Homeಕವನನನ್ನ ದೇಶದಲ್ಲಿ... ಚಾಂದ್ ಪಾಷ ಅವರ ಎರಡು ಕವಿತೆಗಳು

ನನ್ನ ದೇಶದಲ್ಲಿ… ಚಾಂದ್ ಪಾಷ ಅವರ ಎರಡು ಕವಿತೆಗಳು

- Advertisement -
- Advertisement -

ನನ್ನ ದೇಶದಲ್ಲಿ…

ನಿದ್ರೆಯ ನೆರಳಿಗೂ ಆಕಾಶದ ಬೆರಳಿಗೂ ಒಲವಾಗಿ
ನೆಲವೆಲ್ಲ ತೇವ ನುಂಗಿದ ಬಟ್ಟೆಯಾಗಿರಲು,
ತಿಳಿ ಗುಲಾಬಿ ಬಣ್ಣದ ತೇರು ಎಳೆಯುವಷ್ಟರಲ್ಲಿ
ನಮ್ಮೂರ ಕೊರ್ಮನ ಕೈ ತುಂಡಾಗುತ್ತದೆ.
ಕೆಂಡ ನುಂಗಿದ ಕಣ್ಣು, ಸೇಂದಿ ಹೀರಿದ ನಾಲಿಗೆ
ಜಪ ತಪಗಳ ಸ್ಖಲಿನಿಗಳ ಸೆರೆಯಾಳು!

ಗಾಳಿಯ ಜೊತೆ ಸೆಣಸಾಡಿ ಗಾಯಾಳು ತಾಯಿಯ ಎದೆಹಾಲಲ್ಲೂ ನೆತ್ತರದ ಬಣ್ಣ,
ಬೆಂಕಿ ಬಿದ್ದವರ ಮನೆಯ ಕಣ್ಣಲ್ಲೂ ನೀರು ಖಾಲಿಯಾಗಿದೆ!
ಸೊರಗಿದ ಸೊಬಗು ಸೋರುವ ಧರ್ಮತ್ವದ ಗಂಡಸುತನ
ಊರ ದೇವರ ಹೆಣ ಹೆರಲು ಅವ್ವ ಮತ್ತೆ ಬಸಿರಾಗುವಳು!

ಬೀದಿ ಗುಡಿಸುವ ಬಿಸಿಲು ನೆರಳಿನ ನೆತ್ತಿಗೆ ಮೊಳೆ ಜಡಿದು
ದವಾಖಾನೆಗೆ ದಾಖಲಾಗುವಷ್ಟರಲ್ಲಿ ಮುಟ್ಟಿಸಿಕೊಂಡವನು
ಮಡಿಯಾಗುವ ಮೊದಲೆ ಮುಟ್ಟಿದವನು ಹೆಣವಾಗುತ್ತಾನೆ!

ಹೂಳುವ ಜಾಗಕ್ಕೂ ಜಾತಿ ಬೇಲಿ, ಮನುಷ್ಯತ್ವ ಪೂರ್ತಿ ಖಾಲಿ!
ಎಲ್ಲರದೂ ಕೊಲ್ಲುವುದೇ ಕಾಯಕ ಆದರೂ ಇಲ್ಲಿ ಅಸಂಖ್ಯಾತರು ನಿರುದ್ಯೋಗಿಗಳೆ,
ಹಕ್ಕಿಗೆ ಗುಂಡಿಡುವ ಸಸ್ಯಹಾರತ್ವದ ಸರಕಿಗೆ ಈ ನೆಲ ತೀರಾ ಸಲೀಸಾದ ಸ್ವರ್ಗ!
ಅದೆಷ್ಟು ಬಾರಿ ಕೊಂದರೂ, ನೊಂದರೂ ಎದೆಸೀಳಿ ದೇಶಾಭಿಮಾನ ತೋರುತ್ತಲೇ ಒಂದು ವರ್ಗ!

ಅರೆನಗ್ನ ಪ್ರತಿಮೆ

ಉಸಿರು ಹಿಡಿದು ಎದೆಗೊದ್ದಾಗದೆಲ್ಲ ಬಿದ್ದದ್ದು
ರಾಮರಾಜ್ಯದ ಕನಸು.
ಚೂರುಗಳ ಆಯುತ್ತಾ ಹೋದಂತೆ ಸಿಕ್ಕಿದ್ದು ಹಸಿಗಾಯಗಳ ಹೆರಿಗೆ ನೋವು
ಹಸಿದ ಕಂಬನಿಗಳು ಅಳುತ್ತಲೇ ಇವೆ
ಕಣ್ಣರೆಪ್ಪೆ ಹೊಲಿದು ಬಿಡಿ,
ಬಟ್ಟೆ ಇಲ್ಲದವರ ಬೇನೆ ಕಂಡು ಚರಕವೂ ಸ್ತಬ್ಧವಾಗಿದೆ.

ರಕ್ತ ಮತ್ತು ಓಕುಳಿ ಒಂದೇ ಎನ್ನುವರ ಮನೆಯ ಹಬ್ಬದೂಟ ತಿನ್ನದೆ,
ಉಪವಾಸ ಕೂತವನ ಕಣ್ಣೊಳಗೂ ಹಸಿವಿತ್ತು.
ದಾರಿಗಳಿಗೆ ಹೆಜ್ಜೆ ಮೂಡುವ ಹೊತ್ತಲ್ಲಿ,
ಚಪ್ಪಲಿಗೆ ಚಲನೆ ಬರುತ್ತದೆ.
ಕಡಲ ಹನಿಗೆ ಉಪ್ಪು ಕರಗುವ ಹಾಗೆ.
ಕರದಲ್ಲೇ ಕರಗಿ ಹೋಗುತ್ತಾನೆ ನೀರಂತ ಮನುಷ್ಯ!

ಗರೀಬಿಯ ಗಾಯಕ್ಕೆ ಉಪ್ಪು ಸವರುವಾಗ
ಮರಿಯಾದ ಹತ್ಯೆಯಲಿ ಮಗಳು ಸತ್ತಾಗ,
ಬಡವನ ಬೆವರು, ಹಣವಂತನ ಹೆಣವ ತೊಳೆಯುವಾಗ,
ಅಲ್ಲೊಂದು ಪುತ್ಥಳಿಯ ಕೈಗೆ ಪೊರಕೆ ಬರುತ್ತದೆ.
ಕನ್ನಡಕ ಇನ್ನಷ್ಟು ಧೂಳಾಗುತ್ತದೆ!

ತಿಂಗಳೊಂದರ ಎರಡನೇ ತಾರೀಖಿಗೆ
ಹುಟ್ಟುವ ಈ ಪುತ್ಥಳಿ,
ಪ್ರತಿನಿತ್ಯವೂ ಸಾಯುತ್ತಿದೆ ಕಂಡವರ ಗುಂಡಿನ ಏಟಿಗೆ
ನೆತ್ತರ ಕಂಡವರು ರೋದಿಸಿದರೆ,
ಉಂಡವರು ಕೊಂದವನ ಕೊಂಡಾಡುತ್ತಾರೆ.

ಕೊಲ್ಲುವ ನಿಮ್ಮನ್ನು ಕೊಲ್ಲಲು ನಮಗೆ ಗುಂಡೆ ಬೇಕಾಗಿಲ್ಲ.
ಲೇಖನಿಯ ತುದಿಯ ಒಂದಿಷ್ಟು ಮಸಿಯು ಮನಸ್ಸು ಮಾಡಿದರೆ ಸಾಕು,
ಹೆಜ್ಜೆಗೊಂದು ಹೆಣ ಬೀಳುತ್ತದೆ.
ಆದರೆ, ನಾವು ಕೊಲ್ಲುವುದಿಲ್ಲ ಏಕೆಂದರೆ..
ನೀವೇ ಕೊಂದ ಗಾಂಧಿಯನ್ನು ನಂಬಿದವರು ನಾವು!

ಉರಿವ ನಕ್ಷತ್ರಗಳು ಉರಿದು ಬಿದ್ದು
ಬಿಸಿಲ ತಿನ್ನುವ ಬೀದಿ ಬಿಕ್ಕಳಿಸಿದರೂ
ಈ ಪುತ್ಥಳಿಗೆ ಮಾತ್ರ ಪುಢಾರಿತನದ ಇನಾಮು.
ಶಾಂತಿಯು ನಿತ್ಯ ಸಾಯುವಾಗ ಗುಂಡಿಗೇನು ಬರಗಾಲ
ಈಗೀಗ ಈ ಅರೆನಗ್ನ ಪ್ರತಿಮೆಗೂ ನಾಚಿಕೆಯಾಗಿರಬೇಕು
“ಮೇರಾ ಭಾರತ್ ಮಹಾನ್….” ಎನ್ನಲು!?

 

ಚಾಂದ್ ಪಾಷ ಎನ್ ಎಸ್

ಚಾಂದ್ ಪಾಷ ಎನ್ ಎಸ್

ಮೂಲತಃ ಕಲಬುರ್ಗಿಯವರಾದ ಚಾಂದ್ ಪಾಷ ಸೂಕ್ಷ್ಮ ಸಂವೇದನೆಯ ಕವಿ. ಬೆಂಗಳೂರು ವಿ. ವಿ. ಯಲ್ಲಿ ಕನ್ನಡ ಎಂ. ಎ. ಪದವಿ ಪಡೆದಿದ್ದು ಪ್ರಸ್ತುತ ಬೆಂಗಳೂರಿನ ದಿ ಆಕ್ಸ್‌ಪsರ್ಡ್ ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಚೊಚ್ಚಲ ಕವನ ಸಂಕಲನ ‘ಮೌನದ ಮಳೆ’ 2015ರಲ್ಲಿ ಪ್ರಕಟವಾಯಿತು. ಚಿತ್ರ ಚಿಗುರುವ ಹೊತ್ತು ಇತ್ತೀಚಿನ ಕವನ ಸಂಕಲನ. ಚಾಂದ್ ಪಾಷ ಅವರ ಎರಡು ಕವಿತೆಗಳು ಇಲ್ಲಿವೆ


ಇದನ್ನೂ ಓದಿ: ಓದಲಿಕ್ಕಿದೆ ಕಾರಣ ಇಪ್ಪತ್ತೊಂದು! 2021ರಲ್ಲಿನ ನಿರೀಕ್ಷಿತ ಪುಸ್ತಕಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...