Homeಮುಖಪುಟಲಿಂಗಾಯತ ಸಸ್ಯಹಾರಿ ಧರ್ಮವೇ?-ಬಾಲಾಜಿ ಕುಂಬಾರ

ಲಿಂಗಾಯತ ಸಸ್ಯಹಾರಿ ಧರ್ಮವೇ?-ಬಾಲಾಜಿ ಕುಂಬಾರ

- Advertisement -
- Advertisement -

  • ಬಾಲಾಜಿ ಕುಂಬಾರ,ಬೀದರ
  • ರಾಜ್ಯದ ಶಾಲಾ ಕಾಲೇಜಿನ ಬಹುತೇಕ ಹಾಸ್ಟೇಲ್ ಮಕ್ಕಳಿಗೆ, ಗರ್ಭಿಣಿಯರಿಗೆ, ಅಂಗನವಾಡಿ ಮಕ್ಕಳಿಗೆ ಮೊಟ್ಟೆ ಹಾಗೂ ಬಾಳೆಹಣ್ಣು ಜೊತೆಗೆ ಇತರೆ ಪೌಷ್ಟಿಕಾಂಶದ ಕಾಳುಗಳನ್ನೂ ಕೊಡುವುದು ಮೊದಲಿನಿಂದಲೂ ಜಾರಿಯಲ್ಲಿದೆ. ಆದರೆ ಅದನ್ನು ಯಾವತ್ತೂ ಯಾರೂ ವಿರೋಧ ಮಾಡಲಿಲ್ಲ, ಆದರೆ ಈಗ ಸರ್ಕಾರ ಹೈದರಾಬಾದ್‌ ಕರ್ನಾಟಕ ಭಾಗದ ಶಾಲಾ ಮಕ್ಕಳಿಗೆ (ವಾರದಲ್ಲಿ ಮೂರು ದಿನ) ಮೊಟ್ಟೆ ಕೊಡಬೇಕೆಂದು ಜಾರಿಗೊಳಿಸಿದ “ಮೊಟ್ಟೆ ಯೋಜನೆ” ಮೇಲೆ ಕೆಲವು ಸಂಘಟನೆ, ಮಠಾಧೀಶರ ಕಣ್ಣು ಬಿದ್ದಿದೆ. ಮೊಟ್ಟೆ ವಿರುದ್ಧ ಇಷ್ಟೊಂದು ವ್ಯಾಪಕವಾಗಿ ಮೊಟ್ಟೆ ಚಳವಳಿ ಆರಂಭಿಸಲು ಉದ್ದೇಶ ಏನಿರಬಹುದು ಅರ್ಥವಾಗುತ್ತಿಲ್ಲ. ಇದು ಅಷ್ಟೇ ವಿಚಿತ್ರವೂ….ಹಾಸ್ಯಾಸ್ಪದಕ್ಕೂ ಕಾರಣವಾಗಿದೆ.

    ಹೌದು, ನಾನು ಮೊಟ್ಟೆ ತಿನ್ನುತ್ತೇನೆ, ಆದರೆ ನಾನು ಇಲ್ಲಿಯವರೆಗೆ ನಾನು ಯಾವುದೇ, ಮಾಂಸ ಸೇವಿಸಲಿಲ್ಲ (ನಮ್ಮ ಕುಟುಂಬವೂ ಸಸ್ಯಹಾರಿ). ಆದರೆ ನಾನು ಮಾಂಸಹಾರಿಗಳನ್ನು ಎಂದಿಗೂ ತಿರಸ್ಕಾರದಿಂದ ನೋಡಲಿಲ್ಲ. ಅವರು ನನ್ನೆದುರಿಗೆ ಕುಳಿತು ಮಾಂಸ ತಿಂದರೂ ನನಗ್ಯಾವ ತೊಂದರೆಯೂ ಆಗಲ್ಲ. ಅವರು ‘ ಮಾಂಸ ತಿನ್ನಿ’ ಎಂದು ನನಗೆ ಒತ್ತಾಯ ಮಾಡಲ್ಲ. ನೀವು ‘ಮಾಂಸ ಬಿಡಿ’ ಎಂದು ನಾನು ಆಗ್ರಹಿಸುವುದಿಲ್ಲ. ಆಹಾರ ಅವರವರ ವೈಯುಕ್ತಿಕ ಹಕ್ಕು, ಆದರೆ ಇದೇ ತಿನ್ನಿ, ಇದು ಬಿಡಿ ಎಂದು ಪ್ರಶ್ನಿಸುವ, ಹೇರುವ, ವಿರೋಧಿಸುವ ಹಕ್ಕು ಯಾರಿಗೂ ಇಲ್ಲ ಎಂದು ನಂಬಿರುವನು ನಾನು.

    ಇದನ್ನೂ ಓದಿ:ಮಾಂಸಾಹಾರಿ ಸಮುದಾಯಗಳ ರಾಕ್ಶಸೀಕರಣ ನಿಲ್ಲಲಿ

    ಆಹಾರದ ಕುರಿತು ಕಟ್ಟುಪಾಡು ಹೊರಡಿಸಿದ ಯಾವ ಧರ್ಮಗಳು ವ್ಯಾಪಕವಾಗಿ ಬೆಳೆಯಲು ಸಾಧ್ಯವಿಲ್ಲ. ಲಿಂಗಾಯತ ಕೂಡ ಅಷ್ಟೇ, ಕಳ್ಳರನ್ನು, ಸುಳ್ಳರನ್ನು ವೇಶ್ಯೆಯರನ್ನು, ಹೆಂಡ ಮಾರುವರನ್ನು ಸೇರಿ ಇನ್ನಿತರ ಹಲವರನ್ನು ಲಿಂಗಾಯತರನ್ನಾಗಿಸಿ, ಒಬ್ಬ ಪ್ರಜ್ಞಾವಂತ ಮನುಷ್ಯರಾಗಿ ಬದುಕುವಂತೆ ಕಲಿಸಿಕೊಟ್ಟ ಬಸವಣ್ಣ ಹಾಗೂ ಸಮಕಾಲೀನ ಶರಣರ ಮಹೋನ್ನತ ತತ್ವ ಸಿದ್ಧಾಂತದ ಆಶಯಗಳು ಇಂದು ಮತ್ತೆ ಮುನ್ನೆಲೆಗೆ ಬರಬೇಕಾಗಿದೆ. ಆದರೆ ಅವೆಲ್ಲವೂ ಇಂದು ಜಾತಿಯತೆ ದೃಷ್ಟಿಕೋನದಿಂದ ಅಳೆದು – ತೂಗಿ ಇವ್ರು ಲಿಂಗಾಯತರು ಎಂದು ಹೇಳುವ ಪರಿಸ್ಥಿತಿ ನಿರ್ಮಾಣವಾಗಿರುವುದು ದೊಡ್ಡ ದುರಂತ ಅನ್ನಬಹುದು.

    ಮಾಂಸಹಾರಿಗಳು ಕನಿಷ್ಟರು, ಸಸ್ಯಹಾರಿಗಳು ಶ್ರೇಷ್ಠರು ಎಂದು ವಿಂಗಡಿಸುವುದು ಕಂಡರೆ ಇದು ಜಾತಿಯತೆಯ ಭಾಗವೇ ಎಂದೆನಿಸುತ್ತದೆ. ಎಲ್ಲಾ ಲಿಂಗಾಯತರು ಸಸ್ಯಹಾರಿಗಳಲ್ಲ, ಸಸ್ಯಹಾರಿಗಳು ಎಲ್ಲರೂ ಲಿಂಗಾಯತರಲ್ಲ, ಇದರೊಳಗೆ ಮಾಂಸಹಾರಿ ಲಿಂಗಾಯತರೂ ಇದ್ದಾರೆ. ಅಷ್ಟೇ ಯಾಕೆ ಶುದ್ದ ಮಾಂಸಹಾರಿಗಳೂ ಕೂಡ ಬಸವತತ್ವವನ್ನು ಅತಿಯಾಗಿ ಹಚ್ಚಿಕೊಂಡು ಬಸವಾದಿ ಶರಣರನ್ನೇ ಉಸಿರಾಗಿಸಿಕೊಂಡು ಬದುಕುವ ಅದೆಷ್ಟೋ ಕುಟುಂಬಗಳು, ಸಮುದಾಯವೇ ನಮ್ಮಲ್ಲಿದೆ. ಬಹುತೇಕ ಸಸ್ಯಹಾರಿ, ಮಾಂಸಹಾರಿಗಳು ಬಸವಣ್ಣನವರನ್ನು ಬರೀ ಗುರುವಾಗಿ ಸ್ವೀಕರಿಸಿದ್ದಾರೆ ಹೊರತು ಅವರ್ಯಾರು ತತ್ವಕ್ಕೆ ಬದ್ಧರಲ್ಲ. ಒಟ್ಟಿನಲ್ಲಿ ಶರಣರ ಆಶಯಗಳ ವಿರೋಧ ನಡೆ.

    ಇದನ್ನೂ ಓದಿ:‘ಕೆಲವು ಜನರ ಅಹಂ ತಣಿಸಲು ಹೊರಗಡೆ ಮಾಂಸಾಹಾರ ಮಾರಾಟ ಮಾಡಬೇಡಿ ಎನ್ನುತ್ತೀರಿ’: ಚಾಟಿ ಬೀಸಿದ ಗುಜರಾತ್‌ ಹೈಕೋರ್ಟ್‌

    ಮೊಟ್ಟೆ ತಿನ್ನದ ಮಕ್ಕಳಿಗೆ ಪರ್ಯಾಯವಾಗಿ ಬಾಳೆಹಣ್ಣು ಇದೆ, ಆದರೆ ಕೆಲವರು ಮೊಟ್ಟೆ ತಿನ್ನುವರು ಮನೆಯಲ್ಲಿ ತಿಂದು ಬರಲಿ ಅಂತಾರೆ, ಇನ್ನೂ ಕೆಲವರು ಮೊಟ್ಟೆ ತಿನ್ನವರಿಗೆ ಮೊಟ್ಟೆ ಬದಲು ಹಣ ಕೊಡಿ ಅಂತಾರೆ, ಮೊಟ್ಟೆ ಬಾಳೆಹಣ್ಣು ನೀಡುವುದರಿಂದ ಭೇದಭಾವ , ಅಸಮಾನತೆ ಆಗುತ್ತೆ ಅನ್ನುವರು ಇನ್ನೂ ಒಂದಿಷ್ಟು ಮಂದಿ. ತಮ್ಮ ತಮ್ಮ ಸಮುದಾಯದಲ್ಲೇ ನಾವು ಶ್ರೇಷ್ಠರು ಅವರು ಕನಿಷ್ಟರು ಎಂದು ರಕ್ತಸಂಬಂಧ ಬೆಳೆಸಲು ಹಿಂದೇಟು ಹಾಕುವವರು, ತಳವರ್ಗ ಸಮುದಾಯವರನ್ನು ಇನ್ನೂ ಮನೆಯೊಳಗೆ ಬಿಡದೇ ಮೇಲಿಂದ ರೊಟ್ಟಿ ಕೊಡುವ ಅಸ್ಪೃಶ್ಯತೆಗಿಂತ ಮೊಟ್ಟೆ ಬಾಳೆಹಣ್ಣಿನ ನಡುವಿನ ಅಸಮಾನತೆ ದೊಡ್ಡದೇನಲ್ಲ ಬಿಡಿ.

    ನಾವು ಗಟ್ಟಿಯಾಗಿ ಮಾತನಾಡಬೇಕಾಗಿದ್ದು ಹಸಿವಿನ ಬಗ್ಗೆ, ಕ್ರೂರ ಜಾತಿಯತೆ ಬಗ್ಗೆ, ಅದನ್ನು ಬಿಟ್ಟು ಆಹಾರದ ಬಗ್ಗೆ ಅನಗತ್ಯ ವಿಷಯವಲ್ಲ. ಇದರಿಂದಾಗಿ ಲಿಂಗಾಯತ ತತ್ವವನ್ನು ಒಪ್ಪಿಕೊಂಡು, ಅಪ್ಪಿಕೊಂಡು ಸಾಧ್ಯವಾದಷ್ಟು ಮೈಗೂಡಿಸಿಕೊಂಡು ಬದುಕುವ ಮಾಂಸಪ್ರಿಯರಿಗೆ ಗೊಂದಲ ಸೃಷ್ಟಿಸಿದೆ. ಶರಣತತ್ವ ಅಂದ್ರೆ ಶುದ್ದ ಸಸ್ಯಹಾರಿ ಧರ್ಮವೇ? ಎಂಬುದು ಈಗ ಯಕ್ಷ ಪ್ರಶ್ನೆಯಾಗಿಯೇ ಕಾಡುತ್ತಿದೆ. ಲಿಂಗಾಯತ ಸಸ್ಯಹಾರಿ ಧರ್ಮವೇ ಆದರೆ ಈಗಾಗಲೇ ಲಿಂಗಾಯತದಲ್ಲಿ ಇರುವ ಮಾಂಸಹಾರಿ ಉಪಪಂಗಡದವರು ಎಲ್ಲಿ ಹೋಗಬೇಕು? ಆಹಾರದ ಕಟ್ಟುಪಾಡಿನ ಕಾರಣಕ್ಕೇ ಅವರನ್ನು ಲಿಂಗಾಯತರೆಂದು ಪರಿಗಣಿಸಬಾರದೇ?

    ಶರಣರ ಯಾರನ್ನೂ ಕೀಳಾಗಿ, ಕನಿಷ್ಟರು, ಶ್ರೇಷ್ಠರು ಭೇದಭಾವ ಮಾಡಲಿಲ್ಲ. ‘ಎನಗಿಂತ ಕಿರಿಯರಿಲ್ಲ’ ಎಂಬ ಭಾವ ಅದೆಷ್ಟು ಸರಳ..ಸುಂದರ…ಅನನ್ಯ ಅರ್ಥೈಸುತ್ತದೆ. ಯೋಚಿಸೋಣ..!!

    ಇದನ್ನೂ ಓದಿ:ಸಸ್ಯಹಾರಿಯಾಗಿದ್ದ ನಾನು ಬಾಡೂಟಕ್ಕೆ ತೆರೆದುಕೊಂಡದ್ದು ಹೀಗೆ…

    ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

    LEAVE A REPLY

    Please enter your comment!
    Please enter your name here

    - Advertisment -

    ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

    ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

    TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

    ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

    ‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

    ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

    ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

    ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

    ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

    ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

    ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

    ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

    ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

    ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

    ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

    ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

    ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

    ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

    ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

    ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...