Homeಮುಖಪುಟಜಾಗತಿಕ ಲಿಂಗಾಯಿತ ಮಹಾಸಭಾದ ಜಾಮದಾರ್ ಸಂದರ್ಶನ; ರಾಜಕಾರಣಿಗಳು ತಮ್ಮ ಲಾಭಕ್ಕೆ ಸ್ವಾಮಿಗಳನ್ನು ಬಳಸಿಕೊಳ್ಳುತ್ತಿದಾರಷ್ಟೇ

ಜಾಗತಿಕ ಲಿಂಗಾಯಿತ ಮಹಾಸಭಾದ ಜಾಮದಾರ್ ಸಂದರ್ಶನ; ರಾಜಕಾರಣಿಗಳು ತಮ್ಮ ಲಾಭಕ್ಕೆ ಸ್ವಾಮಿಗಳನ್ನು ಬಳಸಿಕೊಳ್ಳುತ್ತಿದಾರಷ್ಟೇ

- Advertisement -
- Advertisement -

ಕೆಲ ದಿನಗಳ ಹಿಂದಷ್ಟೇ ಭಾರಿ ಸದ್ದು ಮಾಡಿದ್ದ ಮೀಸಲಾತಿ ಹೋರಾಟ ಈಗ ನಡೆಯುತ್ತಿರುವ ಕಲಾಪದಲ್ಲಿ ಪ್ರಸ್ತಾಪವೇ ಆಗುತ್ತಿಲ್ಲ. ಭಾರಿ ಹವಾ ಮಾಡಿದ ಪಂಚಮಸಾಲಿ ಹೋರಾಟವೂ ಸಿ.ಡಿ ಗದ್ದಲದಲ್ಲಿ ಗಾಯಬ್ ಆಗಿದೆ. ಈ ನಡುವೆ, ಲಿಂಗಾಯತ ಧರ್ಮದಲ್ಲಿ ಈ ವೀರಶೈವರದೇನು ಕೆಲಸ, ಅವರು ಲಿಂಗಾಯತ ಧರ್ಮದ 100 ಉಪಪಂಗಡಗಳಲ್ಲಿ ಒಂದು ಅಷ್ಟೇ ಎಂದು ನಿವೃತ್ತ ಐಎಎಸ್ ಅಧಿಕಾರಿ, ಜಾಗತಿಕ ಲಿಂಗಾಯತ ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಶಿವಾನಂದ್ ಜಾಮದಾರ್ ಹೇಳಿದ್ದಾರೆ. ನಾನುಗೌರಿ.ಕಾಂ ಜೊತೆಗಿನ ದೂರವಾಣಿ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.

ನಾನುಗೌರಿ: ಇತ್ತೀಚೆಗೆ ಸುದ್ದಿಯಾದ ಪಂಚಮಸಾಲಿ ಮೀಸಲಾತಿ ಹೋರಾಟ ಸದನದಲ್ಲಿ ಸುದ್ದಿಯೇ ಆಗಲಿಲ್ಲ. ಈ ಕುರಿತು ನಿಮ್ಮ ಅಭಿಪ್ರಾಯ?

ಜಾಮದಾರ್: ರೀ ಅದೊಂದು ಹೋರಾಟವಾ? ಅಮಾಯಕ ಪಂಚಮಸಾಲಿಗಳನ್ನು ದಿಕ್ಕು ತಪ್ಪಿಸಿದ ಮತ್ತು ರಾಜಕಾರಣಿಗಳು ತಮ್ಮ ಲಾಭಕ್ಕೆ ಸ್ವಾಮಿಗಳನ್ನು ಬಳಸಿಕೊಂಡ ಹೋರಾಟವಾಗಿದೆ.

ನಾನುಗೌರಿ: ಅಂದರೆ ಪಂಚಮಸಾಲಿಗಳು 2ಎ ಮೀಸಲಾತಿಗೆ ಅರ್ಹರೇ ಅಲ್ಲ ಎಂಬುದು ನಿಮ್ಮ ಅಭಿಪ್ರಾಯವೇ?

ಜಾಮದಾರ್: ಎಲ್ಲ ಸಮುದಾಯಗಳಿಗೂ ತಮ್ಮ ಪಾಲಿನ ಮೀಸಲಾತಿ ಕೇಳುವ ಹಕ್ಕಿದೆ. ಆದರೆ ಇದನ್ನು ಯಡಿಯೂರಪ್ಪ ಆಗಲಿ, ಸಿಸಿ ಪಾಟೀಲ್, ನಿರಾಣಿ ಅವರಾಗಲಿ ಏಕ್‌ಧಂ ನಿರ್ಣಯ ಮಾಡಲು ಆಗಲ್ಲ. ಅದಕ್ಕೆ ಒಂದು ಪ್ರೊಸೆಸ್ ಅಂತಾ ಇದೆ. ಈ ರಾಜಕಾರಣಿಗಳು ತಮ್ಮ ಲಾಭಕ್ಕೆ ಸ್ವಾಮಿಗಳನ್ನು ಬಳಸಿಕೊಳ್ಳುತ್ತಿದಾರಷ್ಟೇ.

ನಾನುಗೌರಿ.ಕಾಂ: 3-ಬಿಯಿಂದ 2ಎ ಗೆ ಸೇರಲು ಅವರ ಪ್ರತಿಭಟನೆ ನಡೆಯಿತು. ಈ ಕುರಿತು ನಿಮ್ಮ ಅಭಿಪ್ರಾಯ ಏನು?

ಜಾಮದಾರ್: ಲಿಂಗಾಯತ ಧರ್ಮದಲ್ಲಿ 100 ಉಪ ಪಂಗಡಗಳಿವೆ. 3-ಬಿಯಲ್ಲಿ ಉಲ್ಲೇಖ ಆಗಿರುವುದು ಕೇವಲ 23 ಲಿಂಗಾಯತ ಉಪ ಪಂಗಡಗಳಷ್ಟೆ. ಉಳಿದ 77 ಉಪ ಪಂಗಡಗಳ ಬಗ್ಗೆ ಯಾರೂ ಯೊಚಿಸುತ್ತಿಲ್ಲ. ಕೆಲವು ರಾಜಕಾರಣಿಗಳ ಪುಸಲಾವಣೆಯೊಂದಿಗೆ ಕಾವಿ ತೊಟ್ಟವರು ಪಂಚಮಸಾಲಿ ಸಮಯದಾಯದ ದಿಕ್ಕು ತಪ್ಪಿಸಲು ನೋಡಿದರು. ಅದರ ಭಾಗವೇ ಈ ಹೋರಾಟ. ಈ ಹೋರಾಟ ಲಿಂಗಾಯತರಿಗೆ ಒಂದು ಕಪ್ಪು ಚುಕ್ಕೆ.

ನಾನುಗೌರಿ: ಇದರ ಹಿಂದೆ ಒಂದು ದೊಡ್ಡ ಶಕ್ತಿಯೇ ಇದೆಯಲ್ಲವಾ?

ಜಾಮದಾರ್: ಎಲ್ಲ ಪಂಚಮಸಾಲಿಗಳಲ್ಲ. ಆದರೆ ಅವರನ್ನು ಪ್ರತಿನಿಧಿಸುತ್ತೇವೆ ಎನ್ನುವ ಸ್ವಾಮಿಗಳು, ರಾಜಕಾರಣಿಗಳ ಒಂದು ಗುಂಪಿದೆ. ಬೇಡ ಜಂಗಮರ ಹೆಸರಲ್ಲಿ ಬೇಡರ ಮೀಸಲಾತಿ ಕದಿಯುವ ಗುಂಪಿದೆ ಮತ್ತು ವೀರಶೈವ-ಲಿಂಗಾಯತ ಎನ್ನುವ ತಳಬುಡವಿಲ್ಲದ ಗುಂಪೂ ಇದೆ. ಈ ಮೂರೂ ಗುಂಪುಗಳು ಅಖಂಡ ಲಿಂಗಾಯತ ಧರ್ಮವನ್ನು ಒಡೆದು ಹಾಕುತ್ತಿವೆ.

ನಾನುಗೌರಿ: ನೀವು ವೀರಶೈವ-ಲಿಂಗಾಯತ ಎಂಬ ತಳಬುಡವಿಲ್ಲದ ಗುಂಪು ಎಂದಿರಿ. ಈಗ ಅದೇ ಹೆಸರಲ್ಲಿ ಒಂದು ನಿಗಮ ಆಗಿದೆಯಲ್ಲ?

ಜಾಮದಾರ್: ವೀರಶೈವ-ಲಿಂಗಾಯತ ಅಂದರೆ ಯಾರ‍್ರಿ ಇವರು? ವೀರಶೈವರೂ ಅಲ್ಲ, ಈ ಕಡೆ ಲಿಂಗಾಯತರೂ ಅಲ್ಲ. ಲಿಂಗಾಯತ ಧರ್ಮಧ ನೂರು ಉಪ ಪಂಗಡಗಳಲ್ಲಿ ಅದೂ ಒಂದು ಅಷ್ಟೇ. ಈ ಹೆಸರಲ್ಲಿ ಒಂದು ಸರ್ವಶ್ರೇಷ್ಠ ಧರ್ಮವಾದ ಲಿಂಗಾಯತ ಧರ್ಮವನ್ನು ಇವರೆಲ್ಲ ನಾಶ ಮಾಡಲು ಹೊರಟಿದ್ದಾರೆ. ನಾವು ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಮಾಡಿದಾಗ, ನೀವೆಲ್ಲ ಧರ್ಮ ಒಡೆಯುತ್ತಿದ್ದೀರಾ ಎಂದರು. ಈಗ ಅವರು ಮಾಡುತ್ತಿರುವುದೇನು? ಕೆಲವು ಸ್ವ ಹಿತಾಸಕ್ತಿ ಗುಂಪುಗಳು ಪುಡಿಗಾಸಿಗಾಗಿ ಧರ್ಮ ಒಡೆಯುತ್ತಿವೆ. ಇದರ ಹಿಂದೆ ಒಂದು ವ್ಯವಸ್ಥಿತ ಲಾಭಕರ ಸ್ವ ಹಿತಾಸಕ್ತಿಯ ಗುಂಪು ಇವೆ.

ನಾನುಗೌರಿ: ಈ ನಿಗಮಕ್ಕೆ 500 ಕೋಟೊ ರೂ ಕೊಟ್ಟಿದ್ದಾರಲ್ಲ?

ಜಾಮದಾರ್: ಅಲ್ರೀ ಇನ್ನೂ ಆ ನಿಗಮ ಅಧಿಕೃತವಾಗಿ ಚಾಲನೆಗೇ ಬಂದಿಲ್ಲ. ಅದಕ್ಕೆ 500 ಅಲ್ಲ, 100 ಕೋಟಿ ಅಲ್ಲ, 10 ಕೋಟಿ ರೂ ಕೂಡ ಸಿಗಲ್ಲ. ಇದೆಲ್ಲ ಒಂದು ಹುಚ್ಚಾಟ ಮತ್ತು ಪಾಲಿಟಿಕಲ್ ಗೇಮ್ ಅಷ್ಟೇ.

ನಾನುಗೌರಿ: ಅಂದರೆ ಈ ಹೋರಾಟಕ್ಕೆ ಭದ್ರ ಬುನಾದಿಯೇ ಇಲ್ಲ ಎನ್ನುತ್ತೀರಾ?

ಜಾಮದಾರ್: ಈ ಕುರಿತು ಅಂತಿಮ ತೀರ್ಮಾನ ಕೊಡಲಾರೆ, ಆದರೆ ಖಾವಿ ಧರಿಸಿ ಮೀಸಲಾತಿ ಕೇಳಿದ ಕೂಡಲೇ ಅದು ಸಿಗಲ್ಲ. ಅದಕ್ಕೆ ಪ್ರೊಸೆಸ್ ಇದೆ. ಯಡಿಯೂರಪ್ಪ ಅಂತಲ್ಲ, ಯಾರೇ ಸಿಎಂ ಆಗಿದ್ದರೂ ಆ ಪ್ರಕ್ರಿಯೆಯ ಮೂಲಕವೇ ಹೋಗಬೇಕು. ಲಿಂಗಾಯತ ಪ್ರತ್ಯೇಕ ಧರ್ಮ ಸಾಂವಿಧಾನಿಕ ಮಾನ್ಯತೆ ತಡೆದ ಬಿಜೆಪಿ-ಆರ್‌ಎಸ್‌ಎಸ್ ಇಂತಹ ದುಸ್ಸಾಹಸ ಮಾಡುತ್ತಿವೆ. ಈ ವಿಷಯದಲ್ಲಿ ಕಾಂಗ್ರೆಸ್, ಬಿಜೆಪಿ ಎಲ್ಲ ಒಂದೇ ಬಿಡಿ.

ನಾನುಗೌರಿ: ಪಂಚಮಸಾಲಿಗಳಿಗೆ 2-ಎ ಸ್ಥಾನಮಾನ ಸಿಕ್ಕಿತು ಅಂದುಕೊಳ್ಳೋಣ. ಆಗ ಏನಾಗಬಹುದು?

ಜಾಮದಾರ್: ಈಗ ಕೇಂದ್ರ ಸರ್ಕಾರ ಕಳೆದ ವರ್ಷ ಜಾರಿ ಮಾಡಿದ 10 ಪರ್ಸೆಂಟ್ ಮೀಸಲಾತಿಯಲ್ಲಿ ಪಂಚಮಸಾಲಿಗಳು, ಬೇಡ ಜಂಗಮರು, ಬಣಜಿಗರು ಕೂಡ ಬರುತ್ತಾರೆ. 2-ಎ ಮತ್ತು 10 ಪರ್ಸೆಂಟ್ ಎರಡನ್ನೂ ಪಡೆಯಲಾಗಲ್ಲ. ಈ ಕಾನೂನು ಬಗ್ಗೆ ತಿಳಿಯದೇ ಏನೇನೋ ಹೋರಾಟ ಮಾಡುತ್ತಿದ್ದಾರೆ.

ಸಂದರ್ಶನ: ಪಿ.ಕೆ. ಮಲ್ಲನಗೌಡರ್

(ಈ ಸಂದರ್ಶನದಲ್ಲಿ ತಪ್ಪು ಗ್ರಹಿಕೆಯಿಂದಾಗಿ ಖಾವಿ ಧರಿಸಿದವರ ಪುಡಿಗಾಸಿನ ಹೋರಾಟ ಎಂದು ಬಂದಿತ್ತು. ಅದಕ್ಕಾಗಿ ವಿಷಾಧಿಸುತ್ತೇವೆ)


ಇದನ್ನೂ ಓದಿ: ‘ನಾವು ಯಾರ ಮೀಸಲಾತಿಯನ್ನೂ ಕಿತ್ತುಕೊಳ್ಳಲ್ಲ’ – ಪಂಚಮಸಾಲಿ ಸ್ವಾಮೀಜಿಯ ವಿಶೇಷ ಸಂದರ್ಶನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಜಾಮದಾರರದು ತಪ್ಪು ಅಭಿಪ್ರಾಯ..
    ಈ ಹಿಂದೆ ಬೇಡಜಂಗಮರೆಂಬ ಪಂಗಡ ಲಿಂಗಾಯತ ಪಂಥದಲ್ಲಿ ಬರುವುದು ಎಂದಿದ್ದರು.
    ಜಂಗಮ, ಜಾತಿ ಪಟ್ಟಿಯಲ್ಲಿ ಏಕಿಲ್ಲ ಎಂಬುದನ್ನು ಜಾಮದಾರ ವಿವರಿಸಲಿ.
    ಮೀಸಲಾತಿ ಇರುವುದು ಜಾತಿಗೇ ಹೊರತು ಮತ, ಧರ್ಮಕ್ಕಲ್ಲ ಎನ್ನುವ ಸಾಮಾನ್ಯ ಅರಿವೂ ಜಾಮದಾರರಿಗಿಲ್ಲ.
    ಬಣಜಿಗ, 2A ದಲ್ಲಿ ಶೈಕ್ಷಣಿಕ ಮೀಸಲಾತಿ ಮತ್ತು ಕೇಂದ್ರ OBC ಯಲ್ಲಿ ಬರುತ್ತದೆ ಎನ್ನುವ ಸತ್ಯವನ್ನೂ ಮುಚ್ಚಿಡುತ್ತಾರೆ. ಮೀಸಲಾತಿ ವಂಚಿಸಿ ವೀರಶೈವ ಅಥವಾ ಲಿಂಗಾಯತರನ್ನು ಶೋಷಿಸುವುದೇ ಧರ್ಮವಾಗಬಾರದು..!!

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...