Homeಮುಖಪುಟಮಹಿಳೆ ಈ 40 ವಿಷಯಗಳನ್ನು ಹೇಳಿದರೆ ಅದನ್ನು ‘ಗುಡ್‌ ನ್ಯೂಸ್‌’ ಎಂದು ಒಪ್ಪಿಕೊಳ್ಳಿ!

ಮಹಿಳೆ ಈ 40 ವಿಷಯಗಳನ್ನು ಹೇಳಿದರೆ ಅದನ್ನು ‘ಗುಡ್‌ ನ್ಯೂಸ್‌’ ಎಂದು ಒಪ್ಪಿಕೊಳ್ಳಿ!

- Advertisement -
- Advertisement -

ಸಾಮಾನ್ಯವಾಗಿ ಭಾರತೀಯ ಕುಟುಂಬಗಳಲ್ಲಿ ಮಹಿಳೆಯಿಂದ ಬಯಸುವ ‘ಗುಡ್‌ ನ್ಯೂಸ್‌’ ಎಂದರೆ, ತಮ್ಮ ಕುಟುಂಬದ ಮಹಿಳೆ ಗರ್ಭಿಣಿಯಾಗುತ್ತಿರುವ ಸುದ್ದಿಯಾಗಿದೆ. ಆದರೆ ಈ ಆಧುನಿಕ ಯುಗಗಳಲ್ಲಿ ಮಹಿಳೆಯ ಜಗತ್ತು ತನ್ನ ಕುಟಂಬ ಮತ್ತು ಮಕ್ಕಳು ಮಾತ್ರ ಆಗಿ ಉಳಿದಿಲ್ಲ. ಮಹಿಳೆಯ ಪ್ರಪಂಚವು ವಿಶಾಲವಾಗಿ ತೆರೆಯುತ್ತಲೆ ಇದೆ.

She The People(ಶಿ ದ ಪೀಪಲ್) ಎಂಬ ಮಹಿಳಾ ಕೇಂದ್ರಿತ ಇಂಗ್ಲಿಂಷ್‌ ವೆಬ್‌ಸೈಟ್‌, ‘ಗುಡ್‌ ನ್ಯೂಸ್‌’ ಎಂದರೆ ಏನೆಂದು ಮಹಿಳೆಯರೊಂದಿಗೆ ಕೇಳಿದೆ. ಅವರ ಪ್ರಶ್ನೆಗೆ ಬಂದ ಅದ್ಬುತ ಉತ್ತರಗಳನ್ನು ಅದು 40 ಅಂಶಗಳಾಗಿ ನೀಡಿದ್ದು, ಈ ವಿಷಯಗಳನ್ನೂ ಸಮಾಜ ಮಹಿಳೆಯರಿಂದ ಬರುವ ‘ಗುಡ್‌ ನ್ಯೂಸ್‌’ ಎಂದು ಸ್ವೀಕರಿಸಲು ಪ್ರಾರಂಭಿಸಬೇಕು ಎಂದು ಅದು ಹೇಳಿದೆ. ವೆಬ್‌ಸೈಟ್‌ಗೆ ಬಂದ ಉತ್ತರಗಳು ನಾನುಗೌರಿ.ಕಾಂ ಓದುಗರಿಗಾಗಿ ಇಲ್ಲಿ ನೀಡುತ್ತಿದ್ದೇವೆ.

  1. ಕೊನೆಗೂ ವಿಚ್ಛೇದನ ಪಡೆಯುತ್ತಿದ್ದೇನೆ ಮತ್ತು ಇಷ್ಟವಿಲ್ಲದ ವಿವಾಹದಿಂದ ಬಿಡುಗಡೆ ಹೊಂದಿದ್ದೇನೆ.
  2. ನನ್ನ ಆಯ್ಕೆಯ ವ್ಯಕ್ತಿಯೊಂದಿಗೆ ಮದುವೆಯಾಗುತ್ತಿದ್ದೇನೆ.
  3. ನನಗೆ ನನ್ನ ಕನಸಿನ ಕೆಲಸ ಸಿಕ್ಕಿತು.
  4. ನಾನು ಬಯಸಿದಷ್ಟು ಸಂಬಳ ಏರಿಕೆಯಾಯಿತು.
  5. ಕೆಲಸ ಇಷ್ಟ ಇಲ್ಲದಿದ್ದರಿಂದ ಅದನ್ನು ತ್ಯಜಿಸಿದೆ.
  6. ನಾನು ಗರ್ಭಿಣಿಯಾಗಿಲ್ಲ.
  7. ನಾನು ಗರ್ಭಿಣಿ.
  8. ನನ್ನ ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳುತ್ತಿದ್ದೇನೆ.
  9. ಪರೀಕ್ಷೆಯಲ್ಲಿ ಉತ್ತೀರ್ಣಳಾದೆ.
  10. ಉನ್ನತ ಅಧ್ಯಯನಕ್ಕಾಗಿ ನಾನು ವಿದೇಶಕ್ಕೆ ಹೋಗುತ್ತಿದ್ದೇನೆ.
    ಇದನ್ನೂ ಓದಿ: ಆಧುನಿಕ ಮಹಿಳೆಯರು ಜನ್ಮ ನೀಡಲು ಬಯಸುತ್ತಿಲ್ಲ, ಇದು ಒಳ್ಳೆಯದಲ್ಲ: ಸಚಿವ ಸುಧಾಕರ್‌ ವಿವಾದಾತ್ಮಕ ಹೇಳಿಕೆ
  11. ಇಷ್ಟವಿಲ್ಲದೆ ನನ್ನ ಸಂಗಾತಿಯೊಂದಿಗೆ ನಾನು ಬ್ರೇಕ್‌ ಅಪ್ ಮಾಡಿಕೊಂಡೆ.
  12. ನನ್ನ ಜೀವನದ ಪ್ರೀತಿಯ ವ್ಯಕ್ತಿಯನ್ನು ಕಂಡುಕೊಂಡೆ.
  13. ನಾಯಿಯನ್ನು ದತ್ತು ತೆಗೆದುಕೊಂಡೆ.
  14. ನಾನು ಮನೆಯನ್ನು ಖರೀದಿಸಿದೆ.
  15. ನಾನು ಪ್ರೀತಿಸುವ ವ್ಯಕ್ತಿಗೆ ನಾನು ಪ್ರಪೋಸ್‌ ಮಾಡಿದೆ.
  16. ನಾನು ಪ್ರೀತಿಸುವ ವ್ಯಕ್ತಿ ನನಗೆ ಪ್ರಪೋಸ್ ಮಾಡಿದ.
  17. ನನಗಾಗಿ ಒಂದು ಕಾರನ್ನು ಖರೀದಿಸಿದೆ.
  18. ಮಗುವನ್ನು ದತ್ತು ತೆಗೆದುಕೊಳ್ಳುತ್ತಿದ್ದೇನೆ.
  19. ಅಡುಗೆ ಮಾಡುವುದನ್ನು ಕಲಿತೆ.
  20. ನನಗೋಸ್ಕರ ನನ್ನ ಕುಟುಂಬದ ಎದುರು ನಿಲ್ಲಬಲ್ಲೆ.
    ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲಿ ಮಹಿಳೆಯರಿಗೆ 30-35 ಸ್ಥಾನ ಮೀಸಲು: ಎಚ್.ಡಿ.ಕುಮಾರಸ್ವಾಮಿ
  21. ನನ್ನ ಮೊದಲ ಪುಸ್ತಕ ಬರೆಯಲು ಆರಂಭಿಸಿದೆ.
  22. ನನ್ನ ಮೊದಲ ಉದ್ಯೋಗದ ಸಂದರ್ಶನಕ್ಕೆ ಹೋಗುತ್ತಿದ್ದೇನೆ.
  23. ಕೊನೆಗೂ ನನ್ನನ್ನು ನಾನು ಪ್ರೀತಿಸಲು ಕಲಿಯುತ್ತಿದ್ದೇನೆ.
  24. ನಾನು ಎಂದಿಗೂ ಮದುವೆಯಾಗುವುದಿಲ್ಲ ಎಂಬ ನಿರ್ಧಾರವನ್ನು ನನ್ನ ಪೋಷಕರು ಒಪ್ಪಿಕೊಂಡಿದ್ದಾರೆ.
  25. ಹೊಸ ಭಾಷೆಯನ್ನು ಕಲಿಯಲು ಆರಂಭಿಸಿದೆ.
  26. ನನಗೆ ಕಿರುಕುಳ ನೀಡಿದ ವ್ಯಕ್ತಿಗೆ ನಾನು ತಕ್ಕ ಪಾಠ ಕಲಿಸಿದೆ.
  27. ಪ್ರತಿದಿನ ಹೆಚ್ಚು ಹೆಚ್ಚು ಪಾಸಿಟಿವ್‌ ಆಗುತ್ತಿದ್ದೇನೆ.
  28. ನಾನು ಜೀವನದಲ್ಲಿ ಏನು ಮಾಡಬೇಕೆಂದು ಯೋಚಿಸಲು ವಿರಾಮ ತೆಗೆದುಕೊಳ್ಳುತ್ತಿದ್ದೇನೆ.
  29. ಮಕ್ಕಳನ್ನು ಬೆಳೆಸಲು ನಾನು ನನ್ನ ಕೆಲಸವನ್ನು ಬಿಟ್ಟೆ.
  30. ನಾನು ಅವಿವಾಹಿತಳಾಗಿದ್ದೇನೆ, ಯಾಕೆಂದರೆ ನನಗೆ ಸರಿಯಾದ ವ್ಯಕ್ತಿ ಸಿಗಲಿಲ್ಲ.
    ಇದನ್ನೂ ಓದಿ: ಸುಪ್ರೀಂ ತೀರ್ಪು ಎಫೆಕ್ಟ್‌‌: ಅವಿವಾಹಿತ ಮಹಿಳೆಯರಿಗೆ ರಾಷ್ಟ್ರೀಯ ರಕ್ಷಣಾ, ನೌಕಾ ಅಕಾಡೆಮಿ ಪರೀಕ್ಷೆಗೆ ಯುಪಿಎಸ್‌ಸಿ ಅನುಮತಿ
  31. ನನ್ನ ಮೊದಲ ಸಂಬಳವನ್ನು ಪಡೆದುಕೊಂಡೆ.
  32. ನನ್ನ ಕುಟುಂಬ ನಾನು ಮತ್ತು ನನ್ನ ಸಂಗಾತಿ ಮಾತ್ರ.
  33. ನನ್ನ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ನಿಭಾಯಿಸಲು ನಾನು ನನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದೇನೆ.
  34. ನಾನು ಕೊನೆಗೂ ವೈದ್ಯನನ್ನು ಭೇಟಿಯಾಗುತ್ತಿದ್ದೇನೆ.
  35. ನನ್ನ ಹೆತ್ತವರ ಬಳಿ ನಾನು ಸಲಿಂಗಕಾಮಿ ಎಂದು ಹೇಳಿದೆ.
  36. ಹೌದು, ನನಗೆ ಲೈಂಗಿಕ ಆಸಕ್ತಿ ಇಲ್ಲ ಮತ್ತು ನಾನು ಅದರ ಬಗ್ಗೆ ನಾಚಿಕೆಪಡುವುದಿಲ್ಲ.
  37. ನಾನು ಲೈಂಗಿಕಾಸಕ್ತಿ ಇಲ್ಲದ ವಿವಾಹದಿಂದ ಹೊರಗಿದ್ದೇನೆ.
  38. ನನ್ನ ‘ಪ್ಯಾಷನ್‌’(passion)ಗಾಗಿ ನನ್ನ ಕೆಲಸವನ್ನು ತ್ಯಜಿಸಿದೆ.
  39. ನಾನು ಶೀಘ್ರದಲ್ಲೇ ನನ್ನ ಸ್ವಂತ ವ್ಯವಹಾರವನ್ನು ಪ್ರಾರಂಭಿಸುತ್ತೇನೆ.
  40. ನಾನು ಸ್ಟೇಜ್ ಫಿಯರ್‌ನಿಂದ(stage fear) ಹೊರಬಂದೆ.

ಇದನ್ನೂ ಓದಿ: ಅಲ್ಬೇನಿಯಾ ದಾಖಲೆ – ದೇಶದ ಸಚಿವ ಸಂಪುಟದಲ್ಲಿ 70.5% ಮಹಿಳೆಯರು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...