Homeಕರ್ನಾಟಕಇದು ಜಾತ್ಯತೀತ ರಾಷ್ಟ್ರ, ಹಿಂದೂ ರಾಷ್ಟ್ರ ಬೇಕು ಅನ್ನೋರು ದೇಶ ಬಿಟ್ಟು ಹೋಗಿ: ಬಾಲನ್‌

ಇದು ಜಾತ್ಯತೀತ ರಾಷ್ಟ್ರ, ಹಿಂದೂ ರಾಷ್ಟ್ರ ಬೇಕು ಅನ್ನೋರು ದೇಶ ಬಿಟ್ಟು ಹೋಗಿ: ಬಾಲನ್‌

"ನಮ್ಮ ದೇಶದಲ್ಲಿ ಸಾವಿರ ವರ್ಷಗಳಿಂದ ಹಿಜಾಬ್‌ ಧರಿಸುತ್ತಿದ್ದಾರೆ. ಸುಲ್ತಾನರ ಕಾಲದಲ್ಲಿ, ಮೊಘಲ್‌, ಶಿವಾಜಿ ಕಾಲದಲ್ಲಿ, ವಿಜಯನಗರ ಅರಸರ ಕಾಲದಲ್ಲಿ ಹಿಜಾಬ್‌‌ ಇತ್ತು."

- Advertisement -
- Advertisement -

“ನಾವು ಮರೆತ್ತಿಲ್ಲ. ಜೀನ್ಸ್ ಪ್ಯಾಂಟ್ ಹಾಗೂ ಟೀ ಶರ್ಟ್‌ ಧರಿಸಿದ ಮಹಿಳೆಯರಿಗೆ ಥಳಿಸಿದವರು ನೀವು.  ಅಂದು ಏಟು ತಿಂದ ಮಹಿಳೆಯರ್‍ಯಾರೂ ಮುಸ್ಲಿಮರಲ್ಲ, ಶೂದ್ರರು” ಎಂದು ಹೈಕೋರ್ಟ್ ಹಿರಿಯ ವಕೀಲರಾದ ಎಸ್.ಬಾಲನ್‌ ಹೇಳಿದರು.

ಹಿಜಾಬ್‌‌ ಸಂಬಂಧ ಉಂಟಾಗಿರುವ ವಿವಾದದ ಹಿನ್ನೆಲೆಯಲ್ಲಿ ‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಅವರು, “ಹೆಣ್ಣುಮಕ್ಕಳು, ಶೂದ್ರರು ಓದಬಾರದೆಂದು ಕಾನೂನು ಮಾಡಿದವರು ನೀವು. ಬ್ರಾಹ್ಮಣ ಮಹಿಳೆಯರಿಗೂ ಓದುವ ಅವಕಾಶ ನೀಡದವರು ನೀವು. ಹಿಂದೂ ಕೋಡ್‌ ಬಿಲ್‌ ಮಂಡಿಸಿ ಮಹಿಳೆಯರಿಗೆ ವಿಚ್ಛೇದನಾ ಹಕ್ಕು, ಆಸ್ತಿಯಲ್ಲಿ ಹಕ್ಕು ಕೊಟ್ಟಿದ್ದು ಅಂಬೇಡ್ಕರ್‌. ಸಂವಿಧಾನ ಶಿಲ್ಪಿ ಅಂಬೇಡ್ಕರ್‌‌ ರವರ ಮನೆಯ ಮುಂದೆ ಧಿಕ್ಕಾರ ಹಾಕಿದವರು ನೀವು” ಎಂದು ವಾಗ್ದಾಳಿ ನಡೆಸಿದರು.

ಮಾಧ್ಯಮಗಳಲ್ಲಿ ಒಂದು ದನಿ ಬರುತ್ತಿದೆ. ನಾವು ಹಿಂದೂ ರಾಷ್ಟ್ರ ಕಟ್ಟುತ್ತೇವೆ. ಹಾಗಾಗಿ ನೀವು ಹಿಜಾಬ್  ಧರಿಸಬಾರದು. ಹಿಜಾಬ್‌ ಧರಿಸಿದರೆ ನೀವು ಪಾಕಿಸ್ತಾನಕ್ಕೆ ಹೋಗಿ ಎನ್ನುತ್ತಿದ್ದಾರೆ. ಈ ದೇಶ ಜಾತ್ಯತೀತ ದೇಶ. ಪಾಕಿಸ್ತಾನವಲ್ಲ. ಪಾಕಿಸ್ತಾನ ಧಾರ್ಮಿಕ ದೇಶ. ಹಿಂದೂ ರಾಷ್ಟ್ರ ಬೇಕು ಅನ್ನೋರು ದೇಶ ಬಿಟ್ಟು ಹೋಗಿ ಎಂದು ಬಾಲನ್‌ ಗುಡುಗಿದರು.

ಇದನ್ನೂ ಓದಿರಿ: ತಾರಕಕ್ಕೇರಿದ ಹಿಜಾಬ್, ಕೇಸರಿ ಶಾಲು ವಿವಾದ: ಶಿವಮೊಗ್ಗದಲ್ಲಿ ಕೇಸರಿ ಧ್ವಜ ಹಾರಿಸಿ ರಾಷ್ಟ್ರಧ್ವಜಕ್ಕೆ ಅವಮಾನ

ಈ ದೇಶ ಈ ಜನರ ದೇಶ. ಜನರ ಹಕ್ಕುಗಳಿಗೆ ಧಕ್ಕೆ ಮಾಡಬೇಡಿ. ನಿಮ್ಮ ರಾಜಕೀಯ ರಕ್ತದ ಮೇಲೆ, ದ್ವೇಶದ ಮೇಲೆ ನಿಂತಿದೆ. ಗುಜರಾತ್‌ನಲ್ಲಿ ಮುಸ್ಲಿಮರನ್ನು ಕೊಂದಿರಿ. ದಲಿತರು, ಹಿಂದುಳಿದವರನ್ನು ಜೈಲಿಗೆ ತಳ್ಳಿದಿರಿ. ವೈಶ್ಯರು, ಬ್ರಾಹ್ಮಣರು ಅಧಿಕಾರ ಹಿಡಿದು ಐಶಾರಾಮಿ ಜೀವನ ಮಾಡಿದಿರಿ ಎಂದು ವಾಗ್ದಾಳಿ ನಡೆಸಿದರು.

ಹಿಜಾಬ್‌, ಖಿಮರ್‌, ಅಬಯ ಎಂದರೆ ಏನು? ಹಿಜಾಬ್‌‌ ಎಂದರೆ ತಲೆಯ ಮೇಲೆ ಬಟ್ಟೆಯನ್ನು ಧರಿಸಿಕೊಳ್ಳುವುದು. ಖಿಮಾರ್‌ ಅಂದರೆ ಚಕ್ರಾಕಾರದ ಬಟ್ಟೆಯನ್ನು ತಲೆಯ ಮೇಲೆ ಹಾಕಿಕೊಳ್ಳುವುದು. ಅಬಯ ಅಂದರೆ ಇಡೀ ದೇಹದ ಮೇಲೆ ಬಟ್ಟೆಯನ್ನು ಧರಿಸುವುದು ಇಷ್ಟೇ. ಇದರ ಬಗ್ಗೆ ಕುರಾನ್‌ನಲ್ಲಿದೆ, ಶರಯತ್‌ನಲ್ಲಿದೆ. ಸಾಧಾರಣ ಉಡುಗೆ ಇರಬೇಕು. ದೇಹಾಕೃತಿ ಹೊರಗೆ ಕಾಣಬಾರದು ಎಂದು ಇಸ್ಲಾಂ ನಂಬಿದೆ. ಇದನ್ನು 1400 ವರ್ಷಗಳಿಂದ ಇಸ್ಲಾಂ ಅನುಯಾಯಿಗಳು ಅನುಸರಿಸುತ್ತಾ ಬಂದಿದ್ದಾರೆ. ಇದರ ಬಗ್ಗೆ ತಿಳಿಯಬೇಕಾದರೆ ಕುರಾನ್‌ ಓದಬೇಕು. ಚಾಪ್ಟರ್‌ 24 ವರ್ಸಸ್‌ 31 ಓದಿ, 34 ವರ್ಸಸ್‌‌ 59 ಓದಿ. ಇದರಲ್ಲಿ ಹಿಜಾಬ್‌, ಖಿಮೂರ್‌‌, ಹಿಜಾಬ್‌ ಕುರಿತು ವಿವರಗಳಿವೆ. ಇದೊಂದು ಧಾರ್ಮಿಕ ಆಚರಣೆ. ಇದೊಂದು ಧಾರ್ಮಿಕ ‍ವಸ್ತ್ರ. ಅದು ಅವರ ಧಾರ್ಮಿಕ ಹಕ್ಕು ಎಂದು ಪ್ರತಿಪಾದಿಸಿದರು.

ನಮ್ಮ ದೇಶದಲ್ಲಿ ಸಾವಿರ ವರ್ಷಗಳಿಂದ ಹಿಜಾಬ್‌ ಧರಿಸುತ್ತಿದ್ದಾರೆ. ಸುಲ್ತಾನರ ಕಾಲದಲ್ಲಿ, ಮೊಘಲ್‌, ಶಿವಾಜಿ ಕಾಲದಲ್ಲಿ, ವಿಜಯನಗರ ಅರಸರ ಕಾಲದಲ್ಲಿ ಹಿಜಾಬ್‌‌ ಇತ್ತು. ಮುಸ್ಲಿಂ ಮಹಿಳೆಯರು ತಮ್ಮ ಗುರುತು ಎಂಬಂತೆ ಹಿಜಾಬ್‌ ಧರಿಸುತ್ತಲೇ ಬಂದಿದ್ದಾರೆ. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಹಜರತ್ ಬೇಗಂ ಥರದ ವೀರ ಮಹಿಳೆಯರೂ ಹಿಜಾಬ್‌ ಧರಿಸಿ ಹೋರಾಡಿದ್ದರು ಎಂದು ಹೇಳಿದರು.

ಇದನ್ನೂ ಓದಿರಿ: Hijab Live | ಹಿಜಾಬ್‌ ಅರ್ಜಿ ವಿಚಾರಣೆ ಲೈವ್‌ | ಇರಿ ನಾನು ಕೆಲವು ಟಿಪ್ಪಣಿ ಮಾಡುತ್ತೇನೆ: ನ್ಯಾಯಮೂರ್ತಿ ದೀಕ್ಷಿತ್‌

ಸಿಖ್‌ಗಳು ಶೇ. 1.8 ಇದ್ದಾರೆ. ಇಸ್ಲಾಮಿಯರ ಸಂಖ್ಯೆ ಶೇ. 15ರಷ್ಟು ಇದೆ. ಅಂದರೆ ದೇಶದಲ್ಲಿ ಇಪ್ಪತ್ತು ಕೋಟಿ ಜನರಿದ್ದಾರೆ. ಸಿಖ್‌ಗಳು ಆರ್ಮಿಯಲ್ಲಿ ಗಡ್ಡ ಬಿಟ್ಟಿರುತ್ತಾರೆ. ಟರ್ಬನ್ ಹಾಕಿರುತ್ತಾರೆ. ಅವರನ್ನು ಶಾಲೆಗಳಲ್ಲಿ ಸೇರಿಸಿಕೊಳ್ಳುತ್ತೀರಿ. ಸಿಖ್‌ಗಳು ಗಡ್ಡ ಬಿಡುವುದು, ಮುಸ್ಲಿಮರು ಹಿಜಾಬ್‌ ಧರಿಸುವುದು ಎರಡೂ ಒಂದೇ. ಅವರು ಗಡ್ಡ ಬಿಡಬಹುದು, ಇವರು ಹಿಜಾಬ್ ಹಾಕಬಾರದು. ಹಿಂದೂ ಮಹಿಳೆಯರು ಹಣೆಗೆ ಬಿಂದಿ ಇಡುತ್ತಾರೆ, ಕೈಗೆ ಬಳೆ ಹಾಕುತ್ತಾರೆ.  ಹೂ ಮುಡಿಯುತ್ತಾರೆ. ಸೆರಗು ಹಾಕಿಕೊಳ್ಳುತ್ತಾರೆ. ಅದು ಅವರ ಧಾರ್ಮಿಕ ಹಕ್ಕು ಎಂದು ತಿಳಿಸಿದರು.

ನೀವು ತಂದಿರುವ ಆದೇಶ ಬಾಂಬೇ ಹಾಗೂ ಕೇರಳ ಹೈಕೋರ್ಟ್, ಸುಪ್ರೀಂ ಕೋರ್ಟ್ ತೀರ್ಪುಗಳಿಗೆ ವಿರುದ್ಧವಿದೆ. ಹಿಜಾಬ್‌ ಧರಿಸುವುದು ಧಾರ್ಮಿಕರ ಹಕ್ಕು. ಆ ಧಾರ್ಮಿಕ ಗುರುತನ್ನು ಕೆಡಿಸಬೇಡಿ.

“ಇವರಿಗೂ ಭಯೋತ್ಪಾದನೆ ಸಂಘಟನೆಗೂ ಸಂಬಂಧ ಇದೆಯಾ ಹುಡುಕಿ, ಕಾಲ್ ಡೀಟೆಲ್ ತೆಗೆದುಕೊಳ್ಳಿ” ಎಂದು ಉನ್ನತ ಅಧಿಕಾರಿಗಳಿಗೆ ಹೋಮ್‌ ಮಿನಿಸ್ಟರ್‌ ಆದೇಶ ಮಾಡಿದ್ದಾರಂತೆ. ಇವರನ್ನು (ಹೆಣ್ಣುಮಕ್ಕಳನ್ನು) ಯುಎಪಿಎ ಕಾಯ್ದೆಯಡಿ ಸಿಕ್ಕಿಸಲು ನೀವು ಪ್ಲಾನ್ ಮಾಡ್ತಾ ಇದ್ದೀರಾ. ದೇಶದ್ರೋಹದ ಅಡಿಯಲ್ಲಿ ಬಂಧಿಸಲು ಪ್ಲಾನ್ ಮಾಡ್ತಾ ಇದ್ದೀರಿ. ಇದನ್ನು ಒಪ್ಪುವುದಿಲ್ಲ” ಎಂದರು.

ಇವತ್ತು ಮುಸ್ಲಿಮರ ಮೇಲೆ, ಕ್ರೈಸ್ತರ ಮೇಲೆ, ಕಮ್ಯುನಿಸ್ಟರು, ಕಾರ್ಮಿಕರು, ಆದಿವಾಸಿಗಳ ಮೇಲೆ ಎರಗಿದ್ದೀರಿ. ನಾಳೆ ನೀವು ಸಿಖ್‌ಗಳ ಮೇಲೆ ಬರುತ್ತೀರಿ. ದೇಶವನ್ನು ಕಟ್ಟಿರುವ ಶೇ. 95ರಷ್ಟು ಜನರಿಗೆ ತೊಂದರೆ ಕೊಡುತ್ತಿದ್ದೀರಿ. ಕಾರ್ಮಿಕರು, ರೈತರ ಹಕ್ಕನ್ನು ಕಿತ್ತುಕೊಂಡಿದ್ದೀರಿ. ವ್ಯಾಪಾರಿಗಳ ಹಕ್ಕನ್ನು ಜಿಎಸ್‌ಟಿ ಹಾಕಿ ಕಿತ್ತುಕೊಂಡಿದ್ದೀರಿ. ಜನರ ಹಕ್ಕನ್ನು ಡಿಮಾಟೈಷೇಷನ್‌ ಮಾಡಿ ಕಿತ್ತುಕೊಂಡಿದ್ದೀರಿ. ಏರೋಪ್ಲೇನ್‌, ರೋಡ್‌, ಟೆಲಿಫೋನ್‌ ಎಲ್ಲವನ್ನೂ ಮಾರುತ್ತಿದ್ದೀರಿ. ಇದನ್ನು ಮುಚ್ಚಿಹಾಕಲು ಹಿಜಾಬ್‌ ಎನ್ನುತ್ತಿದ್ದೀರಿ. ಇದು ಸರಿಯಲ್ಲ. ಜನ ನಿಮಗೆ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.


ಇದನ್ನೂ ಓದಿರಿ: ಹಿಜಾಬ್ ವಿವಾದ: ಮುಸ್ಲಿಂ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ ಜೈ ಶ್ರೀರಾಮ್ ಘೋಷಣೆ, ವಿದ್ಯಾರ್ಥಿನಿಯರ ತಿರುಗೇಟು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಬಾಲನ್ ಅವರೇ ಇದು ಹಿಂದೂ ನೆಲಗಟ್ಟಿನ ಮೇಲೆ ನಿರ್ಮಾಣ ಆಗಿರುವ ದೇಶ ,ಇಲ್ಲಿ ಹಿಂದೂಗಳೇ ಸಾರ್ವಭೌಮ ನೀನು ದೇಶ ಬಿಟ್ಟು ಹೋಗಬಹುದು

  2. ಬಾಲನ್ ಅವರೇ ಇದು ಹಿಂದೂ ನೆಲಗಟ್ಟಿನ ಮೇಲೆ ನಿರ್ಮಾಣ ಆಗಿರುವ ದೇಶ ,ಇಲ್ಲಿ ಹಿಂದೂಗಳೇ ಸಾರ್ವಭೌಮ ನೀನು ದೇಶ ಬಿಟ್ಟು ಹೋಗಬಹುದು

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...