Homeಮುಖಪುಟ’ಕ್ಯಾಪಿಟಲ್' ಮೇಲೆ ಬಲಪಂಥೀಯತೆಯ ದಾಳಿ; ಈ ವಿದ್ಯಮಾನಗಳಿಗೆ ಕಾರಣವಾಗಿದ್ದೇನು?

’ಕ್ಯಾಪಿಟಲ್’ ಮೇಲೆ ಬಲಪಂಥೀಯತೆಯ ದಾಳಿ; ಈ ವಿದ್ಯಮಾನಗಳಿಗೆ ಕಾರಣವಾಗಿದ್ದೇನು?

ಬಲಪಂಥೀಯ ಪ್ರಕಾರದಲ್ಲಿ ಹಲವು ಹೊಸ ರೂಪಗಳು ಹುಟ್ಟಿಕೊಂಡಿವೆ. ಈ ಬಲಪಂಥೀಯ ಗುಂಪುಗಳು ತಮ್ಮ ಸಮಾಜದಲ್ಲಿ ಕಾಣುವ ವಿಭಿನ್ನ ರೀತಿಯ ಬದಲಾವಣೆಗಳ ವಿರುದ್ಧ ಹೋರಾಡುತ್ತವೆ. ಇದು ಸ್ತ್ರೀವಾದ ಇರಬಹುದು ಅಥವಾ ವರ್ಣಭೇದ ವಿರೋಧಿ ನೀತಿ ಇರಬಹುದು. ಅವರು ಅಂತರ್ಜಾಲದ ಮೂಲಕ ಸಂಘಟಿತರಾಗಿದ್ದಾರೆ, ಭಾವೋದ್ರಿಕ್ತ ಅನುಯಾಯಿಗಳ ಜಾಲಗಳನ್ನು ರಚಿಸುತ್ತಾರೆ, ಅವರು ಈಗ ಇಂಟರ್ನೆಟ್ ಟ್ರೋಲ್‌ಗಳಿಂದ ಸಂಘಟಿತ ಸೇನಾಪಡೆಗಳಾಗಿ ವಿಕಸನಗೊಂಡಿದ್ದಾರೆ. ಈ ಗುಂಪುಗಳು ಒಗ್ಗಟ್ಟಾಗಿ ಜನವರಿ 6ರಂದು ಅಮೆರಿಕನ್ ಕ್ಯಾಪಿಟಲ್ ಮುತ್ತಿಗೆಯನ್ನು ಮುನ್ನಡೆಸಿದ್ದು.

- Advertisement -
- Advertisement -

2020 ಜನವರಿ 6ರಂದು, ಇತ್ತೀಚಿನ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ತಲೆಕೆಳಗು ಮಾಡಲು ಆಗ್ರಹಿಸಿ ಸಾವಿರಾರು ಸಂಖ್ಯೆಯಲ್ಲಿ ಟ್ರಂಪ್ ಬೆಂಬಲಿಗರು ’ಕ್ಯಾಪಿಟಲ್ ಮೇಲೆ ದಾಳಿ ನಡೆಸಿದರು. ಅವರು ಆ ಕಟ್ಟಡದ ಕೆಲವು ಭಾಗಗಳನ್ನು ಧ್ವಂಸಗೊಳಿಸಿದರು ಮತ್ತು ಹಲವು ಗಂಟೆಗಳ ಕಾಲ ಇಡೀ ಕಟ್ಟಡವನ್ನು ತಮ್ಮ ಹತೋಟಿಯಲ್ಲಿ ಇಟ್ಟುಕೊಂಡಿದ್ದರು. ಟ್ರಂಪ್‌ನ ಸೋಲನ್ನು ಅಧಿಕೃತಗೊಳಿಸಲಿದ್ದ ಕಾಂಗ್ರೆಸ್‌ನ ಜಂಟಿ ಅಧಿವೇಶನಕ್ಕೂ ಅಡ್ಡಿಪಡಿಸಲು ಅವರು ಯತ್ನಿಸಿದರು.

ಈ ಘಟನೆ ನಡೆದ ಮುಂಜಾನೆಯಷ್ಟೇ ಟ್ರಂಪ್ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿ, ತನ್ನ ಬೆಂಬಲಿಗರನ್ನು ಪ್ರಚೋದಿಸಿ, ದೇಶವನ್ನು ವಾಪಸ್ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಹೇಳಿದ್ದರು. ಸಮಾವೇಶದಲ್ಲಿದ್ದ, ಟ್ರಂಪ್ ತಂಡದ ಅನೇಕರು, ಯುದ್ಧೋನ್ಮಾದದ ಸಂಕೇತಗಳನ್ನು ಬಳಸುತ್ತಾ ’ಕ್ಯಾಪಿಟಲ್‌’ಗೆ  ನುಗ್ಗಲು ಕರೆಕೊಟ್ಟರು. ಉಪಾಧ್ಯಕ್ಷ, ಮೈಕ್ ಪೆನ್ಸ್ ಅವರಿಗೆ ಫಲಿತಾಂಶ ತಡೆ ಹಿಡಿಯುವ ಅಧಿಕಾರ ಇದೆ ಎಂದು ಅವರು ಪದೇಪದೇ ಕರೆಕೊಡುತ್ತಿದ್ದರು.

PC : Business Standard

ಟ್ರಂಪ್ ಜನಸಮೂಹವನ್ನು ಮುನ್ನಡೆಸಲು ಹೋಗುತ್ತಾರೋ ಅಥವಾ ಅವರ ವಿರುದ್ಧ ನಿಲ್ಲುತ್ತಾರೋ ಎಂಬುದು ಆರಂಭದಲ್ಲಿ ಸ್ಪಷ್ಟವಾಗಿರಲಿಲ್ಲ. ಧ್ವಂಸ ನಡೆಸುವವರನ್ನು ಹೊಗಳಿ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲು ಪ್ರಾರಂಭಿಸಿದರು. ಆ ಜನರನ್ನು ಮಹಾನ್ ದೇಶಪ್ರೇಮಿಗಳೆಂದು ಕರೆದು ಶಾಂತಿಯಿಂದ ಮನೆಗೆ ಹೋಗಬೇಕೆಂದು ಹೇಳಿದರು. ಚುನಾವಣಾ ಫಲಿತಾಂಶವನ್ನು ಟೀಕಿಸಿದ ಅವರು, ಚುನಾವಣೆಯನ್ನು ತಮ್ಮಿಂದ ಕಳವು ಮಾಡಲಾಗುತ್ತಿದೆ ಎಂಬ ತಮ್ಮ ಆಪಾದನೆಯನ್ನು ಪುನರುಚ್ಚರಿಸಿದರು. ಡೊನಾಲ್ಡ್ ಟ್ರಂಪ್ ಅವರ ಟ್ವಿಟ್ಟರ್ ಖಾತೆಯನ್ನು ನಂತರ ಅಮಾನತುಗೊಳಿಸಲಾಯಿತು, ಮತ್ತು ಅವರು ಟಿವಿಯ ಮೂಲಕ ಮಾತ್ರ ಸಂವಹನ ನಡೆಸಲು ಸಾಧ್ಯವಾಯಿತು.

ಒತ್ತಡದಲ್ಲಿ, ಬಂಡಾಯವನ್ನು ನಿಗ್ರಹಿಸಲು ಅಮೆರಿಕನ್ ನ್ಯಾಷನಲ್ ಗಾರ್ಡ್‌ಅನ್ನು (ಅಮೆರಿಕನ್ ಸೈನ್ಯದ ಮೀಸಲು ಶಾಖೆ) ಬಳಸಲು ಟ್ರಂಪ್ ಒಪ್ಪಿಕೊಂಡರು. ಈ ಘಟನೆಗಳಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಸೇರಿದಂತೆ 5 ಜನರು ಸಾವನ್ನಪ್ಪಿದ್ದಾರೆ. ದಂಗೆಯ ನಂತರ, ಅಧಿಕಾರದ ವರ್ಗಾವಣೆಯನ್ನು ಟ್ರಂಪ್ ಇನ್ನೂ ವಿರೋಧಿಸಬಹುದೆಂದು ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ. ಅವರ ಅಧಿಕೃತ ಅವಧಿ ಜನವರಿ 19ರಂದು ಕೊನೆಗೊಳ್ಳುತ್ತದೆ.

ಟ್ರಂಪ್ ವಿದ್ಯಮಾನ : ಬಲಪಂಥೀಯ ಫುಡಾರಿತನದ ಬೆಳವಣಿಗೆಯಲ್ಲಿ ಟ್ರಂಪ್ ವಿಶಿಷ್ಟ ಸಂಕೇತವಾಗಿ ಹೊರಹೊಮ್ಮಿದ್ದಾರೆ. ತಮ್ಮಲ್ಲಿ ಯಾವುದೇ ಸತ್ವವಿಲ್ಲದಿದ್ದರೂ ಸಹ, ಕೆಲವು ಸ್ಥಾನಗಳಲ್ಲಿರುವ ಜನರು ಹೆಚ್ಚಿನ ಜನರಲ್ಲಿ ಉತ್ಸಾಹವನ್ನು, ತೀವ್ರ ಆಸಕ್ತಿಯನ್ನು ತುಂಬಲು ಸಶಕ್ತರಾಗಿರುತ್ತಾರೆ. ಬಿಕ್ಕಟ್ಟಿನ ಸಮಯದಲ್ಲಿ, ಅವರ ಅನುಯಾಯಿಗಳು ಯುದ್ಧೋತ್ಸಾಹದಲ್ಲಿ ಅವರನ್ನು ಅನುಸರಿಸಲು ಸಾಧ್ಯವಿದೆ.

ಅವರ ಅನುಯಾಯಿಗಳನ್ನು ಹೊರತುಪಡಿಸಿ, ಎಲ್ಲರಿಗೂ, ಟ್ರಂಪ್ ಹಾಸ್ಯಾಸ್ಪದ ಬೃಹಸ್ಪತಿಯಾಗಿ ಕಾಣಿಸಿಕೊಳ್ಳುತ್ತಾರೆ. ಅಂತಹ ವ್ಯಕ್ತಿಯನ್ನು ಯಾರಾದರೂ ಏಕೆ ಹಿಂಬಾಲಿಸುತ್ತಾರೆ ಎಂಬುದು ಅತಿ ದೊಡ್ಡ ನಿಗೂಢ ಸಂಗತಿಯಂತೆ ಕಾಣುತ್ತದೆ. (ಅವರ ಅನುಯಾಯಿಗಳು ತೋರಿಸಿದ ಭಾವೋದ್ರೇಕಗಳು ಹೇಗೆ ಸಾಧ್ಯ ಎಂಬುದನ್ನು ಸದ್ಯಕ್ಕೆ ಹೊರತುಪಡಿಸಿದರು).

PC : Biography (ನೆಪೋಲಿಯನ್ ಬೊನಪಾರ್ಟೆ)

1848ರಲ್ಲಿ ಕಾರ್ಲ್ ಮಾರ್ಕ್ಸ್ ಯುರೋಪ್‌ಅನ್ನು ಅಧ್ಯಯನ ಮಾಡುತ್ತಿದ್ದರು. ಫ್ರಾನ್ಸ್ ಬಿಕ್ಕಟ್ಟಿನತ್ತ ಸಾಗುತ್ತಿರುವುದನ್ನು ಅವರು ಗಮನಿಸಿದರು. ಆ ಬಿಕ್ಕಟ್ಟಿನಲ್ಲಿ, ಪ್ಯಾರಿಸ್‌ನಲ್ಲಿ ಕಾರ್ಮಿಕರು ಕ್ರಾಂತಿಯನ್ನು ಕೋರುತ್ತಿದ್ದರು. ಆಡಳಿತ ವರ್ಗಗಳು ಸಂಘರ್ಷದಲ್ಲಿದ್ದವು ಮತ್ತು ಅವರಿಗೆ ಸಂಸತ್ತನ್ನು ಜಾರಿಯಲ್ಲಿಟ್ಟು ಮುಂದುವರಿಯಲು ಸಾಧ್ಯವಾಗಲಿಲ್ಲ. ಈ ಸಂಘರ್ಷದಲ್ಲಿ, ಮೂಲ ನೆಪೋಲಿಯನ್ ಬೊನಪಾರ್ಟೆಯ ಸೋದರಳಿಯ ನೆಪೋಲಿಯನ್ ಬೊನಪಾರ್ಟೆ ರಾಜಕೀಯದಲ್ಲಿ ಹೊಸ ಶಕ್ತಿಯಾಗಿ ಹೊರಹೊಮ್ಮಿದರು. ಟ್ರಂಪ್ ಅವರಂತೆಯೇ, ಅವರು ನಯವಂಚಕ, ಅನೈತಿಕ ಮತ್ತು ’ಗಣ್ಯ ಹಿನ್ನೆಲೆಯಿಂದ ಬಂದವರು. ಫ್ರಾನ್ಸ್‌ಅನ್ನು ಶ್ರೇಷ್ಠತೆಗೆ ಮರುಕಳಿಸಲು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಅವ್ಯವಸ್ಥೆಯನ್ನು ಪರಿಹರಿಸುವುದಾಗಿ ಹೇಳಿಕೊಂಡು ಅವರು ಅಧಿಕಾರಕ್ಕೆ ಬಂದರು. ಅಂತಿಮವಾಗಿ, ಅವರು ರಾಜಕೀಯ ದಂಗೆಯನ್ನು ನಡೆಸಿದರು. ಇದು ಅವರನ್ನು ಫ್ರಾನ್ಸ್‌ನ ರಾಜನಾಗಿ ಸ್ಥಾಪಿಸಲು ಕಾರಣವಾಯಿತಷ್ಟೇ. ದಶಕಗಳ ಕಾಲ ಫ್ರಾನ್ಸ್‌ನಲ್ಲಿ ಪ್ರಜಾಪ್ರಭುತ್ವ ಮತ್ತು ಮುಕ್ತ ಮಾಧ್ಯಮ ಕಾಣೆಯಾಯಿತು.

ಒಂದು ದೇಶದ ಗಣ್ಯರು ಇನ್ನು ಮೇಲೇರಲು ಸಾಧ್ಯವಾಗದ ಇಂತಹ ಬಿಕ್ಕಟ್ಟಿನ ಸಮಯದಲ್ಲಿ, ಒಬ್ಬ ವ್ಯಕ್ತಿಯು, ಪ್ರಜಾಪ್ರಭುತ್ವದ ಪ್ರಕ್ರಿಯೆಯ ಬಿಕ್ಕಟ್ಟನ್ನು ಬಗೆಹರಿಸುವ ಭರವಸೆ ನೀಡಿ, ಚರ್ಚೆಯಲ್ಲಿ ತೊಡಗಿಸಿಕೊಳ್ಳಲು ನಿರಾಕರಿಸಿ ಮತ್ತು ಸಂಕೀರ್ಣ ಸಮಸ್ಯೆಗಳಿಲ್ಲದ ಒಂದು ಪ್ರಾಚೀನ ಸಮಯಕ್ಕೆ ಕರೆದೊಯ್ಯಲು ಮುಂದಾಳತ್ವ ವಹಿಸಿ, ರಾಜಕೀಯವಾಗಿ ಮೇಲೇರಬಹುದು ಎಂದು ಮಾರ್ಕ್ಸ್ ಗಮನಿಸಿದ್ದರು. ಇದರ ಜೊತೆಗೆ ಚಿಂತಕರ ಅನುಮಾನ, ಚಿಂತನೆಗಿಂತಲೂ ಕ್ರಮಗಳಿಗೆ ಆದ್ಯತೆ ನೀಡುವುದು ಮತ್ತು ಅಂಚಿನಲ್ಲಿರುವ ದುರ್ಬಲ ಗುಂಪುಗಳನ್ನು ಅಪರಾಧೀಕರಿಸುವುದು ಸಹ ಸೇರಿಕೊಂಡಿರಬಹುದು.

ಅಲ್ಲದೆ ರಾಜಕೀಯವಾಗಿ ಮೇಲೇರುವ ವ್ಯಕ್ತಿಯು ವಿಶೇಷವಾಗಿ ಬುದ್ಧಿವಂತನಾಗಿರದೆ ಇರಬಹುದು ಮತ್ತು ಬಿಕ್ಕಟ್ಟನ್ನು ಕೊನೆಗೊಳಿಸಲು ಅವರು ಕೆಲಸ ಮಾಡದಿರಬಹುದು. ಅಂತಹ ಅನಿಶ್ಚಿತತೆ ಮತ್ತು ಸಂಘರ್ಷದ ಸಮಯದಲ್ಲಿ, ಪ್ರಗತಿಪರ ಶಕ್ತಿಗಳು ಸಹ ನಿವೃತ್ತಿ ಹೊಂದಬಹುದ.

ಅಮೆರಿಕದ ಬಿಕ್ಕಟ್ಟು : ಅಮೆರಿಕದಲ್ಲಿ, ಈ ಸಂಘರ್ಷವು ಬಹಳ ಸಮಯದಿಂದ ಘನೀಭವಿಸುತ್ತಿದೆ. 1970 ದಶಕದಿಂದಲೇ, ಅಮೆರಿಕದ ರಾಜಕೀಯ ವ್ಯವಸ್ಥೆಯು ಆಂತರಿಕ ಸಂಘರ್ಷದಲ್ಲಿ ಸಿಲುಕಿತು. ನವ-ಉದಾರವಾದವು ಸರ್ಕಾರದ ನೀತಿಯ ಮೇಲೆ ಪ್ರಭಾವ ಬೀರಲು ಪ್ರಾರಂಭಿಸಿತು. 1960ರ ದಶಕದ ಜನಪ್ರಿಯ ಹೋರಾಟಗಳಿಂದ ಬಿಳಿಯರ ಶ್ರೇಷ್ಠತೆಯ ಪ್ರಾಬಲ್ಯವನ್ನು ಸೋಲಿಸಲಾಯಿತು. ರಾಜಕೀಯ ವ್ಯವಸ್ಥೆಯು ಮೊದಲಿನಂತೆ ಕೃಷಿ ಮತ್ತು ಕೈಗಾರಿಕೆಗಳ ನಡುವಿನ ಸಂಘರ್ಷವನ್ನು ಅವಲಂಬಿಸಲಾರದೆ ಹೋಯಿತು. ಇದರ ಫಲವಾಗಿ, ಅಮೆರಿಕಾದ ರಾಜಕೀಯದಲ್ಲಿ ಹೊಸ ವಿಭಜನೆ ಉಂಟಾಗಿ, ಅದು ಸಂಪ್ರದಾಯದ ಪರವಾದ ಮತ್ತು ಬದಲಾವಣೆಯ ಪರವಾದ ಭಾಗವಾಗಿ ಒಡೆಯಿತು.

ಇದಕ್ಕೆ ಕ್ರಮವಾಗಿ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳು ಅಲೈನ್ ಆದವು. ಹಳೆಯ ಕೃಷಿ ಪ್ರದೇಶಗಳು ಸಾಂಪ್ರದಾಯಿಕ ಮೌಲ್ಯಗಳೊಂದಿಗೆ ಗುರುತಿಸಿಕೊಂಡರೆ, ಕೈಗಾರಿಕೀಕರಣಗೊಂಡ ವಲಯಗಳು ಕೆಲವು ಮಾರ್ಪಾಡುಗಳೊಂದಿಗೆ ಬದಲಾವಣೆಯೊಂದಿಗೆ ಗುರುತಿಸಿಕೊಂಡವು. ಇವೆರಡೂ ಅತಿ ಹೆಚ್ಚೇ ಎಂಬುವಷ್ಟು ವ್ಯಾಪಾರದ ಪರವಾದವು, ಆದರೆ ವಿಭಿನ್ನ ರೀತಿಯಲ್ಲಿ. ವರ್ಣಭೇದ ನೀತಿ ಮತ್ತು ಬಡತನದ ವಿರುದ್ಧದ ಹೋರಾಟಗಳು ಡೆಮಾಕ್ರಟಿಕ್ ಪಕ್ಷದೊಂದಿಗೆ ಗುರುತಿಸಿಕೊಂಡರೆ, ರಿಪಬ್ಲಿಕನ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದು, ಧರ್ಮ, ಫೆಡರಲಿಸಂ ಮತ್ತು ಸಂವಿಧಾನಗಳ ಮೂಲ-ಉದ್ದೇಶದ ಅರ್ಥ ಸೇರಿದಂತೆ ಸಾಂಪ್ರದಾಯಿಕ ಮೌಲ್ಯಗಳ ಹೋರಾಟಗಳು.

ಈ ಎರಡೂ ಬದಿಗಳ ನಡುವೆ ವೈರತ್ವದ ತೀವ್ರತೆ ಬೆಳೆಯಿತು. 2008ರಲ್ಲಿ, ಷೇರು ಮಾರುಕಟ್ಟೆ ಕುಸಿತದೊಂದಿಗೆ, ಅಮೆರಿಕದ ವ್ಯವಸ್ಥೆಯು ಅಸ್ಥಿರವಾದ ಬಿಕ್ಕಟ್ಟಿನಲ್ಲಿ ಸಿಲುಕಿತು. ಅಮೆರಿಕವನ್ನು ಉಳಿಸಬಲ್ಲ ಅತೀಂದ್ರಿಯ ವ್ಯಕ್ತಿತ್ವದ ಹುಡುಕಾಟವು ಶ್ರದ್ಧೆಯಿಂದ ಪ್ರಾರಂಭವಾಯಿತು. ಪ್ರಜಾಪ್ರಭುತ್ವ ಪ್ರಕ್ರಿಯೆಯ ಅಸ್ತವ್ಯಸ್ತತೆಯನ್ನು ಕೊನೆಗಾಣಿಸುವ ಮತ್ತು ಅದನ್ನು ಉತ್ತಮ ಮಾರ್ಗಕ್ಕೆ ಬದಲಾಯಿಸುವ ಯಾರಾದರೂ ಅವರಿಗೆ ಅಗತ್ಯವಿತ್ತು. ಈ ವ್ಯಕ್ತಿಯು ಬಳಿ ಸರಳ ಸಂದೇಶ ಇತ್ತು ಮತ್ತು ಅದು ಅಮೆರಿಕವನ್ನು ಶ್ರೇಷ್ಠನನ್ನಾಗಿ ಮಾಡುತ್ತೇನೆ ಎಂಬುದಾಗಿತ್ತು. ಆ ವ್ಯಕ್ತಿ ಬರಾಕ್ ಒಬಾಮ. ಒಬಾಮಾ ಅವರು ವರ್ಚಸ್ವಿ ವ್ಯಕ್ತಿತ್ವ ಹೊಂದಿದ್ದರು ಮತ್ತು ಅಮೆರಿಕದ ಅಧಿಕಾರವನ್ನು ಮತ್ತು ಸ್ಥಾನಮಾನದ ಬಗ್ಗೆ ಗೌರವ ಇರಿಸಿಕೊಂಡು ಮುನ್ನಡೆಸಬಲ್ಲವರಾಗಿದ್ದರು. ಅಧಿಕಾರದಲ್ಲಿದ್ದರೂ, ಅವರು ವೈಯಕ್ತಿಕ ಕಾರ್ಯಸೂಚಿಯನ್ನು ಹೊಂದಿದ್ದಂತೆ ಕಾಣುತ್ತಿರಲಿಲ್ಲ ಮತ್ತು ಅಸ್ತಿತ್ವದಲ್ಲಿರುವ ವ್ಯವಸ್ಥೆಯಲ್ಲಿ ಅವರ ಅಧಿಕಾರ ಬೆರೆತುಹೋಯಿತು. ಆದ್ದರಿಂದ ಅವರು ಅಮೆರಿಕಾದ ಪ್ರಜಾಪ್ರಭುತ್ವದ ಬಿಕ್ಕಟ್ಟನ್ನು ಪರಿಹರಿಸಲಿಲ್ಲ, ಮತ್ತು ಅವರ ಅಂತಿಮ ಅಧ್ಯಕ್ಷೀಯ ಅವಧಿಯ ಕೊನೆಯಲ್ಲಿ, ಅವರನ್ನು ಅಧಿಕಾರಕ್ಕೆ ತಂದ ಸಮಸ್ಯೆಗಳು ಗಮನಹರಿಸದೆ ಉಳಿದಿದ್ದವು.

ಅಮೆರಿಕದ ರಾಜಕೀಯದ ಎರಡೂ ಬದಿಗಳು ಬಿಕ್ಕಟ್ಟಿನಲ್ಲಿದ್ದಾಗ ಡೊನಾಲ್ಡ್ ಟ್ರಂಪ್ ಮೇಲೇರಿದರು. ಡೆಮಾಕ್ರಟಿಕ್ ಪಕ್ಷವು ಬದಲಾವಣೆಯ ಭರವಸೆಯನ್ನು ನೀಡುವ ಸ್ಥಿತಿಯಲ್ಲಿ ಇರಲಿಲ್ಲ. ರಿಪಬ್ಲಿಕನ್‌ನ ಸಂಪ್ರದಾಯವಾದಿ ಪರ ವೇದಿಕೆ ಖಾಲಿಯಾಗಿ ಕಾಣಲಾರಂಭಿಸಿತು. ಬದಲಾಗುತ್ತಿರುವ ಜನಾಂಗೀಯ ಸಂಯೋಜನೆಗಳು, ಸಂವಿಧಾನದ ಅನ್ವಯಗಳು ಮತ್ತು ಭಯೋತ್ಪಾದನೆ ವಿರುದ್ಧದ ಯುದ್ಧದಿಂದ ಪ್ರಾರಂಭವಾಗಿ ಬೆಳೆಯುತ್ತಿದ್ದ ಕೇಂದ್ರೀಕರಣ ಸೇರಿದಂತೆ ಹಲವು ಬದಲಾವಣೆಗಳು ಎರಡೂ ಕಡೆಯವರನ್ನು ರಾಜಕೀಯವಾಗಿ ದಿವಾಳಿಯಾಗಿಸಿದವು.

PC : People.com

ಡೊನಾಲ್ಡ್ ಟ್ರಂಪ್ ನಿಜವಾದ ’ಬದಲಾವಣೆ’ಯಾಗಿ ಬಂದರು. ಅವರು ವೃತ್ತಿ ರಾಜಕಾರಣಿಯಾಗಿರಲಿಲ್ಲ, ಆದರೆ ಅವರು ರಾಜಕಾರಣಿಗಳನ್ನು ಚೆನ್ನಾಗಿ ಬಲ್ಲವರಾಗಿದ್ದರು. ಅವರು ಸೂಕ್ಷ್ಮತೆ ಮತ್ತು ಸಮಗ್ರತೆಯ ಬಗ್ಗೆ ತಲೆಕೆಡಿಸಿಕೊಳ್ಳದೆ, ಜನರು ಕೇಳಲು ಬಯಸಿದ್ದನ್ನು ಮಾತನಾಡಿದರು. ಟ್ವಿಟ್ಟರ್‌ಅನ್ನು ವೇದಿಕೆಯಾಗಿ ಬಳಸಿಕೊಂಡು, ಅವರು ತಮ್ಮ ಬೆಂಬಲಿಗ ಸಮುದಾಯದ ಜೊತೆಗೆ “ನೇರ-ಮಾತುಕತೆ”ಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಯಿತು. ಅವರು ಸಾಂಪ್ರದಾಯಿಕತೆಯ ಪರವಾದ ಸಂದೇಶವನ್ನು ಒತ್ತಿ ಹೇಳಿದರು ಮತ್ತು ಅಮೆರಿಕವನ್ನು ಮತ್ತೆ ಶ್ರೇಷ್ಠ ದೇಶವನ್ನಾಗಿ ಮಾಡುವ ಭರವಸೆ ನೀಡುವ ಮೂಲಕ ಅದರ ವಿರೋಧಾಭಾಸಗಳನ್ನು ಕಡಿತಗೊಳಿಸಿದರು.

ಅಂದಿನಿಂದ, ಬಲಪಂಥೀಯ ಪ್ರಕಾರದಲ್ಲಿ ಹಲವು ಹೊಸ ರೂಪಗಳು ಹುಟ್ಟಿಕೊಂಡಿವೆ. ಈ ಬಲಪಂಥೀಯ ಗುಂಪುಗಳು ತಮ್ಮ ಸಮಾಜದಲ್ಲಿ ಕಾಣುವ ವಿಭಿನ್ನ ರೀತಿಯ ಬದಲಾವಣೆಗಳ ವಿರುದ್ಧ ಹೋರಾಡುತ್ತವೆ. ಇದು ಸ್ತ್ರೀವಾದ ಇರಬಹುದು ಅಥವಾ ವರ್ಣಭೇದ ವಿರೋಧಿ ನೀತಿ ಇರಬಹುದು. ಅವರು ಅಂತರ್ಜಾಲದ ಮೂಲಕ ಸಂಘಟಿತರಾಗಿದ್ದಾರೆ, ಭಾವೋದ್ರಿಕ್ತ ಅನುಯಾಯಿಗಳ ಜಾಲಗಳನ್ನು ರಚಿಸುತ್ತಾರೆ, ಅವರು ಈಗ ಇಂಟರ್ನೆಟ್ ಟ್ರೋಲ್‌ಗಳಿಂದ ಸಂಘಟಿತ ಸೇನಾಪಡೆಗಳಾಗಿ ವಿಕಸನಗೊಂಡಿದ್ದಾರೆ. ಈ ಗುಂಪುಗಳು ಒಗ್ಗಟ್ಟಾಗಿ ಜನವರಿ 6ರಂದು ಅಮೆರಿಕನ್ ಕ್ಯಾಪಿಟಲ್ ಮುತ್ತಿಗೆಯನ್ನು ಮುನ್ನಡೆಸಿದ್ದು.

ಟಿಟ್ಟರ್ ಮತ್ತು ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳು, ಈಗ ಟ್ರಂಪ್‌ನನ್ನು ನಿಷೇಧಿಸಿರುವುದು, ಅಮೆರಿಕದ ವ್ಯಾಪಾರಿ ಗಣ್ಯರು ಟ್ರಂಪ್ ಅಧ್ಯಕ್ಷತೆ ವಿರುದ್ಧ ಕೊನೆಗೆ ತಿರುಗಿಬಿದ್ದಿರುವುದನ್ನು ತೋರಿಸುತ್ತದೆ, ಆದರೆ ಅವರು ರಾಜಕೀಯದಲ್ಲಿ ಮೇಲೇರಲು ಕಾರಣವಾದ ಮೂಲ ಸಮಸ್ಯೆಗಳು ಹಾಗೆಯೇ ಉಳಿದಿವೆ. ಟ್ರಂಪ್ ಹಿಂತಿರುಗಬಹುದು, ಅಥವಾ ವ್ಯವಸ್ಥೆಯ ಅಗತ್ಯತೆಗಳನ್ನು ಮನಗಂಡು ಉತ್ತಮವಾಗಿ ನಿಭಾಯಿಸುವ ಭರವಸೆ ನೀಡುವ ಮತ್ತೊಬ್ಬ ವರ್ಚಸ್ವಿ ನಾಯಕ ಉದ್ಭವಿಸಬಹುದು.

(ಕನ್ನಡಕ್ಕೆ ): ಮಲ್ಲನಗೌಡರ್

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.


ಇದನ್ನೂ ಓದಿ: ‘2 ಬಾರಿ ಮಹಾಭಿಯೋಗ’ – ಅಮೆರಿಕ ಇತಿಹಾಸದಲ್ಲಿ ಕಪ್ಪುಚುಕ್ಕೆಯಾದ ಟ್ರಂಪ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...