Homeಮುಖಪುಟ’ಕ್ಯಾಪಿಟಲ್' ಮೇಲೆ ಬಲಪಂಥೀಯತೆಯ ದಾಳಿ; ಈ ವಿದ್ಯಮಾನಗಳಿಗೆ ಕಾರಣವಾಗಿದ್ದೇನು?

’ಕ್ಯಾಪಿಟಲ್’ ಮೇಲೆ ಬಲಪಂಥೀಯತೆಯ ದಾಳಿ; ಈ ವಿದ್ಯಮಾನಗಳಿಗೆ ಕಾರಣವಾಗಿದ್ದೇನು?

ಬಲಪಂಥೀಯ ಪ್ರಕಾರದಲ್ಲಿ ಹಲವು ಹೊಸ ರೂಪಗಳು ಹುಟ್ಟಿಕೊಂಡಿವೆ. ಈ ಬಲಪಂಥೀಯ ಗುಂಪುಗಳು ತಮ್ಮ ಸಮಾಜದಲ್ಲಿ ಕಾಣುವ ವಿಭಿನ್ನ ರೀತಿಯ ಬದಲಾವಣೆಗಳ ವಿರುದ್ಧ ಹೋರಾಡುತ್ತವೆ. ಇದು ಸ್ತ್ರೀವಾದ ಇರಬಹುದು ಅಥವಾ ವರ್ಣಭೇದ ವಿರೋಧಿ ನೀತಿ ಇರಬಹುದು. ಅವರು ಅಂತರ್ಜಾಲದ ಮೂಲಕ ಸಂಘಟಿತರಾಗಿದ್ದಾರೆ, ಭಾವೋದ್ರಿಕ್ತ ಅನುಯಾಯಿಗಳ ಜಾಲಗಳನ್ನು ರಚಿಸುತ್ತಾರೆ, ಅವರು ಈಗ ಇಂಟರ್ನೆಟ್ ಟ್ರೋಲ್‌ಗಳಿಂದ ಸಂಘಟಿತ ಸೇನಾಪಡೆಗಳಾಗಿ ವಿಕಸನಗೊಂಡಿದ್ದಾರೆ. ಈ ಗುಂಪುಗಳು ಒಗ್ಗಟ್ಟಾಗಿ ಜನವರಿ 6ರಂದು ಅಮೆರಿಕನ್ ಕ್ಯಾಪಿಟಲ್ ಮುತ್ತಿಗೆಯನ್ನು ಮುನ್ನಡೆಸಿದ್ದು.

- Advertisement -
- Advertisement -

2020 ಜನವರಿ 6ರಂದು, ಇತ್ತೀಚಿನ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ತಲೆಕೆಳಗು ಮಾಡಲು ಆಗ್ರಹಿಸಿ ಸಾವಿರಾರು ಸಂಖ್ಯೆಯಲ್ಲಿ ಟ್ರಂಪ್ ಬೆಂಬಲಿಗರು ’ಕ್ಯಾಪಿಟಲ್ ಮೇಲೆ ದಾಳಿ ನಡೆಸಿದರು. ಅವರು ಆ ಕಟ್ಟಡದ ಕೆಲವು ಭಾಗಗಳನ್ನು ಧ್ವಂಸಗೊಳಿಸಿದರು ಮತ್ತು ಹಲವು ಗಂಟೆಗಳ ಕಾಲ ಇಡೀ ಕಟ್ಟಡವನ್ನು ತಮ್ಮ ಹತೋಟಿಯಲ್ಲಿ ಇಟ್ಟುಕೊಂಡಿದ್ದರು. ಟ್ರಂಪ್‌ನ ಸೋಲನ್ನು ಅಧಿಕೃತಗೊಳಿಸಲಿದ್ದ ಕಾಂಗ್ರೆಸ್‌ನ ಜಂಟಿ ಅಧಿವೇಶನಕ್ಕೂ ಅಡ್ಡಿಪಡಿಸಲು ಅವರು ಯತ್ನಿಸಿದರು.

ಈ ಘಟನೆ ನಡೆದ ಮುಂಜಾನೆಯಷ್ಟೇ ಟ್ರಂಪ್ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿ, ತನ್ನ ಬೆಂಬಲಿಗರನ್ನು ಪ್ರಚೋದಿಸಿ, ದೇಶವನ್ನು ವಾಪಸ್ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಹೇಳಿದ್ದರು. ಸಮಾವೇಶದಲ್ಲಿದ್ದ, ಟ್ರಂಪ್ ತಂಡದ ಅನೇಕರು, ಯುದ್ಧೋನ್ಮಾದದ ಸಂಕೇತಗಳನ್ನು ಬಳಸುತ್ತಾ ’ಕ್ಯಾಪಿಟಲ್‌’ಗೆ  ನುಗ್ಗಲು ಕರೆಕೊಟ್ಟರು. ಉಪಾಧ್ಯಕ್ಷ, ಮೈಕ್ ಪೆನ್ಸ್ ಅವರಿಗೆ ಫಲಿತಾಂಶ ತಡೆ ಹಿಡಿಯುವ ಅಧಿಕಾರ ಇದೆ ಎಂದು ಅವರು ಪದೇಪದೇ ಕರೆಕೊಡುತ್ತಿದ್ದರು.

PC : Business Standard

ಟ್ರಂಪ್ ಜನಸಮೂಹವನ್ನು ಮುನ್ನಡೆಸಲು ಹೋಗುತ್ತಾರೋ ಅಥವಾ ಅವರ ವಿರುದ್ಧ ನಿಲ್ಲುತ್ತಾರೋ ಎಂಬುದು ಆರಂಭದಲ್ಲಿ ಸ್ಪಷ್ಟವಾಗಿರಲಿಲ್ಲ. ಧ್ವಂಸ ನಡೆಸುವವರನ್ನು ಹೊಗಳಿ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲು ಪ್ರಾರಂಭಿಸಿದರು. ಆ ಜನರನ್ನು ಮಹಾನ್ ದೇಶಪ್ರೇಮಿಗಳೆಂದು ಕರೆದು ಶಾಂತಿಯಿಂದ ಮನೆಗೆ ಹೋಗಬೇಕೆಂದು ಹೇಳಿದರು. ಚುನಾವಣಾ ಫಲಿತಾಂಶವನ್ನು ಟೀಕಿಸಿದ ಅವರು, ಚುನಾವಣೆಯನ್ನು ತಮ್ಮಿಂದ ಕಳವು ಮಾಡಲಾಗುತ್ತಿದೆ ಎಂಬ ತಮ್ಮ ಆಪಾದನೆಯನ್ನು ಪುನರುಚ್ಚರಿಸಿದರು. ಡೊನಾಲ್ಡ್ ಟ್ರಂಪ್ ಅವರ ಟ್ವಿಟ್ಟರ್ ಖಾತೆಯನ್ನು ನಂತರ ಅಮಾನತುಗೊಳಿಸಲಾಯಿತು, ಮತ್ತು ಅವರು ಟಿವಿಯ ಮೂಲಕ ಮಾತ್ರ ಸಂವಹನ ನಡೆಸಲು ಸಾಧ್ಯವಾಯಿತು.

ಒತ್ತಡದಲ್ಲಿ, ಬಂಡಾಯವನ್ನು ನಿಗ್ರಹಿಸಲು ಅಮೆರಿಕನ್ ನ್ಯಾಷನಲ್ ಗಾರ್ಡ್‌ಅನ್ನು (ಅಮೆರಿಕನ್ ಸೈನ್ಯದ ಮೀಸಲು ಶಾಖೆ) ಬಳಸಲು ಟ್ರಂಪ್ ಒಪ್ಪಿಕೊಂಡರು. ಈ ಘಟನೆಗಳಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಸೇರಿದಂತೆ 5 ಜನರು ಸಾವನ್ನಪ್ಪಿದ್ದಾರೆ. ದಂಗೆಯ ನಂತರ, ಅಧಿಕಾರದ ವರ್ಗಾವಣೆಯನ್ನು ಟ್ರಂಪ್ ಇನ್ನೂ ವಿರೋಧಿಸಬಹುದೆಂದು ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ. ಅವರ ಅಧಿಕೃತ ಅವಧಿ ಜನವರಿ 19ರಂದು ಕೊನೆಗೊಳ್ಳುತ್ತದೆ.

ಟ್ರಂಪ್ ವಿದ್ಯಮಾನ : ಬಲಪಂಥೀಯ ಫುಡಾರಿತನದ ಬೆಳವಣಿಗೆಯಲ್ಲಿ ಟ್ರಂಪ್ ವಿಶಿಷ್ಟ ಸಂಕೇತವಾಗಿ ಹೊರಹೊಮ್ಮಿದ್ದಾರೆ. ತಮ್ಮಲ್ಲಿ ಯಾವುದೇ ಸತ್ವವಿಲ್ಲದಿದ್ದರೂ ಸಹ, ಕೆಲವು ಸ್ಥಾನಗಳಲ್ಲಿರುವ ಜನರು ಹೆಚ್ಚಿನ ಜನರಲ್ಲಿ ಉತ್ಸಾಹವನ್ನು, ತೀವ್ರ ಆಸಕ್ತಿಯನ್ನು ತುಂಬಲು ಸಶಕ್ತರಾಗಿರುತ್ತಾರೆ. ಬಿಕ್ಕಟ್ಟಿನ ಸಮಯದಲ್ಲಿ, ಅವರ ಅನುಯಾಯಿಗಳು ಯುದ್ಧೋತ್ಸಾಹದಲ್ಲಿ ಅವರನ್ನು ಅನುಸರಿಸಲು ಸಾಧ್ಯವಿದೆ.

ಅವರ ಅನುಯಾಯಿಗಳನ್ನು ಹೊರತುಪಡಿಸಿ, ಎಲ್ಲರಿಗೂ, ಟ್ರಂಪ್ ಹಾಸ್ಯಾಸ್ಪದ ಬೃಹಸ್ಪತಿಯಾಗಿ ಕಾಣಿಸಿಕೊಳ್ಳುತ್ತಾರೆ. ಅಂತಹ ವ್ಯಕ್ತಿಯನ್ನು ಯಾರಾದರೂ ಏಕೆ ಹಿಂಬಾಲಿಸುತ್ತಾರೆ ಎಂಬುದು ಅತಿ ದೊಡ್ಡ ನಿಗೂಢ ಸಂಗತಿಯಂತೆ ಕಾಣುತ್ತದೆ. (ಅವರ ಅನುಯಾಯಿಗಳು ತೋರಿಸಿದ ಭಾವೋದ್ರೇಕಗಳು ಹೇಗೆ ಸಾಧ್ಯ ಎಂಬುದನ್ನು ಸದ್ಯಕ್ಕೆ ಹೊರತುಪಡಿಸಿದರು).

PC : Biography (ನೆಪೋಲಿಯನ್ ಬೊನಪಾರ್ಟೆ)

1848ರಲ್ಲಿ ಕಾರ್ಲ್ ಮಾರ್ಕ್ಸ್ ಯುರೋಪ್‌ಅನ್ನು ಅಧ್ಯಯನ ಮಾಡುತ್ತಿದ್ದರು. ಫ್ರಾನ್ಸ್ ಬಿಕ್ಕಟ್ಟಿನತ್ತ ಸಾಗುತ್ತಿರುವುದನ್ನು ಅವರು ಗಮನಿಸಿದರು. ಆ ಬಿಕ್ಕಟ್ಟಿನಲ್ಲಿ, ಪ್ಯಾರಿಸ್‌ನಲ್ಲಿ ಕಾರ್ಮಿಕರು ಕ್ರಾಂತಿಯನ್ನು ಕೋರುತ್ತಿದ್ದರು. ಆಡಳಿತ ವರ್ಗಗಳು ಸಂಘರ್ಷದಲ್ಲಿದ್ದವು ಮತ್ತು ಅವರಿಗೆ ಸಂಸತ್ತನ್ನು ಜಾರಿಯಲ್ಲಿಟ್ಟು ಮುಂದುವರಿಯಲು ಸಾಧ್ಯವಾಗಲಿಲ್ಲ. ಈ ಸಂಘರ್ಷದಲ್ಲಿ, ಮೂಲ ನೆಪೋಲಿಯನ್ ಬೊನಪಾರ್ಟೆಯ ಸೋದರಳಿಯ ನೆಪೋಲಿಯನ್ ಬೊನಪಾರ್ಟೆ ರಾಜಕೀಯದಲ್ಲಿ ಹೊಸ ಶಕ್ತಿಯಾಗಿ ಹೊರಹೊಮ್ಮಿದರು. ಟ್ರಂಪ್ ಅವರಂತೆಯೇ, ಅವರು ನಯವಂಚಕ, ಅನೈತಿಕ ಮತ್ತು ’ಗಣ್ಯ ಹಿನ್ನೆಲೆಯಿಂದ ಬಂದವರು. ಫ್ರಾನ್ಸ್‌ಅನ್ನು ಶ್ರೇಷ್ಠತೆಗೆ ಮರುಕಳಿಸಲು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಅವ್ಯವಸ್ಥೆಯನ್ನು ಪರಿಹರಿಸುವುದಾಗಿ ಹೇಳಿಕೊಂಡು ಅವರು ಅಧಿಕಾರಕ್ಕೆ ಬಂದರು. ಅಂತಿಮವಾಗಿ, ಅವರು ರಾಜಕೀಯ ದಂಗೆಯನ್ನು ನಡೆಸಿದರು. ಇದು ಅವರನ್ನು ಫ್ರಾನ್ಸ್‌ನ ರಾಜನಾಗಿ ಸ್ಥಾಪಿಸಲು ಕಾರಣವಾಯಿತಷ್ಟೇ. ದಶಕಗಳ ಕಾಲ ಫ್ರಾನ್ಸ್‌ನಲ್ಲಿ ಪ್ರಜಾಪ್ರಭುತ್ವ ಮತ್ತು ಮುಕ್ತ ಮಾಧ್ಯಮ ಕಾಣೆಯಾಯಿತು.

ಒಂದು ದೇಶದ ಗಣ್ಯರು ಇನ್ನು ಮೇಲೇರಲು ಸಾಧ್ಯವಾಗದ ಇಂತಹ ಬಿಕ್ಕಟ್ಟಿನ ಸಮಯದಲ್ಲಿ, ಒಬ್ಬ ವ್ಯಕ್ತಿಯು, ಪ್ರಜಾಪ್ರಭುತ್ವದ ಪ್ರಕ್ರಿಯೆಯ ಬಿಕ್ಕಟ್ಟನ್ನು ಬಗೆಹರಿಸುವ ಭರವಸೆ ನೀಡಿ, ಚರ್ಚೆಯಲ್ಲಿ ತೊಡಗಿಸಿಕೊಳ್ಳಲು ನಿರಾಕರಿಸಿ ಮತ್ತು ಸಂಕೀರ್ಣ ಸಮಸ್ಯೆಗಳಿಲ್ಲದ ಒಂದು ಪ್ರಾಚೀನ ಸಮಯಕ್ಕೆ ಕರೆದೊಯ್ಯಲು ಮುಂದಾಳತ್ವ ವಹಿಸಿ, ರಾಜಕೀಯವಾಗಿ ಮೇಲೇರಬಹುದು ಎಂದು ಮಾರ್ಕ್ಸ್ ಗಮನಿಸಿದ್ದರು. ಇದರ ಜೊತೆಗೆ ಚಿಂತಕರ ಅನುಮಾನ, ಚಿಂತನೆಗಿಂತಲೂ ಕ್ರಮಗಳಿಗೆ ಆದ್ಯತೆ ನೀಡುವುದು ಮತ್ತು ಅಂಚಿನಲ್ಲಿರುವ ದುರ್ಬಲ ಗುಂಪುಗಳನ್ನು ಅಪರಾಧೀಕರಿಸುವುದು ಸಹ ಸೇರಿಕೊಂಡಿರಬಹುದು.

ಅಲ್ಲದೆ ರಾಜಕೀಯವಾಗಿ ಮೇಲೇರುವ ವ್ಯಕ್ತಿಯು ವಿಶೇಷವಾಗಿ ಬುದ್ಧಿವಂತನಾಗಿರದೆ ಇರಬಹುದು ಮತ್ತು ಬಿಕ್ಕಟ್ಟನ್ನು ಕೊನೆಗೊಳಿಸಲು ಅವರು ಕೆಲಸ ಮಾಡದಿರಬಹುದು. ಅಂತಹ ಅನಿಶ್ಚಿತತೆ ಮತ್ತು ಸಂಘರ್ಷದ ಸಮಯದಲ್ಲಿ, ಪ್ರಗತಿಪರ ಶಕ್ತಿಗಳು ಸಹ ನಿವೃತ್ತಿ ಹೊಂದಬಹುದ.

ಅಮೆರಿಕದ ಬಿಕ್ಕಟ್ಟು : ಅಮೆರಿಕದಲ್ಲಿ, ಈ ಸಂಘರ್ಷವು ಬಹಳ ಸಮಯದಿಂದ ಘನೀಭವಿಸುತ್ತಿದೆ. 1970 ದಶಕದಿಂದಲೇ, ಅಮೆರಿಕದ ರಾಜಕೀಯ ವ್ಯವಸ್ಥೆಯು ಆಂತರಿಕ ಸಂಘರ್ಷದಲ್ಲಿ ಸಿಲುಕಿತು. ನವ-ಉದಾರವಾದವು ಸರ್ಕಾರದ ನೀತಿಯ ಮೇಲೆ ಪ್ರಭಾವ ಬೀರಲು ಪ್ರಾರಂಭಿಸಿತು. 1960ರ ದಶಕದ ಜನಪ್ರಿಯ ಹೋರಾಟಗಳಿಂದ ಬಿಳಿಯರ ಶ್ರೇಷ್ಠತೆಯ ಪ್ರಾಬಲ್ಯವನ್ನು ಸೋಲಿಸಲಾಯಿತು. ರಾಜಕೀಯ ವ್ಯವಸ್ಥೆಯು ಮೊದಲಿನಂತೆ ಕೃಷಿ ಮತ್ತು ಕೈಗಾರಿಕೆಗಳ ನಡುವಿನ ಸಂಘರ್ಷವನ್ನು ಅವಲಂಬಿಸಲಾರದೆ ಹೋಯಿತು. ಇದರ ಫಲವಾಗಿ, ಅಮೆರಿಕಾದ ರಾಜಕೀಯದಲ್ಲಿ ಹೊಸ ವಿಭಜನೆ ಉಂಟಾಗಿ, ಅದು ಸಂಪ್ರದಾಯದ ಪರವಾದ ಮತ್ತು ಬದಲಾವಣೆಯ ಪರವಾದ ಭಾಗವಾಗಿ ಒಡೆಯಿತು.

ಇದಕ್ಕೆ ಕ್ರಮವಾಗಿ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳು ಅಲೈನ್ ಆದವು. ಹಳೆಯ ಕೃಷಿ ಪ್ರದೇಶಗಳು ಸಾಂಪ್ರದಾಯಿಕ ಮೌಲ್ಯಗಳೊಂದಿಗೆ ಗುರುತಿಸಿಕೊಂಡರೆ, ಕೈಗಾರಿಕೀಕರಣಗೊಂಡ ವಲಯಗಳು ಕೆಲವು ಮಾರ್ಪಾಡುಗಳೊಂದಿಗೆ ಬದಲಾವಣೆಯೊಂದಿಗೆ ಗುರುತಿಸಿಕೊಂಡವು. ಇವೆರಡೂ ಅತಿ ಹೆಚ್ಚೇ ಎಂಬುವಷ್ಟು ವ್ಯಾಪಾರದ ಪರವಾದವು, ಆದರೆ ವಿಭಿನ್ನ ರೀತಿಯಲ್ಲಿ. ವರ್ಣಭೇದ ನೀತಿ ಮತ್ತು ಬಡತನದ ವಿರುದ್ಧದ ಹೋರಾಟಗಳು ಡೆಮಾಕ್ರಟಿಕ್ ಪಕ್ಷದೊಂದಿಗೆ ಗುರುತಿಸಿಕೊಂಡರೆ, ರಿಪಬ್ಲಿಕನ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದು, ಧರ್ಮ, ಫೆಡರಲಿಸಂ ಮತ್ತು ಸಂವಿಧಾನಗಳ ಮೂಲ-ಉದ್ದೇಶದ ಅರ್ಥ ಸೇರಿದಂತೆ ಸಾಂಪ್ರದಾಯಿಕ ಮೌಲ್ಯಗಳ ಹೋರಾಟಗಳು.

ಈ ಎರಡೂ ಬದಿಗಳ ನಡುವೆ ವೈರತ್ವದ ತೀವ್ರತೆ ಬೆಳೆಯಿತು. 2008ರಲ್ಲಿ, ಷೇರು ಮಾರುಕಟ್ಟೆ ಕುಸಿತದೊಂದಿಗೆ, ಅಮೆರಿಕದ ವ್ಯವಸ್ಥೆಯು ಅಸ್ಥಿರವಾದ ಬಿಕ್ಕಟ್ಟಿನಲ್ಲಿ ಸಿಲುಕಿತು. ಅಮೆರಿಕವನ್ನು ಉಳಿಸಬಲ್ಲ ಅತೀಂದ್ರಿಯ ವ್ಯಕ್ತಿತ್ವದ ಹುಡುಕಾಟವು ಶ್ರದ್ಧೆಯಿಂದ ಪ್ರಾರಂಭವಾಯಿತು. ಪ್ರಜಾಪ್ರಭುತ್ವ ಪ್ರಕ್ರಿಯೆಯ ಅಸ್ತವ್ಯಸ್ತತೆಯನ್ನು ಕೊನೆಗಾಣಿಸುವ ಮತ್ತು ಅದನ್ನು ಉತ್ತಮ ಮಾರ್ಗಕ್ಕೆ ಬದಲಾಯಿಸುವ ಯಾರಾದರೂ ಅವರಿಗೆ ಅಗತ್ಯವಿತ್ತು. ಈ ವ್ಯಕ್ತಿಯು ಬಳಿ ಸರಳ ಸಂದೇಶ ಇತ್ತು ಮತ್ತು ಅದು ಅಮೆರಿಕವನ್ನು ಶ್ರೇಷ್ಠನನ್ನಾಗಿ ಮಾಡುತ್ತೇನೆ ಎಂಬುದಾಗಿತ್ತು. ಆ ವ್ಯಕ್ತಿ ಬರಾಕ್ ಒಬಾಮ. ಒಬಾಮಾ ಅವರು ವರ್ಚಸ್ವಿ ವ್ಯಕ್ತಿತ್ವ ಹೊಂದಿದ್ದರು ಮತ್ತು ಅಮೆರಿಕದ ಅಧಿಕಾರವನ್ನು ಮತ್ತು ಸ್ಥಾನಮಾನದ ಬಗ್ಗೆ ಗೌರವ ಇರಿಸಿಕೊಂಡು ಮುನ್ನಡೆಸಬಲ್ಲವರಾಗಿದ್ದರು. ಅಧಿಕಾರದಲ್ಲಿದ್ದರೂ, ಅವರು ವೈಯಕ್ತಿಕ ಕಾರ್ಯಸೂಚಿಯನ್ನು ಹೊಂದಿದ್ದಂತೆ ಕಾಣುತ್ತಿರಲಿಲ್ಲ ಮತ್ತು ಅಸ್ತಿತ್ವದಲ್ಲಿರುವ ವ್ಯವಸ್ಥೆಯಲ್ಲಿ ಅವರ ಅಧಿಕಾರ ಬೆರೆತುಹೋಯಿತು. ಆದ್ದರಿಂದ ಅವರು ಅಮೆರಿಕಾದ ಪ್ರಜಾಪ್ರಭುತ್ವದ ಬಿಕ್ಕಟ್ಟನ್ನು ಪರಿಹರಿಸಲಿಲ್ಲ, ಮತ್ತು ಅವರ ಅಂತಿಮ ಅಧ್ಯಕ್ಷೀಯ ಅವಧಿಯ ಕೊನೆಯಲ್ಲಿ, ಅವರನ್ನು ಅಧಿಕಾರಕ್ಕೆ ತಂದ ಸಮಸ್ಯೆಗಳು ಗಮನಹರಿಸದೆ ಉಳಿದಿದ್ದವು.

ಅಮೆರಿಕದ ರಾಜಕೀಯದ ಎರಡೂ ಬದಿಗಳು ಬಿಕ್ಕಟ್ಟಿನಲ್ಲಿದ್ದಾಗ ಡೊನಾಲ್ಡ್ ಟ್ರಂಪ್ ಮೇಲೇರಿದರು. ಡೆಮಾಕ್ರಟಿಕ್ ಪಕ್ಷವು ಬದಲಾವಣೆಯ ಭರವಸೆಯನ್ನು ನೀಡುವ ಸ್ಥಿತಿಯಲ್ಲಿ ಇರಲಿಲ್ಲ. ರಿಪಬ್ಲಿಕನ್‌ನ ಸಂಪ್ರದಾಯವಾದಿ ಪರ ವೇದಿಕೆ ಖಾಲಿಯಾಗಿ ಕಾಣಲಾರಂಭಿಸಿತು. ಬದಲಾಗುತ್ತಿರುವ ಜನಾಂಗೀಯ ಸಂಯೋಜನೆಗಳು, ಸಂವಿಧಾನದ ಅನ್ವಯಗಳು ಮತ್ತು ಭಯೋತ್ಪಾದನೆ ವಿರುದ್ಧದ ಯುದ್ಧದಿಂದ ಪ್ರಾರಂಭವಾಗಿ ಬೆಳೆಯುತ್ತಿದ್ದ ಕೇಂದ್ರೀಕರಣ ಸೇರಿದಂತೆ ಹಲವು ಬದಲಾವಣೆಗಳು ಎರಡೂ ಕಡೆಯವರನ್ನು ರಾಜಕೀಯವಾಗಿ ದಿವಾಳಿಯಾಗಿಸಿದವು.

PC : People.com

ಡೊನಾಲ್ಡ್ ಟ್ರಂಪ್ ನಿಜವಾದ ’ಬದಲಾವಣೆ’ಯಾಗಿ ಬಂದರು. ಅವರು ವೃತ್ತಿ ರಾಜಕಾರಣಿಯಾಗಿರಲಿಲ್ಲ, ಆದರೆ ಅವರು ರಾಜಕಾರಣಿಗಳನ್ನು ಚೆನ್ನಾಗಿ ಬಲ್ಲವರಾಗಿದ್ದರು. ಅವರು ಸೂಕ್ಷ್ಮತೆ ಮತ್ತು ಸಮಗ್ರತೆಯ ಬಗ್ಗೆ ತಲೆಕೆಡಿಸಿಕೊಳ್ಳದೆ, ಜನರು ಕೇಳಲು ಬಯಸಿದ್ದನ್ನು ಮಾತನಾಡಿದರು. ಟ್ವಿಟ್ಟರ್‌ಅನ್ನು ವೇದಿಕೆಯಾಗಿ ಬಳಸಿಕೊಂಡು, ಅವರು ತಮ್ಮ ಬೆಂಬಲಿಗ ಸಮುದಾಯದ ಜೊತೆಗೆ “ನೇರ-ಮಾತುಕತೆ”ಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಯಿತು. ಅವರು ಸಾಂಪ್ರದಾಯಿಕತೆಯ ಪರವಾದ ಸಂದೇಶವನ್ನು ಒತ್ತಿ ಹೇಳಿದರು ಮತ್ತು ಅಮೆರಿಕವನ್ನು ಮತ್ತೆ ಶ್ರೇಷ್ಠ ದೇಶವನ್ನಾಗಿ ಮಾಡುವ ಭರವಸೆ ನೀಡುವ ಮೂಲಕ ಅದರ ವಿರೋಧಾಭಾಸಗಳನ್ನು ಕಡಿತಗೊಳಿಸಿದರು.

ಅಂದಿನಿಂದ, ಬಲಪಂಥೀಯ ಪ್ರಕಾರದಲ್ಲಿ ಹಲವು ಹೊಸ ರೂಪಗಳು ಹುಟ್ಟಿಕೊಂಡಿವೆ. ಈ ಬಲಪಂಥೀಯ ಗುಂಪುಗಳು ತಮ್ಮ ಸಮಾಜದಲ್ಲಿ ಕಾಣುವ ವಿಭಿನ್ನ ರೀತಿಯ ಬದಲಾವಣೆಗಳ ವಿರುದ್ಧ ಹೋರಾಡುತ್ತವೆ. ಇದು ಸ್ತ್ರೀವಾದ ಇರಬಹುದು ಅಥವಾ ವರ್ಣಭೇದ ವಿರೋಧಿ ನೀತಿ ಇರಬಹುದು. ಅವರು ಅಂತರ್ಜಾಲದ ಮೂಲಕ ಸಂಘಟಿತರಾಗಿದ್ದಾರೆ, ಭಾವೋದ್ರಿಕ್ತ ಅನುಯಾಯಿಗಳ ಜಾಲಗಳನ್ನು ರಚಿಸುತ್ತಾರೆ, ಅವರು ಈಗ ಇಂಟರ್ನೆಟ್ ಟ್ರೋಲ್‌ಗಳಿಂದ ಸಂಘಟಿತ ಸೇನಾಪಡೆಗಳಾಗಿ ವಿಕಸನಗೊಂಡಿದ್ದಾರೆ. ಈ ಗುಂಪುಗಳು ಒಗ್ಗಟ್ಟಾಗಿ ಜನವರಿ 6ರಂದು ಅಮೆರಿಕನ್ ಕ್ಯಾಪಿಟಲ್ ಮುತ್ತಿಗೆಯನ್ನು ಮುನ್ನಡೆಸಿದ್ದು.

ಟಿಟ್ಟರ್ ಮತ್ತು ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳು, ಈಗ ಟ್ರಂಪ್‌ನನ್ನು ನಿಷೇಧಿಸಿರುವುದು, ಅಮೆರಿಕದ ವ್ಯಾಪಾರಿ ಗಣ್ಯರು ಟ್ರಂಪ್ ಅಧ್ಯಕ್ಷತೆ ವಿರುದ್ಧ ಕೊನೆಗೆ ತಿರುಗಿಬಿದ್ದಿರುವುದನ್ನು ತೋರಿಸುತ್ತದೆ, ಆದರೆ ಅವರು ರಾಜಕೀಯದಲ್ಲಿ ಮೇಲೇರಲು ಕಾರಣವಾದ ಮೂಲ ಸಮಸ್ಯೆಗಳು ಹಾಗೆಯೇ ಉಳಿದಿವೆ. ಟ್ರಂಪ್ ಹಿಂತಿರುಗಬಹುದು, ಅಥವಾ ವ್ಯವಸ್ಥೆಯ ಅಗತ್ಯತೆಗಳನ್ನು ಮನಗಂಡು ಉತ್ತಮವಾಗಿ ನಿಭಾಯಿಸುವ ಭರವಸೆ ನೀಡುವ ಮತ್ತೊಬ್ಬ ವರ್ಚಸ್ವಿ ನಾಯಕ ಉದ್ಭವಿಸಬಹುದು.

(ಕನ್ನಡಕ್ಕೆ ): ಮಲ್ಲನಗೌಡರ್

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.


ಇದನ್ನೂ ಓದಿ: ‘2 ಬಾರಿ ಮಹಾಭಿಯೋಗ’ – ಅಮೆರಿಕ ಇತಿಹಾಸದಲ್ಲಿ ಕಪ್ಪುಚುಕ್ಕೆಯಾದ ಟ್ರಂಪ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...