Homeಅಂಕಣಗಳುಗ್ಲಿರಿಸೀಡಿಯಾ ಎಂಬ ಖರ್ಚಿಲ್ಲದ ಗೊಬ್ಬರ ಗಿಡದ ಬಗ್ಗೆ ನಿಮಗೆಷ್ಟು ಗೊತ್ತು?

ಗ್ಲಿರಿಸೀಡಿಯಾ ಎಂಬ ಖರ್ಚಿಲ್ಲದ ಗೊಬ್ಬರ ಗಿಡದ ಬಗ್ಗೆ ನಿಮಗೆಷ್ಟು ಗೊತ್ತು?

ಅಪಾರ ಸಾರಜನಕ ಒಳಗೊಂಡ ಈ ಹಸಿರು ಸೊಪ್ಪನ್ನು ಹಸಿಯಾಗಿದ್ದಾಗಲೇ ಮಣ್ಣಿಗೆ ಸೇರಿಸುವುದು, ಗದ್ದೆಗೆ ತುಳಿಯುವುದು ಸಾಧ್ಯವಾದರೆ ತುಂಬಾ ಉಪಯುಕ್ತ.

- Advertisement -
- Advertisement -

ನಮ್ಮ ತೋಟದ ಸಾಲಿಗೆ ನೀವೂ ಬನ್ನಿ…: ಭಾಗ-10

ಕೆಲವು ಗಿಡಗಳಿಗೆ ಅದೇನು ಶಕ್ತಿಯೋ ಕಾಣೆ. ಕತ್ತರಿಸಿದರೆ ಹೊಸ ಜೀವ ಪಡೆದು ಚಿಗುರುತ್ತವೆ. ಚಿಗುರು ಕಡ್ಡಿಗಳ ಈ ಈ ಜಾತಿಗೆ ಸೇರಿದ್ದು ಈ ಗ್ಲಿರಿಸೀಡಿಯಾ. ಇದನ್ನು ನಮ್ಮ ಜನ ಗೊಬ್ಬರದ ಗಿಡ ಎಂದೇ ಕರೆಯುವುದು ರೂಢಿ. ನಮ್ಮ ತೋಟದಲ್ಲಿ ಇದಕ್ಕೆ ಪ್ರಮುಖ ಸ್ಥಾನವಿದೆ. ಇದರ ಸೊಪ್ಪು ಅಪಾರ ಸಾರಜನದ ನೊರೆ ಹಾಲಿನಿಂದ ಕೂಡಿದೆ. ನೆಲಕ್ಕೂ ಸಾರಜನಕ ಸ್ಥೀರಿಕರಿಸುತ್ತದೆ.

ನನಗೆ ಈ ಗ್ಲಿರಿಸೀಡಿಯಾದ ಹುಚ್ಚು ಹತ್ತಿದ ಆ ವರ್ಷ ನಾನು ಮಾಡಿದ್ದು ಹೀಗೆ. ಕೇವಲ ಒಂದು ಅಡಿ ಆಳದ ಟ್ರೆಂಚ್‌ ತೆಗೆದು ಅದರೊಳಗೆ ಕಸಕಡ್ಡಿ ತುಂಬಿ ನೀರು ಬಿಟ್ಟು ಮುಚ್ಚಿ ಒಂದು ತಿಂಗಳು ಬಿಟ್ಟು ಆ ಟ್ರೆಂಚ್‌ಗೆ ಅಡಿಗೊಂದರಂತೆ ಎರಡು ಅಡಿ ಉದ್ದದ ಈ ಗ್ಲಿರಿಸಿಡಿಯಾ ಕಡ್ಡಿಗಳನ್ನು ಊರಿದೆ. ಒಂದೂ ಹುಸಿಹೋಗದಂತೆ ಹಸಿರು ದೀಪದಂತೆ ಹೊತ್ತಿಕೊಂಡವು. ಹದಿನೈದು ವರ್ಷವಾಯಿತು ಇನ್ನೂ ಉರಿಯುತ್ತಲೇ ಇವೆ. ಘನವಾದ ಸೊಪ್ಪು ಕೊಡುತ್ತಲೇ ಇವೆ.

ನೀವೇನಾದರೂ ಒಂದೆರಡು ವರ್ಷಗಳ ನಂತರ ಇವುಗಳನ್ನು ಕತ್ತರಿಸಿ ಒಪ್ಪವಾಗಿ ಇಟ್ಟುಕೊಳ್ಳದಿದ್ದರೆ, ನೀವು ನಿಯಂತ್ರಿಸಲಾಗದಂತೆ ಕೊಬ್ಬಿ ಬೆಳೆಯುತ್ತವೆ. ಇವಕ್ಕೆ ಗೊಬ್ಬರ ಗೋಡು ಏನೂ ಬೇಡ, ಕಾರಣ ಇವೇ ಗೊಬ್ಬರದ ಗಿಡಗಳು. ಬಿಸಿಲುಂಡು ವಾತಾವರಣದ ಗಾಳಿಯಲ್ಲಿನ ಅಪಾರ ಸಾರಜನಕವನ್ನು ಹಸಿರು ಎಲೆಗಳಾಗಿಸುವ ಶಕ್ತಿ ಇವಕ್ಕಿದೆ. ಗ್ಲಿರಿಸೀಡಿಯಾವನ್ನು ಕತ್ತರಿಸುವುದು ಅಷ್ಟು ಕಷ್ಟವಲ್ಲ, ಮುಳ್ಳಿಲ್ಲ , ತೀರಾ ಒರಟಲ್ಲ, ಅಲರ್ಜಿಯಿಲ್ಲ. ವರ್ಷಕ್ಕೆ ಎರಡು ಬಾರಿ ಕತ್ತಿರಿಸುತ್ತಿದ್ದರೆ ಒಳ್ಳೆಯ ಸೊಪ್ಪು ಸಿಗುತ್ತದೆ, ನಿಯಂತ್ರಣದಲ್ಲೂ ಇರುತ್ತದೆ. ಸೊಪ್ಪು ಹಸಿಯಾಗಿದ್ದಾಗಲೇ ಮಣ್ಣಿಗೆ ಸೇರಿಸುವುದು, ಗದ್ದೆಗೆ ತುಳಿಯುವುದು ಸಾಧ್ಯವಾದರೆ ತುಂಬಾ ಉಪಯುಕ್ತ. ಒಣಗಿದರೆ ಹೆಚ್ಚು ನಷ್ಟ.

ಈ ಸೊಪ್ಪನ್ನು ಸ್ವಲ್ಪ ಬಾಡಿಸಿ ದನಕರುಗಳಿಗೆ ಮೇವಾಗಿಯೂ ಬಳಸಬಹುದು. ಪೂರ್ಣ ಹಸಿಯ ಸೊಪ್ಪನ್ನು ಅದರ ಕಟು ವಾಸನೆಯ ಕಾರಣ ಕೆಲವು ದನಕರುಗಳು ತಿನ್ನಲು ನಿರಾಕರಿಸುವ ಸಾಧ್ಯತೆ ಇರುತ್ತದೆ. ಆಡುಕುರಿಗಳು ಮಾತ್ರ ಯಾವ ಭಿನ್ನಭೇದವೂ ಇಲ್ಲದೆ ಈ ಸೊಪ್ಪನ್ನು ಮೆಲ್ಲುತ್ತವೆ. ಚೆನ್ನಾಗಿ ಕೊಬ್ಬುತ್ತವೆ. ಬುದ್ದಿವಂತ ರೈತರು ಈ ಹಸಿ ಸೊಪ್ಪನ್ನು ಇತರ ಮೇವಿನೊಂದಿಗೆ ಬೆರೆಸಿ ಹಾಲು ಕೊಡುವ ರಾಸುಗಳು ತಿನ್ನುವಂತೆ ಮಾಡಿ ಹೆಚ್ಚು ಹಾಲು ಹಿಂಡಿ ಲಾಭ ಮಾಡಿಕೊಂಡವರಿದ್ದಾರೆ.

ಸಾವಯವ ಕೃಷಿ ಚಳುವಳಿಯ ಆರಂಭಿಕ ಸಂದರ್ಭದಲ್ಲಿ ಇದರ ಜನಪ್ರಿಯತೆ ಹೆಚ್ಚಾದಾಗ ಕೆಲವರು “ಇದು ನೆಲದ ಒರವು ತಿನ್ನುತ್ತದೆ” ಎಂಬ ತಕರಾರು ತೆಗೆದದ್ದು ಉಂಟು. ಆದರೆ ಇದರ ಬಗೆಗೆ ತಿಳಿಯುತ್ತಾ ಹೋದಂತೆ, ಇದು ನೆಲದ ಒರವು ತಿನ್ನುವುದಕ್ಕೆ ಬದಲಾಗಿ ನೆಲಕ್ಕೆ ಹೆಚ್ಚು ಒರವನ್ನು ಒದಗಿಸುತ್ತದೆ ಎಂಬುದು ರೈತರ ಅರಿವಿಗೆ ಬಂತು. ಆಗ ಬಹುತೇಕ ಸಾವಯವ ತೋಟಗಳಲ್ಲಿ ಇದು ಬೇಲಿಯಲ್ಲಷ್ಟೇ ಅಲ್ಲ ತೋಟದ ಬದುಗಳಲ್ಲೂ ಸ್ಥಾನ ಪಡೆಯಿತು.

ಈಗಲೂ ಕೆಲವು ರೈತರು ಇದರ ಸಹವಾಸ ಕಷ್ಟ ಎನ್ನುತ್ತಾರೆ. ಇದಕ್ಕೆ ಕಾರಣವಿದೆ. ಈ ಗ್ಲಿರಿಸೀಡಿಯಾವನ್ನು ಹೆಮ್ಮರವಾಗಲು ಬಿಡಬಾರದು. ಬಿಟ್ಟರೆ ಕೆಟ್ಟೆವು ಎಂದೇ ಅರ್ಥ. ಏಕೆಂದರೆ ಅದು ಸೂರ್ಯ ಸ್ನೇಹಿ ಗಿಡ, ಸೂರ್ಯನತ್ತಲೇ ಅದರ ಚಿತ್ತ. ಅದನ್ನು ಬುಡಕ್ಕೆ ಕತ್ತರಿಸುತ್ತಲೇ ಇರಬೇಕಾಗುತ್ತದೆ. ಕತ್ತರಿಸಿದಷ್ಟೂ ನಮಗೆ ಲಾಭವಾಗುತ್ತಲೇ ಇರುತ್ತದೆ. ಕುರಿಗೊಬ್ಬರ, ಕೋಳಿಗೊಬ್ಬರಕ್ಕೆ ಸಿಕ್ಕಾಪಟ್ಟೆ ದುಡ್ಡು ಸುರಿಯುವವರು ಏನು ಬೇಕಾದರೂ ಹೇಳುತ್ತಾರೆ. ನಿಜವಾದ ಕೃಷಿಕರು ತಮ್ಮ ಪರವಾಗಿ ಹಗಲು ರಾತ್ರಿ ದುಡಿಯುವ ಗಿಡಮರಗಳನ್ನು, ಹುಲ್ಲು ಸೊಪ್ಪು ತಿಂದು ಹಾಲು ಮತ್ತು ಗೊಬ್ಬರ ಕೊಡುವ ದನಕರು, ಕುರಿ ಆಡುಗಳನ್ನು  ನೆಚ್ಚಲೇಬೇಕಾಗುತ್ತದೆ.

ಕೃಷ್ಣಮೂರ್ತಿ ಬಿಳಿಗೆರೆ

(ಹುಳಿಯಾರು ಬಿಎಂಎಸ್‌ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ, ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-7: ಬೇಲಿಯೆಂದರೆ ಹಸಿರ ಕಲೆ, ಇಲಿ, ಇಲಿಬುಲ್ಡೆ ಇತ್ಯಾದಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು: ಫಲಿತಾಂಶದ ಬಳಿಕ ಭುಗಿಲೆದ್ದ ಹಿಂಸಾಚಾರ, ಕನಿಷ್ಠ ಐದು ಮಂದಿ ಸಾವು

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲ ಬಾರಿಗೆ ಬೃಹತ್ ಗೆಲುವು ಸಾಧಿಸಿದ್ದು, ರಾಜ್ಯದ 294 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆದ್ದು ಮುಂದಿನ...

ಪಂಚರಾಜ್ಯ ಚುನಾವಣೆಯ ಗೋಜಲುಗಳು

ವಿವಾದಾತ್ಮಕ ಮತ್ತು ಸಂವಿಧಾನ ವಿರೋಧಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಅಡಿಯಲ್ಲಿ ನಡೆದ 2026ರ ಐದು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಏಕರೂಪದ ಅಭಿಮತವನ್ನು ವ್ಯಕ್ತಪಡಿಸಲಿಲ್ಲ. ಮತ್ತು ಸಂಕೀರ್ಣವಾದ ಫಲಿತಾಂಶ ಕೊಟ್ಟಿದ್ದಾರೆ. ಪಶ್ಚಿಮ...

ಪ್ರಜಾಸತ್ತೆಯ ಉಳಿವಿಗೆ ಇದು ನಿರ್ಣಾಯಕ ಕ್ಷಣ : ಮಹತ್ವದ ಕಣ್ಣೋಟ

ಚುನಾವಣೆಗಳು ಮತ್ತು ನ್ಯಾಯಾಲಯಗಳು ಇನ್ನು ಪರಿಹಾರವಲ್ಲ ಎಂಬ ಅಭಿಪ್ರಾಯಕ್ಕೆ ಜನರು ಬರಲು ಈ ಬಾರಿಯ ವಿಧಾನಸಭಾ ಚುನಾವಣೆಗಳೇ ಕಾರಣವಾಗಿವೆ. ಇಂದು 'ಭಾರತದ ಪರಿಕಲ್ಪನೆ'ಗೆ (Idea of India) ಸಂಚಕಾರ ಬಂದಿದೆ. ಪ್ರಜಾಪ್ರಭುತ್ವವು ಕೇವಲ...

ಭಾಗ-2: ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಆದಂತೆಯೇ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗ ಎಸ್‌ಐಆರ್ ಜಾರಿಯಾದರೆ ಬಿಜೆಪಿಗೆ ಅನುಕೂಲವಾಗುವ...