Homeಕ್ರೀಡೆಒಲಂಪಿಕ್ಮುರಿದ ಹಾಕಿ ಸ್ಟಿಕ್, ಸೆಲ್ವಾರ್ ಕಮೀಜ್‌ನಲ್ಲಿ ಅಭ್ಯಾಸ ನಡೆಸಿದ್ದೆ: ಸಾಧನೆ ಹಿಂದಿನ ನೋವಿನ ಕಥನ ಬಿಚ್ಚಿಟ್ಟ...

ಮುರಿದ ಹಾಕಿ ಸ್ಟಿಕ್, ಸೆಲ್ವಾರ್ ಕಮೀಜ್‌ನಲ್ಲಿ ಅಭ್ಯಾಸ ನಡೆಸಿದ್ದೆ: ಸಾಧನೆ ಹಿಂದಿನ ನೋವಿನ ಕಥನ ಬಿಚ್ಚಿಟ್ಟ ರಾಣಿ ರಾಂಪಾಲ್

ಮಳೆ ಹೆಚ್ಚಾಗಿ ಪ್ರವಾಹಕ್ಕೆ ತುತ್ತಾಗುತ್ತಿದ್ದ ಮನೆ, ಅರೆ ಹೊಟ್ಟೆ, ಮಲಗಲು ಬಿಡದೇ ಕಿವಿಯಲ್ಲಿ ಗುಯ್‌ ಗುಟ್ಟುತ್ತಿದ್ದ ಸೊಳ್ಳೆ.... ಇದು ನನ್ನ ಕುಟುಂಬದ ಪ್ರತಿನಿತ್ಯದ ಬದುಕಾಗಿತ್ತು.

- Advertisement -
- Advertisement -

ರಾಣಿ ರಾಂಪಾಲ್‌ ನಾಯಕತ್ವದಲ್ಲಿ ಭಾರತೀಯ ಮಹಿಳಾ ಹಾಕಿ ತಂಡವು 2020ರ ಟೋಕಿಯೋ ಒಲಂಪಿಕ್ಸ್‌ನಲ್ಲಿ ಅತ್ಯುತ್ತಮ ಆಟವಾಡುತ್ತಿದ್ದು, ಸೆಮಿ ಫೈನಲ್ ಪ್ರವೇಶಿಸಿದೆ. ಹರಿಯಾಣದ ಪುಟ್ಟ ಹಳ್ಳಿಯಿಂದ ಬಂದ ರಾಣಿ ರಾಂಪಾಲ್ ಹಾಕಿ ಕ್ರೀಡೆಯತ್ತ ಗಮನ ಸೆಳೆದಿದ್ದು ಹೇಗೆ? ಕುಟುಂಬದ ಬೆಂಬಲ ಹೇಗಿತ್ತು ಎಂಬುದರ ಬಗ್ಗೆ ಅವರೇ ಹೇಳಿರುವ ಮಾತುಗಳು ಇಲ್ಲಿವೆ.

ಮಳೆ ಹೆಚ್ಚಾಗಿ ಪ್ರವಾಹಕ್ಕೆ ತುತ್ತಾಗುತ್ತಿದ್ದ ಮನೆ, ಅರೆ ಹೊಟ್ಟೆ, ಮಲಗಲು ಬಿಡದೇ ಕಿವಿಯಲ್ಲಿ ಗುಯ್‌ ಗುಟ್ಟುತ್ತಿದ್ದ ಸೊಳ್ಳೆ…. ಇದು ನನ್ನ ಕುಟುಂಬದ ಪ್ರತಿನಿತ್ಯದ ಬದುಕಾಗಿತ್ತು. ಅಪ್ಪ ತಳ್ಳುಗಾಡಿಯಲ್ಲಿ ಸಾಮಾನು ಸಾಗಿಸುವ ಕೂಲಿ ಕೆಲಸ ಮಾಡುತ್ತಿದ್ದರು. ಅಮ್ಮ ಮನೆಕೆಲಸ ಮಾಡುತ್ತಿದ್ದರು. ನನ್ನ ಹೆತ್ತವರು ತಮ್ಮ ಕೈಲಾದಷ್ಟು ಪ್ರಯತ್ನ ಮಾಡಿ ಜೀವನ ನಡೆಸುತ್ತಿದ್ದರು. ಇವೆಲ್ಲದರಿಂದ ತಪ್ಪಿಸಿಕೊಳ್ಳಲು ನಾನು ಬಯಸುತ್ತಿದ್ದೆ.

ನನ್ನ ಮನೆಯ ಹತ್ತಿರ ಹಾಕಿ ಅಕಾಡೆಮಿ ಇತ್ತು. ಅಲ್ಲಿ ನಡೆಯುತ್ತಿದ್ದ ಹಾಕಿ ಆಟಗಾರರ ಅಭ್ಯಾಸವನ್ನು ಪ್ರತಿನಿತ್ಯ ಗಂಟೆಗಟ್ಟಲೆ ನೋಡುತ್ತಿದ್ದೆ. ಅಷ್ಟೆ ಅಲ್ಲ. ನಾನು ಕೂಡ ಆಡಬೇಕೆಂದು ಬಯಸುತ್ತಿದ್ದೆ. ಹಾಕಿ ಅಭ್ಯಾಸ ಮಾಡಲು ಹಾಕಿ ಸ್ಟಿಕ್‌ ಅಗತ್ಯವಿತ್ತು. ನನ್ನ ಅಪ್ಪನಿಗೆ ದಿನಕ್ಕೆ ದೊರೆಯುತ್ತಿದ್ದ 80 ರೂ ಕೂಲಿಯಲ್ಲಿ ಇಡೀ ಸಂಸಾರವನ್ನು ನಡೆಸುತ್ತಿದ್ದರು. ಆದ್ದರಿಂದ ನಾನು ಹಾಕಿ ಸ್ಟಿಕ್‌ ಖರೀದಿಸುವುದು ಕನಸಾಗಿತ್ತು.

ಆದರೆ ನಾನು ಮಾತ್ರ ಪ್ರತಿದಿನ ಆ ಅಕಾಡೆಮಿಯಲ್ಲಿ ಆಟ ಅಭ್ಯಾಸ ಮಾಡಿಸುತ್ತಿದ್ದ ತರಬೇತುದಾರರ (ಕೋಚ್‌) ಹತ್ತಿರ ಹೋಗಿ ನನಗೂ ಆಟ ಹೇಳಿಕೊಡಿ ಎಂದು ದುಂಬಾಲು ಬೀಳುತ್ತಿದ್ದೆ. ಆದರೆ ಕೋಚ್‌, ’ಪ್ರಾಕ್ಟೀಸ್‌ ಸಮಯದಲ್ಲಿ ಓಡಲು, ಆಡುವಷ್ಟು ಶಕ್ತಿ ನಿನ್ನಲ್ಲಿಲ್ಲ’ ಎನ್ನುತ್ತಿದ್ದ ಅವರು ನಾನು ಅಪೌಷ್ಟಿಕತೆಯಿಂದ ಬಳಲುತ್ತಿದ್ದದ್ದರಿಂದ ನನಗೆ ತರಬೇತಿ ನೀಡಲು ತಿರಸ್ಕರಿಸುತ್ತಿದ್ದರು.

ಒಂದು ದಿನ ಆಟದ ಮೈದಾನದಲ್ಲಿ ನನಗೊಂದು ಮುರಿದ ಹಾಕಿ ಸ್ಟಿಕ್‌ ಸಿಕ್ಕಿತು. ಅದನ್ನೇ ಹಿಡಿದುಕೊಂಡು ಆಟವಾಡಲು ಆರಂಭಿಸಿದೆ. ನನ್ನ ಹತ್ತಿರ ಟ್ರೈನಿಂಗ್‌ಗೆ ಅಗತ್ಯವಿರುವ ಬಟ್ಟೆ ಇರಲ್ಲಿಲ್ಲ. ನಾನು ಹಾಕಿಕೊಳ್ಳುತ್ತಿದ್ದ ಸೆಲ್ವಾರ್‌ ಕಮೀಜ್‌ನಲ್ಲಿಯೇ ನಾನು ಓಡುತ್ತಿದ್ದೆ. ನಾನು ನನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ನಿರ್ಧರಿಸಿದ್ದೆ. ಅವಕಾಶಕ್ಕಾಗಿ ಕೋಚ್‌ ಬಳಿ ವಿನಂತಿಸಿಕೊಂಡೆ. ಕೊನೆಗೂ ಕಷ್ಟಪಟ್ಟು ಅವರನ್ನು ಒಪ್ಪಿಸಿದೆ.

ರಾಣಿ ರಾಂಪಾಲ್‌

ಈ ಬಗ್ಗೆ ಕುಟುಂಬದವರಿಗೆ ತಿಳಿಸಿದಾಗ, ‘ಹೆಣ್ಣುಮಕ್ಕಳು ಮನೆಯಲ್ಲಿ ಕೆಲಸ ಮಾಡುತ್ತಾರೆ. ನಾವು ನಿನ್ನನ್ನು ಸ್ಕರ್ಟ್‌‌ನಲ್ಲಿ ಆಡಲು ಬಿಡುವುದಿಲ್ಲ’ ಎಂದು ಪ್ರತಿಕ್ರಿಯಿಸಿದ್ದರು. ನಾನು ಅವರ ಬಳಿ ವಿನಂತಿಸಿಕೊಂಡೆ. ‘ದಯವಿಟ್ಟು ನನಗೆ ಹೋಗಲು ಬಿಡಿ, ನಾನು ಸೋತಿದ್ದೇ ಆದರೆ ನೀವೇಳಿದಂತೆ ಕೇಳುವೆ’ ಎಂದು ಕೇಳಿಕೊಂಡೆ. ಕೊನೆಗೆ ನನ್ನ ಕುಟುಂಬ ಒಲ್ಲದ ಮನಸ್ಸಿನಿಂದಲೇ ನನಗೆ ಆಟವಾಡಲು ಸಮ್ಮತಿ ನೀಡಿತ್ತು.

ಹಾಕಿ ಕೋಚಿಂಗ್‌ ಸೂರ್ಯ ಉದಯಿಸುವ ಮುನ್ನವೇ ಆರಂಭವಾಗುತ್ತಿತ್ತು. ನಾನು ಕೂಡ ಬೆಳಗ್ಗೆ ಬೇಗ ಎದ್ದು ಮೈದಾನಕ್ಕೆ ಹೋಗಬೇಕಾಗುತ್ತಿತ್ತು. ನಮ್ಮ ಮನೆಯಲ್ಲಿ ಗಡಿಯಾರ ಇರಲಿಲ್ಲ. ಹಾಗಾಗಿ ಅಮ್ಮ ಎದ್ದು ಆಕಾಶವನ್ನು ನೋಡಿ ನನ್ನನ್ನು ಎಚ್ಚರಿಸುತ್ತಿದ್ದರು.

ಅಕಾಡೆಮಿಯಲ್ಲಿ ‌ಪ್ರತಿಯೊಬ್ಬ ಆಟಗಾರನು ಅರ್ಧ ಲೀಟರ್‌ ಹಾಲು ತರಬೇಕು ಎಂಬುದು ಕಡ್ಡಾಯವಾಗಿತ್ತು. ನಮ್ಮ ಕುಟುಂಬದಲ್ಲಿ ಕಾಲು ಲೀಟರ್‌ ಹಾಲು ಸಿಗುವುದು ಕಷ್ಟವಾಗಿತ್ತು. ಹಾಗಾಗಿ ನಾನು ಯಾರಿಗೂ ತಿಳಿಯದ ಹಾಗೆ ಸ್ವಲ್ಪ ಹಾಲಿಗೆ ಹೆಚ್ಚು ನೀರನ್ನು ಮಿಶ್ರಣ ಮಾಡಿ ಕುಡಿಯುತ್ತಿದ್ದೆ. ಏಕೆಂದರೆ ನಾನು ಹೇಗಾದರೂ ಮಾಡಿ ಆಟವಾಡಲು ಬಯಸುತ್ತಿದ್ದೆ.

ನನ್ನ ಕೋಚ್‌ ನನಗೆ ಬೆನ್ನೆಲುಬಾಗಿ ನಿಂತಿದ್ದರು. ನನಗಾಗಿ ಅವರು ಹಾಕಿ ಕಿಟ್‌ ಮತ್ತು ಶೂಗಳನ್ನು ಕೊಡಿಸಿದರು. ಅವರ ಕುಟುಂಬದೊಂದಿಗೆ ಬೆರೆಯಲು ಅವಕಾಶ ನೀಡಿದರು. ನನ್ನ ಊಟದ ಅಗತ್ಯಗಳನ್ನು ಅವರೇ ನೋಡಿಕೊಂಡರು. ಕಷ್ಟಪಟ್ಟು ನಾನು ತರಬೇತಿ ಪಡೆಯುತ್ತಿದ್ದೆ. ಒಂದು ದಿನವೂ ತರಬೇತಿಯನ್ನು ತಪ್ಪಿಸುತ್ತಿರಲಿಲ್ಲ.

ನನ್ನ ಮೊದಲ ಸಂಬಳ ಈಗಲೂ ನೆನಪಿದೆ. ಟೂರ್ನಮೆಂಟ್‌ ಒಂದರಲ್ಲಿ ನಾನು 500ರೂ ಗೆದ್ದಿದ್ದೆ. ಆ ಹಣವನ್ನು ಅಪ್ಪನಿಗೆ ಕೊಟ್ಟಿದ್ದೆ. ಅಲ್ಲಿಯವರೆಗೂ ಎಂದೂ ಅಪ್ಪ ಅಷ್ಟೊಂದು ಹಣವನ್ನು ತನ್ನ ಕೈನಲ್ಲಿ ಹಿಡಿದಿರಲಿಲ್ಲ. ‘ಒಂದಲ್ಲಾ ಒಂದು ದಿನ ನಾವು ನಮ್ಮ ಸ್ವಂತ ಮನೆಯನ್ನು ಕಟ್ಟಿಸುತ್ತೇನೆ’ ಎಂದು ಅಂದು ನಾನು ನನ್ನ ಕುಟುಂಬದವರಿಗೆ ಪ್ರಮಾಣ ಮಾಡಿದೆ. ಆ ನಿಟ್ಟಿನಲ್ಲಿ ನನ್ನೆಲ್ಲಾ ಶಕ್ತಿಯನ್ನು ಬಳಸಿ ಎಲ್ಲವನ್ನು ಮಾಡಿದ್ದೇನೆ.

ರಾಣಿ ರಾಂಪಾಲ್‌
PC: Reuters / Bernadett Szabo

ನನ್ನ ರಾಜ್ಯವನ್ನು ಪ್ರತಿನಿಧಿಸಿ ಹಲವಾರು ಚಾಂಪಿಯನ್‌ಶಿಪ್‌ಗಳಲ್ಲಿ ಆಡಿದ್ದ ನನಗೆ, ನನ್ನ 15ನೇ ವಯಸ್ಸಿನಲ್ಲಿ ರಾಷ್ಟ್ರೀಯ ತಂಡಕ್ಕೆ ಸೇರುವಂತೆ ಕರೆ ಬಂದಿತು. ಇಷ್ಟೆಲ್ಲಾ ಅವಕಾಶಗಳು ನನಗೆ ದೊರೆತಿದ್ದರೂ ನನ್ನ ಸಂಬಂಧಿಕರು ಮಾತ್ರ ಯಾವಾಗ ಮದುವೆಯಾಗುತ್ತೀಯಾ? ಎಂದು ಕೇಳುತ್ತಿದ್ದರು. ಆದರೆ ಅಪ್ಪ, ‘ನಿನ್ನ ಮನಸ್ಸಿಗೆ ಇಷ್ಟವಾಗುವವರೆಗೂ ಆಟವಾಡು’ ಎಂದರು. ನನ್ನ ಕುಟುಂಬದ ಬೆಂಬಲದೊಂದಿಗೆ ನಾನು ಆಟದ ಕಡೆ ಗಮನ ಹರಿಸಿದೆ. ಅಂತಿಮವಾಗಿ ನಾನು ಭಾರತದ ಮಹಿಳಾ ಹಾಕಿ ತಂಡದ ನಾಯಕಿಯಾಗಿದ್ದೇನೆ.

ಇದಾದ ಸ್ವಲ್ಪ ಸಮಯದ ನಂತರ ಅಪ್ಪನೊಂದಿಗೆ ಅವರ ಸ್ನೇಹಿತರೊಬ್ಬರ ಮನೆಗೆ ಹೋಗಿದ್ದೇವು. ಅವರು ತಮ್ಮ ಮೊಮ್ಮಗಳನ್ನು ಕರೆದು ನನಗೆ ‘ಅವಳು ನಿನ್ನಿಂದ ಸ್ಫೂರ್ತಿ ಪಡೆದಿದ್ದಾಳೆ. ಅವಳೂ ಹಾಕಿ ಆಟಗಾರಳಾಗಲು ಬಯಸುತ್ತಾಳೆ’ ಎಂದರು. ನನಗೆ ತುಂಬಾ ಸಂತೋಷವಾಯಿತು. ದುಖಃ ಒತ್ತರಿಸಿ ಬಂತು. ಕಣ್ಣೀರು ತಡೆಯಲಾಗಲಿಲ್ಲ.

2017ರಲ್ಲಿ, ಅಂತಿಮವಾಗಿ ನಾನು ನನ್ನ ಕುಟುಂಬಕ್ಕೆ ನೀಡಿದ್ದ ಭರವಸೆ ಈಡೇರಿಸಿದೆ. ಅವರಿಗಾಗಿ ಸ್ವಂತ ಮನೆಯನ್ನು ಖರೀದಿಸಿದೆ. ಆ ದಿನ ನಾವು ಒಬ್ಬರನ್ನೊಬ್ಬರು ಬಿಗಿದಪ್ಪಿಕೊಂಡು ಒಟ್ಟಿಗೆ ಅಳುತ್ತಿದ್ದೆವು.

ಇದು ಇಲ್ಲಿಗೆ ಮುಗಿದಿಲ್ಲ. ನನ್ನ ಕೋಚ್‌ ಟೊಕಿಯೋ ಒಲಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಕನಸು ಕಂಡಿದ್ದರು. ಈ ವರ್ಷ ನಾನು ಆ ಕನಸನ್ನು ನನಸು ಮಾಡಲು ತೀರ್ಮಾನಿಸಿದ್ದೇನೆ.

ಕೃಪೆ: ಹ್ಯೂಮನ್ಸ್‌ ಆಫ್‌ ಬಾಂಬೆ (Humans of Bombay)

ರಾಣಿ ರಾಂಪಾಲ್‌ ಪರಿಚಯ:

2010ರ ವಿಶ್ವಕಪ್‌ನಲ್ಲಿ ಭಾಗವಹಿಸಿದ ರಾಷ್ಟ್ರೀಯ ತಂಡದ ಅತ್ಯಂತ ಕಿರಿಯ ಆಟಗಾರ್ತಿ, ಪ್ರಸ್ತುತ ಭಾರತದ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್‌ ಜನಿಸಿದ್ದು 1994 ಡಿಸೆಂಬರ್‌ 4ರಂದು. ಹರಿಯಾಣ ರಾಜ್ಯದ ಕುರುಕ್ಷೇತ್ರ ಜಿಲ್ಲೆ, ಶಹಾಬಾದ್‌ ಮಾರ್ಕಂಡ ಇವರ ಹುಟ್ಟೂರು. ತನ್ನ 15ನೇ ವಯಸ್ಸಿಗೆ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಪಾರ್ದಾಪಣೆ ಮಾಡಿದ ರಾಣಿ ಈವರೆಗೂ ಸುಮಾರು 212 ಪಂದ್ಯಗಳಲ್ಲಿ ಆಡಿದ್ದಾರೆ. ಸುಮಾರು 134ಗೋಲುಗಳನ್ನು ಗಳಿಸಿದ್ದಾರೆ. ಸ್ಟ್ರೈಕರ್‌ ಆಗಿಯೂ ಪ್ರಸಿದ್ಧರಾಗಿರುವ ಇವರಿಗೆ 2020ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ನೀಡಿ ಗೌರವಿಸಿದೆ.

2013ರಲ್ಲಿ ನಡೆದ ಜೂನಿಯರ್‌ ವರ್ಲ್ಡ್‌ ಕಪ್‌ನಲ್ಲಿ ಇವರಿದ್ದ ಮಹಿಳಾ ತಂಡವು ಕಂಚು, 2018ರಲ್ಲಿ ಜಕರ್ತಾದಲ್ಲಿ ನಡೆದ ಏಷ್ಯನ್‌ ಕಪ್‌ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಸೇರಿದಂತೆ ಹಲವು ಪದಕಗಳನ್ನು ಗೆದ್ದಿದ್ದಾರೆ. ಪ್ರಸ್ತುತ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನಲ್ಲಿ ರಾಣಿ ನಾಯಕತ್ವದ ಮಹಿಳಾ ಹಾಕಿ ತಂಡವು ಸೆಮಿಫೈನಲ್‌ ತಲುಪಿ ಇತಿಹಾಸ ನಿರ್ಮಿಸಿದೆ.


ಇದನ್ನೂ ಓದಿ; ಒಂದೇ ಒಲಂಪಿಕ್ಸ್‌ನಲ್ಲಿ 7 ಪದಕ ಗೆದ್ದ ಮೊದಲ ಮಹಿಳೆ ಎನಿಸಿಕೊಂಡ ಎಮ್ಮ ಮಕೀನ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ನವದೆಹಲಿ: ಜುಲೈ 8 ರಂದು ಮೀರತ್‌ನಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರ ಮೇಲೆ ಉತ್ತರ ಪ್ರದೇಶ ಪೊಲೀಸರು ಭೀಕರ ಹಲ್ಲೆ,...

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...