Homeಮುಖಪುಟಲಿಂಗಾಯತ ಸಸ್ಯಹಾರಿ ಧರ್ಮವೇ?-ಬಾಲಾಜಿ ಕುಂಬಾರ

ಲಿಂಗಾಯತ ಸಸ್ಯಹಾರಿ ಧರ್ಮವೇ?-ಬಾಲಾಜಿ ಕುಂಬಾರ

- Advertisement -
- Advertisement -

  • ಬಾಲಾಜಿ ಕುಂಬಾರ,ಬೀದರ
  • ರಾಜ್ಯದ ಶಾಲಾ ಕಾಲೇಜಿನ ಬಹುತೇಕ ಹಾಸ್ಟೇಲ್ ಮಕ್ಕಳಿಗೆ, ಗರ್ಭಿಣಿಯರಿಗೆ, ಅಂಗನವಾಡಿ ಮಕ್ಕಳಿಗೆ ಮೊಟ್ಟೆ ಹಾಗೂ ಬಾಳೆಹಣ್ಣು ಜೊತೆಗೆ ಇತರೆ ಪೌಷ್ಟಿಕಾಂಶದ ಕಾಳುಗಳನ್ನೂ ಕೊಡುವುದು ಮೊದಲಿನಿಂದಲೂ ಜಾರಿಯಲ್ಲಿದೆ. ಆದರೆ ಅದನ್ನು ಯಾವತ್ತೂ ಯಾರೂ ವಿರೋಧ ಮಾಡಲಿಲ್ಲ, ಆದರೆ ಈಗ ಸರ್ಕಾರ ಹೈದರಾಬಾದ್‌ ಕರ್ನಾಟಕ ಭಾಗದ ಶಾಲಾ ಮಕ್ಕಳಿಗೆ (ವಾರದಲ್ಲಿ ಮೂರು ದಿನ) ಮೊಟ್ಟೆ ಕೊಡಬೇಕೆಂದು ಜಾರಿಗೊಳಿಸಿದ “ಮೊಟ್ಟೆ ಯೋಜನೆ” ಮೇಲೆ ಕೆಲವು ಸಂಘಟನೆ, ಮಠಾಧೀಶರ ಕಣ್ಣು ಬಿದ್ದಿದೆ. ಮೊಟ್ಟೆ ವಿರುದ್ಧ ಇಷ್ಟೊಂದು ವ್ಯಾಪಕವಾಗಿ ಮೊಟ್ಟೆ ಚಳವಳಿ ಆರಂಭಿಸಲು ಉದ್ದೇಶ ಏನಿರಬಹುದು ಅರ್ಥವಾಗುತ್ತಿಲ್ಲ. ಇದು ಅಷ್ಟೇ ವಿಚಿತ್ರವೂ….ಹಾಸ್ಯಾಸ್ಪದಕ್ಕೂ ಕಾರಣವಾಗಿದೆ.

    ಹೌದು, ನಾನು ಮೊಟ್ಟೆ ತಿನ್ನುತ್ತೇನೆ, ಆದರೆ ನಾನು ಇಲ್ಲಿಯವರೆಗೆ ನಾನು ಯಾವುದೇ, ಮಾಂಸ ಸೇವಿಸಲಿಲ್ಲ (ನಮ್ಮ ಕುಟುಂಬವೂ ಸಸ್ಯಹಾರಿ). ಆದರೆ ನಾನು ಮಾಂಸಹಾರಿಗಳನ್ನು ಎಂದಿಗೂ ತಿರಸ್ಕಾರದಿಂದ ನೋಡಲಿಲ್ಲ. ಅವರು ನನ್ನೆದುರಿಗೆ ಕುಳಿತು ಮಾಂಸ ತಿಂದರೂ ನನಗ್ಯಾವ ತೊಂದರೆಯೂ ಆಗಲ್ಲ. ಅವರು ‘ ಮಾಂಸ ತಿನ್ನಿ’ ಎಂದು ನನಗೆ ಒತ್ತಾಯ ಮಾಡಲ್ಲ. ನೀವು ‘ಮಾಂಸ ಬಿಡಿ’ ಎಂದು ನಾನು ಆಗ್ರಹಿಸುವುದಿಲ್ಲ. ಆಹಾರ ಅವರವರ ವೈಯುಕ್ತಿಕ ಹಕ್ಕು, ಆದರೆ ಇದೇ ತಿನ್ನಿ, ಇದು ಬಿಡಿ ಎಂದು ಪ್ರಶ್ನಿಸುವ, ಹೇರುವ, ವಿರೋಧಿಸುವ ಹಕ್ಕು ಯಾರಿಗೂ ಇಲ್ಲ ಎಂದು ನಂಬಿರುವನು ನಾನು.

    ಇದನ್ನೂ ಓದಿ:ಮಾಂಸಾಹಾರಿ ಸಮುದಾಯಗಳ ರಾಕ್ಶಸೀಕರಣ ನಿಲ್ಲಲಿ

    ಆಹಾರದ ಕುರಿತು ಕಟ್ಟುಪಾಡು ಹೊರಡಿಸಿದ ಯಾವ ಧರ್ಮಗಳು ವ್ಯಾಪಕವಾಗಿ ಬೆಳೆಯಲು ಸಾಧ್ಯವಿಲ್ಲ. ಲಿಂಗಾಯತ ಕೂಡ ಅಷ್ಟೇ, ಕಳ್ಳರನ್ನು, ಸುಳ್ಳರನ್ನು ವೇಶ್ಯೆಯರನ್ನು, ಹೆಂಡ ಮಾರುವರನ್ನು ಸೇರಿ ಇನ್ನಿತರ ಹಲವರನ್ನು ಲಿಂಗಾಯತರನ್ನಾಗಿಸಿ, ಒಬ್ಬ ಪ್ರಜ್ಞಾವಂತ ಮನುಷ್ಯರಾಗಿ ಬದುಕುವಂತೆ ಕಲಿಸಿಕೊಟ್ಟ ಬಸವಣ್ಣ ಹಾಗೂ ಸಮಕಾಲೀನ ಶರಣರ ಮಹೋನ್ನತ ತತ್ವ ಸಿದ್ಧಾಂತದ ಆಶಯಗಳು ಇಂದು ಮತ್ತೆ ಮುನ್ನೆಲೆಗೆ ಬರಬೇಕಾಗಿದೆ. ಆದರೆ ಅವೆಲ್ಲವೂ ಇಂದು ಜಾತಿಯತೆ ದೃಷ್ಟಿಕೋನದಿಂದ ಅಳೆದು – ತೂಗಿ ಇವ್ರು ಲಿಂಗಾಯತರು ಎಂದು ಹೇಳುವ ಪರಿಸ್ಥಿತಿ ನಿರ್ಮಾಣವಾಗಿರುವುದು ದೊಡ್ಡ ದುರಂತ ಅನ್ನಬಹುದು.

    ಮಾಂಸಹಾರಿಗಳು ಕನಿಷ್ಟರು, ಸಸ್ಯಹಾರಿಗಳು ಶ್ರೇಷ್ಠರು ಎಂದು ವಿಂಗಡಿಸುವುದು ಕಂಡರೆ ಇದು ಜಾತಿಯತೆಯ ಭಾಗವೇ ಎಂದೆನಿಸುತ್ತದೆ. ಎಲ್ಲಾ ಲಿಂಗಾಯತರು ಸಸ್ಯಹಾರಿಗಳಲ್ಲ, ಸಸ್ಯಹಾರಿಗಳು ಎಲ್ಲರೂ ಲಿಂಗಾಯತರಲ್ಲ, ಇದರೊಳಗೆ ಮಾಂಸಹಾರಿ ಲಿಂಗಾಯತರೂ ಇದ್ದಾರೆ. ಅಷ್ಟೇ ಯಾಕೆ ಶುದ್ದ ಮಾಂಸಹಾರಿಗಳೂ ಕೂಡ ಬಸವತತ್ವವನ್ನು ಅತಿಯಾಗಿ ಹಚ್ಚಿಕೊಂಡು ಬಸವಾದಿ ಶರಣರನ್ನೇ ಉಸಿರಾಗಿಸಿಕೊಂಡು ಬದುಕುವ ಅದೆಷ್ಟೋ ಕುಟುಂಬಗಳು, ಸಮುದಾಯವೇ ನಮ್ಮಲ್ಲಿದೆ. ಬಹುತೇಕ ಸಸ್ಯಹಾರಿ, ಮಾಂಸಹಾರಿಗಳು ಬಸವಣ್ಣನವರನ್ನು ಬರೀ ಗುರುವಾಗಿ ಸ್ವೀಕರಿಸಿದ್ದಾರೆ ಹೊರತು ಅವರ್ಯಾರು ತತ್ವಕ್ಕೆ ಬದ್ಧರಲ್ಲ. ಒಟ್ಟಿನಲ್ಲಿ ಶರಣರ ಆಶಯಗಳ ವಿರೋಧ ನಡೆ.

    ಇದನ್ನೂ ಓದಿ:‘ಕೆಲವು ಜನರ ಅಹಂ ತಣಿಸಲು ಹೊರಗಡೆ ಮಾಂಸಾಹಾರ ಮಾರಾಟ ಮಾಡಬೇಡಿ ಎನ್ನುತ್ತೀರಿ’: ಚಾಟಿ ಬೀಸಿದ ಗುಜರಾತ್‌ ಹೈಕೋರ್ಟ್‌

    ಮೊಟ್ಟೆ ತಿನ್ನದ ಮಕ್ಕಳಿಗೆ ಪರ್ಯಾಯವಾಗಿ ಬಾಳೆಹಣ್ಣು ಇದೆ, ಆದರೆ ಕೆಲವರು ಮೊಟ್ಟೆ ತಿನ್ನುವರು ಮನೆಯಲ್ಲಿ ತಿಂದು ಬರಲಿ ಅಂತಾರೆ, ಇನ್ನೂ ಕೆಲವರು ಮೊಟ್ಟೆ ತಿನ್ನವರಿಗೆ ಮೊಟ್ಟೆ ಬದಲು ಹಣ ಕೊಡಿ ಅಂತಾರೆ, ಮೊಟ್ಟೆ ಬಾಳೆಹಣ್ಣು ನೀಡುವುದರಿಂದ ಭೇದಭಾವ , ಅಸಮಾನತೆ ಆಗುತ್ತೆ ಅನ್ನುವರು ಇನ್ನೂ ಒಂದಿಷ್ಟು ಮಂದಿ. ತಮ್ಮ ತಮ್ಮ ಸಮುದಾಯದಲ್ಲೇ ನಾವು ಶ್ರೇಷ್ಠರು ಅವರು ಕನಿಷ್ಟರು ಎಂದು ರಕ್ತಸಂಬಂಧ ಬೆಳೆಸಲು ಹಿಂದೇಟು ಹಾಕುವವರು, ತಳವರ್ಗ ಸಮುದಾಯವರನ್ನು ಇನ್ನೂ ಮನೆಯೊಳಗೆ ಬಿಡದೇ ಮೇಲಿಂದ ರೊಟ್ಟಿ ಕೊಡುವ ಅಸ್ಪೃಶ್ಯತೆಗಿಂತ ಮೊಟ್ಟೆ ಬಾಳೆಹಣ್ಣಿನ ನಡುವಿನ ಅಸಮಾನತೆ ದೊಡ್ಡದೇನಲ್ಲ ಬಿಡಿ.

    ನಾವು ಗಟ್ಟಿಯಾಗಿ ಮಾತನಾಡಬೇಕಾಗಿದ್ದು ಹಸಿವಿನ ಬಗ್ಗೆ, ಕ್ರೂರ ಜಾತಿಯತೆ ಬಗ್ಗೆ, ಅದನ್ನು ಬಿಟ್ಟು ಆಹಾರದ ಬಗ್ಗೆ ಅನಗತ್ಯ ವಿಷಯವಲ್ಲ. ಇದರಿಂದಾಗಿ ಲಿಂಗಾಯತ ತತ್ವವನ್ನು ಒಪ್ಪಿಕೊಂಡು, ಅಪ್ಪಿಕೊಂಡು ಸಾಧ್ಯವಾದಷ್ಟು ಮೈಗೂಡಿಸಿಕೊಂಡು ಬದುಕುವ ಮಾಂಸಪ್ರಿಯರಿಗೆ ಗೊಂದಲ ಸೃಷ್ಟಿಸಿದೆ. ಶರಣತತ್ವ ಅಂದ್ರೆ ಶುದ್ದ ಸಸ್ಯಹಾರಿ ಧರ್ಮವೇ? ಎಂಬುದು ಈಗ ಯಕ್ಷ ಪ್ರಶ್ನೆಯಾಗಿಯೇ ಕಾಡುತ್ತಿದೆ. ಲಿಂಗಾಯತ ಸಸ್ಯಹಾರಿ ಧರ್ಮವೇ ಆದರೆ ಈಗಾಗಲೇ ಲಿಂಗಾಯತದಲ್ಲಿ ಇರುವ ಮಾಂಸಹಾರಿ ಉಪಪಂಗಡದವರು ಎಲ್ಲಿ ಹೋಗಬೇಕು? ಆಹಾರದ ಕಟ್ಟುಪಾಡಿನ ಕಾರಣಕ್ಕೇ ಅವರನ್ನು ಲಿಂಗಾಯತರೆಂದು ಪರಿಗಣಿಸಬಾರದೇ?

    ಶರಣರ ಯಾರನ್ನೂ ಕೀಳಾಗಿ, ಕನಿಷ್ಟರು, ಶ್ರೇಷ್ಠರು ಭೇದಭಾವ ಮಾಡಲಿಲ್ಲ. ‘ಎನಗಿಂತ ಕಿರಿಯರಿಲ್ಲ’ ಎಂಬ ಭಾವ ಅದೆಷ್ಟು ಸರಳ..ಸುಂದರ…ಅನನ್ಯ ಅರ್ಥೈಸುತ್ತದೆ. ಯೋಚಿಸೋಣ..!!

    ಇದನ್ನೂ ಓದಿ:ಸಸ್ಯಹಾರಿಯಾಗಿದ್ದ ನಾನು ಬಾಡೂಟಕ್ಕೆ ತೆರೆದುಕೊಂಡದ್ದು ಹೀಗೆ…

    ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

    LEAVE A REPLY

    Please enter your comment!
    Please enter your name here

    - Advertisment -

    ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

    ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

    ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

    ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

    ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

    ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

    ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

    ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

    ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

    "ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

    ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

    ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

    ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

    ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

    ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

    ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

    ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

    ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

    ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

    ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...