Homeಮುಖಪುಟಲಿಂಗಾಯತ ಸಸ್ಯಹಾರಿ ಧರ್ಮವೇ?-ಬಾಲಾಜಿ ಕುಂಬಾರ

ಲಿಂಗಾಯತ ಸಸ್ಯಹಾರಿ ಧರ್ಮವೇ?-ಬಾಲಾಜಿ ಕುಂಬಾರ

- Advertisement -
- Advertisement -

  • ಬಾಲಾಜಿ ಕುಂಬಾರ,ಬೀದರ
  • ರಾಜ್ಯದ ಶಾಲಾ ಕಾಲೇಜಿನ ಬಹುತೇಕ ಹಾಸ್ಟೇಲ್ ಮಕ್ಕಳಿಗೆ, ಗರ್ಭಿಣಿಯರಿಗೆ, ಅಂಗನವಾಡಿ ಮಕ್ಕಳಿಗೆ ಮೊಟ್ಟೆ ಹಾಗೂ ಬಾಳೆಹಣ್ಣು ಜೊತೆಗೆ ಇತರೆ ಪೌಷ್ಟಿಕಾಂಶದ ಕಾಳುಗಳನ್ನೂ ಕೊಡುವುದು ಮೊದಲಿನಿಂದಲೂ ಜಾರಿಯಲ್ಲಿದೆ. ಆದರೆ ಅದನ್ನು ಯಾವತ್ತೂ ಯಾರೂ ವಿರೋಧ ಮಾಡಲಿಲ್ಲ, ಆದರೆ ಈಗ ಸರ್ಕಾರ ಹೈದರಾಬಾದ್‌ ಕರ್ನಾಟಕ ಭಾಗದ ಶಾಲಾ ಮಕ್ಕಳಿಗೆ (ವಾರದಲ್ಲಿ ಮೂರು ದಿನ) ಮೊಟ್ಟೆ ಕೊಡಬೇಕೆಂದು ಜಾರಿಗೊಳಿಸಿದ “ಮೊಟ್ಟೆ ಯೋಜನೆ” ಮೇಲೆ ಕೆಲವು ಸಂಘಟನೆ, ಮಠಾಧೀಶರ ಕಣ್ಣು ಬಿದ್ದಿದೆ. ಮೊಟ್ಟೆ ವಿರುದ್ಧ ಇಷ್ಟೊಂದು ವ್ಯಾಪಕವಾಗಿ ಮೊಟ್ಟೆ ಚಳವಳಿ ಆರಂಭಿಸಲು ಉದ್ದೇಶ ಏನಿರಬಹುದು ಅರ್ಥವಾಗುತ್ತಿಲ್ಲ. ಇದು ಅಷ್ಟೇ ವಿಚಿತ್ರವೂ….ಹಾಸ್ಯಾಸ್ಪದಕ್ಕೂ ಕಾರಣವಾಗಿದೆ.

    ಹೌದು, ನಾನು ಮೊಟ್ಟೆ ತಿನ್ನುತ್ತೇನೆ, ಆದರೆ ನಾನು ಇಲ್ಲಿಯವರೆಗೆ ನಾನು ಯಾವುದೇ, ಮಾಂಸ ಸೇವಿಸಲಿಲ್ಲ (ನಮ್ಮ ಕುಟುಂಬವೂ ಸಸ್ಯಹಾರಿ). ಆದರೆ ನಾನು ಮಾಂಸಹಾರಿಗಳನ್ನು ಎಂದಿಗೂ ತಿರಸ್ಕಾರದಿಂದ ನೋಡಲಿಲ್ಲ. ಅವರು ನನ್ನೆದುರಿಗೆ ಕುಳಿತು ಮಾಂಸ ತಿಂದರೂ ನನಗ್ಯಾವ ತೊಂದರೆಯೂ ಆಗಲ್ಲ. ಅವರು ‘ ಮಾಂಸ ತಿನ್ನಿ’ ಎಂದು ನನಗೆ ಒತ್ತಾಯ ಮಾಡಲ್ಲ. ನೀವು ‘ಮಾಂಸ ಬಿಡಿ’ ಎಂದು ನಾನು ಆಗ್ರಹಿಸುವುದಿಲ್ಲ. ಆಹಾರ ಅವರವರ ವೈಯುಕ್ತಿಕ ಹಕ್ಕು, ಆದರೆ ಇದೇ ತಿನ್ನಿ, ಇದು ಬಿಡಿ ಎಂದು ಪ್ರಶ್ನಿಸುವ, ಹೇರುವ, ವಿರೋಧಿಸುವ ಹಕ್ಕು ಯಾರಿಗೂ ಇಲ್ಲ ಎಂದು ನಂಬಿರುವನು ನಾನು.

    ಇದನ್ನೂ ಓದಿ:ಮಾಂಸಾಹಾರಿ ಸಮುದಾಯಗಳ ರಾಕ್ಶಸೀಕರಣ ನಿಲ್ಲಲಿ

    ಆಹಾರದ ಕುರಿತು ಕಟ್ಟುಪಾಡು ಹೊರಡಿಸಿದ ಯಾವ ಧರ್ಮಗಳು ವ್ಯಾಪಕವಾಗಿ ಬೆಳೆಯಲು ಸಾಧ್ಯವಿಲ್ಲ. ಲಿಂಗಾಯತ ಕೂಡ ಅಷ್ಟೇ, ಕಳ್ಳರನ್ನು, ಸುಳ್ಳರನ್ನು ವೇಶ್ಯೆಯರನ್ನು, ಹೆಂಡ ಮಾರುವರನ್ನು ಸೇರಿ ಇನ್ನಿತರ ಹಲವರನ್ನು ಲಿಂಗಾಯತರನ್ನಾಗಿಸಿ, ಒಬ್ಬ ಪ್ರಜ್ಞಾವಂತ ಮನುಷ್ಯರಾಗಿ ಬದುಕುವಂತೆ ಕಲಿಸಿಕೊಟ್ಟ ಬಸವಣ್ಣ ಹಾಗೂ ಸಮಕಾಲೀನ ಶರಣರ ಮಹೋನ್ನತ ತತ್ವ ಸಿದ್ಧಾಂತದ ಆಶಯಗಳು ಇಂದು ಮತ್ತೆ ಮುನ್ನೆಲೆಗೆ ಬರಬೇಕಾಗಿದೆ. ಆದರೆ ಅವೆಲ್ಲವೂ ಇಂದು ಜಾತಿಯತೆ ದೃಷ್ಟಿಕೋನದಿಂದ ಅಳೆದು – ತೂಗಿ ಇವ್ರು ಲಿಂಗಾಯತರು ಎಂದು ಹೇಳುವ ಪರಿಸ್ಥಿತಿ ನಿರ್ಮಾಣವಾಗಿರುವುದು ದೊಡ್ಡ ದುರಂತ ಅನ್ನಬಹುದು.

    ಮಾಂಸಹಾರಿಗಳು ಕನಿಷ್ಟರು, ಸಸ್ಯಹಾರಿಗಳು ಶ್ರೇಷ್ಠರು ಎಂದು ವಿಂಗಡಿಸುವುದು ಕಂಡರೆ ಇದು ಜಾತಿಯತೆಯ ಭಾಗವೇ ಎಂದೆನಿಸುತ್ತದೆ. ಎಲ್ಲಾ ಲಿಂಗಾಯತರು ಸಸ್ಯಹಾರಿಗಳಲ್ಲ, ಸಸ್ಯಹಾರಿಗಳು ಎಲ್ಲರೂ ಲಿಂಗಾಯತರಲ್ಲ, ಇದರೊಳಗೆ ಮಾಂಸಹಾರಿ ಲಿಂಗಾಯತರೂ ಇದ್ದಾರೆ. ಅಷ್ಟೇ ಯಾಕೆ ಶುದ್ದ ಮಾಂಸಹಾರಿಗಳೂ ಕೂಡ ಬಸವತತ್ವವನ್ನು ಅತಿಯಾಗಿ ಹಚ್ಚಿಕೊಂಡು ಬಸವಾದಿ ಶರಣರನ್ನೇ ಉಸಿರಾಗಿಸಿಕೊಂಡು ಬದುಕುವ ಅದೆಷ್ಟೋ ಕುಟುಂಬಗಳು, ಸಮುದಾಯವೇ ನಮ್ಮಲ್ಲಿದೆ. ಬಹುತೇಕ ಸಸ್ಯಹಾರಿ, ಮಾಂಸಹಾರಿಗಳು ಬಸವಣ್ಣನವರನ್ನು ಬರೀ ಗುರುವಾಗಿ ಸ್ವೀಕರಿಸಿದ್ದಾರೆ ಹೊರತು ಅವರ್ಯಾರು ತತ್ವಕ್ಕೆ ಬದ್ಧರಲ್ಲ. ಒಟ್ಟಿನಲ್ಲಿ ಶರಣರ ಆಶಯಗಳ ವಿರೋಧ ನಡೆ.

    ಇದನ್ನೂ ಓದಿ:‘ಕೆಲವು ಜನರ ಅಹಂ ತಣಿಸಲು ಹೊರಗಡೆ ಮಾಂಸಾಹಾರ ಮಾರಾಟ ಮಾಡಬೇಡಿ ಎನ್ನುತ್ತೀರಿ’: ಚಾಟಿ ಬೀಸಿದ ಗುಜರಾತ್‌ ಹೈಕೋರ್ಟ್‌

    ಮೊಟ್ಟೆ ತಿನ್ನದ ಮಕ್ಕಳಿಗೆ ಪರ್ಯಾಯವಾಗಿ ಬಾಳೆಹಣ್ಣು ಇದೆ, ಆದರೆ ಕೆಲವರು ಮೊಟ್ಟೆ ತಿನ್ನುವರು ಮನೆಯಲ್ಲಿ ತಿಂದು ಬರಲಿ ಅಂತಾರೆ, ಇನ್ನೂ ಕೆಲವರು ಮೊಟ್ಟೆ ತಿನ್ನವರಿಗೆ ಮೊಟ್ಟೆ ಬದಲು ಹಣ ಕೊಡಿ ಅಂತಾರೆ, ಮೊಟ್ಟೆ ಬಾಳೆಹಣ್ಣು ನೀಡುವುದರಿಂದ ಭೇದಭಾವ , ಅಸಮಾನತೆ ಆಗುತ್ತೆ ಅನ್ನುವರು ಇನ್ನೂ ಒಂದಿಷ್ಟು ಮಂದಿ. ತಮ್ಮ ತಮ್ಮ ಸಮುದಾಯದಲ್ಲೇ ನಾವು ಶ್ರೇಷ್ಠರು ಅವರು ಕನಿಷ್ಟರು ಎಂದು ರಕ್ತಸಂಬಂಧ ಬೆಳೆಸಲು ಹಿಂದೇಟು ಹಾಕುವವರು, ತಳವರ್ಗ ಸಮುದಾಯವರನ್ನು ಇನ್ನೂ ಮನೆಯೊಳಗೆ ಬಿಡದೇ ಮೇಲಿಂದ ರೊಟ್ಟಿ ಕೊಡುವ ಅಸ್ಪೃಶ್ಯತೆಗಿಂತ ಮೊಟ್ಟೆ ಬಾಳೆಹಣ್ಣಿನ ನಡುವಿನ ಅಸಮಾನತೆ ದೊಡ್ಡದೇನಲ್ಲ ಬಿಡಿ.

    ನಾವು ಗಟ್ಟಿಯಾಗಿ ಮಾತನಾಡಬೇಕಾಗಿದ್ದು ಹಸಿವಿನ ಬಗ್ಗೆ, ಕ್ರೂರ ಜಾತಿಯತೆ ಬಗ್ಗೆ, ಅದನ್ನು ಬಿಟ್ಟು ಆಹಾರದ ಬಗ್ಗೆ ಅನಗತ್ಯ ವಿಷಯವಲ್ಲ. ಇದರಿಂದಾಗಿ ಲಿಂಗಾಯತ ತತ್ವವನ್ನು ಒಪ್ಪಿಕೊಂಡು, ಅಪ್ಪಿಕೊಂಡು ಸಾಧ್ಯವಾದಷ್ಟು ಮೈಗೂಡಿಸಿಕೊಂಡು ಬದುಕುವ ಮಾಂಸಪ್ರಿಯರಿಗೆ ಗೊಂದಲ ಸೃಷ್ಟಿಸಿದೆ. ಶರಣತತ್ವ ಅಂದ್ರೆ ಶುದ್ದ ಸಸ್ಯಹಾರಿ ಧರ್ಮವೇ? ಎಂಬುದು ಈಗ ಯಕ್ಷ ಪ್ರಶ್ನೆಯಾಗಿಯೇ ಕಾಡುತ್ತಿದೆ. ಲಿಂಗಾಯತ ಸಸ್ಯಹಾರಿ ಧರ್ಮವೇ ಆದರೆ ಈಗಾಗಲೇ ಲಿಂಗಾಯತದಲ್ಲಿ ಇರುವ ಮಾಂಸಹಾರಿ ಉಪಪಂಗಡದವರು ಎಲ್ಲಿ ಹೋಗಬೇಕು? ಆಹಾರದ ಕಟ್ಟುಪಾಡಿನ ಕಾರಣಕ್ಕೇ ಅವರನ್ನು ಲಿಂಗಾಯತರೆಂದು ಪರಿಗಣಿಸಬಾರದೇ?

    ಶರಣರ ಯಾರನ್ನೂ ಕೀಳಾಗಿ, ಕನಿಷ್ಟರು, ಶ್ರೇಷ್ಠರು ಭೇದಭಾವ ಮಾಡಲಿಲ್ಲ. ‘ಎನಗಿಂತ ಕಿರಿಯರಿಲ್ಲ’ ಎಂಬ ಭಾವ ಅದೆಷ್ಟು ಸರಳ..ಸುಂದರ…ಅನನ್ಯ ಅರ್ಥೈಸುತ್ತದೆ. ಯೋಚಿಸೋಣ..!!

    ಇದನ್ನೂ ಓದಿ:ಸಸ್ಯಹಾರಿಯಾಗಿದ್ದ ನಾನು ಬಾಡೂಟಕ್ಕೆ ತೆರೆದುಕೊಂಡದ್ದು ಹೀಗೆ…

    ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

    LEAVE A REPLY

    Please enter your comment!
    Please enter your name here

    - Advertisment -

    ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

    ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

    ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

    "ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

    ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

    ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

    ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

    ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

    ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

    'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

    ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

    ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

    ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

    ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

    ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

    ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

    ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

    ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

    “ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

    2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...