Homeಸಿನಿಮಾಕ್ರೀಡೆಆಡಿಸಿ ನೋಡು, ಬೀಳಿಸಿ ನೋಡು ಉರುಳಿ ಹೋಗದು! ಭಾರತದ ಇವಿಎಂ ಮತ್ತು ಕ್ರಿಕೆಟ್‍ನ ‘ಝಿಂಗ್’ ಬೇಲ್ಸ್!

ಆಡಿಸಿ ನೋಡು, ಬೀಳಿಸಿ ನೋಡು ಉರುಳಿ ಹೋಗದು! ಭಾರತದ ಇವಿಎಂ ಮತ್ತು ಕ್ರಿಕೆಟ್‍ನ ‘ಝಿಂಗ್’ ಬೇಲ್ಸ್!

- Advertisement -
- Advertisement -

| ಮಲ್ಲಿ |

ಸದ್ಯ ಸುದ್ದಿಯಲ್ಲಿರುವ ವಿಶ್ವಕಪ್ ಕ್ರಿಕೆಟ್‍ನಲ್ಲಿ ‘ಝಿಂಗ್’ ಬೇಲ್ಸ್‍ಗಳು ಅಲ್ಲಾಡುತ್ತಲೇ ಇಲ್ಲ! ಒಮ್ಮೆ ನಮ್ಮ ಬೂಮ್ರಾ ಬಿರುಸಾಗಿ ಎಸೆದಾಗ ಚೆಂಡು ಸ್ಟಂಪ್‍ಗೆ ತಾಗಿತು, ಆದರೆ ‘ಝಿಂಗ್’ ಬೇಲ್ಸ್ ಮಿಸುಕಲೇ ಇಲ್ಲ, ಬೇಲ್ಸ್‍ನಲ್ಲಿರುವ ದೀಪಗಳು ಮಿನುಗಲೂ ಇಲ!. ಹೀಗಾಗಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಓಟಾಗಿಯೂ ಓಟಾಗಲಿಲ್ಲ! ಈ ಬೇಲ್ಸ್‍ಗಳನ್ನು ಕುಟ್ಟಿ ಪುಡಿ ಪುಡಿ ಮಾಡಬೇಕು ಎನಿಸಿರಬೇಕು ಜಸ್ಪ್ರಿತ್ ಬೂಮ್ರಾಗೆ!

ಆದರೆ ಕುಟ್ಟೊಂಗಿಲ್ಲ, ತಟ್ಟಂಗಿಲ್ಲ… ಟೂರ್ನಿ ಆರಂಭವಾದ ಮೇಲೆ ಕನಿಷ್ಠ ಐದು ಸಲವಾದರೂ ‘ಅಳ್ಳಾಡದ’ ಬೇಲ್ಸ್‍ಗಳ ಕಾರಣದಿಂದ ಬೌಲರ್‍ಗಳು ನಿರಾಶರಾಗಿದ್ದಾರೆ. ಒಂಥರಾ ನಮ್ಮ ಇವಿಯಂಗಳಂತೆ ವಿಚಿತ್ರ ವರ್ತನೆ ತೋರುತ್ತಿವೆಯೇ ಈ ‘ಝಿಂಗ್’ ಬೇಲ್ಸ್? ವಿಶ್ವಕಪ್ ಮುಗಿಯುವವರೆಗೂ ಈ ಬೇಲ್ಸ್ ಬದಲಿಸುವುದಿಲ್ಲ ಎಂದು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹೇಳಿದೆ.. ಥೇಟು ನಮ್ಮ ಚುನಾವಣಾ ಆಯೋಗದ ಹಾಗೆಯೇ!

ಇವಿಎಂಗಳನ್ನು ತಿರುಚುವುದು ಸಾಧ್ಯ ಎಂಬುದನ್ನು ಹಲವಾರು ತಜ್ಞರು ದೃಢಪಡಿಸಿದ್ದಾರೆ. ಆದರೆ, ನಮ್ಮ ಚುನಾವಣಾ ಆಯೋಗವು ಜನರಲ್ಲಿನ ಸಂಶಯವನ್ನು ನಿವಾರಿಸುವ ಕೆಲಸವನ್ನು ಮಾಡಲೇ ಇಲ್ಲ. ಚುನಾವಣೆಯ ಮೊದಲ 4 ಹಂತಗಳಲ್ಲಿ 373 ಕ್ಷೇತ್ರಗಳಲ್ಲಿ ವೋಟ್ ಮಾಡಿದ ಮತ್ತು ಕೌಂಟ್ ಆದ ಮತಗಳ ನಡುವೆ 20-30 ಸಾವಿರ ವ್ಯತ್ಯಾಸವಿದ್ದರೂ ನಮ್ಮ ಆಯೋಗ ಅದಕ್ಕೆ ಸರಿಯಾದ ಪ್ರತಿಕ್ರಿಯೆ ನೀಡಿಲ್ಲ!

ಬ್ಯಾಟ್ಸಮನ್ ಒಬ್ಬನನ್ನು ನೇರ ಔಟ್ ಮಾಡಲು ಸ್ಟಂಪ್ ಮೇಲಿರುವ ಬೇಲ್ಸ್ ಹಾರುವಂತೆ ಅಥವಾ ಸ್ಟಂಪೇ ನೆಲಕ್ಕೆ ಬೀಳಬೇಕು ಎಂಬುದು ಪರಂಪರಾಗತ ನಿಯಮ. ಆದರೆ ಇಲ್ಲಿ ‘ಝಿಂಗ್’ ಮಾತ್ರ ಸ್ಥಾವರದಂತೆ ಅಂಟಿಕೊಂಡು ಬಿಟ್ಟಿದೆ. ಗಂಟೆಗೆ 110 ಮೈಲು ವೇಗದಲ್ಲಿ ಬಂದ ಬಾಲ್ ಸ್ಟಂಪ್‍ಗೆ ಅಪ್ಪಳಿಸಿದರೂ ‘ಝಿಂಗ್’ ಝುಮ್ಮ ಅಂತಾನೇ ಇಲ್ಲ. ಟೂರ್ನಿಯ ಮೊದಲ ಹತ್ತು ದಿನಗಳಲ್ಲೇ ಇಂತಹ 5 ನಿದರ್ಶನ ನಡೆದರೂ, ಐಸಿಸಿ ಮಾತ್ರ ಇಡೀ ಟೂರ್ನಿಮೆಂಟ್‍ವರೆಗೆ ಇದೇ ‘ಝಿಂಗ್-ಡಾಂಗ್’ ಮುಂದುವರೆಸುವುದಾಗಿ ಹೇಳಿದೆ.

‘ಮಿಸುಕದ ಝಿಂಗ್ ಕಾರಣದಿಂದ ಲೈಫ್ ಪಡೆದ ಆಟಗಾರನೇ ಪಂದ್ಯ ಗೆಲ್ಲಿಸಿದರೆ? ಆಗ ಸಮಸ್ಯೆ ಇನ್ನಷ್ಟು ಬಿಗಡಾಯಿಸಬಹುದು. ಟೂರ್ನಿಯ ಮೊದಲ ಹತ್ತು ದಿನಗಳಲ್ಲಿ ಇಂತಹ ನಿದರ್ಶನಗಳನ್ನು ನೋಡಿದ ಪಾಕಿಸ್ತಾನದ ನಿವೃತ್ತ ವೇಗಿ ಶೋಯಬ್ ಅಖ್ತರ್ ಟ್ವೀಟ್ ಮಾಡಿ.’ ಅಯ್ಯೋ ಅಲ್ಲಾ, ನನ್ನ ಕ್ರಿಕೆಟ್ ಜೀವನದಲ್ಲೇ ಇಂತಹ ಬೇಲ್ಸ್ ನೋಡಿರಲಿಲ್ಲ. ಅದೂ ಪ್ರತಿಷ್ಟಿತ ವಿಶ್ವಕಪ್‍ನಲ್ಲೇ ಹೀಗಾಗುತ್ತಿದೆಯಲ್ಲ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ…

ಈ ಬೇಲ್ಸ್’ಗಳೂ ಪಕ್ಷಪಾತ ಮಾಡ್ತಿವೆಯಾ? ಬೇಕಾದಾಗ ಉರುಳೋದು ಬೇಡವಾದಾಗ ಸ್ಟಂಪ್ಸ್ ತಬ್ಬಿ ಕೂಡೋದು! ಇದನ್ನು ‘ಬೇಲ್ ಫಿಕ್ಸಿಂಗ್’ ಅಂತಾ ಕರೆಯಬಹುದೇ? ಕೆಲವು ಅನುಭವಿಗಳ ಪ್ರಕಾರ, ಈ ಬೇಲ್ಸ್‍ನಲ್ಲಿರುವ ಬ್ಯಾಟರಿಯ ತೂಕದ ಕಾರಣಕ್ಕೆ ಬೇಲ್ಸ್ ಧಡೂತಿಯಾಗಿ ಮಿಸುಗಾಡಲು ಆಗುತ್ತಿಲ್ಲವಂತೆ! ಚುನಾವಣಾ ಆಯೋಗವೇ ಐಸಿಸಿಗೆ ಮಾದರಿಯಾಗಿದೆಯಾ? ಇನ್ನು ಮುಂದೆ ಈ ಝಿಂಗ್ ಬೇಲ್ಸ್ ಮೇಲೆಯೇ ಬೆಟ್ಟಿಂಗ್ ನಡೆಯಲೂ ಬಹುದು!

ಕ್ಲೌಡ್ ಆ್ಯಂಡ್ ರಾಡಾರ್ ತಜ್ಞರನ್ನು ಈ ಬಗ್ಗೆ ನಮ್ಮ ಅಕ್ಷಯಕುಮಾರ್ ಪ್ರಶ್ನಿಸಿದರೆ ಚೆಂದ ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...