Homeಆರೋಗ್ಯಸಕ್ಕರೆಯೆಂಬ ಹೊಸ ತಂಬಾಕು: ದಿನಕ್ಕೆ 25 ಗ್ರಾಂ ಗಿಂತ ಹೆಚ್ಚು ಸಕ್ಕರೆ ಬಳಸಿದರೆ ಅನಾರೋಗ್ಯಕ್ಕೆ ಆಹ್ವಾನ...

ಸಕ್ಕರೆಯೆಂಬ ಹೊಸ ತಂಬಾಕು: ದಿನಕ್ಕೆ 25 ಗ್ರಾಂ ಗಿಂತ ಹೆಚ್ಚು ಸಕ್ಕರೆ ಬಳಸಿದರೆ ಅನಾರೋಗ್ಯಕ್ಕೆ ಆಹ್ವಾನ ಕೊಟ್ಟಂತೆ

ಸಕ್ಕರೆಗೂ ಮಾದಕ ದ್ರವ್ಯಗಳ ವ್ಯಸನಿಗಳಿಗೂ ಯಾವುದೇ ವ್ಯತ್ಯಾಸವಿಲ್ಲವೆಂದು ವಿಶ್ವ ಆರೋಗ್ಯ ಸಂಸ್ಥೆ ನಮ್ಮ ನಿತ್ಯ ಆಹಾರದಿಂದ ಶೇ.10 ಕ್ಕಿಂತ ಹೆಚ್ಚು ಶಕ್ತಿಯನ್ನು ಸಕ್ಕರೆಯಿಂದ ಬರದಂತೆ ನೋಡಿಕೊಳ್ಳಿ ಎಂದಿದೆ.

- Advertisement -
- Advertisement -

ಕೊಕಕೋಲಾದಲ್ಲಿರುವ ಪೌಷ್ಠಿಕಾಂಶಗಳಾವುವು ಎಂದು ಕೇಳಿದಾಗ ಆ ಕಂಪನಿಯವ ಇದರಲ್ಲಿ ಮಾರಾಟವೊಂದೇ ಪೌಷ್ಠಿಕಾಂಶ (marketing is the only nutrient) ಎಂದು ಉತ್ತರಿಸುತ್ತಾನೆ. ಒಂದು ಬಾಟಲಿ ಕೊಕಕೋಲಾ ಅಥವಾ ಪೆಪ್ಸಿಯಲ್ಲಿ ಸುಮಾರು 45 ಗ್ರಾಂ ಸಕ್ಕರೆ ಜೊತೆಗೆ ಇಂಗಾಲದ ಡೈ ಆಕ್ಸೈಡ್ ಮತ್ತು ಕೃತಕ ಬಣ್ಣವಷ್ಟೇ ಇರುವುದರಿಂದ ಮಾರಾಟ ತಂತ್ರವೇ ಇದರ ನಿಜವಾದ ಅಸ್ತ್ರ. ಇದಕ್ಕೆ ಮೊದಲು ಜನರನ್ನು ವ್ಯಸನಿಗಳನ್ನಾಗಿಸಲು ಸ್ವಲ್ಪ ಕೊಕೇನ್ ಕೂಡ ಬಳಸಲಾಗುತ್ತಿತ್ತು. ಇದನ್ನು ವ್ಯಾಪಾರ ಜಗತ್ತಿನಲ್ಲಿ ಬ್ರೈನ್ ವಾಷಿಂಗ್ ಬದಲು ಬ್ರ್ಯಾಂಡ್ ವಾಷಿಂಗ್ ಎನ್ನುತ್ತಾರೆ. ಸ್ನೇಹಿತರೊಬ್ಬರು ಮಕ್ಕಳ ಹಾಲಿನ ಪುಡಿ ಮಾಡುವ ಕಂಪೆನಿಯಲ್ಲಿ ವಿಜ್ಞಾನಿಯಾಗಿದ್ದರು. ಅವರಿಗೆ ಮಕ್ಕಳ ಹಾಲಿನ ಪುಡಿಯಲ್ಲಿ ಸಕ್ಕರೆಯನ್ನು (ಸುಕ್ರೋಸ್) ಏಕೆ ಬಳಸುವಿರಿ, ತಾಯಿಯ ಹಾಲಿನಲ್ಲಿ ಇದು ಇಲ್ಲವಲ್ಲ ಎಂದು ಕೇಳಿದಾಗ ಅವರು ಕೊಟ್ಟ ಉತ್ತರ ಇದು: ನಮ್ಮ ಹಾಲಿನ ಪುಡಿಯನ್ನು ಒಮ್ಮೆ ಹಸುಗೂಸುಗಳು ಕುಡಿದ ಮೇಲೆ ತಾಯಿಯ ಹಾಲನ್ನ ಬಯಸುವುದಿಲ್ಲ ಎಂದು.

ಸಕ್ಕರೆಯನ್ನು ಇಂದು ನೂತನ ತಂಬಾಕು ಎಂದೇ ಆರೋಗ್ಯ ವ್ಯವಸ್ಥೆಯಲ್ಲಿ ಪರಿಗಣಿಸಲಾಗುತ್ತಿದೆ. ರಾಬರ್ಟ್ ಲಸ್ಟಿಕ್ ಸುಮಾರು 10 ವರ್ಷಗಳ ಹಿಂದೆ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಸಕ್ಕರೆ ಎಂಬ ಕಹಿ ಸತ್ಯ (sugar, the bitter truth) ಎಂಬ ಭಾಷಣದಲ್ಲಿ ಸಕ್ಕರೆ ತಂದಿರುವ ಅನಾರೋಗ್ಯ ಅವಾಂತರವನ್ನು ವಿಶ್ಲೇಷಿಸಿದ್ದರು. ಇದನ್ನು ಸುಮಾರು 1 ಕೋಟಿಗೂ ಹೆಚ್ಚು ಜನ ಗಮನಿಸಿದ್ದಾರೆ. ಒಂದು ವೈಜ್ಞಾನಿಕ ಪರೀಕ್ಷೆಯಲ್ಲಿ 2 ಗುಂಪಿನ ಇಲಿಗಳನ್ನು ಬಳಸಿ ಒಂದು ಇಲಿಗಳ ಗುಂಪಿಗೆ ಹಣ್ಣು ತರಕಾರಿಗಳನ್ನ ಕೊಟ್ಟು, ಇನ್ನೊಂದು ಗುಂಪಿನ ಇಲಿಗಳಿಗೆ ಸಕ್ಕರೆ ಕೊಟ್ಟು ಪಳಗಿಸಿ, ಸ್ವಲ್ಪ ಕಾಲದ ನಂತರ ಈ ಎರಡೂ ಗುಂಪಿನ ಇಲಿಗಳ ಮೇಲೆ ಮೈ ಸುಡುವ ಲೇಸರ್ ಬೆಳಕನ್ನು ಹಾಯಿಸಿದಾಗ, ಹಣ್ಣು, ತರಕಾರಿ ತಿನ್ನುವ ಇಲಿಗಳು ಜೀವಭಯದಿಂದ, ಜೀವವಿದ್ರೆ ಮುಂದೆ ತಿನ್ನಬಹುದೆಂದು ಚಂಗನೆ ಹಾರಿ ಓಡಿಹೋದವು. ಆದರೆ ಸಕ್ಕರೆಗೆ ಪಳಗಿದ್ದ ಇಲಿಯ ಗುಂಪು ಮೈ ಸುಟ್ಟರೂ ಸಕ್ಕರೆಯನ್ನು ತಿನ್ನುತ್ತಲೇ ಇದ್ದವು. ಈ ಪ್ರಯೋಗದಿಂದ ತಿಳಿದುಬಂದದ್ದೇನೆಂದರೆ ಸಕ್ಕರೆಗೂ ಮಾದಕ ದ್ರವ್ಯಗಳ ವ್ಯಸನಿಗಳಿಗೂ ಯಾವುದೇ ವ್ಯತ್ಯಾಸವಿಲ್ಲವೆಂದು. ಇದನ್ನು ಗಮನಿಸಿದ ವಿಶ್ವ ಆರೋಗ್ಯ ಸಂಸ್ಥೆ ನಮ್ಮ ನಿತ್ಯ ಆಹಾರದಿಂದ ಶೇ.10 ಕ್ಕಿಂತ ಹೆಚ್ಚು ಶಕ್ತಿಯನ್ನು ಸಕ್ಕರೆಯಿಂದ ಬರದಂತೆ ನೋಡಿಕೊಳ್ಳಿ ಎಂದು ಹೇಳಿರುವುದಲ್ಲದೆ ಇನ್ನೂ ಉತ್ತಮವಾದ ಮತ್ತು ನಿಜವಾದ ಆರೋಗ್ಯಕ್ಕಾಗಿ ಅದನ್ನು ಶೇ.5ಕ್ಕಿಂತ ಕಮ್ಮಿ ಮಾಡಿಕೊಂಡರೆ ಒಳಿತೆಂದು ಸ್ಪಷ್ಟವಾಗಿ ಹೇಳಿದೆ. ಶೇ.5ರಷ್ಟು ಶಕ್ತಿಯನ್ನು ಸಕ್ಕರೆಯಿಂದಲೇ ಪಡೆಯಲೇಬೇಕೆಂದೇನಲ್ಲ, ಬಳಸಲೇಬೇಕಾದರೂ ಅಷ್ಟರೊಳಗೆ ನಿಯಂತ್ರಿಸಿ ಎನ್ನುವುದಾಗಿದೆ. ಇದರ ಅರ್ಥ ದಿನಕ್ಕೆ 25 ಗ್ರಾಂಗಿಂತ ಹೆಚ್ಚು ಸಕ್ಕರೆ ಬಳಸಿದರೆ ಅನಾರೋಗ್ಯಕ್ಕೆ ಆಹ್ವಾನ ಕೊಟ್ಟಂತೆ.

ಈ 25 ಗ್ರಾಂ ಸಕ್ಕರೆ ಒಂದು ದಿನಕ್ಕೆ ಎನ್ನುವ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರವಾಗಿ ಭಾರತದ 138 ಕೋಟಿ ಜನರಿಗೆ 12 ಮಿಲಿಯನ್ ಟನ್ ಸಕ್ಕರೆ ಬೇಕಾಗುತ್ತದೆ. ಅಥವಾ ಶೇ.10 ರಷ್ಟು ಗರಿಷ್ಠ ಸಕ್ಕರೆಯನ್ನು ಲೆಕ್ಕ ಹಾಕಿದರೂ 24 ಮಿಲಿಯನ್ ಟನ್ ಸಾಕು. ಹನ್ನೆರಡಲ್ಲ 24 ಟನ್ನೂ ಅಲ್ಲ, ನಮ್ಮಲ್ಲಿ ಸುಮಾರು 35 ಮಿಲಿಯನ್ ಟನ್ ಸಕ್ಕರೆಯನ್ನು ಪ್ರತಿವರ್ಷ ಉತ್ಪಾದಿಸುತ್ತೇವೆ. ‘ಬೇಕಾಗಿರುವ’ ಹನ್ನೆರಡು ಮಿಲಿಯನ್ ಟನ್‍ಗಿಂತ ಮೂರು ಪಟ್ಟು ಸಕ್ಕರೆಯ ಉತ್ಪಾದನೆಯಾಗುತ್ತಿದೆ. ಜಗತ್ತಿನ ಮಧುಮೇಹ ರಾಜಧಾನಿಯೆಂದು ಭಾರತವನ್ನು ಕರೆಯುತ್ತಾರೆ. ವಯಸ್ಕರಿಗೆ ಸುಮಾರು ಶೇ.14 ರಷ್ಟು ಜನರಲ್ಲಿ ಮಧುಮೇಹ ರೋಗವಿದೆ. ಸುಮಾರು 40 ವರ್ಷಕ್ಕೆ ಮಧುಮೇಹ ಬಂದರೆ ಸುಮಾರು 10 ಲಕ್ಷ ರೂಪಾಯಿ ಆರೋಗ್ಯಕ್ಕೆ ಖರ್ಚು ಮಾಡಬೇಕಾಗುತ್ತದೆ. ಈ 35 ಮಿಲಿಯನ್ ಟನ್ ಸಕ್ಕರೆಗಾಗಿ 350 ಮಿಲಿಯನ್ ಟನ್ ಕಬ್ಬನ್ನು ಬೆಳೆಯಲು ಸುಮಾರು 5 ಮಿಲಿಯನ್ ಹೆಕ್ಟೇರ್ ಭೂಮಿಯನ್ನು ಬಳಸಲಾಗುತ್ತಿದೆ. ಮಹಾರಾಷ್ಟ್ರದಂತಹ ರಾಜ್ಯದಲ್ಲಿರುವ ಸುಮಾರು 1800 ಲಕ್ಷ ಕೋಟಿಯಷ್ಟು ಜನರ ತೆರಿಗೆ ಹಣದಿಂದ ಖರ್ಚು ಮಾಡಿ ಕಟ್ಟಿರುವ ಅಣೆಕಟ್ಟಿನಿಂದ ಶೇ.80ರಷ್ಟು ನೀರು ಕೇವಲ ಕಬ್ಬಿನ ಗದ್ದೆಗೆ ಹರಿಯುತ್ತದೆ. Sugar cane is a water guzzler, diabetes inducer. ಕಬ್ಬಿನಿಂದ ಬರುವ ಸಕ್ಕರೆಯಾಗಲಿ ಅಥವಾ ಸಾರಾಯಿಯಾಗಲಿ ಪರಿಸರಕ್ಕೆ ಮತ್ತು ಮನುಕುಲಕ್ಕೆ ಎಲ್ಲಾ ರೀತಿಯಿಂದಲೂ ಮಾರಕವೇ ಆಗಿದೆ.

ಮನುಷ್ಯನ ದೇಹದಲ್ಲಿ ಸುಮಾರು 5 ಲೀಟರ್ ರಕ್ತವಿದ್ದು, ಅದಕ್ಕೆ ಕೇವಲ 5 ಗ್ರಾಂ ಸಕ್ಕರೆಯನ್ನು ಮಾತ್ರ ಶೇಖರಿಸಲು ಸಾಮರ್ಥ್ಯವಿರುವುದು. ನಾವು ಸುಲಭವಾಗಿ ಬಳಸುವ ಸಕ್ಕರೆ ರಕ್ತಕ್ಕೆ ಶೀಘ್ರವಾಗಿ ಪ್ರವಾಹವಾಗಿ ದೇಹದ ಶೇಖರಣಾ ಸಾಮರ್ಥ್ಯವನ್ನು ಮೀರಿದಾಗ ಇನ್ಸುಲಿನ್ ಹಾರ್ಮೋನ್ ಹೆಚ್ಚು ಉತ್ಪತ್ತಿಯಾಗಿ ಈ ಸಕ್ಕರೆಯ ಪ್ರವಾಹವನ್ನು ಕೊಬ್ಬಾಗಿ ನಿರಂತರವಾಗಿ ಪರಿವರ್ತಿಸಬೇಕಾಗುತ್ತದೆ. ಹೀಗೆ ಸತತವಾಗಿ ದುಡಿದ ಇನ್ಸುಲಿನ್ ಉತ್ಪಾದಿಸುವ ಪ್ಯಾಂಕ್ರಿಯಾಸ್ ಅಥವಾ ಇನ್ಸುಲಿನ್ ಹೇಳಿದ ಮಾತಿನಂತೆ ಸಕ್ಕರೆಯನ್ನು ಬೇರೆಡೆಗೆ ಶೇಖರಿಸುವ ಜೀವಕೋಶಗಳು ಸೋತು ದೇಹದ ಸಂವಾಹಕಗಳು ಹಳಿ ತಪ್ಪಿದಾಗ ಉಂಟಾಗುವುದೇ ಮಧುಮೇಹ ರೋಗ. ಮನುಷ್ಯ ಅನುವಂಶಿಕವಾಗಿ ಸಕ್ಕರೆಯನ್ನು ರಕ್ತದಲ್ಲಿ ಹಿಡಿದಿಡಲು ಸಾಮರ್ಥ್ಯವಿಲ್ಲದಿರುವ ವಿದ್ಯಮಾನ, ಮಂಗನಿಂದ ಮಾನವನಾದ ವಿಕಾಸವಾದ ಅಡಗಿದೆ ಎನ್ನುತ್ತಾರೆ. ಹಣ್ಣು ಹಂಪಲನ್ನು ತಿನ್ನುವ ನಮ್ಮ “ಪೂರ್ವಾಶ್ರಮದಲ್ಲಿ” ಸಕ್ಕರೆಯನ್ನು ಹಿಡಿದಿಡುವ ಪ್ರಮೇಯವೇ ಒದಗಿರಲಿಲ್ಲ. ಅವಶ್ಯಕತೆ ಇಲ್ಲದ್ದು ವಿಕಾಸವಾಗುವ ಅವಕಾಶವಿರಲಿಲ್ಲ. ಹಾಗಾಗಿ ಇಂದಿಗೆ ನಾವು ಹೆಚ್ಚು ಸಕ್ಕರೆ ಬಳಸುವುದು ನಮ್ಮ ದೈಹಿಕ ಚಟುವಟಿಕೆಯ ಕಾರ್ಯವೈಖರಿಯ ಮತ್ತು ಬದುಕಿನ ಜೀವನಶೈಲಿಗೆ ವಿರುದ್ಧವಾದದ್ದು.

ಹಣ್ಣಿನಿಂದ ಸಕ್ಕರೆ ಬರುವಾಗ ಇಂತಹ ಸಮಸ್ಯೆ ಇರದಿರಲು ಕಾರಣ ಹಣ್ಣಿನಲ್ಲಿರುವ ಅಂಶ ಸುಮಾರು ಶೇ.10 ರಷ್ಟು ಸಕ್ಕರೆ ಜೊತೆ ಸುಮಾರು 85 ರಿಂದ 90 ರಷ್ಟು ನೀರೆ ಆಗಿರುತ್ತದೆ. ಹೀಗಾಗಿ ಹೊಟ್ಟೆ ತುಂಬಿ ಹೆಚ್ಚು ತಿನ್ನಲಾಗದು. ತಿನ್ನುವ ಆಹಾರವೇ ನಿಮ್ಮನ್ನು ನಿಯಂತ್ರಿಸುತ್ತದೆ. ಇದೇ ಕಬ್ಬಿನಿಂದ ಜಗಿದು ರಸದಲ್ಲಿರುವ ಸಕ್ಕರೆಯನ್ನು ತೆಗೆದುಕೊಳ್ಳಬೇಕಾದರೆ 10 ಗ್ರಾಂ ಸಕ್ಕರೆಗೆ 100 ಗ್ರಾಂ ಕಬ್ಬನ್ನು ಜಗಿದು ರಸ ಹೀರಲು ಕಾಲು ಗಂಟೆ ಬೇಕಾಗಬಹುದು – ಹಲ್ಲು ಗಟ್ಟಿ ಇದ್ದರೆ. ಅದೇ ನಾವು 2 ಚಮಚ ಸಕ್ಕರೆ ಹಾಕಿಕೊಳ್ಳಲು ಯಾವುದೇ ಆಲೋಚನೆ ಮಾಡುವುದಿಲ್ಲ. ಯಾವುದೇ ಆಹಾರ ಪದಾರ್ಥ ಶುದ್ಧವಾದಾಗ ಸತ್ವ ಹೀನವಾಗುತ್ತದೆ. Pure is junk. ಅದು ಆಹಾರಕ್ಕೂ ಮತ್ತು ಶುದ್ಧ ಮನುಷ್ಯರಿಗೂ ಅನ್ವಯ.

ಈಗ ಸಕ್ಕರೆಯ ಪರವಾಗಿ ವಕಾಲತ್ತು ವಹಿಸಲು ಹುಟ್ಟುಹಾಕಲಾಗಿರುವ ಮೀಟಾ.ಆರ್ಗ್ ಈ ಎಲ್ಲಾ ನಗ್ನ ಸತ್ಯಗಳ ವಿರುದ್ಧ ಹಿಂದೆ ಹೇಗೆ ತಂಬಾಕು ಲಾಬಿ ಸಿಗರೇಟಿನ ಪರ ಅಪಾರವಾದ ಪ್ರಚಾರ ಮಾಡಿತ್ತೋ ಹಾಗೆಯೇ ಮುಂದುವರಿಯುತ್ತಿದೆ. ತಂಬಾಕು ಲಾಬಿ ಸಿಗರೇಟಿಗೂ ಕ್ಯಾನ್ಸರ್‌ಗೂ ಸಂಬಂಧವೇ ಇಲ್ಲವೆಂದು ಸುಮಾರು 100 ವರ್ಷಗಳ ಕಾಲ “ವೈಜ್ಞಾನಿಕ” ಸಂಶೋಧನೆಗಳನ್ನು ಮಾಡಿ ಪ್ರಕಟಿಸಿತು. ಅನೇಕ ಲಾಬಿಗಳನ್ನು ಸೃಷ್ಟಿಮಾಡಿತ್ತು. ತಂಬಾಕಿನ ಪರವಾಗಿ ಅನೇಕ ಪುಸ್ತಕಗಳನ್ನು ಬರೆಯಲಾಯಿತು. ಡನ್‍ಹಿಲ್ ಎಂಬುವ ವ್ಯಕ್ತಿ ಜಂಟಲ್ ಆರ್ಟ್ ಆಫ್ ಸ್ಮೋಕಿಂಗ್ ಎನ್ನುವ ಪುಸ್ತಕ ಬರೆದ. ಕೊಕಕೋಲಾ ಕಂಪೆನಿಯವರು ಸಕ್ಕರೆ ಪರ ಇದೇ ರೀತಿಯ ವಕಾಲತ್ತನ್ನು ವಹಿಸುತ್ತಾರೆ. ಅನೇಕ ಬಾರಿ ಇಂತಹ ಲಾಬಿಗಳಿಗೆ ಕೊಕಕೋಲಾ ಮತ್ತು ಪೆಪ್ಸಿಯಂತಹ ಕಂಪೆನಿಗಳಿಂದ ಹಣ ಹೂಡಿಕೆಯಾಗುತ್ತದೆ. ಕೋಲಾ ಕಂಪೆನಿಗಳು ಹೇಳುವುದು ನಮ್ಮ ಕೋಲಾ ಕುಡಿದು ಸುಮಾರು 2 ಕಿ.ಮೀ ಓಡಿದರೆ ಯಾವ ಬೊಜ್ಜು ಬರುವುದಿಲ್ಲ ಎಂದು. ಸೋಮಾರಿಗಳು ಕೊಕಕೋಲಾ ಕುಡಿದು ಬೇಜವಾಬ್ದಾರಿಯಿಂದ ಕೊಕಕೋಲಾದಿಂದ ಬೊಜ್ಜು ಬರುತ್ತದೆ ಎಂದು ಹೇಳುತ್ತಾರೆ ಎನ್ನುವುದು ಅವರ ವಾದ. ಹೊರನೋಟಕ್ಕೆ ಸರಿ ಕಂಡರೂ ಅವರ ದೂರ್ತ ಆಲೋಚನೆ ಮತ್ತು ಅವರ ದುರುದ್ದೇಶ ಸ್ಪಷ್ಟವಾಗಿ ಗೋಚರವಾಗುತ್ತದೆ.

ಸಕ್ಕರೆ ಮತ್ತು ಕಬ್ಬನ್ನು ಮುಕ್ಕಾಲು ಭಾಗ ಕಮ್ಮಿ ಮಾಡಿ ಭಾರತೀಯರ ಆರೋಗ್ಯ, ಮಣ್ಣಿನ ಆರೋಗ್ಯ, ನೀರಿನ ಸಂರಕ್ಷಣೆ, ಪರಿಸರ ಪಾಲನೆಗಾಗಿ ಎಲ್ಲರೂ ಒಟ್ಟಾಗಿ ಚರ್ಚೆ ನಡೆಸಿ ಆರೋಗ್ಯಕರ ಕ್ರಮಗಳಿಗೆ ಮುಂದಾಗಬೇಕಿರುವ ತುರ್ತು ನಮ್ಮ ಮುಂದಿದೆ.


ಇದನ್ನೂ ಓದಿ: ಕನ್ನಡಕ್ಕೆ ಕನ್ನಡದ್ದೆ ಊಟ ಉಂಟಾ? ಡಾ. ಕೆ.ಸಿ ರಘು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...