Homeಕ್ರೀಡೆಒಲಂಪಿಕ್ನಾನು ಓದಿದ್ದು ಸರ್ಕಾರಿ ಶಾಲೆಯಲ್ಲಿ: ಮಹಿಳಾ ಹಾಕಿ ತಂಡದ ದಿಟ್ಟ ಆಟಗಾರ್ತಿ ಲಾಲ್‌ರೆಮ್ಸಿಯಾಮಿ..

ನಾನು ಓದಿದ್ದು ಸರ್ಕಾರಿ ಶಾಲೆಯಲ್ಲಿ: ಮಹಿಳಾ ಹಾಕಿ ತಂಡದ ದಿಟ್ಟ ಆಟಗಾರ್ತಿ ಲಾಲ್‌ರೆಮ್ಸಿಯಾಮಿ..

- Advertisement -
- Advertisement -

ಮಿಜೋರಾಂನಿಂದ ಒಲಿಂಪಿಕ್ಸ್‌ಗೆ ಆಯ್ಕೆಯಾದ ಮೊದಲ ಹಾಕಿ ಆಟಗಾರ್ತಿ ಲಾಲ್‌ರೆಮ್ಸಿಯಾಮಿ. ನನಗೆ ಹಾಕಿ ಆಡಬೇಕು ಎಂಬ ‘ಅವಾಸ್ತವಿಕ’ವಾದ ಕನಸೊಂದಿತ್ತು ಎನ್ನುವ ರೆಮ್ಸಿಯಾಮಿ, ಅದು ನನಸಾಗಿದ್ದೇಗೆ? ಎಂದು ಮನಬಿಚ್ಚಿ ವಿವರಿಸಿದ್ದಾರೆ.

ನಮ್ಮದು ಬಡ ರೈತ ಕುಟುಂಬ. ಅಪ್ಪ ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ದಿನಕ್ಕೆ 250 ರೂ ಸಿಗುವುದು ಕೂಡ ಕಷ್ಟವಾಗಿತ್ತು. ಅಮ್ಮ ನನ್ನ ಹಾಗೂ ನನ್ನೊಂದಿಗೆ ಒಡಹುಟ್ಟಿದ ಏಳು ಜನರನ್ನು ನೋಡಿಕೊಳ್ಳುತ್ತಾ ಮನೆಯಲ್ಲಿದ್ದರು. ನಾವೆಲ್ಲರೂ ಸರ್ಕಾರಿ ಶಾಲೆಯಲ್ಲಿ ಓದಿದವರು. ನಾನು ಹಿರಿಯ ಮಗಳಾಗಿದ್ದೆ. ಅಪ್ಪ, ಅಮ್ಮನಿಗೆ ಸಹಾಯ ಮಾಡಬೇಕಿದ್ದ ಜವಾಬ್ದಾರಿ ನನಗಿತ್ತು. ಆದರೆ ನನಗೊಂದು ‘ಅವಾಸ್ತವಿಕ’ವಾದ ಕನಸೊಂದಿತ್ತು. ಅದೆಂದರೆ ನಾನು ಹಾಕಿ ಆಡಲು ಬಯಸಿದ್ದೆ.

ನನ್ನಮ್ಮ ಫುಟ್‌ಬಾಲ್‌ ಆಟಗಾರ್ತಿಯಾಗಿದ್ದರು. ನಮ್ಮನ್ನು ಆಟದಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುತ್ತಿದ್ದರು. ನನಗೆ ಹಾಕಿ ಕ್ರೀಡೆಯಲ್ಲಿ ಆಸಕ್ತಿಯಿತ್ತು. ನಾವು ಇದ್ದ ಮನೆಯಿಂದ ಸುಮಾರು 84 ಕಿ.ಮೀ ದೂರದಲ್ಲಿ ಹಾಕಿ ಅಕಾಡೆಮಿಯಿತ್ತು. ನಾನು ಹಾಕಿ ಕಲಿಯಲು ಪ್ರತಿದಿನ ಅಲ್ಲಿಗೆ ಹೋಗಿ ಬರುವ ಖರ್ಚನ್ನು ವ್ಯಯಿಸುವಷ್ಟು ಹಣ ನಮ್ಮಲ್ಲಿರಲಿಲ್ಲ. ನನ್ನಪ್ಪ ‘ನಮ್ಮ ಬಳಿ ಹಣವಿಲ್ಲ’ ಎಂದು ಹೇಳಿದ್ದರು.

ಅಕಾಡೆಮಿಯಲ್ಲಿ ಆಟಗಾರರಿಗೆ ತರಬೇತಿ ನೀಡಲು ಹಾಗೂ ಹಾಸ್ಟೆಲ್‌ನಲ್ಲಿ ಉಳಿದುಕೊಳ್ಳಲು ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂಬುದು ಹೇಗೋ ನನಗೆ ತಿಳಿಯಿತು. ಇದನ್ನು ಖುಷಿಯಿಂದಲೇ ನನ್ನ ಪೋಷಕರಿಗೆ ತಿಳಿಸಿದೆ. ಅಕಾಡೆಮಿಯಲ್ಲಿಯೇ ಉಳಿದು ತರಬೇತಿ ಪಡೆಯಲು ಸಮ್ಮತಿ ನೀಡುವಂತೆ ಅವರನ್ನು ಕೋರಿಕೊಂಡೆ. ಹಾಕಿ ಕ್ರೀಡೆ ಬಗ್ಗೆ ನನಗಿದ್ದ ಆಸಕ್ತಿಯನ್ನು ಅವರಿಗೆ ಮನವರಿಕೆ ಮಾಡಿದೆ. ಪದೇ ಪದೇ ಒತ್ತಾಯ ಮಾಡಿದ ನಂತರ ಅವರು ನಾನು ಅಕಾಡೆಮಿಯಲ್ಲಿ ಉಳಿಯಲು ಒಪ್ಪಿಗೆ ಸೂಚಿಸಿದರು.

ಹಾಕಿ ಟ್ರಯಲ್ಸ್‌ ರೌಂಡ್‌ನಲ್ಲಿ ನಾನು ಉತ್ತಮ ಪ್ರದರ್ಶನ ನೀಡಿ ಅಕಾಡೆಮಿಗೆ ಆಯ್ಕೆಯಾದೆ. ಅಪ್ಪ ನನ್ನನ್ನು ಅಕಾಡೆಮಿಯಲ್ಲಿ ಬಿಟ್ಟು ಮನೆಗೆ ಹೋಗುವಾಗ ‘ನಿನಗೆ ಇಷ್ಟವಾದದ್ದನ್ನೇ ಮಾಡುತ್ತಾ ಸಂತೋಷದಿಂದಿರು’ ಎಂದರು. ನನ್ನ ಕುಟುಂಬದವರನ್ನು ಬಿಟ್ಟಿರುವುದು ನನಗೂ ಕಷ್ಟವಾಗಿತ್ತು. ಪ್ರತಿವರ್ಷ ಕ್ರಿಸ್‌ಮಸ್‌ ರಜಾ ದಿನಗಳಲ್ಲಿ ಮಾತ್ರ ಕುಟುಂಬದವರನ್ನು ಭೇಟಿ ಮಾಡುತ್ತಿದ್ದೆ. ನಾನು ಮನೆಗೆ ಮರಳಿದ್ದಾಗ ಸುತ್ತಮುತ್ತಲಿನ ಜನ, ಸಂಬಂಧಿಕರು ಎಲ್ಲರೂ ‘ನಿಮ್ಮ ಮಗಳು ನಿಮ್ಮೊಟ್ಟಿಗೆ ಇದ್ದು, ಕುಟುಂಬ ನಿರ್ವಹಿಸಬೇಕಿತ್ತು’, ‘ಆಕೆಗೆ ಭವಿಷ್ಯವಿಲ್ಲ’ ಎಂದೆಲ್ಲಾ ನನ್ನ ಕುಟುಂಬದವನ್ನು ಹಂಗಿಸುತ್ತಿದ್ದರು. ಇದೆಲ್ಲವೂ ನನ್ನನ್ನು ಕಾಡದಂತೆ ನನ್ನ ಕುಟುಂಬದವರು ನೋಡಿಕೊಂಡರು. ಆದರೆ, ನನಗೆ ಭಯವಾಯಿತು. ‘ಒಂದಲ್ಲಾ ಒಂದು ದಿನ ನಾನು ಆ ನೀಲಿ ಜರ್ಸಿಯನ್ನು ಧರಿಸುತ್ತೇನೆ ಮತ್ತು ನಿಮಗೆ ಎಲ್ಲವನ್ನೂ ಕೊಡುತ್ತೇನೆ’ ಎಂದು ನಾನು ಅವರಿಗೆ ಭರವಸೆ ನೀಡಿದೆ. ಇದೇ ನನಗೆ ಅಕಾಡೆಮಿಯಲ್ಲಿ ಕಠಿಣ ತರಬೇತಿ ಪಡೆಯಲು ಸಹಕಾರಿಯಾಯಿತು.

ನನ್ನ ಪೋಷಕರು ನನ್ನನ್ನು ಬೆಂಬಲಿಸಿದ್ದು ಮಾತ್ರವಲ್ಲದೇ ಅದಕ್ಕೂ ಮೀರಿ ಜೊತೆಗಿದ್ದರು. ಹೀಗೆ ಒಮ್ಮೆ, ಒಂದು ಪಂದ್ಯಾವಳಿಯಲ್ಲಿ ಆಡಲು ನನ್ನ ಪೋಷಕರ ಸಹಿ ಬೇಕಿತ್ತು. ಅವರು 45 ಕಿ.ಮೀ ದೂರದಲ್ಲಿದ್ದರು. ನಾನು ಇರುವಲ್ಲಿಗೆ ಬಂದು ಸಹಿ ಮಾಡಲು ಬೇಕಾಗುವಷ್ಟು ಹಣ ಅವರ ಹತ್ತಿರವಿರಲಿಲ್ಲ. ಆದರೂ ನನ್ನಪ್ಪ ಬಂದರು; ಅಪ್ಪ ನನ್ನ ಹೀರೋ!

ನಾನು ರಾಷ್ಟ್ರೀಯ ಜೂನಿಯರ್‌ ಹಾಕಿ ತಂಡಕ್ಕೆ ಆಯ್ಕೆಯಾದೆ. ತಂಡದೊಂದಿಗೆ ಆಡಲು ನಾನು ದೆಹಲಿಗೆ ಹೋದೆ. ಹೊಸ ತಂಡ, ಹೊಸ ಪ್ರದೇಶ.. ಎಲ್ಲವೂ ನನಗೆ ಹೊಸದಾಗಿತ್ತು. ನಾನು ಮಾತನಾಡಲು ಸಂಕೋಚಪಡುತ್ತಿದ್ದೆ. ಆದರೆ ನನ್ನ ತಂಡದ ಸಂಗಾತಿಗಳು ತಂಡದ ಸಭೆಗಳಲ್ಲಿ ನಾನು ಮಾತನಾಡುವಂತೆ ಪ್ರೋತ್ಸಾಹಿಸಿದರು. ನನ್ನ ಆತ್ಮವಿಶ್ವಾಸ ಹೆಚ್ಚಾಯಿತು. ಅದನ್ನು ಮೈದಾನದಲ್ಲಿಯೂ ವ್ಯಕ್ತಪಡಿಸಲು ಸಾಧ್ಯವಾಯಿತು. 2016ರಲ್ಲಿ ನಡೆದ ಏಷ್ಯನ್‌ ಕಪ್‌ನಲ್ಲಿ ನಾನು ಭಾರತವನ್ನು ಪ್ರತಿನಿಧಿಸಿದ್ದ ತಂಡದಲ್ಲಿದೆ.

ನನ್ನ ಕಠಿಣ ದಿನಗಳು ಮುಂದಿದ್ದವು. 2019ರಲ್ಲಿ ಜಪಾನ್‌ನಲ್ಲಿ ನಡೆದ ಅಂತರಾಷ್ಟ್ರೀಯ ಹಾಕಿ ಫೇಡರೇಷನ್‌ನ ಸರಣಿಯಲ್ಲಿ ಚಿಲಿ ವಿರುದ್ಧ ಭಾರತದ ಸೆಮಿಫೈನಲ್‌ ಪಂದ್ಯವಿತ್ತು. ಆ ಪಂದ್ಯ ನಡೆಯುವ ಒಂದು ದಿನ ಮೊದಲು ಅಪ್ಪ ನಿಧನರಾದರು. ಅಪ್ಪನ ನಿಧನದಿಂದ ಸಂಪೂರ್ಣವಾಗಿ ಕುಗ್ಗಿಹೋದೆ, ಈ ಕೂಡಲೇ ಮನೆಗೆ ಹೋಗಬೇಕೆಂದು ತುಂಬಾ ಅನ್ನಿಸುತ್ತಿತ್ತು. ಆದರೆ, ಧೈರ್ಯ ಮಾಡಿ ನಾನು ಪಂದ್ಯದಲ್ಲಿ ಆಟವಾಡಲು ನಿರ್ಧರಿಸಿದ್ದೆ. ನನ್ನಪ್ಪ ಕೂಡ ಬಯಸುತ್ತಿದ್ದದ್ದು ಅದನ್ನೆ. ಅಪ್ಪನ ಪ್ರೀತಿ ಎಲ್ಲವನ್ನು ಮರೆತು ನಾನು ಚೆನ್ನಾಗಿ ಆಡುವಂತೆ ಮಾಡುತ್ತಿತ್ತು. ಆ ಟೂರ್ನಿಯಲ್ಲಿ ಭಾರತ ಜಯಗಳಿಸಿತು.

ಆ ದಿನ ಇಂದಿಗೂ ನನಗೆ ನೆನಪಿದೆ. ಆಟ ಮುಗಿಯಿತು ಎಂದು ಸೀಟಿ ಕೂಗುತ್ತಿದ್ದಂತೆ ನಾನು ಭಾವುಕಳಾದೆ. ಅಳಲು ಆರಂಭಿಸಿದೆ. ನನ್ನ ತಂಡದ ಸದಸ್ಯರು ನನ್ನ ಸುತ್ತಲೂ ಒಟ್ಟುಗೂಡಿ, ‘ನಿಮ್ಮ ತಂದೆ ತುಂಬಾ ಸಂತೋಷಪಡುತ್ತಾರೆ’ ಎಂದರು. ನಾನು ಬಯಸಿದ್ದು ಅಪ್ಪನಿಗೆ ನನ್ನ ಬಗ್ಗೆ ಹೆಮ್ಮೆ ಮೂಡಿಸುವುದಾಗಿತ್ತು. ನನ್ನನ್ನು ಬೆಂಬಲಿಸುತ್ತಿದ್ದ, ನನ್ನ ಬಗ್ಗೆ ಹೆಮ್ಮೆ ಪಡುತ್ತಿದ್ದ ನನ್ನ ಅಪ್ಪನಿಗೆ ವಿದಾಯ ಹೇಳಲಾಗಲಿಲ್ಲ ಎಂಬುದು ನನ್ನ ಜೀವನದ ದೊಡ್ಡ ವಿಷಾದದ ಸಂಗತಿ.

ಈಗ ನನ್ನ ಗುರಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಗೋಲು ಗಳಿಸುವುದು, ಗೆಲ್ಲುವುದು ಮಾತ್ರ. ನನ್ನಪ್ಪನಿಗಾಗಿ, ನನ್ನ ತಂಡಕ್ಕಾಗಿ, ನನ್ನ ಭಾರತಕ್ಕಾಗಿ ನಾನು ಆಡುತ್ತೇನೆ ಎನ್ನುವ ಲಾಲ್‌ರೆಮ್ಸಿಯಾಮಿ ಭಾಗವಹಿಸಿರುವ ಭಾರತ ತಂಡ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್‌ ತಲುಪುವತ್ತ ದಾಪುಗಾಲಿಟ್ಟಿದೆ. ಇದೇ ಮೊದಲ ಬಾರಿಗೆ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿರುವ ಭಾರತೀಯ ಮಹಿಳಾ ಹಾಕಿ ತಂಡ ಗೆಲುವು ಸಾಧಿಸಲಿ ಎಂಬುದು ನಮ್ಮಲ್ಲೆರ ಆಶಯ.

ಕೃಪೆ: ಹ್ಯೂಮನ್ಸ್‌ ಆಫ್‌ ಬಾಂಬೆ (Humans of Bombay)

ಲಾಲ್‌ರೆಮ್ಸಿಯಾಮಿ ಮಿಜೋರಾಂನಿಂದ ಒಲಿಂಪಿಕ್ಸ್‌ಗೆ ಆಯ್ಕೆಯಾದ ಮೊದಲ ಮಹಿಳೆ, ಹಾಕಿ ಆಟಗಾರ್ತಿ ಲಾಲ್‌ರೆಮ್ಸಿಯಾಮಿ ಜನಿಸಿದ್ದು 2000 ಮಾರ್ಚ್‌ 3ರಂದು. ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಮ್ಸಿಯಾಮಿ, 18 ವರ್ಷದೊಳಗಿನ ಭಾರತದ ಹಾಕಿ ತಂಡವನ್ನು ಪ್ರತಿನಿಧಿಸಿ 2018ರ ವರ್ಲ್ಡ್‌ ಕಪ್‌ನಲ್ಲಿ ಸ್ಪರ್ಧಿಸಿದ್ದರು. ಏಷ್ಯನ್‌ ಕಪ್‌ನಲ್ಲಿ ಇವರು ಪ್ರತಿನಿಧಿಸಿದ್ದ ಭಾರತ ತಂಡವು ಬೆಳ್ಳಿ ಪದಕ ಗೆದ್ದಿತ್ತು. ಪ್ರಸ್ತುತ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನಲ್ಲಿ ಇವರು ಪ್ರತಿನಿಧಿಸಿರುವ ಹಾಕಿ ತಂಡವು ಸೆಮಿಫೈನಲ್‌ ಪ್ರವೇಶಿಸಿದೆ.


ಇದನ್ನೂ ಓದಿ: ಮುರಿದ ಹಾಕಿ ಸ್ಟಿಕ್, ಸೆಲ್ವಾರ್ ಕಮೀಜ್‌ನಲ್ಲಿ ಅಭ್ಯಾಸ ನಡೆಸಿದ್ದೆ: ಸಾಧನೆ ಹಿಂದಿನ ನೋವಿನ ಕಥನ ಬಿಚ್ಚಿಟ್ಟ ರಾಣಿ ರಾಂಪಾಲ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...