Homeಅಂಕಣಗಳು“ನಿನ್ನ ಕಪಟತನ ಗೊತ್ತಿಲ್ಲ ಅನ್ನಕಂಡ್ಯಾ” - ಥೂತ್ತೇರಿ ಯಾಹೂ

“ನಿನ್ನ ಕಪಟತನ ಗೊತ್ತಿಲ್ಲ ಅನ್ನಕಂಡ್ಯಾ” – ಥೂತ್ತೇರಿ ಯಾಹೂ

- Advertisement -
- Advertisement -

ಕೋವಿಡ್ ಸೋಂಕಿನ ನಿರ್ವಹಣೆಯಲ್ಲಿ ಯಡೂರಪ್ಪ ಸರಕಾರದ ಸಚಿವರು ಬರೋಬರಿ ಎರಡು ಸಾವಿರ ಕೋಟಿಯನ್ನು ಈಗಾಗಲೇ ಭರ್ತಿಯಾಗಿದ್ದ ತಮ್ಮ ಜೋಬುಗಳಿಗೆ ತುರುಕಿದ್ದಾರೆ ಎಂಬ ಸಿದ್ದರಾಮಯ್ಯನ ಆರೋಪಕ್ಕೆ ಸಂಬಂಧಿಸಿದಂತೆ, ಅವರನ್ನೆ ಕೇಳಿದರೆ ಹೇಗೆ ಅನ್ನಿಸಿ, ಯಾಹೂ ಬದಲಿಗೆ ಟಿವಿ ನಿರ್ವಾಹಕನ ಹೆಸರಲ್ಲಿ ಕೇಳಿದರೆ ಹೇಗೆ ಅನ್ನಿಸಿದ್ದರಿಂದ ಫೋನ್ ಮಾಡಲಾಗಿ ರಿಂಗಾಯ್ತು.

ರಿಂಗ್ ಠೊನ್ “ಕರಿಯ ಕಂಬಳಿ ಗದ್ದಿಗೆ ಮಾಡಿ ವೀರದೊಳ್ಳ ತಂದಿರಿಸಿದರೊ”………. “ಹಲೊ ಯಾರು”

“ನಾನು ಸಾರ್ ಟಿವಿ ಸಿಕ್ಸ್‍ನಿಂದ ಮಾತಾಡ್ತಯಿರೋದು.”

“ಟಿವಿ ಸಿಗಸೆ.”

“ಸಿಕ್ಸ್ ಸಾರ್ ಆರು.”

“ಅದ್ಯಾವುದ್ರೀ.”

“ನೈನ್ ಉಲ್ಟಾ ಬರದ್ರೆ ಸಿಕ್ಸು ಸಾರ್.”

“ಯರಡು ನಿಮ್ದೆಯಾ.”

“ಹೌದು ಸಾರ್ ಒಂದೆರಡು ಪ್ರಶ್ನೆ ಕೇಳ್ತಿನಿ ಸಾರ್.”

“ಏನ್ನಿನ್ನೆಸರು.”

“ಶ್ಯಾನುಭೊಗ್ ಹೆಮ್ಮಿಗನೂರು ಸಾರ್.”

“ಶ್ಯಾನುಭೊಗರ ಪೈಕಿನಾ.”

“ಹೌದು ಸಾರ್.”

“ಯಲ್ಲ ಊರು ಬುಟ್ಟು ಬಂದು ಟಿವಿವಳಿಕೆ ಸೇರ್ಕಂಡುಬುಟ್ಟಿದ್ದಿರಿ.”

“ಹೌದು ಸಾರ್.”

“ಅದೇನು ಪ್ರಶ್ನೆ ಕೇಳು.”

“ಕೋವಿಡ್ ಸೋಂಕಿನ ನಿರ್ವಹಣೆಯಲ್ಲಿ ಈ ಸರಕಾರ ಭ್ರಷ್ಟಾಚಾರ ಮಾಡಿದೆ ಅಂತ ತಾವು ಆಪಾದನೆ ಮಾಡಿದ್ದಿರಿ ಸಾರ್, ಇದು ನಿಮಗೆಂಗೆ ಗೊತ್ತಾಯ್ತು ಸಾರ್.”

“ನಾನು ಮುಖ್ಯಮಂತ್ರಿಯಾಗಿದ್ದೊನು ಐದು ವರ್ಷ ಸರಕಾರ ನಡೆಸಿದ್ದೀನಿ.”

“ಅಂದ್ರೆ ಭ್ರಷ್ಟಾಚಾರ ಹೇಗೆ ನಡೆಯುತ್ತೆ ಅಂತ ನಿಮಗೆ ಗೊತ್ತಲ್ಲವ ಸಾರ್.”

“ಹೌದು ಗೊತ್ತು.”

“ನೀವು ಆಪಾದನೆ ಮಾಡ್ತಾಯಿರೊ ಮಂತ್ರಿಗಳು ನಿಮ್ಮ ಜೊತೆಲೂ ಇದ್ರಲವ ಸಾರ್.”

“ಇದ್ರು ಈಗಿಲ್ಲ ಅಲ್ಲಿಗೋಗಿ ಮಂತ್ರಿಗಳಾಗ್ಯವುರೆ ಹಾಗಂತ ಸುಮ್ಮನಿರಕ್ಕಾಗಲ್ಲ.”

“ನಿಮ್ಮ ಕಾಲದಲ್ಲೂ ಭ್ರಷ್ಟಾಚಾರ ನಡೆದಿತ್ತಲವ್ ಸಾರ್.”

“ಯಾರು ಮಾಡಿದ್ರ್ರು.”

“ಅಂಜನೇಯರ ಮೇಲೆ ದೂರು ಬಂದಿತ್ತು.”

“ಆತ ಸದನದಲ್ಲೇ ಉತ್ತರ ಕೊಟ್ಟ.”

“ಭ್ರಷ್ಟಾಚಾರ ಆಪಾದನೆ ಆಮೇಲೆ ಮಾಡಿ ಬೇಕಾದ್ರೆ ಸದನದಲ್ಲಿ ಪ್ರಶ್ನೆ ಮಾಡಿ ಈಗ ವಿಪತ್ತು ನಿರ್ವಹಿಸಿ ಅಂತ ದೇವೇಗೌಡ್ರು ಹೇಳಿದಾರೆ ಸಾರ್.”

“ಸರಿಯಯ್ಯಾ ವಿಪ್ಪತ್ತು ನಿರ್ವಹಿಸುವವಾಗಲೇ ನಡೆದಿರೋ ಅಕ್ರಮ ಕೇಳಬಾರದಾ.”

“ಏನಾಧಾರ ಇಟಗಂಡು ಕೇಳ್ತಿರಿ ಅಂತಾಯಿದಾರೆ.”

“ನಾನು ವಿರೊಧಪಕ್ಷದ ನಾಯಕ. ಆಪಾದನೆ ಮಾಡಬೇಕಾದ್ರೆ ಸಾಕ್ಷಾಧಾರ ಇಟಗಂಡೇ ಕೇಳ್ತಿನಿ.”

“ನಿಮ್ಮ ಆಪಾದನೆಗಳಿಗೆ ಕಾಂಗ್ರೆಸ್ಸಲ್ಲೇ ಸಹಮತ ಇಲ್ಲವಂತಲ್ಲಾ ಸಾರ್.”

“ಈ ವಿಷಯದಲ್ಲಿ ಕಾಂಗ್ರೆಸ್‍ನಲ್ಲಿ ಸಹಮತ ಇದೆ.”

“ಡಿ.ಕೆಶಿವಕುಮಾರ್ ನಿಮ್ಮ ಸಂಬಂಧ ಹೇಗಿದೆ ಸಾರ್.”

“ಚನ್ನಾಗಿದ್ದಿವಿ.”

“ನೀವು ವಿರೊಧಪಕ್ಷದ ನಾಯಕರು, ಅವರು ಪಾರ್ಟಿ ಅಧ್ಯಕ್ಷರು. ಭ್ರಷ್ಟಾಚಾರ ಆಪಾದನೆಯಲ್ಲಿ ಸಹಮತ ಇಲ್ಲ ಅಂತ ಸುದ್ದಿ ಇದೆ ಸಾರ್.”

“ನೋಡೋ ಶಾನುಭೊಗ, ನೀನು ಫೋನ್ ಮಾಡಿದ್ದು ಎಡೂರಪ್ಪನ ಸರಕಾರದಲ್ಲಿ ಕೋವಿಡ್ ನಿರ್ವಹಣೆಗೆ ಖರೀದಿ ಮಾಡಿದ ಸಾಮಾಗ್ರಿ ವಿಷಯದಲ್ಲಿ ಎರಡು ಸಾವಿರ ಕೋಟಿ ಭ್ರಷ್ಟಾಚಾರದ ವಿಷಯ ಕೇಳಕ್ಕೆ, ಅದು ಬುಟ್ಟು ನಮ್ಮ ಪಾರ್ಟಿ ವಿಷಯ ಕೇಳ್ತಿಯಲ್ಲ ನಾವೇನು ಪವರಲಿದ್ದಿವಾ.”

“ಪವರಿಗೆ ಬರ್ತಿರ ಸಾರ್.”

“ಅದಾಮೇಲೆ ಕಣಯ್ಯ, ಈ ಕೋವಿಡ್‍ನಲ್ಲಿ ಉಳುದು ಬದುಕಿದ ಮೇಲಿನ ಮಾತಾಲ್ಲವಾ.”

“ಅಂತೂ ಮುಖ್ಯಮಂತ್ರಿ ಸ್ಪರ್ಧೆಲಿ ನೀವೂ ಇದೀರಿ.”

“ಲೇ ಶಾನುಭೊಗ, ಎಷ್ಟೇ ಆಗಲಿ ಹಳ್ಳಿ ಜನಗಳಿಗೆ ಮಂಕುಬೂದಿ ಎರಚಿ ನೂರಾರು ವರ್ಷ ಹಳ್ಳಿ ಆಳಿದೋನು ನೀನು ಅಂಗಂತ ಈಗ್ಲು ನನ್ನನ್ನ ಯಾಮಾರಸಕ್ಕೆ ಬರಬೇಡ.”

“ನಾನೇನು ತಪ್ಪು ಮಾತಾಡಿದ್ನ ಸಾರ್.”

“ತಪ್ಪಲ್ಲ ನಿಮ್ಮ ಕಪಟತನ ಜನಗಳಿಗೆ ಗೊತ್ತಿಲ್ಲ ಅಂತ ತಿಳಕೊಬ್ಯಾಡ ವಿರೊಧಪಕ್ಷದ ಕೆಲಸನ ನೀವೂಕೂಡ ಮಾಡಬೇಕಾಗಿತ್ತು. ಸರಕಾರನ ಪ್ರಶ್ನೆ ಮಾಡಬೇಕಾಗಿತ್ತು. ಖರೀದಿ ಮಾಡಿದ ಪದಾರ್ಥನ ತಂದು ಜನಗಳಿಗೆ ಕೊಡಬೇಕಾಗಿತ್ತು. ಅದನ್ಯಲ್ಲ ಬಿಟ್ಟು ದೇಶಾಗೃಹಗಳಿಗೆ ಕ್ಯಾಮರ ಹೊತ್ತುಗಂಡು ಹೋಗ್ತಾಯಿದ್ದಿರಿ. ಈ ಕಡೆ ರಾಮುಲು, ಸುಧಾಕರ, ಆಶೋಕನ್ನ ಪ್ರಶ್ನೆ ಮಾಡದು ಬುಟ್ಟು ನನ್ನನ್ನ ಕುರುತು ನನ್ನ ಪಾರ್ಟಿ ವಿಷಯ ಕೇಳ್ತಯಿದ್ದಿ, ಕೇಳಿದ ಜನಗಳು ನಗತಾಯಿಲ್ಲ ಅಂತ ತಿಳಕೊಂಡಿದ್ದಿಯಾ.”

“ಆಯ್ತು ಸಾರ್ ಭ್ರಷ್ಟಾಚಾರ ನಡೆದಿದೆ ಅಂತ ನೀವು ಹೇಳ್ತಿರ, ಅಂತದ್ದೇನು ಆಗಿಲ್ಲ ಅಂತ ಅವುರುಳ್ತಾಯಿದಾರೆ. ನೀವೆ ಪವರಲ್ಲಿದ್ರೆ ಏನು ಮಾಡತಿದ್ರೀ?”

“ಒಂದು ವೇಳೆ ನಾನೇ ಇದ್ರೆ ಸಮಸ್ಯೆ ಬಗ್ಗೆ ಚನ್ನಾಗಿ ತಿಳಕಂಡಿರೋರು ಜೊತೆ ಮಾತಾಡತಿದ್ದೆ. ಅವುರ ಅನುಭವನ ಬಳಸಿಕೊಳ್ತಿದ್ದೆ. ಅನಾಹುತಗಳಿಗೂ ಮೊದ್ಲು ತಯಾರಿ ನಡೆಸತಿದ್ದೆ. ನಮ್ಮ ತಪ್ಪುಗಳನ್ನ 24 ಗಂಟೆ ತೋರಸೊ ನಿಮ್ಮನ್ನ ವಿಶ್ವಾಸಕ್ಕೆ ತಗಳತಿದ್ದೆ. ಆದ್ರೆ ನಿಮ್ಮಂತ ಸುಳ್ಳು ಜನನ ನನ್ನ ಜನುಮದಲ್ಲಿ ನೋಡಿಲ್ಲ.”

“ಯಾಕ್ ಸಾರ್ ಹಾಗಂತಿರಿ.”

“ಇಂದಿರಾ ಕ್ಯಾಂಟೀನಲ್ಲಿ ಜಿರ್ಲೆ ಸಿಕ್ಕುತು ಅಂತ ಅದ ತಂದು ತೋರಿಸಿದ್ರ, ಸಿದ್ದರಾಮಯ್ಯ ಕೊಡ್ತಾಯಿರದು ನಿಜವಾದ ಅಕ್ಕಿಯಲ್ಲ ಪ್ಲಾಸ್ಟಿಕ್ ಅಕ್ಕಿ ಅಂತ ಚರ್ಚೆ ಮಾಡಿದ್ರಿ, ಇಲ್ಲದಕ್ಕೆ ಬಣ್ಣಕಟ್ಟಿ ಹೇಳತಿದ್ರಿ, ಆದ್ರೆ ಇವತ್ತು ನೀವ್ಯಲ್ಲ ಧ್ವನಿನೆ ಕಳಕಂಡಿದ್ದಿರಿ. ಒಂಥರ ಸತ್ತೊಗಿದ್ದಿರಿ, ಆದ್ರೆ ತಿಳಕಳಿ ನೀವಿಲ್ಲದೆನೂ ದೇಶ ನಡೆಯುತ್ತೆ. ಆದ್ರೆ ಸರಿಯಾಗಿ ನಡೆಯಕ್ಕೆ ನೀವು ಬುಡಲ್ಲ. ಅಲವೇನೂ ಶ್ಯಾನಭೋಗ.”

“ಸಾರಿ ಸಾರ್.”


ಇದನ್ನು ಓದಿ: ನಿನಗೆ ಬ್ಲಡ್ ಕ್ಯಾನ್ಸರ್ ಇರಬೇಕು ಕಣೋ : ಯಾಹೂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...