“ಹಿಂದೂ ಸಮಾಜವು ಜಾತಿ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು, ದಲಿತರು ಮತ್ತು ದುರ್ಬಲ ವರ್ಗಗಳೊಂದಿಗೆ ತೊಡಗಿಸಿಕೊಳ್ಳುವ ತುರ್ತು ಅಗತ್ಯವಿದೆ” ಎಂದು ನಾಗಪುರದ ಆರೆಸ್ಸೆಸ್ ಪ್ರಧಾನ ಕಛೇರಿಯಲ್ಲಿ ನಡೆದ ವಿಜಯದಶಮಿ ಭಾಷಣದಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.
“ರಾಷ್ಟ್ರವನ್ನು ಜಾತಿ ಮತ್ತು ಸಮುದಾಯದ ಆಧಾರದ ಮೇಲೆ ವಿಭಜಿಸಲು ಕೆಲವರು ಕೆಲಸ ಮಾಡುತ್ತಿದ್ದಾರೆ; ಕೆಲವು ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥ ಹಿತಾಸಕ್ತಿಗಳಿಗಾಗಿ ಇದರಲ್ಲಿ ಭಾಗಿಯಾಗಿವೆ” ಎಂದು ಆರೋಪಿಸಿದರು.
“ವಾಲ್ಮೀಕಿ ಕಾಲೋನಿಗಳಲ್ಲಿ ಮಾತ್ರ ವಾಲ್ಮೀಕಿ ಜಯಂತಿಯನ್ನು ಏಕೆ ಆಚರಿಸಬೇಕು” ಎಂದು ಪ್ರಶ್ನಿಸಿದ ಅವರು, “ರಾಮಾಯಣ ಬರೆದ ವಾಲ್ಮೀಕಿ ಇಡೀ ಹಿಂದೂ ಸಮಾಜಕ್ಕೆ ಪರಂಪರೆಯನ್ನು ಸೃಷ್ಟಿಸಿದವರು. ಎಲ್ಲ ಹಿಂದೂಗಳು ವಾಲ್ಮೀಕಿ ಜಯಂತಿ ಮತ್ತು ರವಿದಾಸ ಜಯಂತಿಯಂತಹ ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸಬೇಕು. ಆರ್ಎಸ್ಎಸ್ ಈ ಸಂದೇಶವನ್ನು ಹರಡುವ ಗುರಿಯನ್ನು ಹೊಂದಿದೆ” ಎಂದು ಹೇಳಿದರು.
“ಆರೋಗ್ಯಕರ ಸಮಾಜಕ್ಕೆ ಸಾಮಾಜಿಕ ಸಾಮರಸ್ಯ ಮತ್ತು ಪರಸ್ಪರ ಸೌಹಾರ್ದತೆ ಮೂಲಭೂತವಾಗಿದೆ. ಸಮಾಜದ ವಿವಿಧ ವಿಭಾಗಗಳಲ್ಲಿ ವ್ಯಕ್ತಿಗಳು ಮತ್ತು ಕುಟುಂಬಗಳ ನಡುವೆ ನಿಜವಾದ ಸ್ನೇಹ ಅಗತ್ಯ. ಭಾಷೆಗಳು ವೈವಿಧ್ಯಮಯವಾಗಿರಬಹುದು, ಸಂಸ್ಕೃತಿಗಳು ವೈವಿಧ್ಯಮಯವಾಗಿರಬಹುದು, ಆಹಾರವು ವೈವಿಧ್ಯಮಯವಾಗಿರಬಹುದು. ಆದರೆ, ವ್ಯಕ್ತಿಗಳು ಮತ್ತು ಕುಟುಂಬಗಳ ಈ ಸ್ನೇಹವು ಸಮಾಜದಲ್ಲಿ ಸಾಮರಸ್ಯವನ್ನು ತರುತ್ತದೆ” ಎಂದರು.
ಇದನ್ನೂ ಓದಿ; ಬಿಹಾರ: ವಿಜಯದಶಮಿ ಆಚರಣೆ ವೇಳೆ ಬಾಲಕಿಯರಿಗೆ ಕತ್ತಿ ಹಂಚಿದ ಬಿಜೆಪಿ ಶಾಸಕ


