Homeಮುಖಪುಟನಾ ಹ್ಯಾಂಗ ಮರೆಯಲಿ ನಿನ್ನ ಗಾಂಧಿ ತಾತ... : ಮಿಸ್ರಿಯಾ ಐ. ಪಜೀರ್

ನಾ ಹ್ಯಾಂಗ ಮರೆಯಲಿ ನಿನ್ನ ಗಾಂಧಿ ತಾತ… : ಮಿಸ್ರಿಯಾ ಐ. ಪಜೀರ್

- Advertisement -
- Advertisement -

ಭಿನ್ನ ಸಾಮಾಜಿಕ ಮತ್ತು ಪ್ರಾದೇಶಿಕ ಹಿನ್ನೆಲೆಗಳ ಬರಹಗಾರರು ನಮ್ಮಲ್ಲಿ ಬರೆಯಬೇಕೆಂಬುದು ಸಂಪಾದಕೀಯ ತಂಡದ ಎಲ್ಲರ ಅನಿಸಿಕೆ. ಅದರಲ್ಲೂ ಹೊಸತಲೆಮಾರಿನ ಹಲವಾರು ಬರಹಗಾರ್ತಿಯರ ಬರಹಗಳು ಇಲ್ಲಿರಬೇಕು. ಅದಕ್ಕಾಗಿ ಯಾರನ್ನು ಕೇಳಬೇಕೆಂದು ಪಟ್ಟಿ ಮಾಡಲು ಹೋದರೆ, ಪಟ್ಟಿ ಬಹಳ ದೊಡ್ಡದೇ ಆಯಿತು. ಒಬ್ಬರ ಅಂಕಣವನ್ನಷ್ಟೇ ಪ್ರಕಟಿಸಿದರೆ ದೊಡ್ಡ ನಷ್ಟ ಎನಿಸಿತು. ಈಗಲೇ ಪುಟಗಳನ್ನು ಹಿಗ್ಗಿಸುವ ಸಾಧ್ಯತೆಯೂ ಇಲ್ಲ. ಹಾಗಾಗಿ ಪ್ರತಿ ವಾರ ಒಬ್ಬೊಬ್ಬರಿಂದ ಬರೆಸಲು ತೀರ್ಮಾನಿಸಲಾಗಿದೆ. ಇನ್ನು ಮುಂದೆ ಈ ಜಾಗದಲ್ಲಿ ಹೊಸ ಬರಹಗಾರ್ತಿಯರು ಬರೆಯಲಿದ್ದಾರೆ.                                                                                                                    – ಸಂ.

ಸತ್ಯ ನುಡಿಯುವವರನ್ನು, ಗಾಂಧಿ ನಡೆದು ತೋರಿಸಿದ ಅಹಿಂಸಾ ಮಾರ್ಗದಲ್ಲಿ ಹೋರಾಡುವವರನ್ನು ದೇಶದ್ರೋಹಿಗಳನ್ನಾಗಿಯೂ, ಸುಳ್ಳನ್ನೇ ಸತ್ಯವೆಂಬಂತೆ ಬಿಂಬಿಸಿ ಹಿಂಸೆಯನ್ನೇ ಬಂಡವಾಳವಾಗಿಸಿಕೊಂಡವರನ್ನು ದೇಶಭಕ್ತರನ್ನಾಗಿಯೂ ಕಾಣುವ ಈ ದುರಂತ ದಿನಗಳಲ್ಲಿ ಬಾಲ್ಯದಲ್ಲಿ ನನ್ನ ಮನದಾಳದಲ್ಲಿ ಅಚ್ಚೊತ್ತಿದ ಗಾಂಧಿ ತಾತ ಕಾಡತೊಡಗಿದ್ದಾನೆ.

ನಾನು ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವಾಗ ಗಾಂಧೀಜಿಯವರ ಹೆಸರು ಕೇಳದ ದಿನಗಳೇ ಇರಲಿಲ್ಲ. ಮಕ್ಕಳ ಹಾಡಿನ ಮೂಲಕವೋ, ಅಭಿನಯ ಗೀತೆಗಳ ಮೂಲಕವೋ ಒಂದಲ್ಲ ಒಂದು ರೀತಿಯಲ್ಲಿ ಬಾಪೂಜಿಯ ಹೆಸರು ಹೇಳುತ್ತಿದ್ದೆವು. ನಾನು ಗಾಂಧೀಜಿಯ ಕುರಿತಾಗಿ ಕಲಿತ ಮೊದಲ ಹಾಡು “ಗಾಂಧಿ ತಾತ ನನ್ನಜ್ಜ, ಬಗ್ಗಿ ಬಗ್ಗಿ ನಡೆದಿದ್ದ… ಖಾದಿ ಬಟ್ಟೆ ತೊಡುತ್ತಿದ್ದ…” ಈ ಹಾಡಿನಿಂದಾಗಿ ನಮಗಾಗಲೇ ಗಾಂಧಿ ನಮ್ಮವರೆಂಬ ಭಾವನೆ ಮನಸ್ಸಿನಲ್ಲಿ ಮೂಡಿತ್ತು. ನನ್ನ ನಾಲ್ಕರ ಹರೆಯದ ಪುಟ್ಟ ಮಗಳು ಶಹೀಮಳಿಗೂ ಇದೇ ಹಾಡನ್ನು ಹಾಡಿಸುತ್ತೇನೆ.

ಗಾಂಧಿ ಖಾದಿಬಟ್ಟೆಯನ್ನು ಯಾಕೆ ತೊಡುತ್ತಿದ್ದರು ಗೊತ್ತಾ? ಎಂದು ಟೀಚರ್ ಪ್ರಶ್ನೆಯನ್ನು ಕೇಳುತ್ತಿದ್ದರು. ಇಲ್ಲವೆಂದಾಗ, ಅವರು ಅದಕ್ಕೆ ಕೊಡುತ್ತಿದ್ದ ಉತ್ತರವು ಅಷ್ಟೇ ಪರಿಣಾಮಕಾರಿಯಾಗಿರುತ್ತಿತ್ತು. ಬೆಂಚಿನಲ್ಲಿ ನಮ್ಮ ಪಕ್ಕದಲ್ಲೇ ಕುಳಿತಿರುವ ಗೆಳತಿಯರನ್ನು ತೋರಿಸಿ, ಅವಳ ಬಟ್ಟೆಯನ್ನು ನೀನು ತೊಡಲು ಇಷ್ಟಪಡುತ್ತೀಯಾ? ತೊಡಬಾರದೆಂದಲ್ಲ, ಇಷ್ಟಪಡುತ್ತೀಯಾ? ಇಲ್ಲ ತಾನೇ? ಅದೇರೀತಿ ಗಾಂಧೀಜಿಯವರು ಬ್ರಿಟಿಷರು ತಯಾರಿಸಿದ ಬಟ್ಟೆಯನ್ನು ತೊಟ್ಟುಕೊಳ್ಳಲು ಇಷ್ಟಪಡದೇ, ತಾನೇ ಸ್ವತಃ ಚರಕದಿಂದ ನೂಲನ್ನು ನೇಯ್ದು ಹತ್ತಿ ಬಟ್ಟೆ ತಯಾರಿಸುತ್ತಿದ್ದರು ಹಾಗೂ ಇತರರಿಗೂ ಅದನ್ನೇ ಉಡಲು ಉತ್ತೇಜಿಸುತ್ತಿದ್ದರು ಎಂದಾಗ ನಾವು ಪುಳಕಗೊಳ್ಳುತ್ತಿದ್ದೆವು. ಇದು ಬ್ರಿಟಿಷರ ವಿರುದ್ಧದ ಹೋರಾಟ ಎಂಬುವುದನ್ನು ಅರ್ಥೈಸಿಕೊಳ್ಳುವಷ್ಟು ಪ್ರಬುದ್ಧತೆ ನಮಗಾಗ ಇರಲಿಲ್ಲ.

ಗಾಂಧೀಜಿಯ ಕುರಿತಾಗಿ ಹಲವಾರು ಹಾಡುಗಳಿದ್ದವು. ಅವರನ್ನು ನಾನು ಅರಿತದ್ದೇ ಹಾಡಿನ ಮೂಲಕ. ‘ಗಾಂಧೀ ತಾತನ ಆಶ್ರಮದಲ್ಲಿ ಇದ್ದವು ಮೂರು ಕೋತಿಗಳು, ನೀತಿಯ ಸಾರುವ ಕೋತಿಗಳು….’ ಈ ಹಾಡಿಗೆ ನಮ್ಮ ಟೀಚರು ತರಗತಿಯಲ್ಲಿ ಮೂವರನ್ನು ಕೋತಿಗಳನ್ನಾಗಿ ಮಾಡಿ ಕಣ್ಣು, ಕಿವಿ, ಬಾಯಿ ಮುಚ್ಚಿಕೊಳ್ಳಲು ಹೇಳುತ್ತಿದ್ದರು. ಉಳಿದವರೆಲ್ಲಾ ಸೇರಿ ಹಾಡುತ್ತಾ ಅಭಿನಯಿಸುತ್ತಿದ್ದೆವು. ತನ್ಮೂಲಕ ಕೆಟ್ಟದ್ದನ್ನು ಕೇಳಬಾರದು, ನೋಡಬಾರದು, ಆಡಬಾರದು ಎಂಬ ಗಾಂಧೀಜಿಯವರ ಬೋಧನೆಯನ್ನು ಕಲಿತೆವು.

‘ಪುಟ್ಟ ಕೌಮುದಿ, ಹಿಂದೂಸ್ತಾನಕ್ಕೆ ಹಿಂದಿರುಗಿದುದು’ ಎಂಬ ಪಾಠಗಳು ಬರಿಯ ಪಾಠವಾಗಿರದೆ ದೇಶಭಕ್ತನೆಂದರೆ ಗಾಂಧೀಜಿ, ಗಾಂಧೀಜಿಯೆಂದರೆ ದೇಶಭಕ್ತ ಎಂಬಷ್ಟು ಗಾಢವಾಗಿ ನಮ್ಮನ್ನಾವರಿಸಿತ್ತು. ಸ್ವಾತಂತ್ರ್ಯ ದಿನಾಚರಣೆ ಬಂತೆಂದರೆ ಸಾಕು, ಅಂದಿನ ಸಮಾರಂಭಕ್ಕೆ ಅತಿಥಿಗಳಾಗಿ ಬರುತ್ತಿದ್ದ ಗಣ್ಯರ ಬಾಯಲ್ಲೂ ಗಾಂಧೀಜಿ. ಮಕ್ಕಳ ಭಾಷಣದಲ್ಲೂ ಗಾಂಧೀಜಿ. ದೇಶಭಕ್ತಿ ಗೀತೆಯಲ್ಲೂ ಗಾಂಧೀಜಿ.

‘ಇದು ಬಾಪೂಜೀ ಬೆಳಗಿದ ಭಾರತ…’
ಹಾಗೆಯೇ
ಕಾಥೇವಾಡದ ಪೋರಬಂದರಿನಲ್ಲಿ ಜನಿಸಿದರು….
ಮೋಹನದಾಸ ಕರಮಚಂದ ಗಾಂಧಿ ಎಂಬವರು….
ಈ ಹಾಡಿನ ಕೊನೆಯಲ್ಲಿ
ಜನವರಿ ತಿಂಗಳ 30 ರಂದು……
ಇಹವನು ತ್ಯಜಿಸಿದರು.

ನಾಥೂರಾಮನ ಗುಂಡಿಗೆ ಸಿಲುಕಿ ಜಾಗವ ಎದೆಯಲ್ಲಿ ಎಂಬ ಸಾಲುಗಳಿದ್ದವು. ನಮಗೆ ಅದಾಗಲೇ ಗೋಡ್ಸೆಯ ಬಗ್ಗೆ ಮನದಲ್ಲಿ ಅಸಹನೆ ಮೂಡಲಾರಂಭಿಸಿತ್ತು. ಆಶ್ಚರ್ಯವೆಂದರೆ ನಮಗೆ ಇದನ್ನೆಲ್ಲಾ ಕಲಿಸಿದ ಟೀಚರ್ ಬ್ರಾಹ್ಮಣರಾಗಿದ್ದರು. ಅವರು ಯಾವತ್ತೂ ನಮಗೆ ಗಾಂಧೀಜಿಯ ಚಿತ್ರಣವನ್ನು ಕೆಟ್ಟದಾಗಿ ಚಿತ್ರಿಸಿಕೊಡಲಿಲ್ಲ. ಅವರೆಂದರೆ ‘ಮಹಾತ್ಮ’ ಅದರಾಚೆಗೆ ಯಾವುದೇ ಅನ್ಯ ಕಲ್ಪನೆಗಳಿರಲಿಲ್ಲ.

ಆ ಸುಂದರ ದಿನಗಳನ್ನು ಕೇಸರೀಕರಣವು ಅದೆಷ್ಟು ಬೇಗ ಧ್ವಂಸಗೊಳಿಸಿತೆಂದರೆ ನಾ ಕಲಿತ ಹಾಡುಗಳು ಈಗ ಯಾರ ಬಾಯಲ್ಲೂ ಕೇಳಸಿಗುವುದಿಲ್ಲ. ಶಾಲೆಯಲ್ಲಿ ಶಿಕ್ಷಕರೂ ಕೂಡಾ ಗಾಂಧೀಜಿಯ ತತ್ವಾದರ್ಶಗಳನ್ನು ಬೋಧಿಸುವ ಗೋಜಿಗೇ ಹೋಗುವುದಿಲ್ಲ. ಈಗಿನ ಮಕ್ಕಳು ಗಾಂಧೀಜಿಯ ಬಗ್ಗೆ ಬಹಳ ತುಚ್ಛವಾಗಿ ಮಾತನಾಡುವಷ್ಟರಮಟ್ಟಿಗೆ ಅವರ ಮೆದುಳು ತೊಳೆಯಲಾಗುತ್ತಿದೆ.

2 ವರ್ಷಗಳ ಹಿಂದೆ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬ್ರಾಹ್ಮಣ ಹುಡುಗನೊಬ್ಬ ನನ್ನ ಬಳಿಗೆ ಟ್ಯೂಷನ್‍ಗಾಗಿ ಬರುತ್ತಿದ್ದ. ಪ್ರತಿಯೊಂದು ವಿಚಾರಗಳನ್ನು ಪ್ರಶ್ನಿಸುವ ಗುಣ ಆತನಲ್ಲಿತ್ತು. ಇದನ್ನು ಗಮನಿಸಿದ ನಾನು “ನೀನು ವಿಚಾರವಾದಿಯಾಗುತ್ತಿ” ಎಂದಾಗ ಥಟ್ಟನೆ “ವಿಚಾರವಾದಿಯಾಗುವುದಿಲ್ಲ” ಎಂದ. ಆತನ ಪ್ರತಿಕ್ರಿಯೆಗೆ ಅವಾಕ್ಕಾದೆ. ಆತನ ವಯಸ್ಸಿನಲ್ಲಿ ನನಗೆ ವಿಚಾರವಾದಿ ಅಂದ್ರೆ ಏನೆಂದು ತಿಳಿಯುವುದು ಬಿಡಿ, ಆ ಪದವೇ ಗೊತ್ತಿರಲಿಲ್ಲ. ವ್ಯವಸ್ಥಿತವಾಗಿ ಎಳೆ ಮನಸ್ಸಿನೊಳಗೆ ಇದನ್ನೆಲ್ಲಾ ತುಂಬಿಕೊಡಲಾಗುತ್ತದೆ.

ಹೀಗೆ ಒಂದು ದಿನ ಆತ ನನ್ನಲ್ಲಿ ಕೆಲವೊಂದು ಆಘಾತಕಾರಿ ವಿಷಯಗಳನ್ನು ಮಾತಾಡಿದ. “ಅಕ್ಕ, ಗಾಂಧೀಜಿ ಒಳ್ಳೆಯವರೇ, ಕೆಟ್ಟವರೇ?” “ಒಳ್ಳೆಯವರು” ಎಂದೆ. ಇಲ್ಲ, “ಕೆಟ್ಟವರು” ಎಂದ. ಆತ ಯಾತಕ್ಕಾಗಿ ಆ ರೀತಿ ಹೇಳುತ್ತಿದ್ದಾನೆಂದು ತಿಳಿಯಲು ಪ್ರಯತ್ನಿಸಿದೆ. ಚಿನ್ನ ಧರಿಸಬಾರದು ಎಂಬುದಾಗಿ ಗಾಂಧೀಜಿ ಹೇಳಿದ್ದಾರೆಂಬುದು ಆತನಿಂದ ನಾನು ಪಡೆದ ಉತ್ತರವಾಗಿತ್ತು. ನಾನು, ನೀನು ಚಿನ್ನ ಧರಿಸುತ್ತಿಲ್ಲವೇ? ಹಾಗಿದ್ದರೆ ಅವರ್ಯಾಕೆ ನಿನಗೆ ಕೆಟ್ಟವರಾಗಿ ಕಾಣುತ್ತಾರೆ ಎಂದೆ. ಅವರನ್ನೇ ಏಕೆ ರಾಷ್ಟ್ರಪಿತನೆನ್ನಬೇಕು, ಬೇರೆ ಯಾರೂ ಇಲ್ಲವೇ? ಆತ ಮರುಪ್ರಶ್ನೆ ಹಾಕಿದ. ನಿನ್ನ ಪ್ರಕಾರ ಯಾರಾಗಬೇಕಿತ್ತು ಎಂದಾಗ ಮೌನವಾದ. ಸ್ವಲ್ಪ ಹೊತ್ತು ಕಳೆದು “ಅವರು ಕೂಡಾ ಕೊಲೆ ಮಾಡಿದ್ದಾರೆ” ಎಂದ. ಇದನ್ನು ಕೇಳಿಸಿಕೊಂಡ ನನಗೆ ಸಿಟ್ಟು ತಡೆಯಲಾಗಲಿಲ್ಲ. ಗಾಂಧಿ ಕೊಲೆಗಾರನಲ್ಲ, ಗಾಂಧಿಯನ್ನು ಗುಂಡಿಕ್ಕಿ ಕೊಂದ ಗೋಡ್ಸೆ ಕೊಲೆಗಾರ. ಆತನೊಬ್ಬ ದೇಶದ್ರೋಹಿ. ನಿನ್ನ ಪ್ರಕಾರ ಆತ ರಾಷ್ಟ್ರಪಿತನಾಗಬೇಕಿತ್ತು ತಾನೇ? ಎಂದು ಖಾರವಾಗಿಯೇ ಕೇಳಿದೆ. ಅಲ್ಲಿಂದ ಮುಂದೆ ಆತನಿಗೆ ಒಂದೊಂದೇ ವಿಚಾರಗಳನ್ನು ಸಾವಧಾನವಾಗಿ ಮನವರಿಕೆ ಮಾಡುತ್ತಾ ಬಂದೆ. ಇದನ್ನರಿತ ಆತನ ಹೆತ್ತವರು ನನ್ನ ಬಳಿ ಟ್ಯೂಷನ್ ಕೊಡಿಸುವುದನ್ನು ನಿಲ್ಲಿಸಿಯೇ ಬಿಟ್ಟರು.

ಸತ್ಯವನ್ನು ಇಂದಿನ ಪೀಳಿಗೆಗೆ ಮನದಟ್ಟು ಮಾಡಿಕೊಡುವುದು ಬಹುದೊಡ್ಡ ಸವಾಲೇ ಸರಿ. ಹಾಗಾಗಿ ಗಾಂಧೀಜಿಯವರ ಆತ್ಮಕಥೆಯಾದ ‘ನನ್ನ ಸತ್ಯಾನ್ವೇಷಣೆ’ಯನ್ನು ಎಲ್ಲಾ ಹೆತ್ತವರೂ ಓದಲೇಬೇಕು, ಮಕ್ಕಳಿಗೂ ಓದಿಸಬೇಕು. ಮಹಾತ್ಮ ಗಾಂಧಿಯ ಬಗ್ಗೆ ನೂರು ಭಿನ್ನಾಭಿಪ್ರಾಯಗಳಿರಬಹುದು. ಆದರೆ ಅವರು ರಾಷ್ಟ್ರಪಿತನೆಂಬುದನ್ನು ಅಲ್ಲಗಳೆಯುವಂತೆಯೇ ಇಲ್ಲ. ಗಾಂಧಿಗೆ ಪರ್ಯಾಯವಾಗಿ ಇನ್ನೊಬ್ಬ ಗಾಂಧಿ ಹುಟ್ಟಲು ಸಾಧ್ಯವೇ ಇಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...