Homeಆರೋಗ್ಯಸಕ್ಕರೆಯೆಂಬ ಹೊಸ ತಂಬಾಕು: ದಿನಕ್ಕೆ 25 ಗ್ರಾಂ ಗಿಂತ ಹೆಚ್ಚು ಸಕ್ಕರೆ ಬಳಸಿದರೆ ಅನಾರೋಗ್ಯಕ್ಕೆ ಆಹ್ವಾನ...

ಸಕ್ಕರೆಯೆಂಬ ಹೊಸ ತಂಬಾಕು: ದಿನಕ್ಕೆ 25 ಗ್ರಾಂ ಗಿಂತ ಹೆಚ್ಚು ಸಕ್ಕರೆ ಬಳಸಿದರೆ ಅನಾರೋಗ್ಯಕ್ಕೆ ಆಹ್ವಾನ ಕೊಟ್ಟಂತೆ

ಸಕ್ಕರೆಗೂ ಮಾದಕ ದ್ರವ್ಯಗಳ ವ್ಯಸನಿಗಳಿಗೂ ಯಾವುದೇ ವ್ಯತ್ಯಾಸವಿಲ್ಲವೆಂದು ವಿಶ್ವ ಆರೋಗ್ಯ ಸಂಸ್ಥೆ ನಮ್ಮ ನಿತ್ಯ ಆಹಾರದಿಂದ ಶೇ.10 ಕ್ಕಿಂತ ಹೆಚ್ಚು ಶಕ್ತಿಯನ್ನು ಸಕ್ಕರೆಯಿಂದ ಬರದಂತೆ ನೋಡಿಕೊಳ್ಳಿ ಎಂದಿದೆ.

- Advertisement -
- Advertisement -

ಕೊಕಕೋಲಾದಲ್ಲಿರುವ ಪೌಷ್ಠಿಕಾಂಶಗಳಾವುವು ಎಂದು ಕೇಳಿದಾಗ ಆ ಕಂಪನಿಯವ ಇದರಲ್ಲಿ ಮಾರಾಟವೊಂದೇ ಪೌಷ್ಠಿಕಾಂಶ (marketing is the only nutrient) ಎಂದು ಉತ್ತರಿಸುತ್ತಾನೆ. ಒಂದು ಬಾಟಲಿ ಕೊಕಕೋಲಾ ಅಥವಾ ಪೆಪ್ಸಿಯಲ್ಲಿ ಸುಮಾರು 45 ಗ್ರಾಂ ಸಕ್ಕರೆ ಜೊತೆಗೆ ಇಂಗಾಲದ ಡೈ ಆಕ್ಸೈಡ್ ಮತ್ತು ಕೃತಕ ಬಣ್ಣವಷ್ಟೇ ಇರುವುದರಿಂದ ಮಾರಾಟ ತಂತ್ರವೇ ಇದರ ನಿಜವಾದ ಅಸ್ತ್ರ. ಇದಕ್ಕೆ ಮೊದಲು ಜನರನ್ನು ವ್ಯಸನಿಗಳನ್ನಾಗಿಸಲು ಸ್ವಲ್ಪ ಕೊಕೇನ್ ಕೂಡ ಬಳಸಲಾಗುತ್ತಿತ್ತು. ಇದನ್ನು ವ್ಯಾಪಾರ ಜಗತ್ತಿನಲ್ಲಿ ಬ್ರೈನ್ ವಾಷಿಂಗ್ ಬದಲು ಬ್ರ್ಯಾಂಡ್ ವಾಷಿಂಗ್ ಎನ್ನುತ್ತಾರೆ. ಸ್ನೇಹಿತರೊಬ್ಬರು ಮಕ್ಕಳ ಹಾಲಿನ ಪುಡಿ ಮಾಡುವ ಕಂಪೆನಿಯಲ್ಲಿ ವಿಜ್ಞಾನಿಯಾಗಿದ್ದರು. ಅವರಿಗೆ ಮಕ್ಕಳ ಹಾಲಿನ ಪುಡಿಯಲ್ಲಿ ಸಕ್ಕರೆಯನ್ನು (ಸುಕ್ರೋಸ್) ಏಕೆ ಬಳಸುವಿರಿ, ತಾಯಿಯ ಹಾಲಿನಲ್ಲಿ ಇದು ಇಲ್ಲವಲ್ಲ ಎಂದು ಕೇಳಿದಾಗ ಅವರು ಕೊಟ್ಟ ಉತ್ತರ ಇದು: ನಮ್ಮ ಹಾಲಿನ ಪುಡಿಯನ್ನು ಒಮ್ಮೆ ಹಸುಗೂಸುಗಳು ಕುಡಿದ ಮೇಲೆ ತಾಯಿಯ ಹಾಲನ್ನ ಬಯಸುವುದಿಲ್ಲ ಎಂದು.

ಸಕ್ಕರೆಯನ್ನು ಇಂದು ನೂತನ ತಂಬಾಕು ಎಂದೇ ಆರೋಗ್ಯ ವ್ಯವಸ್ಥೆಯಲ್ಲಿ ಪರಿಗಣಿಸಲಾಗುತ್ತಿದೆ. ರಾಬರ್ಟ್ ಲಸ್ಟಿಕ್ ಸುಮಾರು 10 ವರ್ಷಗಳ ಹಿಂದೆ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಸಕ್ಕರೆ ಎಂಬ ಕಹಿ ಸತ್ಯ (sugar, the bitter truth) ಎಂಬ ಭಾಷಣದಲ್ಲಿ ಸಕ್ಕರೆ ತಂದಿರುವ ಅನಾರೋಗ್ಯ ಅವಾಂತರವನ್ನು ವಿಶ್ಲೇಷಿಸಿದ್ದರು. ಇದನ್ನು ಸುಮಾರು 1 ಕೋಟಿಗೂ ಹೆಚ್ಚು ಜನ ಗಮನಿಸಿದ್ದಾರೆ. ಒಂದು ವೈಜ್ಞಾನಿಕ ಪರೀಕ್ಷೆಯಲ್ಲಿ 2 ಗುಂಪಿನ ಇಲಿಗಳನ್ನು ಬಳಸಿ ಒಂದು ಇಲಿಗಳ ಗುಂಪಿಗೆ ಹಣ್ಣು ತರಕಾರಿಗಳನ್ನ ಕೊಟ್ಟು, ಇನ್ನೊಂದು ಗುಂಪಿನ ಇಲಿಗಳಿಗೆ ಸಕ್ಕರೆ ಕೊಟ್ಟು ಪಳಗಿಸಿ, ಸ್ವಲ್ಪ ಕಾಲದ ನಂತರ ಈ ಎರಡೂ ಗುಂಪಿನ ಇಲಿಗಳ ಮೇಲೆ ಮೈ ಸುಡುವ ಲೇಸರ್ ಬೆಳಕನ್ನು ಹಾಯಿಸಿದಾಗ, ಹಣ್ಣು, ತರಕಾರಿ ತಿನ್ನುವ ಇಲಿಗಳು ಜೀವಭಯದಿಂದ, ಜೀವವಿದ್ರೆ ಮುಂದೆ ತಿನ್ನಬಹುದೆಂದು ಚಂಗನೆ ಹಾರಿ ಓಡಿಹೋದವು. ಆದರೆ ಸಕ್ಕರೆಗೆ ಪಳಗಿದ್ದ ಇಲಿಯ ಗುಂಪು ಮೈ ಸುಟ್ಟರೂ ಸಕ್ಕರೆಯನ್ನು ತಿನ್ನುತ್ತಲೇ ಇದ್ದವು. ಈ ಪ್ರಯೋಗದಿಂದ ತಿಳಿದುಬಂದದ್ದೇನೆಂದರೆ ಸಕ್ಕರೆಗೂ ಮಾದಕ ದ್ರವ್ಯಗಳ ವ್ಯಸನಿಗಳಿಗೂ ಯಾವುದೇ ವ್ಯತ್ಯಾಸವಿಲ್ಲವೆಂದು. ಇದನ್ನು ಗಮನಿಸಿದ ವಿಶ್ವ ಆರೋಗ್ಯ ಸಂಸ್ಥೆ ನಮ್ಮ ನಿತ್ಯ ಆಹಾರದಿಂದ ಶೇ.10 ಕ್ಕಿಂತ ಹೆಚ್ಚು ಶಕ್ತಿಯನ್ನು ಸಕ್ಕರೆಯಿಂದ ಬರದಂತೆ ನೋಡಿಕೊಳ್ಳಿ ಎಂದು ಹೇಳಿರುವುದಲ್ಲದೆ ಇನ್ನೂ ಉತ್ತಮವಾದ ಮತ್ತು ನಿಜವಾದ ಆರೋಗ್ಯಕ್ಕಾಗಿ ಅದನ್ನು ಶೇ.5ಕ್ಕಿಂತ ಕಮ್ಮಿ ಮಾಡಿಕೊಂಡರೆ ಒಳಿತೆಂದು ಸ್ಪಷ್ಟವಾಗಿ ಹೇಳಿದೆ. ಶೇ.5ರಷ್ಟು ಶಕ್ತಿಯನ್ನು ಸಕ್ಕರೆಯಿಂದಲೇ ಪಡೆಯಲೇಬೇಕೆಂದೇನಲ್ಲ, ಬಳಸಲೇಬೇಕಾದರೂ ಅಷ್ಟರೊಳಗೆ ನಿಯಂತ್ರಿಸಿ ಎನ್ನುವುದಾಗಿದೆ. ಇದರ ಅರ್ಥ ದಿನಕ್ಕೆ 25 ಗ್ರಾಂಗಿಂತ ಹೆಚ್ಚು ಸಕ್ಕರೆ ಬಳಸಿದರೆ ಅನಾರೋಗ್ಯಕ್ಕೆ ಆಹ್ವಾನ ಕೊಟ್ಟಂತೆ.

ಈ 25 ಗ್ರಾಂ ಸಕ್ಕರೆ ಒಂದು ದಿನಕ್ಕೆ ಎನ್ನುವ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರವಾಗಿ ಭಾರತದ 138 ಕೋಟಿ ಜನರಿಗೆ 12 ಮಿಲಿಯನ್ ಟನ್ ಸಕ್ಕರೆ ಬೇಕಾಗುತ್ತದೆ. ಅಥವಾ ಶೇ.10 ರಷ್ಟು ಗರಿಷ್ಠ ಸಕ್ಕರೆಯನ್ನು ಲೆಕ್ಕ ಹಾಕಿದರೂ 24 ಮಿಲಿಯನ್ ಟನ್ ಸಾಕು. ಹನ್ನೆರಡಲ್ಲ 24 ಟನ್ನೂ ಅಲ್ಲ, ನಮ್ಮಲ್ಲಿ ಸುಮಾರು 35 ಮಿಲಿಯನ್ ಟನ್ ಸಕ್ಕರೆಯನ್ನು ಪ್ರತಿವರ್ಷ ಉತ್ಪಾದಿಸುತ್ತೇವೆ. ‘ಬೇಕಾಗಿರುವ’ ಹನ್ನೆರಡು ಮಿಲಿಯನ್ ಟನ್‍ಗಿಂತ ಮೂರು ಪಟ್ಟು ಸಕ್ಕರೆಯ ಉತ್ಪಾದನೆಯಾಗುತ್ತಿದೆ. ಜಗತ್ತಿನ ಮಧುಮೇಹ ರಾಜಧಾನಿಯೆಂದು ಭಾರತವನ್ನು ಕರೆಯುತ್ತಾರೆ. ವಯಸ್ಕರಿಗೆ ಸುಮಾರು ಶೇ.14 ರಷ್ಟು ಜನರಲ್ಲಿ ಮಧುಮೇಹ ರೋಗವಿದೆ. ಸುಮಾರು 40 ವರ್ಷಕ್ಕೆ ಮಧುಮೇಹ ಬಂದರೆ ಸುಮಾರು 10 ಲಕ್ಷ ರೂಪಾಯಿ ಆರೋಗ್ಯಕ್ಕೆ ಖರ್ಚು ಮಾಡಬೇಕಾಗುತ್ತದೆ. ಈ 35 ಮಿಲಿಯನ್ ಟನ್ ಸಕ್ಕರೆಗಾಗಿ 350 ಮಿಲಿಯನ್ ಟನ್ ಕಬ್ಬನ್ನು ಬೆಳೆಯಲು ಸುಮಾರು 5 ಮಿಲಿಯನ್ ಹೆಕ್ಟೇರ್ ಭೂಮಿಯನ್ನು ಬಳಸಲಾಗುತ್ತಿದೆ. ಮಹಾರಾಷ್ಟ್ರದಂತಹ ರಾಜ್ಯದಲ್ಲಿರುವ ಸುಮಾರು 1800 ಲಕ್ಷ ಕೋಟಿಯಷ್ಟು ಜನರ ತೆರಿಗೆ ಹಣದಿಂದ ಖರ್ಚು ಮಾಡಿ ಕಟ್ಟಿರುವ ಅಣೆಕಟ್ಟಿನಿಂದ ಶೇ.80ರಷ್ಟು ನೀರು ಕೇವಲ ಕಬ್ಬಿನ ಗದ್ದೆಗೆ ಹರಿಯುತ್ತದೆ. Sugar cane is a water guzzler, diabetes inducer. ಕಬ್ಬಿನಿಂದ ಬರುವ ಸಕ್ಕರೆಯಾಗಲಿ ಅಥವಾ ಸಾರಾಯಿಯಾಗಲಿ ಪರಿಸರಕ್ಕೆ ಮತ್ತು ಮನುಕುಲಕ್ಕೆ ಎಲ್ಲಾ ರೀತಿಯಿಂದಲೂ ಮಾರಕವೇ ಆಗಿದೆ.

ಮನುಷ್ಯನ ದೇಹದಲ್ಲಿ ಸುಮಾರು 5 ಲೀಟರ್ ರಕ್ತವಿದ್ದು, ಅದಕ್ಕೆ ಕೇವಲ 5 ಗ್ರಾಂ ಸಕ್ಕರೆಯನ್ನು ಮಾತ್ರ ಶೇಖರಿಸಲು ಸಾಮರ್ಥ್ಯವಿರುವುದು. ನಾವು ಸುಲಭವಾಗಿ ಬಳಸುವ ಸಕ್ಕರೆ ರಕ್ತಕ್ಕೆ ಶೀಘ್ರವಾಗಿ ಪ್ರವಾಹವಾಗಿ ದೇಹದ ಶೇಖರಣಾ ಸಾಮರ್ಥ್ಯವನ್ನು ಮೀರಿದಾಗ ಇನ್ಸುಲಿನ್ ಹಾರ್ಮೋನ್ ಹೆಚ್ಚು ಉತ್ಪತ್ತಿಯಾಗಿ ಈ ಸಕ್ಕರೆಯ ಪ್ರವಾಹವನ್ನು ಕೊಬ್ಬಾಗಿ ನಿರಂತರವಾಗಿ ಪರಿವರ್ತಿಸಬೇಕಾಗುತ್ತದೆ. ಹೀಗೆ ಸತತವಾಗಿ ದುಡಿದ ಇನ್ಸುಲಿನ್ ಉತ್ಪಾದಿಸುವ ಪ್ಯಾಂಕ್ರಿಯಾಸ್ ಅಥವಾ ಇನ್ಸುಲಿನ್ ಹೇಳಿದ ಮಾತಿನಂತೆ ಸಕ್ಕರೆಯನ್ನು ಬೇರೆಡೆಗೆ ಶೇಖರಿಸುವ ಜೀವಕೋಶಗಳು ಸೋತು ದೇಹದ ಸಂವಾಹಕಗಳು ಹಳಿ ತಪ್ಪಿದಾಗ ಉಂಟಾಗುವುದೇ ಮಧುಮೇಹ ರೋಗ. ಮನುಷ್ಯ ಅನುವಂಶಿಕವಾಗಿ ಸಕ್ಕರೆಯನ್ನು ರಕ್ತದಲ್ಲಿ ಹಿಡಿದಿಡಲು ಸಾಮರ್ಥ್ಯವಿಲ್ಲದಿರುವ ವಿದ್ಯಮಾನ, ಮಂಗನಿಂದ ಮಾನವನಾದ ವಿಕಾಸವಾದ ಅಡಗಿದೆ ಎನ್ನುತ್ತಾರೆ. ಹಣ್ಣು ಹಂಪಲನ್ನು ತಿನ್ನುವ ನಮ್ಮ “ಪೂರ್ವಾಶ್ರಮದಲ್ಲಿ” ಸಕ್ಕರೆಯನ್ನು ಹಿಡಿದಿಡುವ ಪ್ರಮೇಯವೇ ಒದಗಿರಲಿಲ್ಲ. ಅವಶ್ಯಕತೆ ಇಲ್ಲದ್ದು ವಿಕಾಸವಾಗುವ ಅವಕಾಶವಿರಲಿಲ್ಲ. ಹಾಗಾಗಿ ಇಂದಿಗೆ ನಾವು ಹೆಚ್ಚು ಸಕ್ಕರೆ ಬಳಸುವುದು ನಮ್ಮ ದೈಹಿಕ ಚಟುವಟಿಕೆಯ ಕಾರ್ಯವೈಖರಿಯ ಮತ್ತು ಬದುಕಿನ ಜೀವನಶೈಲಿಗೆ ವಿರುದ್ಧವಾದದ್ದು.

ಹಣ್ಣಿನಿಂದ ಸಕ್ಕರೆ ಬರುವಾಗ ಇಂತಹ ಸಮಸ್ಯೆ ಇರದಿರಲು ಕಾರಣ ಹಣ್ಣಿನಲ್ಲಿರುವ ಅಂಶ ಸುಮಾರು ಶೇ.10 ರಷ್ಟು ಸಕ್ಕರೆ ಜೊತೆ ಸುಮಾರು 85 ರಿಂದ 90 ರಷ್ಟು ನೀರೆ ಆಗಿರುತ್ತದೆ. ಹೀಗಾಗಿ ಹೊಟ್ಟೆ ತುಂಬಿ ಹೆಚ್ಚು ತಿನ್ನಲಾಗದು. ತಿನ್ನುವ ಆಹಾರವೇ ನಿಮ್ಮನ್ನು ನಿಯಂತ್ರಿಸುತ್ತದೆ. ಇದೇ ಕಬ್ಬಿನಿಂದ ಜಗಿದು ರಸದಲ್ಲಿರುವ ಸಕ್ಕರೆಯನ್ನು ತೆಗೆದುಕೊಳ್ಳಬೇಕಾದರೆ 10 ಗ್ರಾಂ ಸಕ್ಕರೆಗೆ 100 ಗ್ರಾಂ ಕಬ್ಬನ್ನು ಜಗಿದು ರಸ ಹೀರಲು ಕಾಲು ಗಂಟೆ ಬೇಕಾಗಬಹುದು – ಹಲ್ಲು ಗಟ್ಟಿ ಇದ್ದರೆ. ಅದೇ ನಾವು 2 ಚಮಚ ಸಕ್ಕರೆ ಹಾಕಿಕೊಳ್ಳಲು ಯಾವುದೇ ಆಲೋಚನೆ ಮಾಡುವುದಿಲ್ಲ. ಯಾವುದೇ ಆಹಾರ ಪದಾರ್ಥ ಶುದ್ಧವಾದಾಗ ಸತ್ವ ಹೀನವಾಗುತ್ತದೆ. Pure is junk. ಅದು ಆಹಾರಕ್ಕೂ ಮತ್ತು ಶುದ್ಧ ಮನುಷ್ಯರಿಗೂ ಅನ್ವಯ.

ಈಗ ಸಕ್ಕರೆಯ ಪರವಾಗಿ ವಕಾಲತ್ತು ವಹಿಸಲು ಹುಟ್ಟುಹಾಕಲಾಗಿರುವ ಮೀಟಾ.ಆರ್ಗ್ ಈ ಎಲ್ಲಾ ನಗ್ನ ಸತ್ಯಗಳ ವಿರುದ್ಧ ಹಿಂದೆ ಹೇಗೆ ತಂಬಾಕು ಲಾಬಿ ಸಿಗರೇಟಿನ ಪರ ಅಪಾರವಾದ ಪ್ರಚಾರ ಮಾಡಿತ್ತೋ ಹಾಗೆಯೇ ಮುಂದುವರಿಯುತ್ತಿದೆ. ತಂಬಾಕು ಲಾಬಿ ಸಿಗರೇಟಿಗೂ ಕ್ಯಾನ್ಸರ್‌ಗೂ ಸಂಬಂಧವೇ ಇಲ್ಲವೆಂದು ಸುಮಾರು 100 ವರ್ಷಗಳ ಕಾಲ “ವೈಜ್ಞಾನಿಕ” ಸಂಶೋಧನೆಗಳನ್ನು ಮಾಡಿ ಪ್ರಕಟಿಸಿತು. ಅನೇಕ ಲಾಬಿಗಳನ್ನು ಸೃಷ್ಟಿಮಾಡಿತ್ತು. ತಂಬಾಕಿನ ಪರವಾಗಿ ಅನೇಕ ಪುಸ್ತಕಗಳನ್ನು ಬರೆಯಲಾಯಿತು. ಡನ್‍ಹಿಲ್ ಎಂಬುವ ವ್ಯಕ್ತಿ ಜಂಟಲ್ ಆರ್ಟ್ ಆಫ್ ಸ್ಮೋಕಿಂಗ್ ಎನ್ನುವ ಪುಸ್ತಕ ಬರೆದ. ಕೊಕಕೋಲಾ ಕಂಪೆನಿಯವರು ಸಕ್ಕರೆ ಪರ ಇದೇ ರೀತಿಯ ವಕಾಲತ್ತನ್ನು ವಹಿಸುತ್ತಾರೆ. ಅನೇಕ ಬಾರಿ ಇಂತಹ ಲಾಬಿಗಳಿಗೆ ಕೊಕಕೋಲಾ ಮತ್ತು ಪೆಪ್ಸಿಯಂತಹ ಕಂಪೆನಿಗಳಿಂದ ಹಣ ಹೂಡಿಕೆಯಾಗುತ್ತದೆ. ಕೋಲಾ ಕಂಪೆನಿಗಳು ಹೇಳುವುದು ನಮ್ಮ ಕೋಲಾ ಕುಡಿದು ಸುಮಾರು 2 ಕಿ.ಮೀ ಓಡಿದರೆ ಯಾವ ಬೊಜ್ಜು ಬರುವುದಿಲ್ಲ ಎಂದು. ಸೋಮಾರಿಗಳು ಕೊಕಕೋಲಾ ಕುಡಿದು ಬೇಜವಾಬ್ದಾರಿಯಿಂದ ಕೊಕಕೋಲಾದಿಂದ ಬೊಜ್ಜು ಬರುತ್ತದೆ ಎಂದು ಹೇಳುತ್ತಾರೆ ಎನ್ನುವುದು ಅವರ ವಾದ. ಹೊರನೋಟಕ್ಕೆ ಸರಿ ಕಂಡರೂ ಅವರ ದೂರ್ತ ಆಲೋಚನೆ ಮತ್ತು ಅವರ ದುರುದ್ದೇಶ ಸ್ಪಷ್ಟವಾಗಿ ಗೋಚರವಾಗುತ್ತದೆ.

ಸಕ್ಕರೆ ಮತ್ತು ಕಬ್ಬನ್ನು ಮುಕ್ಕಾಲು ಭಾಗ ಕಮ್ಮಿ ಮಾಡಿ ಭಾರತೀಯರ ಆರೋಗ್ಯ, ಮಣ್ಣಿನ ಆರೋಗ್ಯ, ನೀರಿನ ಸಂರಕ್ಷಣೆ, ಪರಿಸರ ಪಾಲನೆಗಾಗಿ ಎಲ್ಲರೂ ಒಟ್ಟಾಗಿ ಚರ್ಚೆ ನಡೆಸಿ ಆರೋಗ್ಯಕರ ಕ್ರಮಗಳಿಗೆ ಮುಂದಾಗಬೇಕಿರುವ ತುರ್ತು ನಮ್ಮ ಮುಂದಿದೆ.


ಇದನ್ನೂ ಓದಿ: ಕನ್ನಡಕ್ಕೆ ಕನ್ನಡದ್ದೆ ಊಟ ಉಂಟಾ? ಡಾ. ಕೆ.ಸಿ ರಘು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಹಲ್ಗಾಮ್ ದಾಳಿ ಕುರಿತ ಪೋಸ್ಟ್‌: ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್‌ಗೆ ನಿರೀಕ್ಷಣಾ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಸಂಬಂಧಿಸಿದಂತೆ ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ ಅವರಿಗೆ ನಿರೀಕ್ಷಣಾ ಜಾಮೀನು...

ಮಧ್ಯಪ್ರಾಚ್ಯ ಉದ್ವಿಗ್ನತೆ: ಎಲ್‌ಪಿಜಿ ಕೊರತೆಗೆ ಮುಂಬೈನಲ್ಲಿ ಶೇ. 20 ರಷ್ಟು ಹೋಟೆಲ್‌, ರೆಸ್ಟೋರೆಂಟ್‌ ಬಂದ್: ಬೆಂಗಳೂರು, ಚೆನ್ನೈನಲ್ಲೂ ಸಮಸ್ಯೆ

ಪಶ್ಚಿಮ ಏಷ್ಯಾ ಸಂಘರ್ಷ ಹತ್ತು ದಿನಗಳಿಗೂ ಹೆಚ್ಚು ಕಾಲ ಮುಂದುವರಿದಿರುವುದರಿಂದ, ಭಾರತದ ಹೋಟೆಲ್‌ಗಳು ಮತ್ತು ಇತರ ಉಧ್ಯಮಗಳು ಎಲ್‌ಪಿಜಿ ಪೂರೈಕೆ ಬಿಕ್ಕಟ್ಟನ್ನು ಎದುರಿಸುತ್ತಿವೆ. ಬೆಂಗಳೂರಿನ ನಂತರ, ಚೆನ್ನೈ ಮತ್ತು ಮುಂಬೈನಂತಹ ಇತರ ನಗರಗಳು ಸಹ...

‘ಕೋವಿಡ್ ಲಸಿಕೆ ಪೀಡಿತರಿಗಾಗಿ ಪರಿಹಾರ ನೀತಿ ಅಳವಡಿಸಿಕೊಳ್ಳಿ..’; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕೋವಿಡ್ ವಿರುದ್ಧ ರೋಗನಿರೋಧಕ ಶಕ್ತಿಯಾಗಿ ಲಸಿಕೆ ನೀಡಿದ ನಂತರ ಉಂಟಾಗುವ ಪ್ರತಿಕೂಲ ಪರಿಣಾಮಗಳ ವೈಜ್ಞಾನಿಕ ಮೌಲ್ಯಮಾಪನಕ್ಕಾಗಿ ಅಸ್ತಿತ್ವದಲ್ಲಿರುವ ಕಾರ್ಯವಿಧಾನವನ್ನು ಮುಂದುವರಿಸಬೇಕೆಂದು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ. ಅದೇ ಸಮಯದಲ್ಲಿ, ಕೋವಿಡ್ -19 ವ್ಯಾಕ್ಸಿನೇಷನ್ ನಂತರದ...

ಮೇಘಾಲಯ|ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ವಿವಾದಾತ್ಮಕ ಅಧಿಸೂಚನೆ: ಪಶ್ಚಿಮ ಗಾರೋ ಬೆಟ್ಟಗಳಲ್ಲಿ ಭುಗಿಲೆದ್ದ ಹಿಂಸಾಚಾರ; ಇಬ್ಬರ ಸಾವು

ಗುವಾಹಟಿ: ಏಪ್ರಿಲ್ 10 ರಂದು ನಡೆಯಲಿರುವ ಗಾರೋ ಹಿಲ್ಸ್ ಸ್ವಾಯತ್ತ ಜಿಲ್ಲಾ ಮಂಡಳಿ (ಜಿಎಚ್‌ಎಡಿಸಿ) ಚುನಾವಣೆಯಲ್ಲಿ ಬುಡಕಟ್ಟು ಜನಾಂಗದವರಲ್ಲದವರು ಸ್ಪರ್ಧಿಸುವುದನ್ನು ನಿಷೇಧಿಸುವ ವಿವಾದಾತ್ಮಕ ಅಧಿಸೂಚನೆಯನ್ನು ವಿರೋಧಿಸಿ ಮೇಘಾಲಯದ ಪಶ್ಚಿಮ ಗಾರೋ ಹಿಲ್ಸ್ ಜಿಲ್ಲೆಯಲ್ಲಿ...

ಸಂವಿಧಾನ, ಸದನದ ಘನತೆ ಉಳಿಸಲು ಲೋಕಸಭಾ ಸ್ಪೀಕರ್ ವಿರುದ್ಧ ನಿರ್ಣಯ: ಕಾಂಗ್ರೆಸ್ ಸಂಸದ ಗೊಗೊಯ್

ಸ್ಪೀಕರ್ ಓಂ ಬಿರ್ಲಾ ಪಕ್ಷಪಾತಿ ವರ್ತನೆ ಹೊಂದಿದ್ದಾರೆ. ಹಾಗಾಗಿ, ಸಂವಿಧಾನ ಉಳಿಸಲು ವಿರೋಧ ಪಕ್ಷವು ಅವರನ್ನು ಪದಚ್ಯುತಗೊಳಿಸುವ ನಿರ್ಣಯ ತರಬೇಕಾಯಿತು ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಮಂಗಳವಾರ (ಮಾ.10) ಲೋಕಸಭೆಯಲ್ಲಿ ಹೇಳಿದರು....

ನಿರಂತರ ಎಲ್‌ಪಿಜಿ ಪೂರೈಕೆ ಖಚಿತಪಡಿಸಿಕೊಳ್ಳಲು ‘ಅಗತ್ಯ ಸರಕು ಕಾಯ್ದೆ’ ಜಾರಿಗೆ ತಂದ ಕೇಂದ್ರ

ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಕುರಿತು ದೂರು ನೀಡಿದ ನಂತರ, ದೇಶೀಯ ಅಡುಗೆ ಅನಿಲದ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು 'ಅಗತ್ಯ ಸರಕು ಕಾಯ್ದೆ'ಯನ್ನು ಜಾರಿಗೆ ತಂದಿದೆ ಎಂದು...

‘ಯುದ್ಧ ಯಾವಾಗ ಕೊನೆಗೊಳ್ಳುತ್ತದೆ ಎಂಬುದನ್ನು ಇರಾನ್ ನಿರ್ಧರಿಸುತ್ತದೆ’: ಟ್ರಂಪ್ ‘ಅಲ್ಪಾವಧಿಯ ಸಂಘರ್ಷ’ ಹೇಳಿಕೆಗೆ ಇರಾನ್ ತಿರುಗೇಟು 

ಟೆಹ್ರಾನ್: ಇರಾನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಟೆಹ್ರಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಅಮೆರಿಕ ಮತ್ತು ಇಸ್ರೇಲಿ ಗುರಿಗಳ ವಿರುದ್ಧದ ಮಿಲಿಟರಿ ಕ್ರಮಗಳು ಯಾವಾಗ ನಿಂತವು ಎಂಬುದನ್ನು...

ಮಹಿಳಾ ಮೀಸಲಾತಿ ಮಸೂದೆ; ತ್ವರಿತ ಅನುಷ್ಠಾನಕ್ಕೆ ವಿಪಕ್ಷಗಳ ಅಭಿಪ್ರಾಯ ಕೇಳಿದ ಕೇಂದ್ರ ಸರ್ಕಾರ

ನವದೆಹಲಿ: ಮಹಿಳಾ ಮೀಸಲಾತಿ ಕಾನೂನಿನ ಅನುಷ್ಠಾನವನ್ನು ತ್ವರಿತಗೊಳಿಸುವ ಪ್ರಯತ್ನದಲ್ಲಿ, ಲೋಕಸಭೆ ಮತ್ತು ರಾಜ್ಯ ಶಾಸಕಾಂಗ ಸಭೆಗಳಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡುವ ಶಾಸನವನ್ನು ತಿದ್ದುಪಡಿ ಮಾಡುವ ಪ್ರಸ್ತಾಪದ ಕುರಿತು ಅಭಿಪ್ರಾಯಗಳನ್ನು...

ಕೋಲ್ಕತ್ತಾ : ಕಾಳಿಘಾಟ್ ಬಳಿಕ ದಕ್ಷಿಣೇಶ್ವರದಲ್ಲೂ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ‘ಗೋ ಬ್ಯಾಕ್ ಘೋಷಣೆ’

ಕಾಳಿಘಾಟ್ ಬಳಿಕ ಕೋಲ್ಕತ್ತಾದ ದಕ್ಷಿಣೇಶ್ವರ ದೇವಸ್ಥಾನದಲ್ಲೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ದ 'ಗೋ ಬ್ಯಾಕ್ ಘೋಷಣೆಗಳು' ಕೇಳಿ ಬಂದಿವೆ. ಮಂಗಳವಾರ (ಮಾ.10) ಬೆಳಿಗ್ಗೆ ಜ್ಞಾನೇಶ್ ಕುಮಾರ್ ದಕ್ಷಿಣೇಶ್ವರ ಕಾಳಿ ದೇವಸ್ಥಾನಕ್ಕೆ ಭೇಟಿ...

ಉತ್ತರ ಪ್ರದೇಶ| ಹೋಳಿ ಹಬ್ಬದ ಶುಭ ಕೋರಿದ ದಲಿತ ಯುವಕನನ್ನು ಕೊಂದ ಪ್ರಬಲಜಾತಿ ಕುಟುಂಬ

ಉತ್ತರ ಪ್ರದೇಶದ ಲಕ್ನೋದ ದುಬಗ್ಗಾ ಪ್ರದೇಶದಲ್ಲಿ, ಹೋಳಿ ಹಬ್ಬದ ಸಂದರ್ಭದಲ್ಲಿ ಶುಭಕೋರಿದ 22 ವರ್ಷದ ದಲಿತ ವ್ಯಕ್ತಿಯನ್ನು ಬ್ರಾಹ್ಮಣ ಕುಟುಂಬದ ಸದಸ್ಯರು ಇರಿದು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆ ಮಾರ್ಚ್ 4...