Homeಅಂಕಣಗಳುಭಾರತ Self-sufficient ಆಗುವುದು ಹೇಗೆ? : ಎಚ್.ಎಸ್ ದೊರೆಸ್ವಾಮಿ

ಭಾರತ Self-sufficient ಆಗುವುದು ಹೇಗೆ? : ಎಚ್.ಎಸ್ ದೊರೆಸ್ವಾಮಿ

ನಾವು Self-sufficient ಆಗಬೇಕು ನಿಜ. ಆದರೆ ಆತ್ಮನಿರ್ಭರದ ಘೋಷಣೆ ಕೂಗುವ ಮೊದಲು ನಮ್ಮ ಈಗಿನ ಅವಶ್ಯಕತೆಗಳ ಕೊರತೆ ಎಷ್ಟು ಎಂಬುದನ್ನು ಸರ್ಕಾರ ಮೊದಲು ಆಲೋಚನೆ ಮಾಡಬೇಕು.

- Advertisement -
- Advertisement -

ನರೇಂದ್ರ ಮೋದಿಯವರು Slogan mongering ನಲ್ಲಿ ನಿಸ್ಸೀಮರು. ಘೋಷಣೆಗಳ ಮಾರಾಟ ಸಂಸ್ಥೆ ನಡೆಸುವಷ್ಟು ಪ್ರಚಂಡರು.

ದೇಶದ ಮುಂದಿರುವ ಆರ್ಥಿಕ ಸವಾಲುಗಳನ್ನು ಎದುರಿಸಲು ಬೇಕಾದ Road Map ಅವರಲ್ಲಿಲ್ಲ. ಭಾರತ ತನ್ನ ಅಗತ್ಯತೆಗಳಿಗೆ ಪರಾವಲಂಬಿಯಾಗುವುದು ನಡೆದೇ ಇದೆ. ಅದಕ್ಕೆ ಪರಿಹಾರ ಕಂಡು ಹಿಡಿದುಕೊಳ್ಳುವ ಮಾರ್ಗಗಳನ್ನು ಅನ್ವೇಷಣೆ ಮಾಡದೆ ಬರೀ ಘೋಷಣೆ ಮಾಡಿದರೆ ಉದ್ಗಾರಗಳನ್ನು ತೆಗೆದರೆ ಏನು ಪ್ರಯೋಜನ?

ನಾವು Self-sufficient ಆಗಬೇಕು ನಿಜ. ಆದರೆ ಆತ್ಮನಿರ್ಭರದ ಘೋಷಣೆ ಕೂಗುವ ಮೊದಲು ನಮ್ಮ ಈಗಿನ ಅವಶ್ಯಕತೆಗಳ ಕೊರತೆ ಎಷ್ಟು ಎಂಬುದನ್ನು ಸರ್ಕಾರ ಮೊದಲು ಆಲೋಚನೆ ಮಾಡಬೇಕು. ಭಾರತದಲ್ಲಿ ಸೂರ್ಯನ ಶಾಖವನ್ನು ಬಳಸಿಕೊಂಡು ವಿದ್ಯುತ್ತನ್ನು ಪಡೆಯಲು ಅವಕಾಶವಿದೆ. ಅದಕ್ಕೆ ಬೇಕಾದ Solar Module ಭಾರತದಲ್ಲಿ ತಯಾರಾಗುತ್ತಿಲ್ಲ. 2018ರಲ್ಲಿ ಸೂರ್ಯನ ಶಾಖೋತ್ಪತ್ತಿ ಕೇಂದ್ರಕ್ಕೆ 2.59 ಬಿಲಿಯನ್ ಡಾಲರ್ ಬೆಲೆ ತೆತ್ತು ಬಿಡಿಭಾಗಗಳನ್ನು ಆಮದು ಮಾಡಿಕೊಂಡರೆ, ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಅದರ ಬಿಡಿಭಾಗಗಳ ಆಮದಿಗಾಗಿ 60 ಬಿಲಿಯನ್ ಡಾಲರ್ ತೆತ್ತಿದೆ. ಮೊಬೈಲ್ ಫೋನ್‍ಗಳ ಶೇ 88ರಷ್ಟು ಬಿಡಿಭಾಗಗಳನ್ನು ನಾವು ಚೈನಾ ಮುಂತಾದ ಕಡೆಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ರಾಸಾಯನಿಕ ಗೊಬ್ಬರ ತಯಾರಿಕೆಯಲ್ಲೂ ನಮ್ಮ ದೇಶ ಸ್ವಾವಲಂಬಿಯಾಗಿಲ್ಲ. ಭಾರತ ತನ್ನ ಆಹಾರಧಾನ್ಯ ಉತ್ಪತ್ತಿಗೆ ಬೇಕಾದ ರಸಗೊಬ್ಬರದ 2/3 ರಷ್ಟನ್ನು ಆಮದು ಮಾಡಿಕೊಳ್ಳುತ್ತಿದೆ. ಡಾಲ್ಡಾ ಮೊದಲಾದ ವನಸ್ಪತಿ ಆಮದು ಮಾಡಿಕೊಳ್ಳುವುದರಲ್ಲಿ ಭಾರತ ಮೊದಲನೆಯ ಸ್ಥಾನದಲ್ಲಿದೆ. ಪ್ರಪಂಚದಲ್ಲಿ ಕಲ್ಲಿದ್ದಲು ಉತ್ಪಾದನೆಯಲ್ಲಿ 4ನೇ ಸ್ಥಾನದಲ್ಲಿರುವ ಭಾರತ 2018-19ರಲ್ಲಿ 247 ಮಿಲಿಯನ್ ಟನ್ ಕಲ್ಲಿದ್ದಲನ್ನು ಆಮದು ಮಾಡಿಕೊಂಡಿದೆ. ಅಲ್ಲದೆ ನಮ್ಮ ಕಲ್ಲಿದ್ದಲು ಗಣಿಗಳನ್ನೆಲ್ಲ ಹರಾಜು ಹಾಕಿ ಖಾಸಗಿಯವರಿಗೆ ನೀಡಿ, ಸರ್ಕಾರ ಪರದೇಶಗಳಿಂದ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುವ ತೀರ್ಮಾನ ಮಾಡಿದೆ. ಟೆಲಿಕಾಂ ವಿಭಾಗವನ್ನು ವೀಕ್ಷಿಸಿದಾಗ ಅದು ತನಗೆ ಬೇಕಾದ ಯಾವ ಬಿಡಿ ಭಾಗವನ್ನು ತಯಾರಿಸಲಾಗುತ್ತಿಲ್ಲ. ರಿಲಾಯನ್ಸ್ ಮತ್ತು ಜಿಯೋ ಬಳಸುತ್ತಿರುವ 4ಜಿ ತರಂಗ ತಂತ್ರಜ್ಞಾನ ಸಾಧನೆಗಳನ್ನು ಸ್ಯಾಮ್‍ಸಂಗ್ ಪೂರೈಸುತ್ತದೆ.

ಪರದೇಶಗಳಿಂದ ಮೇಲೆ ಹೇಳಿದ ನಮ್ಮ ಅನುದಿನದ ಬಳಕೆಯ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುವ ಸ್ಥಿತಿಯಲ್ಲಿರುವಾಗ ಮೋದಿ ಅವರು ನಮ್ಮ ದೇಶದ ಉದ್ಯಮಗಳಿಗೆ, ನೀವು ಆತ್ಮನಿರ್ಭರರಾಗಿ ಎಂದು ಉಪದೇಶ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತೆ ಇದೆ. ಎಲ್ಲಕ್ಕಿಂತ ಮುಖ್ಯವಾದದ್ದು ಎಂದರೆ ದೇಶದ ರಕ್ಷಣೆ. ಆದರೆ ದೇಶದ ರಕ್ಷಣೆ ವಿಚಾರಕ್ಕೆ ಬಂದರೆ ಸೈನ್ಯಕ್ಕೆ ಬೇಕಾದ ಬಹುಮಟ್ಟಿನ ಆಯುಧಗಳಿಗೆ ನಾವು ಪರದೇಶಗಳನ್ನೇ ಅವಲಂಬನೆ ಮಾಡಿದ್ದೇವೆ. ಪರಿಸ್ಥಿತಿ ಇಷ್ಟು ಬಿಗಡಾಯಿಸಿದ್ದರೂ ಮೋದಿಯವರು ಆತ್ಮನಿರ್ಭರತೆಯ ಮಾತನ್ನಾಡುತ್ತಾರೆ. ಮೋದಿಯವರ ಮಾತಿಗೂ ಕೃತಿಗೂ ಅಜಗಜಾಂತರ.

ಬರೀ Slogan ಗಳನ್ನು ಹಾಕುತ್ತಾ ಕಾರ್ಖಾನೆಗಳ ಮಾಲೀಕರಿಗೆ ನೀವು Self-sufficient ಆಗಿ ಎಂದು ಬೋಧಿಸುವ ಮೋದಿ ಅವರು ಜವಾಬ್ದಾರಿಯುತವಾದ ಪ್ರಧಾನಿ ಸ್ಥಾನಕ್ಕೆ ಅರ್ಹರೇ ಎಂದು ಕೇಳಬೇಕೆನಿಸುತ್ತದೆ. ಎಲ್ಲ ಉದ್ಯಮಗಳು ತನ್ನ ಎಲ್ಲ ಸಲಕರಣೆಗಳಿಗೂ ಅನ್ಯ ದೇಶವನ್ನು ಅವಲಂಬಿಸುವ ಸನ್ನಿವೇಶವನ್ನು ಸೃಷ್ಟಿಮಾಡಿ ನೀವು ಸ್ವಾವಲಂಬಿಗಳಾಗಿ ಎಂದು ಹೇಳುವುದು ಪ್ರಧಾನಿಗಳಿಗೆ ಭೂಷಣವಲ್ಲ. ಯಾವುದೇ ಉದ್ಯೋಗ ನಡೆಯಬೇಕಾದರೆ ಅದಕ್ಕಾಗಿ ಬಳಸುವ ಯಂತ್ರಗಳು, ಉಪಕರಣಗಳು ಬೇಕು. ಈ ಯಂತ್ರಗಳು ಮತ್ತು ಉಪಕರಣಗಳೇ ಭಾರತದಲ್ಲಿ ತಯಾರಾಗುತ್ತಿಲ್ಲವೆಂದ ಮೇಲೆ, ಸ್ವಾವಲಂಬಿಯಾಗುವುದು ಹೇಗೆ? ಯಂತ್ರ ತಯಾರಿಕೆ ಅಥವಾ ಅದರ ಬಿಡಿಭಾಗಗಳ ಉತ್ಪನ್ನ ಭಾರತದಲ್ಲೇ ಆಗಬೇಕಾದರೆ R & D ಅಂದರೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯನ್ನು ಮೊದಲು ಸ್ಥಾಪಿಸಬೇಕು. ಈ ಸಂಶೋಧನಾ ಸಂಸ್ಥೆಗೆ ಸೂಕ್ತ ಜನ ಬೇಕು, ಅಪಾರ ಹಣ ಅದಕ್ಕೆ ಸುರಿಯಬೇಕು, ಭಾರತದಲ್ಲಿ ಅಂತಹ ಸಂಸ್ಥೆ ಇಲ್ಲ ಎಂದು ನಾನು ಹೇಳುತ್ತಿಲ್ಲ. ಆ ಸಂಸ್ಥೆ ಇದ್ದು ಏಕೆ ನಾವು ಗುರುತರವಾದ ಉತ್ಪನ್ನಗಳನ್ನು ಸೃಷ್ಟಿ ಮಾಡುವುದರಲ್ಲಿ ಸೋತಿದ್ದೇವೆ ಎಂಬುದನ್ನು ಕುರಿತು ವಿಚಾರಣೆ ಮಾಡಬೇಕು.

ಭಾರತ ಜಿಡಿಪಿಯಲ್ಲಿ ಶೇ 0.7ರಷ್ಟು ಹಣವನ್ನು R & D ಮೇಲೆ ಖರ್ಚು ಮಾಡುತ್ತಿದೆ. ಆದರೆ ಇಸ್ರೇಲ್ ಜಿಡಿಪಿಯ ಶೇ 4.4, ಜರ್ಮನಿ ಶೇ 3, ಅಮೆರಿಕ ಶೇ 2.8, ಕೆನಡಾ ಶೇ 1.6 ಖರ್ಚು ಮಾಡುತ್ತಿವೆ.

ಭಾರತ ಉನ್ನತ ಶಿಕ್ಷಣಕ್ಕೆ ಬಜೆಟ್‍ನಲ್ಲಿ ನೀಡುವ ಹಣದ ಶೇ 3.8ರಷ್ಟನ್ನು ಮಾತ್ರ ಖ & ಆ ಗೆ ಬಳಸಲಾಗುತ್ತಿದೆ. ಚೈನಾದಲ್ಲಿ ಶೇ 7, ಅಮೆರಿಕದಲ್ಲಿ ಶೇ 13, ಜರ್ಮನಿಯಲ್ಲಿ ಶೇ 17, ಪ್ರಾನ್ಸ್‍ನಲ್ಲಿ ಶೇ 20, ಆಸ್ಟ್ರೇಲಿಯಾದಲ್ಲಿ ಶೇ 31 ಮತ್ತು ಕೆನಡಾದಲ್ಲಿ ಶೇ 41ರಷ್ಟು R & D ಮೇಲೆ ಬಳಸಲಾಗುತ್ತದೆ. ಯುವಕರಲ್ಲಿ ಸಂಶೋಧನೆಯ ಮನೋಭಾವವನ್ನು ಬೆಳೆಸಿ ಅವರಿಂದ ನಮ್ಮ ಮುಂದಿರುವ ಸವಾಲುಗಳಿಗೆ ಪರಿಹಾರವನ್ನು ಕಂಡುಹಿಡಿಯಲು ಪ್ರೋತ್ಸಾಹ ನೀಡುವುದು ಸರ್ಕಾರದ ಆದ್ಯ ಕರ್ತವ್ಯ. ಪ್ರಯೋಗಗಳನ್ನು ಮಾಡಲು ಅವಕಾಶ ಮಾಡಿಕೊಟ್ಟು, ಆ ಪ್ರಯೋಗಕ್ಕೆ ತಗಲುವ ವೆಚ್ಚವನ್ನು ಸರ್ಕಾರ ಭರಿಸುವುದು ಅತ್ಯಗತ್ಯ. ಈ ಸಂಶೋಧನೆಗಳ ಮೂಲಕ ಆತ್ಮನಿರ್ಭರ ಭಾರತವನ್ನು ಸೃಷ್ಟಿಸುವುದು ಸಾಧ್ಯವಾದೀತು. ಈ ದಿಶೆಯಲ್ಲಿ ಮೋದಿ ಸರ್ಕಾರ ಆಲೋಚನೆ ಮಾಡಬೇಕು. ಅದು ಬಿಟ್ಟು ಉದ್ಯಮ ನಡೆಸುವವರನ್ನು ಮಾರ್ಗೋಪಾಯ ಹುಡುಕಿ ಎಂದು ಹೇಳುವುದು ಸಮಂಜಸವಲ್ಲ. ಉದ್ಯಮಿಗಳು ಏನಿದ್ದರೂ ಜಾಲ್ತಿಯಲ್ಲಿರುವ ತಂತ್ರಜ್ಞಾನವನ್ನು ಬಳಸುವವರೇ ಹೊರತು ಹೊಸ ತಂತ್ರಜ್ಞಾನವನ್ನು ಸೃಷ್ಠಿಸಲಾರರು. ಈ ವಿಚಾರದಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗದಿದ್ದರೆ ಮೋದಿಯವರ ಈ ಸ್ಲೋಗನ್ ಕೂಡ ಅವರ ಇತರ ಸ್ಲೋಗನ್‍ನಂತೆಯೇ ಬರೀ ಕಂಠಘೋಷಣೆಯಾಗುತ್ತದೆ.

ಈ ಲೇಖನ ಓದಿದ ಮತದಾರರಿಗೆ ಏನನಿಸುತ್ತದೆ? ಭಾರತ ಸರ್ಕಾರ ಸಂಪೂರ್ಣವಾಗಿ ಪರದೇಶಗಳನ್ನೇ ಅವಲಂಬಿಸಿ ಕೂತಿರುವಾಗ ಮೋದಿಯವರು ಸ್ವಾವಲಂಬನೆ ಉಪದೇಶವನ್ನು ನಮ್ಮ ಕೈಗಾರಿಕೆಗಳಿಗೆ ಹೇಳಿ ಜನಸಾಮಾನ್ಯರಿಗೆ ಪ್ರಚಾರ ಮಾಡಲು ಹೊರಟಿರುವುದು ಅವರ ಆಷಾಢಭೂತಿತನವನ್ನು ತೋರುವುದಿಲ್ಲವೇ? ಆಡುವುದೊಂದು ಮಾಡುವುದೊಂದು ಸರ್ಕಾರಕ್ಕೆ ಭೂಷಣವೇ? ಮೊದಲು ಮೋದಿಯವರು ಉಳಿದಿರುವ ಅಧಿಕಾರಾವಧಿಯೊಳಗೆ ಯಂತ್ರಗಳನ್ನೂ, ಅದರ ಬಿಡಿಭಾಗಗಳನ್ನೂ ಭಾರತದಲ್ಲಿ ತಯಾರಿಸಲು ಎಲ್ಲ ಪ್ರಯತ್ನಿಸುತ್ತೇವೆ ಎಂದು ಘೋಷಣೆ ಮಾಡಿ ಎಂದು ಮತದಾರರೆಲ್ಲ ಒಕ್ಕೊರಲಿನಿಂದ ಕೂಗು ಹಾಕಿ. ಈ ಜವಾಬ್ದಾರಿಯನ್ನು ಮೋದಿ ಸರ್ಕಾರ ನಿರ್ವಹಿಸುವಲ್ಲಿ ವಿಫಲವಾದರೆ ನಮ್ಮ ಮತ ಭಾಜಪಗಿಲ್ಲ ಎಂದು ಘೋಷಣೆ ಮಾಡಿ.


ಇದನ್ನು ಓದಿ: ಪ್ರಶಾಂತ್ ಭೂಷಣ್ ಪರ ನಿಂತ 8ಕ್ಕೂ ಹೆಚ್ಚು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಾಧೀಶರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...