Homeಕರ್ನಾಟಕಇತಿಹಾಸ ನೋಡಿದರೆ ಭರವಸೆ ಕಳೆದುಕೊಳ್ಳಬೇಕಿಲ್ಲ: ಅರುಂಧತಿ ರಾಯ್

ಇತಿಹಾಸ ನೋಡಿದರೆ ಭರವಸೆ ಕಳೆದುಕೊಳ್ಳಬೇಕಿಲ್ಲ: ಅರುಂಧತಿ ರಾಯ್

ಗೌರಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ದಿಟ್ಟ ಪತ್ರಕರ್ತೆ ‘ಗೌರಿ ಲಂಕೇಶ್ ನೆನಪು’ ಕಾರ್ಯಕ್ರಮ ಬೆಂಗಳೂರಿನಲ್ಲಿ ಸೋಮವಾರ ನಡೆಯಿತು.

- Advertisement -
- Advertisement -

“ಇತಿಹಾಸವನ್ನು ನೋಡಿದರೆ, ಅಲ್ಲಿನ ಕ್ರಾಂತಿಗಳನ್ನು ಗಮನಿಸಿದರೆ ನಾವು ಭರವಸೆ ಕಳೆದುಕೊಳ್ಳುವ ಅಗತ್ಯವಿಲ್ಲ” ಎಂದು ಬೂಕರ್‌ ಪ್ರಶಸ್ತಿ ವಿಜೇತ ಲೇಖಕಿ ಅರುಂಧತಿ ರಾಯ್‌ ಹೇಳಿದರು.

ಬೆಂಗಳೂರಿನಲ್ಲಿ ಗೌರಿ ಮೆಮೋರಿಯಲ್ ಟ್ರಸ್ಟ್ ಏರ್ಪಡಿಸಿದ್ದ ದಿಟ್ಟ ಪತ್ರಕರ್ತೆ ‘ಗೌರಿ ಲಂಕೇಶ್ ನೆನಪು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜೊತೆಗೆ ಹಿರಿಯ ಪತ್ರಕರ್ತರಾದ ಡಿ.ಉಮಾಪತಿ ಹಾಗೂ ಭಾಷಾ ವಿದ್ವಾಂಸರಾದ ಜಿ.ಎನ್‌.ದೇವಿಯವರು ನಡೆಸಿಕೊಟ್ಟ ಸಂವಾದದಲ್ಲಿ ಪ್ರತಿಕ್ರಿಯೆ ನೀಡಿದರು.

ಆಶಾವಾದದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಪ್ರಭುತ್ವದಲ್ಲಿ ಸಮಸ್ಯೆ ಇಲ್ಲ. ಸಮಾಜದಲ್ಲಿ ಸಮಸ್ಯೆ ಇದೆ. ಜಾತಿ ವರ್ಣವ್ಯವಸ್ಥೆಯ ಅನುಕರಣೆ, ಶ್ರೇಣಿಕೃತ ವ್ಯವಸ್ಥೆಯಲ್ಲಿ ಸಮಸ್ಯೆ ಇದೆ. ಬೇರೆ ದೇಶಗಳಲ್ಲಿ ಏನಾಗಿದೆ? ಮಹಾಯುದ್ಧಗಳಾಗಲು ಸಾಕಷ್ಟು ವರ್ಷಗಳು ಬೇಕಾದವು. ನಾವಿನ್ನು ಆರಂಭಿಕ ಹಂತದಲ್ಲಿದ್ದೇವೆ. ಮೋದಿ ಅಧಿಕಾರಕ್ಕೆ ಬಂದು ಏಳು ವರ್ಷಗಳು ಕಳೆದಿವೆ” ಎಂದು ತಿಳಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಆರ್‌ಎಸ್‌ಎಸ್ ನೂರು ವರ್ಷಗಳಿಂದ ಕೆಲಸ ಮಾಡುತ್ತಿದೆ. ಒಂದೇ ದೃಷ್ಟಿ, ಒಂದೇ ಗುರಿ, ಒಂದೇ ದ್ವೇಷ ಇದ್ದವರು ಮಾತ್ರ ಹಾಗೆ ಕೆಲಸ ಮಾಡುತ್ತಾರೆ. ಜಗತ್ತಿನಲ್ಲಿ ಯಾವುದೂ ಶಾಶ್ವತವಾಗಿ ಇರಲು ಸಾಧ್ಯವಿಲ್ಲ” ಎಂದು ಆಶಾವಾದ ವ್ಯಕ್ತಪಡಿಸಿದರು.

ಗೌರಿ ನೆನಪು ಕಾರ್ಯಕ್ರಮದಲ್ಲಿ ಅರುಂಧತಿ ರಾಯ್ ಮಾತನಾಡಿದರು

“ಗೌರಿ ಎಂಥವರಾಗಿದ್ದರೆಂದರೆ, ಪ್ರತಿಸಲ ನಾನೇನಾದರೂ ಬರೆದಾಗಲೂ ತುಂಬ ಉತ್ಸಾಹದಿಂದ ಕರೆ ಮಾಡುತ್ತಿದ್ದರು. ಅರುಂಧತಿ, ನಾನಿದನ್ನು ಅನುವಾದಿಸಲೇ ಎಂದು ಕೇಳುತ್ತಿದ್ದರು. ಐ ಲವ್ ಯೂ ಎನ್ನುತ್ತಿದ್ದರು. ಇಂಥ ಬಾಂಧವ್ಯ ನಮ್ಮಿಬ್ಬರ ಮಧ್ಯೆ ಇತ್ತು. ಗೌರಿ ಇಂದು ಇಲ್ಲ. ನಾನು ತುಂಬ ಗೌರವಿಸುವ ಎಲ್ಲರೂ ಇಲ್ಲಿದ್ದೀರಿ. ಮೂರು ದಿನಗಳ ಹಿಂದೆ ನಾನು ನನ್ನ ತಾಯಿಯನ್ನು ಕಳೆದುಕೊಂಡೆ. ಇಂಥ ಹೊತ್ತಲ್ಲಿ ಆಕೆಯ ಸಮಾಧಿ ಸ್ಥಳ ಬಿಟ್ಟು ಬರಲು ಮನಸ್ಸು ಒಪ್ಪುತ್ತದೊ ಇಲ್ಲವೊ ಗೊತ್ತಿರಲಿಲ್ಲ. ಆದರೆ ನಾನಿಲ್ಲಿಗೆ ಗೌರಿಗಾಗಿ ಬರದೇ ಹೋದರೆ ನನ್ನ ತಾಯಿಯೇ ನನ್ನ ಬಗ್ಗೆ ನಾಚಿಕೆಪಡುತ್ತಿದ್ದರು ಎಂದು ಭಾವಿಸಿದ್ದೇನೆ” ಎಂದು ತಿಳಿಸಿದರು.

ಇದನ್ನೂ ಓದಿರಿ: ಗೌರಿಯ ದನಿ ಅಡಗುವುದಿಲ್ಲ: ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಒಡನಾಡಿಗಳ ಪ್ರತಿಜ್ಞೆ

ತೀಸ್ತಾ ಈಗಷ್ಟೆ ಜೈಲಿನಿಂದ ಹೊರಬಂದಿದ್ದಾರೆ. ಬಿಲ್ಕಿಸ್ ಬಾನೋ ವಿಚಾರದಲ್ಲಿ ಏನಾಯಿತೆಂಬುದು ನಮಗೆಲ್ಲಾ ಗೊತ್ತಿದೆ. ಸರ್ಕಾರ ಯಾವ ಬಗೆಯ ಸಂದೇಶವನ್ನು ನಮಗೆ ಕೊಡಲು ಯತ್ನಿಸುತ್ತಿದೆ ಎಂಬುದನ್ನು ಯೋಚಿಸುತ್ತಿದ್ದೇನೆ. ತೀಸ್ತಾ ಜೈಲಿನಲ್ಲಿದ್ದಾಗ ನಾನು, ನ್ಯಾಯ ಮತ್ತು ಶಾಂತಿಗಾಗಿ ನಿಂತಿರುವವರು ಗುಜರಾತ್ ಹತ್ಯಾಕಾಂಡದ ಅಧ್ಯಯನದಲ್ಲಿ ಸಂಗ್ರಹಿಸಿದ ಕಾನೂನು ದಾಖಲೆಗಳನ್ನು ಬಹಳ ಗಮನವಿಟ್ಟು ಓದುತ್ತಿದ್ದೆ. ಇದೊಂದು ನಿಜಕ್ಕೂ ಅಸಾಧಾರಣ ಕೆಲಸ ಎಂದು ಬಣ್ಣಿಸಿದರು.

ಗೌರಿ ನೆನಪು ಕಾರ್ಯಕ್ರಮದಲ್ಲಿ ಜಿ.ಎನ್‌.ದೇವಿ ಹಾಗೂ ಅರುಂಧತಿ ರಾಯ್‌ ಸಂವಾದ ನಡೆಸಿದರು.

ಫ್ಯಾಸಿಸ್ಟ್ ವ್ಯವಸ್ಥೆಯೊಳಗೂ ಎಲ್ಲೋ ನ್ಯಾಯ ಸಿಕ್ಕೀತು ಎಂಬ ಸಣ್ಣ ಆಶಾವಾದ ಹೊಂದಿದ್ದವರಲ್ಲಿ ನಾನೂ ಒಬ್ಬಳು. ತೀಸ್ತಾ ಮತ್ತು ಸಂಘಟನೆಗಳು ಮಾಡಿರುವ ಕೆಲಸ ಅದ್ಭುತವಾದುದು. ಯಾಕೆಂದರೆ ಮುಂದೊಂದು ದಿನ ಈ ಖಚಿತ ದಾಖಲಾತಿಗಳ ಸಂಪುಟವೇ ಗುಜರಾತ್‌ನಲ್ಲಿ ಏನು ಸಂಭವಿಸಿತೊ ಆ ಕ್ರೈಮ್‌ಗೆ ಸಾಕ್ಷ್ಯ ಒದಗಿಸಬೇಕು ಎಂದು ತಿಳಿಸಿದರು.

ದೇಶದಲ್ಲೆಲ್ಲೊ ರೈಲ್ವೆ ದುರಂತ ಘಟಿಸಿದರೆ ರೈಲ್ವೆ ಮಂತ್ರಿಯೇ ರಾಜೀನಾಮೆ ಕೊಡುತ್ತಿದ್ದ ದೇಶವಾಗಿತ್ತು ನಮ್ಮದು. ಆದರೆ ಇಂದು ಹತ್ಯಾಕಾಂಡದ ಚುನಾವಣಾ ಲಾಭವನ್ನು ಮಾಡಿಕೊಳ್ಳುವ, ಹೊಸ ಹತ್ಯಾಕಾಂಡಗಳ ಮತ್ತು ಹಳೆಯ ಹತ್ಯಾಕಾಂಡಗಳ ಲಾಭ ಗಿಟ್ಟಿಸುವ ಜನರನ್ನು ನೋಡುತ್ತಿದ್ದೇವೆ. ಗುಜರಾತ್ ಹತ್ಯಾಕಾಂಡ ಸಂಭವಿಸಿದಾಗ ಬಿಜೆಪಿ ಮತ್ತು ನರೇಂದ್ರ ಮೋದಿ ಚುನಾವಣೆಗೆ ಕರೆ ಕೊಡುವ ತರಾತುರಿ ತೋರಿಸಿದ್ದನ್ನು ಕಂಡೆವು. ಯಾಕೆ ಅಂಥ ತುರ್ತು ಇತ್ತು? ಏನಿತ್ತು ಅಂಥ ತುರ್ತು? ಎಂದು ಪ್ರಶ್ನಿಸಿದರು.

ಗೌರಿ ನೆನಪು ಕಾರ್ಯಕ್ರಮದಲ್ಲಿ ಸೇರಿದ್ದ ಜನಸ್ತೋಮ

ಅತ್ಯಾಚಾರಿಗಳು, ಹಂತಕರು ಬಿಡುಗಡೆಯಾದರು. ಯಾವ ಸಂದೇಶವನ್ನು ಕೊಡುತ್ತಿದೆ ಇದು? ಅವರು ಮತ್ತೆ ಜೈಲುಪಾಲಾಗಲೂಬಹುದು. ಆದರೆ ಅವರ ಬಿಡುಗಡೆಗೆ ಕಾರಣರಾದ ಮಂದಿ, ಅವರನ್ನು ಕಾನೂನಾತ್ಮಕ ಪ್ರಕ್ರಿಯೆಯ ಮೇಲೆ ಬಿಡುಗಡೆ ಮಾಡಿದವರು – ಇಲ್ಲಿ ಎಲ್ಲದರ ದುರ್ಬಳಕೆಯಾಗಿದ್ದಿರಬಹುದು, ಆದರೆ ಯಾರೂ ಅದನ್ನು ಹೇಳುತ್ತಿಲ್ಲ – ಸಮಿತಿಯಲ್ಲಿದ್ದ ಹೆಚ್ಚಿನವರು ಬಿಜೆಪಿಯವರೇ. ಅವರ ಪ್ರಕಾರ, ಈಗ ಶಿಕ್ಷೆಗೊಳಗಾದವರಾರೂ ಅಂಥ ಅಪರಾಧ ಎಸಗುವುದಕ್ಕೆ ಸಾಧ್ಯವೇ ಇಲ್ಲ, ಯಾಕೆಂದರೆ ಅವರು ಬ್ರಾಹ್ಮಣರು ಎಂದು ವಿಷಾದಿಸಿದರು.

ಕಾಂಗ್ರೆಸ್ ಮುಕ್ತ ಭಾರತ ಅಭಿಯಾನದಲ್ಲಿ ಪಕ್ಷವೊಂದು ತೊಡಗಿದೆ ಎಂದರೆ ಏನರ್ಥ? ನಿಜವಾಗಿಯೂ ಅವರು ಏನನ್ನು ಹೇಳುತ್ತಿದ್ದಾರೆ? ಪ್ರತಿಪಕ್ಷವೇ ಇರಕೂಡದೆಂಬ ಸ್ಥಿತಿ. ಪ್ರತಿಪಕ್ಷವಿರದ ಪ್ರಜಾಪ್ರಭುತ್ವ. ಅಂಥ ಸನ್ನಿವೇಶವೊಂದು ಇರದು. ವಿರೋಧಪಕ್ಷವಿಲ್ಲದ ಪ್ರಜಾಪ್ರಭುತ್ವವು ಸಾಧ್ಯವೇ ಇಲ್ಲ. ಎತ್ತ ಸಾಗಿದ್ದೇವೆ ಎಂಬುದನ್ನು ಅವರು ಸ್ಪಷ್ಟವಾಗಿ ಸೂಚಿಸುತ್ತಿದ್ದಾರೆ ಎಂದು ಎಚ್ಚರಿಸಿದರು.

ಗೌರಿ ನೆನಪು ಕಾರ್ಯಕ್ರಮದಲ್ಲಿ ಸೇರಿದ್ದ ಜನಸ್ತೋಮ

ಸಂವಿಧಾನವಿದೆ, ಕಾನೂನುಗಳಿವೆ, ಆದರೆ ಎಲ್ಲವೂ ನಿಮ್ಮ ಜಾತಿ, ಧರ್ಮ, ಲಿಂಗದ ಮೇಲೆ ಅವಲಂಬಿತ. ನೀವ್ಯಾರು ಎಂಬುದರ ಮೇಲೆ ಕಾನೂನು ಅನ್ವಯವಾಗುತ್ತದೆ. ಇಂಥದೊಂದು ರೀತಿ ಬಹುಕಾಲದಿಂದ ನಡೆದುಬಂದಿದೆ ಎಂದ ಅವರು, ನಮ್ಮಲ್ಲಿ ಚುನಾವಣೆಯಿದೆ, ಆದರೆ ಚುನಾವಣಾ ವ್ಯವಸ್ಥೆ ಏನಾಗಿದೆ ಎಂಬುದು ಗೊತ್ತಿದೆ. ವಿಶ್ವದಲ್ಲಿಯೇ ಶ್ರೀಮಂತ ಪಕ್ಷ ನಮ್ಮಲ್ಲಿದೆ. ಈ ಅತಿ ಶ್ರೀಮಂತ ಪಕ್ಷ ಸಂಸದರನ್ನು, ಶಾಸಕರನ್ನು ಖರೀದಿಸಬಲ್ಲದು. ಹೊಸ ಜನಾಂದೋಲನವೇನಾದರೂ ನಡೆದರೆ ನನ್ನದೊಂದು ಸಲಹೆಯಿದೆ. ಚುನಾಯಿತ ಪ್ರತಿನಿಧಿಗಳಿಗೆ ಸಂಸದರು ಮತ್ತು ಶಾಸಕರಿಗೆ ಕನಿಷ್ಠ ಬೆಂಬಲ ಬೆಲೆಗಾಗಿ ಕಿಸಾನ್ ಆಂದೋಲನದ ರೀತಿಯಲ್ಲಿ ಅಭಿಯಾನ ನಡೆಸಬೇಕು ಎಂದು ಆಶಿಸಿದರು.

ಸ್ವಾತಂತ್ರ್ಯದ 75ನೇ ವರ್ಷದಲ್ಲಿದ್ದೇವೆ. ಪ್ಲ್ಯಾಟ್ಗಳ ದಟ್ಟಣೆಯಿರುವ ದೆಹಲಿ ನಗರಿಯಲ್ಲಿ ಅದೆಷ್ಟೋ ಮಂದಿ ಬೀದಿಬದಿಯಲ್ಲೇ ಹಸಿವಿನಿಂದ ಬಳಲುತ್ತಿದ್ದಾರೆ. ಈಗ ಎಲ್ಲಿಗೆ ಬಂದಿದೆಯೆಂದರೆ, 5 ಕೆಜಿ ಹಿಟ್ಟು ಕೊಡುವುದನ್ನೇ ಅಪಾಯಕಾರಿಯೆನ್ನುವಂತೆ ಬಿಂಬಿಸಲಾಗುತ್ತಿದೆ. ಅದೇ ಮೋದಿ ಉಚಿತವಾಗಿ ಉಪ್ಪು ಕೊಟ್ಟರೆ, ಉಪ್ಪಿನ ಋಣ ತೀರಿಸುವುದಕ್ಕಾದರೂ ನಮಗೆ ಓಟು ಕೊಡಿ ಎಂದು ಕೇಳದಿರಲಾರರು ಎಂದರು.

ಇಂಥ ಸ್ಥಿತಿಯಲ್ಲಿ ಯಾವ ವಸಾಹತುಸಾಹಿ ವ್ಯವಸ್ಥೆಯಡಿಯಲ್ಲಿ ಇದ್ದೆವೊ ಅಲ್ಲಿಂದಲೇ ಆರಂಭಿಸಬೇಕಾಗಿದೆ. ಬೀದಿಯಿಂದಲೇ ಆರಂಭಿಸಬೇಕಾಗಿದೆ. ಬೀದಿಗಳೂ ಇಂದು ವಿಷಮಯವಾಗಿವೆ. ಟಿವಿ ಚಾನೆಲ್ಗಳ ಮೂಲಕ ಮಾತ್ರವಲ್ಲ, ಸೀರಿಯಲ್ಲು ಸಿನಿಮಾ ಎಲ್ಲದರ ಮೂಲಕವೂ ದಿನದ ಇಪ್ಪತ್ನಾಲ್ಕು ಗಂಟೆಯೂ ವಿಷಬೀಜ ಬಿತ್ತಲಾಗುತ್ತಿದೆ. ಎಲ್ಲವನ್ನೂ ಶೂನ್ಯದಿಂದಲೇ ಆರಂಭಿಸಬೇಕಾಗಿದೆ. ಈಗಿರುವುದಕ್ಕೊಂದು ಕೊನೆಯಿದ್ದೇ ಇದೆ. ಅದು ಭೌತ ನಿಯಮ. ಇದು ಕೊನೆಯಾಗಲೇಬೇಕು. ಭರವಸೆ ಕಳೆದುಕೊಳ್ಳಬೇಕಿಲ್ಲ ಎಂದರು.

ಇವರು ಫ್ಯಾಸಿಸ್ಟ್ ಶಕ್ತಿಗಳೋ ಇಲ್ಲವೋ ಎಂದು ಚರ್ಚೆ ಮಾಡುತ್ತಲೇ ಇದ್ದೇವೆ. ಆದರೆ ಇವರು ಬಹಳ ಸ್ಪಷ್ಟವಾಗಿದ್ದಾರೆ. ಬಿಜೆಪಿ ಕಳೆದ ಎರಡು ಚುನಾವಣೆಗಳಲ್ಲಿ ಮುಸ್ಲಿಮರ ಮತಗಳಿಲ್ಲದೆ ಗೆಲ್ಲಬಲ್ಲೆವು ಎಂಬುದನ್ನು ತೋರಿಸಿಕೊಟ್ಟಿದೆ. ತೊಂಬತ್ತರ ದಶಕದಲ್ಲಿ ಎರಡು ಬಗೆಯ ಬೀಗಗಳನ್ನು ತೆರೆಯಲಾಯಿತು. ಒಂದು ಬಾಬರಿ ಮಸೀದಿಯದ್ದಾದರೆ ಮತ್ತೊಂದು ಮಾರುಕಟ್ಟೆಯದ್ದು ಎಂದು ವಿವರಿಸಿದರು.

ಉದ್ಯೋಗ ಇಲ್ಲದೆ, ಬೆಲೆ ಏರಿಕೆಯಿಂದ, ದೌರ್ಜನ್ಯಗಳಿಂದ ನರಳುತ್ತಿರುವ ಜನರೇ ಮತ್ತೆ ಮತ್ತೆ ತಮ್ಮ ನರಕಕ್ಕಾಗಿ ಮತ ಹಾಕುತ್ತಿದ್ದಾರೆ. ಜಾತಿ ವ್ಯವಸ್ಥೆಯಿಂದ ಶತಮಾನಗಳ ನರಳಿದವರು ಅದೇ ಜನರಿಗೆ ವೋಟ್ ಹಾಕುತ್ತಾರೆ. ಮಸ್ಲಿಮರನ್ನು ವೋಟಿನ ಹಕ್ಲಿಲ್ಲದಂತೆ ಮಾಡಲಾಗುತ್ತಿದೆ. ಇದು ಸಮಾಜದ ಅಮಾನವೀಕರಣ ಆಗುತ್ತಿರುವ ಸೂಚನೆ ಎಂದು ತಿಳಿಸಿದರು.

ಭಾರತವು ಪೊಲೀಸ್ ರಾಜ್ಯವಾಗುತ್ತಿದೆ. ಕಾಶ್ಮೀರದೊಂದಿಗೆ ಯಾವುದೇ ಸಂವಹನ ಸಾಧ್ಯವಾಗುತ್ತಿಲ್ಲ. ವಸಾಹತುಶಾಹಿ ಕಾಲದಲ್ಲಿ ನಾವು ಬೀದಿಗಳಲ್ಲಿ ಹೋರಾಟ ಮಾಡುತ್ತಿದ್ದೆವು. ಆದರೆ ಇಂದು ಬೀದಿಗಳೂ ವಿಷಮಯವಾಗಿವೆ. ಪ್ರತಿಯೊಂದು ಸಣ್ಣ ಗೆಲುವನ್ನೂ ಸಂಭ್ರಮಿಸುತ್ತಾ ಮುನ್ನಡೆಯಬೇಕಾಗಿದೆ ಎಂದು ಆಶಿಸಿದರು.

ಗೌರಿ ಮೊಮೊರಿಯಲ್ ಟ್ರಸ್ಟ್‌ ಕಾರ್ಯದರ್ಶಿ ದೀಪು ಪ್ರಸ್ತಾವಿಕವಾಗಿ ಮಾತನಾಡಿ, “ತೀಸ್ತಾ ಅವರನ್ನು ಜೈಲಿಗೆ ಕಳುಹಿಸಲಾಯಿತು. ಚಾರ್ಜ್‌‌ಶೀಟ್ ಇಲ್ಲದೆ ಎರಡು ತಿಂಗಳು ಒಬ್ಬ ವ್ಯಕ್ತಿಯನ್ನು ಜೈಲಿನಲ್ಲಿ ಇಡಲಾಯಿತು” ಎಂದು ಬೇಸರ ವ್ಯಕ್ತಪಡಿಸಿದರು.

ಟ್ರಸ್ಟ್‌ನ ಅಧ್ಯಕ್ಷರಾದ ತೀಸ್ತಾ ಸೆಟಲ್ವಾಡ್ ಅವರು ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದು, ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿಶೇಷ ವಿಡಿಯೊ ಸಂದೇಶ ಕಳುಹಿಸಿದ್ದರು.

“ನಾನು ಸಬರಮತಿ ಮಹಿಳಾ ಜೈಲಿನಲ್ಲಿ ನೋಡಿದ ಮಹಿಳಾ ಕೈದಿಗಳ ಬಗ್ಗೆ ಯೋಚಿಸುತ್ತಿದ್ದೇನೆ. ಅನೇಕರಿಗೆ ಜಾಮೀನು ನಿರಾಕರಿಸಲಾಗಿದೆ. ನ್ಯಾಯ ಪಡೆದುಕೊಳ್ಳಲು ಕೆಲವರಿಗೆ ದಾರಿಯೇ ಇಲ್ಲ. ಈ ಮಹಿಳೆಯರಿಗಾಗಿ ಏನು ಮಾಡಬಹುದು ಎಂದು ಚಿಂತಿಸುತ್ತೇನೆ” ಎಂದು ತೀಸ್ತಾ ವಿಡಿಯೊ ಮೂಲಕ ತಿಳಿಸಿದರು.

ಗೌರಿ ಲಂಕೇಶ್ ಅವರ ಸಹೋದರಿ ಕವಿತಾ ಲಂಕೇಶ್ ಮಾತನಾಡಿ, “ಗೌರಿ ಹೋಗಿ ಐದು ವರ್ಷವಾಯಿತು. ನಿನ್ನೆ ಮೊನ್ನೆ ಜೊತೆಗಿದ್ದಳು ಅನಿಸುತ್ತಿದೆ. ಕೆಲವೊಮ್ಮೆ ಆಕೆಯನ್ನು ನೋಡಿ ತುಂಬಾ ವರ್ಷಗಳೇ ಆಯಿತು ಅನಿಸುತ್ತದೆ. ಇಂದಿನ ಸನ್ನಿವೇಶದಲ್ಲಿ ಲಂಕೇಶ್‌ ಇದ್ದಿದ್ದರೆ, ಗೌರಿ ಇದ್ದಿದ್ದರೆ ಏನಾಗುತ್ತಿತ್ತು? ಎಂದು ಯೋಚಿಸುತ್ತಿದ್ದೇವೆ. ಸುದ್ದಿಗಳನ್ನು ನೋಡಿದರೆ ಭರವಸೆ ಇಲ್ಲ ಅನಿಸುತ್ತದೆ. ನಮ್ಮೂರು ಶಿವಮೊಗ್ಗ, ಈಗ ಮಂಗಳೂರಿನಂತೆ ಬದಲಾಗುತ್ತಿದೆ. ಜನರ ಕೈಗೆ ಆಯುಧ ಕೊಟ್ಟು ಗುದ್ದಾಡಲು ಬಿಟ್ಟಿದ್ದಾರೆ. -ಯಾವುದೇ ಭರವಸೆ ಇಲ್ಲ- ಎಂದು ರವಿಕುಮಾರ್‌ ಹೇಳಿದ್ದರು” ಎಂದು ನೆನಪಿಸಿಕೊಂಡರು.

ಗೌರಿ ನೆನಪು ಕಾರ್ಯಕ್ರಮದಲ್ಲಿ ಕವಿತಾ ಲಂಕೇಶ್ ಮಾತನಾಡಿದರು.

 ಇದನ್ನೂ ಓದಿರಿ: ಗೌರಿ ಲಂಕೇಶ್ ನಮ್ಮೆದೆಗಳಲ್ಲಿ ಹುಟ್ಟಿ ಐದು ವರ್ಷಗಳು!: ವಿಡಿಯೊ ಗ್ಯಾಲರಿ

ಬಹುಭಾಷಾ ನಟ ಪ್ರಕಾಶ್ ರೈ ಮಾತನಾಡಿ, “ಗೌರಿಯನ್ನು ಕೊಂದವರು ಜೈಲಿನಲ್ಲಿದ್ದಾರೆ. ನಾವು ಇಲ್ಲಿದ್ದೇವೆ. ಆದರೆ ಗೌರಿಯನ್ನು ಕೊಲ್ಲಿಸಿದವರು ರಾಜ್ಯ ಹಾಗೂ ದೇಶವನ್ನು ಆಳುತ್ತಿದ್ದಾರೆ. ಬಿಲ್ಕಿಸ್‌ ಬಾನೋ ಅತ್ಯಾಚಾರಿಗಳ ಬಿಡುಗಡೆಯ ಹಿಂದಿನ ಭಾವವನ್ನು ಅರ್ಥಮಾಡಿಕೊಳ್ಳಬೇಕು. ಅಲ್ಪಸಂಖ್ಯಾತರನ್ನು ಅತ್ಯಾಚಾರ ಮಾಡಿದರೂ ಬಿಡುಗಡೆ ಮಾಡಲಾಗುತ್ತದೆ ಎಂಬ ಸಂದೇಶವನ್ನು ಇಲ್ಲಿ ನೀಡಲಾಗಿದೆ” ಎಂದು ಎಚ್ಚರಿಸಿದರು.

ಗೌರಿ ನೆನಪು ಕಾರ್ಯಕ್ರಮದಲ್ಲಿ ಪ್ರಕಾಶ್ ರೈ ಮಾತನಾಡಿದರು.

ಗೌರಿ, ತೀಸ್ತಾ, ಅರುಂಧತಿ ರಾಯ್‌ ಥರದ ಹೆಣ್ಣುಮಕ್ಕಳು ನಮಗೆ ಭರವಸೆಯಾಗಿದ್ದಾರೆ. ತೀಸ್ತಾ ಜೈಲಿನಿಂದ ಹೊರಬಂದ ಬಳಿಕ ಆಶಾವಾದ ವ್ಯಕ್ತಪಡಿಸಿದ್ದಾರೆ. ಈ ಐದು ವರ್ಷಗಳಲ್ಲಿ ಆಕ್ಟಿವಿಸ್ಟ್‌ಗಳಿಗಿಂತ ರೈತರು, ಹೆಣ್ಣುಮಕ್ಕಳು ಬೀದಿಗಿಳಿದು ಹೋರಾಡಿದ್ದಾರೆ. ಬಿಜೆಪಿ ಹಾಗೂ ಆರ್‌ಎಸ್‌ಎಸ್ ಬಲವಾಗಲು ನಮ್ಮ ನಡುವಿರುವ ಅಹಂ ಕಾರಣ. ನಮ್ಮ ಎಲ್ಲ ಅಹಂಗಳನ್ನು ಮರೆತು ಗೌರಿಯ ಆಶಯಗಳನ್ನು ಮುಂದುವರಿಸಬೇಕಿದೆ. ಗೌರಿಯನ್ನು ನಾವು ಹೂತಿಲ್ಲ, ಅವಳನ್ನು ಬಿತ್ತಿದ್ದೇವೆ ಎಂದು ನುಡಿದರು.

ಟ್ರಸ್ಟ್‌ನ ಸದಸ್ಯರಾದ ಪ್ರೊ.ವಿ.ಎಸ್.ಶ್ರೀಧರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಾಡುಗಾರರಾದ ಜನ್ನಿ, ಎಂ.ಡಿ.ಪಲ್ಲವಿಯವರು ಗಾಯನ ಮಾಡಿದರು. ನ್ಯಾಯಪಥ ಸಂಪಾದಕರಾದ ಡಿ.ಎನ್.ಗುರುಪ್ರಸಾದ್‌ ಸ್ವಾಗತ ಮಾಡಿದರು. ಪತ್ರಕರ್ತ ಚಂದ್ರು ತಾರಹುಣಸೆ ನಿರೂಪಣೆ ಮಾಡಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...