Homeಮುಖಪುಟಲಿಂಗಾಯತ ಸಸ್ಯಹಾರಿ ಧರ್ಮವೇ?-ಬಾಲಾಜಿ ಕುಂಬಾರ

ಲಿಂಗಾಯತ ಸಸ್ಯಹಾರಿ ಧರ್ಮವೇ?-ಬಾಲಾಜಿ ಕುಂಬಾರ

- Advertisement -
- Advertisement -

  • ಬಾಲಾಜಿ ಕುಂಬಾರ,ಬೀದರ
  • ರಾಜ್ಯದ ಶಾಲಾ ಕಾಲೇಜಿನ ಬಹುತೇಕ ಹಾಸ್ಟೇಲ್ ಮಕ್ಕಳಿಗೆ, ಗರ್ಭಿಣಿಯರಿಗೆ, ಅಂಗನವಾಡಿ ಮಕ್ಕಳಿಗೆ ಮೊಟ್ಟೆ ಹಾಗೂ ಬಾಳೆಹಣ್ಣು ಜೊತೆಗೆ ಇತರೆ ಪೌಷ್ಟಿಕಾಂಶದ ಕಾಳುಗಳನ್ನೂ ಕೊಡುವುದು ಮೊದಲಿನಿಂದಲೂ ಜಾರಿಯಲ್ಲಿದೆ. ಆದರೆ ಅದನ್ನು ಯಾವತ್ತೂ ಯಾರೂ ವಿರೋಧ ಮಾಡಲಿಲ್ಲ, ಆದರೆ ಈಗ ಸರ್ಕಾರ ಹೈದರಾಬಾದ್‌ ಕರ್ನಾಟಕ ಭಾಗದ ಶಾಲಾ ಮಕ್ಕಳಿಗೆ (ವಾರದಲ್ಲಿ ಮೂರು ದಿನ) ಮೊಟ್ಟೆ ಕೊಡಬೇಕೆಂದು ಜಾರಿಗೊಳಿಸಿದ “ಮೊಟ್ಟೆ ಯೋಜನೆ” ಮೇಲೆ ಕೆಲವು ಸಂಘಟನೆ, ಮಠಾಧೀಶರ ಕಣ್ಣು ಬಿದ್ದಿದೆ. ಮೊಟ್ಟೆ ವಿರುದ್ಧ ಇಷ್ಟೊಂದು ವ್ಯಾಪಕವಾಗಿ ಮೊಟ್ಟೆ ಚಳವಳಿ ಆರಂಭಿಸಲು ಉದ್ದೇಶ ಏನಿರಬಹುದು ಅರ್ಥವಾಗುತ್ತಿಲ್ಲ. ಇದು ಅಷ್ಟೇ ವಿಚಿತ್ರವೂ….ಹಾಸ್ಯಾಸ್ಪದಕ್ಕೂ ಕಾರಣವಾಗಿದೆ.

    ಹೌದು, ನಾನು ಮೊಟ್ಟೆ ತಿನ್ನುತ್ತೇನೆ, ಆದರೆ ನಾನು ಇಲ್ಲಿಯವರೆಗೆ ನಾನು ಯಾವುದೇ, ಮಾಂಸ ಸೇವಿಸಲಿಲ್ಲ (ನಮ್ಮ ಕುಟುಂಬವೂ ಸಸ್ಯಹಾರಿ). ಆದರೆ ನಾನು ಮಾಂಸಹಾರಿಗಳನ್ನು ಎಂದಿಗೂ ತಿರಸ್ಕಾರದಿಂದ ನೋಡಲಿಲ್ಲ. ಅವರು ನನ್ನೆದುರಿಗೆ ಕುಳಿತು ಮಾಂಸ ತಿಂದರೂ ನನಗ್ಯಾವ ತೊಂದರೆಯೂ ಆಗಲ್ಲ. ಅವರು ‘ ಮಾಂಸ ತಿನ್ನಿ’ ಎಂದು ನನಗೆ ಒತ್ತಾಯ ಮಾಡಲ್ಲ. ನೀವು ‘ಮಾಂಸ ಬಿಡಿ’ ಎಂದು ನಾನು ಆಗ್ರಹಿಸುವುದಿಲ್ಲ. ಆಹಾರ ಅವರವರ ವೈಯುಕ್ತಿಕ ಹಕ್ಕು, ಆದರೆ ಇದೇ ತಿನ್ನಿ, ಇದು ಬಿಡಿ ಎಂದು ಪ್ರಶ್ನಿಸುವ, ಹೇರುವ, ವಿರೋಧಿಸುವ ಹಕ್ಕು ಯಾರಿಗೂ ಇಲ್ಲ ಎಂದು ನಂಬಿರುವನು ನಾನು.

    ಇದನ್ನೂ ಓದಿ:ಮಾಂಸಾಹಾರಿ ಸಮುದಾಯಗಳ ರಾಕ್ಶಸೀಕರಣ ನಿಲ್ಲಲಿ

    ಆಹಾರದ ಕುರಿತು ಕಟ್ಟುಪಾಡು ಹೊರಡಿಸಿದ ಯಾವ ಧರ್ಮಗಳು ವ್ಯಾಪಕವಾಗಿ ಬೆಳೆಯಲು ಸಾಧ್ಯವಿಲ್ಲ. ಲಿಂಗಾಯತ ಕೂಡ ಅಷ್ಟೇ, ಕಳ್ಳರನ್ನು, ಸುಳ್ಳರನ್ನು ವೇಶ್ಯೆಯರನ್ನು, ಹೆಂಡ ಮಾರುವರನ್ನು ಸೇರಿ ಇನ್ನಿತರ ಹಲವರನ್ನು ಲಿಂಗಾಯತರನ್ನಾಗಿಸಿ, ಒಬ್ಬ ಪ್ರಜ್ಞಾವಂತ ಮನುಷ್ಯರಾಗಿ ಬದುಕುವಂತೆ ಕಲಿಸಿಕೊಟ್ಟ ಬಸವಣ್ಣ ಹಾಗೂ ಸಮಕಾಲೀನ ಶರಣರ ಮಹೋನ್ನತ ತತ್ವ ಸಿದ್ಧಾಂತದ ಆಶಯಗಳು ಇಂದು ಮತ್ತೆ ಮುನ್ನೆಲೆಗೆ ಬರಬೇಕಾಗಿದೆ. ಆದರೆ ಅವೆಲ್ಲವೂ ಇಂದು ಜಾತಿಯತೆ ದೃಷ್ಟಿಕೋನದಿಂದ ಅಳೆದು – ತೂಗಿ ಇವ್ರು ಲಿಂಗಾಯತರು ಎಂದು ಹೇಳುವ ಪರಿಸ್ಥಿತಿ ನಿರ್ಮಾಣವಾಗಿರುವುದು ದೊಡ್ಡ ದುರಂತ ಅನ್ನಬಹುದು.

    ಮಾಂಸಹಾರಿಗಳು ಕನಿಷ್ಟರು, ಸಸ್ಯಹಾರಿಗಳು ಶ್ರೇಷ್ಠರು ಎಂದು ವಿಂಗಡಿಸುವುದು ಕಂಡರೆ ಇದು ಜಾತಿಯತೆಯ ಭಾಗವೇ ಎಂದೆನಿಸುತ್ತದೆ. ಎಲ್ಲಾ ಲಿಂಗಾಯತರು ಸಸ್ಯಹಾರಿಗಳಲ್ಲ, ಸಸ್ಯಹಾರಿಗಳು ಎಲ್ಲರೂ ಲಿಂಗಾಯತರಲ್ಲ, ಇದರೊಳಗೆ ಮಾಂಸಹಾರಿ ಲಿಂಗಾಯತರೂ ಇದ್ದಾರೆ. ಅಷ್ಟೇ ಯಾಕೆ ಶುದ್ದ ಮಾಂಸಹಾರಿಗಳೂ ಕೂಡ ಬಸವತತ್ವವನ್ನು ಅತಿಯಾಗಿ ಹಚ್ಚಿಕೊಂಡು ಬಸವಾದಿ ಶರಣರನ್ನೇ ಉಸಿರಾಗಿಸಿಕೊಂಡು ಬದುಕುವ ಅದೆಷ್ಟೋ ಕುಟುಂಬಗಳು, ಸಮುದಾಯವೇ ನಮ್ಮಲ್ಲಿದೆ. ಬಹುತೇಕ ಸಸ್ಯಹಾರಿ, ಮಾಂಸಹಾರಿಗಳು ಬಸವಣ್ಣನವರನ್ನು ಬರೀ ಗುರುವಾಗಿ ಸ್ವೀಕರಿಸಿದ್ದಾರೆ ಹೊರತು ಅವರ್ಯಾರು ತತ್ವಕ್ಕೆ ಬದ್ಧರಲ್ಲ. ಒಟ್ಟಿನಲ್ಲಿ ಶರಣರ ಆಶಯಗಳ ವಿರೋಧ ನಡೆ.

    ಇದನ್ನೂ ಓದಿ:‘ಕೆಲವು ಜನರ ಅಹಂ ತಣಿಸಲು ಹೊರಗಡೆ ಮಾಂಸಾಹಾರ ಮಾರಾಟ ಮಾಡಬೇಡಿ ಎನ್ನುತ್ತೀರಿ’: ಚಾಟಿ ಬೀಸಿದ ಗುಜರಾತ್‌ ಹೈಕೋರ್ಟ್‌

    ಮೊಟ್ಟೆ ತಿನ್ನದ ಮಕ್ಕಳಿಗೆ ಪರ್ಯಾಯವಾಗಿ ಬಾಳೆಹಣ್ಣು ಇದೆ, ಆದರೆ ಕೆಲವರು ಮೊಟ್ಟೆ ತಿನ್ನುವರು ಮನೆಯಲ್ಲಿ ತಿಂದು ಬರಲಿ ಅಂತಾರೆ, ಇನ್ನೂ ಕೆಲವರು ಮೊಟ್ಟೆ ತಿನ್ನವರಿಗೆ ಮೊಟ್ಟೆ ಬದಲು ಹಣ ಕೊಡಿ ಅಂತಾರೆ, ಮೊಟ್ಟೆ ಬಾಳೆಹಣ್ಣು ನೀಡುವುದರಿಂದ ಭೇದಭಾವ , ಅಸಮಾನತೆ ಆಗುತ್ತೆ ಅನ್ನುವರು ಇನ್ನೂ ಒಂದಿಷ್ಟು ಮಂದಿ. ತಮ್ಮ ತಮ್ಮ ಸಮುದಾಯದಲ್ಲೇ ನಾವು ಶ್ರೇಷ್ಠರು ಅವರು ಕನಿಷ್ಟರು ಎಂದು ರಕ್ತಸಂಬಂಧ ಬೆಳೆಸಲು ಹಿಂದೇಟು ಹಾಕುವವರು, ತಳವರ್ಗ ಸಮುದಾಯವರನ್ನು ಇನ್ನೂ ಮನೆಯೊಳಗೆ ಬಿಡದೇ ಮೇಲಿಂದ ರೊಟ್ಟಿ ಕೊಡುವ ಅಸ್ಪೃಶ್ಯತೆಗಿಂತ ಮೊಟ್ಟೆ ಬಾಳೆಹಣ್ಣಿನ ನಡುವಿನ ಅಸಮಾನತೆ ದೊಡ್ಡದೇನಲ್ಲ ಬಿಡಿ.

    ನಾವು ಗಟ್ಟಿಯಾಗಿ ಮಾತನಾಡಬೇಕಾಗಿದ್ದು ಹಸಿವಿನ ಬಗ್ಗೆ, ಕ್ರೂರ ಜಾತಿಯತೆ ಬಗ್ಗೆ, ಅದನ್ನು ಬಿಟ್ಟು ಆಹಾರದ ಬಗ್ಗೆ ಅನಗತ್ಯ ವಿಷಯವಲ್ಲ. ಇದರಿಂದಾಗಿ ಲಿಂಗಾಯತ ತತ್ವವನ್ನು ಒಪ್ಪಿಕೊಂಡು, ಅಪ್ಪಿಕೊಂಡು ಸಾಧ್ಯವಾದಷ್ಟು ಮೈಗೂಡಿಸಿಕೊಂಡು ಬದುಕುವ ಮಾಂಸಪ್ರಿಯರಿಗೆ ಗೊಂದಲ ಸೃಷ್ಟಿಸಿದೆ. ಶರಣತತ್ವ ಅಂದ್ರೆ ಶುದ್ದ ಸಸ್ಯಹಾರಿ ಧರ್ಮವೇ? ಎಂಬುದು ಈಗ ಯಕ್ಷ ಪ್ರಶ್ನೆಯಾಗಿಯೇ ಕಾಡುತ್ತಿದೆ. ಲಿಂಗಾಯತ ಸಸ್ಯಹಾರಿ ಧರ್ಮವೇ ಆದರೆ ಈಗಾಗಲೇ ಲಿಂಗಾಯತದಲ್ಲಿ ಇರುವ ಮಾಂಸಹಾರಿ ಉಪಪಂಗಡದವರು ಎಲ್ಲಿ ಹೋಗಬೇಕು? ಆಹಾರದ ಕಟ್ಟುಪಾಡಿನ ಕಾರಣಕ್ಕೇ ಅವರನ್ನು ಲಿಂಗಾಯತರೆಂದು ಪರಿಗಣಿಸಬಾರದೇ?

    ಶರಣರ ಯಾರನ್ನೂ ಕೀಳಾಗಿ, ಕನಿಷ್ಟರು, ಶ್ರೇಷ್ಠರು ಭೇದಭಾವ ಮಾಡಲಿಲ್ಲ. ‘ಎನಗಿಂತ ಕಿರಿಯರಿಲ್ಲ’ ಎಂಬ ಭಾವ ಅದೆಷ್ಟು ಸರಳ..ಸುಂದರ…ಅನನ್ಯ ಅರ್ಥೈಸುತ್ತದೆ. ಯೋಚಿಸೋಣ..!!

    ಇದನ್ನೂ ಓದಿ:ಸಸ್ಯಹಾರಿಯಾಗಿದ್ದ ನಾನು ಬಾಡೂಟಕ್ಕೆ ತೆರೆದುಕೊಂಡದ್ದು ಹೀಗೆ…

    ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

    LEAVE A REPLY

    Please enter your comment!
    Please enter your name here

    - Advertisment -

    ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

    ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

    ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

    ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

    ‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

    ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

    ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

    ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

    ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

    ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

    ‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

    "ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

    ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

    ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

    ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

    ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

    ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

    ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

    ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

    ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...