Homeಮುಖಪುಟತಾತಾ, ನೀವು ಎಂದಾದರೂ ಮಾಂಸ ತಿಂದಿದ್ದೀರಾ ಎಂಬ ಪ್ರಶ್ನೆಗೆ ದೊರೆಸ್ವಾಮಿಯವರ ಉತ್ತರವೇನು ಗೊತ್ತೆ?

ತಾತಾ, ನೀವು ಎಂದಾದರೂ ಮಾಂಸ ತಿಂದಿದ್ದೀರಾ ಎಂಬ ಪ್ರಶ್ನೆಗೆ ದೊರೆಸ್ವಾಮಿಯವರ ಉತ್ತರವೇನು ಗೊತ್ತೆ?

ಅಷ್ಟು ಎತ್ತರದ ವ್ಯಕ್ತಿ, ನನ್ನಂತ ಚಿಕ್ಕವಳ ಮುಂದೆ ತನ್ನನ್ನು ತಾನೇ ಈ ರೀತಿ ಆತ್ಮಾವಲೋಕನ ಮಾಡಿಕೊಳ್ಳುವುದು ಎಂದರೆ ಅದು ಸಲಭದ ಮಾತಲ್ಲ..

- Advertisement -
- Advertisement -

ಹೋರಾಟದ ಸ್ವೂರ್ತಿ, ಕರ್ನಾಟಕದ ಎಲ್ಲಾ ಚಳವಳಿಗಳ ಬೆನ್ನೆಲುಬು ಆಗಿದ್ದ ನಮ್ಮೆಲ್ಲರ ಚೇತನ ದೊರೆಸ್ವಾಮಿ ತಾತಾ ಇನ್ನಿಲ್ಲ ಎಂಬುದನ್ನ ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಅವರೊಂದಿಗಿನ ನನ್ನ ಒಡನಾಟ, 20 ವರ್ಷದು ಎಂದು ಹೇಳಬಹುದಾದರೂ ಅದು ವೇದಿಕೆಯ ಮೇಲೆ, ಕಾರ್ಯಕ್ರಮಗಳಲ್ಲಿ ಬಿಟ್ಟರೆ, ಅವರನ್ನ ಇನ್ನೂ ಹತ್ತಿರದಿಂದ ನೋಡುವ ಅವಕಾಶ ದೊರೆಕಿದ್ದು 2020ರ ಮೊದಲ ಕರೋನಾ ಲಾಕ್ ಡೌನ್ ಸಮಯದಲ್ಲಿ.

ಆಗ ತಾತನನ್ನು ನೋಡಿಕೊಳ್ಳಲು ಯಾರು ಸಿಗದ ಸಂದರ್ಭ. ನರ್ಸ್ ಒಬ್ಬರನ್ನು ನೇಮಿಸುವ ಚರ್ಚೆ ಬಂದಾಗ ಅದಕ್ಕೆ ತಾತಾ ಒಪ್ಪುತ್ತಿರಲಿಲ್ಲ. ಅವರೊಂದಿಗೆ ರಾಜಕೀಯ ಚರ್ಚೆ ಮಾಡಬೇಕಾದ್ದರಿಂದ ಸಾಮಾಜಿಕ ಕಾರ್ಯಕರ್ತರು ಅವರನ್ನು ನೋಡಿಕೊಂಡರೆ ಅವರಿಗೆ ಸಮಾಧಾನ. ಕೊನೆಗೆ ನಾನು ನನ್ನ ಬಾಳ ಸಂಗಾತಿ ಕುಮಾರ್ ಹೊರಡಲು ಸಿದ್ದರಾದೆವು. ಮೊದಲು ಹೇಗೆ ನೋಡಿಕೊಳ್ಳಬೇಕು ಅವರ ಪದ್ದತಿಗಳು ಎಲ್ಲಾ ಭಿನ್ನವಾಗಿ ಇರುತ್ತದೆ ಅದಕ್ಕೆ ನಾವು ಸರಿ ಹೊಂದುತ್ತೇವೊ ಇಲ್ಲವೊ ಎಂಬ ಸಣ್ಣ ಅಳುಕಿತ್ತು, ನಾವು ಹೋಗಿದ್ದರಿಂದ ಅವರಿಗೆ ತೊಂದರೆಯಾಗಬಾರದು ಎಂಬ ಕಾಳಜಿಯಿಂದಷ್ಟೆ. ಆದರೆ ಹೋದ ಒಂದು ದಿನಕ್ಕೆ ತಾತನದು ನಮ್ಮದು ಎಷ್ಟೋ ವರ್ಷದ ಸಂಬಂಧ ಎನಿಸುವಷ್ಟು ಹತ್ತಿರವಾದೆವು.

ಇದು ಬಹುಶಃ ಸಮಾಜದ ಬದಲಾಣೆಯ ಬಗೆಗಿರುವ ಸಮಾನ ನಂಟಿರಬೇಕು ಅನಿಸಿತ್ತು. ನನಗೊ ಬಹಳಷ್ಟು ಕುತೂಹಲದ ಪ್ರಶ್ನೆಗಳಿದ್ದವು. ಆ ಕಾಲದಲ್ಲಿ ಸ್ವಾತಂತ್ರ್ಯ ಚಳವಳಿಗಳು ಹೇಗೆ ನಡೆಯುತ್ತಿತ್ತು? ಅದರಲ್ಲಿ ತಾತನ ಪಾತ್ರ ಏನಾಗಿತ್ತು ಎಂಬ ಹತ್ತು ಹಲವು ಪ್ರಶ್ನೆಗಳನ್ನು ಕೇಳುತ್ತಿದೆ? ಎಲ್ಲದ್ದಕ್ಕೂ ಉತ್ಸಾಹದಿಂದ ಉತ್ತರಿಸುತ್ತಿದ್ದರು. ಅವರ ಮದುವೆಯ ಬಗ್ಗೆ, ಪ್ರೀತಿಯ ಬಗ್ಗೆ ಹೀಗೆ ಮಾತನಾಡುತ್ತಿದ್ದರೆ ನಮಗೆ ಸಮಯ ಹೋಗುತ್ತಿದ್ದದೆ ಗೊತ್ತಾಗುತ್ತಿರಲಿಲ್ಲ. ಒಂದು ಸಲ ನಾನು, “ತಾತ ನೀವು ಅಜ್ಜಿನ, ಮಕ್ಕಳನ ನೋಡೋಕೆ ವರ್ಷವಾದರೂ ಮನೆಗೆ ಬರುತ್ತಿರಲಿಲ್ಲವಂತೆ, ಪಾಪ ಅಜ್ಜಿ ಎಷ್ಟು ಕಷ್ಟ ಪಟ್ಟಿರಬೇಕು” ಎಂದೆ. ಸಡನ್ನಾಗಿ ತಾತ ನನ್ನ ಕಡೆ ನೋಡಿದರು, ನನಗೆ ಕೇಳಬಾರದ ಪ್ರಶ್ನೆ ಏನಾದರು ಕೇಳಿದೆನಾ ಅಂತ ಒಂದು ಕ್ಷಣ ಗಲಿಬಿಲಿಗೊಂಡೆ, ಅದಕ್ಕೆ ತಾತ ಶಾಂತವಾಗಿ “ಹೌದಮ್ಮ ಅವಳಿಗೆ ನನ್ನ ಮದುವೆ ಮಾಡಿಕೊಂಡು ಏನು ಸಿಕ್ಕಿಲ್ಲ, ಕಷ್ಟಗಳ ಹೊರತು” ಎಂದು ಎರಡು ನಿಮಿಷ ಮೌನಕ್ಕೆ ಜಾರಿದರು. ಅಷ್ಟು ಎತ್ತರದ ವ್ಯಕ್ತಿ ನನ್ನಂತ ಚಿಕ್ಕವಳ ಮುಂದೆ ತನ್ನನ್ನು ತಾನೇ ಈ ರೀತಿ ಆತ್ಮಾವಲೋಕನ ಮಾಡಿಕೊಳ್ಳುವುದು ಎಂದರೆ ಅದು ಸಲಭದ ಮಾತಲ್ಲ. ಅದೇ ನಾವೆಲ್ಲರೂ ಅವರಿಂದ ಅಳವಡಿಸಿಕೊಳ್ಳಬೇಕಾದ ನಡೆ ಎನಿಸಿತ್ತು.

ನಮಗೇ ಕೆಲವು ಸಲ ತಾತನನ್ನ ಜಾಸ್ತಿ ಆಯಾಸ ಮಾಡಿಸಿದೆವಾ ಅನ್ನಿಸುತ್ತಿತ್ತು. ಆದರೆ ತಾತ ಮಾತ್ರ ವಿಷಯ ತೆಗೆದಷ್ಟು ಜ್ಞಾನದ ಭಂಡಾರವೆ ಬಿಚ್ಚಿಕೊಳ್ಳುತ್ತಿತ್ತು. ಈಗ ನೆನಸಿಕೊಂಡರೆ ಬಹುರ್ಶ ಆ ಲಾಕ್ ಡೌನ್ ಸಮಯದಲ್ಲಿ ಹೊರಗೆ ಹೋಗಲು ಆಗದೆ, ಚಳವಳಿಗಳಲ್ಲಿ, ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಹಾಗದೆ ಅವರು ಚಡಪಡಿಸುತ್ತಿದ್ದರು ಎನಿಸುತ್ತದೆ. ಆಗ ನಡೆದ ಕೆಲವು ಘಟನೆಗಳನ್ನು ವಿಡಿಯೊ ಮಾಡಿ ಕೆಲ ಸಮಾನ ಮನಸ್ಕ ಸ್ನೇಹಿತರಿಗೆ ಕಳಿಸುತ್ತಿದ್ದೆವು. ಓದುಗರ ಮೆಚ್ಚುಗೆಯ ಮಾತುಗಳು ತಾತನಿಗೆ ಖುಷಿ ತರುತ್ತಿತು. ನನ್ನ ಕುಮಾರ್ ಬಗ್ಗೆಯೂ ಕೇಳಿ ಬೇಷ್ ಎಂದರು. ಜೊತೆಗೆ ಇದಷ್ಟು ದಿನ ಅವರ ಮಗುವಿನಂತ ಮನಸ್ಸಿನಿಂದ ತಾತನ ಹತ್ತಿರ ಏನು ಪ್ರಶ್ನೆ ಬೇಕಾದರೂ ಕೇಳಬಹುದು ಎಂಬ ಸಲುಗೆಯೂ ಬೆಳೆಯಿತು.

ಇನ್ನೊಂದು ಸಲ ನಾನು ತಾತನಿಗೆ, ನೀವು ಎಂದಾದರೂ ಮಾಂಸ ತಿಂದಿದ್ದೀರಾ ಅಂತ ಕೇಳಿದೆ? “ಒಮ್ಮೆ ನನ್ನ ಯೂತ್ ಲೀಡರ್ ಆಗಿ ಕಾರವಾರಕ್ಕೆ ಕಳಿಸಿದ್ದರು. ಆಗ ನಾವು ಹಲವು ಗೆಳೆಯರು ಸೇರಿ ಮನೆಮನೆಗೆ ಪ್ರಚಾರ ಮಾಡಿ ಬಂದಾಗ ತುಂಬಾ ಹಸಿವಾಗಿತ್ತು. ಬಂದ ಎಲ್ಲಾ ಕಾರ್ಯಕರ್ತರಿಗೆ ಒಂದೇ ಕಡೆ ಊಟದ ವ್ಯವಸ್ಥೆ ಮಾಡಿದ್ದರು. ನಾನು ಅವರ ಪಂಕ್ತಿಯಲ್ಲಿ ಕುಳಿತೆ. ಊಟಕ್ಕೊ ಬಡಿಸಿದರು ನಾನು ಊಟನು ಮಾಡಿದೆ. ಅಲ್ಲಿ ನಮಗೆ ಮಾಂಸಾಹಾರ ಬಡಿಸಿದ್ದರು. ನಾನು ನಾಲ್ಕು- ಐದು ತುತ್ತು ತಿಂದಿದ್ದೆ. ಆಮೇಲೆ ಸ್ನೇಹಿತರು ನೋಡಿ ನಿಮಗೆ ಇಲ್ಲಿ ಒಳಗೆ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಅದು ಮಾಂಸಹಾರಿಗಳಿಗೆ ಎಂದು ನನ್ನ ಕರೆದುಕೊಂಡು ಒಳ ಹೋದರು” ಅಂತ ಹೇಳಿದರು. ಅಷ್ಟರಲ್ಲಿ ನಾನು ಗೊತ್ತಿಲ್ಲದೆ ಐದು ತುತ್ತು ತಿಂದಿದ್ದೆ. ಆ ರುಚಿ ನನಗೆ ಅಭ್ಯಾಸವಿಲ್ಲದಿದ್ದರಿಂದ ನನಗೇನೂ ಅನಿಲಿಲ್ಲ. ಅವರವರ ಆಹಾರ ಅವರಿಗೆ ಹೆಚ್ಚು, ಎಲ್ಲರ ಆಹಾರವನ್ನು ಗೌರವಿಸಬೇಕು. ಯಾರ ಆಹಾರವೂ ಇಲ್ಲಿ ಮೇಲೂ ಇಲ್ಲ ಕೀಳು ಇಲ್ಲ ಅಂದರು ಸಾಮಾಧಾನದಿಂದ. ಇಷ್ಟು ಸರಳವಾಗಿ ಉತ್ತರಿಸುತ್ತಾರೆಂದು ನಾನು ನಿರೀಕ್ಷೆ ಮಾಡಿರಲಿಲ್ಲ. ಮನಸ್ಸಿನಲ್ಲೆ ಹ್ಯಾಟ್ಸ್‌ಆಫ್‌ ತಾತ ಎಂದು ಅವರ ಕೈಕುಲುಕಿದೆ.

ಇಲ್ಲಿ ಮತ್ತೊಂದು ವಿಷಯ ಪ್ರಸ್ತಾಪ ಮಾಡಲೇಬೇಕು. ಅವರ ಹೋರಾಟದ ಬೆಳವಣಿಗೆಗೆ ಅವರ ಬಾಳ ಸಂಗಾತಿಯಾದ ಲಲಿತಮ್ಮನವರ ಬೆಂಬಲವು ಬಹಳ ಮುಖ್ಯ. ಮನೆಯ ಮಕ್ಕಳ ಎಲ್ಲಾ ಜವಾಬ್ದಾರಿಯನ್ನ ಲಲಿತಮ್ಮನವರು ಏಕಾಂಗಿಯಾಗಿಯೇ ನಿರ್ವಹಿಸಿದ್ದಾರೆ. ಈ ಹಿಂದೆ ಅವರೊಂದಿಗೆ ಸಹ ಆಸ್ಪತ್ರೆಯಲ್ಲಿ ಎರಡು ದಿನ ಇದ್ದು ಅವರ ಜೀವನದ ಸಂಗತಿಗಳನ್ನ ಕೇಳಿದ್ದೇನೆ. ಅವರು ಕೂಡಾ ತಾತನ ಬಗ್ಗೆ ಒಂದು ಸಣ್ಣ ಅಸಮಾಧಾನವನ್ನು ವ್ಯಕ್ತಪಡಿಸಲಿಲ್ಲ. ಹೀಗೆ ಸಾರ್ಥಕ ಜೀವನ ಇಬ್ಬರದು. ಹೋಗಿ ಬನ್ನಿ ತಾತ. ಧಣಿವರಿಯದ ನಿಮ್ಮ ಹೋರಾಟದಿಂದ ವಿಶ್ರಾಂತಿ ಪಡೆಯುತ್ತಾ, ನಮ್ಮಂಥವರನ್ನ ಸದಾ ಕಾಲ ಎಚ್ಚರಿಸುತ್ತಿರಿ.

  • ಗೌರಿ, (ಕರ್ನಾಟಕ ಜನಶಕ್ತಿಯ ಗೌರವಾಧ್ಯಕ್ಷರು. ಮಹಿಳಾ ಹೋರಾಟಗಾರರು)

ಇದನ್ನೂ ಓದಿ: ‘ಏನಪ್ಪ, ದೇವರು ಇದಾನೆ ಅನಿಸುತ್ತಾ, ಇಲ್ಲಾ ಅನಿಸುತ್ತಾ?’ ದೊರೆಸ್ವಾಮಿಯವರ ಜೊತೆಗಿನ ನೆನಪು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....