Homeಕವನನನ್ನ ದೇಶದಲ್ಲಿ... ಚಾಂದ್ ಪಾಷ ಅವರ ಎರಡು ಕವಿತೆಗಳು

ನನ್ನ ದೇಶದಲ್ಲಿ… ಚಾಂದ್ ಪಾಷ ಅವರ ಎರಡು ಕವಿತೆಗಳು

- Advertisement -
- Advertisement -

ನನ್ನ ದೇಶದಲ್ಲಿ…

ನಿದ್ರೆಯ ನೆರಳಿಗೂ ಆಕಾಶದ ಬೆರಳಿಗೂ ಒಲವಾಗಿ
ನೆಲವೆಲ್ಲ ತೇವ ನುಂಗಿದ ಬಟ್ಟೆಯಾಗಿರಲು,
ತಿಳಿ ಗುಲಾಬಿ ಬಣ್ಣದ ತೇರು ಎಳೆಯುವಷ್ಟರಲ್ಲಿ
ನಮ್ಮೂರ ಕೊರ್ಮನ ಕೈ ತುಂಡಾಗುತ್ತದೆ.
ಕೆಂಡ ನುಂಗಿದ ಕಣ್ಣು, ಸೇಂದಿ ಹೀರಿದ ನಾಲಿಗೆ
ಜಪ ತಪಗಳ ಸ್ಖಲಿನಿಗಳ ಸೆರೆಯಾಳು!

ಗಾಳಿಯ ಜೊತೆ ಸೆಣಸಾಡಿ ಗಾಯಾಳು ತಾಯಿಯ ಎದೆಹಾಲಲ್ಲೂ ನೆತ್ತರದ ಬಣ್ಣ,
ಬೆಂಕಿ ಬಿದ್ದವರ ಮನೆಯ ಕಣ್ಣಲ್ಲೂ ನೀರು ಖಾಲಿಯಾಗಿದೆ!
ಸೊರಗಿದ ಸೊಬಗು ಸೋರುವ ಧರ್ಮತ್ವದ ಗಂಡಸುತನ
ಊರ ದೇವರ ಹೆಣ ಹೆರಲು ಅವ್ವ ಮತ್ತೆ ಬಸಿರಾಗುವಳು!

ಬೀದಿ ಗುಡಿಸುವ ಬಿಸಿಲು ನೆರಳಿನ ನೆತ್ತಿಗೆ ಮೊಳೆ ಜಡಿದು
ದವಾಖಾನೆಗೆ ದಾಖಲಾಗುವಷ್ಟರಲ್ಲಿ ಮುಟ್ಟಿಸಿಕೊಂಡವನು
ಮಡಿಯಾಗುವ ಮೊದಲೆ ಮುಟ್ಟಿದವನು ಹೆಣವಾಗುತ್ತಾನೆ!

ಹೂಳುವ ಜಾಗಕ್ಕೂ ಜಾತಿ ಬೇಲಿ, ಮನುಷ್ಯತ್ವ ಪೂರ್ತಿ ಖಾಲಿ!
ಎಲ್ಲರದೂ ಕೊಲ್ಲುವುದೇ ಕಾಯಕ ಆದರೂ ಇಲ್ಲಿ ಅಸಂಖ್ಯಾತರು ನಿರುದ್ಯೋಗಿಗಳೆ,
ಹಕ್ಕಿಗೆ ಗುಂಡಿಡುವ ಸಸ್ಯಹಾರತ್ವದ ಸರಕಿಗೆ ಈ ನೆಲ ತೀರಾ ಸಲೀಸಾದ ಸ್ವರ್ಗ!
ಅದೆಷ್ಟು ಬಾರಿ ಕೊಂದರೂ, ನೊಂದರೂ ಎದೆಸೀಳಿ ದೇಶಾಭಿಮಾನ ತೋರುತ್ತಲೇ ಒಂದು ವರ್ಗ!

ಅರೆನಗ್ನ ಪ್ರತಿಮೆ

ಉಸಿರು ಹಿಡಿದು ಎದೆಗೊದ್ದಾಗದೆಲ್ಲ ಬಿದ್ದದ್ದು
ರಾಮರಾಜ್ಯದ ಕನಸು.
ಚೂರುಗಳ ಆಯುತ್ತಾ ಹೋದಂತೆ ಸಿಕ್ಕಿದ್ದು ಹಸಿಗಾಯಗಳ ಹೆರಿಗೆ ನೋವು
ಹಸಿದ ಕಂಬನಿಗಳು ಅಳುತ್ತಲೇ ಇವೆ
ಕಣ್ಣರೆಪ್ಪೆ ಹೊಲಿದು ಬಿಡಿ,
ಬಟ್ಟೆ ಇಲ್ಲದವರ ಬೇನೆ ಕಂಡು ಚರಕವೂ ಸ್ತಬ್ಧವಾಗಿದೆ.

ರಕ್ತ ಮತ್ತು ಓಕುಳಿ ಒಂದೇ ಎನ್ನುವರ ಮನೆಯ ಹಬ್ಬದೂಟ ತಿನ್ನದೆ,
ಉಪವಾಸ ಕೂತವನ ಕಣ್ಣೊಳಗೂ ಹಸಿವಿತ್ತು.
ದಾರಿಗಳಿಗೆ ಹೆಜ್ಜೆ ಮೂಡುವ ಹೊತ್ತಲ್ಲಿ,
ಚಪ್ಪಲಿಗೆ ಚಲನೆ ಬರುತ್ತದೆ.
ಕಡಲ ಹನಿಗೆ ಉಪ್ಪು ಕರಗುವ ಹಾಗೆ.
ಕರದಲ್ಲೇ ಕರಗಿ ಹೋಗುತ್ತಾನೆ ನೀರಂತ ಮನುಷ್ಯ!

ಗರೀಬಿಯ ಗಾಯಕ್ಕೆ ಉಪ್ಪು ಸವರುವಾಗ
ಮರಿಯಾದ ಹತ್ಯೆಯಲಿ ಮಗಳು ಸತ್ತಾಗ,
ಬಡವನ ಬೆವರು, ಹಣವಂತನ ಹೆಣವ ತೊಳೆಯುವಾಗ,
ಅಲ್ಲೊಂದು ಪುತ್ಥಳಿಯ ಕೈಗೆ ಪೊರಕೆ ಬರುತ್ತದೆ.
ಕನ್ನಡಕ ಇನ್ನಷ್ಟು ಧೂಳಾಗುತ್ತದೆ!

ತಿಂಗಳೊಂದರ ಎರಡನೇ ತಾರೀಖಿಗೆ
ಹುಟ್ಟುವ ಈ ಪುತ್ಥಳಿ,
ಪ್ರತಿನಿತ್ಯವೂ ಸಾಯುತ್ತಿದೆ ಕಂಡವರ ಗುಂಡಿನ ಏಟಿಗೆ
ನೆತ್ತರ ಕಂಡವರು ರೋದಿಸಿದರೆ,
ಉಂಡವರು ಕೊಂದವನ ಕೊಂಡಾಡುತ್ತಾರೆ.

ಕೊಲ್ಲುವ ನಿಮ್ಮನ್ನು ಕೊಲ್ಲಲು ನಮಗೆ ಗುಂಡೆ ಬೇಕಾಗಿಲ್ಲ.
ಲೇಖನಿಯ ತುದಿಯ ಒಂದಿಷ್ಟು ಮಸಿಯು ಮನಸ್ಸು ಮಾಡಿದರೆ ಸಾಕು,
ಹೆಜ್ಜೆಗೊಂದು ಹೆಣ ಬೀಳುತ್ತದೆ.
ಆದರೆ, ನಾವು ಕೊಲ್ಲುವುದಿಲ್ಲ ಏಕೆಂದರೆ..
ನೀವೇ ಕೊಂದ ಗಾಂಧಿಯನ್ನು ನಂಬಿದವರು ನಾವು!

ಉರಿವ ನಕ್ಷತ್ರಗಳು ಉರಿದು ಬಿದ್ದು
ಬಿಸಿಲ ತಿನ್ನುವ ಬೀದಿ ಬಿಕ್ಕಳಿಸಿದರೂ
ಈ ಪುತ್ಥಳಿಗೆ ಮಾತ್ರ ಪುಢಾರಿತನದ ಇನಾಮು.
ಶಾಂತಿಯು ನಿತ್ಯ ಸಾಯುವಾಗ ಗುಂಡಿಗೇನು ಬರಗಾಲ
ಈಗೀಗ ಈ ಅರೆನಗ್ನ ಪ್ರತಿಮೆಗೂ ನಾಚಿಕೆಯಾಗಿರಬೇಕು
“ಮೇರಾ ಭಾರತ್ ಮಹಾನ್….” ಎನ್ನಲು!?

 

ಚಾಂದ್ ಪಾಷ ಎನ್ ಎಸ್

ಚಾಂದ್ ಪಾಷ ಎನ್ ಎಸ್

ಮೂಲತಃ ಕಲಬುರ್ಗಿಯವರಾದ ಚಾಂದ್ ಪಾಷ ಸೂಕ್ಷ್ಮ ಸಂವೇದನೆಯ ಕವಿ. ಬೆಂಗಳೂರು ವಿ. ವಿ. ಯಲ್ಲಿ ಕನ್ನಡ ಎಂ. ಎ. ಪದವಿ ಪಡೆದಿದ್ದು ಪ್ರಸ್ತುತ ಬೆಂಗಳೂರಿನ ದಿ ಆಕ್ಸ್‌ಪsರ್ಡ್ ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಚೊಚ್ಚಲ ಕವನ ಸಂಕಲನ ‘ಮೌನದ ಮಳೆ’ 2015ರಲ್ಲಿ ಪ್ರಕಟವಾಯಿತು. ಚಿತ್ರ ಚಿಗುರುವ ಹೊತ್ತು ಇತ್ತೀಚಿನ ಕವನ ಸಂಕಲನ. ಚಾಂದ್ ಪಾಷ ಅವರ ಎರಡು ಕವಿತೆಗಳು ಇಲ್ಲಿವೆ


ಇದನ್ನೂ ಓದಿ: ಓದಲಿಕ್ಕಿದೆ ಕಾರಣ ಇಪ್ಪತ್ತೊಂದು! 2021ರಲ್ಲಿನ ನಿರೀಕ್ಷಿತ ಪುಸ್ತಕಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...