Homeಮುಖಪುಟಸಾವರ್ಕರ್:‌ ಸಂಘಪರಿವಾರಕ್ಕೆ ಅಸ್ತ್ರವೋ, ದೌರ್ಬಲ್ಯವೋ - ಕ್ಷಮಾಪಣೆ ಪತ್ರಗಳು ಹೇಳುವ ಸತ್ಯಗಳು

ಸಾವರ್ಕರ್:‌ ಸಂಘಪರಿವಾರಕ್ಕೆ ಅಸ್ತ್ರವೋ, ದೌರ್ಬಲ್ಯವೋ – ಕ್ಷಮಾಪಣೆ ಪತ್ರಗಳು ಹೇಳುವ ಸತ್ಯಗಳು

“..ಕೊನೆಗೆ, ನಾನು 1911 ರಲ್ಲಿ ನನ್ನನ್ನು ಕ್ಷಮಿಸಿ ಜೈಲಿನಿಂದ ಬಿಡುಗಡೆ ಮಾಡಲು ಬರೆದ ಕ್ಷಮಾಪಣ ಪತ್ರ ಮತ್ತು ಅದನ್ನು ಭಾರತದ ಸರ್ಕರಕ್ಕೆ ರವಾನಿಸಲಾಗಿರುವ ಬಗ್ಗೆ ಇಲ್ಲಿ ಸ್ವಾಮಿಗಳಿಗೆ ನೆನಪಿಸಿ, ಅದನ್ನು ಪರಿಗಣಿಸುವಂತೆ……” 

- Advertisement -
- Advertisement -

ಸಂಘ ಪರಿವಾರದವರಿಗೆ ಯಾರ ಮೇಲಾದರೂ ದಾಳಿ ಮಾಡಿ, ಅವರನ್ನು ಬಲಿಪಶು ಮಾಡಬೇಕು ಎಂದಾಗಲೆಲ್ಲಾ  ಕೆಲವು ಅಸ್ತ್ರಗಳನ್ನು ಬಳಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಅವರಿಗೆ ಹೆಗಲು ಕೊಡುವುದು ವಿ ಡಿ ಸಾವರ್ಕರ್. ‘ಸಾವರ್ಕರ್ ಬಗೆಗೆ ಅವರು ನೀಡಿರುವ ಹೇಳಿಕೆ ನೋಡಿ, ‘ಅಂತಹ ಅಪ್ರತಿಮ ವೀರ’ನನ್ನು ಹೇಡಿ ಅಂದಿದ್ದಾರೆ’ ಎನ್ನುವುದರಿಂದ ಪ್ರಾರಂಭವಾಗಿ, ಹೇಗೆ ಸಾವರ್ಕರ್ ಬ್ರಿಟಿಷರಿಗೆ ಚಳ್ಳೆಹಣ್ಣು ತಿನ್ನಿಸಿ ಅಂಡಮಾನ್ ನಿಕೋಬಾರ್ ದ್ವೀಪದ ಜೈಲಿನಿಂದ ಸಮುದ್ರಕ್ಕೆ ಜಿಗಿದು ಒಬ್ಬನೇ ಈಜಾಡಿ ತಪ್ಪಿಸಿಕೊಂಡು ಬಂದು ಸ್ವಾತಂತ್ರ್ಯ ಹೋರಾಟ ಮಾಡಿದ” ಎಂಬ ಸುಳ್ಳು ಸುದ್ದಿಯವರೆಗೂ ಅದು ಹಬ್ಬುತ್ತದೆ.

ವೀರ ಎಂದು ಕರೆಯುವುದಕ್ಕೆ ಒಬ್ಬೊಬ್ಬರು ಒಂದೊಂದು ಮಾನದಂಡ ಬಳಸಬಹುದು ಹಾಗೆಯೇ ಹೇಡಿ ಎನ್ನುವುದಕ್ಕೂ ಹಲವು ಮಾನದಂಡಗಳಿವೆ. ಒಟ್ಟಿನಲ್ಲಿ ಸಾವರ್ಕರ್ ಬ್ರಿಟಿಷರಿಗೆ ಹಲವಾರು ಬಾರಿ ಕ್ಷಮಾಪಣ ಅರ್ಜಿ ಬರೆದುಕೊಟ್ಟು, ತನ್ನನ್ನು ಕ್ಷಮಿಸುವಂತೆ ಬೇಡಿಕೊಂಡು, ಬ್ರಿಟಿಷರ ಕೃಪೆಯಿಂದ ಜೈಲಿನಿಂದ ಬಿಡುಗಡೆ ಹೊಂದಿದ ಬಳಿಕ ಯಾವುದೇ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಳ್ಳದೆ ಇದ್ದದ್ದು ಮಾತ್ರ ಸಂಘ ಪರಿವಾರದವರಿಗೆ ನುಂಗಲಾರದ ತುತ್ತಾಗಿದೆ. ಹೇಡಿ ಎಂಬ ಮಾತು ನುಂಗಲಾಗದೆ, ವೀರ ಎಂಬ ಮಾತು ಗಂಟಲಲ್ಲಿ ಸಿಕ್ಕಿಹಾಕಿಕೊಂಡಂತೆ.

ಲಂಡನ್ ನಲ್ಲಿ ಜುಲೈ 1, 1909 ರಂದು ಬ್ರಿಟಿಷ್‌ ಅಧಿಕಾರಿ ಸರ್ ವಿಲಿಯಮ್ ಕರ್ಜನ್ ವೈಲಿಯನ್ನು ಮದನ್ ಲಾಲ್ ಧಿಂಗ್ರ ಗುಂಡಿಟ್ಟು ಕೊಂದಿದ್ದ. ಇದರಲ್ಲಿ ಸಾವರ್ಕರ್ ಕೈವಾಡ ಇದೆ ಎಂದು ಬ್ರಿಟಿಶ್ ಅಧಿಕಾರಿಗಳು ಶಂಕಿಸಿದ್ದರೂ, ಕೈವಾಡ ಸಾಬೀತುಪಡಿಸಲು ಹೆಚ್ಚಿನ ದಾಖಲೆಗಳು ಇಲ್ಲದೆ ಸಾವರ್ಕರ್ ತಪ್ಪಿಸಿಕೊಂಡಿದ್ದರು. ಸಾವರ್ಕರ್ ನಿಧನದ ನಂತರ, ತಾವು ಬರೆದಿದ್ದ ಸಾರ್ವರ್ಕರ್ ಜೀವನ ಚಿತ್ರಣವನ್ನು ಪರಿಷ್ಕರಿಸಿದ ಮಹಾರಾಷ್ಟ್ರದ ಲೇಖಕ ಧನಂಜಯ್ ಕೀರ್ ಅವರು, ಧಿಂಗ್ರ ಅವರಿಗೆ ರಿವಾಲ್ವರ್ ಕೊಟ್ಟದ್ದು, ಅವರನ್ನು ತರಬೇತುಮಾಡಿದ್ದು ಸಾವರ್ಕರ್ ಅವರೇ ಎಂಬ ಸಂಗತಿಗಳನ್ನು ದಾಖಲಿಸಿದ್ದಾರೆ.

ಬಾಂಬ್ ಶೇಖರಣೆ ಪ್ರಕರಣದಲ್ಲಿ ಸಾವರ್ಕರ್ ಅವರ ಅಣ್ಣ ಅಭಿನವ್ ಭಾರತ ಸಂಘಟನೆಯ ಸದಸ್ಯ ಗಣೇಶ್ ಸಾವರ್ಕರ್ ಸಿಕ್ಕಿಬಿದ್ದು, ಅವರನ್ನು ಅಂಡಮಾನ್ ನಿಕೋಬಾರ್ ಜೈಲಿಗೆ ಕಳುಹಿಸುವ ಜೂನ್ 8, 1909ರ ತೀರ್ಪನ್ನು ವಿರೋಧಿಸಿ, ಅವನ ಸಹಚರರು ಸೇಡಿಗೆ ಮುಂದಾಗುತ್ತಾರೆ. ನಾಸಿಕ್ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಎಎಂಟಿ ಜಾಕ್ಸನ್ ಅವರನ್ನು ಅನಂತ್ ಖನ್ಹೆರೆ ಗುಂಡಿಕ್ಕಿ ಕೊಲ್ಲುತ್ತಾನೆ. ಖನ್ಹೆರೆ ಸಹಚರರನ್ನು ವಿಚಾರಣೆಗೆ ಒಳಪಡಿಸಿ, ಸಾವರ್ಕರ್ ಪತ್ರಗಳನ್ನು ವಶಪಡಿಸಿಕೊಳ್ಳುವ ಪೊಲೀಸರಿಗೆ, ಜಾಕ್ಸನ್ ಅವರನ್ನು ಕೊಲ್ಲಲು ಬಳಸಿರುವ ಪಿಸ್ತೂಲು ಸೇರಿದಂತೆ 20 ಪಿಸ್ತೂಲುಗಳನ್ನು ಇಂಗ್ಲೆಂಡಿನಿಂದ ಭಾರತಕ್ಕೆ ಸಾವರ್ಕರ್ ಕಳುಹಿಸಿರುವ ವಿಷಯ ಸಾಬೀತಾಗಿ, ಲಂಡನ್‌ಗೆ ಬಂಧನದ ವಾರಂಟ್ ಅನ್ನು ಟೆಲಿಗ್ರಾಫ್ ಮೂಲಕ ಕಳುಹಿಸಲಾಗುತ್ತದೆ. ಆಗ ಮಾರ್ಚ್ 13, 1910 ರಂದು ಪೊಲೀಸರ ವಶಕ್ಕೆ ಒಪ್ಪಿಸಿಕೊಳ್ಳುವ ಸಾವರ್ಕರ್‌ನನ್ನು ಭಾರತಕ್ಕೆ ಕರೆತರಲಾಗುತ್ತದೆ.

ಜಾಕ್ಸನ್ ಕೊಲೆ ಮತ್ತು ರಾಜನ ವಿರುದ್ಧ ಯುದ್ಧದ ಕಾರಣಕ್ಕೆ ಸಾವರ್ಕರ್ ಗೆ 50 ವರ್ಷಗಳ ಎರಡು ಅವಧಿಗಳ ಕಠಿಣ ಸಜೆಯಾಗಿ, ಜುಲೈ, 4, 1911ಕ್ಕೆ ಪೋರ್ಟ್ ಬ್ಲೇರ್ ಜೈಲಿಗೆ ಕರೆತರಲಾಗುತ್ತದೆ.

ಪೋರ್ಟ್ ಬ್ಲೇರ್ ಜೈಲಿನಲ್ಲಿ ಕಠಿಣ ಸಜೆಗೆ ಗುರಿಯಾಗುವ ಸಾವರ್ಕರ್ ಅವರಿಗೆ ಕ್ರಾಂತಿಕಾರಿ ಮನೋಭಾವ ಕುಸಿದು ಹೋಗುತ್ತದೆ. 1911 ರಲ್ಲಿ ಕ್ಷಮಾಪಣೆ ನೀಡುವಂತೆ ಬ್ರಿಟಿಷ್‌ ಅಧಿಕಾರಿಗಳಿಗೆ ಸಾವರ್ಕರ್ ಅರ್ಜಿ ಸಲ್ಲಿಸುತ್ತಾರೆ. ಈ ಪತ್ರದ ಪಠ್ಯ ಸದ್ಯಕ್ಕೆ ಲಭ್ಯವಿಲ್ಲದೇ ಹೋದರೂ, ಮತ್ತೊಮ್ಮೆ ಕ್ಷಮಾಪಣೆ ಕೇಳಿ ನವೆಂಬರ್ 14, 1913 ರಂದು ಬ್ರಿಟಿಶರಿಗೆ ಸಲ್ಲಿಸುವ ಅರ್ಜಿಯಲ್ಲಿ,

“..ಕೊನೆಗೆ, ನಾನು 1911 ರಲ್ಲಿ ನನ್ನನ್ನು ಕ್ಷಮಿಸಿ ಜೈಲಿನಿಂದ ಬಿಡುಗಡೆ ಮಾಡಲು ಬರೆದ ಕ್ಷಮಾಪಣ ಪತ್ರ ಮತ್ತು ಅದನ್ನು ಭಾರತದ ಸರ್ಕರಕ್ಕೆ ರವಾನಿಸಲಾಗಿರುವ ಬಗ್ಗೆ ಇಲ್ಲಿ ಸ್ವಾಮಿಗಳಿಗೆ ನೆನಪಿಸಿ, ಅದನ್ನು ಪರಿಗಣಿಸುವಂತೆ……”

ಎಂದು ಬರೆಯುವಾಗ ಅವರು 1911ರಲ್ಲಿಯೇ ಕ್ಷಮಾಪಣೆ ಕೇಳಿದ ಉಲ್ಲೇಖವಿದೆ. ಬ್ರಿಟಿಶರ ವಿರುದ್ಧ ಹೋರಾಡಿ, ಧೈರ್ಯವಾಗಿ ನೇಣುಕುಣಿಕೆಗೆ ಅರ್ಪಿಸಿಕೊಂಡ ಭಗತ್ ಸಿಂಗ್‌ ಅಂತಹ ಕ್ರಾಂತಿಕಾರಿಗಳನ್ನು ಅಧ್ಯಯನ ಮಾಡಿರುವ ಹಲವು ಸಂಶೋಧಕರು ಹೇಳುವ ಮಾತೆಂದರೆ, ಕ್ರಾಂತಿಕಾರಿಗಳು ತಾವು ವಿರೋಧಿಸಿದ ಪ್ರಭುತ್ವದ ಜೊತೆಗೆ ಸಂಧಾನ ಮಾಡಿಕೊಂಡು ಕ್ಷಮಾಪಣೆ ಕೇಳುವ ಮನೋಭಾವ ಇಟ್ಟುಕೊಳ್ಳುವುದಿಲ್ಲ ಎನ್ನುವುದು ವಿಶೇಷ.

1911ರ ಕ್ಷಮಾಪಣ ಅರ್ಜಿಯನ್ನು ಬ್ರಿಟಿಷರು ಪುರಸ್ಕರಿಸದೆ ಹೋದರೂ, ಸಾವರ್ಕರ್ ಅವರಿಗೆ ಜೈಲಿನಲ್ಲಿ ಕಷ್ಟಕರವಾದ ಕೆಲಸಗಳನ್ನು ಕೊಡುವ ಬದಲು, ಅಲ್ಲಿನ ಕೆಲವು ಕೆಲಸಗಳಿಗೆ ಮೇಲ್ವಿಚಾರಕನನ್ನಾಗಿ ನೇಮಿಸಿಕೊಳ್ಳುತ್ತಾರೆ. ಇದರ ಬಗ್ಗೆ ತಮ್ಮ ಬರಹದಲ್ಲಿ ಪ್ರತಿಕ್ರಿಯಿಸಿರುವ ವಕೀಲ ಮತ್ತು ಇತಿಹಾಸಕಾರ ಎ ಜಿ ನೂರಾನಿ ಅವರು “ತಮ್ಮನ್ನು ಮತ್ತು ತಮ್ಮ ನಾಡನ್ನು ಬಂಧಿಸಿದವರು ಕೊಡುವ ಇಂತಹ ‘ಗೌರವ’ವನ್ನು ಕೆಲವೇ ಕೆಲವು ಕ್ರಾಂತಿಕಾರರಷ್ಟೇ ಒಪ್ಪಿಕೊಳ್ಳುತ್ತಿದ್ದರು” ಎನ್ನುತ್ತಾರೆ.

1911, 1913, 1914, 1918 ಮತ್ತು 1920 ನೆಯ ಇಸವಿಗಳಲ್ಲಿ ಸಾವರ್ಕರ್ ಕ್ಷಮಾಪಣೆ ಅರ್ಜಿಗಳನ್ನು ಬ್ರಿಟಿಷರಿಗೆ ಸಲ್ಲಿಸಿದ ದಾಖಲೆಗಳಿವೆ. ಅವುಗಳಲ್ಲಿ 1913 ಮತ್ತು 1920ರ ಅರ್ಜಿಗಳ ಸಂಪೂರ್ಣ ಪಠ್ಯಗಳು ಇಂದಿಗೂ ಲಭ್ಯವಿವೆ.

1920ರಲ್ಲಿ ಬರೆಯುವ ಪತ್ರದಲ್ಲಿ ಸಾವರ್ಕರ್ ಬ್ರಿಟಿಷ್‌ ಅಧಿಕಾರಿಗಳನ್ನು ಹೀಗೆ ಬೇಡಿಕೊಳ್ಳುತ್ತಾರೆ “.. ಸರ್ಕಾರ ನನ್ನ ಮತ್ತು ನನ್ನ ಸಹೋದರಿಂದ ಇನ್ನೂ ಹೆಚ್ಚಿನ ಭದ್ರತೆ ನಿರೀಕ್ಷಿಸುವುದಾದರೆ, ಸರ್ಕಾರ ತಿಳಿಸುವ ನಿಖರ ಸಮಯದವರೆಗೆ ನಾವು ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂಬ ಮುಚ್ಚಳಿಕೆಯನ್ನು ಬರೆದುಕೊಡುತ್ತೇವೆ” ಎಂದು ಹೇಳುತ್ತಾರೆ.

“…… ನಮ್ಮ ಬಿಡುಗಡೆಯ ನಂತರ ಪ್ರಭುತ್ವದ ಸುರಕ್ಷತೆಗಾಗಿ ನಿಖರ ಸಮಯದವರೆಗೆ ಯಾವುದೇ ಪ್ರಾಂತ್ಯದಲ್ಲಿ ಮಾತ್ರ ಉಳಿಯುವ ಅಥವಾ ನಮ್ಮ ಚಲನವಲನಗಳನ್ನು ಪೊಲಿಸರು ವರದಿ ಮಾಡುವ ಅಥವಾ ಇನ್ಯಾವುದೆ ತಾರ್ಕಿಕ ನಿರ್ಬಂಧಗಳನ್ನು ನಾನು ಮತ್ತು ನನ್ನ ಸಹೋದರ ಸಂತೋಷದಿಂದ ಒಪ್ಪಿಕೊಳ್ಳುತ್ತೇವೆ” ಎಂದು ಕೂಡ ತಮ್ಮ ಅರ್ಜಿಯಲ್ಲಿ ಬರೆಯುತ್ತಾರೆ.

ಹಲವು ನಿರ್ಬಂಧನೆಗಳ ಮೇರೆಗೆ ಮೇ 1921 ರಂದು ಅಂಡಮಾನ್ ನಿಂದ ಪುಣೆಯ ಯರವಾಡ ಜೈಲಿಗೆ ಸ್ಥಳಾಂತರಗೊಂಡು, ಮೂರು ವರ್ಷಗಳ ನಂತರ ಷರತ್ತುಬದ್ಧ ಬಿಡುಗಡೆ ಪಡೆಯುತ್ತಾರೆ. ಸರ್ಕಾರದ ಅನುಮತಿ ಇಲ್ಲದೆ ರತ್ನಗಿರಿ ಜಿಲ್ಲೆ ಬಿಟ್ಟು ಹೋಗುವಂತಿಲ್ಲ, ಸಾರ್ವಜನಿಕವಾಗಿ ಆಗಲಿ, ಖಾಸಗಿಯಾಗಿ ಆಗಲಿ ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಿಲ್ಲ ಎಂಬ ಪ್ರಮುಖ ಷರತ್ತುಗಳನ್ನು ಸಾವರ್ಕರ್ ಒಪ್ಪಿಕೊಳ್ಳುತ್ತಾರೆ. ಈ ಷರತ್ತುಗಳು ಐದು ವರ್ಷಗಳಿಗೆ ಮಾನ್ಯವಿದ್ದು, ನಂತರ ಅವುಗಳನ್ನು ನವೀಕರಿಸುವ ನಿರ್ಭಂಧವನ್ನು ಕೂಡ ಹೇರಲಾಗುತ್ತದೆ. ಇಂತಹ ಷರತ್ತುಗಳನ್ನು ಸಂಪೂರ್ಣವಾಗಿ ಒಪ್ಪಿಕೊಂಡು ಹೊರಬರುವ ಸಾವರ್ಕರ್ ಅವರಿಗೆ ಆರೋಪಿಸುವ ವೀರತ್ವದ ಗುಣಗಳನ್ನು ಹಲವು ನಿಜವಾದ ಸ್ವಾತಂತ್ರ್ಯ ಹೋರಾಟಗಾರರು ಪ್ರಶ್ನಿಸಿಕೊಂಡು ಬಂದಿದ್ದಾರೆ.

ಜನವರಿ 30 1948ರಲ್ಲಿ ಮಹಾತ್ಮ ಗಾಂಧಿ ಅವರ ಹತ್ಯೆಯಾದಾಗ, ಫೆಬ್ರವರಿ 5ರಂದು ಸಾವರ್ಕರ್ ಅವರನ್ನು ಪೊಲೀಸ್ ವಶಕ್ಕೆ ಪಡೆಯಲಾಗುತ್ತದೆ. ಆಗ ಬಾಂಬೆ ಪೊಲೀಸ್ ಕಮಿಶನರ್ ಅವರಿಗೆ ಸಾವರ್ಕರ್ ಬರೆಯುವ ಪತ್ರದ ಕೆಲವು ಸಾಲುಗಳು ಹೀಗಿವೆ “ಸರ್ಕಾರ ನನ್ನನ್ನು ಷರತ್ತಿನ ಮೇಲೆ ಬಿಡುಗಡೆ ಮಾಡುವುದಾದರೆ, ಸರ್ಕಾರ ತಿಳಿಸುವ ಅವಧಿಯವರೆಗೂ ನಾನು ಯಾವುದೇ ಕೋಮು ಅಥವಾ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ” ಎಂದು ಬರೆಯುತ್ತಾರೆ.

ಗಾಂಧಿ ಹತ್ಯೆಯ ಎಂಟು ಆರೋಪಿಗಳ ಪೈಕಿ ಸಾವರ್ಕರ್ ಅವರೂ ಒಬ್ಬರು. ಸಾಕ್ಷ್ಯಗಳ ಕೊರತೆಯಿಂದ ಈ ಕೃತ್ಯದಲ್ಲಿ ಅವರ ಭಾಗಿತ್ವವನ್ನು ಸಾಬೀತು ಮಾಡಲಾಗದೆ ಅವರು ಖುಲಾಸೆಯಾದರು. ಗಾಂಧಿ ಹತ್ಯೆಯ ರೂವಾರಿಗಳಾದ ನಾಥೂರಾಮ ಗೋಡ್ಸೆ ಮತ್ತು ನಾರಾಯಣ್ ಆಪ್ಟೆಗೆ ಆತ್ಮೀಯರಾಗಿದ್ದರು ಹಾಗೂ ಸಾವರ್ಕರ್ ಮತ್ತು ಇವರುಗಳ ನಡುವೆ ನಡೆದ ಹಲವು ಭೇಟಿಗಳ ವಿವರಗಳು ಇಂದಿಗೂ ಬೆಳಕಿಗೆ ಬರುತ್ತಲೇ ಇವೆ. ವೀರತ್ವವನ್ನು ಸಾಬೀತುಪಡಿಸಲು ಇಷ್ಟು ಬೇಗ ಸಾಧ್ಯವಿಲ್ಲವೇನೋ!

ಮೂಲ: ಸ್ಕ್ರೋಲ್‌ ಮತ್ತಿತರ ಆಂಗ್ಲ ವೈಬ್‌ ಸೈಟ್‌ಗಳಿಂದ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. Five star hotelinalli kulitu lekhana
    baredantide. Adakke kelavarige five-star kaidi,britishraa chamchagalada nehrunantha swatantra horatagararu illi savarkarantha kalapani shikshe anubhavisiruvudu sannadagi kaanisuttade.

  2. Have been seeing and reading ur article’s.. It is been always write Against Hindus.. You try glorifying particularly about Christian and muslim related issues..

    But any issue u seem to be against the present against modi…

  3. ಸತ್ಯ ಬಹುತೇಕ ಕಟೋರವಾಗಿರುತ್ತದೆ, ಅದನ್ನು ನೀವು ಹೇಳಿದ್ದೀರ. ಧನ್ಯವಾದಗಳು.

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....