Homeಮುಖಪುಟತಾತಾ, ನೀವು ಎಂದಾದರೂ ಮಾಂಸ ತಿಂದಿದ್ದೀರಾ ಎಂಬ ಪ್ರಶ್ನೆಗೆ ದೊರೆಸ್ವಾಮಿಯವರ ಉತ್ತರವೇನು ಗೊತ್ತೆ?

ತಾತಾ, ನೀವು ಎಂದಾದರೂ ಮಾಂಸ ತಿಂದಿದ್ದೀರಾ ಎಂಬ ಪ್ರಶ್ನೆಗೆ ದೊರೆಸ್ವಾಮಿಯವರ ಉತ್ತರವೇನು ಗೊತ್ತೆ?

ಅಷ್ಟು ಎತ್ತರದ ವ್ಯಕ್ತಿ, ನನ್ನಂತ ಚಿಕ್ಕವಳ ಮುಂದೆ ತನ್ನನ್ನು ತಾನೇ ಈ ರೀತಿ ಆತ್ಮಾವಲೋಕನ ಮಾಡಿಕೊಳ್ಳುವುದು ಎಂದರೆ ಅದು ಸಲಭದ ಮಾತಲ್ಲ..

- Advertisement -
- Advertisement -

ಹೋರಾಟದ ಸ್ವೂರ್ತಿ, ಕರ್ನಾಟಕದ ಎಲ್ಲಾ ಚಳವಳಿಗಳ ಬೆನ್ನೆಲುಬು ಆಗಿದ್ದ ನಮ್ಮೆಲ್ಲರ ಚೇತನ ದೊರೆಸ್ವಾಮಿ ತಾತಾ ಇನ್ನಿಲ್ಲ ಎಂಬುದನ್ನ ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಅವರೊಂದಿಗಿನ ನನ್ನ ಒಡನಾಟ, 20 ವರ್ಷದು ಎಂದು ಹೇಳಬಹುದಾದರೂ ಅದು ವೇದಿಕೆಯ ಮೇಲೆ, ಕಾರ್ಯಕ್ರಮಗಳಲ್ಲಿ ಬಿಟ್ಟರೆ, ಅವರನ್ನ ಇನ್ನೂ ಹತ್ತಿರದಿಂದ ನೋಡುವ ಅವಕಾಶ ದೊರೆಕಿದ್ದು 2020ರ ಮೊದಲ ಕರೋನಾ ಲಾಕ್ ಡೌನ್ ಸಮಯದಲ್ಲಿ.

ಆಗ ತಾತನನ್ನು ನೋಡಿಕೊಳ್ಳಲು ಯಾರು ಸಿಗದ ಸಂದರ್ಭ. ನರ್ಸ್ ಒಬ್ಬರನ್ನು ನೇಮಿಸುವ ಚರ್ಚೆ ಬಂದಾಗ ಅದಕ್ಕೆ ತಾತಾ ಒಪ್ಪುತ್ತಿರಲಿಲ್ಲ. ಅವರೊಂದಿಗೆ ರಾಜಕೀಯ ಚರ್ಚೆ ಮಾಡಬೇಕಾದ್ದರಿಂದ ಸಾಮಾಜಿಕ ಕಾರ್ಯಕರ್ತರು ಅವರನ್ನು ನೋಡಿಕೊಂಡರೆ ಅವರಿಗೆ ಸಮಾಧಾನ. ಕೊನೆಗೆ ನಾನು ನನ್ನ ಬಾಳ ಸಂಗಾತಿ ಕುಮಾರ್ ಹೊರಡಲು ಸಿದ್ದರಾದೆವು. ಮೊದಲು ಹೇಗೆ ನೋಡಿಕೊಳ್ಳಬೇಕು ಅವರ ಪದ್ದತಿಗಳು ಎಲ್ಲಾ ಭಿನ್ನವಾಗಿ ಇರುತ್ತದೆ ಅದಕ್ಕೆ ನಾವು ಸರಿ ಹೊಂದುತ್ತೇವೊ ಇಲ್ಲವೊ ಎಂಬ ಸಣ್ಣ ಅಳುಕಿತ್ತು, ನಾವು ಹೋಗಿದ್ದರಿಂದ ಅವರಿಗೆ ತೊಂದರೆಯಾಗಬಾರದು ಎಂಬ ಕಾಳಜಿಯಿಂದಷ್ಟೆ. ಆದರೆ ಹೋದ ಒಂದು ದಿನಕ್ಕೆ ತಾತನದು ನಮ್ಮದು ಎಷ್ಟೋ ವರ್ಷದ ಸಂಬಂಧ ಎನಿಸುವಷ್ಟು ಹತ್ತಿರವಾದೆವು.

ಇದು ಬಹುಶಃ ಸಮಾಜದ ಬದಲಾಣೆಯ ಬಗೆಗಿರುವ ಸಮಾನ ನಂಟಿರಬೇಕು ಅನಿಸಿತ್ತು. ನನಗೊ ಬಹಳಷ್ಟು ಕುತೂಹಲದ ಪ್ರಶ್ನೆಗಳಿದ್ದವು. ಆ ಕಾಲದಲ್ಲಿ ಸ್ವಾತಂತ್ರ್ಯ ಚಳವಳಿಗಳು ಹೇಗೆ ನಡೆಯುತ್ತಿತ್ತು? ಅದರಲ್ಲಿ ತಾತನ ಪಾತ್ರ ಏನಾಗಿತ್ತು ಎಂಬ ಹತ್ತು ಹಲವು ಪ್ರಶ್ನೆಗಳನ್ನು ಕೇಳುತ್ತಿದೆ? ಎಲ್ಲದ್ದಕ್ಕೂ ಉತ್ಸಾಹದಿಂದ ಉತ್ತರಿಸುತ್ತಿದ್ದರು. ಅವರ ಮದುವೆಯ ಬಗ್ಗೆ, ಪ್ರೀತಿಯ ಬಗ್ಗೆ ಹೀಗೆ ಮಾತನಾಡುತ್ತಿದ್ದರೆ ನಮಗೆ ಸಮಯ ಹೋಗುತ್ತಿದ್ದದೆ ಗೊತ್ತಾಗುತ್ತಿರಲಿಲ್ಲ. ಒಂದು ಸಲ ನಾನು, “ತಾತ ನೀವು ಅಜ್ಜಿನ, ಮಕ್ಕಳನ ನೋಡೋಕೆ ವರ್ಷವಾದರೂ ಮನೆಗೆ ಬರುತ್ತಿರಲಿಲ್ಲವಂತೆ, ಪಾಪ ಅಜ್ಜಿ ಎಷ್ಟು ಕಷ್ಟ ಪಟ್ಟಿರಬೇಕು” ಎಂದೆ. ಸಡನ್ನಾಗಿ ತಾತ ನನ್ನ ಕಡೆ ನೋಡಿದರು, ನನಗೆ ಕೇಳಬಾರದ ಪ್ರಶ್ನೆ ಏನಾದರು ಕೇಳಿದೆನಾ ಅಂತ ಒಂದು ಕ್ಷಣ ಗಲಿಬಿಲಿಗೊಂಡೆ, ಅದಕ್ಕೆ ತಾತ ಶಾಂತವಾಗಿ “ಹೌದಮ್ಮ ಅವಳಿಗೆ ನನ್ನ ಮದುವೆ ಮಾಡಿಕೊಂಡು ಏನು ಸಿಕ್ಕಿಲ್ಲ, ಕಷ್ಟಗಳ ಹೊರತು” ಎಂದು ಎರಡು ನಿಮಿಷ ಮೌನಕ್ಕೆ ಜಾರಿದರು. ಅಷ್ಟು ಎತ್ತರದ ವ್ಯಕ್ತಿ ನನ್ನಂತ ಚಿಕ್ಕವಳ ಮುಂದೆ ತನ್ನನ್ನು ತಾನೇ ಈ ರೀತಿ ಆತ್ಮಾವಲೋಕನ ಮಾಡಿಕೊಳ್ಳುವುದು ಎಂದರೆ ಅದು ಸಲಭದ ಮಾತಲ್ಲ. ಅದೇ ನಾವೆಲ್ಲರೂ ಅವರಿಂದ ಅಳವಡಿಸಿಕೊಳ್ಳಬೇಕಾದ ನಡೆ ಎನಿಸಿತ್ತು.

ನಮಗೇ ಕೆಲವು ಸಲ ತಾತನನ್ನ ಜಾಸ್ತಿ ಆಯಾಸ ಮಾಡಿಸಿದೆವಾ ಅನ್ನಿಸುತ್ತಿತ್ತು. ಆದರೆ ತಾತ ಮಾತ್ರ ವಿಷಯ ತೆಗೆದಷ್ಟು ಜ್ಞಾನದ ಭಂಡಾರವೆ ಬಿಚ್ಚಿಕೊಳ್ಳುತ್ತಿತ್ತು. ಈಗ ನೆನಸಿಕೊಂಡರೆ ಬಹುರ್ಶ ಆ ಲಾಕ್ ಡೌನ್ ಸಮಯದಲ್ಲಿ ಹೊರಗೆ ಹೋಗಲು ಆಗದೆ, ಚಳವಳಿಗಳಲ್ಲಿ, ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಹಾಗದೆ ಅವರು ಚಡಪಡಿಸುತ್ತಿದ್ದರು ಎನಿಸುತ್ತದೆ. ಆಗ ನಡೆದ ಕೆಲವು ಘಟನೆಗಳನ್ನು ವಿಡಿಯೊ ಮಾಡಿ ಕೆಲ ಸಮಾನ ಮನಸ್ಕ ಸ್ನೇಹಿತರಿಗೆ ಕಳಿಸುತ್ತಿದ್ದೆವು. ಓದುಗರ ಮೆಚ್ಚುಗೆಯ ಮಾತುಗಳು ತಾತನಿಗೆ ಖುಷಿ ತರುತ್ತಿತು. ನನ್ನ ಕುಮಾರ್ ಬಗ್ಗೆಯೂ ಕೇಳಿ ಬೇಷ್ ಎಂದರು. ಜೊತೆಗೆ ಇದಷ್ಟು ದಿನ ಅವರ ಮಗುವಿನಂತ ಮನಸ್ಸಿನಿಂದ ತಾತನ ಹತ್ತಿರ ಏನು ಪ್ರಶ್ನೆ ಬೇಕಾದರೂ ಕೇಳಬಹುದು ಎಂಬ ಸಲುಗೆಯೂ ಬೆಳೆಯಿತು.

ಇನ್ನೊಂದು ಸಲ ನಾನು ತಾತನಿಗೆ, ನೀವು ಎಂದಾದರೂ ಮಾಂಸ ತಿಂದಿದ್ದೀರಾ ಅಂತ ಕೇಳಿದೆ? “ಒಮ್ಮೆ ನನ್ನ ಯೂತ್ ಲೀಡರ್ ಆಗಿ ಕಾರವಾರಕ್ಕೆ ಕಳಿಸಿದ್ದರು. ಆಗ ನಾವು ಹಲವು ಗೆಳೆಯರು ಸೇರಿ ಮನೆಮನೆಗೆ ಪ್ರಚಾರ ಮಾಡಿ ಬಂದಾಗ ತುಂಬಾ ಹಸಿವಾಗಿತ್ತು. ಬಂದ ಎಲ್ಲಾ ಕಾರ್ಯಕರ್ತರಿಗೆ ಒಂದೇ ಕಡೆ ಊಟದ ವ್ಯವಸ್ಥೆ ಮಾಡಿದ್ದರು. ನಾನು ಅವರ ಪಂಕ್ತಿಯಲ್ಲಿ ಕುಳಿತೆ. ಊಟಕ್ಕೊ ಬಡಿಸಿದರು ನಾನು ಊಟನು ಮಾಡಿದೆ. ಅಲ್ಲಿ ನಮಗೆ ಮಾಂಸಾಹಾರ ಬಡಿಸಿದ್ದರು. ನಾನು ನಾಲ್ಕು- ಐದು ತುತ್ತು ತಿಂದಿದ್ದೆ. ಆಮೇಲೆ ಸ್ನೇಹಿತರು ನೋಡಿ ನಿಮಗೆ ಇಲ್ಲಿ ಒಳಗೆ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಅದು ಮಾಂಸಹಾರಿಗಳಿಗೆ ಎಂದು ನನ್ನ ಕರೆದುಕೊಂಡು ಒಳ ಹೋದರು” ಅಂತ ಹೇಳಿದರು. ಅಷ್ಟರಲ್ಲಿ ನಾನು ಗೊತ್ತಿಲ್ಲದೆ ಐದು ತುತ್ತು ತಿಂದಿದ್ದೆ. ಆ ರುಚಿ ನನಗೆ ಅಭ್ಯಾಸವಿಲ್ಲದಿದ್ದರಿಂದ ನನಗೇನೂ ಅನಿಲಿಲ್ಲ. ಅವರವರ ಆಹಾರ ಅವರಿಗೆ ಹೆಚ್ಚು, ಎಲ್ಲರ ಆಹಾರವನ್ನು ಗೌರವಿಸಬೇಕು. ಯಾರ ಆಹಾರವೂ ಇಲ್ಲಿ ಮೇಲೂ ಇಲ್ಲ ಕೀಳು ಇಲ್ಲ ಅಂದರು ಸಾಮಾಧಾನದಿಂದ. ಇಷ್ಟು ಸರಳವಾಗಿ ಉತ್ತರಿಸುತ್ತಾರೆಂದು ನಾನು ನಿರೀಕ್ಷೆ ಮಾಡಿರಲಿಲ್ಲ. ಮನಸ್ಸಿನಲ್ಲೆ ಹ್ಯಾಟ್ಸ್‌ಆಫ್‌ ತಾತ ಎಂದು ಅವರ ಕೈಕುಲುಕಿದೆ.

ಇಲ್ಲಿ ಮತ್ತೊಂದು ವಿಷಯ ಪ್ರಸ್ತಾಪ ಮಾಡಲೇಬೇಕು. ಅವರ ಹೋರಾಟದ ಬೆಳವಣಿಗೆಗೆ ಅವರ ಬಾಳ ಸಂಗಾತಿಯಾದ ಲಲಿತಮ್ಮನವರ ಬೆಂಬಲವು ಬಹಳ ಮುಖ್ಯ. ಮನೆಯ ಮಕ್ಕಳ ಎಲ್ಲಾ ಜವಾಬ್ದಾರಿಯನ್ನ ಲಲಿತಮ್ಮನವರು ಏಕಾಂಗಿಯಾಗಿಯೇ ನಿರ್ವಹಿಸಿದ್ದಾರೆ. ಈ ಹಿಂದೆ ಅವರೊಂದಿಗೆ ಸಹ ಆಸ್ಪತ್ರೆಯಲ್ಲಿ ಎರಡು ದಿನ ಇದ್ದು ಅವರ ಜೀವನದ ಸಂಗತಿಗಳನ್ನ ಕೇಳಿದ್ದೇನೆ. ಅವರು ಕೂಡಾ ತಾತನ ಬಗ್ಗೆ ಒಂದು ಸಣ್ಣ ಅಸಮಾಧಾನವನ್ನು ವ್ಯಕ್ತಪಡಿಸಲಿಲ್ಲ. ಹೀಗೆ ಸಾರ್ಥಕ ಜೀವನ ಇಬ್ಬರದು. ಹೋಗಿ ಬನ್ನಿ ತಾತ. ಧಣಿವರಿಯದ ನಿಮ್ಮ ಹೋರಾಟದಿಂದ ವಿಶ್ರಾಂತಿ ಪಡೆಯುತ್ತಾ, ನಮ್ಮಂಥವರನ್ನ ಸದಾ ಕಾಲ ಎಚ್ಚರಿಸುತ್ತಿರಿ.

  • ಗೌರಿ, (ಕರ್ನಾಟಕ ಜನಶಕ್ತಿಯ ಗೌರವಾಧ್ಯಕ್ಷರು. ಮಹಿಳಾ ಹೋರಾಟಗಾರರು)

ಇದನ್ನೂ ಓದಿ: ‘ಏನಪ್ಪ, ದೇವರು ಇದಾನೆ ಅನಿಸುತ್ತಾ, ಇಲ್ಲಾ ಅನಿಸುತ್ತಾ?’ ದೊರೆಸ್ವಾಮಿಯವರ ಜೊತೆಗಿನ ನೆನಪು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...