಶನ್ ಆರಂಭಿಸಿದ ಗುಜರಾತ್ ಪೊಲೀಸರು

ಅಹಮದಾಬಾದ್: ಮಾದಕವಸ್ತು ಪ್ರಕರಣಗಳ ತನಿಖೆಯನ್ನು ಸುಲಭವಾಗಿಸಲು ಮತ್ತು ವಿಚಾರಣೆಯ ಸಮಯದಲ್ಲಿ ಅವುಗಳನ್ನು ಬಲಪಡಿಸಲು, ಇದರಿಂದಾಗಿ ಶಿಕ್ಷೆಯ ಪ್ರಮಾಣ ಸುಧಾರಿಸಲು ಗುಜರಾತ್ ಪೊಲೀಸರು ಶುಕ್ರವಾರ ಕೃತಕ ಬುದ್ಧಿಮತ್ತೆ (AI) ಆಧಾರಿತ ಅಪ್ಲಿಕೇಶನ್ "NARIT AI"...

ಇಸ್ಲಾಮಾಬಾದ್‌ ಶಾಂತಿ ಮಾತುಕತೆ | ಅಮೆರಿಕ–ಇಸ್ರೇಲ್ ಹತ್ಯೆಗೈದ ಮಕ್ಕಳ ರಕ್ತಸಿಕ್ತ ಬ್ಯಾಗ್‌, ಶೂ ಹೊತ್ತು ತಂದ ಇರಾನ್

ಶಾಂತಿ ಮಾತುಕತೆಯಲ್ಲಿ ಭಾಗವಹಿಸಲು ಪಾಕಿಸ್ತಾನದ ಇಸ್ಲಾಮಾಬಾದ್‌ಗೆ ಆಗಮಿಸುವಾಗ, ಅಮೆರಿಕ-ಇಸ್ರೇಲ್‌ನ ಬಾಂಬ್‌ ದಾಳಿ ನಡೆಸಿ ಹತ್ಯೆಗೈದ ಮಕ್ಕಳ ಫೋಟೋ, ರಕ್ತಸಿಕ್ತ ಬ್ಯಾಗ್ ಮತ್ತು ಶೂಗಳನ್ನು ವಿಮಾನದಲ್ಲಿ ಹೊತ್ತು ತರುವ ಮೂಲಕ ಇರಾನ್‌ ಜಗತ್ತಿನ ಗಮನಸೆಳೆದಿದೆ. ಸಾಮಾಜಿಕ ಜಾಲತಾಣ...

ಮಣಿಪುರ: ಶಸ್ತ್ರಾಸ್ತ್ರಗಳು ಮತ್ತು ಗಸಗಸೆ ಬೀಜಗಳ ಚೀಲಗಳೊಂದಿಗೆ ಇಬ್ಬರನ್ನು ಬಂಧಿಸಿದ ಭದ್ರತಾ ಪಡೆ

ಇಂಫಾಲ: ಮಣಿಪುರದ ಚುರಚಂದಪುರ ಜಿಲ್ಲೆಯಲ್ಲಿ ಇಬ್ಬರು ವ್ಯಕ್ತಿಗಳಿಂದ ಶಸ್ತ್ರಾಸ್ತ್ರಗಳು ಮತ್ತು ಗಸಗಸೆ ಬೀಜಗಳ ಚೀಲಗಳನ್ನು(ಪಾಪಿ ಸೀಡ್ಸ್) ವಶಪಡಿಸಿಕೊಂಡ ನಂತರ ಭದ್ರತಾ ಪಡೆಗಳು ಅವರನ್ನು ಬಂಧಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ಚುರಾಚಂದ್‌ಪುರ ಪೊಲೀಸ್ ಠಾಣೆ...