Homeಅಂತರಾಷ್ಟ್ರೀಯಹ್ಯಾಪಿ ಬಾಟಮ್ ಕ್ವಾರ್ಟರ್ ಎಂದರೇನು ಗೊತ್ತೆ?

ಹ್ಯಾಪಿ ಬಾಟಮ್ ಕ್ವಾರ್ಟರ್ ಎಂದರೇನು ಗೊತ್ತೆ?

ಅಷ್ಟೇನೂ ಬುದ್ಧಿವಂತನಲ್ಲ ಎಂದು ಎಲ್ಲರಿಗೂ ಗೊತ್ತಿದ್ದರೂ ಭಾರತದ ರಾಜಕಾರಣಿಯ ಮಗನಿಗೆ ಕೇಂಬ್ರಿಡ್ಜ್ ನಲ್ಲಿ ಪ್ರವೇಶ ದೊರೆತದ್ದು ಹೇಗೆ?

- Advertisement -
- Advertisement -

| ಜಿ.ಆರ್ ವಿದ್ಯಾರಣ್ಯ |

ಇದೆಂತಹ ಕ್ವಾರ್ಟರ್ ಅಥವಾ ಎಣ್ಣೆಯ ಹೊಸ ಹೆಸರೇ ಎಂದು ಯೋಚಿಸಬೇಡಿ. ಇದು ಜಗದ್ವಿಖ್ಯಾತ ವಿದ್ಯಾಸಂಸ್ಥೆಗಳ ಜಾಣತನದ ಬಗ್ಗೆ ಒಂದು ಉದಾಹರಣೆ.

ನಮಗೆಲ್ಲರಿಗೂ ನಮ್ಮ ಮಕ್ಕಳು ಒಳ್ಳೆಯ ಶಾಲಾ-ಕಾಲೇಜುಗಳಲ್ಲಿ ಓದಿ ತುಂಬಾ ವಿದ್ಯಾವಂತರಾಗಲಿ, ನಮ್ಮ ಕುಟುಂಬಕ್ಕೆ, ನಾಡಿಗೆ ಒಳ್ಳೆಯ ಹೆಸರು ತರಬೇಕು ಎಂಬ ಆಸೆಯಂತೂ ಇರುತ್ತದೆ. ಸಾಮಾನ್ಯವಾಗಿ ನಗರ ಪ್ರದೇಶದ ಮಧ್ಯಮ ವರ್ಗದ ಪೋಷಕರ ನಿರ್ಧಾರ ಆ ಶಾಲೆಯ ವರ್ಣರಂಜಿತ ಜಾಹಿರಾತು, ಕಟ್ಟಡ ವಿನ್ಯಾಸ, ಕಲಿಕಾ (ಭಾಷಾ) ಮಾಧ್ಯಮ, ಪ್ರವೇಶ ಎಷ್ಟು ಸುಲಭ/ಕಷ್ಟ, ಪ್ರವೇಶಕ್ಕಾಗಿ ಕಾಯುತ್ತಿರುವವರ ಪಟ್ಟಿ ಎಷ್ಟು ಉದ್ದ, ಪ್ರವೇಶ ಮತ್ತು ಬೋಧನಾ ಶುಲ್ಕ ಎಷ್ಟು ದುಬಾರಿ, ನೆರೆ-ಹೊರೆಯವರ ಅಭಿಪ್ರಾಯ, ಮನೆಯಿಂದ ಶಾಲೆ/ಕಲೇಜು ಎಷ್ಟು ಹತ್ತಿರ/ದೂರ ಅಥವಾ ಸಾರಿಗೆ ಸೌಲಭ್ಯವಿದೆಯೇ, ಮುಂತಾದ ವಿಷಯಗಳ ಮೇಲೆ ಅವಲಂಬಿಸಿರುತ್ತವೆ.

ಶಾಲೆಗೆ ಬೇಕಾದ ಎಲ್ಲಾ ಸರಕಾರಿ ಪರವಾನಗಿ/ಮಾನ್ಯತೆ ದೊರೆತಿದೆಯೋ ಇಲ್ಲವೋ ಎಂಬ ಮಾಹಿತಿ, ಸುಲಭವಾಗಿ ತಿಳಿಯದಿದ್ದಲ್ಲಿ, ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವ ಪ್ರಯತ್ನ ಪೋಷಕರು ಮಾಡುವುದು ವಿರಳ. ತಿಳಿಯದ ಯಾವುದೋ ಕಾರಣಕ್ಕಾಗಿ ಶಾಲೆ ಮಧ್ಯದಲ್ಲೇ ಮುಚ್ಚಲ್ಪಡುತ್ತದೋ ಎನೋ ಎಂಬ ಬಗ್ಗೆ ಅವರು ಆತಂಕಕ್ಕೆ ಮೊದಲೇ ಈಡಾಗುವುದಿಲ್ಲ. ಸಾಮಾನ್ಯ ಮಟ್ಟದ  ಶಾಲೆ/ಕಾಲೇಜಿನಲ್ಲಿ ಕಲಿತು ನಾವೆಲ್ಲರೂ ವಿದ್ಯಾವಂತರಾಗಿ ಸರಿಯಾದ ಜೀವನ ನಡೆಸುತ್ತಿದ್ದರೂ ಸಹ, ನಾವು ಕಲಿತ ಸಂಸ್ಥೆಯಲ್ಲೇ ನಮ್ಮ ಮಕ್ಕಳೂ ಕಲಿಯಲಿ ಎಂದು ಯೋಚಿಸುವವರು ಸಹ ತೀರಾ ಅಪರೂಪ. ತಾವು ಕಲಿತ ಶಾಲೆಗಿಂತ ಹೆಚ್ಚು ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಮಕ್ಕಳು ಕಲಿಯಲಿ ಎಂಬುದು ಪೋಷಕರ ಆಶಯ.

ಓರ್ವ ವಿದ್ಯಾ ಸಂಸ್ಥೆಯ ಖ್ಯಾತಿ, ಅದರ ಮೇಲೆ ಗೌರವ ನಿಜವಾಗಿ ಹೆಚ್ಚುವುದು ಆ ಸಂಸ್ಥೆಯು ನಡೆಸುತ್ತಿರುವ ಶಾಲಾ-ಕಾಲೇಜುಗಳಲ್ಲಿ ಓದು ಮುಗಿಸಿದ ಎಷ್ಟು ವಿದ್ಯಾರ್ಥಿಗಳು ಮುಂದೆ, ಬೇರೆ ಬೇರೆ ಕ್ಷೇತ್ರದಲ್ಲಿ, ಮಹತ್ತರ ಸಾಧನೆ ಮಾಡಿದ್ದಾರೆ ಅಥವಾ ಖ್ಯಾತಿವಂತ ವ್ಯಕ್ತಿಗಳಾಗಿದ್ದಾರೆ ಎಂಬುದನ್ನು ಅವಲಂಬಿಸಿರುತ್ತದೆ. ಅದರಲ್ಲಿ ಓದಿದ ಎಲ್ಲಾ ವಿದ್ಯಾರ್ಥಿಗಳು ಮುಂದೆ ಪ್ರಸಿದ್ಧಿವಂತರಾಗದೇ ಇರಬಹುದು ಅದರೆ ಅವರಲ್ಲಿ ಹತ್ತಾರು ಜನರಾದರೂ ಖ್ಯಾತಿವಂತರಾದಲ್ಲಿ, ಮಿಕ್ಕವರು, ಕೇವಲ ಆ ಸಂಸ್ಥೆಯಲ್ಲಿ ಓದಿದ ಮಾತ್ರಕ್ಕೆ, ಜಾಣರೆಂದು ಪರಿಗಣಿಸಲ್ಪಡುವ ಸಾಧ್ಯತೆಯಂತೂ ಇರುತ್ತದೆ, ಹೂವಿನ ಜೊತೆಗೆ ನಾರೂ ಸ್ವರ್ಗಕ್ಕೆ ಹೋದಂತೆ.

ಯಾವುದೇ ಒಂದು ಖ್ಯಾತಿವಂತ ವಿದ್ಯಾಸಂಸ್ಥೆಯು ಕನಸಿನ ಕೂಸಾಗಿ ಪ್ರಾರಂಭವಾಗಿರದೆ ಇದ್ದಾಗ, ಹೆಚ್ಚಿನ ಶಾಲೆ/ಕಾಲೇಜುಗಳೂ ಸಹ ಸಾಧಾರಣ ಮಕ್ಕಳಂತೆಯೇ, ಸಣ್ಣದಾಗಿ ಹುಟ್ಟಿ-ಬೆಳೆದು ದೊಡ್ಡದಾಗುತ್ತವೆ. ಆದ್ದರಿಂದ ಅದರ ಖ್ಯಾತಿ ಮಂದಗತಿಯಲ್ಲಿಯೇ ಬೆಳೆಯಬೇಕಾಗುತ್ತದೆ. ಶಾಲೆ/ಕಾಲೇಜು ಬೆಳೆದಂತೆ ಅದರಲ್ಲಿ ಓದುವ ಮಕ್ಕಳ ಸಂಖ್ಯೆಯೂ ಬೆಳೆಯುತ್ತದೆ, ಮುಂದೆ ಈ ಮಕ್ಕಳು ಶೈಕ್ಷಣಿಕ/ಕ್ರೀಡೆ/ಇತರ ಕ್ಷೇತ್ರದಲ್ಲಿ ಮಾಡುವ ಒಳ್ಳೆಯ ಸಾಧನೆಗಳಿಂದ ಅವರೂ ಖ್ಯಾತಿ ಪಡೆದು, ತಮ್ಮ ಕುಟುಂಬಕ್ಕೂ, ವಿದ್ಯಾಸಂಸ್ಥೆಗೂ ಗೌರವ ತರುತ್ತಾರೆ. ಸಂಸ್ಥೆಯಲ್ಲಿ ಓದು ಮುಗಿಸಿದ ನಂತರ ಅವರು ಅದರ ಮಾಜಿ ವಿದ್ಯಾರ್ಥಿ (ಅಲುಮ್ನೈ) ಆಗಿ ಮುಂದೆಯೂ ಸಂಸ್ಥೆಗೆ ಒಳ್ಳೆಯ ಹೆಸರು ತರಬಹುದು, ಆದರೆ ಸಂಸ್ಥೆಗೆ ಇದರ ಸುನಿಶ್ಚತತೆ ಇರುವುದಿಲ್ಲ. ಖ್ಯಾತಿ ಸುನಿಶ್ಚತತೆ ಮಾಡಿಕೊಳ್ಳಲು ಸಾಧ್ಯವೇ ಎಂಬುದು ಈ ಲೇಖನದ ಗುರಿಯಾದರೂ ಸಹ ಇಂದಿನ ಶಿಕ್ಷಣ ವ್ಯವಸ್ಥೆಯ ವಿಡಂಬನೆ ಈ ಲೇಖನ ಎಂದು ನಿಮಗೆ ಅನಿಸಬಹುದು.

ಹಾರ್ವರ್ಡ್, ಯೇಲ್, ಕೇಂಬ್ರಿಡ್ಜ್  ಮುಂತಾದ ವಿಶ್ವವಿಖ್ಯಾತ ವಿದ್ಯಾಸಂಸ್ಥೆಗಳು ತಮ್ಮ ಖ್ಯಾತಿ ನಿರಂತವಾಗಿರಲು ಏನೆಲ್ಲಾ ಮಾಡುತ್ತವೆ, ನೋಡೋಣ. ಇದನ್ನು “ಹ್ಯಾಪಿ ಬಾಟಮ್ ಕ್ವಾರ್ಟರ್” (ಎಚ್.ಬಿ.ಕ್ಯೂ.) ಎಂದುಕರೆಯುತ್ತಾರೆ. ಹಾರ್ವರ್ಡ್ ಇದನ್ನು ಪ್ರಾರಂಬಿಸಿತಾದರೂ ಶೀಘ್ರದಲ್ಲೇ ಇದು ಪ್ರಿನ್ಸ್ಟನ್, ಸ್ಟ್ಯಾನ್ಫರ್ಡ್, ಯೇಲ್, ಮುಂತಾದ ಸಂಸ್ಥೆಗಳಿಗೂ ಪಸರಿಸಿತು. ನಮ್ಮ ದೇಶದ ಐಐಟಿ ಅಥವಾ ಅಮೇರಿಕದ ಕ್ಯಾಲೊಫೋರ್ನಿಯದಲ್ಲಿರುವ ಕ್ಯಾಲ್ಟೆಕ್ವಿದ್ಯಾ ಸಂಸ್ಥೆಯ ಪ್ರವೇಶ ನೀತಿಗೆ ತದ್ವಿರುದ್ಧವಾಗಿ, ಮೇಧಾವಿ ಮಕ್ಕಳನ್ನು ತಮ್ಮಲ್ಲಿಗೆ ಸೇರಿಸಿಕೊಳ್ಳುವ ಬದಲಾಗಿ, ಮುಂದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿವಂತರಾಗುವ ಹೆಚ್ಚು ಸಾಧ್ಯತೆಯುಳ್ಳ ಮಕ್ಕಳಿಗೆ ಮುಖನೋಡಿ ಮಣೆ ಹಾಕುತ್ತಾರೆ. ಆದರೂ ಸಹ ಯಾವುದೇ ಕಾರಣಕ್ಕೂ ತನ್ನ ಖ್ಯಾತಿಗೆ ಚ್ಯುತಿ ಬರದಂತೆಯೂ ಬೇಕಾದ ಜಾಗೃತೆಯನ್ನೂ ವಹಿಸುತ್ತಾರೆ.

ಈ ನೀತಿಯನ್ವಯ ಸಂಸ್ಥೆಯ 25% ಸೀಟುಗಳನ್ನು ಕಾಯ್ದಿರಿಸಿ, ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಮಕ್ಕಳು, ಅಂದರೆ ದೇಶದ ಅಧ್ಯಕ್ಷರು, ಪ್ರಧಾನಮಂತ್ರಿಗಳು, ರಾಜಕಾರಣಿಗಳು, ಆಗರ್ಭ ಶ್ರೀಮಂತರು, ದೊಡ್ಡ ಉದ್ಯೋಗಪತಿಗಳು, ಸಿನಿಮಾನಟ-ನಟಿಯರು, ಕ್ರೀಡಾಪಟುಗಳು, ನೋಬೆಲ್ ಮುಂತಾದ ಪುರಸ್ಕಾರ ವಿಜೇತರು, ಯಾವುದೇ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿದವರು, ಮುಂತಾದವರ ಮಕ್ಕಳಿಗೆ ಪ್ರವೇಶ ನೀಡುತ್ತಾರೆ. ಇಂತಹ ಮಕ್ಕಳ ವಿದ್ಯಾಭ್ಯಾಸದ ಖರ್ಚು ಅವರ ಪೋಷಕರಿಗೇನೂ ಭಾರವಲ್ಲ, ಬದಲಾಗಿ ಕೇಳಿದಷ್ಟು ಡೊನೇಷನ್ ಕೊಡಲೂ ಸಿಧ್ಧರಿರುತ್ತಾರಷ್ಟೇ ಅಲ್ಲ, ಅದರ ಬಗ್ಗೆ ಯಾವಾಗಲೂ ತುಟಿಪಿಟಕ್ ಎನ್ನುವುದಿಲ್ಲ. ಇಂತಹವರ ಮಕ್ಕಳು ಮುಂದೆ ಖ್ಯಾತಿವಂತರಾಗುವ ಸಾಧ್ಯತೆ ಅತಿ ಹೆಚ್ಚಾಗಿರುತ್ತದೆ ಮತ್ತು ಅವರು ನಮ್ಮ ಸಂಸ್ಥೆಯ ಮಾಜಿ ವಿದ್ಯಾರ್ಥಿ ಎಂದು ವಿದ್ಯಾಸಂಸ್ಥೆಯೂ ಹೆಮ್ಮೆಯಿಂದ ಹೇಳಿಕೊಳ್ಳಲು ಮುಂದಾಗಿರುತಾರೆ. ನೋಬೆಲ್  ಮುಂತಾದ ಪುರಸ್ಕಾರ ವಿಜೇತರ ಮತ್ತು ವಿವಿಧ ಕ್ಷೇತ್ರದ ಪರಿಣಿತರ ಮಕ್ಕಳು ತಮ್ಮ ಆಯ್ದ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೆ ಸಿದ್ಧರಾಗಿಯೇ ಇರುತ್ತಾರೆ ಹಾಗೂ ಹಣದ ದಾಹ ಇರುವವರು ಹೇಗೇ ಆದರೂ ಹಣಗಳಿಸಿಯೇ ತೀರುತ್ತಾರೆ.

ಉದ್ಯೋಗಪತಿಗಳ ಮಕ್ಕಳು ಮುಂದೆ ಅಷ್ಟೇ ಪ್ರಖ್ಯಾತರಾಗುತ್ತರೆ ಎನ್ನುವುದು ಕಷ್ಟ ಅಥವಾ ಹೊಸ ಉದ್ಯೋಗ ಪ್ರಾರಂಭಿಸಬಲ್ಲವರು ಅಷ್ಟೇ ಸಫಲರಾಗುತ್ತಾರೆ ಎನ್ನುವುದೂ ಸಹ ಅನಿಶ್ಚಿತ. ಮುಂದಿನ ಫೇಸ್ಪುಕ್ ನಂತಹ ಅತ್ಯಂತ ಸಫಲವಾದ ಸ್ಟಾರ್ಟ್ ಅಪ್ ಧೀರ ಹಾರ್ವರ್ಡಿನಿಂದಲೇ ಬರುತ್ತಾನೆ ಎಂಬುದು ಕೇವಲ ಊಹಾಪೋಹ. ಇದು ಅವರ ನೀತಿಯಲ್ಲಿನ ಒಂದು ಅಪಾಯ (ರಿಸ್ಕ್). ಬಹುರಾಷ್ಟ್ರೀಯ ಕಂಪನಿಯ ಮುಖ್ಯಾಧಿಕಾರಿಗಳು ಸಹ ಅಪಾಯಕರ. ಅದನ್ನು ವಿದ್ಯಾಸಂಸ್ಥೆ ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆ. ಈಗಿರುವ ಕ್ರೀಡಾಪಟುಗಳು ಮತ್ತು ಸಿನಿಮಾ ನಟ-ನಟಿಯರು ಆಗಲೇ ಹೇರಳ ಹಣ ಸಂಪಾದನೆ ಮಾಡುತ್ತಿರುತ್ತಾರೆ ಮತ್ತು ಅವರಿಗೆ ಪತಿಷ್ಟಿತ ಕಾಲೇಜಿನ ಪದವಿ ಪಡೆಯಲೇಬೇಕು ಎಂಬ ಹುಮ್ಮಸ್ಸು ಅಥವಾ ಸಮಯ ಇರುವುದಿಲ್ಲ ಆದರೆ ತಮ್ಮ ಮಕ್ಕಳನ್ನು ಹಣ ತೆತ್ತು ಒಳ್ಳೆಯ ಕಡೆ ಸೇರಿಸಲು ಸಿದ್ಧರಿರುತ್ತಾರೆ.

ಒಳ್ಳೆಯ ಭವಿಷ್ಯವುಳ್ಳ ಕ್ರೀಡಾಪಟುಗಳನ್ನು ಹುಡುಕುವುದು ಅಂತಹ ಕಷ್ಟಕರವೇನಲ್ಲ, ಅವರಿಗೆ ಕರೆದು ಪ್ರವೇಶ ನೀಡುತ್ತಾರೆ. ಪ್ರಗತಿ ಹೊಂದಿದ ವಿದೇಶದ ರಾಜಕಾರಣಿಗಳ ಮಕ್ಕಳು ಮುಂದೆ ಅಧಿಕಾರಕ್ಕೇರುವ ಸಾಧ್ಯತೆ ಅಷ್ಟೇನೂ ಇಲ್ಲದಿದ್ದರೂ ಭಾರತದಂತಹ ಪ್ರಗತಿಶೀಲ ರಾಜ್ಯಗಳಲ್ಲಿ ಸಾಧ್ಯತೆ ಹೆಚ್ಚಿರುತ್ತದೆ.

ಇಂದಿನ ಜಗತ್ತಿನಲ್ಲಿ ವಂಶಪಾರಂಪರೆಯ ವಾದ ಹೇರಳವಾಗಿದೆ, ಎಲ್ಲಾ ದೇಶದಲ್ಲೂ ಅಡೆತಡೆಯಿಲ್ಲದೆ ನಡೆಯುತ್ತದೆ. ಅಷ್ಟೇನೂ ಬುದ್ಧಿವಂತನಲ್ಲ ಎಂದು ಎಲ್ಲರಿಗೂ ಗೊತ್ತಿದ್ದರೂ ಭಾರತದ ರಾಜಕಾರಣಿಯ ಮಗನಿಗೆ ಕೇಂಬ್ರಿಜ್ನಲ್ಲಿ ಪ್ರವೇಶ ದೊರೆತದ್ದು ಹೇಗೆ ಅಥವಾ ಭಾರತದ ಅತಿ ದೊಡ್ಡ ಉದ್ಯೋಗಪತಿಯ ಎರಡನೆಯ ಮಗ ಅಮೇರಿಕದ ಹಾಲಿ ಅಧ್ಯಕ್ಷ ಹಾಗೂ ಗೂಗಲ್ ಸಂಸ್ಥೆಯ ಹಾಲಿ ಮುಖ್ಯಸ್ಥ ಓದಿದ ವ್ಹಾರ್ಟನ್ ವಿದ್ಯಾಸಂಸ್ಥೆಗೆ ಪ್ರವೇಶ ಗಳಿಸಿದ್ದು ಹೇಗೆ, ಅವರ ಹಾಜರಾತಿ ಸಮರ್ಪಕವಾಗಿತ್ತೇ ಅಥವಾ ಅವರು ಒಳ್ಳೆಯ ಅಂಕ ಪಡೆದು ಉತ್ತೀರ್ಣರಾದರೇ ಎಂದು ಯಾರೂ ತಲೆ ಕೆಡೆಸಿಕೊಳ್ಳುವುದಿಲ್ಲ. ಇಂತಹವರಿಗೆ ಪ್ರವೇಶ ನೀಡುವುದು ಸಂಸ್ಥೆಗೆ ಬಹಳ ಸುಲಭವೂ, ಲಾಭದಾಯಕವೂ ಆಗಿರುತ್ತದೆ. ಭಾರತದಲ್ಲೂ ಡೊನೇಷನ್ ಸೀಟುಗಳು ಸಾರಾಸಗಟಾಗಿ ಮಾರಾಟವಾಗುತ್ತದೆ ಅಥವಾ ಪ್ರಭಾವಶಾಲೀ ವ್ಯಕ್ತಿಗಳಿಗೆ ಕೊಡಲಾಗುತ್ತದೆ. ಅದರಲ್ಲಿ ಸಂಸ್ಥೆಗೆ ಬರುವ ಹಣ ಅಥವಾ ಆಗುವ ಲಾಭವೇ ಮುಖ್ಯವಾಗಿರುತ್ತದೆ ವಿನಃ ಅಂತಹ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಅವರ ಮುಂದಿನ ಭವಿಷ್ಯ ಅಥವಾ ಸಂಸ್ಥೆಯ ಪ್ರಖ್ಯಾತಿ ಅಷ್ಟು ಮಹತ್ವದ್ದಾಗಿರುವುದಿಲ್ಲ.

ಈ “ಹ್ಯಾಪಿ ಬಾಟಮ್ ಕ್ವಾರ್ಟರ್” ನ ಮಧ್ಯದ ಪದ ಗಮನೀಯವಾದದ್ದು. ಈ “ಬಾಟಮ್” ಇರುವುದಕ್ಕೆ ಮುಖ್ಯ ಕಾರಣ ವಿದ್ಯಾಸಂಸ್ಥೆ ತನ್ನ “ಟಾಪ್” 75% ಸೀಟುಗಳನ್ನು ನಿಜವಾದ ಮೇಧಾವಿ ವಿದ್ಯಾರ್ಥಿಗಳಿಗೆ ನೀಡುತ್ತದೆ. ಮೇಧಾವಿ ವಿದ್ಯಾರ್ಥಿಗಳು ಸಂಸ್ಥೆಯಿಂದ ಉತ್ತೀರ್ಣರಾಗಿ ಹೊರ ಹೋಗುವಾಗ ಕೆಳಗಿನ 25% ಸೀಟಿನ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಜೊತೆಗೆ ಖಂಡಿತ ಪೈಪೋಟಿ ಮಾಡುವುದಿಲ್ಲ. ಈ ವಿದ್ಯಾಸಂಸ್ಥೆಗಳು ತಮ್ಮ ಕೆಲವು ಸೀಟುಗಳನ್ನು ಮುಂದೆ ಪ್ರಭಾವಶಾಲಿ ವ್ಯಕ್ತಿಯಾಗಬಲ್ಲವನ ಮೇಲೆ ಜೂಜಾಡಿ ಸ್ವಲ್ಪ ಮಟ್ಟದ “ರಿಸ್ಕ್” ತೆಗೆದುಕೊಳ್ಳುತ್ತವೆ, ಆದರೆ ಅಪಾಯಕ್ಕೆ ತಕ್ಕ ಹಣವಂತೂ ಸಂಸ್ಥೆಯ ಖಾತೆಗೆ ಆಗಲೇ ಜಮಾ ಆಗಿರುತ್ತದೆ. ಮುಂದೆ ಅಂತಹಾ ಅಪಾಯಕಾರಿ ವಿದ್ಯಾರ್ಥಿ 20-30-40 ವರ್ಷದ ನಂತರ, ಯಾವುದೇ ದೇಶದ ಪ್ರಧಾನಿ, ಶ್ರೀಮಂತ ವ್ಯಕ್ತಿ ಆದರೂ ಅಥವಾ ಆಗದಿದ್ದರೂ ಸಹ ಆ ವಿದ್ಯಾಸಂಸ್ಥೆಯ ಹೆಸರು ಕೆಡುವುದಿಲ್ಲ ಅಥವಾ ಅವನು ವಿದ್ಯಾಸಂಸ್ಥೆಯಲ್ಲಿದ್ದಾಗ ಎಂತಹ ವಿದ್ಯಾರ್ಥಿಯಾಗಿದ್ದ ಎಂದು ಯಾರೂ ನೆನಪಿನಲ್ಲಿಡುವುದಿಲ್ಲ.

ಒಟ್ಟಿನಲ್ಲಿ ಇದು ಪ್ರತಿಷ್ಠಿತ ವಿದ್ಯಾಸಂಸ್ಥೆಗಳ ದೂರದೃಷ್ಟಿ ಮತ್ತು ಜಾಣತನವಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಾಸಿಕ್‌| ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರು

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಾದ್ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ಖಂಡಿಸಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದ ಪ್ರತಿಭಟನಾಕಾರರ ಗುಂಪೊಂದು ನಗರ ಪಂಚಾಯತ್ ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು...

ವಿವಾಹಿತೆ ಮೇಲೆ ಅತ್ಯಾಚಾರ ಆರೋಪ : ಬಿಜೆಪಿ ಮಾಜಿ ಶಾಸಕನ ವಿರುದ್ಧ ಎಫ್‌ಐಆರ್

ಗನ್‌ ಪಾಯಿಂಟ್‌ ಇಟ್ಟು ಬೆದರಿಸಿ 22 ವರ್ಷದ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಬಿಜೆಪಿ ಮಾಜಿ ಶಾಸಕ ಮತ್ತು ವಜಾಗೊಂಡಿರುವ ಪೊಲೀಸ್ ಸಿಬ್ಬಂದಿಯೊಬ್ಬರ ವಿರುದ್ಧ ಗುರುವಾರ (ಸೆ.17)...

ಬ್ರಿಕ್ಸ್ ಶೃಂಗಸಭೆಯಲ್ಲಿ ಸಂಪೂರ್ಣ ಸಸ್ಯಹಾರಿ ಮೆನು; ಶಿವಸೇನೆ ತೀವ್ರ ವಾಗ್ದಾಳಿ

ದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ವಿದೇಶಿ ಪ್ರತಿನಿಧಿಗಳಿಗೆ ಕೇವಲ ಸಸ್ಯಹಾರಿ ಆಹಾರವನ್ನು ಬಡಿಸಿರುವುದನ್ನು ಖಂಡಿಸಿರುವ ಶಿವಸೇನೆ (ಯುಬಿಟಿ) ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದು ಅಂತರರಾಷ್ಟ್ರೀಯ ಅತಿಥಿಗಳ ಮೇಲೆ...

ದೆಹಲಿ ಎಸ್‌ಐಆರ್: ಮತದಾರರ ಪಟ್ಟಿಯಿಂದ ಹೆಸರುಗಳ ಡಿಲೀಟ್ ಪ್ರಶ್ನಿಸಿ ಅರ್ಜಿ; ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ದೆಹಲಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನದಡಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 21ರಂದು ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಗೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್...

ಕೇರಳ | ಮಿತಿಗಿಂತ ಹೆಚ್ಚು ಮದ್ಯ ಸಂಗ್ರಹ ಆರೋಪ : ರಿಪೋರ್ಟರ್ ಟಿವಿ ಎಂಡಿ ಆಂಟೋ ಆಗಸ್ಟಿನ್ ಬಂಧನ

ಕೇರಳ ಅಬಕಾರಿ ಇಲಾಖೆಯು ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಂಟೋ ಆಗಸ್ಟಿನ್ ಅವರನ್ನು ಗುರುವಾರ (ಸೆ.17) ಮುಂಜಾನೆ ಬಂಧಿಸಿದೆ. ಎರ್ನಾಕುಲಂನಲ್ಲಿರುವ ಸುದ್ದಿ ವಾಹಿನಿಯ ಕಚೇರಿಯಿಂದ ಮುಂಜಾನೆ ಸುಮಾರು...

ದೆಹಲಿ: ಜಾಮೀನು ಸಿಕ್ಕ ಬೆನ್ನಲ್ಲೇ ಸ್ವತಂತ್ರ ಭಾರದ್ವಾಜ್ ವಿಡಿಯೋ ವೈರಲ್; ಷರತ್ತು ಉಲ್ಲಂಘನೆ ಆರೋಪ!

ಜಂತರ್ ಮಂತರ್‌ನಲ್ಲಿ ದಲಿತ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಜಾದ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದ ಹಿಂದುತ್ವ ಪ್ರಭಾವಿ ಸ್ವತಂತ್ರ ಭಾರದ್ವಾಜ್ ಅವರಿಗೆ ದೆಹಲಿ ನ್ಯಾಯಾಲಯ ಮೂರು ವಾರಗಳ ಮಧ್ಯಂತರ...

ಸರ್ಕಾರದ ಹಸ್ತಕ್ಷೇಪದಿಂದ ಕ್ಯಾಂಪಸ್ ನಿರ್ಬಂಧದವರೆಗೆ: ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯದ ಕುಸಿತ ಬಯಲಿಗೆಳೆದ ಜಾಗತಿಕ ವರದಿ 

ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯವು ತೀವ್ರವಾಗಿ ನಿರ್ಬಂಧಿತವಾಗಿದ್ದು, ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರದ ಹೆಚ್ಚುತ್ತಿರುವ ಹಸ್ತಕ್ಷೇಪ, ಕ್ಯಾಂಪಸ್‌ಗಳಲ್ಲಿ ಶೈಕ್ಷಣಿಕ ಮತ್ತು ರಾಜಕೀಯ ಅಭಿವ್ಯಕ್ತಿಯ ಮೇಲಿನ ನಿರ್ಬಂಧಗಳು, ವಿದ್ವಾಂಸರು ಹಾಗೂ ವಿದ್ಯಾರ್ಥಿಗಳ ವಿರುದ್ಧದ ಕ್ರಮಗಳು...

ಬಿಹಾರ| ದಲಿತ ಯುವಕನ ವಿವಾಹವಾದ ಯುವತಿ; ಮಗಳ ಸಾಂಕೇತಿಕ ಅಂತ್ಯಕ್ರಿಯೆ ನಡೆಸಿದ ಪೋಷಕರು

ತಮ್ಮ 18 ವರ್ಷದ ಮಗಳು ಅಂತರ್ಜಾತಿ ವಿವಾಹವಾಗಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು, ಆಕೆಗೆ ಸಾಂಕೇತಿಕವಾಗಿ ಅಂತ್ಯಕ್ರಿಯೆ ನಡೆಸಿದ ಘಟನೆ ಬಿಹಾರದ ಪೂರ್ಣಿಯಾದಲ್ಲಿ ಬೆಳಕಿಗೆ ಬಂದಿದೆ. ಯುವತಿಯ ಫೋಟೋವಿರುವ ಪ್ರತಿಕೃತಿಯನ್ನು ಸಿದ್ಧಪಡಿಸಿ ಊರಿನಲ್ಲಿ ಶವಯಾತ್ರೆ...

ಸ್ವಇಚ್ಛೆಯಿಂದ ಇಸ್ಲಾಂ ಸ್ವೀಕಾರ : ಆಯುಷ್ ಮಲಿಕ್‌ರನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಿದ ಅಲಹಾಬಾದ್ ಹೈಕೋರ್ಟ್

ತಾನು ಸ್ವಇಚ್ಛೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ಮತ್ತು ಆ ನಂತರ ತನ್ನ ತಂದೆಯೇ ತನಗೆ ಬೆದರಿಕೆ ಹಾಕಿ, ಕಾನೂನುಬಾಹಿರವಾಗಿ ಗೃಹಬಂಧನದಲ್ಲಿ ಇರಿಸಿದ್ದರು ಎಂದು ಆರೋಪಿಸಿದ್ದ ಆಯುಷ್ ಮಲಿಕ್ ಎಂಬ 31 ವರ್ಷದ ಯುವಕನನ್ನು...

ಬಿಜ್ನೋರ್‌ನಲ್ಲಿ ಮುಸ್ಲಿಂ ಶಿಕ್ಷಕನ ಗುಂಡಿಕ್ಕಿ ಹತ್ಯೆ: ‘ಲವ್ ಜಿಹಾದ್’ ಆರೋಪ; ವೈಯಕ್ತಿಕ ದ್ವೇಷದ ಬಗ್ಗೆಯೂ ಪೊಲೀಸರಿಂದ ತನಿಖೆ 

ಬಿಜ್ನೋರ್: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ 43 ವರ್ಷದ ಮುಸ್ಲಿಂ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನೊಬ್ಬರನ್ನು ರೈತನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಶಿಕ್ಷಕ ನೌಶಾದ್ ಅಹ್ಮದ್ ಅವರು ‘ಲವ್ ಜಿಹಾದ್’...