Homeಮುಖಪುಟತಾತಾ, ನೀವು ಎಂದಾದರೂ ಮಾಂಸ ತಿಂದಿದ್ದೀರಾ ಎಂಬ ಪ್ರಶ್ನೆಗೆ ದೊರೆಸ್ವಾಮಿಯವರ ಉತ್ತರವೇನು ಗೊತ್ತೆ?

ತಾತಾ, ನೀವು ಎಂದಾದರೂ ಮಾಂಸ ತಿಂದಿದ್ದೀರಾ ಎಂಬ ಪ್ರಶ್ನೆಗೆ ದೊರೆಸ್ವಾಮಿಯವರ ಉತ್ತರವೇನು ಗೊತ್ತೆ?

ಅಷ್ಟು ಎತ್ತರದ ವ್ಯಕ್ತಿ, ನನ್ನಂತ ಚಿಕ್ಕವಳ ಮುಂದೆ ತನ್ನನ್ನು ತಾನೇ ಈ ರೀತಿ ಆತ್ಮಾವಲೋಕನ ಮಾಡಿಕೊಳ್ಳುವುದು ಎಂದರೆ ಅದು ಸಲಭದ ಮಾತಲ್ಲ..

- Advertisement -
- Advertisement -

ಹೋರಾಟದ ಸ್ವೂರ್ತಿ, ಕರ್ನಾಟಕದ ಎಲ್ಲಾ ಚಳವಳಿಗಳ ಬೆನ್ನೆಲುಬು ಆಗಿದ್ದ ನಮ್ಮೆಲ್ಲರ ಚೇತನ ದೊರೆಸ್ವಾಮಿ ತಾತಾ ಇನ್ನಿಲ್ಲ ಎಂಬುದನ್ನ ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಅವರೊಂದಿಗಿನ ನನ್ನ ಒಡನಾಟ, 20 ವರ್ಷದು ಎಂದು ಹೇಳಬಹುದಾದರೂ ಅದು ವೇದಿಕೆಯ ಮೇಲೆ, ಕಾರ್ಯಕ್ರಮಗಳಲ್ಲಿ ಬಿಟ್ಟರೆ, ಅವರನ್ನ ಇನ್ನೂ ಹತ್ತಿರದಿಂದ ನೋಡುವ ಅವಕಾಶ ದೊರೆಕಿದ್ದು 2020ರ ಮೊದಲ ಕರೋನಾ ಲಾಕ್ ಡೌನ್ ಸಮಯದಲ್ಲಿ.

ಆಗ ತಾತನನ್ನು ನೋಡಿಕೊಳ್ಳಲು ಯಾರು ಸಿಗದ ಸಂದರ್ಭ. ನರ್ಸ್ ಒಬ್ಬರನ್ನು ನೇಮಿಸುವ ಚರ್ಚೆ ಬಂದಾಗ ಅದಕ್ಕೆ ತಾತಾ ಒಪ್ಪುತ್ತಿರಲಿಲ್ಲ. ಅವರೊಂದಿಗೆ ರಾಜಕೀಯ ಚರ್ಚೆ ಮಾಡಬೇಕಾದ್ದರಿಂದ ಸಾಮಾಜಿಕ ಕಾರ್ಯಕರ್ತರು ಅವರನ್ನು ನೋಡಿಕೊಂಡರೆ ಅವರಿಗೆ ಸಮಾಧಾನ. ಕೊನೆಗೆ ನಾನು ನನ್ನ ಬಾಳ ಸಂಗಾತಿ ಕುಮಾರ್ ಹೊರಡಲು ಸಿದ್ದರಾದೆವು. ಮೊದಲು ಹೇಗೆ ನೋಡಿಕೊಳ್ಳಬೇಕು ಅವರ ಪದ್ದತಿಗಳು ಎಲ್ಲಾ ಭಿನ್ನವಾಗಿ ಇರುತ್ತದೆ ಅದಕ್ಕೆ ನಾವು ಸರಿ ಹೊಂದುತ್ತೇವೊ ಇಲ್ಲವೊ ಎಂಬ ಸಣ್ಣ ಅಳುಕಿತ್ತು, ನಾವು ಹೋಗಿದ್ದರಿಂದ ಅವರಿಗೆ ತೊಂದರೆಯಾಗಬಾರದು ಎಂಬ ಕಾಳಜಿಯಿಂದಷ್ಟೆ. ಆದರೆ ಹೋದ ಒಂದು ದಿನಕ್ಕೆ ತಾತನದು ನಮ್ಮದು ಎಷ್ಟೋ ವರ್ಷದ ಸಂಬಂಧ ಎನಿಸುವಷ್ಟು ಹತ್ತಿರವಾದೆವು.

ಇದು ಬಹುಶಃ ಸಮಾಜದ ಬದಲಾಣೆಯ ಬಗೆಗಿರುವ ಸಮಾನ ನಂಟಿರಬೇಕು ಅನಿಸಿತ್ತು. ನನಗೊ ಬಹಳಷ್ಟು ಕುತೂಹಲದ ಪ್ರಶ್ನೆಗಳಿದ್ದವು. ಆ ಕಾಲದಲ್ಲಿ ಸ್ವಾತಂತ್ರ್ಯ ಚಳವಳಿಗಳು ಹೇಗೆ ನಡೆಯುತ್ತಿತ್ತು? ಅದರಲ್ಲಿ ತಾತನ ಪಾತ್ರ ಏನಾಗಿತ್ತು ಎಂಬ ಹತ್ತು ಹಲವು ಪ್ರಶ್ನೆಗಳನ್ನು ಕೇಳುತ್ತಿದೆ? ಎಲ್ಲದ್ದಕ್ಕೂ ಉತ್ಸಾಹದಿಂದ ಉತ್ತರಿಸುತ್ತಿದ್ದರು. ಅವರ ಮದುವೆಯ ಬಗ್ಗೆ, ಪ್ರೀತಿಯ ಬಗ್ಗೆ ಹೀಗೆ ಮಾತನಾಡುತ್ತಿದ್ದರೆ ನಮಗೆ ಸಮಯ ಹೋಗುತ್ತಿದ್ದದೆ ಗೊತ್ತಾಗುತ್ತಿರಲಿಲ್ಲ. ಒಂದು ಸಲ ನಾನು, “ತಾತ ನೀವು ಅಜ್ಜಿನ, ಮಕ್ಕಳನ ನೋಡೋಕೆ ವರ್ಷವಾದರೂ ಮನೆಗೆ ಬರುತ್ತಿರಲಿಲ್ಲವಂತೆ, ಪಾಪ ಅಜ್ಜಿ ಎಷ್ಟು ಕಷ್ಟ ಪಟ್ಟಿರಬೇಕು” ಎಂದೆ. ಸಡನ್ನಾಗಿ ತಾತ ನನ್ನ ಕಡೆ ನೋಡಿದರು, ನನಗೆ ಕೇಳಬಾರದ ಪ್ರಶ್ನೆ ಏನಾದರು ಕೇಳಿದೆನಾ ಅಂತ ಒಂದು ಕ್ಷಣ ಗಲಿಬಿಲಿಗೊಂಡೆ, ಅದಕ್ಕೆ ತಾತ ಶಾಂತವಾಗಿ “ಹೌದಮ್ಮ ಅವಳಿಗೆ ನನ್ನ ಮದುವೆ ಮಾಡಿಕೊಂಡು ಏನು ಸಿಕ್ಕಿಲ್ಲ, ಕಷ್ಟಗಳ ಹೊರತು” ಎಂದು ಎರಡು ನಿಮಿಷ ಮೌನಕ್ಕೆ ಜಾರಿದರು. ಅಷ್ಟು ಎತ್ತರದ ವ್ಯಕ್ತಿ ನನ್ನಂತ ಚಿಕ್ಕವಳ ಮುಂದೆ ತನ್ನನ್ನು ತಾನೇ ಈ ರೀತಿ ಆತ್ಮಾವಲೋಕನ ಮಾಡಿಕೊಳ್ಳುವುದು ಎಂದರೆ ಅದು ಸಲಭದ ಮಾತಲ್ಲ. ಅದೇ ನಾವೆಲ್ಲರೂ ಅವರಿಂದ ಅಳವಡಿಸಿಕೊಳ್ಳಬೇಕಾದ ನಡೆ ಎನಿಸಿತ್ತು.

ನಮಗೇ ಕೆಲವು ಸಲ ತಾತನನ್ನ ಜಾಸ್ತಿ ಆಯಾಸ ಮಾಡಿಸಿದೆವಾ ಅನ್ನಿಸುತ್ತಿತ್ತು. ಆದರೆ ತಾತ ಮಾತ್ರ ವಿಷಯ ತೆಗೆದಷ್ಟು ಜ್ಞಾನದ ಭಂಡಾರವೆ ಬಿಚ್ಚಿಕೊಳ್ಳುತ್ತಿತ್ತು. ಈಗ ನೆನಸಿಕೊಂಡರೆ ಬಹುರ್ಶ ಆ ಲಾಕ್ ಡೌನ್ ಸಮಯದಲ್ಲಿ ಹೊರಗೆ ಹೋಗಲು ಆಗದೆ, ಚಳವಳಿಗಳಲ್ಲಿ, ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಹಾಗದೆ ಅವರು ಚಡಪಡಿಸುತ್ತಿದ್ದರು ಎನಿಸುತ್ತದೆ. ಆಗ ನಡೆದ ಕೆಲವು ಘಟನೆಗಳನ್ನು ವಿಡಿಯೊ ಮಾಡಿ ಕೆಲ ಸಮಾನ ಮನಸ್ಕ ಸ್ನೇಹಿತರಿಗೆ ಕಳಿಸುತ್ತಿದ್ದೆವು. ಓದುಗರ ಮೆಚ್ಚುಗೆಯ ಮಾತುಗಳು ತಾತನಿಗೆ ಖುಷಿ ತರುತ್ತಿತು. ನನ್ನ ಕುಮಾರ್ ಬಗ್ಗೆಯೂ ಕೇಳಿ ಬೇಷ್ ಎಂದರು. ಜೊತೆಗೆ ಇದಷ್ಟು ದಿನ ಅವರ ಮಗುವಿನಂತ ಮನಸ್ಸಿನಿಂದ ತಾತನ ಹತ್ತಿರ ಏನು ಪ್ರಶ್ನೆ ಬೇಕಾದರೂ ಕೇಳಬಹುದು ಎಂಬ ಸಲುಗೆಯೂ ಬೆಳೆಯಿತು.

ಇನ್ನೊಂದು ಸಲ ನಾನು ತಾತನಿಗೆ, ನೀವು ಎಂದಾದರೂ ಮಾಂಸ ತಿಂದಿದ್ದೀರಾ ಅಂತ ಕೇಳಿದೆ? “ಒಮ್ಮೆ ನನ್ನ ಯೂತ್ ಲೀಡರ್ ಆಗಿ ಕಾರವಾರಕ್ಕೆ ಕಳಿಸಿದ್ದರು. ಆಗ ನಾವು ಹಲವು ಗೆಳೆಯರು ಸೇರಿ ಮನೆಮನೆಗೆ ಪ್ರಚಾರ ಮಾಡಿ ಬಂದಾಗ ತುಂಬಾ ಹಸಿವಾಗಿತ್ತು. ಬಂದ ಎಲ್ಲಾ ಕಾರ್ಯಕರ್ತರಿಗೆ ಒಂದೇ ಕಡೆ ಊಟದ ವ್ಯವಸ್ಥೆ ಮಾಡಿದ್ದರು. ನಾನು ಅವರ ಪಂಕ್ತಿಯಲ್ಲಿ ಕುಳಿತೆ. ಊಟಕ್ಕೊ ಬಡಿಸಿದರು ನಾನು ಊಟನು ಮಾಡಿದೆ. ಅಲ್ಲಿ ನಮಗೆ ಮಾಂಸಾಹಾರ ಬಡಿಸಿದ್ದರು. ನಾನು ನಾಲ್ಕು- ಐದು ತುತ್ತು ತಿಂದಿದ್ದೆ. ಆಮೇಲೆ ಸ್ನೇಹಿತರು ನೋಡಿ ನಿಮಗೆ ಇಲ್ಲಿ ಒಳಗೆ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಅದು ಮಾಂಸಹಾರಿಗಳಿಗೆ ಎಂದು ನನ್ನ ಕರೆದುಕೊಂಡು ಒಳ ಹೋದರು” ಅಂತ ಹೇಳಿದರು. ಅಷ್ಟರಲ್ಲಿ ನಾನು ಗೊತ್ತಿಲ್ಲದೆ ಐದು ತುತ್ತು ತಿಂದಿದ್ದೆ. ಆ ರುಚಿ ನನಗೆ ಅಭ್ಯಾಸವಿಲ್ಲದಿದ್ದರಿಂದ ನನಗೇನೂ ಅನಿಲಿಲ್ಲ. ಅವರವರ ಆಹಾರ ಅವರಿಗೆ ಹೆಚ್ಚು, ಎಲ್ಲರ ಆಹಾರವನ್ನು ಗೌರವಿಸಬೇಕು. ಯಾರ ಆಹಾರವೂ ಇಲ್ಲಿ ಮೇಲೂ ಇಲ್ಲ ಕೀಳು ಇಲ್ಲ ಅಂದರು ಸಾಮಾಧಾನದಿಂದ. ಇಷ್ಟು ಸರಳವಾಗಿ ಉತ್ತರಿಸುತ್ತಾರೆಂದು ನಾನು ನಿರೀಕ್ಷೆ ಮಾಡಿರಲಿಲ್ಲ. ಮನಸ್ಸಿನಲ್ಲೆ ಹ್ಯಾಟ್ಸ್‌ಆಫ್‌ ತಾತ ಎಂದು ಅವರ ಕೈಕುಲುಕಿದೆ.

ಇಲ್ಲಿ ಮತ್ತೊಂದು ವಿಷಯ ಪ್ರಸ್ತಾಪ ಮಾಡಲೇಬೇಕು. ಅವರ ಹೋರಾಟದ ಬೆಳವಣಿಗೆಗೆ ಅವರ ಬಾಳ ಸಂಗಾತಿಯಾದ ಲಲಿತಮ್ಮನವರ ಬೆಂಬಲವು ಬಹಳ ಮುಖ್ಯ. ಮನೆಯ ಮಕ್ಕಳ ಎಲ್ಲಾ ಜವಾಬ್ದಾರಿಯನ್ನ ಲಲಿತಮ್ಮನವರು ಏಕಾಂಗಿಯಾಗಿಯೇ ನಿರ್ವಹಿಸಿದ್ದಾರೆ. ಈ ಹಿಂದೆ ಅವರೊಂದಿಗೆ ಸಹ ಆಸ್ಪತ್ರೆಯಲ್ಲಿ ಎರಡು ದಿನ ಇದ್ದು ಅವರ ಜೀವನದ ಸಂಗತಿಗಳನ್ನ ಕೇಳಿದ್ದೇನೆ. ಅವರು ಕೂಡಾ ತಾತನ ಬಗ್ಗೆ ಒಂದು ಸಣ್ಣ ಅಸಮಾಧಾನವನ್ನು ವ್ಯಕ್ತಪಡಿಸಲಿಲ್ಲ. ಹೀಗೆ ಸಾರ್ಥಕ ಜೀವನ ಇಬ್ಬರದು. ಹೋಗಿ ಬನ್ನಿ ತಾತ. ಧಣಿವರಿಯದ ನಿಮ್ಮ ಹೋರಾಟದಿಂದ ವಿಶ್ರಾಂತಿ ಪಡೆಯುತ್ತಾ, ನಮ್ಮಂಥವರನ್ನ ಸದಾ ಕಾಲ ಎಚ್ಚರಿಸುತ್ತಿರಿ.

  • ಗೌರಿ, (ಕರ್ನಾಟಕ ಜನಶಕ್ತಿಯ ಗೌರವಾಧ್ಯಕ್ಷರು. ಮಹಿಳಾ ಹೋರಾಟಗಾರರು)

ಇದನ್ನೂ ಓದಿ: ‘ಏನಪ್ಪ, ದೇವರು ಇದಾನೆ ಅನಿಸುತ್ತಾ, ಇಲ್ಲಾ ಅನಿಸುತ್ತಾ?’ ದೊರೆಸ್ವಾಮಿಯವರ ಜೊತೆಗಿನ ನೆನಪು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...