Homeಮುಖಪುಟತಾತಾ, ನೀವು ಎಂದಾದರೂ ಮಾಂಸ ತಿಂದಿದ್ದೀರಾ ಎಂಬ ಪ್ರಶ್ನೆಗೆ ದೊರೆಸ್ವಾಮಿಯವರ ಉತ್ತರವೇನು ಗೊತ್ತೆ?

ತಾತಾ, ನೀವು ಎಂದಾದರೂ ಮಾಂಸ ತಿಂದಿದ್ದೀರಾ ಎಂಬ ಪ್ರಶ್ನೆಗೆ ದೊರೆಸ್ವಾಮಿಯವರ ಉತ್ತರವೇನು ಗೊತ್ತೆ?

ಅಷ್ಟು ಎತ್ತರದ ವ್ಯಕ್ತಿ, ನನ್ನಂತ ಚಿಕ್ಕವಳ ಮುಂದೆ ತನ್ನನ್ನು ತಾನೇ ಈ ರೀತಿ ಆತ್ಮಾವಲೋಕನ ಮಾಡಿಕೊಳ್ಳುವುದು ಎಂದರೆ ಅದು ಸಲಭದ ಮಾತಲ್ಲ..

- Advertisement -
- Advertisement -

ಹೋರಾಟದ ಸ್ವೂರ್ತಿ, ಕರ್ನಾಟಕದ ಎಲ್ಲಾ ಚಳವಳಿಗಳ ಬೆನ್ನೆಲುಬು ಆಗಿದ್ದ ನಮ್ಮೆಲ್ಲರ ಚೇತನ ದೊರೆಸ್ವಾಮಿ ತಾತಾ ಇನ್ನಿಲ್ಲ ಎಂಬುದನ್ನ ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಅವರೊಂದಿಗಿನ ನನ್ನ ಒಡನಾಟ, 20 ವರ್ಷದು ಎಂದು ಹೇಳಬಹುದಾದರೂ ಅದು ವೇದಿಕೆಯ ಮೇಲೆ, ಕಾರ್ಯಕ್ರಮಗಳಲ್ಲಿ ಬಿಟ್ಟರೆ, ಅವರನ್ನ ಇನ್ನೂ ಹತ್ತಿರದಿಂದ ನೋಡುವ ಅವಕಾಶ ದೊರೆಕಿದ್ದು 2020ರ ಮೊದಲ ಕರೋನಾ ಲಾಕ್ ಡೌನ್ ಸಮಯದಲ್ಲಿ.

ಆಗ ತಾತನನ್ನು ನೋಡಿಕೊಳ್ಳಲು ಯಾರು ಸಿಗದ ಸಂದರ್ಭ. ನರ್ಸ್ ಒಬ್ಬರನ್ನು ನೇಮಿಸುವ ಚರ್ಚೆ ಬಂದಾಗ ಅದಕ್ಕೆ ತಾತಾ ಒಪ್ಪುತ್ತಿರಲಿಲ್ಲ. ಅವರೊಂದಿಗೆ ರಾಜಕೀಯ ಚರ್ಚೆ ಮಾಡಬೇಕಾದ್ದರಿಂದ ಸಾಮಾಜಿಕ ಕಾರ್ಯಕರ್ತರು ಅವರನ್ನು ನೋಡಿಕೊಂಡರೆ ಅವರಿಗೆ ಸಮಾಧಾನ. ಕೊನೆಗೆ ನಾನು ನನ್ನ ಬಾಳ ಸಂಗಾತಿ ಕುಮಾರ್ ಹೊರಡಲು ಸಿದ್ದರಾದೆವು. ಮೊದಲು ಹೇಗೆ ನೋಡಿಕೊಳ್ಳಬೇಕು ಅವರ ಪದ್ದತಿಗಳು ಎಲ್ಲಾ ಭಿನ್ನವಾಗಿ ಇರುತ್ತದೆ ಅದಕ್ಕೆ ನಾವು ಸರಿ ಹೊಂದುತ್ತೇವೊ ಇಲ್ಲವೊ ಎಂಬ ಸಣ್ಣ ಅಳುಕಿತ್ತು, ನಾವು ಹೋಗಿದ್ದರಿಂದ ಅವರಿಗೆ ತೊಂದರೆಯಾಗಬಾರದು ಎಂಬ ಕಾಳಜಿಯಿಂದಷ್ಟೆ. ಆದರೆ ಹೋದ ಒಂದು ದಿನಕ್ಕೆ ತಾತನದು ನಮ್ಮದು ಎಷ್ಟೋ ವರ್ಷದ ಸಂಬಂಧ ಎನಿಸುವಷ್ಟು ಹತ್ತಿರವಾದೆವು.

ಇದು ಬಹುಶಃ ಸಮಾಜದ ಬದಲಾಣೆಯ ಬಗೆಗಿರುವ ಸಮಾನ ನಂಟಿರಬೇಕು ಅನಿಸಿತ್ತು. ನನಗೊ ಬಹಳಷ್ಟು ಕುತೂಹಲದ ಪ್ರಶ್ನೆಗಳಿದ್ದವು. ಆ ಕಾಲದಲ್ಲಿ ಸ್ವಾತಂತ್ರ್ಯ ಚಳವಳಿಗಳು ಹೇಗೆ ನಡೆಯುತ್ತಿತ್ತು? ಅದರಲ್ಲಿ ತಾತನ ಪಾತ್ರ ಏನಾಗಿತ್ತು ಎಂಬ ಹತ್ತು ಹಲವು ಪ್ರಶ್ನೆಗಳನ್ನು ಕೇಳುತ್ತಿದೆ? ಎಲ್ಲದ್ದಕ್ಕೂ ಉತ್ಸಾಹದಿಂದ ಉತ್ತರಿಸುತ್ತಿದ್ದರು. ಅವರ ಮದುವೆಯ ಬಗ್ಗೆ, ಪ್ರೀತಿಯ ಬಗ್ಗೆ ಹೀಗೆ ಮಾತನಾಡುತ್ತಿದ್ದರೆ ನಮಗೆ ಸಮಯ ಹೋಗುತ್ತಿದ್ದದೆ ಗೊತ್ತಾಗುತ್ತಿರಲಿಲ್ಲ. ಒಂದು ಸಲ ನಾನು, “ತಾತ ನೀವು ಅಜ್ಜಿನ, ಮಕ್ಕಳನ ನೋಡೋಕೆ ವರ್ಷವಾದರೂ ಮನೆಗೆ ಬರುತ್ತಿರಲಿಲ್ಲವಂತೆ, ಪಾಪ ಅಜ್ಜಿ ಎಷ್ಟು ಕಷ್ಟ ಪಟ್ಟಿರಬೇಕು” ಎಂದೆ. ಸಡನ್ನಾಗಿ ತಾತ ನನ್ನ ಕಡೆ ನೋಡಿದರು, ನನಗೆ ಕೇಳಬಾರದ ಪ್ರಶ್ನೆ ಏನಾದರು ಕೇಳಿದೆನಾ ಅಂತ ಒಂದು ಕ್ಷಣ ಗಲಿಬಿಲಿಗೊಂಡೆ, ಅದಕ್ಕೆ ತಾತ ಶಾಂತವಾಗಿ “ಹೌದಮ್ಮ ಅವಳಿಗೆ ನನ್ನ ಮದುವೆ ಮಾಡಿಕೊಂಡು ಏನು ಸಿಕ್ಕಿಲ್ಲ, ಕಷ್ಟಗಳ ಹೊರತು” ಎಂದು ಎರಡು ನಿಮಿಷ ಮೌನಕ್ಕೆ ಜಾರಿದರು. ಅಷ್ಟು ಎತ್ತರದ ವ್ಯಕ್ತಿ ನನ್ನಂತ ಚಿಕ್ಕವಳ ಮುಂದೆ ತನ್ನನ್ನು ತಾನೇ ಈ ರೀತಿ ಆತ್ಮಾವಲೋಕನ ಮಾಡಿಕೊಳ್ಳುವುದು ಎಂದರೆ ಅದು ಸಲಭದ ಮಾತಲ್ಲ. ಅದೇ ನಾವೆಲ್ಲರೂ ಅವರಿಂದ ಅಳವಡಿಸಿಕೊಳ್ಳಬೇಕಾದ ನಡೆ ಎನಿಸಿತ್ತು.

ನಮಗೇ ಕೆಲವು ಸಲ ತಾತನನ್ನ ಜಾಸ್ತಿ ಆಯಾಸ ಮಾಡಿಸಿದೆವಾ ಅನ್ನಿಸುತ್ತಿತ್ತು. ಆದರೆ ತಾತ ಮಾತ್ರ ವಿಷಯ ತೆಗೆದಷ್ಟು ಜ್ಞಾನದ ಭಂಡಾರವೆ ಬಿಚ್ಚಿಕೊಳ್ಳುತ್ತಿತ್ತು. ಈಗ ನೆನಸಿಕೊಂಡರೆ ಬಹುರ್ಶ ಆ ಲಾಕ್ ಡೌನ್ ಸಮಯದಲ್ಲಿ ಹೊರಗೆ ಹೋಗಲು ಆಗದೆ, ಚಳವಳಿಗಳಲ್ಲಿ, ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಹಾಗದೆ ಅವರು ಚಡಪಡಿಸುತ್ತಿದ್ದರು ಎನಿಸುತ್ತದೆ. ಆಗ ನಡೆದ ಕೆಲವು ಘಟನೆಗಳನ್ನು ವಿಡಿಯೊ ಮಾಡಿ ಕೆಲ ಸಮಾನ ಮನಸ್ಕ ಸ್ನೇಹಿತರಿಗೆ ಕಳಿಸುತ್ತಿದ್ದೆವು. ಓದುಗರ ಮೆಚ್ಚುಗೆಯ ಮಾತುಗಳು ತಾತನಿಗೆ ಖುಷಿ ತರುತ್ತಿತು. ನನ್ನ ಕುಮಾರ್ ಬಗ್ಗೆಯೂ ಕೇಳಿ ಬೇಷ್ ಎಂದರು. ಜೊತೆಗೆ ಇದಷ್ಟು ದಿನ ಅವರ ಮಗುವಿನಂತ ಮನಸ್ಸಿನಿಂದ ತಾತನ ಹತ್ತಿರ ಏನು ಪ್ರಶ್ನೆ ಬೇಕಾದರೂ ಕೇಳಬಹುದು ಎಂಬ ಸಲುಗೆಯೂ ಬೆಳೆಯಿತು.

ಇನ್ನೊಂದು ಸಲ ನಾನು ತಾತನಿಗೆ, ನೀವು ಎಂದಾದರೂ ಮಾಂಸ ತಿಂದಿದ್ದೀರಾ ಅಂತ ಕೇಳಿದೆ? “ಒಮ್ಮೆ ನನ್ನ ಯೂತ್ ಲೀಡರ್ ಆಗಿ ಕಾರವಾರಕ್ಕೆ ಕಳಿಸಿದ್ದರು. ಆಗ ನಾವು ಹಲವು ಗೆಳೆಯರು ಸೇರಿ ಮನೆಮನೆಗೆ ಪ್ರಚಾರ ಮಾಡಿ ಬಂದಾಗ ತುಂಬಾ ಹಸಿವಾಗಿತ್ತು. ಬಂದ ಎಲ್ಲಾ ಕಾರ್ಯಕರ್ತರಿಗೆ ಒಂದೇ ಕಡೆ ಊಟದ ವ್ಯವಸ್ಥೆ ಮಾಡಿದ್ದರು. ನಾನು ಅವರ ಪಂಕ್ತಿಯಲ್ಲಿ ಕುಳಿತೆ. ಊಟಕ್ಕೊ ಬಡಿಸಿದರು ನಾನು ಊಟನು ಮಾಡಿದೆ. ಅಲ್ಲಿ ನಮಗೆ ಮಾಂಸಾಹಾರ ಬಡಿಸಿದ್ದರು. ನಾನು ನಾಲ್ಕು- ಐದು ತುತ್ತು ತಿಂದಿದ್ದೆ. ಆಮೇಲೆ ಸ್ನೇಹಿತರು ನೋಡಿ ನಿಮಗೆ ಇಲ್ಲಿ ಒಳಗೆ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಅದು ಮಾಂಸಹಾರಿಗಳಿಗೆ ಎಂದು ನನ್ನ ಕರೆದುಕೊಂಡು ಒಳ ಹೋದರು” ಅಂತ ಹೇಳಿದರು. ಅಷ್ಟರಲ್ಲಿ ನಾನು ಗೊತ್ತಿಲ್ಲದೆ ಐದು ತುತ್ತು ತಿಂದಿದ್ದೆ. ಆ ರುಚಿ ನನಗೆ ಅಭ್ಯಾಸವಿಲ್ಲದಿದ್ದರಿಂದ ನನಗೇನೂ ಅನಿಲಿಲ್ಲ. ಅವರವರ ಆಹಾರ ಅವರಿಗೆ ಹೆಚ್ಚು, ಎಲ್ಲರ ಆಹಾರವನ್ನು ಗೌರವಿಸಬೇಕು. ಯಾರ ಆಹಾರವೂ ಇಲ್ಲಿ ಮೇಲೂ ಇಲ್ಲ ಕೀಳು ಇಲ್ಲ ಅಂದರು ಸಾಮಾಧಾನದಿಂದ. ಇಷ್ಟು ಸರಳವಾಗಿ ಉತ್ತರಿಸುತ್ತಾರೆಂದು ನಾನು ನಿರೀಕ್ಷೆ ಮಾಡಿರಲಿಲ್ಲ. ಮನಸ್ಸಿನಲ್ಲೆ ಹ್ಯಾಟ್ಸ್‌ಆಫ್‌ ತಾತ ಎಂದು ಅವರ ಕೈಕುಲುಕಿದೆ.

ಇಲ್ಲಿ ಮತ್ತೊಂದು ವಿಷಯ ಪ್ರಸ್ತಾಪ ಮಾಡಲೇಬೇಕು. ಅವರ ಹೋರಾಟದ ಬೆಳವಣಿಗೆಗೆ ಅವರ ಬಾಳ ಸಂಗಾತಿಯಾದ ಲಲಿತಮ್ಮನವರ ಬೆಂಬಲವು ಬಹಳ ಮುಖ್ಯ. ಮನೆಯ ಮಕ್ಕಳ ಎಲ್ಲಾ ಜವಾಬ್ದಾರಿಯನ್ನ ಲಲಿತಮ್ಮನವರು ಏಕಾಂಗಿಯಾಗಿಯೇ ನಿರ್ವಹಿಸಿದ್ದಾರೆ. ಈ ಹಿಂದೆ ಅವರೊಂದಿಗೆ ಸಹ ಆಸ್ಪತ್ರೆಯಲ್ಲಿ ಎರಡು ದಿನ ಇದ್ದು ಅವರ ಜೀವನದ ಸಂಗತಿಗಳನ್ನ ಕೇಳಿದ್ದೇನೆ. ಅವರು ಕೂಡಾ ತಾತನ ಬಗ್ಗೆ ಒಂದು ಸಣ್ಣ ಅಸಮಾಧಾನವನ್ನು ವ್ಯಕ್ತಪಡಿಸಲಿಲ್ಲ. ಹೀಗೆ ಸಾರ್ಥಕ ಜೀವನ ಇಬ್ಬರದು. ಹೋಗಿ ಬನ್ನಿ ತಾತ. ಧಣಿವರಿಯದ ನಿಮ್ಮ ಹೋರಾಟದಿಂದ ವಿಶ್ರಾಂತಿ ಪಡೆಯುತ್ತಾ, ನಮ್ಮಂಥವರನ್ನ ಸದಾ ಕಾಲ ಎಚ್ಚರಿಸುತ್ತಿರಿ.

  • ಗೌರಿ, (ಕರ್ನಾಟಕ ಜನಶಕ್ತಿಯ ಗೌರವಾಧ್ಯಕ್ಷರು. ಮಹಿಳಾ ಹೋರಾಟಗಾರರು)

ಇದನ್ನೂ ಓದಿ: ‘ಏನಪ್ಪ, ದೇವರು ಇದಾನೆ ಅನಿಸುತ್ತಾ, ಇಲ್ಲಾ ಅನಿಸುತ್ತಾ?’ ದೊರೆಸ್ವಾಮಿಯವರ ಜೊತೆಗಿನ ನೆನಪು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...