Homeಕರ್ನಾಟಕಮಕ್ಕಳ ಮನೋವಿಕಾಸಕ್ಕಾಗಿಯೇ ಸ್ಥಾಪಿತವಾದ ‘ಎಲ್ಲರ ಪುಸ್ತಕ’ ಪ್ರಕಾಶನದಿಂದ ವಿನೂತನ ಪ್ರಯೋಗ

ಮಕ್ಕಳ ಮನೋವಿಕಾಸಕ್ಕಾಗಿಯೇ ಸ್ಥಾಪಿತವಾದ ‘ಎಲ್ಲರ ಪುಸ್ತಕ’ ಪ್ರಕಾಶನದಿಂದ ವಿನೂತನ ಪ್ರಯೋಗ

ಮಕ್ಕಳಿಗಾಗಿಯೇ ಪುಸ್ತಕಗಳನ್ನು ಹೊರತರಲು ಸ್ಥಾಪಿತವಾಗಿರುವ ‘ಎಲ್ಲರ ಪುಸ್ತಕ’ ಪ್ರಕಾಶನ| ಮಕ್ಕಳ ದಿನಾಚರಣೆಯ ವಿಶೇಷ ವರದಿ

- Advertisement -
- Advertisement -

“ನನ್ನ ಮಗಳು ಸುರಗಿಗಾಗಿ ಕನ್ನಡದಲ್ಲಿ ಚಿತ್ರಪುಸ್ತಕಗಳನ್ನು ಹುಡುಕಲಾರಂಭಿಸಿದೆ. ಇಂಗ್ಲಿಷ್‌ನಲ್ಲಿ ಮಕ್ಕಳಿಗಾಗಿ ಚಿತ್ರ ಪುಸ್ತಕಗಳು ಸಿಗುತ್ತಿದ್ದವು. ಆದರೆ ಕನ್ನಡದಲ್ಲಿ ಇಲ್ಲದಿರುವುದನ್ನು ಗಮನಿಸಿದೆ. ನನ್ನ ಮಗಳಿಗಾಗಿ ಚಿತ್ರ ಪುಸ್ತಕವನ್ನು ಬರೆದೆ. ಇದೇ ಪುಸ್ತಕವನ್ನು ನನ್ನಲ್ಲಿ ಕಲಿಯುತ್ತಿದ್ದ ಮಕ್ಕಳಿಗೂ ತೋರಿಸಿದಾಗ ಆ ಮಕ್ಕಳು ಬಹಳ ಖುಷಿಪಡುತ್ತಿದ್ದರು. ಹೀಗಾಗಿ ಇಂತಹ ಪುಸ್ತಕಗಳನ್ನು ಹೊರತರಬೇಕೆಂದು ನಿರ್ಧರಿಸಿ, ‘ಎಲ್ಲರ ಪುಸ್ತಕ’ ಎಂಬ ಪ್ರಕಾಶನ ಆರಂಭಿಸಲಾಯಿತು” ಎನ್ನುತ್ತಾರೆ ಚಿತ್ರ ಕಲಾವಿದೆ, ಶಿಕ್ಷಕಿ ವನಿತಾ ಅಣ್ಣಯ್ಯ ಯಾಜಿ.

ಮೂಲತಃ ಹೊನ್ನಾವರದವರಾದ ವನಿತಾ ಯಾಜಿಯವರು ನೀನಾಸಂ ವಿದ್ಯಾರ್ಥಿಯೂ ಹೌದು.  ನೀನಾಸಂ ಮತ್ತು ಶಾಂತಿನಿಕೇತನದಲ್ಲಿ ಕಲೆ ಮತ್ತು ನಟನೆಯನ್ನು ಅಭ್ಯಾಸ ಮಾಡಿರುವ ಅವರು ತಮ್ಮ ಪತಿ ಕೈಲಾಶ್‌ ತಿಪಟೂರು ಅವರೊಂದಿಗೆ ಸೇರಿ ‘ಎಲ್ಲರ ಪುಸ್ತಕ’ ಎಂಬ ಪ್ರಕಾಶನವನ್ನು ಆರಂಭಿಸಿ ಮಕ್ಕಳಿಗಾಗಿ ಚಿತ್ರಪುಸ್ತಕಗಳನ್ನು ಹೊರತರುತ್ತಿದ್ದಾರೆ.

‘ಟೊಮೊಟೋ ಫಿಶ್‌’, ‘ಮೊದಲ ಓದು’, ‘ರುಚಿ’, ‘ನವಿಲೂರ ಸಂತೆ’, ‘ಏಕೆ ಬೇಕು ಕನ್ನಡ’, ‘ಬೀಜ’, ‘ಚಿಟ್ಟೆ’ ಎಂಬ ಚಿತ್ರಪುಸ್ತಕಗಳನ್ನು ಹೊರತರಲಾಗಿದ್ದು, ಅದರಲ್ಲಿ ‘ಚಿಟ್ಟೆ’ ಚಿತ್ರಪುಸ್ತಕವು ಮೂರನೇ ತರಗತಿಯ ಪುಟಾಣಿ ಕಾವೇರಿ ಬರೆದದ್ದಾಗಿದೆ. ಕಳೆದ ಮಾರ್ಚ್‌‌ನಲ್ಲಿ ಪ್ರಕಾಶನ ಆರಂಭವಾಗಿದ್ದು, ಹೊಸ ಪ್ರಯೋಗಗಳ ಮೂಲಕ ಮಕ್ಕಳ ಮನೋವಿಕಾಸಕ್ಕೆ ಪ್ರೋತ್ಸಾಹಿಸುತ್ತಿದೆ. ಡಿಜಿಟಲ್‌ ಕಲೆಯನ್ನು ಬಳಸದೆ ಕೈಯಲ್ಲೇ ಚಿತ್ರಗಳನ್ನು ಬರೆದು ಪ್ರಕಟಿಸುತ್ತಿರುವುದು ಮತ್ತೊಂದು ವಿಶೇಷ. ಮಕ್ಕಳಿಗೆ ಚಿತ್ರಕಲೆಯ ಮೂಲ ಪರಿಚಯವೂ ಆಗಬೇಕೆಂಬುದು ವನಿತಾ ದಂಪತಿಯ ಆಶಯ.

“ಚಿಟ್ಟೆ ಪುಸ್ತಕದ ಕರ್ತೃ ಕಾವೇರಿ, ಪೂರ್ಣ ಶಾಲೆಯಲ್ಲಿ ನನ್ನ ವಿದ್ಯಾರ್ಥಿ ಆಗಿದ್ದಳು. ಪುಟ್ಟ ಮಕ್ಕಳಿಗೆ ಪೇಪರ್, ಪೇಂಟ್ ಕೊಟ್ಟು ಇಷ್ಟಪಟ್ಟದ್ದನ್ನು ಚಿತ್ರಿಸಲು ಬಿಡುತ್ತಿದ್ದೆವು. ಏಳು ವರ್ಷದ ಮಗು ಕಾವೇರಿ ಮೂವತ್ತು ನಿಮಿಷಗಳ ತರಗತಿಯಲ್ಲಿ 15ರಿಂದ 20 ಪೇಂಟಿಂಗ್ ಮಾಡಿರುತ್ತಿದ್ದಳು. ಕಾವೇರಿಗೆ 8 ವರ್ಷವಾಗುವ ಹೊತ್ತಿಗೆ ಹೆಚ್ಚು ನಿಖರವಾಗಿ ಪೇಂಟಿಂಗ್ ಮಾಡಿ, ವಸ್ತು ವಿಷಯವನ್ನು ಒಳಗೊಂಡು ಚಿತ್ರಿಸಲು ಶುರುಮಾಡಿದಳು. ಈ ಪುಸ್ತಕ ಆಕೆ ಮೂರನೇ ತರಗತಿಯಲ್ಲಿದ್ದಾಗ ಚಿತ್ರಿಸಿದ್ದು” ಎನ್ನುತ್ತಾರೆ ವನಿತಾ ಯಾಜಿ.

ಇದನ್ನೂ ಓದಿರಿ: ಲಾಠಿ ಹಿಡಿದ ಪ್ರಧಾನಿ ನೆಹರೂ ಹಿಂಸಾನಿರತ ಗುಂಪು ಚದುರಿಸಿದ್ದನ್ನು ಮರೆಯಲಾಗದು: ಅಡ್ಮಿರಲ್ ರಾಮದಾಸ್

ಆನ್‌ಲೈನ್‌ ಮೂಲಕ ಮಕ್ಕಳಿಗೆ ತರಗತಿಗಳನ್ನು ವನಿತಾ ನಡೆಸಿಕೊಡುತ್ತಿದ್ದಾರೆ. ಕೇರಳಾ, ದೆಹಲಿಯ ಮಕ್ಕಳೂ ತರಗತಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇವರ ಚಿತ್ರಪುಸ್ತಕ ಪ್ರಯೋಗಕ್ಕೆ ಉತ್ತಮ ಪ್ರತಿಕ್ರಿಯೆಗಳೂ ವ್ಯಕ್ತವಾಗುತ್ತಿವೆ. ಈವರೆಗೆ ನಾಲ್ಕು ಪುಸ್ತಕಗಳನ್ನು ಹೊರತಂದಿದ್ದು, ಮಕ್ಕಳ ದಿನಾಚರಣೆಯಂದು (ಭಾನುವಾರ, ನವೆಂಬರ್‌‌ 14, 2021) ಮತ್ತೆ ಮೂರು ಪುಸ್ತಕಗಳನ್ನು ಎಲ್ಲರ ಪುಸ್ತಕ ಪ್ರಕಾಶನ ಪ್ರಕಟಿಸಿದೆ.

‘ಏಕೆ ಬೇಕು ಕನ್ನಡ!?’ ಪುಸ್ತಕವು ಕನ್ನಡ ಭಾಷೆಯ ಬೆಡಗು, ಕರ್ನಾಟಕದ ವೈವಿಧ್ಯತೆಯನ್ನು ಸರಳವಾಗಿ ಮಕ್ಕಳಿಗೆ ಪರಿಚಯಿಸುವ ಪುಸ್ತಕವಾಗಿದೆ. ‘ಟೊಮಾಟೊ ಫಿಶ್’ ಪ್ರಕಾಶನದ ಮೊದಲ ಕತೆ-ಚಿತ್ರ ಪುಸ್ತಕ. ‘ಚಿಟ್ಟೆ’ ಮಕ್ಕಳಲ್ಲಿ ಕಥೆಕಟ್ಟುವ, ಚಿತ್ರ ಬರೆಯುವ ಕೌಶಲವನ್ನು ಹೆಚ್ಚಿಸುವ ದೃಷ್ಟಿಯಿಂದ ಪ್ರಕಟವಾದ ಪುಸ್ತಕ.

“ನಮ್ಮ ಮೊದಲ ಎರಡು ಪುಸ್ತಕಗಳಿಂದಲೂ ಈವರೆಗೆ ಹೊಸತನ, ಗುಣಮಟ್ಟವನ್ನು ಹೆಚ್ಚಿಸಲು ಪರಿಶ್ರಮ ಪಡುತ್ತಿದ್ದೇವೆ. ನಮ್ಮ ಪುಸ್ತಕಗಳ ಪುಟವಿನ್ಯಾಸ ಮಾಡುತ್ತಿರುವ ಮನೋಜ್ ಹಾಗೂ ಎಲ್ಲಾ ಮುದ್ರಕರ ಶ್ರಮವನ್ನು ನಾವು ಇಲ್ಲಿ ನೆನೆಯಬಯಸುತ್ತೇವೆ. ಪ್ರಕಾಶನ ಪ್ರಾರಂಭವಾದ ಮೇಲೆ ನಮ್ಮ ಕಪಾಟಿನಲ್ಲಿ ಪುಸ್ತಕಗಳು ದ್ವಿಗುಣಗೊಂಡಿವೆ. ಹಲವು ಪ್ರಕಾಶಕರ ಅದ್ಭುತ ಪುಸ್ತಕಗಳು ನಮ್ಮನ್ನು ಬೆರಗುಗೊಳಿಸಿವೆ. ಕನ್ನಡದಲ್ಲಿ ಇಂಥ ಹತ್ತಾರು ಪುಸ್ತಕಗಳನ್ನು ರೂಪಿಸಬೇಕು ಎಂಬ ಉತ್ಸಾಹಕ್ಕೆ ಸ್ಫೂರ್ತಿ ನೀಡಿವೆ. ಇದರ ಫಲವಾಗಿ ಈ ಸಲದ ನಮ್ಮ ಪುಸ್ತಕಗಳು ಸುಂದರವಾಗಿ ಮೂಡಿಬಂದಿವೆ” ಎಂಬುದು ವನಿತಾ ದಂಪತಿಯ ಸಂತೃಪ್ತಿ.

ಮಕ್ಕಳಿಗಾಗಿ ಚಿತ್ರಪುಸ್ತಕಗಳನ್ನು ಪ್ರಕಟಿಸುತ್ತಿರುವ ವನಿತಾ ಯಾಜಿ, ಕೈಲಾಶ್‌ ತಿಪಟೂರು ಅವರು ತಮ್ಮ ಮಗು ಸುರಗಿಯೊಂದಿಗೆ.

“ಭಾಷೆಗೆ ಮೊದಲು ಮನುಷ್ಯ ಸಂವಹನಕ್ಕಾಗಿ ಚಿತ್ರಗಳನ್ನು ಬಿಡಿಸುತ್ತಿದ್ದ. ಬೇಟೆಯ ಸೊಗಸನ್ನು, ರೋಚಕತೆಯನ್ನು ಅಭಿನಯಿಸಿ ತೋರಿಸುತ್ತಿದ್ದ, ಚಪ್ಪಾಳೆ ಗಿಟ್ಟಿಸುತ್ತಿದ್ದ. ಪುರಾತನ ನಾಗರಿಕತೆಗಳ ಪುರಾವೆಯಂತೆ ಭೂಮಿಯ ತುಂಬ ಹಲವು ಚಿತ್ರ, ನಕಾಶೆಗಳು ಉಳಿದು ಹೋಗಿವೆ. ಚಿತ್ರ ಬರೆಯುವುದು ಆಡುವುದಕ್ಕೆ ಮೊದಲು ಮನುಷ್ಯ ಕಂಡುಕೊಂಡ ಅಭಿವ್ಯಕ್ತಿ. ಇಂದಿಗೆ ಚಿತ್ರಕಲೆಯನ್ನು ಆಡಲಾಗದ ಭಾವಗಳ ಅಭಿವ್ಯಕ್ತಿಗೆ ಬಳಸಿ ಚಿಕಿತ್ಸೆ ನೀಡುವುದಿದೆ. ಸಂತೋಷಕ್ಕೆ, ಏಕಾಗ್ರತೆಗೆ, ಕಾಲ ಕಳೆಯಲು, ಮಕ್ಕಳ ಬೆರಳುಗಳ ಸರಾಗ ಚಲನೆಗೆ, ಏನೂ ಕಾರಣವೇ ಇಲ್ಲದೆ ಚಿತ್ರ ಬರೆಯುವುದು ಎಲ್ಲಾ ವಯಸ್ಸಿನವರಿಗೂ ಅಚ್ಚು ಮೆಚ್ಚು. ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ. ಸರಿಯಾದ ಮಾರ್ಗದರ್ಶನವಿಲ್ಲದೆ, ಮುಜುಗರಕ್ಕೆ ಒಳಗಾಗಿ, ಬರೀ ಕೌಶಲವನ್ನು ಕಲೆಯೆಂದು ತಪ್ಪು ಗ್ರಹಿಸಿ ಚಿತ್ರಿಸುವುದ ಬಿಟ್ಟಿರುವ ಬಹುತೇಕ ಮಂದಿ ತಮ್ಮಗನಿಸಿದ್ದನ್ನು, ತಮ್ಮತನವನ್ನು ಚಿತ್ರಿಸಿದರೆ ನಿರಾಳವಾಗಿ ಬಿಡುತ್ತಾರೆ” ಎಂದು ಚಿತ್ರಕಲೆಯ ಮಹತ್ವವನ್ನು ವಿವರಿಸುತ್ತಾರೆ ವನಿತಾ ಯಾಜಿ.

(‘ಎಲ್ಲರ ಪುಸ್ತಕ’ ಪ್ರಕಾಶನದ ಚಿತ್ರಪುಸ್ತಕಗಳಿಗಾಗಿ ಮೊ.ಸಂ. 9141184535, ಇಮೇಲ್‌- [email protected] ಸಂಪರ್ಕಿಸಬಹುದು)


ಇದನ್ನೂ ಓದಿರಿ: ಕಿತ್ತೂರು ಕರ್ನಾಟಕಕ್ಕೆ ಉತ್ತರ ಕನ್ನಡ ಸೇರ್ಪಡೆ; ಜಿಲ್ಲೆಯಲ್ಲಿ ಗೊಂದಲ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...