Homeಅಂತರಾಷ್ಟ್ರೀಯಬಾಲಕಿ ಜ್ಯೋತಿ 1200 ಕಿ.ಮಿ. ಕ್ರಮಿಸಿದ್ದು ಭಾರತೀಯರ ಸುಂದರವಾದ ಸಾಧನೆಯೆಂದ ಇವಾಂಕ ಟ್ರಂಪ್: ಹಲವರ ಆಕ್ರೋಶ

ಬಾಲಕಿ ಜ್ಯೋತಿ 1200 ಕಿ.ಮಿ. ಕ್ರಮಿಸಿದ್ದು ಭಾರತೀಯರ ಸುಂದರವಾದ ಸಾಧನೆಯೆಂದ ಇವಾಂಕ ಟ್ರಂಪ್: ಹಲವರ ಆಕ್ರೋಶ

- Advertisement -
- Advertisement -

ತನ್ನ ತಂದೆಯನ್ನು 1200 ಕಿ.ಮೀ. ದೂರದ ಹಳ್ಳಿಗೆ ತಲುಪಿಸಿದ ಜ್ಯೋತಿ ಕುಮಾರಿಯ ವರದಿಯನ್ನು ಇಟ್ಟು ಭಾರತೀಯರನ್ನು ಹೊಗಳಿದ ಇವಾಂಕ ಟ್ರಂಪ್ ವಿರುದ್ದ ಹಲವಾರು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಗುರುಗ್ರಾಮ್‌ನಲ್ಲಿ ಸಿಲುಕಿಕೊಂಡಿದ್ದ ತನ್ನ ಗಾಯಗೊಂಡ ತಂದೆಯನ್ನು 1,200 ಕಿ.ಮೀ ಗಿಂತಲೂ ದೂರದ ಹಳ್ಳಿಗೆ ಸೈಕಲ್‌ನ ಹಿಂಭಾಗದಲ್ಲಿ ಕೂರಿಸಿ ಕರೆದೊಯ್ದದ ಜ್ಯೋತಿ ಕುಮಾರಿ ಎಂಬ ಬಿಹಾರದ ಬಾಲಕಿಯನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಗಳು ಇವಾಂಕ ಟ್ರಂಪ್ “ಈ ಸಾಧನೆಯೂ ಭಾರತೀಯರ ಸಹಿಷ್ಣುತೆ ಮತ್ತು ಪ್ರೀತಿಯ ಕಲ್ಪನೆಯನ್ನು ಸೆರೆಹಿಡಿದಿದೆ, ಹಾಗೆಯೆ ಸೈಕ್ಲಿಂಗ್ ಪಡರೇಷನ್ ಕೂಡಾ” ಎಂದು ಹೇಳಿದ್ದರು. ಇದನ್ನು ಖಂಡಿಸಿ ಹಲವಾರು ಜನರು ಇವಾಂಕ ಇವಾಂಕ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಇಂಡಿಯಾಟುಡೆಯ ಮಾಜಿ ಸಂಪಾದಕ ದಿಲೀಪ್ ಮಂಡಲ್ “ಜ್ಯೋತಿ ಪಾಸ್ವಾನ್ ಅವರ ಈ ಕಥೆಯು ಧೈರ್ಯ ಮತ್ತು ಉತ್ಸಾಹದ ಜೊತೆಗೆ ಭಾರತದ ಬಗ್ಗೆ ಇರುವ ದುಃಖ ಮತ್ತು ಅಸ್ವಸ್ಥತೆಯನ್ನು ಸಹ ತೋರಿಸುತ್ತದೆ. ಅಂತಹ ಕಥೆಗಳು ಭಾರತದಿಂದ ಜಗತ್ತನ್ನು ತಲುಪಬಾರದು ಎಂದು ಹಾರೈಸುತ್ತೇನೆ. ವಿಶ್ವದ ಜನಸಂಖ್ಯೆಯ 17% ಭಾರತದಲ್ಲಿ ವಾಸಿಸುತ್ತಿದ್ದಾರೆ. ಅವರ ಕಲ್ಯಾಣವಿಲ್ಲದೆ ವಿಶ್ವದ ಕಲ್ಯಾಣ ಅಸಾಧ್ಯ. ಎಚ್‌ಡಿಐನಲ್ಲಿ ಭಾರತ 130 ನೇ ಸ್ಥಾನದಲ್ಲಿದೆ.” ಎಂದು ಹೇಳಿದ್ದಾರೆ.

ಲೇಖಕಿ ರೂಪಾ ಸುಬ್ರಮಣ್ಯ “ನೀವು ಗಂಭೀರವಾಗಿ ಈ ವಿಸ್ಮೃತಿಶೀಲರಾಗಿದ್ದೀರಾ? ಭಾರತದ ಕೆಟ್ಟ ಕಲ್ಪನೆಯ ಲಾಕ್‌ಡೌನ್ ನಿಂದಾಗಿ ಈ ಮಗು ಮತ್ತು ಅವಳ ಕುಟುಂಬವು ಭಯಾನಕ ಅನುಭವವನ್ನು ಅನುಭವಿಸಿದೆ. ಈ ಘಟನೆ ಅವಳು ವೃತ್ತಿಪರ ಸೈಕ್ಲಿಸ್ಟ್ ಆಗಬೇಕೆಂಬ ಆಕಾಂಕ್ಷೆಯಿಂದ ಆಗಿದ್ದಲ್ಲ, ಇದು ಮಾನವೀಯ ದುರಂತವಾಗಿದೆ.” ಎಂದು ಹೇಳಿದ್ದಾರೆ.

ಲೇಖಕಿ ಸಂಜುಕ್ತ ಬಸು “ಬಡತನ ಎಂದರೇನು ಎಂಬುದರ ಬಗ್ಗೆ ನಿಮಗೆ ಗೊತ್ತಿಲ್ಲ. ನಿಮಗೆ ನಾಚಿಕೆಯಾಗಬೇಕು.” ಎಂದು ಹೇಳಿದ್ದಾರೆ.

ಮತ್ತೊಬ್ಬರು “ಇದರಲ್ಲಿ ಏನು ಸುಂದರವಾಗಿದೆ? ನೀವು ಬಾಲಕಿಯ ಅಸಹಾಯಕತೆಯನ್ನು ನೋಡುತ್ತಿಲ್ಲ. ಇದು ಮೋದಿ ಸರ್ಕಾರದ ಸಂಪೂರ್ಣ ವೈಫಲ್ಯ.” ಎಂದು ಕೇಂದ್ರ ಸರ್ಕಾರದ ವಿರುದ್ದ ಆರೋಪಿಸಿದ್ದಾರೆ.

ಮತ್ತೊಬ್ಬರು, “ನಮ್ಮಲ್ಲಿ ಅಂತಹ ನೂರಾರು ಜ್ಯೋತಿ ಕುಮಾರಿಯರು, ಹಸಿವಿನ ಹೊಟ್ಟೆ, ಬರಿಯ ಬೆತ್ತಲೆ ಪಾದಗಳು, ತಾಯಂದಿರು, ಅಂಗವಿಕಲರು ಇದ್ದಾರೆ. ಅಲ್ಲದೆ ಅವರೂ ಇದೇ ರೀತಿ ಅವರ ಸೈಕಲಿನಲ್ಲಿ, ಕಾಲ್ನಡಿಗೆಯಲ್ಲಿ, ಮನೆಗಳ ಕಡೆಗೆ ನಡೆಯುತ್ತಿದ್ದಾರೆ. ಮಕ್ಕಳನ್ನು ಹೊಂದಿರುವ ತಾಯಂದಿರು ಇನ್ನೂ ದೂರ ಹೋಗುತ್ತಿದ್ದಾರೆ. ಇದು ನಮಗೆ ಹೆಮ್ಮೆಯ ಅಥವಾ ವಿಷಾದದ ವಿಷಯವೇ ಎಂದು ನನಗೆ ತಿಳಿದಿಲ್ಲ.” ಎಂದು ಹೇಳಿ ಕೆಳಗಿನ ಚಿತ್ರವನ್ನು ಟ್ಯಾಗ್ ಮಾಡಿದ್ದಾರೆ.

ಸೂರ್ಯನಾರಾಯಣ್ ಎಂಬವರು “ಇದು ನಿಜವಾಗಿಯೂ ನಿಮ್ಮ ತಂದೆಯ ಸ್ನೇಹಿತರಾರ ನರೇಂದ್ರ ಮೋದಿಯ ವೈಫಲ್ಯವನ್ನು ತೋರಿಸುತ್ತಿದೆ. ಭಾರತದಲ್ಲಿ ಯಾವುದೇ ಮುನ್ನೆಚ್ಚರಿಕೆ ನೀಡದೇ ಲಾಕ್ ಡೌನ್ ಮಾಡಿದರಿಂದ, ಇಂತಹ ಲಕ್ಷಾಂತರ ಬಡ ಜನರನ್ನು ಹತಾಶೆಗೆ ತಳ್ಳಿದೆ. ನೀವು ಅದನ್ನು ಕೆಲವು ದೊಡ್ಡ ಸಾಧನೆ ಎಂದು ತೋರಿಸುತ್ತಿದ್ದೀರಿ!” ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಗುರುಗ್ರಾಮ್‌ನಲ್ಲಿ ಸಿಲುಕಿಕೊಂಡಿದ್ದ ಬಿಹಾರ ಮೂಲದ 15 ವರ್ಷದ ಬಾಲಕಿ ಜ್ಯೋತಿ ಕುಮಾರಿ ತನ್ನ ಗಾಯಗೊಂಡ ತಂದೆಯನ್ನು 1,200 ಕಿ.ಮೀ ದೂರದ ಹಳ್ಳಿಗೆ ಸೈಕಲ್ ಮೂಲಕ ಕರೆದೊಯ್ದಿದ್ದರು. ಇದನ್ನು ಗಮನಿಸಿದ ಸೈಕ್ಲಿಂಗ್ ಫಡರೇಷನ್ ಬಾಲಕಿಯನ್ನು ಲಾಕ್ ಡೌನ್ ನಂತರ ಟ್ರಯಲ್ ಗೆ ಬರುವಂತೆ ಕೇಳಿಕೊಂಡಿತ್ತು.


ಓದಿ: ತಾನು ಮಾಡುವ ಮಹಾನ್‌ ತಪ್ಪುಗಳಿಗೆ ಮೋದಿ ಬೆಲೆತೆರದೆ ಉಳಿದುಕೊಳ್ಳುವುದಾದರೂ ಹೇಗೆ?


ಓದಿ: ಅಮೆರಿಕಾ ಅಧ್ಯಕ್ಷರ 200 ವೆಂಟಿಲೇಟರ್ ಮತ್ತು ಪ್ರಧಾನಿ ಮೋದಿಯ ಕತೆ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...