Homeನ್ಯಾಯ ಪಥನ್ಯಾಯಮೂರ್ತಿ ಬೊಬ್ಡೆ ಅವಧಿಯಲ್ಲಿ ಸಂವಿಧಾನವನ್ನು ಕಾಯುವ ತನ್ನ ಪಾತ್ರವನ್ನುಸುಪ್ರೀಂ ಯಶಸ್ವಿಯಾಗಿ ನಿರ್ವಹಿಸಿತೇ?

ನ್ಯಾಯಮೂರ್ತಿ ಬೊಬ್ಡೆ ಅವಧಿಯಲ್ಲಿ ಸಂವಿಧಾನವನ್ನು ಕಾಯುವ ತನ್ನ ಪಾತ್ರವನ್ನುಸುಪ್ರೀಂ ಯಶಸ್ವಿಯಾಗಿ ನಿರ್ವಹಿಸಿತೇ?

- Advertisement -
- Advertisement -

ಭಾರತದ ಸುಪ್ರೀಂಕೋರ್ಟಿನ 47ನೇ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಅವರ ಅಧಿಕಾರಾವಧಿಯು ಹದಿನೇಳು ಪ್ರಕ್ಷುಬ್ಧ ತಿಂಗಳುಗಳನ್ನು ವ್ಯಾಪಿಸಿತ್ತು. ಈ ಅವಧಿಯಲ್ಲಿ ದೇಶವು ತೀವ್ರ ಕೋವಿಡ್ ಬಿಕ್ಕಟ್ಟನಿಂದ ಬಳಲುತ್ತಿತ್ತು ಮತ್ತು ದೇಶಾದ್ಯಂತ ತಮ್ಮ ಅಭಿವ್ಯಕ್ತಿ ಮತ್ತು ಭಾಷಣ ಮಾಡುವ ಹಕ್ಕನ್ನು ಚಲಾಯಿಸಿದ ಸಾವಿರಾರು ಜನರನ್ನು ವಿವೇಚನಾರಹಿತವಾಗಿ ನಿರಾಕಾರಣವಾಗಿ ಬಂಧನಕ್ಕೆ ಒಳಪಡಿಸಲಾಯಿತು. ಈ ಬಿಕ್ಕಟ್ಟಿನ ಸಮಯದಲ್ಲಿ, ಕಾರ್ಯಾಂಗವು ತನ್ನ ಸಾಂವಿಧಾನಿಕ ಜವಾಬ್ದಾರಿಯನ್ನು ಪೂರೈಸಲು ಕಾರ್ಯನಿರ್ವಹಿಸುವಂತೆ ಮಾಡಲು ಮತ್ತು ಕಾರ್ಯಾಂಗದ ಕ್ರಮಗಳು ಸಂವಿಧಾನದ ಮಿತಿಗಳನ್ನು ಉಲ್ಲಂಘಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸುಪ್ರೀಂಕೋರ್ಟ್ ಮೊರೆ ಹೋಗಲಾಯಿತು.

ಬೊಬ್ಡೆ ಅವರ ಅಡಿಯಲ್ಲಿ ನ್ಯಾಯಾಲಯ ಹೇಗೆ ಕಾರ್ಯ ನಿರ್ವಹಿಸಿತು?

ಸುಪ್ರೀಂಕೋರ್ಟ್ ಮಾಜಿ ನ್ಯಾಯಮೂರ್ತಿ ಲೋಕೂರ್ ಅವರು ಹೇಳಿದಂತೆ, ತೀವ್ರ ಕಠಿಣ ಮತ್ತು ಯೋಜಿತವಲ್ಲದ ಲಾಕ್‌ಡೌನ್‌ನಿಂದ ಹುಟ್ಟಿದ ಹಿಂದೆಂದೂ ಕಂಡಿರದ ವಲಸೆ ಬಿಕ್ಕಟ್ಟಿಗೆ ಸಮಯೋಚಿತವಾಗಿ ಪ್ರತಿಕ್ರಿಯಿಸಲಾಗದ ಅಸಮರ್ಥತೆಗಾಗಿ ನ್ಯಾಯಾಲಯಕ್ಕೆ ’ಎಫ್ ಗ್ರೇಡ್ ನೀಡಬೇಕು ಎಂದಿದ್ದರು. ನ್ಯಾಯಮೂರ್ತಿ ಗೋಪಾಲ್ ಗೌಡ ಅವರು ವಲಸೆ ಬಿಕ್ಕಟ್ಟಿನ ಬಗ್ಗೆ ಸರ್ಕಾರದ ಪ್ರತಿಕ್ರಿಯೆಯನ್ನು ’ಸರ್ವೋಚ್ಚ ವೈಫಲ್ಯದ ಉದಾಹರಣೆ ಮತ್ತು ಏನೂ ಕ್ರಮ ಕೈಗೊಳ್ಳದ ನ್ಯಾಯಾಲಯದ ನಡೆಯನ್ನು ತುರ್ತು ಪರಿಸ್ಥಿತಿಯ ಸಮಯದಲ್ಲಿ ಸುಪ್ರೀಂಕೋರ್ಟ್‌ನ ವೈಫಲ್ಯಕ್ಕೆ ಹೋಲಿಸಿದ್ದಾರೆ.

ಸಾಂವಿಧಾನಿಕ ಚೌಕಟ್ಟಿಗೆ ಮೂಲಭೂತವಾಗಿ ಸವಾಲೆಸೆದ ಕಾರ್ಯಾಂಗದ ಕ್ರಮಗಳಿಗೆ ಬಂದಾಗ, ಅದು ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡದ ಸಾಂವಿಧಾನಿಕ ಭರವಸೆಯನ್ನು ಚೂರುಚೂರು ಮಾಡಿದ ಸಿಎಎ ಆಗಿರಬಹುದು, ಅಥವಾ ಅದು ಒಕ್ಕೂಟ ತತ್ವವನ್ನು ತುಳಿದುಹಾಕಿದ 370ನೇ ವಿಧಿಯ ಏಕಪಕ್ಷೀಯ ರದ್ದುಗೊಳಿಸುವಿಕೆಯಿರಬಹುದು, ಇಂತಹ ಸಂದರ್ಭಗಳಲ್ಲಿ ನ್ಯಾಯಾಲಯವು ಮೌನವನ್ನು ಆಯ್ಕೆ ಮಾಡಿಕೊಂಡಿತು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಮುಖ್ಯ ನ್ಯಾಯಮೂರ್ತಿಯಾಗಿದ್ದ ಬೊಬ್ಡೆ ನೇತೃತ್ವದ ಸುಪ್ರೀಂಕೋರ್ಟ್‌ನ ಪ್ರಮುಖ ಸಮಸ್ಯೆ ಎಂದರೆ, ಸಂವಿಧಾನದ ಮೇಲೆಯೇ ಸವಾರಿ ಮಾಡುವ ಕಾರ್ಯಾಂಗದ ಕ್ರಮಗಳನ್ನು ಪ್ರಶ್ನಿಸಲು ಹೆದರಬೇಕಿಲ್ಲದ ಸುಪ್ರೀಂಕೋರ್ಟ್ ಸಾಂವಿಧಾನಿಕ ನ್ಯಾಯಾಲಯದ ಪಾತ್ರವನ್ನು ನಿರ್ವಹಿಸಲು ಸಂಪೂರ್ಣವಾಗಿ ನಿರಾಕರಿಸಿದ್ದು. ಕಾರ್ಯಾಂಗದ ದುರಹಂಕಾರದ ವಿರುದ್ಧ ನಾಗರಿಕರ ಪರವಾಗಿ ನಿಲ್ಲಲು ಹೆದರದ ದೇಶದ ಸ್ವತಂತ್ರ ಅಂಗವಾಗಿ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಘನತೆ ಮುಖ್ಯ ನ್ಯಾಯಮೂರ್ತಿ ಬೊಬ್ಡೆ ಅವರ ಅಧಿಕಾರಾವಧಿಯಲ್ಲಿ ತೀವ್ರವಾಗಿ ಕುಬ್ಜಗೊಂಡಿತು. ಸಾಂವಿಧಾನಿಕ ತಜ್ಞ ಗೌತಮ್ ಭಾಟಿಯಾ ಅವರು ಈ ಕುರಿತು ತೀವ್ರ ವಿಮರ್ಶೆ ಮಾಡುತ್ತ, ಬೊಬ್ಡೆ ಅವರ ಅಧಿಕಾರಾವಧಿಯನ್ನು ’ಸಿಂಹಾಸನದ ಕೆಳಗಿರುವ ಇಲಿ, ಅದು ಕೆಲವೊಮ್ಮೆ ಕೀರಲು ಧ್ವನಿಯಲ್ಲಿ ಶಬ್ದ ಮಾಡುತ್ತದೆ ಮತ್ತು ರಾಜನಿಗಿಂತಲೂ ಮುಂಚೆ ಬರುವ ಯಾರೊಬ್ಬನ ಕಾಲ್ಬೆರಳುಗಳನ್ನು ಕಚ್ಚಲು ಕೆಲವೊಮ್ಮೆ ಮುಂದಾಗುತ್ತದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ. ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರೇಖಾ ಶರ್ಮಾ ಅವರು, ನ್ಯಾಯಮೂರ್ತಿ ಬೊಬ್ಡೆ ಅವರು ’ಕಾಲದ ಮರಳಿನ ಮೇಲೆ ಹೆಜ್ಜೆ ಗುರುತುಗಳು ಮೂಡದಂತೆ ನಿರ್ಗಮಿಸಿದ್ದಾರೆ’ ಎಂದು ಹೇಳಿದ್ದಾರೆ.

24.04.2021 ರಂದು ಮುಖ್ಯ ನ್ಯಾಯಮೂರ್ತಿ ರಮಣ ಅವರು ಭಾರತದ 48ನೇ ಮುಖ್ಯ ನ್ಯಾಯಮೂರ್ತಿಯಾಗಿ ’ಭಾರತದ ಸಂವಿಧಾನಕ್ಕೆ ನಿಜವಾದ ನಂಬಿಕೆ ಮತ್ತು ನಿಷ್ಠೆಯನ್ನು ಹೊಂದುವುದಾಗಿ’ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ರಮಣ ಅವರು ಸರ್ಕಾರದ ಇತರ ಎರಡು ಶಾಖೆಗಳು ಸಂವಿಧಾನದ ದಿಕ್ಸೂಚಿಯೊಳಗೆ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊಂದಿದ್ದಾರೆ.

ಹತ್ರಾಸ್ ಪ್ರಕರಣದಲ್ಲಿ ಜಾಮೀನಿನ ಬಗ್ಗೆ ವರದಿ ಮಾಡಲು ಪ್ರಯತ್ನಿಸಿದ ಧೈರ್ಯದ ಕೆಲಸಕ್ಕಾಗಿ ಸಿದ್ದಿಕಿ ಕಪ್ಪನ್ ಅವರನ್ನು ಬಂಧಿಸಿದ ಮತ್ತು ಹಿಂಸಿಸಿದಂತಹ ಪ್ರಕರಣಗಳು ಮತ್ತು ಕಾರ್ಯಾಂಗದ ಇತರ ಅತಿರೇಕದ ಉಲ್ಲಂಘನೆಗಳ ಬಗ್ಗೆ ನ್ಯಾಯಾಂಗ ಗಮನ ಹರಿಸಿ, ತಮ್ಮ ಹೃದಯ ಸಂವಿಧಾನಕ್ಕಾಗಿ ಮಿಡಿಯುತ್ತದೆ ಎಂದು ಮುಖ್ಯ ನ್ಯಾಯಮೂರ್ತಿಗಳು ತೋರಿಸಬೇಕಿದೆ. ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಹದಿನಾರು ಆರೋಪಿಗಳ ವಿರುದ್ಧದ ಸಾಕ್ಷ್ಯವನ್ನು, ಆರೋಪಿಗಳಲ್ಲಿ ಒಬ್ಬರಾದ ರೋನಾ ವಿಲ್ಸನ್ ಅವರ ಕಂಪ್ಯೂಟರ್‌ಗೆ ಅಕ್ರಮವಾಗಿ ಸೇರಿಸಲಾಗಿದೆ ಎಂಬ ಇತ್ತೀಚಿನ ತನಿಖಾ ವರದಿಗಳನ್ನು ಈ ಪ್ರಕರಣವನ್ನು ಆಲಿಸುತ್ತಿರುವ ನ್ಯಾಯಪೀಠ ಗಮನಿಸುವಂತೆ ’ಮಾಸ್ಟರ್ ಆಫ್ ದಿ ರೋಸ್ಟರ್’ ಆಗಿರುವ ಮುಖ್ಯ ನ್ಯಾಯಮೂರ್ತಿಗಳು ಖಚಿತಪಡಿಸಬೇಕು. ಸಾವಿರಾರು ಆರೋಪಿಗಳು ಜಾಮೀನು ಇಲ್ಲದೆ ಮತ್ತು ವಿಚಾರಣೆಯ ನಿರೀಕ್ಷೆಯಿಲ್ಲದೆ ಯುಎಪಿಎ ಅಡಿಯಲ್ಲಿ ಬಂಧಿಸಲ್ಪಟ್ಟಿರುವ ತೀವ್ರ ಅನ್ಯಾಯದ ಸನ್ನಿವೇಶಕ್ಕೆ ಭೀಮಾ ಕೋರೆಗಾಂವ್ ಪ್ರಕರಣವು ಸಾಂಕೇತಿಕವಾಗಿದೆ.

ಯೂನಿಯನ್ ಆಫ್ ಇಂಡಿಯಾ ವರ್ಸಸ್ ಕೆ.ಎ. ನಜೀಬ್ ಪ್ರಕರಣದಲ್ಲಿ ಮೂವರು ನ್ಯಾಯಾಧೀಶರ ನ್ಯಾಯಪೀಠವು (ಇದರಲ್ಲಿ ನ್ಯಾಯಮೂರ್ತಿ ರಮಣ ಕೂಡ ಇದ್ದರು) ಯುಎಪಿಎ ಅಡಿಯಲ್ಲಿ ಗಂಭೀರವಾದ ಆರೋಪ/ಅಪರಾಧಗಳನ್ನು ದಾಖಲಿಸಿದ್ದರು ಸಹ, ’ಸಮಂಜಸವಾದ ಸಮಯದೊಳಗೆ ವಿಚಾರಣೆ ಪೂರ್ಣಗೊಳ್ಳುವ ಸಾಧ್ಯತೆ ಇಲ್ಲದಿದ್ದರೆ ಮತ್ತು ಅದಕ್ಕೆ ನೀಡಲಾಗುವ ಶಿಕ್ಷೆಯ ಅವಧಿಯ ಬಹುಭಾಗವನ್ನು ಈಗಾಗಲೇ ಜೈಲುವಾಸದಲ್ಲಿ ಕಳೆದಿದ್ದರೆ’ ಜಾಮೀನು ನೀಡಬಹುದು ಎಂದು ತೀರ್ಪು ನೀಡಿತ್ತು. ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಬರೆದಿರುವ ಈ ತೀರ್ಪಿನಲ್ಲಿ, (ನ್ಯಾಯಮೂರ್ತಿ ರಮಣ ಅವರು ನ್ಯಾಯಪೀಠದಲ್ಲಿದ್ದರು), ಕೇವಲ ಅಭಿವ್ಯಕ್ತಿ ಸಾತಂತ್ರ್ಯದಡಿ ಮಾತನಾಡಿದ್ದಕ್ಕೆ ವಿಚಾರಣೆಯಿಲ್ಲದೆ, ಅಸಂವಿಧಾನಿಕ ಬಂಧನಗಳನ್ನು ಮಾಡುವ ಕಾರ್ಯಾಂಗದ ನೀತಿಯನ್ನು ನ್ಯಾಯಾಲಯವು ಪರಾಮರ್ಶಿಸಲಿದೆ ಎಂದದ್ದು ಭರವಸೆಯ ಹೊಳಪನ್ನು ಮೂಡಿಸಿತ್ತು ಮತ್ತು ಹೊಸ ನ್ಯಾಯದಾನ ವ್ಯವಸ್ಥೆಯನ್ನು ಉಚ್ಚರಿಸಲು ಪ್ರಾರಂಭವಾಗಿತ್ತು. ಮತ್ತು ಈಗ ಮುಖ್ಯ ನ್ಯಾಯಮೂರ್ತಿ ರಮಣ ಅವರ ಪ್ರಮಾಣವಚನದ ಪ್ರಕಾರ, ’ಸಂವಿಧಾನಕ್ಕೆ ನಿಜವಾದ ನಂಬಿಕೆ ಮತ್ತು ನಿಷ್ಠೆ’ಯನ್ನು ಒಳಗೊಳ್ಳುವುದಕ್ಕೆ ಪ್ರಾರಂಭವಾಗಿದೆ.

ಅಂತೆಯೇ, ಸುಪ್ರೀಂಕೋರ್ಟ್ ಗಂಭೀರ ಸಾಂವಿಧಾನಿಕ ಪ್ರಾಮುಖ್ಯತೆಯ ಇತರ ವಿಷಯಗಳ (ಅದು ಸಿಎಎ, ಆರ್ಟಿಕಲ್ 370 ಅಥವಾ ಹಲವಾರು ಬಾಕಿ ಉಳಿದಿರುವ ಹೇಬಿಯಸ್ ಕಾರ್ಪಸ್ ಅರ್ಜಿಗಳು ಮತ್ತು ಜಾಮೀನು ಅರ್ಜಿಗಳು ಆಗಿರಬಹುದು) ವಿಚಾರಣೆ ನಡೆಸುವ ಮೂಲಕ ಮತ್ತು ಕಾರ್ಯಾಂಗದ ಬೆದರಿಕೆಗಳ ಮತ್ತು ಬೆಣ್ಣೆಸವರುವುದರ ವಿರುದ್ಧ ’ಸಂವಿಧಾನದ ರಕ್ಷಕ’ ಪಾತ್ರವನ್ನು ಗಟ್ಟಿಯಾಗಿ ಪ್ರತಿಪಾದಿಸುವುದಕ್ಕೆ ಸುಪ್ರೀಂಕೋರ್ಟ್ ಮತ್ತೆ ಪ್ರಾರಂಭಿಸುತ್ತದೆ ಎಂದು ಆಶಿಸೋಣ.

ಭಾರತದ ಪ್ರಜೆಗಳಾಗಿ ನಮ್ಮಲ್ಲಿ ಉಳಿದಿರುವುದು ಭರವಸೆಯೊಂದೇ. ಕಾಶ್ಮೀರದಲ್ಲಿ ಅಂತರ್ಜಾಲ ಮತ್ತು ಸಂಪರ್ಕಗಳನ್ನು ಸ್ಥಗಿತಗೊಳಿಸಿದ ಪ್ರಕರಣದ ತೀರ್ಪನ್ನು ಅಂದಿನ ನ್ಯಾಯಮೂರ್ತಿ ರಮಣ ಅವರೇ ಬರೆದಿದ್ದರು ಎಂಬುದನ್ನು ಮರೆಯುವಂತಿಲ್ಲ. ’ರಾಷ್ಟ್ರೀಯ ಭದ್ರತೆ’ ಹೆಸರಲ್ಲಿ ಇಡೀ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಅಂತರ್ಜಾಲವನ್ನು ಸ್ಥಗಿತಗೊಳಿಸಿದ್ದು ಒಂದು ’ಅಸಮಾನ’ ಪ್ರತಿಕ್ರಿಯೆಯಾಗಿತ್ತು ಎಂದು ಆ ತೀರ್ಪು ಹೇಳಿದರೂ ಯಾವುದೇ ಪರಿಹಾರವನ್ನು ನೀಡಲಿಲ್ಲ. ನ್ಯಾಯಾಲಯವು ಅಂತರ್ಜಾಲ ಅಮಾನತು ಆದೇಶಗಳನ್ನು ಪರಿಶೀಲಿಸುವ ಕಾರ್ಯವನ್ನು ಸರ್ಕಾರಿ ಅಧಿಕಾರಿಗಳಿಗೆ ಹೊರಗುತ್ತಿಗೆ ನೀಡಿತು. ಆ ಮೂಲಕ ಸಂವಿಧಾನದ ಮಿತಿಯಲ್ಲಿ ಕಾರ್ಯಾಂಗದ ಕಾರ್ಯಗಳು ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ನ್ಯಾಯಾಲಯ ತ್ಯಜಿಸಿತ್ತು.

ಅದೇನೇ ಇದ್ದರೂ, 48ನೇ ಮುಖ್ಯ ನ್ಯಾಯಮೂರ್ತಿಗಳಲ್ಲಿ ನಾವು ಹೊಂದಿರುವ ಆಶಯವೆಂದರೆ, ಅವರು ’ಭಾರತದ ಸಂವಿಧಾನಕ್ಕೆ ನಿಜವಾದ ನಂಬಿಕೆ ಮತ್ತು ನಿಷ್ಠೆಯನ್ನು ಹೊಂದುವುದು’ ಎಂಬ ತಮ್ಮ ಪ್ರಮಾಣವಚನಕ್ಕೆ ಬದ್ಧರಾಗಿರುತ್ತಾರೆ ಎಂಬುದು. ಮುಖ್ಯ ನ್ಯಾಯಮೂರ್ತಿ ರಮಣ ಅವರಿಂದ ಇದಕ್ಕಿಂತ ಹೆಚ್ಚಿನದೇನನ್ನೂ ಅಥವಾ ಕಡಿಮೆಯದ್ದೇನನ್ನೂ ನಾವು ನಿರೀಕ್ಷೆ ಮಾಡುತ್ತಿಲ್ಲ.

ಅರವಿಂದ್ ನಾರಾಯಣ್
ಸಂವಿಧಾನ ತಜ್ಞರು, ಪರ್ಯಾಯ ಕಾನೂನು ವೇದಿಕೆ (ಎಎಲ್‌ಎಫ್‌ನ) ಸ್ಥಾಪಕ ಸದಸ್ಯರು
(ಕನ್ನಡಕ್ಕೆ: ಪಿ.ಕೆ. ಮಲ್ಲನಗೌಡರ್)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...