Homeಮುಖಪುಟನೋಟು ನಿಷೇಧದಿಂದ ಉದ್ಯಮಿಯೊಬ್ಬ ಟೀ ಮಾರುವ ಪರಿಸ್ಥಿತಿಗೆ ಬಂದ ಕಥೆ...

ನೋಟು ನಿಷೇಧದಿಂದ ಉದ್ಯಮಿಯೊಬ್ಬ ಟೀ ಮಾರುವ ಪರಿಸ್ಥಿತಿಗೆ ಬಂದ ಕಥೆ…

ಯುವ ಉದ್ಯಮಿಯೊಬ್ಬ ಇಂದು ಚಹಾ ಅಂಗಡಿ ಮತ್ತು ರೆಸ್ಟೋರೆಂಟ್‌ನಲ್ಲಿ ಅಡುಗೆ ಮತ್ತು ಡೆಲವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಕಾರಣ 2016 ರಲ್ಲಿ ಭಾರತ ಸರ್ಕಾರವು ರಾತ್ರೋರಾತ್ರಿ ಘೋಷಿಸಿದ ನೋಟ್ ಬ್ಯಾನ್.

- Advertisement -
- Advertisement -

24 ನೇ ವಯಸ್ಸಿನಲ್ಲಿ ನಿಜೀಶ್ ಸಹದೇವನ್ ಅವರ ಜೀವನವು ತುಂಬಾ ಆರಾಮದಾಯಕವಾಗಿದ್ದವು. ಕೇರಳದ ತ್ರಿಶೂರ್‌ನಲ್ಲಿ ನೈಸರ್ಗಿಕ ರಸಗೊಬ್ಬರಗಳನ್ನು ತಯಾರಿಸುವ ಎಸ್‌ವಿಆರ್ ಆಗ್ರೋ ಪ್ರಾಡಕ್ಟ್ಸ್ ಕಂಪನಿಯ ಮಾಜಿ ಮಾಲೀಕರಾದ ಅವರು ಯೋಗ್ಯ ಲಾಭ ಗಳಿಸುತ್ತಾ 462 ಉದ್ಯೋಗಿಗಳಿಗೆ ಕೆಲಸ ನೀಡಿದ್ದರು.

“ನಾನು 18 ವರ್ಷದವನಿದ್ದಾಗ ವ್ಯವಹಾರವನ್ನು ಪ್ರಾರಂಭಿಸಿದೆ. ನನ್ನ ರಸಗೊಬ್ಬರವೂ ಸಸ್ಯಗಳಿಗೆ, ಬೇರುಗಳಿಗೆ, ಎಲೆಗಳಿಗೆ ಮತ್ತು ತರಕಾರಿಗಳ ಮೇಲೆ ಬಳಸಬಹುದಾದ ಅತ್ಯಂತ ಪರಿಣಾಮಕಾರಿ ಪಾಚಿ ಆಧಾರಿತ ಹಸಿರು ಗೊಬ್ಬರವಾಗಿದೆ. ಆದರೆ ಈಗ ನನ್ನಲ್ಲಿ ಉಳಿದಿರುವುದು ಉತ್ಪನ್ನದ ಪೇಟೆಂಟ್ ಮಾತ್ರ” ಎಂದು ನಿಜೀಶ್ ಸಹದೇವನ್ ಹೇಳುತ್ತಾರೆ.

ಬ್ಯಾಚುಲರ್ ಇನ್ ಟೆಕ್ನಾಲಜಿ (ಬಿಟೆಕ್) ಮುಗಿಸಿ, ತನ್ನ ಉತ್ಪನ್ನದ ಪ್ರಯೋಜನಗಳನ್ನು ಕಂಡುಕೊಂಡ ನಂತರ ನಿಜೀಶ್ ಸಹದೇವನ್ ತಾನೊಬ್ಬ ಉದ್ಯಮಿಯಾಗಲು ನಿರ್ಧರಿಸಿದರು. ಈ ರಸಗೊಬ್ಬರವು ಹ್ಯೂಮಿಕ್ ಆಮ್ಲದ ಜೊತೆ ಸಸ್ಯಶಾಸ್ತ್ರೀಯ ಪೋಷಕಾಂಶಗಳು, ಸಾಗರದ ಮತ್ತು ಪ್ರಾಣಿಯ ಪ್ರೋಟೀನ್‌ಗಳೊಂದಿಗೆ ಸಂಯೋಜಿಸಿದ್ದರಿಂದ ಅದು ಗರಿಷ್ಠ ಬೆಳೆ ಉತ್ಪಾದನೆಗೆ ಕಾರಣವಾಗುವಂತೆ ತಯಾರಿಸಲಾಗಿತ್ತು.

“ಕೇರಳ ಸರ್ಕಾರದ ಸಣ್ಣ ಮತ್ತು ಮಧ್ಯಮ ಉದ್ಯಮ ಯೋಜನೆಯ ಕಾರ್ಯಕ್ರಮದಡಿಯ ಸಹಾಯದಿಂದ ಕೆಲವೇ ಸಾವಿರ ರುಪಾಯಿಗಳ ಹೂಡಿಕೆಯೊಂದಿಗೆ ನನ್ನ ಉದ್ಯಮವನ್ನು ಪ್ರಾರಂಭಿಸಿದೆ. ನನ್ನ ಉತ್ಪನ್ನದ ಒಂದು ಬಾಟಲಿಗೆ 500 ರೂ ವೆಚ್ಚವಾಗುತ್ತಿತ್ತು ಹಾಗೂ 2,000 ಸಸ್ಯಗಳಲ್ಲಿ ಬಳಸಬಹುದಾಗಿತ್ತು” ಎಂದು ನಿಜೀಶ್ ಸಹದೇವನ್ ವಿವರಿಸುತ್ತಾರೆ. ಅವರ ಉತ್ಪನ್ನವನ್ನು ರೈತರು ಸ್ವೀಕರಿಸುವುರ ಮೂಲಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿ 250 ಸಿಬ್ಬಂದಿಯನ್ನು ನೇಮಿಸಿ ವ್ಯವಹಾರವನ್ನು ವಿಸ್ತರಿಸಲು ಸಹಾಯ ಮಾಡಿತು. ನಿಜೀಶ್ ಸಹದೇವನ್ “ಉತ್ಪನ್ನವು ಅದ್ಭುತವಾಗಿದ್ದರಿಂದ ಅದು ತುಂಬಾ ವೇಗವಾಗಿ ಮಾರಾಟವಾಯಿತು” ಎಂದು ಹೇಳುತ್ತಾರೆ.

ಇಂದು 32 ವರ್ಷದ ಅವರು ತನ್ನ ಲಕ್ಷಾಂತರ ಹಣವನ್ನು ಕಳೆದುಕೊಂಡಿದ್ದಾರೆ. ದುಬೈನ ಕರಾಮಾದಲ್ಲಿರುವ “ಎರಾನೊಜ್ಲಿ ಮೂಸಕಂಡೆ ಚಾಯಕ್ಕಡ” ಎಂಬ ಚಹಾ ಅಂಗಡಿ ಮತ್ತು ರೆಸ್ಟೋರೆಂಟ್‌ನಲ್ಲಿ ಅಡುಗೆ ಮತ್ತು ಡೆಲವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಕಾರಣ 2016 ರಲ್ಲಿ ಭಾರತ ಸರ್ಕಾರವು ರಾತ್ರೋರಾತ್ರಿ ಘೋಷಿಸಿದ ನೋಟ್ ಬ್ಯಾನ್. ಇದರಿಂದಾಗಿ ನಿಜೀಶ್ ಸಹದೇವನ್ ಜೀವನವೇ ಅಲ್ಲೋಲಕಲ್ಲೋಲವಾಗಿದೆ.

ತನ್ನ ವ್ಯವಹಾರದಲ್ಲಿ ಹೆಚ್ಚು ಹೂಡಿಕೆ ಮಾಡಿದ್ದ ನಿಜೀಶ್ ಗಲ್ಫ್ ಮೂಲದ ದೊಡ್ಡ ಗ್ರಾಹಕರನ್ನು ಕಳೆದುಕೊಂಡ ನಂತರ, ತಮಿಳುನಾಡಿನ ಪೊಲ್ಲಾಚಿಯಲ್ಲಿರುವ ತನ್ನ ಉತ್ಪಾದನಾ ಘಟಕವನ್ನು ಮಾರಾಟ ಮಾಡಬೇಕಾಯಿತು. ನಂತರ ತನ್ನ ಎಲ್ಲ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿ ಅವರ ಪೂರ್ವಜರ ಮನೆಯನ್ನು ಸಹ ಮಾರಾಟ ಮಾಡಿದರು. “ನನ್ನ ವ್ಯವಹಾರವನ್ನು ಬೆಳೆಸಲು ನಾನು ತೆಗೆದುಕೊಂಡ ಬ್ಯಾಂಕ್ ಸಾಲಗಳನ್ನು ಮರುಪಾವತಿಸಲು ನನ್ನ ತಂದೆಯನ್ನು ಸಮಾಧಿ ಮಾಡಿದ ಭೂಮಿಯನ್ನು ಸಹಃ ನಾನು ಮಾರಾಟ ಮಾಡಬೇಕಾಯಿತು” ಎಂದು ನಿಜೀಶ್ ಸಹದೇವನ್ ವಿವರಿಸಿದರು.

“ನಾನು ಪರೋಟ ಬೇಯಿಸುತ್ತೇನೆ, ಚಹಾ ತಯಾರಿಸುತ್ತೇನೆ ಮತ್ತು ರೆಸ್ಟೋರೆಂಟ್‌ನಲ್ಲಿ ಡೆಲೆವರಿ ಮಾಡುತ್ತೇನೆ” ಎಂದು ಅವರು ಹೇಳುತ್ತಾರೆ. ಈಗ ಕೆಲಸ ಸಿಕ್ಕಿರುವುದರಿಂದ “ನನ್ನ ಬಾಲ್ಯದ ಗೆಳೆಯನಿಗೆ ಧನ್ಯವಾದಗಳು” ಎಂದು ಈ ಕೇರಳಿಗ ತಮ್ಮ ಕಥೆಯನ್ನು ದುಬೈ ಪತ್ರಿಕೆ “ಖಲೀಜ್ ಟೈಮ್ಸ್” ಜೊತೆ ಹಂಚಿಕೊಂಡಿದ್ದಾರೆ.

ಕಷ್ಟದ ಸಮಯ

“2016 ರಲ್ಲಿ, ಗಲ್ಫ್ ಮೂಲದ ಹೊಸ ಗ್ರಾಹಕರು ನನ್ನ ಉತ್ಪನ್ನವನ್ನು ಟನ್ನುಗಳ ಲೆಕ್ಕದಲ್ಲಿ ಕೊಳ್ಳುತ್ತೇವೆ ಎಂದು ಒಪ್ಪಿದ್ದರಿಂದ, ನಾನು 3 ಕೋಟಿ ರೂ ಸಾಲವನ್ನು ಪಡೆದು ಇನ್ನೂ ಐದು ಕಾರ್ಖಾನೆಗಳನ್ನು ತೆರೆದೆ” ಎಂದು ಅವರು ವಿವರಿಸುತ್ತಾರೆ. ಮುಂದಿನ 10 ವರ್ಷಗಳಲ್ಲಿ ದೊಡ್ಡ ಮಟ್ಟದಲ್ಲಿ ಲಾಭ ಗಳಿಸುವ ಲೆಕ್ಕಹಾಕುತ್ತಾ, ಸಹದೇವನ್ ತನ್ನ ವ್ಯವಹಾರವನ್ನು ವಿಸ್ತರಿಸಲು ಪ್ರಾರಂಭಿಸಿದರು.

“ನನ್ನ ಇಡೀ ಜೀವನವು ನವೆಂಬರ್ 2016 ರಲ್ಲಿ ನಿಂತುಹೋಯಿತು. ನೋಟು ಅಮಾನ್ಯೀಕರಣದಿಂದಾಗಿ ರಾತ್ರೋರಾತ್ರಿ ಗ್ರಾಹಕರು ಕೊಳ್ಳಲು ಹಿಂದೆ ಸರಿದರು. ಬೃಹತ್ ಮಟ್ಟದಲ್ಲಿ ಉತ್ಪಾದನೆಯಾಗಿತ್ತು, ಆದರೆ ಅದನ್ನು ಕೊಳ್ಳಲು ಯಾರೂ ಇರಲಿಲ್ಲ” ಎಂದು ಅವರು ಹೇಳುತ್ತಾರೆ. ಬ್ಯಾಂಕುಗಳಿಗೆ ಸಾಲ ಮರುಪಾವತಿ ಮಾಡುವ ಅನಿವಾರ್ಯತೆ ಬಂದಾಗ ಸಹದೇವನ್ ತನ್ನ ಒಡೆತನದ ಎಲ್ಲವನ್ನೂ ಮಾರಾಟ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದರು.

ರಕ್ಷಣೆಗೆ ಬಂದ ಬಾಲ್ಯದ ಗೆಳೆಯ

ತನ್ನ ಮಾಜಿ ಪತ್ನಿಯೊಂದಿಗೆ  ವಿಚ್ಛೇದನದ ನಂತರ, ಸಹದೇವನ್ ಅವರ ಬಾಲ್ಯ ಸ್ನೇಹಿತ ದುಬೈ ಮೂಲದ ಉದ್ಯಮಿ ಅಬ್ದುಲ್ ರಶೀದ್ ದುಬೈಗೆ ಹೋಗುವಂತೆ ಸೂಚಿಸಿದರು. ಆಗ ರಶೀದ್ ತಮ್ಮ ಉದ್ಯಮವನ್ನು ಆಹಾರ ಮತ್ತು ಪಾನೀಯ ಕ್ಷೇತ್ರಕ್ಕೆ ವಿಸ್ತರಿಸುವ ಯೋಜನೆಯನ್ನು ಹೊಂದಿದ್ದರು. “ಅವನು ನನ್ನ ಅವಸ್ಥೆಯನ್ನು ನೋಡಿ, ಆದಷ್ಟು ಬೇಗ ನನಗಾಗಿ ಈ ಚಹಾ ಅಂಗಡಿಯನ್ನು ಮಾಡಿ ಕೊಟ್ಟ. ರಶೀದ್ ನನಗೆ ದೇವರಿದ್ದಂತೆ. ಅಂದು ಅವನು ಇಲ್ಲದಿರುತ್ತಿದ್ದರೆ, ನಾನು ಇಲ್ಲಿ ಇರುತ್ತಿರಲಿಲ್ಲ. ಅವನು ನನ್ನನ್ನು ಮೇಲಕ್ಕೆತ್ತಿದ” ಎನ್ನುತ್ತಾರಲ್ಲದೆ ಇಂದು ನಾನು ನನ್ನ ಸಾಲಗಳನ್ನು ಮರುಪಾವತಿಸಿದ್ದೇನೆ ಮತ್ತು ನನ್ನ ವಯಸ್ಸಾದ ತಾಯಿಗೆ ಮನೆ ಮಾಡಿ ಕೊಟ್ಟಿದ್ದೇನೆ ಎನ್ನುತ್ತಾರೆ.

ಎಷ್ಟರಮಟ್ಟಿಗೆಂದರೆ, ಸಹದೇವನ್ ತನ್ನ ಐಫೋನ್‌ನಲ್ಲಿ ರಶೀದ್ ಹೆಸರನ್ನು ‘ಗಾಡ್’ ಎಂದು ಸೇವ್ ಮಾಡಿಟ್ಟುಕೊಂಡಿದ್ದಾರೆ. ಆರು ತಿಂಗಳಷ್ಟೇ ಆಗಿರುವ ಇವರ ರೆಸ್ಟೋರೆಂಟ್ ಚಹಾ, ತಿಂಡಿಗಳು ಮತ್ತು ಕೇರಳದ ಮಲಬಾರ್ ಪದ್ಧತಿಯ ಅಡುಗೆಗಳು ಬಹಳ ಬೇಗನೇ ಜನಪ್ರಿಯತೆಯನ್ನು ಗಳಿಸಿವೆ. “ನಾನು ಈ ವ್ಯವಹಾರವನ್ನು ಸ್ವಲ್ಪ ಸಮಯದ ನಂತರ ಪ್ರಾರಂಭಿಸಲು ಬಯಸಿದ್ದೆ, ಆದರೆ ನಿಜೀಶ್‌ಗೆ ಬಂದ ಕಷ್ಟ ನೋಡಿ ಇದು ಸರಿಯಾದ ಸಮಯ ಎಂದು ನಿರ್ಧರಿಸಿದೆ” ಎಂದು ರಶೀದ್ ಹೇಳುತ್ತಾರೆ.

ಈಗ, ಕರಮಾದ ಕಾಲುದಾರಿಗಳಲ್ಲಿರುವ ಈ ಪುಟ್ಟ ಚಹಾ ಅಂಗಡಿಯು ಯುಎಇಯಲ್ಲಿ ಯಶಸ್ವಿ ಬ್ರಾಂಡ್ ಆಗಿ ಬೆಳೆಯುತ್ತದೆ ಎಂದು ಸಹದೇವನ್ ಆಶಿಸಿದ್ದಾರೆ. ಅವರು ತಮ್ಮ ಜೀವನ ಕಥೆಯನ್ನು ಚಲನಚಿತ್ರವನ್ನಾಗಿ ಪರಿವರ್ತಿಸುವ ಆಶಯವನ್ನೂ ಹೊಂದಿದ್ದಾರೆ. “ನನ್ನ ಬಿಡುವಿನ ವೇಳೆಯಲ್ಲಿ ನಾನು ಚಲನಚಿತ್ರ ಸ್ಕ್ರಿಪ್ಟ್‌ಗಳನ್ನು ಬರೆಯುತ್ತೇನೆ. ಒಂದು ದಿನ ಚಲನಚಿತ್ರ ನಿರ್ಮಾಪಕನಾಗಲು ನಾನು ಬಯಸುತ್ತೇನೆ” ಎಂದು ಅವರು ಹೇಳುತ್ತಾರೆ.

ಅನುವಾದ: ಬಾಪು

ಕೃಪೆ: ಖಲೀಜ್ ಟೈಮ್ಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...