HomeUncategorizedನೊವೆಲ್ ಕೊರೋನಾ ವೈರಸ್ ಭಾರತಕ್ಕೆ ಬಂದರೆ?ಬೈ ಡೇಟಾಮ್ಯಾಟಿಕ್ಸ್

ನೊವೆಲ್ ಕೊರೋನಾ ವೈರಸ್ ಭಾರತಕ್ಕೆ ಬಂದರೆ?ಬೈ ಡೇಟಾಮ್ಯಾಟಿಕ್ಸ್

- Advertisement -
- Advertisement -

ತಮ್ಮ ಪ್ರಾಮಾಣಿಕ ಸೇವೆಯಿಂದಾಗಿ ರಾಷ್ಟ್ರವ್ಯಾಪಿ ಖ್ಯಾತಿ ಗಳಿಸಿದ ಕರ್ನಾಟಕದ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಅವರು ಸಣ್ಣ ವಯಸ್ಸಿನಲ್ಲಿಯೇ ತೀರಿಹೋದರು.

ಈ ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಡುತ್ತಲೇ ಜೀವನ ಸವೆಸಿದ ಅವರು ಒಂದು ಅರ್ಥದಲ್ಲಿ ಅಭಿನವ ಅಭಿಮನ್ಯು. ಹೈದರಾಬಾದಿನ ಪೋಲೀಸ್ ಅಕಾಡೆಮಿಯಲ್ಲಿ ಯುವ ಅಧಿಕಾರಿಗಳಿಗೆ ಜಂಗಲ್ ಹೋರಾಟದ ತರಬೇತಿ ನೀಡುತ್ತಿದ್ದಾಗ ಅವರಿಗೆ ಸೋಂಕು ತಗುಲಿತು. ಒಂದೇ ದಿವಸದಾಗ ಅದು ಅವರ ಹೃದಯಕ್ಕೆ ವ್ಯಾಪಿಸಿತು. ಅಮೆರಿಕೆಯಲ್ಲಿ ಇದ್ದ ಅವರ ಪತ್ನಿ ಹಾಗೂ ಮಗಳು ಭಾರತಕ್ಕೆ ಬರೋ ಮುಂಚೆ ಅವರ ಕೊನೆಯುಸಿರು ಎಳೆದಿದ್ದರು. ಅದು ಎಚ್1 ಎನ್1 ವೈರಸ್ ಇರಬಹುದು ಅಂತ ಕೆಲವರು ಹೇಳಿದರು.

ಅವರಿಗೆ ಏನಾಗಿತ್ತು? ಅದಕ್ಕೆ ಔಷಧ ಏನು? ಅದನ್ನು ಗುಣಪಡಿಸಲಿಕ್ಕೆ ಯಾಕೆ ಆಗಲಿಲ್ಲ? ಈ ಪ್ರಶ್ನೆಗಳು ಜನರನ್ನು ಕಾಡಿದವು. ಐಜಿಪಿ ಮಟ್ಟದ ಐಪಿಎಸ್ ಅಧಿಕಾರಿಗೆ ಈ ಪರಿಸ್ಥಿತಿಯಾದರೆ ಇತರರಿಗೆ ಏನು ಅಂತ ಎಲ್ಲಾರೂ ಮಾತಾಡಲಿಕ್ಕೆ ಹತ್ತಿದರು. ಇದನ್ನು ಪತ್ತೆ ಹಚ್ಚಲಿಕ್ಕೆ ರಾಜ್ಯಸರಕಾರ ಡಾ. ದೇವಿಪ್ರಸಾದ ಶೆಟ್ಟಿ ಅವರ ಅಧ್ಯಕ್ಷತೆಯೊಳಗ ಒಂದು ಸಮಿತಿ ನೇಮಿಸಿತು. ಅದರ ವರದಿ ಇನ್ನೂ ಬಂದಿಲ್ಲ.

ಈ ವಾರದ ಸುದ್ದಿ ಏನಪಾ ಅಂದರ ಚೈನಾದಾಗ ನೊವೆಲ್ ಕೊರೋನಾ ಅಥವಾ ಹೊಸಾ ಕಿರೀಟಿ ವೈರಸ್ ಅಂತ ಪತ್ತೆ ಆಗೇದ.

ಆರ್ಥೋ ಕರೋನೊವಿರಿನೆ ಜಾತಿಯ ನಿಡೋವಿರಲೇ ಉಪಜಾತಿಯ ಈ ವೈರಸ್ಸು ನೋಡಲಿಕ್ಕೆ ಕಿರೀಟದಂಗ ಕಾಣತದ ಅಂತ ಇದಕ್ಕ ಕೊರೋನಾ ಅಥವಾ ಕಿರೀಟಿ ವೈರಸ್ ಅಂತಾರ. ಇದು ಆರ್‍ಎನ್‍ಎ ವೈರಸ್ಸು, ಪ್ರಾಣಿ ಹಾಗೂ ಮನುಷ್ಯನಲ್ಲಿ ಇದು ಪುಪ್ಪಸದ ಕೆಲಸ ನಿಲ್ಲಸತದ. ಉಸಿರಾಟ ಸಾಧ್ಯವಾಗದೇ ಸಾವು ಬರತದ. ಇದಕ್ಕೆ ಪರಿಹಾರವಾಗಲಿ, ಲಸಿಕೆ ಆಗಲೀ, ಇನ್ನೂ ಇಲ್ಲ.

ಅದು ವುಹಾನ್ ಪ್ರಾಂತದ ಸುಮಾರು 5,000 ಜನಕ್ಕ ಸೋಂಕಿರಬಹುದು ಅಂತ ಅಂದಾಜು. ಅದರಿಂದ ಸುಮಾರು 100 ಜನ ಸತ್ತು ಹೋಗ್ಯಾರ. ಅಲ್ಲಿಂದ ಬಂದವರು ಕೆಲವರಿಗೆ ಅದು ಬಂದಿರಬಹುದು ಅಂತ ಅಮೆರಿಕಾದ ಅವರನ್ನು ಡಾಕ್ಟರ್‍ಗಳ ನೋಡಕೊಳ್ಳಲಿಕ್ಕೆ ಹತ್ಯಾರ. ಭಾರತದಾಗೂ ಸಹ ಕೆಲವರಿಗೆ ಅದು ಬಂದಿರಬಹುದು ಅಂತ ಸಂಶಯ. ಇಲ್ಲಿಯವರೆಗೂ ಅದು ಯಾರಿಗೂ ಬಂದಿರೋ ಖಾತ್ರಿ ಆಗಿಲ್ಲ ಅಂತ ಸರಕಾರ ಹೇಳೇದ. ಭಾರತದ ಎಲ್ಲಾ ವಿಮಾನ ನಿಲ್ದಾಣದೊಳಗ ಒಂದು ವಿಶೇಷ ಕೌಂಟರ್ ಮಾಡಿ ಅವರನ್ನು ಚೆಕ್ ಮಾಡಲಿಕ್ಕೆ ಹತ್ಯಾರ.

ಆದರ ಇದು ಸುದ್ದಿ ಅಲ್ಲ.
ಚೈನಾದ ವುಹಾನ್ ಪ್ರಾಂತದಾಗ ಈ ಸೋಂಕು ಪತ್ತೆ ಆದಮ್ಯಾಲೆ ಅಲ್ಲಿಯವರು ಏನು ಮಾಡಿದರು ಅಂತ ಅನ್ನೋದು ವಿಶೇಷ. ಮೊದಲನೇ ರೋಗಿ ಪತ್ತೆ ಆದ 24 ತಾಸಿನೊಳಗ ಆ ವೈರಸ್ಸಿನ ಸಂಪೂರ್ಣ ಅಧ್ಯಯನ ನಡೀತು. ಅದರ ಜೀನೋಮು ಮ್ಯಾಪಿಂಗ್ ಅಂದರ ವಿಜ್ಞಾನಿಗಳು ಅದರ ವಂಶವಾಹಿನಿ ತಳಿಯನ್ನ ಪ್ರತ್ಯೇಕಿಸಿ ಅಭ್ಯಾಸ ಮಾಡಿದರು. ರೋಗಿಗಳ ಸಂಖ್ಯೆ ಹೆಚ್ಚು ಆದಂಗೆಲ್ಲಾ ಅವರನ್ನ ಪ್ರತ್ಯೇಕಿಸಿ ಇಡಲಾತು. ಇನ್ನೂ ಹೆಚ್ಚು ಆದಂಗ ಇವರ ಸಲುವಾಗೇನ ಒಂದು ವಿಶೇಷ ಆಸ್ಪತ್ರೆ ಕಟ್ಟಬೇಕು ಅಂತ ನಿರ್ಧಾರ ಆತು. ಹತ್ತು ದಿನದಾಗ ಆ ಆಸ್ಪತ್ರೆ ಕಟ್ಟಡ ಕಟ್ಟಬೇಕು ಅಂತ ಒಂದು ನೂರು ಭೂಚಾಲಕ ಯಂತ್ರಗಳನ್ನು ಕೆಲಸಕ್ಕೆ ಹಚ್ಚಲಾಗೇದ. ಅದು ಮುಗೀಲಿಕ್ಕೆ ಬಂದದ. ಅದಕ್ಕೆ ವಿಶೇಷ ತರಬೇತಿ ಪಡೆದ ಡಾಕ್ಟರಗಳನ್ನು ನೇಮಿಸಲಾಗೇದ.

ಸೋಂಕು ಹಬ್ಬೇದ ತಪ್ಪಸಬೇಕು ಅಂತ ಚೈನಾ ಸರಕಾರ ವುಹಾನ ಪ್ರಾಂತದ ಸುಮಾರು 50 ಲಕ್ಷ ಜನರನ್ನು ಒಂದು ವಾರದಾಗ ಬೇರೆ ಕಡೆ ಸ್ಥಳಾಂತರ ಮಾಡೇದ. ಇನ್ನೂ ತೊಂಬತ್ತು ಲಕ್ಷ ಜನರನ್ನು ಸ್ಥಳಾಂತರಿಸತೇವಿ ಅಂತ ಅಲ್ಲಿನ ಸರಕಾರಿ ವಕ್ತಾರರು ಹೇಳ್ಯಾರ. `2012′ ಅನ್ನೋ ಹೆಸರಿನ ಸಿನಿಮಾದಾಗ ವಿಶ್ವದ ಎಲ್ಲಾ ನಾಯಕರು ಲಕ್ಷಾಂತರ ಜನರನ್ನ ಸಮುದ್ರದಾಗ ಬೇರೆ ಕಡೆ ಕರಕೊಂಡು ಹೋಗಬೇಕು ಅಂತ ನಿರ್ಧಾರ ಮಾಡತಾರ. ಆದರ ಅಷ್ಟು ಜನರನ್ನ ಕರಕೊಂಡು ಹೋಗೋವಂಥಾ ಹಡಗು ಕಟ್ಟುವವರು ಯಾರು ಅಂತ ಒಬ್ಬವ ಕೇಳಿದಾಗ ಅಮೆರಿಕದ ವಿಜ್ಞಾನಿಯೊಬ್ಬ ಇಂಥದೆಲ್ಲಾ ಮಾಡೋರ ಚೈನಾದವರಷ್ಟ, ಅಂತ ಹೇಳತಾನ.  ಅಷ್ಟೋತ್ತಿಗೆ ಚೈನಾದವರು ನಾವಾಗಲೇ ಮಾಡಿ ಬಿಟ್ಟೇವಿ ಅಂತ ಹೇಳತಾರ. ಅವರೆಲ್ಲರನ್ನೂ ಸುರಕ್ಷಿತ ಕರಕೊಂಡು ಹೋಗತಾರ.

ಚೈನಾದವರ ಚುರುಕುತನ ಎಲ್ಲರಿಗೂ ಜಗಜ್ಜಾಹೀರು ಆಗೇದ ಅಂತ ಆತು. ನಾವು ಹಿಂಗ ಆಗೋದು ಯಾವಾಗ? ನಮ್ಮಲ್ಲೆ ಒಂದೊಂದು ನಿರ್ಧಾರ ತೊಗೊಳ್ಳೋದು ವರ್ಷಾನುಗಟ್ಟಲೇ ತಡ ಆಗತದ. ಸ್ವಾತಂತ್ರ ಬಂದು 70 ವರ್ಷ ಆದರೂ ಸಹ ‌ ಎಷ್ಟೋ ಜಿಲ್ಲೆ / ತಾಲೂಕುದಾಗ ಶಿಕ್ಷಿತ ಡಾಕ್ಟರುಗಳು ಇಲ್ಲ. ಗಡಿ ತಾಲೂಕುಗಳಾದ ಔರಾದ, ಖಾನಾಪುರ, ಕೊಳ್ಳೇಗಾಲ ಮುಂತಾದ ಕಡೆ ಸ್ನಾತಕೋತ್ತರ ಪದವಿ ಪಡೆದ ಒಬ್ಬ ವೈದ್ಯರೂ ಇಲ್ಲ. ಎಷ್ಟೋ ಜಿಲ್ಲಾ ಆಸ್ಪತ್ರೆಯೊಳಗ ಹಾವು ಕಡಿತಕ್ಕ ಔಷಧಿ ಇಲ್ಲ. ಬ್ರಿಟಿಷರ ಕಾಲದಾಗ ಶುರುವಾದ ಮಲೇರಿಯಾ ಕಂಟ್ರೋಲ್ ಪ್ರೋಗ್ರಾಮು ಇನ್ನೂ ನಡಿಲಿಕ್ಕೆ ಹತ್ತೇದ. ಪ್ರತಿ ಮಾನಸೂನಿನ್ಯಾಗ ಅತಿ ಮುಂದುವರೆದ ಮಂಗಳೂರು ನಗರದಾಗ ಅತಿಹೆಚ್ಚು ಮಲೇರಿಯಾ ರೋಗಿಗಳು ಆಸ್ಪತ್ರೆಗೆ ದಾಖಲಾಗತಾರ. ಆಸ್ಪತ್ರೆಯೊಳಗ ಆಮ್ಲಜನಕ ಇಲ್ಲದೇ ಕೂಸು ಸಾಯತಾವ. ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ ಅತಿ ಹೆಚ್ಚಿರುವ ದೇಶಗಳೊಳಗ ನಮ್ಮದೂ ಒಂದು. ಬಾಣಂತಿಯರ ಸಾವು, ಗುಣಪಡಿಸಬಹುದಾದ ರೋಗದಿಂದ ಸಾಯುವವರ ಸಂಖ್ಯೆ ನಮ್ಮ ಸುತ್ತಮುತ್ತಲಿನ ದೇಶಗಳಿಗಿಂತ ನಮ್ಮಲ್ಲಿ ಹೆಚ್ಚು. ಇವು ಯಾವಾಗ ಸಮಾ ಆಗಬೇಕು? ಛಲೋ ಪರಿಚಯ, ಅನುಭವ ಇರೋ ರೋಗಗಳ ಹಣೆಬರಹಾನ ಹಿಂಗ ಅಂದರ ನಮಗೇನರ ಹೊಸಾ ರೋಗ ಬಂದರ ಹೆಂಗ?

ಅಂದಂಗ ಒಂದು ಮಾತು. ಇದು ಜೋಕು ಅಲ್ಲ. ನಡೆದುಹೋದ ವಿಷಯ.

ಕನ್ನಡವನ್ನು ಬಾಳೆಹಣ್ಣು ಸುಲದು ಸಿಪ್ಪಿ ಬಿಸಾಡುವಷ್ಟು ಸುಲಲಿತವಾಗಿ ಮಾತಾಡುವ ಯುವ ನಾಯಕ ಶ್ರೀರಾಮುಲು ಅವರು ಹಿಂದೊಮ್ಮೆ ಆರೋಗ್ಯ ಸಚಿವರಾಗಿದ್ದಾಗ ಒಂದು ಧುರಂದರ ಘೋಷಣೆ ಮಾಡಿದ್ದರು. ನಮ್ಮ ಆಡಳಿತದಾಗ ಆರೋಗ್ಯ ಇಲಾಖೆ ಎಷ್ಟು ಗಟ್ಟಿ ಆಗೇದ ಅಂದರ ನಾವು ಎಚ್1 ಎನ್1 ಅಲ್ಲಾ, ಎಚ್10 ಎನ್10 ಇದ್ದರೂ ನಾವು ಸಂಭಾಳಸತೇವಿ ಅಂತ. ಆ ಅಚ್ಛೇ ದಿನ ಬಂದೀತು ಅಂತ ನಾವೆಲ್ಲಾ ಕಾಯಕೊಂಡು ಇದ್ದೇವಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...