Homeಅಂಕಣಗಳುಹೈದ್ರಾಬಾದ್ ಫಂಡ್: ಪಾಕಿಸ್ತಾನಕ್ಕೆ ಮುಖಭಂಗ, 306 ಕೋಟಿ ರೂ. ಯಾರ ಪಾಲಾಗಲಿದೆ?

ಹೈದ್ರಾಬಾದ್ ಫಂಡ್: ಪಾಕಿಸ್ತಾನಕ್ಕೆ ಮುಖಭಂಗ, 306 ಕೋಟಿ ರೂ. ಯಾರ ಪಾಲಾಗಲಿದೆ?

- Advertisement -
- Advertisement -

ಇಂಗ್ಲೆಂಡ್ ಅಂಡ್ ವೇಲ್ಸ್ ಹೈಕೋರ್ಟ್ ಇತ್ತೀಚೆಗೆ ಕೊಟ್ಟ ತೀರ್ಪೊಂದು ಎಲ್ಲರ ಗಮನ ಸೆಳೆದಿದೆ. ಲಂಡನ್‍ನ ನ್ಯಾಟ್‍ವೆಸ್ಟ್ ಬ್ಯಾಂಕಿನಲ್ಲಿರುವ 35 ಮಿಲಿಯನ್ ಪೌಂಡ್ ಅಂದರೆ 306 ಕೋಟಿ ರೂಪಾಯಿ ಹಣ ತನಗೆ ಸೇರಬೇಕೆಂದು ಪಾಕಿಸ್ತಾನ ಹೂಡಿದ್ದ ದಾವೆಯನ್ನು ತಳ್ಳಿ ಹಾಕಿರುವ ನ್ಯಾಯಾಲಯ ಭಾರತದ ಪರವಾಗಿ ತೀರ್ಪು ನೀಡಿದೆ. ಆ ಮೂಲಕ ಸುಮಾರು ಏಳು ದಶಕಗಳ ಹಳೆಯ ಪ್ರಕರಣವೊಂದು ಇತ್ಯರ್ಥ ಕಂಡಂತಾಗಿದೆ. ‘ಹೈದ್ರಾಬಾದ್ ಫಂಡ್’ ಎಂತಲೇ ಹೆಸರಾದ ಈ ವಿವಾದ ಕೇವಲ ಹಣದ ಕಾರಣಕ್ಕೆ ಮಾತ್ರವಲ್ಲದೆ ಭಾರತ ಪಾಕಿಸ್ತಾನಗಳ ನಡುವೆ ಪ್ರತಿಷ್ಠೆಯ ವಿಷಯವಾಗಿತ್ತು.

ಏನಿದು ಹೈದ್ರಾಬಾದ್ ಫಂಡ್..?

1948ರ ಸೆಪ್ಟೆಂಬರ್ ನಲ್ಲಿ ಹೈದ್ರಾಬಾದ್‍ನ ಏಳನೇ ನಿಜಾಮನಾಗಿದ್ದ ಮೀರ್ ಒಸ್ಮಾನ್ ಅಲಿ ಖಾನ್, ಇಂಗ್ಲೆಂಡ್‍ನಲ್ಲಿದ್ದ ಪಾಕಿಸ್ತಾನದ ಅಂದಿನ ರಾಯಭಾರಿ ಹಬೀಬ್ ಇಬ್ರಾಹಿಂ ರಹಮತುಲ್ಲಾ ಖಾತೆಗೆ ವರ್ಗಾವಣೆ ಮಾಡಿದ್ದ 1 ಮಿಲಿಯನ್ ಪೌಂಡ್ ಹಣವಿದು. ಅದೀಗ 35 ಮಿಲಿಯನ್‍ನಷ್ಟಾಗಿದೆ. ಆದರೆ ನಂತರ ಕೋರ್ಟ್‍ನಲ್ಲಿ ಹಣಕ್ಕಾಗಿ ದಾವೆ ಹೂಡಿದ ಒಸ್ಮಾನ್ ಅಲಿ ಖಾನ್, ಹಣವನ್ನು ತಾನು ವರ್ಗಾವಣೆ ಮಾಡಿಲ್ಲ, ನನ್ನ ಗಮನಕ್ಕೆ ಬಾರದೆ ಅಂದಿನ ಹೈದ್ರಾಬಾದ್ ಪ್ರಾಂತ್ಯದ ಹಣಕಾಸು ಮತ್ತು ವಿದೇಶಾಂಗ ಸಚಿವನಾಗಿದ್ದ ನವಾಬ್ ಮೊಯಿನ್ ನವಾಜ್ ಜಂಗ್, ವರ್ಗಾವಣೆ ಮಾಡಿದ್ದ ಎಂದು ಹೇಳಿಕೆ ನೀಡಿದ್ದರು. ಆಗ ಪ್ರಕರಣ ಇತ್ಯರ್ಥವಾಗುವವರೆಗೆ ಹಣವನ್ನು ‘ಫ್ರೀಜ್’ ಮಾಡುವಂತೆ ನ್ಯಾಯಾಲಯ ಆದೇಶಿಸಿತ್ತು.

1947ರಲ್ಲಿ ಭಾರತ ವಿಭಜನೆಯಾದಾಗ, ತನ್ನ ಆಳ್ವಿಕೆಯಲ್ಲಿದ್ದ ಹೈದ್ರಾಬಾದ್ ಪ್ರಾಂತ್ಯವನ್ನು ಭಾರತದೊಂದಿಗೆ ವಿಲೀನ ಮಾಡದೆ ಸ್ವತಂತ್ರವಾಗುಳಿಯಲು ನಿಜಾಮ ನಿರ್ಧರಿಸಿದ. ಆಗ ಭಾರತದೊಂದಿಗೆ ಒಂದು ಯಥಾಸ್ಥಿತಿ ಒಪ್ಪಂದಕ್ಕೆ ಸಹಿ ಹಾಕಿದ್ದ. ಅದರ ಪ್ರಕಾರ ಒಂದು ವರ್ಷದ ಕಾಲ ಭಾರತವು ಹೈದ್ರಾಬಾದ್‍ನಲ್ಲಿ ಸೇನೆಯನ್ನು ಜಮಾವಣೆ ಮಾಡದೆ ಯಥಾಸ್ಥಿತಿ ಕಾಪಾಡಬೇಕಿತ್ತು. ಹಾಗಾಗಿ ಸಿಕಂದರಾಬಾದ್‍ನಲ್ಲಿ ಭಾರತೀಯ ಸೇನೆಯನ್ನು ವಾಪಾಸ್ ಕೂಡಾ ಕರೆಸಿಕೊಳ್ಳಲಾಗಿತ್ತು. ಈ ಅವಧಿಯಲ್ಲಿ ನಿಜಾಮನ ‘ರಜಾಕಾರ್’ ಸೈನಿಕರ ಉಪಟಳ ಹೆಚ್ಚಾಗಿತ್ತಲ್ಲದೆ, ನಿಜಾಮ ಪೋರ್ಚುಗೀಸರ ಜತೆ ಒಪ್ಪಂದ ಮಾಡಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದರಿಂದ ಭಾರತವು 1948ರ ಸೆಪ್ಟೆಂಬರ್ ನಲ್ಲಿ ‘ಆಪರೇಷನ್ ಪೋಲೊ’ ಹೆಸರಿನ ಸೇನಾ ಕಾರ್ಯಾಚರಣೆ ಮೂಲಕ ಹೈದ್ರಾಬಾದ್ ಅನ್ನು ತನ್ನೊಳಗೆ ವಿಲೀನ ಮಾಡಿಕೊಂಡಿತು. ಅಂತಹ ಯುದ್ಧಮಯ ಸನ್ನಿವೇಶದಲ್ಲೇ ವಿತ್ತ ಸಚಿವ ಹಣವನ್ನು ಪಾಕಿಸ್ತಾನದ ರಾಯಭಾರಿ ಅಕೌಂಟಿಗೆ ವರ್ಗಾಯಿಸಿದ್ದ.

ವಿಲೀನದ ನಂತರ ನಿಜಾಮ ಹಣ ವಾಪಾಸ್ ನೀಡುವಂತೆ ಕೇಳಿದಾಗ ಪಾಕಿಸ್ತಾನ ತಕರಾರು ಮಾಡಿತು. ಹಾಗಾಗಿ ಲಂಡನ್ ಕೋರ್ಟ್‍ನಲ್ಲಿ ದಾವೆ ಹೂಡಿದರು.

ಪಾಕಿಸ್ತಾನದ ವಾದ ಏನಾತ್ತು..?

ಆರಂಭದಲ್ಲಿ ಇದು ಏಳನೇ ನಿಜಾಮ ಮತ್ತು ಪಾಕಿಸ್ತಾನ ನಡುವಿನ ವಿವಾದವಾಗಿತ್ತಷ್ಟೆ. ಆದರೆ 1956ರಲ್ಲಿ ನಿಜಾಮ ಹಣದ ಮೇಲಿನ ದಾವೆ ಹೂಡಿಕೆ ಹಕ್ಕನ್ನು ಭಾರತದ ರಾಷ್ಟ್ರಪತಿಗಳ ಜತೆ ಹಂಚಿಕೊಂಡಾಗ ‘ಹೈದ್ರಾಬಾದ್ ಫಂಡ್’ನ ಮೇಲೆ ಮೂರು ಹಕ್ಕುದಾರರು ಸೃಷ್ಟಿಯಾಗಿದ್ದರು. ಹಣ ತನಗೆ ಸೇರಬೇಕೆಂದು ವಾದಿಸಲು ಪಾಕಿಸ್ತಾನ ಎರಡು ಅಂಶಗಳನ್ನು ಮುಂದಿಡುತ್ತಿತ್ತು. ಮೊದಲನೆಯದು, ಹೈದ್ರಾಬಾದ್ ಪ್ರಾಂತ್ಯವು ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುವಂತೆ ತನಗೆ ಕೊಟ್ಟಿದ್ದ ಹಣ ಇದು ಎನ್ನುವುದು. ಎರಡನೆಯ ವಾದದಲ್ಲಿ, ಸರ್ಕಾರಿ ಮಾನದಂಡಗಳ ಅನ್ವಯ ವರ್ಗಾವಣೆಯಾದ ಈ ಹಣವನ್ನು ಭಾರತದಿಂದ ‘ಸುರಕ್ಷಿತವಾಗಿಡಲು’ ತನಗೆ ವರ್ಗಾಯಿಸಬೇಕೆಂದು ಹೇಳಿಕೊಂಡಿತ್ತು.

ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ, ದಿವಂಗತ ಮೀರ್ ಒಸ್ಮಾನ್ ಅಲಿ ಖಾನ್‍ನ ಮೊಮ್ಮಕ್ಕಳಾದ ಮುಫ್ಫಖಮ್ ಝಾ ಮತ್ತು ಮುಖ್ಖರ್ರಂ ಝಾ, ವಿದೇಶಾಂಗ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವ ಪ್ರಯತ್ನಕ್ಕೂ ಮುಂದಾಗಿದ್ದರು. ಆದರೆ 2013ರಲ್ಲಿ ಪಾಕಿಸ್ತಾನ ಇದನ್ನು ಮತ್ತೆ ನ್ಯಾಯಾಲಯದ ಕಟೆಕಟೆ ಹತ್ತಿಸಿತ್ತು. ಈಗ ಅದರ ವಿರುದ್ಧವೇ ತೀರ್ಪು ಹೊರಬಂದಿದೆ.

ಯಾರಿಗೆ ಸೇರಲಿದೆ ಈ ಹಣ..?

ನ್ಯಾಯಾಲಯವು ತನ್ನ ತೀರ್ಪಿನಲ್ಲಿ “ಈ ಹಣದ ಮೇಲೆ ಏಳನೇ ನಿಜಾಮನ ಹಕ್ಕಿದೆ. ಹಾಗಾಗಿ ದಿವಂಗತ ನಿಜಾಮನ ಪರ ವಾದಿಗಳಾದವರಿಗೆ (ಅವರ ಮೊಮ್ಮಕ್ಕಳು ಮತ್ತು ಭಾರತ) ಈ ಹಣ ಸಂದಾಯವಾಗುತ್ತೆ” ಎಂದು ಹೇಳಿದೆ ಮಾತ್ರವಲ್ಲ, “ಅದನ್ನು ಹೇಗೆ ಹಂಚಿಕೊಳ್ಳಬೇಕೆಂಬ ಆಯ್ಕೆಯನ್ನು ಅವರಿಗೇ ಬಿಟ್ಟಿದ್ದೇನೆ. ಆದರೆ ಹಾಗೆ ಹಂಚಿಕೊಳ್ಳುವ ವಿಧಾನ/ನಿಯಮವನ್ನು ನನ್ನ ಮುಂದೆ ಮಂಡಿಸಿ, ಅನುಮೋದನೆ ಪಡೆದುಕೊಳ್ಳಬೇಕು” ಎಂದೂ ಹೇಳಿದೆ.

ನಿಜವಾದ ಪ್ರಶ್ನೆ ಶುರುವಾಗುವುದೇ ಇಲ್ಲಿಂದ. ಯಾಕೆಂದರೆ ನಿಜಾಮನ ಪರವಾಗಿ ಇಬ್ಬರು ಮೊಮ್ಮಕ್ಕಳು ಮಾತ್ರ ದಾವೆಯಲ್ಲಿ ಭಾಗಿಯಾಗಿದ್ದರೂ ಕಾನೂನುಬದ್ಧವಾಗಿ ನಿಜಾಮನ ಪಿತ್ರಾರ್ಜಿತ ಫಲಾನುಭವಿಗಳ ಸಂಖ್ಯೆ 120! ನಿಜಾಮರ ಕುಟುಂಬ ಕಲ್ಯಾಣ ಸಂಘವನ್ನು ಹುಟ್ಟುಹಾಕಿ ಅದರ ಅಧ್ಯಕ್ಷರೂ ಆಗಿರುವ ನಿಜಾಮರ ಮತ್ತೊಬ್ಬ ಮೊಮ್ಮಗ ನಜಾಫ್ ಅಲಿಖಾನ್ ಹೇಳುವಂತೆ, ಬೆರಳೆಣಿಕೆಯ ಮಂದಿ ಬಿಟ್ಟರೆ ಇನ್ನುಳಿದ ನಿಜಾಮನ ವಂಶಸ್ಥರೆಲ್ಲ ಆರ್ಥಿಕ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಭಾರತ ಸರ್ಕಾರ ಈ ಹಣದ ಮೇಲೆ ಯಾವ ರೀತಿ ಪಾಲನ್ನು ನಿರೀಕ್ಷಿಸಲಿದೆ ಎನ್ನುವುದು ಸದ್ಯಕ್ಕಂತು ನಿಗೂಢವಾಗಿದೆ. ಹಾಗಾಗಿ ಹಂಚಿಕೆಯ ಕಗ್ಗಂಟು ಇನ್ನಷ್ಟು ಮುಂದುವರೆಯಲಿದೆ.

ಅಂದ ಹಾಗೆ, ಸದರಿ ತೀರ್ಪಿನ ಸಾಧಕ ಬಾಧಕಗಳನ್ನು ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಪಾಕಿಸ್ತಾನ ಹೇಳಿದೆ. ಹಾಗೊಮ್ಮೆ ಅದೇನಾದರು ಮೇಲ್ಮನವಿ ಸಲ್ಲಿಸಿದರೆ, ಏಳು ದಶಕಗಳ ಈ ಪ್ರಕರಣ ಇನ್ನೊಂದಷ್ಟು ದಶಕಗಳಿಗೆ ಮುಂದುವರೆದರೆ ಅಚ್ಚರಿಯಿಲ್ಲ. ಒಟ್ಟಿನಲ್ಲಿ, ಈ ತೀರ್ಪಿನಿಂದಾಗಿ ಭಾರತದ ಎದುರು ಪಾಕಿಸ್ತಾನಕ್ಕೆ ದೊಡ್ಡ ಮುಖಭಂಗ ಆಗಿರುವುದು ಮಾತ್ರ ಸತ್ಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...