Homeಅಂಕಣಗಳುಭಾರತ Self-sufficient ಆಗುವುದು ಹೇಗೆ? : ಎಚ್.ಎಸ್ ದೊರೆಸ್ವಾಮಿ

ಭಾರತ Self-sufficient ಆಗುವುದು ಹೇಗೆ? : ಎಚ್.ಎಸ್ ದೊರೆಸ್ವಾಮಿ

ನಾವು Self-sufficient ಆಗಬೇಕು ನಿಜ. ಆದರೆ ಆತ್ಮನಿರ್ಭರದ ಘೋಷಣೆ ಕೂಗುವ ಮೊದಲು ನಮ್ಮ ಈಗಿನ ಅವಶ್ಯಕತೆಗಳ ಕೊರತೆ ಎಷ್ಟು ಎಂಬುದನ್ನು ಸರ್ಕಾರ ಮೊದಲು ಆಲೋಚನೆ ಮಾಡಬೇಕು.

- Advertisement -
- Advertisement -

ನರೇಂದ್ರ ಮೋದಿಯವರು Slogan mongering ನಲ್ಲಿ ನಿಸ್ಸೀಮರು. ಘೋಷಣೆಗಳ ಮಾರಾಟ ಸಂಸ್ಥೆ ನಡೆಸುವಷ್ಟು ಪ್ರಚಂಡರು.

ದೇಶದ ಮುಂದಿರುವ ಆರ್ಥಿಕ ಸವಾಲುಗಳನ್ನು ಎದುರಿಸಲು ಬೇಕಾದ Road Map ಅವರಲ್ಲಿಲ್ಲ. ಭಾರತ ತನ್ನ ಅಗತ್ಯತೆಗಳಿಗೆ ಪರಾವಲಂಬಿಯಾಗುವುದು ನಡೆದೇ ಇದೆ. ಅದಕ್ಕೆ ಪರಿಹಾರ ಕಂಡು ಹಿಡಿದುಕೊಳ್ಳುವ ಮಾರ್ಗಗಳನ್ನು ಅನ್ವೇಷಣೆ ಮಾಡದೆ ಬರೀ ಘೋಷಣೆ ಮಾಡಿದರೆ ಉದ್ಗಾರಗಳನ್ನು ತೆಗೆದರೆ ಏನು ಪ್ರಯೋಜನ?

ನಾವು Self-sufficient ಆಗಬೇಕು ನಿಜ. ಆದರೆ ಆತ್ಮನಿರ್ಭರದ ಘೋಷಣೆ ಕೂಗುವ ಮೊದಲು ನಮ್ಮ ಈಗಿನ ಅವಶ್ಯಕತೆಗಳ ಕೊರತೆ ಎಷ್ಟು ಎಂಬುದನ್ನು ಸರ್ಕಾರ ಮೊದಲು ಆಲೋಚನೆ ಮಾಡಬೇಕು. ಭಾರತದಲ್ಲಿ ಸೂರ್ಯನ ಶಾಖವನ್ನು ಬಳಸಿಕೊಂಡು ವಿದ್ಯುತ್ತನ್ನು ಪಡೆಯಲು ಅವಕಾಶವಿದೆ. ಅದಕ್ಕೆ ಬೇಕಾದ Solar Module ಭಾರತದಲ್ಲಿ ತಯಾರಾಗುತ್ತಿಲ್ಲ. 2018ರಲ್ಲಿ ಸೂರ್ಯನ ಶಾಖೋತ್ಪತ್ತಿ ಕೇಂದ್ರಕ್ಕೆ 2.59 ಬಿಲಿಯನ್ ಡಾಲರ್ ಬೆಲೆ ತೆತ್ತು ಬಿಡಿಭಾಗಗಳನ್ನು ಆಮದು ಮಾಡಿಕೊಂಡರೆ, ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಅದರ ಬಿಡಿಭಾಗಗಳ ಆಮದಿಗಾಗಿ 60 ಬಿಲಿಯನ್ ಡಾಲರ್ ತೆತ್ತಿದೆ. ಮೊಬೈಲ್ ಫೋನ್‍ಗಳ ಶೇ 88ರಷ್ಟು ಬಿಡಿಭಾಗಗಳನ್ನು ನಾವು ಚೈನಾ ಮುಂತಾದ ಕಡೆಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ರಾಸಾಯನಿಕ ಗೊಬ್ಬರ ತಯಾರಿಕೆಯಲ್ಲೂ ನಮ್ಮ ದೇಶ ಸ್ವಾವಲಂಬಿಯಾಗಿಲ್ಲ. ಭಾರತ ತನ್ನ ಆಹಾರಧಾನ್ಯ ಉತ್ಪತ್ತಿಗೆ ಬೇಕಾದ ರಸಗೊಬ್ಬರದ 2/3 ರಷ್ಟನ್ನು ಆಮದು ಮಾಡಿಕೊಳ್ಳುತ್ತಿದೆ. ಡಾಲ್ಡಾ ಮೊದಲಾದ ವನಸ್ಪತಿ ಆಮದು ಮಾಡಿಕೊಳ್ಳುವುದರಲ್ಲಿ ಭಾರತ ಮೊದಲನೆಯ ಸ್ಥಾನದಲ್ಲಿದೆ. ಪ್ರಪಂಚದಲ್ಲಿ ಕಲ್ಲಿದ್ದಲು ಉತ್ಪಾದನೆಯಲ್ಲಿ 4ನೇ ಸ್ಥಾನದಲ್ಲಿರುವ ಭಾರತ 2018-19ರಲ್ಲಿ 247 ಮಿಲಿಯನ್ ಟನ್ ಕಲ್ಲಿದ್ದಲನ್ನು ಆಮದು ಮಾಡಿಕೊಂಡಿದೆ. ಅಲ್ಲದೆ ನಮ್ಮ ಕಲ್ಲಿದ್ದಲು ಗಣಿಗಳನ್ನೆಲ್ಲ ಹರಾಜು ಹಾಕಿ ಖಾಸಗಿಯವರಿಗೆ ನೀಡಿ, ಸರ್ಕಾರ ಪರದೇಶಗಳಿಂದ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುವ ತೀರ್ಮಾನ ಮಾಡಿದೆ. ಟೆಲಿಕಾಂ ವಿಭಾಗವನ್ನು ವೀಕ್ಷಿಸಿದಾಗ ಅದು ತನಗೆ ಬೇಕಾದ ಯಾವ ಬಿಡಿ ಭಾಗವನ್ನು ತಯಾರಿಸಲಾಗುತ್ತಿಲ್ಲ. ರಿಲಾಯನ್ಸ್ ಮತ್ತು ಜಿಯೋ ಬಳಸುತ್ತಿರುವ 4ಜಿ ತರಂಗ ತಂತ್ರಜ್ಞಾನ ಸಾಧನೆಗಳನ್ನು ಸ್ಯಾಮ್‍ಸಂಗ್ ಪೂರೈಸುತ್ತದೆ.

ಪರದೇಶಗಳಿಂದ ಮೇಲೆ ಹೇಳಿದ ನಮ್ಮ ಅನುದಿನದ ಬಳಕೆಯ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುವ ಸ್ಥಿತಿಯಲ್ಲಿರುವಾಗ ಮೋದಿ ಅವರು ನಮ್ಮ ದೇಶದ ಉದ್ಯಮಗಳಿಗೆ, ನೀವು ಆತ್ಮನಿರ್ಭರರಾಗಿ ಎಂದು ಉಪದೇಶ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತೆ ಇದೆ. ಎಲ್ಲಕ್ಕಿಂತ ಮುಖ್ಯವಾದದ್ದು ಎಂದರೆ ದೇಶದ ರಕ್ಷಣೆ. ಆದರೆ ದೇಶದ ರಕ್ಷಣೆ ವಿಚಾರಕ್ಕೆ ಬಂದರೆ ಸೈನ್ಯಕ್ಕೆ ಬೇಕಾದ ಬಹುಮಟ್ಟಿನ ಆಯುಧಗಳಿಗೆ ನಾವು ಪರದೇಶಗಳನ್ನೇ ಅವಲಂಬನೆ ಮಾಡಿದ್ದೇವೆ. ಪರಿಸ್ಥಿತಿ ಇಷ್ಟು ಬಿಗಡಾಯಿಸಿದ್ದರೂ ಮೋದಿಯವರು ಆತ್ಮನಿರ್ಭರತೆಯ ಮಾತನ್ನಾಡುತ್ತಾರೆ. ಮೋದಿಯವರ ಮಾತಿಗೂ ಕೃತಿಗೂ ಅಜಗಜಾಂತರ.

ಬರೀ Slogan ಗಳನ್ನು ಹಾಕುತ್ತಾ ಕಾರ್ಖಾನೆಗಳ ಮಾಲೀಕರಿಗೆ ನೀವು Self-sufficient ಆಗಿ ಎಂದು ಬೋಧಿಸುವ ಮೋದಿ ಅವರು ಜವಾಬ್ದಾರಿಯುತವಾದ ಪ್ರಧಾನಿ ಸ್ಥಾನಕ್ಕೆ ಅರ್ಹರೇ ಎಂದು ಕೇಳಬೇಕೆನಿಸುತ್ತದೆ. ಎಲ್ಲ ಉದ್ಯಮಗಳು ತನ್ನ ಎಲ್ಲ ಸಲಕರಣೆಗಳಿಗೂ ಅನ್ಯ ದೇಶವನ್ನು ಅವಲಂಬಿಸುವ ಸನ್ನಿವೇಶವನ್ನು ಸೃಷ್ಟಿಮಾಡಿ ನೀವು ಸ್ವಾವಲಂಬಿಗಳಾಗಿ ಎಂದು ಹೇಳುವುದು ಪ್ರಧಾನಿಗಳಿಗೆ ಭೂಷಣವಲ್ಲ. ಯಾವುದೇ ಉದ್ಯೋಗ ನಡೆಯಬೇಕಾದರೆ ಅದಕ್ಕಾಗಿ ಬಳಸುವ ಯಂತ್ರಗಳು, ಉಪಕರಣಗಳು ಬೇಕು. ಈ ಯಂತ್ರಗಳು ಮತ್ತು ಉಪಕರಣಗಳೇ ಭಾರತದಲ್ಲಿ ತಯಾರಾಗುತ್ತಿಲ್ಲವೆಂದ ಮೇಲೆ, ಸ್ವಾವಲಂಬಿಯಾಗುವುದು ಹೇಗೆ? ಯಂತ್ರ ತಯಾರಿಕೆ ಅಥವಾ ಅದರ ಬಿಡಿಭಾಗಗಳ ಉತ್ಪನ್ನ ಭಾರತದಲ್ಲೇ ಆಗಬೇಕಾದರೆ R & D ಅಂದರೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯನ್ನು ಮೊದಲು ಸ್ಥಾಪಿಸಬೇಕು. ಈ ಸಂಶೋಧನಾ ಸಂಸ್ಥೆಗೆ ಸೂಕ್ತ ಜನ ಬೇಕು, ಅಪಾರ ಹಣ ಅದಕ್ಕೆ ಸುರಿಯಬೇಕು, ಭಾರತದಲ್ಲಿ ಅಂತಹ ಸಂಸ್ಥೆ ಇಲ್ಲ ಎಂದು ನಾನು ಹೇಳುತ್ತಿಲ್ಲ. ಆ ಸಂಸ್ಥೆ ಇದ್ದು ಏಕೆ ನಾವು ಗುರುತರವಾದ ಉತ್ಪನ್ನಗಳನ್ನು ಸೃಷ್ಟಿ ಮಾಡುವುದರಲ್ಲಿ ಸೋತಿದ್ದೇವೆ ಎಂಬುದನ್ನು ಕುರಿತು ವಿಚಾರಣೆ ಮಾಡಬೇಕು.

ಭಾರತ ಜಿಡಿಪಿಯಲ್ಲಿ ಶೇ 0.7ರಷ್ಟು ಹಣವನ್ನು R & D ಮೇಲೆ ಖರ್ಚು ಮಾಡುತ್ತಿದೆ. ಆದರೆ ಇಸ್ರೇಲ್ ಜಿಡಿಪಿಯ ಶೇ 4.4, ಜರ್ಮನಿ ಶೇ 3, ಅಮೆರಿಕ ಶೇ 2.8, ಕೆನಡಾ ಶೇ 1.6 ಖರ್ಚು ಮಾಡುತ್ತಿವೆ.

ಭಾರತ ಉನ್ನತ ಶಿಕ್ಷಣಕ್ಕೆ ಬಜೆಟ್‍ನಲ್ಲಿ ನೀಡುವ ಹಣದ ಶೇ 3.8ರಷ್ಟನ್ನು ಮಾತ್ರ ಖ & ಆ ಗೆ ಬಳಸಲಾಗುತ್ತಿದೆ. ಚೈನಾದಲ್ಲಿ ಶೇ 7, ಅಮೆರಿಕದಲ್ಲಿ ಶೇ 13, ಜರ್ಮನಿಯಲ್ಲಿ ಶೇ 17, ಪ್ರಾನ್ಸ್‍ನಲ್ಲಿ ಶೇ 20, ಆಸ್ಟ್ರೇಲಿಯಾದಲ್ಲಿ ಶೇ 31 ಮತ್ತು ಕೆನಡಾದಲ್ಲಿ ಶೇ 41ರಷ್ಟು R & D ಮೇಲೆ ಬಳಸಲಾಗುತ್ತದೆ. ಯುವಕರಲ್ಲಿ ಸಂಶೋಧನೆಯ ಮನೋಭಾವವನ್ನು ಬೆಳೆಸಿ ಅವರಿಂದ ನಮ್ಮ ಮುಂದಿರುವ ಸವಾಲುಗಳಿಗೆ ಪರಿಹಾರವನ್ನು ಕಂಡುಹಿಡಿಯಲು ಪ್ರೋತ್ಸಾಹ ನೀಡುವುದು ಸರ್ಕಾರದ ಆದ್ಯ ಕರ್ತವ್ಯ. ಪ್ರಯೋಗಗಳನ್ನು ಮಾಡಲು ಅವಕಾಶ ಮಾಡಿಕೊಟ್ಟು, ಆ ಪ್ರಯೋಗಕ್ಕೆ ತಗಲುವ ವೆಚ್ಚವನ್ನು ಸರ್ಕಾರ ಭರಿಸುವುದು ಅತ್ಯಗತ್ಯ. ಈ ಸಂಶೋಧನೆಗಳ ಮೂಲಕ ಆತ್ಮನಿರ್ಭರ ಭಾರತವನ್ನು ಸೃಷ್ಟಿಸುವುದು ಸಾಧ್ಯವಾದೀತು. ಈ ದಿಶೆಯಲ್ಲಿ ಮೋದಿ ಸರ್ಕಾರ ಆಲೋಚನೆ ಮಾಡಬೇಕು. ಅದು ಬಿಟ್ಟು ಉದ್ಯಮ ನಡೆಸುವವರನ್ನು ಮಾರ್ಗೋಪಾಯ ಹುಡುಕಿ ಎಂದು ಹೇಳುವುದು ಸಮಂಜಸವಲ್ಲ. ಉದ್ಯಮಿಗಳು ಏನಿದ್ದರೂ ಜಾಲ್ತಿಯಲ್ಲಿರುವ ತಂತ್ರಜ್ಞಾನವನ್ನು ಬಳಸುವವರೇ ಹೊರತು ಹೊಸ ತಂತ್ರಜ್ಞಾನವನ್ನು ಸೃಷ್ಠಿಸಲಾರರು. ಈ ವಿಚಾರದಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗದಿದ್ದರೆ ಮೋದಿಯವರ ಈ ಸ್ಲೋಗನ್ ಕೂಡ ಅವರ ಇತರ ಸ್ಲೋಗನ್‍ನಂತೆಯೇ ಬರೀ ಕಂಠಘೋಷಣೆಯಾಗುತ್ತದೆ.

ಈ ಲೇಖನ ಓದಿದ ಮತದಾರರಿಗೆ ಏನನಿಸುತ್ತದೆ? ಭಾರತ ಸರ್ಕಾರ ಸಂಪೂರ್ಣವಾಗಿ ಪರದೇಶಗಳನ್ನೇ ಅವಲಂಬಿಸಿ ಕೂತಿರುವಾಗ ಮೋದಿಯವರು ಸ್ವಾವಲಂಬನೆ ಉಪದೇಶವನ್ನು ನಮ್ಮ ಕೈಗಾರಿಕೆಗಳಿಗೆ ಹೇಳಿ ಜನಸಾಮಾನ್ಯರಿಗೆ ಪ್ರಚಾರ ಮಾಡಲು ಹೊರಟಿರುವುದು ಅವರ ಆಷಾಢಭೂತಿತನವನ್ನು ತೋರುವುದಿಲ್ಲವೇ? ಆಡುವುದೊಂದು ಮಾಡುವುದೊಂದು ಸರ್ಕಾರಕ್ಕೆ ಭೂಷಣವೇ? ಮೊದಲು ಮೋದಿಯವರು ಉಳಿದಿರುವ ಅಧಿಕಾರಾವಧಿಯೊಳಗೆ ಯಂತ್ರಗಳನ್ನೂ, ಅದರ ಬಿಡಿಭಾಗಗಳನ್ನೂ ಭಾರತದಲ್ಲಿ ತಯಾರಿಸಲು ಎಲ್ಲ ಪ್ರಯತ್ನಿಸುತ್ತೇವೆ ಎಂದು ಘೋಷಣೆ ಮಾಡಿ ಎಂದು ಮತದಾರರೆಲ್ಲ ಒಕ್ಕೊರಲಿನಿಂದ ಕೂಗು ಹಾಕಿ. ಈ ಜವಾಬ್ದಾರಿಯನ್ನು ಮೋದಿ ಸರ್ಕಾರ ನಿರ್ವಹಿಸುವಲ್ಲಿ ವಿಫಲವಾದರೆ ನಮ್ಮ ಮತ ಭಾಜಪಗಿಲ್ಲ ಎಂದು ಘೋಷಣೆ ಮಾಡಿ.


ಇದನ್ನು ಓದಿ: ಪ್ರಶಾಂತ್ ಭೂಷಣ್ ಪರ ನಿಂತ 8ಕ್ಕೂ ಹೆಚ್ಚು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಾಧೀಶರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...