Homeಕರ್ನಾಟಕಕೇರಳ ಕೇಂದ್ರಿಯ ವಿವಿ ಕನ್ನಡ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ತಮ್ಮ ಶಿಷ್ಯರನ್ನೇ ಆಯ್ಕೆ ಮಾಡಿದ ಸಂದರ್ಶಕರು:...

ಕೇರಳ ಕೇಂದ್ರಿಯ ವಿವಿ ಕನ್ನಡ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ತಮ್ಮ ಶಿಷ್ಯರನ್ನೇ ಆಯ್ಕೆ ಮಾಡಿದ ಸಂದರ್ಶಕರು: ಆರೋಪ

ಸಂದರ್ಶಕರಲ್ಲಿ ಒಬ್ಬರಾದ ಡಾ.ನಿತ್ಯಾನಂದ ಬಿ.ಶೆಟ್ಟಿಯವರು ಆಕಾಂಕ್ಷಿಗಳ ಆರೋಪವನ್ನು ಅಲ್ಲಗಳೆದಿದ್ದಾರೆ.

- Advertisement -
- Advertisement -

ಕಾಸರಗೋಡಿನಲ್ಲಿರುವ ಕೇರಳದ ಕೇಂದ್ರೀಯ ವಿಶ್ವವಿದ್ಯಾನಿಲಯ ಕನ್ನಡ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನಡೆದ ಸಂದರ್ಶನ ಪರಾದರ್ಶಕವಾಗಿರಲಿಲ್ಲ. ಸಂದರ್ಶನ ಮಾಡಿದ ಪ್ರಾಧ್ಯಾಪಕರು ತಮ್ಮ ಶಿಷ್ಯರನ್ನೇ ಹುದ್ದೆಗಳಿಗೆ ಆಯ್ಕೆ ಮಾಡಿದ್ದಾರೆ ಎಂಬ ಆರೋಪವನ್ನು ಹುದ್ದೆಯ ಆಕಾಂಕ್ಷಿಗಳು ಮಾಡಿದ್ದಾರೆ.

ಕಳೆದ ಸೆ. 5 ಮತ್ತು 6ರಂದು ನಾಲ್ಕು (ಮೂರು ಅನ್ ರಿಸರ್ವ್ಡ್, ಒಂದು ಒಬಿಸಿ) ಕನ್ನಡ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಸಂದರ್ಶನ ಮಾಡಲಾಗಿದೆ. ಆದರೆ ಸಂದರ್ಶನ ಹಲವು ಸಂದೇಹಗಳಿಗೆ ಎಡೆಮಾಡಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರ ಬರೆದಿರುವ ಹುದ್ದೆಯ ಆಕಾಂಕ್ಷಿಯಾಗಿದ್ದ ಡಾ.ಬಿ.ಎಸ್‌.ಸುದೀಪ್, “ಆಯ್ಕೆ ಮಾಡಿದ್ದ ವಿಷಯ ತಜ್ಞರ ಸಮಿತಿಯಲ್ಲಿ ಡಾ.ವಿಜಯಕುಮಾರಿ ಎಸ್.‌ ಕರಿಕಲ್‌ (ಮೈಸೂರು ವಿಶ್ವವಿದ್ಯಾನಿಲಯ), ಡಾ. ನಿತ್ಯಾನಂದ ಶೆಟ್ಟಿ (ತುಮಕೂರು ವಿಶ್ವವಿದ್ಯಾಲಯ) ಮತ್ತು ಡಾ. ಗಂಗಾಧರ್‌ (ಬೆಂಗಳೂರು ವಿಶ್ವವಿದ್ಯಾಲಯ) ಅವರು ಇದ್ದರು. ಇವರೆಲ್ಲರೂ ಸಂದರ್ಶನ ಮಾಡಿದ ರೀತಿ ಸರಿ ಇತ್ತೇ ಎಂಬ ಸಂದೇಹ ಹಲವು ಅಭ್ಯರ್ಥಿಗಳಿಗೆ ಕಾಡಿದೆ” ಎಂದಿದ್ದಾರೆ.

“ಡಾ. ನಿತ್ಯಾನಂದ ಶೆಟ್ಟಿಯವರು ತಮ್ಮ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ. ಮಾಡುತ್ತಿರುವ ಗೋವಿಂದರಾಜು ಕೆ.ಎಂ. ಇವರನ್ನು ಅನ್ ರಿಸರ್ವ್ಡ್ ಮೆರಿಟ್‌ನಲ್ಲಿ ಮೂರನೇ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ. ಆದರೆ ಈ ಅಭ್ಯರ್ಥಿಗಿಂತ ಹೆಚ್ಚಿನ ಅರ್ಹತೆ ಹೊಂದಿರುವ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಇದ್ದರು. ಅಂಥವರನ್ನು ಸಂಪೂರ್ಣ ಕಡೆಗಣಿಸಲಾಗಿದೆ” ಎಂದು ದೂರಿದ್ದಾರೆ.

“ಈ ಹಿಂದೆ ಇದೇ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಸಂಚಾಲಕರಾಗಿದ್ದ ಡಾ.ಶಿವರಾಮ ಶೆಟ್ಟಿ (ಈಗ ಭಾರತೀಯ ಭಾಷಾ ಸಂಸ್ಥಾನ (ಸಿಐಐಎಲ್) ಇಲ್ಲಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಲ್ಲಿ ಯೋಜನಾ ನಿರ್ದೇಶಕರಾಗಿದ್ದಾರೆ) ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಮುಗಿಸಿರುವ ಹೆಚ್.ಸೌಮ್ಯ (ಅನ್ ರಿಸರ್ವ್ಡ್ ಮೆರಿಟ್‌‌ನಲ್ಲಿ ಮೊದಲನೇ ಅಭ್ಯರ್ಥಿ), ಈ ಹಿಂದೆ ಇದೇ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿದ್ದ ಚೇತನ ಎಂ. (ಒಬಿಸಿ ಮೆರಿಟ್‌ನಲ್ಲಿ ಮೊದಲ ಅಭ್ಯರ್ಥಿ) ಆಯ್ಕೆಯಾಗಿದ್ದಾರೆ. ಇನ್ನು ಧರ್ಮಸ್ಥಳ ಎಸ್.ಡಿ.ಎಂ. ಕಾಲೇಜು ಉಜಿರೆಯಲ್ಲಿ ಕನ್ನಡ ಉಪನ್ಯಾಸಕರಾಗಿದ್ದ ಪ್ರವೀಣ ಪಿ. (ಅನ್ ರಿಸರ್ವ್ಡ್ ಮೆರಿಟ್ ನಲ್ಲಿ ಎರಡನೇ ಅಭ್ಯರ್ಥಿ) ಅವರ ಆಯ್ಕೆಯೂ ಅನುಮಾನ ಹುಟ್ಟಿಸುತ್ತಿದೆ” ಎಂದು ಆರೋಪಿಸಿದ್ದಾರೆ.

“ಈ ಆಯ್ಕೆ ಪ್ರಕ್ರಿಯೆಯ ಬಗ್ಗೆ ಮಾನ್ಯ ಕುಲಪತಿಯವರು, ಸಂದರ್ಶನ ಸಮಿತಿಯಲ್ಲಿದ್ದ ವಿಷಯ ತಜ್ಞರು ಪಾರರ್ಶಕವಾದ ಸ್ಪಷ್ಟತೆಯನ್ನು ಕೊಡಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇವೆ” ಎಂದು ಆಕಾಂಕ್ಷಿಗಳ ಪರವಾಗಿ ಸುದೀಪ್ ಒತ್ತಾಯಿಸಿದ್ದಾರೆ.

ಇದನ್ನೂ ಓದಿರಿ: ‘ಪಂಪ ಮಹಾಕವಿ ರಸ್ತೆ’ ಹೆಸರು ಬದಲಿಸಲು ಪ್ರಸ್ತಾವನೆ ಸಲ್ಲಿಸಿದ ಕನ್ನಡ ಸಾಹಿತ್ಯ ಪರಿಷತ್‌!

‘ನಾನುಗೌರಿ.ಕಾಂ’ ಜೊತೆ ಆಕ್ಷೇಪಗಳನ್ನು ಹಂಚಿಕೊಂಡಿರುವ ಮತ್ತೊಬ್ಬ ಆಕಾಂಕ್ಷಿ ರವಿ ಸಿದ್ಲಿಪುರ, “ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಹುದ್ದೆಯ ನೇಮಕಾತಿ ಪ್ಯಾನಲ್‌ನಲ್ಲಿದ್ದ ಮೂರು ಜನರ ಸಂದರ್ಶಕರ ವಿದ್ಯಾರ್ಥಿಗಳೇ ಆಯ್ಕೆ ಮತ್ತು ಕಾಯ್ದಿರಿಸಿದ ಪಟ್ಟಿಯಲ್ಲಿದ್ದಾರೆ. ಇದು ನಿಜಕ್ಕೂ ಅನುಮಾನಕ್ಕೆ ಎಡೆ ಮಾಡುವಂತಹದ್ದು” ಎಂದಿದ್ದಾರೆ.

“ಸಂದರ್ಶಕರ ಪ್ಯಾನಲ್ ಅಲ್ಲಿ ಇರುವ ಪ್ರಾಧ್ಯಾಪಕರ ವಿದ್ಯಾರ್ಥಿಗಳು ಇದ್ದಾಗ, ಪ್ರಾಧ್ಯಾಪಕರು ಪ್ಯಾನಲ್‌ನಿಂದ ಹೊರಗಿಡಬೇಕು. ಪ್ಯಾನಲ್‌ನಲ್ಲಿ ಇರುವ ಪ್ರಾಧ್ಯಾಪಕರು ಸ್ವಹಿತಾಸಕ್ತಿ ಮತ್ತು ಸ್ವಜನಪಕ್ಷಪಾತ ಮಾಡಿದ್ದು ಸಾಬೀತಾದರೆ ಅವರ ವಿರುದ್ಧ ಕಠಿಣ ಕ್ರಮವನ್ನು ಯುಜಿಸಿ ಕೈಗೊಳ್ಳಬೇಕು. ಸಂದರ್ಶನದ ಸಮಯದಲ್ಲಿ ಕನಿಷ್ಠ 15 ಜನ ಬೇರೆ ಬೇರೆ ವಿ.ವಿ.ಯ, ಭಿನ್ನ ವಿಷಯ ತಜ್ಞ ಪ್ರಾಧ್ಯಾಪಕರ ಎದುರು ಟ್ರಯಲ್ ಕೊಡುವ ವ್ಯವಸ್ಥೆ ಬೇಕಾಗಿದೆ. ಅವರು ಅಂಕ ಕೊಡುವ ಮೂಲಕ ಅಭ್ಯರ್ಥಿಯನ್ನು ಶಿಫಾರಸ್ಸು ಮಾಡಬೇಕು. ವಿ.ವಿ.ಯ ನೇಮಕಾತಿಯಲ್ಲಿ ಪಿಎಚ್.ಡಿ., ಬರಹಗಳಿಗೆ ಆದ್ಯತೆ ಕೊಡಬೇಕು. ಬರಹಗಳ ಮಹತ್ವವನ್ನು ಗಂಭೀರವಾಗಿ ಅವಲೋಕಿಸಬೇಕು” ಎಂದು ಒತ್ತಾಯಿಸಿದ್ದಾರೆ.

“ನೇಮಕಾತಿಯ ಸಂದರ್ಭದಲ್ಲಿ ನಡೆಯುವ ಸಂದರ್ಶನವನ್ನು ವಿಡಿಯೋ ರೆಕಾರ್ಡಿಂಗ್ ಮಾಡಬೇಕು. ಆಯ್ಕೆಯಾದ ಮೇಲೂ ಆದೇಶ ಪತ್ರ ಕೊಡುವ ಮುನ್ನ ಯುಜಿಸಿ, ರಾಜ್ಯಪಾಲರು ಮತ್ತು ಮತ್ತೊಂದು ವಿಶೇಷ ತಜ್ಞರು ಅದನ್ನು ಪರಿಶೀಲಿಸಿದ ತರುವಾಯ ಆದೇಶ ಕೊಡುವ ವ್ಯವಸ್ಥೆ ಜಾರಿಗೆ ತರಬೇಕು. ಯುಪಿಎಸ್ಸಿ ಮಾದರಿಯ ಪರೀಕ್ಷೆಯನ್ನಾದರೂ ಮಾಡಿ, ಮೇಲಿನ ಅಂಶಗಳ ಮೂಲಕ ನೇಮಕಾತಿ ಮಾಡಬಹುದು. ಪ್ಯಾನಲ್‌ನಲ್ಲಿ 3 ಜನಕ್ಕಿಂತ ಕನಿಷ್ಠ 5 ರಿಂದ 7 ಜನ ವಿಷಯ ತಜ್ಞರು ಇರಬೇಕು. ಅವರು ವಿವಿಧ ಸಾಮಾಜಿಕ ಹಿನ್ನೆಲೆಯವರಾಗಿರಬೇಕು. ತಂತಮ್ಮ ಕ್ಷೇತ್ರದಲ್ಲಿ ವಿಶೇಷ ಪರಿಣಿತಿಯನ್ನು ಹೊಂದಿರಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

“ನೇಮಕಾತಿ ಪಾರದರ್ಶಕವಾಗಿರಲಿಲ್ಲ. ಹೀಗಾಗಿ ಕೇರಳ ಹೈಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

“ಪೂರ್ವಯೋಜಿತದಂತೆ ಸಂದರ್ಶನವನ್ನು ಮಾಡಿ ಇವರೆಲ್ಲರೂ ತಮ್ಮ ವಿದ್ಯಾರ್ಥಿಗಳು ಎಂಬುದನ್ನು ಗೌಪ್ಯವಾಗಿ ಇರಿಸಿ, ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಆಯ್ಕೆ ಮಾಡಲಾಗಿದೆ. ಚೇತನ ಎಂ ಮತ್ತು ಗೋವಿಂದರಾಜು ಅವರಿಗೆ ಪಿಹೆಚ್‌ಡಿ ಪದವಿ ಇಲ್ಲ. ಆದರೂ ಅವರನ್ನು ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಹರೆಂದು ಬಿಂಬಿಸಿ ಆಯ್ಕೆ ಮಾಡಲಾಗಿದೆ. ಅದೇ ರೀತಿ ಆಯ್ಕೆ ಸಮಿತಿಯಲ್ಲಿ ಇದ್ದ ಮತ್ತೊಬ್ಬ ತಜ್ಞರಾದ ಡಾ.ಗಂಗಾಧರ್ ಅವರ ಪ್ರೀತಿಯ ವಿದ್ಯಾರ್ಥಿ ಮುನಿರಾಜ್ ಅವರು ಕಾಯ್ದಿರಿಸಿದ ಪಟ್ಟಿಯಲ್ಲಿ ಇರುವುದು ವಿಶೇಷವಾಗಿದೆ. ತಮ್ಮ ತಮ್ಮ ವಿದ್ಯಾರ್ಥಿಗಳನ್ನೇ ಆಯ್ಕೆ ಮಾಡುವ ಈ ಘನಕಾರ್ಯಕ್ಕೆ ಸಂದರ್ಶನದ ನಾಟಕವನ್ನು ಹೇಗೆ ಮಾಡಬೇಕಿತ್ತು?” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿರಿ: ಕನ್ನಡದಲ್ಲಿ ಬರೆದಿದ್ದ ಚೆಕ್‌ ಅಮಾನ್ಯ: ಎಸ್‌ಬಿಐಗೆ 85 ಸಾವಿರ ರೂ. ದಂಡ

ವಾಟ್ಸ್‌ಅಪ್‌ ಗ್ರೂಪ್‌ವೊಂದರಲ್ಲಿ ಆಗಿರುವ ಚರ್ಚೆಯನ್ನು ಹಂಚಿಕೊಂಡಿರುವ ಅವರು, “ಸಾಮಾಜಿಕ ಜಾಲತಾಣದಲ್ಲಿ ತುಮಕೂರು ವಿವಿಯ, ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಪ್ರೊ.ಅಣ್ಣಮ್ಮ ಅವರು ಗೋವಿಂದ ರಾಜುವಿನ ಆಯ್ಕೆ ಕುರಿತು ಸಹಕರಿಸಿದ ಪ್ರೊ. ನಿತ್ಯಾನಂದ ಶೆಟ್ಟಿ ಮತ್ತು ನೇಮಕಾತಿ ಮಂಡಳಿಯ ಸರ್ವ ಸದಸ್ಯರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಇದೂ ಅನುಮಾನಕ್ಕೆಡೆ ಮಾಡುತ್ತದೆ” ಎಂದಿದ್ದಾರೆ.

ವಾಟ್ಸ್‌ಅಪ್‌ ಗ್ರೂಪ್‌ನಲ್ಲಿ ಅಭಿನಂದನೆ ಸಲ್ಲಿಸಿರುವ ರೀತಿಯ ಕುರಿತು ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪ್ರೊ.ನಿತ್ಯಾನಂದ ಬಿ.ಶೆಟ್ಟಿಯವರ ಪ್ರತಿಕ್ರಿಯೆ

ನೇಮಕಾತಿ ಪರಾದರ್ಶಕವಾಗಿರಲಿಲ್ಲ ಎಂಬ ಆರೋಪ ಬಂದಿರುವ ಕುರಿತು, ಸಂದರ್ಶನದಲ್ಲಿದ್ದ ಡಾ.ನಿತ್ಯಾನಂದ ಬಿ.ಶೆಟ್ಟಿಯವರನ್ನು ‘ನಾನುಗೌರಿ.ಕಾಂ’ ಸಂಪರ್ಕಿಸಿತು.

ನಿತ್ಯಾನಂದ ಶೆಟ್ಟಿ ಕೃತಿ ಬಿಡುಗಡೆ | ಅವಧಿ । AVADHI
ಡಾ.ನಿತ್ಯಾನಂದ ಬಿ.ಶೆಟ್ಟಿ

ಆಕ್ಷೇಪಗಳಿಗೆ ನಿತ್ಯಾನಂದ ಬಿ.ಶೆಟ್ಟಿಯವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ:

ಕೇಂದ್ರೀಯ ವಿವಿ ಕೇರಳದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನಡೆದ ಸಂದರ್ಶನ ಸಮಿತಿಯಲ್ಲಿ ಒಟ್ಟು 09 ಸದಸ್ಯರು ಇದ್ದರು. ಅಲ್ಲಿಯ ಕುಲಪತಿ ಪ್ರೊ.‌ಎಚ್ ವೆಂಕಟೇಶ್ವರಲು, ಘನತೆವೆತ್ತ ರಾಷ್ಟ್ರಪತಿಗಳ ನಾಮನಿರ್ದೇಶನ ಸದಸ್ಯರಾದ ಪ್ರೊ. ಸಂಪತ್ ಕುಮಾರ್ ( ಫಿಲಾಸಫಿ ಪ್ರೊಫೆಸರ್, ಚೆನ್ನೈ), ನಾನು, ( ನಿತ್ಯಾನಂದ ಬಿ ಶೆಟ್ಟಿ, ತುಮಕೂರು ವಿವಿ), ಪ್ರೊ. ಬಿ ಗಂಗಾಧರ ( ಬೆಂಗಳೂರು ವಿವಿ), ಪ್ರೊ. ವಿಜಯಕುಮಾರಿ ಎಸ್ ಕರಿಕಲ್ (ಮೈಸೂರು ವಿವಿ) ಇವರಷ್ಟೇ ಅಲ್ಲದೆ ಕೇಂದ್ರೀಯ ವಿವಿ,‌ ಕೇರಳದ ವಿವಿಧ ನಿಕಾಯಗಳ ಡೀನ್ ಗಳಾದ ನಾಲ್ವರು ಹಿರಿಯ ಪ್ರಾಧ್ಯಾಪಕರೂ ಈ ಸಮಿತಿಯಲ್ಲಿ ಇದ್ದರು. ಮಾನ್ಯ ಕುಲಪತಿಗಳು ಈ ಆಯ್ಕೆ ಸಮಿತಿಯ ಅಧ್ಯಕ್ಷರು. ಇವರೆಲ್ಲರ ಸಂಪೂರ್ಣ ಸಹಮತದಿಂದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರ ಆಯ್ಕೆ ಆಗಿದೆಯೇ ಹೊರತು ಆರೋಪಿಸುವವರು ಹೇಳುವಂತೆ ‘ಸ್ವ-ಜನ ಪಕ್ಷಪಾತ’ ಎಂಬುದು ಸಂಪೂರ್ಣ ಸುಳ್ಳು.

ಗೋವಿಂದರಾಜು ಕೆ.ಎಂ. ನನ್ನ ವಿದ್ಯಾರ್ಥಿ. ತುಮಕೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ವ್ಯಾಸಂಗದ ಸಂದರ್ಭದಲ್ಲೂ ಆತ ನನ್ನ ವಿದ್ಯಾರ್ಥಿ ಮತ್ತು ” ನಾಡು-ನುಡಿಯ ರೂಪಕ : ಡಾ. ರಾಜ್ ಕುಮಾರ್ ಸಿನಿಮಾ” – ಎಂಬ ಆತನ ಪಿಎಚ್ ಡಿ ಸಂಶೋಧನೆಗೂ ನಾನೇ ಮಾರ್ಗದರ್ಶಕ. ಆತ ಓರ್ವ ಪ್ರತಿಭಾವಂತ ಕಥೆಗಾರ ಕೂಡ. ಆತನ ಕಥೆಗಳು ಪ್ರಜಾವಾಣಿ ಪತ್ರಿಕೆಯಲ್ಲೂ ಪ್ರಕಟವಾಗಿವೆ. ಮಾತ್ರವಲ್ಲದೆ ಆತನ ಕಥೆಗಳಿಗೆ ಸಾಹಿತಿ ಪ್ರಹ್ಲಾದ ಅಗಸನಕಟ್ಟೆ ಅವರ ನೆನಪಿನ ಪ್ರಶಸ್ತಿಯೂ ಒಲಿದು ಬಂದಿದೆ. ಈ ನನ್ನ ವಿದ್ಯಾರ್ಥಿ ಅರ್ಹತೆ ಉಳ್ಳವನೂ, ಯೋಗ್ಯನೂ, ಸಮರ್ಥನೂ ಆಗಿದ್ದೂ, ಸಂದರ್ಶನದಲ್ಲಿ ಸಮಿತಿಯ ಎಲ್ಲರ ಮೆಚ್ಚುಗೆ ಗಳಿಸಿ ಆಯ್ಕೆ ಆಗಿದ್ದಾನೆ. ಇದಕ್ಕೆ ನಾನು ಹೆಮ್ಮೆ ಪಡುತ್ತೇನೆ ಮತ್ತು ಸಂತೋಷ ಅನುಭವಿಸುತ್ತೇನೆಯೇ ಹೊರತು ಸಂಕೋಚ ಪಡುವ ಪ್ರಶ್ನೆಯೇ ಇಲ್ಲ. ಇದು ನನ್ನ ಅತ್ಯಂತ ಸ್ಪಷ್ಟ ಮತ್ತು ದಿಟ್ಟ ನುಡಿ.

ಇನ್ನು ಕೆಲವರು ಆತನ ಪಿಎಚ್ ಡಿ ಪ್ರಕ್ರಿಯೆಯನ್ನು ತರಾತುರಿಯಲ್ಲಿ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಇದು ಇನ್ನೊಂದು ಕಪೋಲ ಕಲ್ಪಿತ ಸಂಗತಿ. ಗೋವಿಂದರಾಜುನ ಪ್ರಿ-ಪಿಎಚ್ ಡಿ ಕೊಲೋಕ್ವಿಯಮ್ ನಡೆಸಲು ವಿಶ್ವವಿದ್ಯಾಲಯ ಏಪ್ರಿಲ್ 04, 2022ರಂದೇ ಆದೇಶ ನೀಡಿದೆ. ನಿಯಮಾವಳಿಯಂತೆ ಸೆಪ್ಟೆಂಬರ್ 9, 2022ರಂದು ಆತನ ಕೊಲೋಕ್ವಿಯಮ್ ನಡೆಸಲಾಗಿದೆ.

ಇನ್ನು ಆಯ್ಕೆ ಆದವರಿಗೆ ಪಿಎಚ್ ಡಿ ಪದವಿ ಇಲ್ಲ ಎಂಬುದರ ಬಗ್ಗೆ. ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಪಿಎಚ್‌ಡಿ ಪದವಿ ಕಡ್ಡಾಯ ಅಲ್ಲ. ರಾಷ್ಟ್ರೀಯ ಅರ್ಹತಾ ಪರೀಕ್ಷೆ ಕಡ್ಡಾಯ. ಗೋವಿಂದನಿಗೆ ಆ ಅರ್ಹತೆ ಇದೆ. ಮಾತ್ರವಲ್ಲದೆ ಆತ ಯುಜಿಸಿಯಿಂದ ಫೆಲೋಶಿಪ್ ಪಡೆಯುತ್ತಿರುವ ಸಂಶೋಧನಾರ್ಥಿ ಕೂಡ.

ನಾಲ್ಕು ಹುದ್ದೆಗಳಿಗೆ ಇಬ್ಬರು ಪಿಎಚ್‌ಡಿ ಪದವಿ ಇರುವವರು ಮತ್ತು ಇಬ್ಬರು ಪಿಎಚ್‌ಡಿ ಮಾಡುತ್ತಿರುವವರು ಆಯ್ಕೆ ಆಗಿದ್ದಾರೆ. ಇದರಲ್ಲಿ ಯಾವ ನೀತಿ-ನಿಯಮಗಳ ಉಲ್ಲಂಘನೆಯೂ ಆಗಿಲ್ಲ. ಆಯ್ಕೆ ಆದ ನಾಲ್ವರಲ್ಲಿ ಇಬ್ಬರು ಸಾಮಾನ್ಯ ವರ್ಗದವರು, (ಒಬ್ಬರು ಮಹಿಳೆ) ಚೇತನ್ ಎಂ ಎಂಬವರು ಬಿಲ್ಲವ ಜಾತಿಗೆ ಸೇರಿದ ಹಿಂದುಳಿದ ಸಮುದಾಯದವರು. ಗೋವಿಂದರಾಜು ಕೆ.ಎಂ. ಮಾದಿಗ ಸಮುದಾಯಕ್ಕೆ ಸೇರಿದವರು.

ಇದನ್ನೂ ಓದಿರಿ: ಸಾವರ್ಕರ್ ಕುರಿತ ಉತ್ಪ್ರೇಕ್ಷಿತ ಕನ್ನಡ ಪಠ್ಯಕ್ಕೆ ತೀವ್ರ ವಿರೋಧ: ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ

ಆ ಅರ್ಥದಲ್ಲೂ ಇದು ಸಾಮಾಜಿಕ ನ್ಯಾಯವನ್ನು ಮತ್ತು ಲಿಂಗೀಯ ನ್ಯಾಯವನ್ನು ಎತ್ತಿ ಹಿಡಿದ ಆಯ್ಕೆಯೇ ಆಗಿದೆ. ಈ ನಾಲ್ವರೂ ಕೇಂದ್ರೀಯ ವಿವಿ ಕೇರಳದ ಕನ್ನಡ ವಿಭಾಗವನ್ನು ಅತ್ಯಂತ ಸಶಕ್ತವಾಗಿ ಕಟ್ಟಬಲ್ಲವರು ಎಂಬ ವಿಶ್ವಾಸ ನನಗೆ ಮಾತ್ರವಲ್ಲ ಇಡೀ ಆಯ್ಕೆ ಸಮಿತಿಗೆ ಇದೆ. ಇಂತಹ ಪ್ರತಿಭಾನ್ವಿತ ಮತ್ತು ಉತ್ಸಾಹೀ ಅಧ್ಯಾಪಕರ ತರುಣ ಬಳಗವನ್ನು ರಚಿಸಿದ್ದಕ್ಕೆ ಆಯ್ಕೆ ಸಮಿತಿಯ ಸದಸ್ಯನಾಗಿ ನನಗೆ ಅಪಾರ ಸಂತೋಷ ಮತ್ತು ಪೂರ್ಣ ಪ್ರಮಾಣದ ನೆಮ್ಮದಿ ಇದೆ.

ವಿಶ್ವವಿದ್ಯಾಲಯಗಳಲ್ಲಿ, ನಮ್ಮ ಸರಕಾರಿ ನೇಮಕಾತಿಗಳಲ್ಲಿ ಯಾವ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದನ್ನು ಕಣ್ಣಾರೆ ಕಂಡ ಅನುಭವ ಇರುವ ನಮಗೆ ಕೇರಳದಲ್ಲಿ ಇಂತಹ ನಿಷ್ಕಳಂಕ ಆಯ್ಕೆ ನಡೆದಿದೆ ಎಂಬುದನ್ನು ನಂಬುವುದು ಕಷ್ಟ ಆಗಿರುವುದು ಸಹಜವೇ ಆಗಿದೆ.

ಎಂ.ಎ. ಮತ್ತು ಪಿಎಚ್ ಡಿ ಪದವೀಧರರಾಗಿ, ಪುಸ್ತಕಗಳನ್ನು ಬರೆದು ಪ್ರಕಟಿಸಿದವರಾಗಿ, ಉದ್ಯೋಗದ ನಿರೀಕ್ಷೆ ಇರುವವರಿಗೆ, ವಯೋಮಾನ ಮೀರುವ ಆತಂಕ ಇರುವವರಿಗೆ, ಅಪೇಕ್ಷಿತ ನೌಕರಿ ಸಿಗದೇ ಇದ್ದಾಗ ಬೇಸರ ಆಗುವುದೂ ಸಹಜ.‌ ಸಿಟ್ಟು ಬರುವುದೂ ಸಹಜ. ಇಂತಹುದೇ ಕಷ್ಟ-ನಷ್ಟ, ನೋವು-ನಿರಾಸೆಗಳನ್ನು ಒಂದು ಕಾಲಕ್ಕೆ ನಾನೂ ಅನುಭವಿಸಿದವನೇ. ಹತಾಶನಾದವನೇ. ಇರುವ ನಾಲ್ಕು ಹುದ್ದೆಗಳಿಗೆ 80ಕ್ಕೂ ಮಿಕ್ಕಿದ ಆಕಾಂಕ್ಷಿಗಳು ಇರುವಾಗ ಈ ಪರಿಯ ಉದ್ವಿಗ್ನ ಪ್ರತಿಕ್ರಿಯೆ ಸಹಜವೇ. ಆಯ್ಕೆ ಸಮಿತಿ ಸದಸ್ಯರ ವಿರುದ್ಧ ಆರೋಪ ಹೊರಿಸುವ ನನ್ನ ಎಲ್ಲ ಕಿರಿಯ ಗೆಳೆಯರ ಬಗ್ಗೆ ನನಗೆ ಸಹಾನುಭೂತಿ ಇದೆ. ನಮ್ಮ ವಿರುದ್ಧ ಆರೋಪ ಹೊರಿಸುತ್ತಾರೆ ಎಂಬ ಏಕೈಕ ಕಾರಣಕ್ಕೆ ಅವರ ಅಸಹಾಯಕತೆಯ ವಿರುದ್ಧ ಬಿರುನುಡಿಗಳನ್ಮು ಆಡಲು, ಅವರ ಸಿಟ್ಟನ್ನು ವ್ಯಂಗ್ಯ ಮಾಡಲು ಸಾಹಿತ್ಯ ಓದಿದ ಓರ್ವ ಅಧ್ಯಾಪಕನಾಗಿ ನನಗೆ ಖಂಡಿತವಾಗಿಯೂ ಸಾಧ್ಯ ಇಲ್ಲ.

  • ಡಾ.ನಿತ್ಯಾನಂದ ಬಿ.ಶೆಟ್ಟಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....