Homeಮುಖಪುಟನೋಟು ನಿಷೇಧದಿಂದ ಉದ್ಯಮಿಯೊಬ್ಬ ಟೀ ಮಾರುವ ಪರಿಸ್ಥಿತಿಗೆ ಬಂದ ಕಥೆ...

ನೋಟು ನಿಷೇಧದಿಂದ ಉದ್ಯಮಿಯೊಬ್ಬ ಟೀ ಮಾರುವ ಪರಿಸ್ಥಿತಿಗೆ ಬಂದ ಕಥೆ…

ಯುವ ಉದ್ಯಮಿಯೊಬ್ಬ ಇಂದು ಚಹಾ ಅಂಗಡಿ ಮತ್ತು ರೆಸ್ಟೋರೆಂಟ್‌ನಲ್ಲಿ ಅಡುಗೆ ಮತ್ತು ಡೆಲವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಕಾರಣ 2016 ರಲ್ಲಿ ಭಾರತ ಸರ್ಕಾರವು ರಾತ್ರೋರಾತ್ರಿ ಘೋಷಿಸಿದ ನೋಟ್ ಬ್ಯಾನ್.

- Advertisement -
- Advertisement -

24 ನೇ ವಯಸ್ಸಿನಲ್ಲಿ ನಿಜೀಶ್ ಸಹದೇವನ್ ಅವರ ಜೀವನವು ತುಂಬಾ ಆರಾಮದಾಯಕವಾಗಿದ್ದವು. ಕೇರಳದ ತ್ರಿಶೂರ್‌ನಲ್ಲಿ ನೈಸರ್ಗಿಕ ರಸಗೊಬ್ಬರಗಳನ್ನು ತಯಾರಿಸುವ ಎಸ್‌ವಿಆರ್ ಆಗ್ರೋ ಪ್ರಾಡಕ್ಟ್ಸ್ ಕಂಪನಿಯ ಮಾಜಿ ಮಾಲೀಕರಾದ ಅವರು ಯೋಗ್ಯ ಲಾಭ ಗಳಿಸುತ್ತಾ 462 ಉದ್ಯೋಗಿಗಳಿಗೆ ಕೆಲಸ ನೀಡಿದ್ದರು.

“ನಾನು 18 ವರ್ಷದವನಿದ್ದಾಗ ವ್ಯವಹಾರವನ್ನು ಪ್ರಾರಂಭಿಸಿದೆ. ನನ್ನ ರಸಗೊಬ್ಬರವೂ ಸಸ್ಯಗಳಿಗೆ, ಬೇರುಗಳಿಗೆ, ಎಲೆಗಳಿಗೆ ಮತ್ತು ತರಕಾರಿಗಳ ಮೇಲೆ ಬಳಸಬಹುದಾದ ಅತ್ಯಂತ ಪರಿಣಾಮಕಾರಿ ಪಾಚಿ ಆಧಾರಿತ ಹಸಿರು ಗೊಬ್ಬರವಾಗಿದೆ. ಆದರೆ ಈಗ ನನ್ನಲ್ಲಿ ಉಳಿದಿರುವುದು ಉತ್ಪನ್ನದ ಪೇಟೆಂಟ್ ಮಾತ್ರ” ಎಂದು ನಿಜೀಶ್ ಸಹದೇವನ್ ಹೇಳುತ್ತಾರೆ.

ಬ್ಯಾಚುಲರ್ ಇನ್ ಟೆಕ್ನಾಲಜಿ (ಬಿಟೆಕ್) ಮುಗಿಸಿ, ತನ್ನ ಉತ್ಪನ್ನದ ಪ್ರಯೋಜನಗಳನ್ನು ಕಂಡುಕೊಂಡ ನಂತರ ನಿಜೀಶ್ ಸಹದೇವನ್ ತಾನೊಬ್ಬ ಉದ್ಯಮಿಯಾಗಲು ನಿರ್ಧರಿಸಿದರು. ಈ ರಸಗೊಬ್ಬರವು ಹ್ಯೂಮಿಕ್ ಆಮ್ಲದ ಜೊತೆ ಸಸ್ಯಶಾಸ್ತ್ರೀಯ ಪೋಷಕಾಂಶಗಳು, ಸಾಗರದ ಮತ್ತು ಪ್ರಾಣಿಯ ಪ್ರೋಟೀನ್‌ಗಳೊಂದಿಗೆ ಸಂಯೋಜಿಸಿದ್ದರಿಂದ ಅದು ಗರಿಷ್ಠ ಬೆಳೆ ಉತ್ಪಾದನೆಗೆ ಕಾರಣವಾಗುವಂತೆ ತಯಾರಿಸಲಾಗಿತ್ತು.

“ಕೇರಳ ಸರ್ಕಾರದ ಸಣ್ಣ ಮತ್ತು ಮಧ್ಯಮ ಉದ್ಯಮ ಯೋಜನೆಯ ಕಾರ್ಯಕ್ರಮದಡಿಯ ಸಹಾಯದಿಂದ ಕೆಲವೇ ಸಾವಿರ ರುಪಾಯಿಗಳ ಹೂಡಿಕೆಯೊಂದಿಗೆ ನನ್ನ ಉದ್ಯಮವನ್ನು ಪ್ರಾರಂಭಿಸಿದೆ. ನನ್ನ ಉತ್ಪನ್ನದ ಒಂದು ಬಾಟಲಿಗೆ 500 ರೂ ವೆಚ್ಚವಾಗುತ್ತಿತ್ತು ಹಾಗೂ 2,000 ಸಸ್ಯಗಳಲ್ಲಿ ಬಳಸಬಹುದಾಗಿತ್ತು” ಎಂದು ನಿಜೀಶ್ ಸಹದೇವನ್ ವಿವರಿಸುತ್ತಾರೆ. ಅವರ ಉತ್ಪನ್ನವನ್ನು ರೈತರು ಸ್ವೀಕರಿಸುವುರ ಮೂಲಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿ 250 ಸಿಬ್ಬಂದಿಯನ್ನು ನೇಮಿಸಿ ವ್ಯವಹಾರವನ್ನು ವಿಸ್ತರಿಸಲು ಸಹಾಯ ಮಾಡಿತು. ನಿಜೀಶ್ ಸಹದೇವನ್ “ಉತ್ಪನ್ನವು ಅದ್ಭುತವಾಗಿದ್ದರಿಂದ ಅದು ತುಂಬಾ ವೇಗವಾಗಿ ಮಾರಾಟವಾಯಿತು” ಎಂದು ಹೇಳುತ್ತಾರೆ.

ಇಂದು 32 ವರ್ಷದ ಅವರು ತನ್ನ ಲಕ್ಷಾಂತರ ಹಣವನ್ನು ಕಳೆದುಕೊಂಡಿದ್ದಾರೆ. ದುಬೈನ ಕರಾಮಾದಲ್ಲಿರುವ “ಎರಾನೊಜ್ಲಿ ಮೂಸಕಂಡೆ ಚಾಯಕ್ಕಡ” ಎಂಬ ಚಹಾ ಅಂಗಡಿ ಮತ್ತು ರೆಸ್ಟೋರೆಂಟ್‌ನಲ್ಲಿ ಅಡುಗೆ ಮತ್ತು ಡೆಲವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಕಾರಣ 2016 ರಲ್ಲಿ ಭಾರತ ಸರ್ಕಾರವು ರಾತ್ರೋರಾತ್ರಿ ಘೋಷಿಸಿದ ನೋಟ್ ಬ್ಯಾನ್. ಇದರಿಂದಾಗಿ ನಿಜೀಶ್ ಸಹದೇವನ್ ಜೀವನವೇ ಅಲ್ಲೋಲಕಲ್ಲೋಲವಾಗಿದೆ.

ತನ್ನ ವ್ಯವಹಾರದಲ್ಲಿ ಹೆಚ್ಚು ಹೂಡಿಕೆ ಮಾಡಿದ್ದ ನಿಜೀಶ್ ಗಲ್ಫ್ ಮೂಲದ ದೊಡ್ಡ ಗ್ರಾಹಕರನ್ನು ಕಳೆದುಕೊಂಡ ನಂತರ, ತಮಿಳುನಾಡಿನ ಪೊಲ್ಲಾಚಿಯಲ್ಲಿರುವ ತನ್ನ ಉತ್ಪಾದನಾ ಘಟಕವನ್ನು ಮಾರಾಟ ಮಾಡಬೇಕಾಯಿತು. ನಂತರ ತನ್ನ ಎಲ್ಲ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿ ಅವರ ಪೂರ್ವಜರ ಮನೆಯನ್ನು ಸಹ ಮಾರಾಟ ಮಾಡಿದರು. “ನನ್ನ ವ್ಯವಹಾರವನ್ನು ಬೆಳೆಸಲು ನಾನು ತೆಗೆದುಕೊಂಡ ಬ್ಯಾಂಕ್ ಸಾಲಗಳನ್ನು ಮರುಪಾವತಿಸಲು ನನ್ನ ತಂದೆಯನ್ನು ಸಮಾಧಿ ಮಾಡಿದ ಭೂಮಿಯನ್ನು ಸಹಃ ನಾನು ಮಾರಾಟ ಮಾಡಬೇಕಾಯಿತು” ಎಂದು ನಿಜೀಶ್ ಸಹದೇವನ್ ವಿವರಿಸಿದರು.

“ನಾನು ಪರೋಟ ಬೇಯಿಸುತ್ತೇನೆ, ಚಹಾ ತಯಾರಿಸುತ್ತೇನೆ ಮತ್ತು ರೆಸ್ಟೋರೆಂಟ್‌ನಲ್ಲಿ ಡೆಲೆವರಿ ಮಾಡುತ್ತೇನೆ” ಎಂದು ಅವರು ಹೇಳುತ್ತಾರೆ. ಈಗ ಕೆಲಸ ಸಿಕ್ಕಿರುವುದರಿಂದ “ನನ್ನ ಬಾಲ್ಯದ ಗೆಳೆಯನಿಗೆ ಧನ್ಯವಾದಗಳು” ಎಂದು ಈ ಕೇರಳಿಗ ತಮ್ಮ ಕಥೆಯನ್ನು ದುಬೈ ಪತ್ರಿಕೆ “ಖಲೀಜ್ ಟೈಮ್ಸ್” ಜೊತೆ ಹಂಚಿಕೊಂಡಿದ್ದಾರೆ.

ಕಷ್ಟದ ಸಮಯ

“2016 ರಲ್ಲಿ, ಗಲ್ಫ್ ಮೂಲದ ಹೊಸ ಗ್ರಾಹಕರು ನನ್ನ ಉತ್ಪನ್ನವನ್ನು ಟನ್ನುಗಳ ಲೆಕ್ಕದಲ್ಲಿ ಕೊಳ್ಳುತ್ತೇವೆ ಎಂದು ಒಪ್ಪಿದ್ದರಿಂದ, ನಾನು 3 ಕೋಟಿ ರೂ ಸಾಲವನ್ನು ಪಡೆದು ಇನ್ನೂ ಐದು ಕಾರ್ಖಾನೆಗಳನ್ನು ತೆರೆದೆ” ಎಂದು ಅವರು ವಿವರಿಸುತ್ತಾರೆ. ಮುಂದಿನ 10 ವರ್ಷಗಳಲ್ಲಿ ದೊಡ್ಡ ಮಟ್ಟದಲ್ಲಿ ಲಾಭ ಗಳಿಸುವ ಲೆಕ್ಕಹಾಕುತ್ತಾ, ಸಹದೇವನ್ ತನ್ನ ವ್ಯವಹಾರವನ್ನು ವಿಸ್ತರಿಸಲು ಪ್ರಾರಂಭಿಸಿದರು.

“ನನ್ನ ಇಡೀ ಜೀವನವು ನವೆಂಬರ್ 2016 ರಲ್ಲಿ ನಿಂತುಹೋಯಿತು. ನೋಟು ಅಮಾನ್ಯೀಕರಣದಿಂದಾಗಿ ರಾತ್ರೋರಾತ್ರಿ ಗ್ರಾಹಕರು ಕೊಳ್ಳಲು ಹಿಂದೆ ಸರಿದರು. ಬೃಹತ್ ಮಟ್ಟದಲ್ಲಿ ಉತ್ಪಾದನೆಯಾಗಿತ್ತು, ಆದರೆ ಅದನ್ನು ಕೊಳ್ಳಲು ಯಾರೂ ಇರಲಿಲ್ಲ” ಎಂದು ಅವರು ಹೇಳುತ್ತಾರೆ. ಬ್ಯಾಂಕುಗಳಿಗೆ ಸಾಲ ಮರುಪಾವತಿ ಮಾಡುವ ಅನಿವಾರ್ಯತೆ ಬಂದಾಗ ಸಹದೇವನ್ ತನ್ನ ಒಡೆತನದ ಎಲ್ಲವನ್ನೂ ಮಾರಾಟ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದರು.

ರಕ್ಷಣೆಗೆ ಬಂದ ಬಾಲ್ಯದ ಗೆಳೆಯ

ತನ್ನ ಮಾಜಿ ಪತ್ನಿಯೊಂದಿಗೆ  ವಿಚ್ಛೇದನದ ನಂತರ, ಸಹದೇವನ್ ಅವರ ಬಾಲ್ಯ ಸ್ನೇಹಿತ ದುಬೈ ಮೂಲದ ಉದ್ಯಮಿ ಅಬ್ದುಲ್ ರಶೀದ್ ದುಬೈಗೆ ಹೋಗುವಂತೆ ಸೂಚಿಸಿದರು. ಆಗ ರಶೀದ್ ತಮ್ಮ ಉದ್ಯಮವನ್ನು ಆಹಾರ ಮತ್ತು ಪಾನೀಯ ಕ್ಷೇತ್ರಕ್ಕೆ ವಿಸ್ತರಿಸುವ ಯೋಜನೆಯನ್ನು ಹೊಂದಿದ್ದರು. “ಅವನು ನನ್ನ ಅವಸ್ಥೆಯನ್ನು ನೋಡಿ, ಆದಷ್ಟು ಬೇಗ ನನಗಾಗಿ ಈ ಚಹಾ ಅಂಗಡಿಯನ್ನು ಮಾಡಿ ಕೊಟ್ಟ. ರಶೀದ್ ನನಗೆ ದೇವರಿದ್ದಂತೆ. ಅಂದು ಅವನು ಇಲ್ಲದಿರುತ್ತಿದ್ದರೆ, ನಾನು ಇಲ್ಲಿ ಇರುತ್ತಿರಲಿಲ್ಲ. ಅವನು ನನ್ನನ್ನು ಮೇಲಕ್ಕೆತ್ತಿದ” ಎನ್ನುತ್ತಾರಲ್ಲದೆ ಇಂದು ನಾನು ನನ್ನ ಸಾಲಗಳನ್ನು ಮರುಪಾವತಿಸಿದ್ದೇನೆ ಮತ್ತು ನನ್ನ ವಯಸ್ಸಾದ ತಾಯಿಗೆ ಮನೆ ಮಾಡಿ ಕೊಟ್ಟಿದ್ದೇನೆ ಎನ್ನುತ್ತಾರೆ.

ಎಷ್ಟರಮಟ್ಟಿಗೆಂದರೆ, ಸಹದೇವನ್ ತನ್ನ ಐಫೋನ್‌ನಲ್ಲಿ ರಶೀದ್ ಹೆಸರನ್ನು ‘ಗಾಡ್’ ಎಂದು ಸೇವ್ ಮಾಡಿಟ್ಟುಕೊಂಡಿದ್ದಾರೆ. ಆರು ತಿಂಗಳಷ್ಟೇ ಆಗಿರುವ ಇವರ ರೆಸ್ಟೋರೆಂಟ್ ಚಹಾ, ತಿಂಡಿಗಳು ಮತ್ತು ಕೇರಳದ ಮಲಬಾರ್ ಪದ್ಧತಿಯ ಅಡುಗೆಗಳು ಬಹಳ ಬೇಗನೇ ಜನಪ್ರಿಯತೆಯನ್ನು ಗಳಿಸಿವೆ. “ನಾನು ಈ ವ್ಯವಹಾರವನ್ನು ಸ್ವಲ್ಪ ಸಮಯದ ನಂತರ ಪ್ರಾರಂಭಿಸಲು ಬಯಸಿದ್ದೆ, ಆದರೆ ನಿಜೀಶ್‌ಗೆ ಬಂದ ಕಷ್ಟ ನೋಡಿ ಇದು ಸರಿಯಾದ ಸಮಯ ಎಂದು ನಿರ್ಧರಿಸಿದೆ” ಎಂದು ರಶೀದ್ ಹೇಳುತ್ತಾರೆ.

ಈಗ, ಕರಮಾದ ಕಾಲುದಾರಿಗಳಲ್ಲಿರುವ ಈ ಪುಟ್ಟ ಚಹಾ ಅಂಗಡಿಯು ಯುಎಇಯಲ್ಲಿ ಯಶಸ್ವಿ ಬ್ರಾಂಡ್ ಆಗಿ ಬೆಳೆಯುತ್ತದೆ ಎಂದು ಸಹದೇವನ್ ಆಶಿಸಿದ್ದಾರೆ. ಅವರು ತಮ್ಮ ಜೀವನ ಕಥೆಯನ್ನು ಚಲನಚಿತ್ರವನ್ನಾಗಿ ಪರಿವರ್ತಿಸುವ ಆಶಯವನ್ನೂ ಹೊಂದಿದ್ದಾರೆ. “ನನ್ನ ಬಿಡುವಿನ ವೇಳೆಯಲ್ಲಿ ನಾನು ಚಲನಚಿತ್ರ ಸ್ಕ್ರಿಪ್ಟ್‌ಗಳನ್ನು ಬರೆಯುತ್ತೇನೆ. ಒಂದು ದಿನ ಚಲನಚಿತ್ರ ನಿರ್ಮಾಪಕನಾಗಲು ನಾನು ಬಯಸುತ್ತೇನೆ” ಎಂದು ಅವರು ಹೇಳುತ್ತಾರೆ.

ಅನುವಾದ: ಬಾಪು

ಕೃಪೆ: ಖಲೀಜ್ ಟೈಮ್ಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...