Homeಮುಖಪುಟಸ್ಪಾಟ್‍ಲೈಟ್ ಎನ್ನುವ ಸಿನೆಮಾ

ಸ್ಪಾಟ್‍ಲೈಟ್ ಎನ್ನುವ ಸಿನೆಮಾ

ನಾವೆಲ್ಲ ಸಿನೆಮಾದ ವಿದ್ಯಾರ್ಥಿಗಳಾಗಿ ಅದರ ಅನೇಕ ಸಿದ್ಧಾಂತಗಳ ಬಗ್ಗೆ ತಿಳಿದುಕೊಳ್ಳುತ್ತೇವೆ. ಆಯಾ ಸಿದ್ಧಾಂತಗಳಿಗೆ ತನ್ನದೇ ಆದ ನಿಯಮಗಳಿರುತ್ತವೆ. ನಮ್ಮಲ್ಲಿ ಫಾರ್ಮುಲಾ ಫಿಲ್ಮ್ ಎನ್ನುವುದು ಕೇಳಿಬರುತ್ತದೆ.

- Advertisement -
- Advertisement -

| ರಾಜಶೇಖರ್ ಅಕ್ಕಿ |

ನಾವೆಲ್ಲ ಸಿನೆಮಾದ ವಿದ್ಯಾರ್ಥಿಗಳಾಗಿ ಅದರ ಅನೇಕ ಸಿದ್ಧಾಂತಗಳ ಬಗ್ಗೆ ತಿಳಿದುಕೊಳ್ಳುತ್ತೇವೆ. ಆಯಾ ಸಿದ್ಧಾಂತಗಳಿಗೆ ತನ್ನದೇ ಆದ ನಿಯಮಗಳಿರುತ್ತವೆ. ನಮ್ಮಲ್ಲಿ ಫಾರ್ಮುಲಾ ಫಿಲ್ಮ್ ಎನ್ನುವುದು ಕೇಳಿಬರುತ್ತದೆ. ಒಂದು ಸಿನೆಮಾ ಇಂತಿಷ್ಟು ಅಂಶಗಳನ್ನು ಹೊಂದಿರಬೇಕು, ಆ ಚಿತ್ರದ ನಾಯಕಿ/ನಾಯಕಿ ಹೀಗಿರಬೇಕು, ಅವಳ ವೈಯಕ್ತಿಕ ಜೀವನದ ಅಂಶಗಳನ್ನು ತೋರಿಸಿ ಅವಳ ವ್ಯಕ್ತಿತ್ವದ ಬಗ್ಗೆ ಬೆಳಕು ಚೆಲ್ಲಬೇಕು, ಸಿನೆಮಾದ ಪ್ರಾರಂಭದ ಅರ್ಧ ಗಂಟೆಯಲ್ಲಿ ಸಿನೆಮಾದ ಪರಿಪೇಕ್ಷೆಯನ್ನು ಸ್ಪಷ್ಟಪಡಿಸಬೇಕು, ಅಷ್ಟರಲ್ಲೇ ಪ್ರಮುಖ ಪಾತ್ರ ಮತ್ತು ಎದುರಾಳಿ ಯಾರು ಎನ್ನುವುದನ್ನು ಸ್ಪಷ್ಟಪಡಿಸಬೇಕು, ಅರ್ಧಗಂಟೆಯ ನಂತರ ಸಂಘರ್ಷ ಪ್ರಾರಂಭವಾಗಬೇಕು ಇತ್ಯಾದಿ ಅನೇಕ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅನೇಕ ಸಿನೆಮಾಗಳು ಇದರಲ್ಲಿ ಹೆಚ್ಚಿನ ನಿಯಮಗಳನ್ನು ಪಾಲಿಸಿ, ಅದ್ಭುತ ಫಲಿತಾಂಶ ನೀಡುತ್ತವೆ. ಆದರೆ ಕೆಲವೊಮ್ಮೆ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗುತ್ತವೆ. ಒಂದು ಸಿನೆಮಾ ನೋಡಿದಾಗ ಈ ಯಾವ ನಿಯಮಗಳನ್ನು ಪಾಲಿಸುವುದು ಕಂಡುಬರುವುದಿಲ್ಲ. ಚಿತ್ರ ಮಾತ್ರ ಅದ್ಭುತವಾಗಿರುತ್ತದೆ. ಅಂತಹ ಒಂದು ಅದ್ಭುತ ಉದಾಹರಣೆ ಸ್ಪಾಟ್‍ಲೈಟ್. ಹಾಗೆಂದ ಮಾತ್ರಕ್ಕೆ ಈ ಚಿತ್ರದಲ್ಲಿ ಯಾವ ನಿಯಮಗಳನ್ನೂ ಪಾಲಿಸಿಲ್ಲ ಎಂತಲ್ಲ. ಪಾಲಿಸಿದ ನಿಯಗಳೆಲ್ಲವೂ ಗೌಣವಾಗಿರುತ್ತವೆ. ಹತ್ತಾರು ಬಾರಿ ಆ ಚಿತ್ರವನ್ನು ನೋಡಿದಾಗಲೂ ಆ ಚಿತ್ರದ ಕಥೆ/ವಿಷಯದ ಕಡೆಗೆ ಗಮನವಿರುತ್ತದೆಯೇ ಹೊರತು ಈ ಚಿತ್ರವನ್ನು ಹೇಗೆ ಮಾಡಿದರು ಎನ್ನುವುದು ಲಕ್ಷಕ್ಕೆ ಬರುವುದಿಲ್ಲ.

ಸ್ಪಾಟ್‍ಲೈಟ್ ಚಿತ್ರ ಪ್ರಾರಂಭವಾಗುವುದು 1976ರ ಒಂದು ಘಟನೆಯಿಂದ. ಅಮೆರಿಕದ ಬೋಸ್ಟನ್‍ನ ಒಂದು ಪೊಲೀಸ್ ಠಾಣೆಯಲ್ಲಿ ಒಂದೆಡೆ ನಾಲ್ಕು ಮಕ್ಕಳು ಮತ್ತು ಅವರ ತಾಯಿ ಕುಳಿತಿದ್ದರೆ ಇನ್ನೊಂದು ಕೋಣೆಯಲ್ಲಿ ಆ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಒಬ್ಬ ಕ್ಯಾಥೋಲಿಕ್ ಪಾದ್ರಿ ಕುಳಿತಿದ್ದಾನೆ. ಇಬ್ಬರು ಪೊಲೀಸ್ ಅಧಿಕಾರಿಗಳು ವಿಷಯವನ್ನು ಚರ್ಚಿಸಲು ಶುರು ಮಾಡುತ್ತಿದ್ದಂತೆ ಡಿಸ್ಟ್ರಿಕ್ಟ್ ಅಟಾರ್ನಿ ಬಂದು ವಿಷಯವನ್ನು ಬಹಿರಂಗಪಡಿಸಬಾರದೆಂದು ಸೂಚಿಸುತ್ತಾನೆ. ಮಾರನೆಯ ಕ್ಷಣ ಆ ಪಾದ್ರಿಯನ್ನು ಬಿಡುಗಡೆ ಮಾಡಿ ಆ ವಿಷಯವನ್ನು ಅಲ್ಲಿಯೇ ಮುಚ್ಚಿಹಾಕಲಾಗುತ್ತದೆ.

2001ರಲ್ಲಿ ಬೋಸ್ಟನ್ ಗ್ಲೋಬ್ ಪತ್ರಿಕೆಗೆ ಒಬ್ಬ ಹೊಸ ಸಂಪಾದಕ ನೇಮಕವಾಗುತ್ತಾನೆ. ಆ ಪತ್ರಿಕೆಯಲ್ಲಿ ತನಿಖಾ ಪತ್ರಿಕೋದ್ಯಮದಲ್ಲಿ ನಿರತವಾಗಿರುವ ಒಂದು ತಂಡವಿದೆ; ಅದುವೆ ಸ್ಪಾಟ್‍ಲೈಟ್ ತಂಡ. ಓರ್ವ ಪಾದ್ರಿಯಿಂದ ಮಕ್ಕಳ ಮೇಲೆ ಆದ ಲೈಂಗಿಕ ಕಿರುಕುಳ ಬಗ್ಗೆ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಬಗ್ಗೆ ಹೊಸದಾಗಿ ಬಂದ ಸಂಪಾದಕನು ವಿಚಾರಿಸಿ, ಅದರ ಸರಿಯಾದ ಫಾಲೋ ಅಪ್ ಆಗಿಲ್ಲವಾದುದರಿಂದ ಸ್ಪಾಟ್‍ಲೈಟ್ ತಂಡ ಆ ವಿಷಯವನ್ನು ಕೈಗೆತ್ತಿಕೊಳ್ಳಬೇಕೆಂದು ಸೂಚಿಸುತ್ತಾನೆ. ತಕ್ಷಣ ಆ ತಂಡ ಕಾರ್ಯನಿರತವಾಗುತ್ತದೆ. ಆ ಒಂದು ಪ್ರಕರಣ, ಒಬ್ಬ ಪಾದ್ರಿಯಿಂದ ಶುರುವಾದ ತನಿಖೆಯ ಪಯಣ ಎಲ್ಲಿಗೆ ಕೊಂಡೊಯ್ಯುವುದು, ಆ ನಗರದ ಮೇಲೆ, ದೇಶದ ಮೇಲೆ, ಚರ್ಚ್ ಎನ್ನುವ ಇಡೀ ಸಂಸ್ಥೆಯ ಮೇಲೆ, ಇಡೀ ಪ್ರಪಂಚಾದ್ಯಂತ ಆಗುವ ಪರಿಣಾಮಗಳ ಬಗ್ಗೆ ಅವರಿಗ್ಯಾರಿಗೂ ತಿಳಿದಿರುವುದಿಲ್ಲ; ಪ್ರೇಕ್ಷಕರಿಗೂ ಗೊತ್ತಿರುವುದಿಲ್ಲ. ತನಿಖೆ ಮುಂದುವರೆದಂತೆ ವಿಷಯದ ಆಳ ಎಳೆಎಳೆಯಾಗಿ ಬಿಚ್ಚುತ್ತಾ ಹೋಗುತ್ತದೆ. ಹಾಗಾಗಿ ಈ ಚಿತ್ರದ ಸ್ಟ್ರಕ್ಚರ್‍ಅನ್ನು ಹೇಗೆ ಕಟ್ಟಲಾಗಿದೆ ಎನ್ನುವುದನ್ನು ಹೇಳಲಾಗುವುದಿಲ್ಲ.

ಚಿತ್ರದಲ್ಲಿ ಒಬ್ಬ ನಾಯಕನಿಲ್ಲ. ಸ್ಪಾಟ್‍ಲೈಟ್ ತಂಡದ ಸದಸ್ಯರಾದ ರೆಝೆಂಡಸ್ (ಮಾರ್ಕ್ ರಫಲೋ) ರಾಬಿ, ರಾಬಿನ್ಸನ್ (ಮೈಕಲ್ ಕೀಟನ್) ಸಾಷಾ ಪೈಫರ್ (ರೇಷಲ್ ಮಾಕ್‍ಅಡಮ್ಸ್) ಮತ್ತು ಮ್ಯಾಟ್ ಕೆರಲ್(ಬ್ರ್ಯಾನ್ ಜೇಮ್ಸ್), ಈ ನಾಲ್ವರೂ ನಾಯಕರೇ, ಲೈಂಗಿಕ ಕಿರುಕುಳದ ಪ್ರಕರಣಗಳನ್ನು ಎಡೆಬಿಡದೇ ನಡೆಸುತ್ತಿರುವ ವಕೀಲ ಮಿಚ್ ಗೆರಬಿಡಿಯನ್ (ಸ್ಟ್ಯಾನ್ಲಿ ಟುಚಿ) ಸಹ ನಾಯಕನೇ, ಪತ್ರಿಕೆಯ ಸಂಪಾದಕನೂ ನಾಯಕನೇ. ಸಾಷಾ ಪೈಫರ್ ಪಾತ್ರದ ಅಜ್ಜಿ ಮತ್ತು ಅವಳ ಸಂಗಾತಿ ಒಂದೆರಡು ದೃಶ್ಯಗಳಲ್ಲಿ ಕಂಡುಬರುವುದನ್ನು ಹೊರತುಪಡಿಸಿದರೆ ಇತರ ಯಾವ ಪಾತ್ರಗಳ ವೈಯಕ್ತಿಕ ಜೀವನವನ್ನು ತೋರಿಸುವ ಗೋಜಿಗೇ ಹೋಗಿಲ್ಲ ಚಿತ್ರದ ನಿರ್ದೇಶಕ. ಪಾತ್ರಗಳು ತಮ್ಮಷ್ಟಕ್ಕೇ ಎಷ್ಟು ಆಳವನ್ನು ಹೊಂದಿವೆಯೆಂದರೆ, ಅವರನ್ನು ರಕ್ತ ಮಾಂಸ ತುಂಬಿದ ಮನುಷ್ಯರಾಗಿ ಚಿತ್ರಿಸಲು ಇತರ ಹತಾರಗಳ ಆಸರೆಯೇ ಬೇಕಿಲ್ಲ.

ಬದ್ಧತೆ – ಸ್ಪಾಟ್‍ಲೈಟ್ ಚಿತ್ರಕ್ಕೆ ಸಂಬಂಧಪಟ್ಟಂತೆ ಎರಡು ರೀತಿಯ ಬದ್ಧತೆ ಪ್ರಾಮಾಣಿಕತೆಗಳು ಕಾಣಿಸಿಕೊಳ್ಳುತ್ತವೆ. ಮೊದಲನೆಯದು, ಈ ಚಿತ್ರ ನೈಜಘಟನೆಗಳಿಂದ ಪ್ರೇರಿತವಾಗಿದ್ದರಿಂದ ಆಯಾ ಪತ್ರಗಳ ಬದ್ಧತೆ. ಬೋಸ್ಟನ್ ಗ್ಲೋಬ್ ಪತ್ರಿಕೆಯ ಸ್ಪಾಟ್‍ಲೈಟ್ ತಂಡವು ಪಾದ್ರಿಗಳಿಂದ ಆಗುತ್ತಿವೆ ಎನ್ನಲಾದ ಲೈಂಗಿಕ ಕಿರುಕಳದ ಬಗ್ಗೆ, ಕಿರುಕುಳಕ್ಕೆ ಒಳಗಾದ ಮಕ್ಕಳ ಬಗ್ಗೆ ನಿಜವಾದ ಕಾಳಜಿಯನ್ನು ಹೊಂದಿದ್ದರು. ಅದನ್ನು ಹೇಗಾದರೂ ಮಾಡಿ ಜಗತ್ತಿನೆದುರು ಬಯಲಿಗೆಳೆಯಬೇಕು, ಇದು ಒಂದು ಅಥವಾ ಕೆಲವು ಪಾದ್ರಿಗಳಿಗೆ ಸೀಮಿತವಲ್ಲ, ಇಡೀ ವ್ಯವಸ್ಥೆಯೇ ಇದರ ಭಾಗವಾಗಿದೆ ಎನ್ನುವುದನ್ನು ಬಯಲಿಗೆಳೆದು ಆ ಸಾಂಸ್ಥಿಕ ಲೈಂಗಿಕ ಕಿರುಕುಳವನ್ನು ನಿಲ್ಲಿಸಬೇಕು ಎನ್ನುವ ನೈಜ ಉದ್ದೇಶವನ್ನು ಹೊಂದಿದ್ದವರಾಗಿದ್ದರು. ಅದರೊಂದಿಗೆ ತಮ್ಮ ಗುರಿ ಮುಟ್ಟಲು ಎಡೆಬಿಡದೇ ಕೆಲಸವನ್ನು ಮಾಡಲು ತಯಾರಿದ್ದರು. ಬರೀ ಒಂದು ಅಥವಾ ಹಲವು ಪ್ರಕರಣಗಳನ್ನು ಬಯಲಿಗೆಳೆದರೆ ಹೆಚ್ಚಿನ ವ್ಯತ್ಯಾಸ ಆಗುವುದಿಲ್ಲ ಎನ್ನುವುದನ್ನು ಅರಿತ ಆ ಪತ್ರಕರ್ತರು, ಈ ಹಗರಣಗಳಲ್ಲಿ ಚರ್ಚ್ ಎನ್ನುವ ಸಂಸ್ಥೆ, ಕಾನೂನು ಮತ್ತು ಇಡೀ ವ್ಯವಸ್ಥೆ ಹೇಗೆ ಒಳಗೊಂಡಿದೆ ಎನ್ನುವುದನ್ನು ತಿಳಿದುಕೊಳ್ಳುವ ತನಕ ತಮ್ಮ ಮೊದಲ ವರದಿಯನ್ನು ಪ್ರಕಟಿಸಲಿಲ್ಲ. ಮೊದಲ ವರದಿ ಪ್ರಕಟವಾದ ಕೂಡಲೇ ಸಾವಿರಾರು ಜನರು ತಮ್ಮೆ ಮೇಲೆ ಆದ ಲೈಂಗಿಕ ದೌರ್ಜನ್ಯವನ್ನು ಹಂಚಿಕೊಂಡರು. 2002ರಲ್ಲಿ ಮೊದಲ ವರದಿಯ ನಂತರ ಮುಂದಿನ ಎರಡು ವರ್ಷಗಳಲ್ಲಿ ಸುಮಾರು ಇನ್ನೂರು ಫಾಲೋಅಪ್ ವರದಿಗಳನ್ನು ಪ್ರಕಟಿಸಿದರು.

ಇನ್ನು ಈ ಚಿತ್ರವನ್ನು ಮಾಡಿದವರ ಬದ್ಧತೆ. ನಿರ್ದೇಶಕ ಟಾಮ್ ಮೆಕಾರ್ತಿ (ಖಿom ಒಛಿಅಚಿಡಿಣhಥಿ) ಮತ್ತು ಅವರ ತಂಡದ ಬದ್ಧತೆ ಹಾಗೂ ಪ್ರಾಮಾಣಿಕತೆ. ಇವರಿಗೂ ಆ ವಿಷಯದ ಬಗ್ಗೆ ಕಾಳಜಿ ಇಲ್ಲದಿದ್ದರೆ ಜಗತ್ತು ಈ ಸಿನೆಮಾದಿಂದ ವಂಚಿತವಾಗುತ್ತಿತ್ತು. ಚಿತ್ರದ ತಂಡಕ್ಕೆ ಚರ್ಚಿನಲ್ಲಾಗುತ್ತಿರುವ ಲೈಂಗಿಕ ಕಿರುಕುಳದೊಂದಿಗೆ ಸ್ಪಾಟ್‍ಲೈಟ್ ತಂಡದವರು ತೋರಿಸಿದ ವೃತ್ತಿಪರತೆ, ಅವರ ಈ ಕಾರ್ಯದಿಂದ ಆದ ಪರಿಣಾಮಗಳ ಬಗ್ಗೆಯೂ ಅಷ್ಟೇ ಬದ್ಧತೆಯನ್ನು ಹೊಂದಿದವರಾಗಿದ್ದರು. ಸ್ಪಾಟ್‍ಲೈಟ್ ತಂಡದವರು ಮಾಡಿದ ತನಿಖೆಯಷ್ಟೇ ತೀವ್ರವಾದ ಅಧ್ಯಯನವನ್ನು ಚಿತ್ರಕಥೆಯನ್ನು ಬರೆಯುವಾಗ ಟಾಮ್ ಮೆಕಾರ್ತಿ ಮತ್ತು ಇನ್ನೊಬ್ಬ ಲೇಖಕ ಜಾಶ್ ಸಿಂಗರ್ ಮಾಡಿದರು. ಇವರಿಗೆ ಚರ್ಚಿನಲ್ಲಿ ಮಕ್ಕಳ ಮೇಲೆ ಆದ ಲೈಂಗಿಕ ಕಿರುಕುಳದೊಂದಿಗೆ ಈ ಪತ್ರಕರ್ತರು ತೋರಿಸಿದ ಬದ್ಧತೆ, ವೃತ್ತಿಪರತೆಯೊಂದಿಗೆ ಪತ್ರಿಕೋದ್ಯಮದಲ್ಲಿ ಕುಸಿಯುತ್ತಿರುವ ಮೌಲ್ಯಗಳ ಬಗ್ಗೆಯೂ ಕಾಳಜಿ ಹೊಂದಿದ್ದವರಾಗಿದ್ದರು ಎನ್ನುವುದು ಚಿತ್ರವನ್ನು ನೋಡಿದ ಮಾತ್ರಕ್ಕೇ ಸ್ಪಷ್ಟವಾಗುತ್ತದೆ. ಅದರೊಂದಿಗೆ ಈ ವಿಷಯಕ್ಕೆ ಸಂಪೂರ್ಣ ನ್ಯಾಯ ಒದಗಿಸಬೇಕು ಎನ್ನುವ ಕಾರಣದಿಂದ ಚಿತ್ರದ ನಟರು ಆಯಾ ಪತ್ರಕರ್ತರನ್ನು ಅಭ್ಯಸಿಸಿದರು. ಮೈಕೆಲ್ ಕೀಟನ್ ನಿಜವಾದ ರಾಬಿ ರಾಬಿನ್ಸನ್ ಅನ್ನು ಭೇಟಿಯಾದಾಗ ‘ನಿನಗೆ ನನ್ನ ಬಗ್ಗೆ ಎಲ್ಲವೂ ಹೇಗೆ ಗೊತ್ತು? ಈಗ್ತಾನೆ ಭೇಟಿಯಾಗ್ತಿರೋದು’ ಎಂದನಂತೆ. ಪಾತ್ರಗಳಲ್ಲಿ ಮತ್ತು ಚಿತ್ರದಲ್ಲಿ ನೈಜತೆಯನ್ನು ತರಲು ಚಿತ್ರದ ತಂಡ ಪತ್ರಕರ್ತರೊಂದಿಗೆ ಸಾಕಷ್ಟು ಸಮಯ ಕಳೆದರು.

ಸ್ಪಾಟ್‍ಲೈಟ್ ಚಿತ್ರ ಬಿಡುಗಡೆಯಾದ ನಂತರ ಕ್ಯಾಥೋಲಿಕ್ ಚರ್ಚ್ ಮಕ್ಕಳ ಮೇಲೆ ಆದ ಲೈಂಗಿಕ ದೌರ್ಜನ್ಯದ ಬಗ್ಗೆ ಬಹಿರಂಗ ಹೇಳಿಕೆ ನೀಡಬೇಕಾಯಿತು. ಚಿತ್ರವನ್ನು ನೋಡಿದ ನಂತರ ಕೆಲವರಿಗೆ ಮಕ್ಕಳ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯವನ್ನು ತಡೆಗಟ್ಟಲು ಕೆಲಸ ಮಾಡುವಂತೆ ಪ್ರೇರೇಪಿಸಿದರೆ, ಕೆಲವರಿಗೆ ನಿಜವಾದ ಪತ್ರಿಕೋದ್ಯಮ ಮಾಡಲು ಪ್ರೇರೇಪಿಸಿದೆ ಹಾಗೂ ಇನ್ನೂ ಕೆಲವರಿಗೆ ಸ್ಪಾಟ್‍ಲೈಟ್‍ನಂತಹ ಪ್ರಾಮಾಣಿಕ ಚಿತ್ರಗಳನ್ನು ಮಾಡಬೇಕು ಎಂದು ಪ್ರೇರೇಪಿಸಿದೆ. ಕಲೆಯ ಉದ್ದೇಶ ಇದಕ್ಕಿಂತಲೂ ಮೀರಿದ್ದೇನಿದೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...