Homeಅಂಕಣಗಳುಗ್ಲಿರಿಸೀಡಿಯಾ ಎಂಬ ಖರ್ಚಿಲ್ಲದ ಗೊಬ್ಬರ ಗಿಡದ ಬಗ್ಗೆ ನಿಮಗೆಷ್ಟು ಗೊತ್ತು?

ಗ್ಲಿರಿಸೀಡಿಯಾ ಎಂಬ ಖರ್ಚಿಲ್ಲದ ಗೊಬ್ಬರ ಗಿಡದ ಬಗ್ಗೆ ನಿಮಗೆಷ್ಟು ಗೊತ್ತು?

ಅಪಾರ ಸಾರಜನಕ ಒಳಗೊಂಡ ಈ ಹಸಿರು ಸೊಪ್ಪನ್ನು ಹಸಿಯಾಗಿದ್ದಾಗಲೇ ಮಣ್ಣಿಗೆ ಸೇರಿಸುವುದು, ಗದ್ದೆಗೆ ತುಳಿಯುವುದು ಸಾಧ್ಯವಾದರೆ ತುಂಬಾ ಉಪಯುಕ್ತ.

- Advertisement -
- Advertisement -

ನಮ್ಮ ತೋಟದ ಸಾಲಿಗೆ ನೀವೂ ಬನ್ನಿ…: ಭಾಗ-10

ಕೆಲವು ಗಿಡಗಳಿಗೆ ಅದೇನು ಶಕ್ತಿಯೋ ಕಾಣೆ. ಕತ್ತರಿಸಿದರೆ ಹೊಸ ಜೀವ ಪಡೆದು ಚಿಗುರುತ್ತವೆ. ಚಿಗುರು ಕಡ್ಡಿಗಳ ಈ ಈ ಜಾತಿಗೆ ಸೇರಿದ್ದು ಈ ಗ್ಲಿರಿಸೀಡಿಯಾ. ಇದನ್ನು ನಮ್ಮ ಜನ ಗೊಬ್ಬರದ ಗಿಡ ಎಂದೇ ಕರೆಯುವುದು ರೂಢಿ. ನಮ್ಮ ತೋಟದಲ್ಲಿ ಇದಕ್ಕೆ ಪ್ರಮುಖ ಸ್ಥಾನವಿದೆ. ಇದರ ಸೊಪ್ಪು ಅಪಾರ ಸಾರಜನದ ನೊರೆ ಹಾಲಿನಿಂದ ಕೂಡಿದೆ. ನೆಲಕ್ಕೂ ಸಾರಜನಕ ಸ್ಥೀರಿಕರಿಸುತ್ತದೆ.

ನನಗೆ ಈ ಗ್ಲಿರಿಸೀಡಿಯಾದ ಹುಚ್ಚು ಹತ್ತಿದ ಆ ವರ್ಷ ನಾನು ಮಾಡಿದ್ದು ಹೀಗೆ. ಕೇವಲ ಒಂದು ಅಡಿ ಆಳದ ಟ್ರೆಂಚ್‌ ತೆಗೆದು ಅದರೊಳಗೆ ಕಸಕಡ್ಡಿ ತುಂಬಿ ನೀರು ಬಿಟ್ಟು ಮುಚ್ಚಿ ಒಂದು ತಿಂಗಳು ಬಿಟ್ಟು ಆ ಟ್ರೆಂಚ್‌ಗೆ ಅಡಿಗೊಂದರಂತೆ ಎರಡು ಅಡಿ ಉದ್ದದ ಈ ಗ್ಲಿರಿಸಿಡಿಯಾ ಕಡ್ಡಿಗಳನ್ನು ಊರಿದೆ. ಒಂದೂ ಹುಸಿಹೋಗದಂತೆ ಹಸಿರು ದೀಪದಂತೆ ಹೊತ್ತಿಕೊಂಡವು. ಹದಿನೈದು ವರ್ಷವಾಯಿತು ಇನ್ನೂ ಉರಿಯುತ್ತಲೇ ಇವೆ. ಘನವಾದ ಸೊಪ್ಪು ಕೊಡುತ್ತಲೇ ಇವೆ.

ನೀವೇನಾದರೂ ಒಂದೆರಡು ವರ್ಷಗಳ ನಂತರ ಇವುಗಳನ್ನು ಕತ್ತರಿಸಿ ಒಪ್ಪವಾಗಿ ಇಟ್ಟುಕೊಳ್ಳದಿದ್ದರೆ, ನೀವು ನಿಯಂತ್ರಿಸಲಾಗದಂತೆ ಕೊಬ್ಬಿ ಬೆಳೆಯುತ್ತವೆ. ಇವಕ್ಕೆ ಗೊಬ್ಬರ ಗೋಡು ಏನೂ ಬೇಡ, ಕಾರಣ ಇವೇ ಗೊಬ್ಬರದ ಗಿಡಗಳು. ಬಿಸಿಲುಂಡು ವಾತಾವರಣದ ಗಾಳಿಯಲ್ಲಿನ ಅಪಾರ ಸಾರಜನಕವನ್ನು ಹಸಿರು ಎಲೆಗಳಾಗಿಸುವ ಶಕ್ತಿ ಇವಕ್ಕಿದೆ. ಗ್ಲಿರಿಸೀಡಿಯಾವನ್ನು ಕತ್ತರಿಸುವುದು ಅಷ್ಟು ಕಷ್ಟವಲ್ಲ, ಮುಳ್ಳಿಲ್ಲ , ತೀರಾ ಒರಟಲ್ಲ, ಅಲರ್ಜಿಯಿಲ್ಲ. ವರ್ಷಕ್ಕೆ ಎರಡು ಬಾರಿ ಕತ್ತಿರಿಸುತ್ತಿದ್ದರೆ ಒಳ್ಳೆಯ ಸೊಪ್ಪು ಸಿಗುತ್ತದೆ, ನಿಯಂತ್ರಣದಲ್ಲೂ ಇರುತ್ತದೆ. ಸೊಪ್ಪು ಹಸಿಯಾಗಿದ್ದಾಗಲೇ ಮಣ್ಣಿಗೆ ಸೇರಿಸುವುದು, ಗದ್ದೆಗೆ ತುಳಿಯುವುದು ಸಾಧ್ಯವಾದರೆ ತುಂಬಾ ಉಪಯುಕ್ತ. ಒಣಗಿದರೆ ಹೆಚ್ಚು ನಷ್ಟ.

ಈ ಸೊಪ್ಪನ್ನು ಸ್ವಲ್ಪ ಬಾಡಿಸಿ ದನಕರುಗಳಿಗೆ ಮೇವಾಗಿಯೂ ಬಳಸಬಹುದು. ಪೂರ್ಣ ಹಸಿಯ ಸೊಪ್ಪನ್ನು ಅದರ ಕಟು ವಾಸನೆಯ ಕಾರಣ ಕೆಲವು ದನಕರುಗಳು ತಿನ್ನಲು ನಿರಾಕರಿಸುವ ಸಾಧ್ಯತೆ ಇರುತ್ತದೆ. ಆಡುಕುರಿಗಳು ಮಾತ್ರ ಯಾವ ಭಿನ್ನಭೇದವೂ ಇಲ್ಲದೆ ಈ ಸೊಪ್ಪನ್ನು ಮೆಲ್ಲುತ್ತವೆ. ಚೆನ್ನಾಗಿ ಕೊಬ್ಬುತ್ತವೆ. ಬುದ್ದಿವಂತ ರೈತರು ಈ ಹಸಿ ಸೊಪ್ಪನ್ನು ಇತರ ಮೇವಿನೊಂದಿಗೆ ಬೆರೆಸಿ ಹಾಲು ಕೊಡುವ ರಾಸುಗಳು ತಿನ್ನುವಂತೆ ಮಾಡಿ ಹೆಚ್ಚು ಹಾಲು ಹಿಂಡಿ ಲಾಭ ಮಾಡಿಕೊಂಡವರಿದ್ದಾರೆ.

ಸಾವಯವ ಕೃಷಿ ಚಳುವಳಿಯ ಆರಂಭಿಕ ಸಂದರ್ಭದಲ್ಲಿ ಇದರ ಜನಪ್ರಿಯತೆ ಹೆಚ್ಚಾದಾಗ ಕೆಲವರು “ಇದು ನೆಲದ ಒರವು ತಿನ್ನುತ್ತದೆ” ಎಂಬ ತಕರಾರು ತೆಗೆದದ್ದು ಉಂಟು. ಆದರೆ ಇದರ ಬಗೆಗೆ ತಿಳಿಯುತ್ತಾ ಹೋದಂತೆ, ಇದು ನೆಲದ ಒರವು ತಿನ್ನುವುದಕ್ಕೆ ಬದಲಾಗಿ ನೆಲಕ್ಕೆ ಹೆಚ್ಚು ಒರವನ್ನು ಒದಗಿಸುತ್ತದೆ ಎಂಬುದು ರೈತರ ಅರಿವಿಗೆ ಬಂತು. ಆಗ ಬಹುತೇಕ ಸಾವಯವ ತೋಟಗಳಲ್ಲಿ ಇದು ಬೇಲಿಯಲ್ಲಷ್ಟೇ ಅಲ್ಲ ತೋಟದ ಬದುಗಳಲ್ಲೂ ಸ್ಥಾನ ಪಡೆಯಿತು.

ಈಗಲೂ ಕೆಲವು ರೈತರು ಇದರ ಸಹವಾಸ ಕಷ್ಟ ಎನ್ನುತ್ತಾರೆ. ಇದಕ್ಕೆ ಕಾರಣವಿದೆ. ಈ ಗ್ಲಿರಿಸೀಡಿಯಾವನ್ನು ಹೆಮ್ಮರವಾಗಲು ಬಿಡಬಾರದು. ಬಿಟ್ಟರೆ ಕೆಟ್ಟೆವು ಎಂದೇ ಅರ್ಥ. ಏಕೆಂದರೆ ಅದು ಸೂರ್ಯ ಸ್ನೇಹಿ ಗಿಡ, ಸೂರ್ಯನತ್ತಲೇ ಅದರ ಚಿತ್ತ. ಅದನ್ನು ಬುಡಕ್ಕೆ ಕತ್ತರಿಸುತ್ತಲೇ ಇರಬೇಕಾಗುತ್ತದೆ. ಕತ್ತರಿಸಿದಷ್ಟೂ ನಮಗೆ ಲಾಭವಾಗುತ್ತಲೇ ಇರುತ್ತದೆ. ಕುರಿಗೊಬ್ಬರ, ಕೋಳಿಗೊಬ್ಬರಕ್ಕೆ ಸಿಕ್ಕಾಪಟ್ಟೆ ದುಡ್ಡು ಸುರಿಯುವವರು ಏನು ಬೇಕಾದರೂ ಹೇಳುತ್ತಾರೆ. ನಿಜವಾದ ಕೃಷಿಕರು ತಮ್ಮ ಪರವಾಗಿ ಹಗಲು ರಾತ್ರಿ ದುಡಿಯುವ ಗಿಡಮರಗಳನ್ನು, ಹುಲ್ಲು ಸೊಪ್ಪು ತಿಂದು ಹಾಲು ಮತ್ತು ಗೊಬ್ಬರ ಕೊಡುವ ದನಕರು, ಕುರಿ ಆಡುಗಳನ್ನು  ನೆಚ್ಚಲೇಬೇಕಾಗುತ್ತದೆ.

ಕೃಷ್ಣಮೂರ್ತಿ ಬಿಳಿಗೆರೆ

(ಹುಳಿಯಾರು ಬಿಎಂಎಸ್‌ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ, ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-7: ಬೇಲಿಯೆಂದರೆ ಹಸಿರ ಕಲೆ, ಇಲಿ, ಇಲಿಬುಲ್ಡೆ ಇತ್ಯಾದಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...