HomeUncategorizedನೊವೆಲ್ ಕೊರೋನಾ ವೈರಸ್ ಭಾರತಕ್ಕೆ ಬಂದರೆ?ಬೈ ಡೇಟಾಮ್ಯಾಟಿಕ್ಸ್

ನೊವೆಲ್ ಕೊರೋನಾ ವೈರಸ್ ಭಾರತಕ್ಕೆ ಬಂದರೆ?ಬೈ ಡೇಟಾಮ್ಯಾಟಿಕ್ಸ್

- Advertisement -
- Advertisement -

ತಮ್ಮ ಪ್ರಾಮಾಣಿಕ ಸೇವೆಯಿಂದಾಗಿ ರಾಷ್ಟ್ರವ್ಯಾಪಿ ಖ್ಯಾತಿ ಗಳಿಸಿದ ಕರ್ನಾಟಕದ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಅವರು ಸಣ್ಣ ವಯಸ್ಸಿನಲ್ಲಿಯೇ ತೀರಿಹೋದರು.

ಈ ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಡುತ್ತಲೇ ಜೀವನ ಸವೆಸಿದ ಅವರು ಒಂದು ಅರ್ಥದಲ್ಲಿ ಅಭಿನವ ಅಭಿಮನ್ಯು. ಹೈದರಾಬಾದಿನ ಪೋಲೀಸ್ ಅಕಾಡೆಮಿಯಲ್ಲಿ ಯುವ ಅಧಿಕಾರಿಗಳಿಗೆ ಜಂಗಲ್ ಹೋರಾಟದ ತರಬೇತಿ ನೀಡುತ್ತಿದ್ದಾಗ ಅವರಿಗೆ ಸೋಂಕು ತಗುಲಿತು. ಒಂದೇ ದಿವಸದಾಗ ಅದು ಅವರ ಹೃದಯಕ್ಕೆ ವ್ಯಾಪಿಸಿತು. ಅಮೆರಿಕೆಯಲ್ಲಿ ಇದ್ದ ಅವರ ಪತ್ನಿ ಹಾಗೂ ಮಗಳು ಭಾರತಕ್ಕೆ ಬರೋ ಮುಂಚೆ ಅವರ ಕೊನೆಯುಸಿರು ಎಳೆದಿದ್ದರು. ಅದು ಎಚ್1 ಎನ್1 ವೈರಸ್ ಇರಬಹುದು ಅಂತ ಕೆಲವರು ಹೇಳಿದರು.

ಅವರಿಗೆ ಏನಾಗಿತ್ತು? ಅದಕ್ಕೆ ಔಷಧ ಏನು? ಅದನ್ನು ಗುಣಪಡಿಸಲಿಕ್ಕೆ ಯಾಕೆ ಆಗಲಿಲ್ಲ? ಈ ಪ್ರಶ್ನೆಗಳು ಜನರನ್ನು ಕಾಡಿದವು. ಐಜಿಪಿ ಮಟ್ಟದ ಐಪಿಎಸ್ ಅಧಿಕಾರಿಗೆ ಈ ಪರಿಸ್ಥಿತಿಯಾದರೆ ಇತರರಿಗೆ ಏನು ಅಂತ ಎಲ್ಲಾರೂ ಮಾತಾಡಲಿಕ್ಕೆ ಹತ್ತಿದರು. ಇದನ್ನು ಪತ್ತೆ ಹಚ್ಚಲಿಕ್ಕೆ ರಾಜ್ಯಸರಕಾರ ಡಾ. ದೇವಿಪ್ರಸಾದ ಶೆಟ್ಟಿ ಅವರ ಅಧ್ಯಕ್ಷತೆಯೊಳಗ ಒಂದು ಸಮಿತಿ ನೇಮಿಸಿತು. ಅದರ ವರದಿ ಇನ್ನೂ ಬಂದಿಲ್ಲ.

ಈ ವಾರದ ಸುದ್ದಿ ಏನಪಾ ಅಂದರ ಚೈನಾದಾಗ ನೊವೆಲ್ ಕೊರೋನಾ ಅಥವಾ ಹೊಸಾ ಕಿರೀಟಿ ವೈರಸ್ ಅಂತ ಪತ್ತೆ ಆಗೇದ.

ಆರ್ಥೋ ಕರೋನೊವಿರಿನೆ ಜಾತಿಯ ನಿಡೋವಿರಲೇ ಉಪಜಾತಿಯ ಈ ವೈರಸ್ಸು ನೋಡಲಿಕ್ಕೆ ಕಿರೀಟದಂಗ ಕಾಣತದ ಅಂತ ಇದಕ್ಕ ಕೊರೋನಾ ಅಥವಾ ಕಿರೀಟಿ ವೈರಸ್ ಅಂತಾರ. ಇದು ಆರ್‍ಎನ್‍ಎ ವೈರಸ್ಸು, ಪ್ರಾಣಿ ಹಾಗೂ ಮನುಷ್ಯನಲ್ಲಿ ಇದು ಪುಪ್ಪಸದ ಕೆಲಸ ನಿಲ್ಲಸತದ. ಉಸಿರಾಟ ಸಾಧ್ಯವಾಗದೇ ಸಾವು ಬರತದ. ಇದಕ್ಕೆ ಪರಿಹಾರವಾಗಲಿ, ಲಸಿಕೆ ಆಗಲೀ, ಇನ್ನೂ ಇಲ್ಲ.

ಅದು ವುಹಾನ್ ಪ್ರಾಂತದ ಸುಮಾರು 5,000 ಜನಕ್ಕ ಸೋಂಕಿರಬಹುದು ಅಂತ ಅಂದಾಜು. ಅದರಿಂದ ಸುಮಾರು 100 ಜನ ಸತ್ತು ಹೋಗ್ಯಾರ. ಅಲ್ಲಿಂದ ಬಂದವರು ಕೆಲವರಿಗೆ ಅದು ಬಂದಿರಬಹುದು ಅಂತ ಅಮೆರಿಕಾದ ಅವರನ್ನು ಡಾಕ್ಟರ್‍ಗಳ ನೋಡಕೊಳ್ಳಲಿಕ್ಕೆ ಹತ್ಯಾರ. ಭಾರತದಾಗೂ ಸಹ ಕೆಲವರಿಗೆ ಅದು ಬಂದಿರಬಹುದು ಅಂತ ಸಂಶಯ. ಇಲ್ಲಿಯವರೆಗೂ ಅದು ಯಾರಿಗೂ ಬಂದಿರೋ ಖಾತ್ರಿ ಆಗಿಲ್ಲ ಅಂತ ಸರಕಾರ ಹೇಳೇದ. ಭಾರತದ ಎಲ್ಲಾ ವಿಮಾನ ನಿಲ್ದಾಣದೊಳಗ ಒಂದು ವಿಶೇಷ ಕೌಂಟರ್ ಮಾಡಿ ಅವರನ್ನು ಚೆಕ್ ಮಾಡಲಿಕ್ಕೆ ಹತ್ಯಾರ.

ಆದರ ಇದು ಸುದ್ದಿ ಅಲ್ಲ.
ಚೈನಾದ ವುಹಾನ್ ಪ್ರಾಂತದಾಗ ಈ ಸೋಂಕು ಪತ್ತೆ ಆದಮ್ಯಾಲೆ ಅಲ್ಲಿಯವರು ಏನು ಮಾಡಿದರು ಅಂತ ಅನ್ನೋದು ವಿಶೇಷ. ಮೊದಲನೇ ರೋಗಿ ಪತ್ತೆ ಆದ 24 ತಾಸಿನೊಳಗ ಆ ವೈರಸ್ಸಿನ ಸಂಪೂರ್ಣ ಅಧ್ಯಯನ ನಡೀತು. ಅದರ ಜೀನೋಮು ಮ್ಯಾಪಿಂಗ್ ಅಂದರ ವಿಜ್ಞಾನಿಗಳು ಅದರ ವಂಶವಾಹಿನಿ ತಳಿಯನ್ನ ಪ್ರತ್ಯೇಕಿಸಿ ಅಭ್ಯಾಸ ಮಾಡಿದರು. ರೋಗಿಗಳ ಸಂಖ್ಯೆ ಹೆಚ್ಚು ಆದಂಗೆಲ್ಲಾ ಅವರನ್ನ ಪ್ರತ್ಯೇಕಿಸಿ ಇಡಲಾತು. ಇನ್ನೂ ಹೆಚ್ಚು ಆದಂಗ ಇವರ ಸಲುವಾಗೇನ ಒಂದು ವಿಶೇಷ ಆಸ್ಪತ್ರೆ ಕಟ್ಟಬೇಕು ಅಂತ ನಿರ್ಧಾರ ಆತು. ಹತ್ತು ದಿನದಾಗ ಆ ಆಸ್ಪತ್ರೆ ಕಟ್ಟಡ ಕಟ್ಟಬೇಕು ಅಂತ ಒಂದು ನೂರು ಭೂಚಾಲಕ ಯಂತ್ರಗಳನ್ನು ಕೆಲಸಕ್ಕೆ ಹಚ್ಚಲಾಗೇದ. ಅದು ಮುಗೀಲಿಕ್ಕೆ ಬಂದದ. ಅದಕ್ಕೆ ವಿಶೇಷ ತರಬೇತಿ ಪಡೆದ ಡಾಕ್ಟರಗಳನ್ನು ನೇಮಿಸಲಾಗೇದ.

ಸೋಂಕು ಹಬ್ಬೇದ ತಪ್ಪಸಬೇಕು ಅಂತ ಚೈನಾ ಸರಕಾರ ವುಹಾನ ಪ್ರಾಂತದ ಸುಮಾರು 50 ಲಕ್ಷ ಜನರನ್ನು ಒಂದು ವಾರದಾಗ ಬೇರೆ ಕಡೆ ಸ್ಥಳಾಂತರ ಮಾಡೇದ. ಇನ್ನೂ ತೊಂಬತ್ತು ಲಕ್ಷ ಜನರನ್ನು ಸ್ಥಳಾಂತರಿಸತೇವಿ ಅಂತ ಅಲ್ಲಿನ ಸರಕಾರಿ ವಕ್ತಾರರು ಹೇಳ್ಯಾರ. `2012′ ಅನ್ನೋ ಹೆಸರಿನ ಸಿನಿಮಾದಾಗ ವಿಶ್ವದ ಎಲ್ಲಾ ನಾಯಕರು ಲಕ್ಷಾಂತರ ಜನರನ್ನ ಸಮುದ್ರದಾಗ ಬೇರೆ ಕಡೆ ಕರಕೊಂಡು ಹೋಗಬೇಕು ಅಂತ ನಿರ್ಧಾರ ಮಾಡತಾರ. ಆದರ ಅಷ್ಟು ಜನರನ್ನ ಕರಕೊಂಡು ಹೋಗೋವಂಥಾ ಹಡಗು ಕಟ್ಟುವವರು ಯಾರು ಅಂತ ಒಬ್ಬವ ಕೇಳಿದಾಗ ಅಮೆರಿಕದ ವಿಜ್ಞಾನಿಯೊಬ್ಬ ಇಂಥದೆಲ್ಲಾ ಮಾಡೋರ ಚೈನಾದವರಷ್ಟ, ಅಂತ ಹೇಳತಾನ.  ಅಷ್ಟೋತ್ತಿಗೆ ಚೈನಾದವರು ನಾವಾಗಲೇ ಮಾಡಿ ಬಿಟ್ಟೇವಿ ಅಂತ ಹೇಳತಾರ. ಅವರೆಲ್ಲರನ್ನೂ ಸುರಕ್ಷಿತ ಕರಕೊಂಡು ಹೋಗತಾರ.

ಚೈನಾದವರ ಚುರುಕುತನ ಎಲ್ಲರಿಗೂ ಜಗಜ್ಜಾಹೀರು ಆಗೇದ ಅಂತ ಆತು. ನಾವು ಹಿಂಗ ಆಗೋದು ಯಾವಾಗ? ನಮ್ಮಲ್ಲೆ ಒಂದೊಂದು ನಿರ್ಧಾರ ತೊಗೊಳ್ಳೋದು ವರ್ಷಾನುಗಟ್ಟಲೇ ತಡ ಆಗತದ. ಸ್ವಾತಂತ್ರ ಬಂದು 70 ವರ್ಷ ಆದರೂ ಸಹ ‌ ಎಷ್ಟೋ ಜಿಲ್ಲೆ / ತಾಲೂಕುದಾಗ ಶಿಕ್ಷಿತ ಡಾಕ್ಟರುಗಳು ಇಲ್ಲ. ಗಡಿ ತಾಲೂಕುಗಳಾದ ಔರಾದ, ಖಾನಾಪುರ, ಕೊಳ್ಳೇಗಾಲ ಮುಂತಾದ ಕಡೆ ಸ್ನಾತಕೋತ್ತರ ಪದವಿ ಪಡೆದ ಒಬ್ಬ ವೈದ್ಯರೂ ಇಲ್ಲ. ಎಷ್ಟೋ ಜಿಲ್ಲಾ ಆಸ್ಪತ್ರೆಯೊಳಗ ಹಾವು ಕಡಿತಕ್ಕ ಔಷಧಿ ಇಲ್ಲ. ಬ್ರಿಟಿಷರ ಕಾಲದಾಗ ಶುರುವಾದ ಮಲೇರಿಯಾ ಕಂಟ್ರೋಲ್ ಪ್ರೋಗ್ರಾಮು ಇನ್ನೂ ನಡಿಲಿಕ್ಕೆ ಹತ್ತೇದ. ಪ್ರತಿ ಮಾನಸೂನಿನ್ಯಾಗ ಅತಿ ಮುಂದುವರೆದ ಮಂಗಳೂರು ನಗರದಾಗ ಅತಿಹೆಚ್ಚು ಮಲೇರಿಯಾ ರೋಗಿಗಳು ಆಸ್ಪತ್ರೆಗೆ ದಾಖಲಾಗತಾರ. ಆಸ್ಪತ್ರೆಯೊಳಗ ಆಮ್ಲಜನಕ ಇಲ್ಲದೇ ಕೂಸು ಸಾಯತಾವ. ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ ಅತಿ ಹೆಚ್ಚಿರುವ ದೇಶಗಳೊಳಗ ನಮ್ಮದೂ ಒಂದು. ಬಾಣಂತಿಯರ ಸಾವು, ಗುಣಪಡಿಸಬಹುದಾದ ರೋಗದಿಂದ ಸಾಯುವವರ ಸಂಖ್ಯೆ ನಮ್ಮ ಸುತ್ತಮುತ್ತಲಿನ ದೇಶಗಳಿಗಿಂತ ನಮ್ಮಲ್ಲಿ ಹೆಚ್ಚು. ಇವು ಯಾವಾಗ ಸಮಾ ಆಗಬೇಕು? ಛಲೋ ಪರಿಚಯ, ಅನುಭವ ಇರೋ ರೋಗಗಳ ಹಣೆಬರಹಾನ ಹಿಂಗ ಅಂದರ ನಮಗೇನರ ಹೊಸಾ ರೋಗ ಬಂದರ ಹೆಂಗ?

ಅಂದಂಗ ಒಂದು ಮಾತು. ಇದು ಜೋಕು ಅಲ್ಲ. ನಡೆದುಹೋದ ವಿಷಯ.

ಕನ್ನಡವನ್ನು ಬಾಳೆಹಣ್ಣು ಸುಲದು ಸಿಪ್ಪಿ ಬಿಸಾಡುವಷ್ಟು ಸುಲಲಿತವಾಗಿ ಮಾತಾಡುವ ಯುವ ನಾಯಕ ಶ್ರೀರಾಮುಲು ಅವರು ಹಿಂದೊಮ್ಮೆ ಆರೋಗ್ಯ ಸಚಿವರಾಗಿದ್ದಾಗ ಒಂದು ಧುರಂದರ ಘೋಷಣೆ ಮಾಡಿದ್ದರು. ನಮ್ಮ ಆಡಳಿತದಾಗ ಆರೋಗ್ಯ ಇಲಾಖೆ ಎಷ್ಟು ಗಟ್ಟಿ ಆಗೇದ ಅಂದರ ನಾವು ಎಚ್1 ಎನ್1 ಅಲ್ಲಾ, ಎಚ್10 ಎನ್10 ಇದ್ದರೂ ನಾವು ಸಂಭಾಳಸತೇವಿ ಅಂತ. ಆ ಅಚ್ಛೇ ದಿನ ಬಂದೀತು ಅಂತ ನಾವೆಲ್ಲಾ ಕಾಯಕೊಂಡು ಇದ್ದೇವಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...