Homeಅಂಕಣಗಳುಪ್ರಭುತ್ವದ ಬೇಟೆಯಾಗುತ್ತಿರುವುದೇ ಪತ್ರಿಕೋದ್ಯಮ?

ಪ್ರಭುತ್ವದ ಬೇಟೆಯಾಗುತ್ತಿರುವುದೇ ಪತ್ರಿಕೋದ್ಯಮ?

"ಪತ್ರಿಕೋದ್ಯಮ ಯಾವಾಗಲೂ ಪ್ರಭುತ್ವದ ಅಧಿಕಾರದ ಕೊಕ್ಕೆಗೆ ಬಿಗಿಯಾಗಿಲ್ಲದಿದ್ದರೂ ಬೆಸೆದುಕೊಂಡ ಕೊಂಡಿಯಾಗಿಯೇ ಇತ್ತು ಆದರೆ, ಇತ್ತೀಚಿನ ವರ್ಷಗಳಲ್ಲಿ ಮತ್ತೇನೋ ಬದಲಾಯಿತು. ನಾನು ಬ್ರಿಟನ್‌ನ ರಾಷ್ಟ್ರೀಯ ದಿನಪತ್ರಿಕೆಗೆ ಸೇರಿಕೊಂಡಾಗ ಸಹಿಸಿಕೊಳ್ಳಲಾಗುತ್ತಿದ್ದ ಭಿನ್ನಾಭಿಪ್ರಾಯ, ಉದಾರಿ ಬಂಡವಾಳಶಾಹಿ ಒಂದು ರೀತಿಯ ಬಂಡವಾಳಶಾಹಿ ಸರ್ವಾಧಿಕಾರದತ್ತ ಹೊರಳಿದ ಮೇಲೆ ರೂಪಕವಾದ ಭೂಗತಕ್ಕೆ ಸರಿದಿದೆ"

- Advertisement -
- Advertisement -

ಇತ್ತೀಚಿನ ವರ್ಷಗಳಲ್ಲಿ ಕಳೆದ ಒಂದೆರಡು ವಾರಗಳು ಅತಿ ಯಾತನಾಮಯ ದಿನಗಳು. ರೈತರ ಹೋರಾಟಕ್ಕೆ ಕಪ್ಪುಮಸಿ ಬಳಿಯುವ ಹುನ್ನಾರಕ್ಕೆ ಕಾರ್ಪೊರೆಟ್ ಹಿಡಿತದ ಒಂದು ವರ್ಗದ ಮಾಧ್ಯಮ ಹಗಲಿರುಳು ಪ್ರಯತ್ನಿಸುತ್ತಿದ್ದರೆ, ಮತ್ತೊಂದೆಡೆ ರೈತರ ಮತ್ತು ಜನಸಾಮಾನ್ಯರ ಪರ ನಿಂತು ಆಡಳಿತ ವ್ಯವಸ್ಥೆಯ ದೌರ್ಜನ್ಯವನ್ನು ವರದಿ ಮಾಡುತ್ತಿದ್ದ ಅಸಲಿ ಪತ್ರಕರ್ತರ ಮತ್ತು ಅವರು ಪ್ರತಿನಿಧಿಸಿದ ಸಂಸ್ಥೆಗಳ ಮೇಲೆ ಮುಗಿಬೀಳಲಾಗುತ್ತಿದೆ. ಅಲ್ಲಿ ನಡೆಯುತ್ತಿರುವ ಸಂಗತಿಗಳನ್ನು ಕಂಡಿದ್ದರೆ ಮತ್ತು ಕೇಳಿದ್ದರೆ, ’ಮುಗಿಬೀಳುವುದು’ ಎಂಬ ಪದ ಅತಿ ಮೃದುವಾಗಿ ಕೇಳಿಸಿರಬಹುದು. ವರದಿಗಾರರನ್ನು ಎಳೆದಾಡಿ ಎತ್ತುಕೊಂಡು ಹೋಗುವ ಆ ದೃಶ್ಯಾವಳಿಗಳು, ದೆಹಲಿ ಪೊಲೀಸರ ದುರ್ವರ್ತನೆಯನ್ನು ಚಿತ್ರಿಸುತ್ತಿದ್ದವರ ಮೇಲೆ ಹಲ್ಲೆ, ಪೊಲೀಸರ ಮತ್ತು ಆಡಳಿತ ವ್ಯವಸ್ಥೆಯ ವಿರುದ್ಧ ಮಾಡಿದ ಟ್ವೀಟ್‌ಗಳಿಗೆ ದೇಶದ ಹಲವೆಡೆ ಕಾಪಿ-ಪೇಸ್ಟ್ ಎಫ್‌ಐಆರ್‌ಗಳು ಹೀಗೆ, ಏನೇ ಬಂದೆರಗಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕೇ ತೀರುತ್ತೇವೆ ಎಂಬ ನಿರ್ಣಯಕ್ಕೆ ಈ ದೇಶದ ಆಡಳಿತ ವ್ಯವಸ್ಥೆ ಬಂದಿರುವಂತೆ ತೋರುತ್ತದೆ. ಈ ಎಲ್ಲಾ ಘಟನಾವಳಿಗಳು ಅದಕ್ಕೆ ಸಾಕ್ಷಿಯಾಗಿ ನಿಂತಿವೆ.

’ಲೂಪಿನ್ ಎಂಬ ಫ್ರೆಂಚ್ ವೆಬ್ ಧಾರಾವಾಹಿ ಇತ್ತೀಚೆಗೆ ಬಹಳ ಜನಪ್ರಿಯವಾಗಿದೆ. ಉದ್ಯಮಿಯೊಬ್ಬ ಪೊಲೀಸರೊಂದಿಗೆ ಸೇರಿಕೊಂಡು ತನ್ನ ತಂದೆಯನ್ನು ಕೊಂದಿರುವ ಬಗ್ಗೆ ಧಾರಾವಾಹಿಯ ಪ್ರಮುಖ ಪಾತ್ರಧಾರಿ ಕಪ್ಪು ವ್ಯಕ್ತಿ ಅಸಾನ್ ಡಿಯೋಪ್, ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ತನಿಖೆ ಮಾಡುವ ಈ ಕಥೆಯಲ್ಲಿ, ದೊಡ್ಡ ಉದ್ಯಮಿಗಳ ಕ್ರೌರ್ಯ, ಜನಾಂಗೀಯ ದ್ವೇಷ, ಪೊಲೀಸರ ದುರ್ನಡತೆ-ದೌರ್ಜನ್ಯ ಎಲ್ಲವನ್ನೂ ಚಿತ್ರಿಸಲಾಗಿದೆ. ಧಾರಾವಾಹಿಯ ನಾಲ್ಕನೇ ಅಧ್ಯಾಯದಲ್ಲಿ ಮೂಡಿ ಬರುವ ಪತ್ರಕರ್ತೆಯ ಪಾತ್ರ ಇಂದಿನ ದಿನ ದಿಟ್ಟ ಪತ್ರಿಕೋದ್ಯಮ ಮತ್ತು ಪತ್ರಕರ್ತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಕನ್ನಡಿ ಹಿಡಿದಂತಿದೆ. ಈ ಕಥೆಯಲ್ಲಿನ ಉದ್ಯಮಿ ಪೆಲಿಗ್ರಿನಿ ವಿರುದ್ಧ ತನಿಖಾ ವರದಿ ಮಾಡಿದ ಕಾರಣಕ್ಕೆ, ಪತ್ರಕರ್ತೆ ಫ್ಯಾಬಿಯೇನ್ ಅವರನ್ನು ಮೂಲೆಗುಂಪು ಮಾಡಲಾಗಿದೆ. ಆಕೆಯ ವಿರುದ್ಧ ಅಪಪ್ರಚಾರ ಮಾಡಿ ಆಕೆಗೆ ಬೇರೆಲ್ಲೂ ಕೆಲಸ ಸಿಗದಂತೆ ನೋಡಿಕೊಂಡು, ತನ್ನ ನೆಚ್ಚಿನ ಕೆಲಸದಿಂದ ದೂರವುಳಿಯುವಂತೆ ಮಾಡಿ, ತನ್ನ ಮನೆಯಲ್ಲೇ ದೈಹಿಕವಾಗಿ ಮತ್ತು ಬೌದ್ಧಿಕವಾಗಿ ಕೊಳೆಯುವ ’ಅನಧಿಕೃತ’ ಶಿಕ್ಷೆ ನೀಡಲಾಗಿದೆ. ಆಕೆ ತನ್ನ ಸಾಕುನಾಯಿಗೆ ‘J’Accuse…!’ (ಫ್ರೆಂಚ್ ಪತ್ರಿಕೆಯೊಂದರ ಮುಖಪುಟದಲ್ಲಿ, ಎಮಿಲಿ ಝೋಲಾ ಅಂದಿನ ಸರ್ಕಾರದ ವಿರುದ್ಧ ಬರೆದ ಪತ್ರ) ಎಂದು ಹೆಸರಿಸಿರುತ್ತಾಳೆ. ಡಿಯೋಪ್, ಫ್ಯಾಬಿಯೇನ್‌ಳನ್ನು ಪತ್ತೆ ಹಚ್ಚಿ, ಆಕೆಗೆ ಉತ್ತೇಜನ ನೀಡಿ, ಉದ್ಯಮಿ ಪೆಲಿಗ್ರಿನಿ ಮಲೇಶಿಯಾದ ಉಗ್ರಗಾಮಿಗಳಿಗೆ ಶಸ್ತ್ರಾಸ್ತ್ರ ಮಾರಾಟ ಮಾಡುತ್ತಿರುವ ಸಾಕ್ಷ್ಯಗಳನ್ನು ಸಂಗ್ರಹಿಸಿ ಬಿಡುಗಡೆ ಮಾಡುತ್ತಾನೆ. ಆದರೆ, ಪೆಲಿಗ್ರಿನಿ ದೇಶಭಕ್ತಿಯ ನೆಪ ಒಡ್ಡಿ ರಾಷ್ಟ್ರೀಯತೆಯ ಚಿಪ್ಪಿನೊಳಗೆ ಅವಿತುಕೊಂಡು, ವಿಸಲ್ ಬ್ಲೋವರ್‌ಗಳನ್ನು ಡಿಫೇಮ್ ಮಾಡುತ್ತಾನೆ. ಹೀಗೆ ಮುಂದುವರೆಯುತ್ತದೆ…

ಬೇರೆ ಯಾವುದೋ ದೇಶದ ಒಂದು ಧಾರಾವಾಹಿಯನ್ನು ಇಲ್ಲಿ ಉದಾಹರಿಸುತ್ತಿರುವುದಕ್ಕೆ ಕಾರಣ ಇಲ್ಲದ್ದಿಲ್ಲ. ಪ್ರಭುತ್ವಗಳನ್ನು, ಲಾಭವನ್ನಷ್ಟೇ ಅರಸಿ ಉಳಿದೆಲ್ಲ ಕೇಡು ಮಾಡುವ ಬಂಡವಾಳಶಾಹಿಗಳನ್ನು ಪ್ರಶ್ನಿಸಿದ ಪತ್ರಕರ್ತರನ್ನು ತುಳಿಯುವ ಪ್ರವೃತ್ತಿ ದೇಶ ಕಾಲಗಳನ್ನು ಮೀರಿದ್ದು. ಆದರೆ ಭಾರತದಂತಹ ದೇಶಗಳಲ್ಲಿ ಅದು ವರ್ಷದಿಂದ ವರ್ಷಕ್ಕೆ ಎಗ್ಗಿಲ್ಲದೆ ಏರುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಮೇಲೆ ಹೇಳಿದ ಧಾರಾವಾಹಿಯನ್ನು ನೋಡುತ್ತಿದ್ದಂತೆ, ಮುಖಕ್ಕೆ ಹೊಡೆಯುವಂತಹ ಇತ್ತೀಚಿನ ಉದಾಹರಣೆ ಸುಳಿದು ಹೋಯಿತು. ಅತ್ತ, ಸುಳ್ಳು ಸುಳ್ಳೇ ಟಿಆರ್‌ಪಿ ಹೆಚ್ಚಿಸಿಕೊಳ್ಳುವ ಸಲುವಾಗಿ, ದೇಶದ ಮಿಲಿಟರಿ ಸಂಗತಿಗಳನ್ನು ’ಕಾಂಪ್ರಮೈಸ್ ಮಾಡಿದ ಆರೋಪ ಹೊತ್ತ ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿ, ದೇಶಭಕ್ತಿಯ ನೆಪ ಹೇಳಿಕೊಂಡು, ’ನ್ಯಾಶನಲ್ ಕಲೆಕ್ಟಿವ್’ ಕಟ್ಟುತ್ತಾ ಸ್ವರಕ್ಷಣೆಯಲ್ಲಿ ತೊಡಗಿಕೊಂಡಿದ್ದರೆ, ಉದ್ಯಮಿ ಅದಾನಿ ಸಂಸ್ಥೆಯ ಭ್ರಷ್ಟಾಚಾರದ ಬಗ್ಗೆ ಆರೋಪಿಸಿ ಬರೆದಿದ್ದ ಪರಂಜೋಯ್ ಗುಹಾ ಠಾಕುರ್ತ ಅವರ ವಿರುದ್ಧ ಗುಜರಾತಿನ ನ್ಯಾಯಾಲಯವೊಂದು ಜಾಮೀನುರಹಿತ ಬಂಧನದ ವಾರೆಂಟ್ ಹೊರಡಿಸಿತ್ತು (ಗುಜರಾತ್ ಉಚ್ಚ ನ್ಯಾಯಾಲಯ ಈ ಆದೇಶವನ್ನು ಹಲವು ಷರತ್ತುಗಳ ಮೇಲೆ ತಾತ್ಕಾಲಿಕವಾಗಿ ರದ್ದುಪಡಿಸಿದೆ). ದ ವೈರ್ ವಿರುದ್ಧ ಕೂಡ ಪ್ರಕರಣ ದಾಖಲಿಸಿದ್ದರೂ ಮತ್ತು ವರದಿ ಪ್ರಕಟಿಸಿರುವುದರ ವಿರುದ್ಧದ ಪ್ರಕರಣದಲ್ಲಿ ತೀವ್ರ ಹಿನ್ನಡೆಯುಂಟಾಗಿದ್ದರೂ, ಅದಾನಿ ಒಡೆತನದ ಸಂಸ್ಥೆ ಪರಂಜೋಯ್ ಗುಹಾ ವಿರುದ್ಧ ತೀವ್ರ ದಾಳಿ ನಡೆಸುತ್ತಾ ಬರುತ್ತಿದೆ. ಅವರು ’ಗ್ಯಾಸ್ ವಾರ್‍ಸ್’ ಪುಸ್ತಕ ಬರೆದ ನಂತರ ಅನುಭವಿಸಿದ ತೊಂದರೆಗಳು, ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ ಇಂದ ಹೊರಗೆ ಹಾಕಿಸಿಕೊಂಡ ಸಂಗತಿಗಳು ಇವೆಲ್ಲವೂ ನೆನಪಿಗೆ ಬಂದವು.

ಇವೆಲ್ಲಾ ಸಂಗತಿಗಳ ಜೊತೆಗೆ ಕೃಷಿ ಕಾಯ್ದೆಗಳ ಹಿನ್ನೆಲೆಯಲ್ಲಿ, ಕಳೆದ ಹದಿನೈದು ದಿನಗಳಲ್ಲಿ ನಡೆಯುತ್ತಿರುವ ಹಲವು ವಿದ್ಯಮಾನಗಳು ದಿಟ್ಟ ಪತ್ರಕರ್ತರ ಒಡಲಿನ ಸಂಕಟವನ್ನು ಹೆಚ್ಚಿಸುವಂತಿವೆ. ಜನವರಿ 30ರಂದು ದೆಹಲಿ ಗಡಿಯ ರೈತ ಹೋರಾಟದ ಸ್ಥಳದಲ್ಲಿ ವರದಿ ಮಾಡುತ್ತಿದ್ದ ಸ್ವತಂತ್ರ ಪತ್ರಕರ್ತ ಮಂದೀಪ್ ಪುನಿಯಾ ಅವರನ್ನು ಪೊಲೀಸರು ಎಳೆದುಕೊಂಡು ಹೋಗುವ ದೃಶ್ಯ ಆತಂಕಕಾರಿಯಾಗಿತ್ತು. ಅವರ ವಿರುದ್ಧ ಹಲವು ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದರು. ಫೆಬ್ರವರಿ 2 ರಂದು ದೆಹಲಿ ಹೈಕೋರ್ಟ್ ಅವರಿಗೆ ಜಾಮೀನು ನೀಡಿದೆಯಾದರೂ, ಕಾರ್ಪೊರೆಟ್ ಮತ್ತ ಆಡಳಿತ ವ್ಯವಸ್ಥೆಯ ನೆಕ್ಸಸ್ ಈಗ ಕೇವಲ ಜನಪ್ರಿಯ ಮತ್ತು ಮುಖ್ಯವಾಹಿನಿ ಮಾಧ್ಯಮಗಳನ್ನಷ್ಟೇ ಗುರಿಯಾಗಿಸಿಕೊಂಡಿಲ್ಲ ಬದಲಿಗೆ ಪರ್ಯಾಯ ಮಾಧ್ಯಮಗಳು ಮತ್ತು ಸ್ವತಂತ್ರ ಪತ್ರಕರ್ತರನ್ನೂ ಗುರಿಯಾಗಿಸಿಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

PC : The Quint

ಮಂದೀಪ್ ಪುನಿಯಾ ಅವರು ಕಾರವಾನ್ ಮಾಸ ಪತ್ರಿಕೆ ಮತ್ತು ಆನ್ಲೈನ್ ಸುದ್ದಿ ತಾಣಕ್ಕೆ ವರದಿ ಮಾಡುವ ಸ್ವತಂತ್ರ ಪತ್ರಕರ್ತ. ಮುಖ್ಯವಾಹಿನಿ ಮಾಧ್ಯಮಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಪ್ರಭುತ್ವಗಳು ಬೇರೆಯದೇ ವಾಮಮಾರ್ಗವನ್ನು ಅನುಸರಿಸಿದರೆ, ಇಂತಹ ಸ್ವತಂತ್ರ ಮಾಧ್ಯಮಗಳು ಮತ್ತು ಪತ್ರಕರ್ತರನ್ನು ಹಳಿಯಲು ಬಲಪ್ರಯೋಗಕ್ಕೆ ಮುಂದಾಗಿರುವುದು ಸ್ಪಷ್ಟವಾಗಿದೆ. ಆದರೆ ಸ್ವತಂತ್ರ ಮಾಧ್ಯಮಗಳು ಈ ಮುಖ್ಯವಾಹಿನಿ ಮಾಧ್ಯಮಗಳು ಸೃಷ್ಟಿಸುತ್ತಿರುವ ಆಡಳಿತ ವ್ಯವಸ್ಥೆಯ ಪರವಾದ ಪ್ರಪೋಗಾಂಡಕ್ಕೆ, ಬದಲಿ ಮತ್ತು ದಿಟ ನರೆಟಿವ್‌ಅನ್ನು ಸೃಷ್ಟಿ ಮಾಡಿ ಜನರನ್ನು ತಲುಪಲು ಸಾಧ್ಯವಾಗಿರುವುದು ಕೂಡ ಈ ದಮನ ಮಾಡುವ ಹುನ್ನಾರ ಮನನಮಾಡಿಕೊಡುತ್ತಿದೆ.

ಇಷ್ಟೇ ಅಲ್ಲದೆ, ಕಾರವಾನ್ ಸಂಪಾದಕ ವಿನೋದ್ ಜೋಸ್, ಅದೇ ಸಂಸ್ಥೆಯ ಜೊತೆ ಗುರುತಿಸಿಕೊಂಡಿರುವ ಪರೇಶ್ ನಾಥ್, ಅನಂತ ನಾಥ್, ಇಂಡಿಯಾ ಟುಡೆಯ ರಾಜದೀಪ್ ಸರ್ದೇಸಾಯಿ, ನ್ಯಾಶನಲ್ ಹೆರಾಲ್ಡ್‌ನ ಮೃನಾಲ್ ಪಾಂಡೆ, ಕ್ವಾಮಿ ಆವಾಜ್‌ನ ಝಫರ್ ಆಘ ಸೇರಿದಂತೆ ಆರು ಪತ್ರಕರ್ತರ ವಿರುದ್ಧ ಉತ್ತರಪ್ರದೇಶದಲ್ಲಿ ದೇಶದ್ರೋಹ ಪ್ರಕರಣ, ಕ್ರಿಮಿನಲ್ ಸಂಚು ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ಕಾರಣ, ಅವರು 26 ಜನವರಿಯಂದು ರೈತ ಹೋರಾಟದಲ್ಲಿ ಭಾಗಿಯಾಗಿದ್ದ ಕೃಷಿಕ ನವ್ರೀತ್ ಅವರು ಮೃತಪಟ್ಟಿದ್ದಕ್ಕೆ ಪೊಲೀಸ್ ಶೂಟಿಂಗ್ ಕಾರಣ ಎಂದು ಪ್ರತ್ಯಕ್ಷದರ್ಶಿಯ ಹೇಳಿಕೆಯನ್ನು ಆಧರಿಸಿ ಮಾಡಿದ ಟ್ವೀಟ್. ಶವಪರೀಕ್ಷೆ ಮುಗಿದ ನಂತರವೂ, ಮೃತರ ಸಂಬಂಧಿಕರು ಪೊಲೀಸ್ ಶೂಟಿಂಗ್ ಬಗ್ಗೆ ಆರೋಪಿಸಿದ್ದಾರೆ. ಅದನ್ನು ವರದಿ ಮಾಡಿದ್ದಕ್ಕೆ ಈಗ ದಿ ವೈರ್‌ನ ಸಿದ್ಧಾರ್ಥ್ ವರದರಾಜನ್ ಅವರ ಮೇಲೆಯೂ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆಯಿಂದ ಇದು ನಿಜವಲ್ಲ ಎಂದು ಸಾಬೀತಾಗಬಹುದು ಅಥವಾ ಇಲ್ಲದಿರಬಹುದು, ಆದರೆ ಪ್ರತ್ಯಕ್ಷದರ್ಶಿಯ ಹೇಳಿಕೆ ಮೇರೆಗೆ ಪತ್ರಕರ್ತರು ಸಂಶಯ ವ್ಯಕ್ತಪಡಿಸಿ ವರದಿ-ಟ್ವೀಟ್ ಮಾಡುವುದು ಯಾವ ರೀತಿಯಲ್ಲಿ ದೇಶದ್ರೋಹ ಅಥವಾ ಕ್ರಿಮಿನಲ್ ಸಂಚು? ಅದೂ ಸಾಲದು ಎಂಬಂತೆ ಉತ್ತರಪ್ರದೇಶದಲ್ಲಿ ಹಾಕಿಕೊಡುವ ಮಾರ್ಗವನ್ನು ಕರ್ನಾಟಕವೂ ಸೇರಿದಂತೆ, ಹಲವು ರಾಜ್ಯಗಳ ಪೊಲೀಸರು ಶಿರಸಾವಹಿಸಿ ಒಂದೇ ರೀತಿಯ ಎಫ್‌ಐಆರ್‌ಗಳನ್ನು ಹಾಕುತ್ತಿದ್ದಾರೆ! ಬಿಜೆಪಿ ಪಕ್ಷದ ಐಟಿ ಸೆಲ್‌ನ ಭಾಗವಾಗಿದ್ದಾರೇನೋ ಇವರೆಲ್ಲರೂ ಎಂಬ ಸಂಶಯ ಮೂಡುವುದಿಲ್ಲವೇ?

ಇದು ಕಾಲ ದೇಶವನ್ನು ಮೀರಿದ ಸಮಸ್ಯೆಯಾಗಿ ಬೆಳೆದಿದೆ ಎಂದಿದ್ದಕ್ಕೆ ಇದೇ ಅಂಕಣದಲ್ಲಿ ಕೆಲವು ವಾರಗಳ ಹಿಂದೆ ಮಾಲ್ಟಾ ಎಂಬ ಯುರೋಪಿನ ಪುಟ್ಟ ದೇಶದಲ್ಲಿ ಗೌರಿ ಲಂಕೇಶ್ ಅವರು ಕೊಲೆಯಾದ ಸಮಯದಲ್ಲಿಯೇ, ಮಾಲ್ಟಾ ದೇಶದ ಪ್ರಧಾನಿಯ ಭ್ರಷ್ಟಾಚಾರವನ್ನು ಬಯಲು ಮಾಡಿದ್ದಕ್ಕೆ ಕೊಲೆಯಾದ ದಾಫ್ನೆ ಕರುವಾನ ಗಲಿಝಿಯಾ ಅವರನ್ನು ನೆನಪಿಸಿಕೊಳ್ಳಬಹುದು. ಎಡ್ವರ್ಡ್ ಸ್ನೋಡೆನ್, ಜೂಲಿಯನ್ ಅಸಾಂಜ್ ಅವರುಗಳಿಗೆ ನೀಡಿದ ಕಿರುಕುಳ ಇನ್ನೂ ತಾಜಾ ಆಗಿಯೇ ಉಳಿದಿದೆ. 1960ರ ದಶಕದಿಂದಲೂ ಪತ್ರಕರ್ತನಾಗಿ ಅಮೆರಿಕಾದ ಯುದ್ಧನೀತಿಗಳನ್ನು ಟೀಕಿಸಿ, ಅವರು ಯುದ್ಧಮಾಡಿದ ಕಡೆಯಲ್ಲೆಲ್ಲ ನಡೆಸಿದ ದೌರ್ಜನ್ಯಗಳನ್ನು ಬಯಲಿಗೆಳೆದು, ಪ್ಯಾಲೆಸ್ಟೇನಿಯನ್ನರ ಮೇಲೆ ಇಸ್ರೇಲ್ ನಡೆಸಿದ ಕ್ರೌರ್ಯವನ್ನು ದಾಖಲಿಸಿ, ತನ್ನದೇ ಸ್ವಂತ ದೇಶವಾದ ಆಸ್ಟ್ರೇಲಿಯಾದಲ್ಲಿ ಅಲ್ಲಿನ ಸರ್ಕಾರ ವರ್ಷವರ್ಷಗಳಿಂದ ಮೂಲನಿವಾಸಿಗಳ ಮೇಲೆ ನಡೆಸಿಕೊಂಡು ಬರುತ್ತಿರುವ ಜನಾಂಗೀಯ ತಾರತಮ್ಯದ ಬಗ್ಗೆ ಬರೆದು ಸಾಕ್ಷ್ಯಚಿತ್ರಗಳನ್ನು ಮಾಡಿದ ಪತ್ರಕರ್ತ ಜಾನ್ ಪಿಲ್ಜರ್. ಅವರು ಒಂದು ಕಡೆ ದಾಖಲಿಸುವಂತೆ “ಪತ್ರಿಕೋದ್ಯಮ ಯಾವಾಗಲೂ ಪ್ರಭುತ್ವದ ಅಧಿಕಾರದ ಕೊಕ್ಕೆಗೆ ಬಿಗಿಯಾಗಿಲ್ಲದಿದ್ದರೂ ಬೆಸೆದುಕೊಂಡ ಕೊಂಡಿಯಾಗಿಯೇ ಇತ್ತು ಆದರೆ, ಇತ್ತೀಚಿನ ವರ್ಷಗಳಲ್ಲಿ ಮತ್ತೇನೋ ಬದಲಾಯಿತು. ನಾನು ಬ್ರಿಟನ್‌ನ ರಾಷ್ಟ್ರೀಯ ದಿನಪತ್ರಿಕೆಗೆ ಸೇರಿಕೊಂಡಾಗ ಸಹಿಸಿಕೊಳ್ಳಲಾಗುತ್ತಿದ್ದ ಭಿನ್ನಾಭಿಪ್ರಾಯ, ಉದಾರಿ ಬಂಡವಾಳಶಾಹಿ ಒಂದು ರೀತಿಯ ಬಂಡವಾಳಶಾಹಿ ಸರ್ವಾಧಿಕಾರದತ್ತ ಹೊರಳಿದ ಮೇಲೆ ರೂಪಕವಾದ ಭೂಗತಕ್ಕೆ ಸರಿದಿದೆ” ಎನ್ನುತ್ತಾರೆ. ಹಲವಾರು ಪ್ರಶಸ್ತಿಗಳನ್ನು ಪಡೆದ, ಇಂತಹ ದಿಟ್ಟ ಪತ್ರಿಕೋದ್ಯಮ ಮಾಡಿದ ಈ ಧೀಮಂತ ಪತ್ರಕರ್ತನನ್ನು ಪ್ರತ್ಯೇಕಗೊಳಿಸಲಾಯಿತು. ಅವರ ಲೇಖನಗಳು, ಸಾಕ್ಷ್ಯಚಿತ್ರಗಳಿಗೆ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ವೇದಿಕೆ ಸಿಗದಂತೆ ನೋಡಿಕೊಳ್ಳಲಾಯಿತು. ಆದರೂ ಪಿಲ್ಜರ್ ಅವರ ಸಾಕ್ಷ್ಯಚಿತ್ರಗಳು ಯುಟ್ಯೂಬ್ ನಂತಹ ವೇದಿಕೆಗಳಲ್ಲಿ ಲಕ್ಷಾಂತರ ಬಾರಿ ವೀಕ್ಷಿಸಲ್ಪಟ್ಟಿವೆ. ಟ್ವಿಟ್ಟರ್‌ನಲ್ಲಿ ಇಂದಿಗೂ ಪಿಲ್ಜರ್ ಬಹಳ ಕ್ರಿಯಾಶೀಲರಾಗಿ ವಿಶ್ವದ ಆಗುಹೋಗುಗಳನ್ನು ಹಂಚಿಕೊಳ್ಳುತ್ತಿರುವುದು ವಿಶೇಷವಾದದ್ದೇ.

ಈ ಎಲ್ಲವೂ ಕರ್ನಾಟಕದ ಬಗಲಿಗೂ ಬಂದು ನಿಂತಿವೆ. ನ್ಯೂಸ್14 ಯುಟ್ಯೂಬ್ ಚಾನೆಲ್‌ನ ಮುಖ್ಯಸ್ಥರಾದ ಭಾಸ್ಕರ್ ಪ್ರಸಾದ್ ಅವರ ಮೇಲೆ ಹಲ್ಲೆಗೆ ನಡೆದ ಪ್ರಯತ್ನ, ಹನುಮಂತ ಹಾಲಗೇರಿಯವರು ಬರೆದ ನಾಟಕ ’ಅಲೈದೇವ್ರು ಪ್ರದರ್ಶನಕ್ಕೆ ಮುಂಚೆ ಅವರ ವೈಯಕ್ತಿಕ ಸಂಗತಿಗಳನ್ನು ಎಳೆದು ತಂದು ಸಾಮಾಜಿಕ ಜಾಲತಾಣಗಳಲ್ಲಿ ಅವರ ಮೇಲೆ ನಡೆಸಿದ ದಾಳಿ ಹೀಗೆ ಪಟ್ಟಿ ಬೆಳೆಯುತ್ತಲೇ ಇವೆ. ಆರೋಗ್ಯಕರ ಮನಸ್ಸುಗಳು ಒಗ್ಗೂಡಿ ಹೋರಾಡಬೇಕಾದ ಕಾಲ ಇದು!


ಇದನ್ನೂ ಓದಿ: ಜಗತ್ತಿನ ಸರ್ವಾಧಿಕರಗಳ ಹೆಸರು ‘M’ ಅಕ್ಷರದಿಂದಲೇ ಏಕೆ ಆರಂಭವಾಗುತ್ತದೆ: ರಾಹುಲ್ ಗಾಂಧಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...