Homeಅಂಕಣಗಳುನೂರು ನೋಟ | ಎಚ್.ಎಸ್.ದೊರೆಸ್ವಾಮಿಮೋದಿ ಆಡಳಿತದಲ್ಲಿ ಜನರ ಮೇಲಿನ ಹಲ್ಲೆ ಅಧಿಕವಾಗಿದೆ: ಎಚ್.ಎಸ್.ದೊರೆಸ್ವಾಮಿ

ಮೋದಿ ಆಡಳಿತದಲ್ಲಿ ಜನರ ಮೇಲಿನ ಹಲ್ಲೆ ಅಧಿಕವಾಗಿದೆ: ಎಚ್.ಎಸ್.ದೊರೆಸ್ವಾಮಿ

- Advertisement -
- Advertisement -

ಆಡಳಿತ ನಡೆಸುವವರು ಸರ್ವಾಧಿಕಾರಿಗಳಂತೆ ದರ್ಪದಿಂದ ನಡೆಸಿಕೊಳ್ಳುವುದನ್ನು ಭಾರತೀಯ ಜನತೆ ಮತ್ತು ಭಾರತದ ವಿಚಾರವಂತ ಗಣ್ಯರು ನಿಸ್ಸಹಾಯಕರಂತೆ, ಮೂಕಪ್ರೇಕ್ಷಕರಂತೆ ನೋಡಿ, ಕೈಕಟ್ಟಿ ಕೂರುತ್ತಾರಾ…?

ಪ್ರದರ್ಶನ ಪಿತಾಮಹ ಮೋದಿಯವರು ಗಳಿಗೆಗೊಂದು ನಾಟಕ ಮಾಡುತ್ತಾರೆ, ಪ್ರಹಸನ ಮಾಡುತ್ತಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮೋದಿ ತಬ್ಬಿಕೊಂಡಿದ್ದೋ ತಬ್ಬಿಕೊಂಡಿದ್ದು. ಇಷ್ಟು cheap ಆಗಿ ಬಿಟ್ಟರೇ ಈ ಇಬ್ಬರೂ?

ಬ್ರಿಟನ್ನಿನ ಮಹಾರಾಣಿ ಯಾರದಾದರೂ ಕೈ ಕುಲುಕಬೇಕಾದರೆ ಕೈಗೆ ಕೈಚೀಲ ಹಾಕಿಕೊಳ್ಳುತ್ತಾರೆ. ಕೈ ಕುಲುಕುವವನಿಗೆ ಯಾವ ಚರ್ಮರೋಗ ಇದೆಯೋ ಎಂದು ಹೆದರಿಕೆ. ಮೋದಿ, ಟ್ರಂಪ್‍ಗಳಿಗೆ ಅದೆಷ್ಟು ಕಾಯಿಲೆ ಇದೆಯೋ? ಆದರೂ ಒಬ್ಬರನ್ನೊಬ್ಬರನ್ನು ತಬ್ಬಿಕೊಳ್ಳುವುದರಲ್ಲಿ ಅವರ ಅಟ್ಟಹಾಸವೆಷ್ಟು? ಸಭ್ಯತೆ ಮೀರಿ ನಡೆದುಕೊಳ್ಳುವುದು ಅವರಿಗೆ ಭೂಷಣವಲ್ಲ. ಟ್ರಂಪ್, ಮೋದಿಯವರನ್ನು ಭಾರತದ ರಾಷ್ಟ್ರಪಿತ ಮಾಡಿದ. ಗಾಂಧೀಜಿ ಸೋಗು ಹಾಕಿದ್ದು ರಾಷ್ಟ್ರಪಿತ, ಮೋದಿಯೇ ಅಸಲಿ ರಾಷ್ಟ್ರಪಿತ. ಗಾಂಧೀಜಿ ಹತ್ಯೆಯಾದ 72 ವರ್ಷಗಳ ಮೇಲೆ ಅಮೆರಿಕದ ಅಧ್ಯಕ್ಷರು ಮೋದಿಯವರನ್ನೇ ನಿಜವಾದ ರಾಷ್ಟ್ರಪಿತ ಮಾಡಿದ್ದಾರೆ. ನಕಲಿ ರಾಷ್ಟ್ರಪಿತ ಗಾಂಧೀಜಿಯನ್ನು ಬಯಲಿಗೆಳೆದು ಅಸಲಿ ಮೋದಿಯನ್ನು ರಾಷ್ಟ್ರಪಿತನ ಸ್ಥಾನದಲ್ಲಿ ಕೂಡಿಸಿದ ಟ್ರಂಪ್‍ಗೆ ಆರ್‍ಎಸ್‍ಎಸ್ ಕೃತಜ್ಞತೆಗಳನ್ನು ಅರ್ಪಿಸಬೇಕು. ಮುಂದೆ ಒಂದು ದಿನ ನಿಜವಾದ ರಾಮ ಮೋದಿಯೇ ಹೊರತು ಅಯೋಧ್ಯೆ ರಾಮನಲ್ಲ ಎನ್ನುವ ಕಾಲ ಬರಲೂಬಹುದು.

ಸೆಕ್ಷನ್ 370 ನ್ನು ಹಿಂಪಡೆದು ಕಾಶ್ಮೀರವನ್ನು ಒಡೆದು, ಪ್ರಜಾಪ್ರಭುತ್ವವನ್ನು ಕೊನೆಗಾಣಿಸಿ ಕಾಶ್ಮೀರವನ್ನು ಕೇಂದ್ರ ಸರ್ಕಾರದ ಅಧೀನಕ್ಕೆ ತೆಗೆದುಕೊಳ್ಳುವ ಮೋದಿ ಸರ್ಕಾರದ ವಿರುದ್ಧ 250 ಭಾರತೀಯ ಗಣ್ಯರು ಮೋದಿಯವರಿಗೆ ಪತ್ರ ಬರೆದಿದ್ದಾರೆ. ಶಿಕ್ಷಣ ತಜ್ಞರು, ಪತ್ರಕರ್ತರು, ರಾಜಕೀಯ ನಾಯಕರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ. ಕಾಶ್ಮೀರದ ಮೇಲೆ ಹೇರಿರುವ ನಿರ್ಬಂಧವನ್ನು ತೆರವುಗೊಳಿಸಬೇಕು. ಅಲ್ಲಿ ವಿಧಾನಸಭೆಯ ಚುನಾವಣೆ ನಡೆಸಬೇಕು. 370ನೇ ವಿಧಿಯನ್ನು ರದ್ದುಪಡಿಸುವ ವಿಚಾರದಲ್ಲಿ ಅಲ್ಲಿಯ ಪ್ರಜೆಗಳ ಅಭಿಪ್ರಾಯವನ್ನು ಪಡೆದೇ ಮುಂದುವರೆಯಬೇಕು. ಅಲ್ಲಿಯ ಗಣ್ಯರ ಅಭಿಪ್ರಾಯವನ್ನು ಪಡೆಯದೇ ನಿರ್ಧಾರಕ್ಕೆ ಬಂದಿರುವುದು ಪ್ರಜಾಪ್ರಭುತ್ವ ವಿರೋಧಿ ನಡವಳಿಕೆ. ಕಣಿವೆ ರಾಜ್ಯದಲ್ಲಿನ ನಾಯಕರನ್ನು ಗೃಹಬಂಧನದಲ್ಲಿಟ್ಟು, ಸುದ್ದಿ ಮಾಧ್ಯಮಗಳನ್ನು ಅಡಗಿಸಿಟ್ಟು, ಭಾರತದ ಇತರ ಭಾಗಗಳಿಗೆ ಕಾಶ್ಮೀರದಲ್ಲಿ ಏನು ನಡೆಯುತ್ತಿದೆ ಎಂಬ ಸುದ್ದಿ ಹರಡದಂತೆ ತಡೆಗಟ್ಟಿರುವುದು ಸರಿಯಲ್ಲ ಎಂದೂ ಈ ಗಣ್ಯರು ಮೋದಿಯವರಿಗೆ ಬರೆದಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ 45 ಜನ ಗಣ್ಯರ ಮೇಲೆ ರಾಜದ್ರೋಹ ಆಪಾದನೆ ಹೊರಿಸಿ ನ್ಯಾಯಾಲಯಕ್ಕೆ ಹೋಗಿದ್ದನ್ನು ಖಂಡಿಸಿ ಚಲನಚಿತ್ರ ಪ್ರಮುಖರು, ಕಲಾವಿದರು, ಪತ್ರಿಕಾ ಪ್ರತಿನಿಧಿಗಳು ಮೊದಿಯವರಿಗೆ ಪತ್ರ ಬರೆದು ಮೋದಿಯವರ ಆಡಳಿತ ರೀತಿಯನ್ನ ಒಪ್ಪದವರ ಮೇಲೆ ರಾಜದ್ರೋಹ ಆಪಾದನೆ ಹೊರಿಸುವುದು ಎಷ್ಟು ಸರಿ? ಪ್ರಧಾನಮಂತ್ರಿಯನ್ನು ಪ್ರಶ್ನಿಸುವ ಹಕ್ಕು ಪ್ರಜೆಗಳಿಗೆ ಇಲ್ಲವೇ? ಎಂದು ನೂರಾರು ಗಣ್ಯರು ಬರೆದ ಪತ್ರಕ್ಕೆ ಪ್ರತಿಕ್ರಿಯೆಯಾಗಿ, ಆ 49 ಗಣ್ಯರ ಮೇಲೆ ಹಾಕಿದ್ದ ಮೊಕದ್ದಮೆಯನ್ನು ಹಿಂಪಡೆಯಲಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಸಂದ ಗೆಲುವು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಆಡಳಿತ ನಡೆಸುವವರು ಸರ್ವಾಧಿಕಾರಿಗಳಂತೆ ದರ್ಪದಿಂದ ನಡೆಸಿಕೊಳ್ಳುವುದನ್ನು ಭಾರತೀಯ ಜನತೆ ಮತ್ತು ಭಾರತದ ವಿಚಾರವಂತ ಗಣ್ಯರು ನಿಸ್ಸಹಾಯಕರಂತೆ, ಮೂಕಪ್ರೇಕ್ಷಕರಂತೆ ನೋಡಿ, ಕೈಕಟ್ಟಿ ಕೂಡುವುದಿಲ್ಲ. ಬದಲಿಗೆ ಸರ್ಕಾರದ ಹುಚ್ಚಾಟಗಳನ್ನು ಪ್ರತಿಭಟಿಸುತ್ತಾರೆ. ಹಿಟ್ಲರ್‍ಗಿರಿ ಬೆಳೆಯಲು ಬಿಡುವುದಿಲ್ಲ ಎಂಬುದು ಮೇಲೆ ಹೇಳಿದ ಎರಡು ಪ್ರಕರಣಗಳಿಂದ ಸಾಬೀತಾಗಿದೆ.

ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆ‘Halt the hate’ ಎಂದು ಭಾರತ ಸರ್ಕಾರಕ್ಕೆ ತಿಳಿಸಿದೆ. ದ್ವೇಷಾಪರಾಧ, ಗುಂಪು ಹಲ್ಲೆಯಂತಹ ಕೃತ್ಯಗಳು 2017-18ರಲ್ಲಿ ಕಡಿಮೆ ಇದ್ದದ್ದು 2019ರ ಮೊದಲ ಆರು ತಿಂಗಳಲ್ಲಿ ಅತಿಹೆಚ್ಚು ಘಟನೆಗಳು ನಡೆದಿವೆ.

2015ರಲ್ಲಿ ದ್ವೇಷಾಪರಾಧಗಳು 51 ಇತ್ತು. 2016ರಲ್ಲಿ 240, 2017ರಲ್ಲಿ 212, 2018ರಲ್ಲಿ 210 ಕೃತ್ಯಗಳು ಸಂಭವಿಸಿದ್ದರೆ 2019ರ ಮೊದಲ ಆರು ತಿಂಗಳಲ್ಲೇ 180 ಕೃತ್ಯಗಳು ನಡೆದಿವೆ. ಇದು ಅತ್ಯಂತ ಆತಂಕಕಾರಿ ಬೆಳವಣಿಗೆ ಎಂದು ಹೇಳಿ ಆಮ್ನೆಸ್ಟಿ ತನ್ನ ಕಳವಳ ವ್ಯಕ್ತಪಡಿಸಿದೆ. ನಡೆದಿರುವ ಒಟ್ಟು 180 ಪ್ರಕರಣಗಳಲ್ಲಿ ಧರ್ಮದ ಹೆಸರಿನಲ್ಲಿ 44 ಕೃತ್ಯಗಳು ನಡೆದಿವೆ. ಈ ಪೈಕಿ 40 ಪ್ರಕರಣಗಳು ಮುಸ್ಲಿಮರ ಮೇಲೆ, 4 ಕೃತ್ಯಗಳು ಕ್ರಿಶ್ಚಿಯನ್ನರ ಮೇಲೆ ನಡೆದಿವೆ. ಮೋದಿ ಇದುವರೆಗೂ ಈ ದುಷ್ಕೃತ್ಯ ನಡೆಯುತ್ತಿದ್ದರೂ ಒಮ್ಮೆಯೂ ಅದರ ಬಗೆಗೆ ಬಾಯಿ ಬಿಟ್ಟಿಲ್ಲ. ಮೋದಿಯ ಈ ದಿವ್ಯ ಮೌನವನ್ನು ದುಷ್ಕೃತ್ಯ ನಡೆಯುತ್ತಿರುವುದಕ್ಕೆ ಮೋದಿಯವರ ಸಮ್ಮತಿ ಇದೆಯೆಂದು ಅರ್ಥೈಸಬೇಕಾದಿತು.

ಇದಲ್ಲದೆ 2000 ದಿಂದ 2018ರ ನಡುವೆ ಭಾರತದಲ್ಲಿ ಕರ್ತವ್ಯನಿರತರಾಗಿದ್ದ 64 ಪತ್ರಕರ್ತರ ಹತ್ಯೆ ಆಗಿದೆ. ಪತ್ರಕರ್ತರ ವಿರುದ್ಧ ವಿವಿಧ ಅಪರಾಧ ಪ್ರಕರಣಗಳನ್ನು ದಾಖಲಿಸಲಾಗಿದೆ. 12 ರಾಜ್ಯಗಳಲ್ಲಿ 2000-2018ರ ಮಧ್ಯೆ ತಮ್ಮ ವಿಮರ್ಶಾತ್ಮಕ ಬರವಣಿಗೆಗಾಗಿ 21 ಪತ್ರಕರ್ತರ ಮೇಲೆ ಖಟ್ಲೆ ಹೂಡಲಾಗಿದೆ. 2017ರ ಸೆಪ್ಟಂಬರ್‌ 5 ರಂದು ತಮ್ಮ ಮನೆಗೆ ಪ್ರವೇಶ ಮಾಡುವಾಗಲೇ ‘ಗೌರಿ ಲಂಕೇಶ್’ ಪತ್ರಿಕೆಯ ಸಂಪಾದಕಿ ಗೌರಿ ಲಂಕೇಶ್‍ರನ್ನು ಹತ್ಯೆ ಮಾಡಲಾಯಿತು. ಹಾಗೂ 2018ರ ಜೂನ್14 ರಂದು ರೈಸಿಂಗ್ ಕಾಶ್ಮೀರದ ಸಂಪಾದಕರಾದ ಶುಜಾತ್ ಬುಕಾರಿಯವರ ಹತ್ಯೆಯಾಯಿತು. ಹಲ್ಲೆಗೊಳಗಾದ 65 ಪತ್ರಕರ್ತರ ವ್ಯಕ್ತಿ ವಿವರಗಳನ್ನು ‘Silencing Journalists’ ಎಂಬ ಪುಸ್ತಕದಲ್ಲಿ ದಾಖಲಿಸಲಾಗಿದೆ.

ಒಟ್ಟಿನಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲಾ ವರ್ಗದ ಜನರ ಮೇಲೂ ಹಲ್ಲೆ ಮಾಡುವುದು ಅಧಿಕಗೊಂಡಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...