Homeಅಂಕಣಗಳು“ನಿನ್ನ ಕಪಟತನ ಗೊತ್ತಿಲ್ಲ ಅನ್ನಕಂಡ್ಯಾ” - ಥೂತ್ತೇರಿ ಯಾಹೂ

“ನಿನ್ನ ಕಪಟತನ ಗೊತ್ತಿಲ್ಲ ಅನ್ನಕಂಡ್ಯಾ” – ಥೂತ್ತೇರಿ ಯಾಹೂ

- Advertisement -
- Advertisement -

ಕೋವಿಡ್ ಸೋಂಕಿನ ನಿರ್ವಹಣೆಯಲ್ಲಿ ಯಡೂರಪ್ಪ ಸರಕಾರದ ಸಚಿವರು ಬರೋಬರಿ ಎರಡು ಸಾವಿರ ಕೋಟಿಯನ್ನು ಈಗಾಗಲೇ ಭರ್ತಿಯಾಗಿದ್ದ ತಮ್ಮ ಜೋಬುಗಳಿಗೆ ತುರುಕಿದ್ದಾರೆ ಎಂಬ ಸಿದ್ದರಾಮಯ್ಯನ ಆರೋಪಕ್ಕೆ ಸಂಬಂಧಿಸಿದಂತೆ, ಅವರನ್ನೆ ಕೇಳಿದರೆ ಹೇಗೆ ಅನ್ನಿಸಿ, ಯಾಹೂ ಬದಲಿಗೆ ಟಿವಿ ನಿರ್ವಾಹಕನ ಹೆಸರಲ್ಲಿ ಕೇಳಿದರೆ ಹೇಗೆ ಅನ್ನಿಸಿದ್ದರಿಂದ ಫೋನ್ ಮಾಡಲಾಗಿ ರಿಂಗಾಯ್ತು.

ರಿಂಗ್ ಠೊನ್ “ಕರಿಯ ಕಂಬಳಿ ಗದ್ದಿಗೆ ಮಾಡಿ ವೀರದೊಳ್ಳ ತಂದಿರಿಸಿದರೊ”………. “ಹಲೊ ಯಾರು”

“ನಾನು ಸಾರ್ ಟಿವಿ ಸಿಕ್ಸ್‍ನಿಂದ ಮಾತಾಡ್ತಯಿರೋದು.”

“ಟಿವಿ ಸಿಗಸೆ.”

“ಸಿಕ್ಸ್ ಸಾರ್ ಆರು.”

“ಅದ್ಯಾವುದ್ರೀ.”

“ನೈನ್ ಉಲ್ಟಾ ಬರದ್ರೆ ಸಿಕ್ಸು ಸಾರ್.”

“ಯರಡು ನಿಮ್ದೆಯಾ.”

“ಹೌದು ಸಾರ್ ಒಂದೆರಡು ಪ್ರಶ್ನೆ ಕೇಳ್ತಿನಿ ಸಾರ್.”

“ಏನ್ನಿನ್ನೆಸರು.”

“ಶ್ಯಾನುಭೊಗ್ ಹೆಮ್ಮಿಗನೂರು ಸಾರ್.”

“ಶ್ಯಾನುಭೊಗರ ಪೈಕಿನಾ.”

“ಹೌದು ಸಾರ್.”

“ಯಲ್ಲ ಊರು ಬುಟ್ಟು ಬಂದು ಟಿವಿವಳಿಕೆ ಸೇರ್ಕಂಡುಬುಟ್ಟಿದ್ದಿರಿ.”

“ಹೌದು ಸಾರ್.”

“ಅದೇನು ಪ್ರಶ್ನೆ ಕೇಳು.”

“ಕೋವಿಡ್ ಸೋಂಕಿನ ನಿರ್ವಹಣೆಯಲ್ಲಿ ಈ ಸರಕಾರ ಭ್ರಷ್ಟಾಚಾರ ಮಾಡಿದೆ ಅಂತ ತಾವು ಆಪಾದನೆ ಮಾಡಿದ್ದಿರಿ ಸಾರ್, ಇದು ನಿಮಗೆಂಗೆ ಗೊತ್ತಾಯ್ತು ಸಾರ್.”

“ನಾನು ಮುಖ್ಯಮಂತ್ರಿಯಾಗಿದ್ದೊನು ಐದು ವರ್ಷ ಸರಕಾರ ನಡೆಸಿದ್ದೀನಿ.”

“ಅಂದ್ರೆ ಭ್ರಷ್ಟಾಚಾರ ಹೇಗೆ ನಡೆಯುತ್ತೆ ಅಂತ ನಿಮಗೆ ಗೊತ್ತಲ್ಲವ ಸಾರ್.”

“ಹೌದು ಗೊತ್ತು.”

“ನೀವು ಆಪಾದನೆ ಮಾಡ್ತಾಯಿರೊ ಮಂತ್ರಿಗಳು ನಿಮ್ಮ ಜೊತೆಲೂ ಇದ್ರಲವ ಸಾರ್.”

“ಇದ್ರು ಈಗಿಲ್ಲ ಅಲ್ಲಿಗೋಗಿ ಮಂತ್ರಿಗಳಾಗ್ಯವುರೆ ಹಾಗಂತ ಸುಮ್ಮನಿರಕ್ಕಾಗಲ್ಲ.”

“ನಿಮ್ಮ ಕಾಲದಲ್ಲೂ ಭ್ರಷ್ಟಾಚಾರ ನಡೆದಿತ್ತಲವ್ ಸಾರ್.”

“ಯಾರು ಮಾಡಿದ್ರ್ರು.”

“ಅಂಜನೇಯರ ಮೇಲೆ ದೂರು ಬಂದಿತ್ತು.”

“ಆತ ಸದನದಲ್ಲೇ ಉತ್ತರ ಕೊಟ್ಟ.”

“ಭ್ರಷ್ಟಾಚಾರ ಆಪಾದನೆ ಆಮೇಲೆ ಮಾಡಿ ಬೇಕಾದ್ರೆ ಸದನದಲ್ಲಿ ಪ್ರಶ್ನೆ ಮಾಡಿ ಈಗ ವಿಪತ್ತು ನಿರ್ವಹಿಸಿ ಅಂತ ದೇವೇಗೌಡ್ರು ಹೇಳಿದಾರೆ ಸಾರ್.”

“ಸರಿಯಯ್ಯಾ ವಿಪ್ಪತ್ತು ನಿರ್ವಹಿಸುವವಾಗಲೇ ನಡೆದಿರೋ ಅಕ್ರಮ ಕೇಳಬಾರದಾ.”

“ಏನಾಧಾರ ಇಟಗಂಡು ಕೇಳ್ತಿರಿ ಅಂತಾಯಿದಾರೆ.”

“ನಾನು ವಿರೊಧಪಕ್ಷದ ನಾಯಕ. ಆಪಾದನೆ ಮಾಡಬೇಕಾದ್ರೆ ಸಾಕ್ಷಾಧಾರ ಇಟಗಂಡೇ ಕೇಳ್ತಿನಿ.”

“ನಿಮ್ಮ ಆಪಾದನೆಗಳಿಗೆ ಕಾಂಗ್ರೆಸ್ಸಲ್ಲೇ ಸಹಮತ ಇಲ್ಲವಂತಲ್ಲಾ ಸಾರ್.”

“ಈ ವಿಷಯದಲ್ಲಿ ಕಾಂಗ್ರೆಸ್‍ನಲ್ಲಿ ಸಹಮತ ಇದೆ.”

“ಡಿ.ಕೆಶಿವಕುಮಾರ್ ನಿಮ್ಮ ಸಂಬಂಧ ಹೇಗಿದೆ ಸಾರ್.”

“ಚನ್ನಾಗಿದ್ದಿವಿ.”

“ನೀವು ವಿರೊಧಪಕ್ಷದ ನಾಯಕರು, ಅವರು ಪಾರ್ಟಿ ಅಧ್ಯಕ್ಷರು. ಭ್ರಷ್ಟಾಚಾರ ಆಪಾದನೆಯಲ್ಲಿ ಸಹಮತ ಇಲ್ಲ ಅಂತ ಸುದ್ದಿ ಇದೆ ಸಾರ್.”

“ನೋಡೋ ಶಾನುಭೊಗ, ನೀನು ಫೋನ್ ಮಾಡಿದ್ದು ಎಡೂರಪ್ಪನ ಸರಕಾರದಲ್ಲಿ ಕೋವಿಡ್ ನಿರ್ವಹಣೆಗೆ ಖರೀದಿ ಮಾಡಿದ ಸಾಮಾಗ್ರಿ ವಿಷಯದಲ್ಲಿ ಎರಡು ಸಾವಿರ ಕೋಟಿ ಭ್ರಷ್ಟಾಚಾರದ ವಿಷಯ ಕೇಳಕ್ಕೆ, ಅದು ಬುಟ್ಟು ನಮ್ಮ ಪಾರ್ಟಿ ವಿಷಯ ಕೇಳ್ತಿಯಲ್ಲ ನಾವೇನು ಪವರಲಿದ್ದಿವಾ.”

“ಪವರಿಗೆ ಬರ್ತಿರ ಸಾರ್.”

“ಅದಾಮೇಲೆ ಕಣಯ್ಯ, ಈ ಕೋವಿಡ್‍ನಲ್ಲಿ ಉಳುದು ಬದುಕಿದ ಮೇಲಿನ ಮಾತಾಲ್ಲವಾ.”

“ಅಂತೂ ಮುಖ್ಯಮಂತ್ರಿ ಸ್ಪರ್ಧೆಲಿ ನೀವೂ ಇದೀರಿ.”

“ಲೇ ಶಾನುಭೊಗ, ಎಷ್ಟೇ ಆಗಲಿ ಹಳ್ಳಿ ಜನಗಳಿಗೆ ಮಂಕುಬೂದಿ ಎರಚಿ ನೂರಾರು ವರ್ಷ ಹಳ್ಳಿ ಆಳಿದೋನು ನೀನು ಅಂಗಂತ ಈಗ್ಲು ನನ್ನನ್ನ ಯಾಮಾರಸಕ್ಕೆ ಬರಬೇಡ.”

“ನಾನೇನು ತಪ್ಪು ಮಾತಾಡಿದ್ನ ಸಾರ್.”

“ತಪ್ಪಲ್ಲ ನಿಮ್ಮ ಕಪಟತನ ಜನಗಳಿಗೆ ಗೊತ್ತಿಲ್ಲ ಅಂತ ತಿಳಕೊಬ್ಯಾಡ ವಿರೊಧಪಕ್ಷದ ಕೆಲಸನ ನೀವೂಕೂಡ ಮಾಡಬೇಕಾಗಿತ್ತು. ಸರಕಾರನ ಪ್ರಶ್ನೆ ಮಾಡಬೇಕಾಗಿತ್ತು. ಖರೀದಿ ಮಾಡಿದ ಪದಾರ್ಥನ ತಂದು ಜನಗಳಿಗೆ ಕೊಡಬೇಕಾಗಿತ್ತು. ಅದನ್ಯಲ್ಲ ಬಿಟ್ಟು ದೇಶಾಗೃಹಗಳಿಗೆ ಕ್ಯಾಮರ ಹೊತ್ತುಗಂಡು ಹೋಗ್ತಾಯಿದ್ದಿರಿ. ಈ ಕಡೆ ರಾಮುಲು, ಸುಧಾಕರ, ಆಶೋಕನ್ನ ಪ್ರಶ್ನೆ ಮಾಡದು ಬುಟ್ಟು ನನ್ನನ್ನ ಕುರುತು ನನ್ನ ಪಾರ್ಟಿ ವಿಷಯ ಕೇಳ್ತಯಿದ್ದಿ, ಕೇಳಿದ ಜನಗಳು ನಗತಾಯಿಲ್ಲ ಅಂತ ತಿಳಕೊಂಡಿದ್ದಿಯಾ.”

“ಆಯ್ತು ಸಾರ್ ಭ್ರಷ್ಟಾಚಾರ ನಡೆದಿದೆ ಅಂತ ನೀವು ಹೇಳ್ತಿರ, ಅಂತದ್ದೇನು ಆಗಿಲ್ಲ ಅಂತ ಅವುರುಳ್ತಾಯಿದಾರೆ. ನೀವೆ ಪವರಲ್ಲಿದ್ರೆ ಏನು ಮಾಡತಿದ್ರೀ?”

“ಒಂದು ವೇಳೆ ನಾನೇ ಇದ್ರೆ ಸಮಸ್ಯೆ ಬಗ್ಗೆ ಚನ್ನಾಗಿ ತಿಳಕಂಡಿರೋರು ಜೊತೆ ಮಾತಾಡತಿದ್ದೆ. ಅವುರ ಅನುಭವನ ಬಳಸಿಕೊಳ್ತಿದ್ದೆ. ಅನಾಹುತಗಳಿಗೂ ಮೊದ್ಲು ತಯಾರಿ ನಡೆಸತಿದ್ದೆ. ನಮ್ಮ ತಪ್ಪುಗಳನ್ನ 24 ಗಂಟೆ ತೋರಸೊ ನಿಮ್ಮನ್ನ ವಿಶ್ವಾಸಕ್ಕೆ ತಗಳತಿದ್ದೆ. ಆದ್ರೆ ನಿಮ್ಮಂತ ಸುಳ್ಳು ಜನನ ನನ್ನ ಜನುಮದಲ್ಲಿ ನೋಡಿಲ್ಲ.”

“ಯಾಕ್ ಸಾರ್ ಹಾಗಂತಿರಿ.”

“ಇಂದಿರಾ ಕ್ಯಾಂಟೀನಲ್ಲಿ ಜಿರ್ಲೆ ಸಿಕ್ಕುತು ಅಂತ ಅದ ತಂದು ತೋರಿಸಿದ್ರ, ಸಿದ್ದರಾಮಯ್ಯ ಕೊಡ್ತಾಯಿರದು ನಿಜವಾದ ಅಕ್ಕಿಯಲ್ಲ ಪ್ಲಾಸ್ಟಿಕ್ ಅಕ್ಕಿ ಅಂತ ಚರ್ಚೆ ಮಾಡಿದ್ರಿ, ಇಲ್ಲದಕ್ಕೆ ಬಣ್ಣಕಟ್ಟಿ ಹೇಳತಿದ್ರಿ, ಆದ್ರೆ ಇವತ್ತು ನೀವ್ಯಲ್ಲ ಧ್ವನಿನೆ ಕಳಕಂಡಿದ್ದಿರಿ. ಒಂಥರ ಸತ್ತೊಗಿದ್ದಿರಿ, ಆದ್ರೆ ತಿಳಕಳಿ ನೀವಿಲ್ಲದೆನೂ ದೇಶ ನಡೆಯುತ್ತೆ. ಆದ್ರೆ ಸರಿಯಾಗಿ ನಡೆಯಕ್ಕೆ ನೀವು ಬುಡಲ್ಲ. ಅಲವೇನೂ ಶ್ಯಾನಭೋಗ.”

“ಸಾರಿ ಸಾರ್.”


ಇದನ್ನು ಓದಿ: ನಿನಗೆ ಬ್ಲಡ್ ಕ್ಯಾನ್ಸರ್ ಇರಬೇಕು ಕಣೋ : ಯಾಹೂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...