Homeಮುಖಪುಟಜಾಗತಿಕ ಲಿಂಗಾಯಿತ ಮಹಾಸಭಾದ ಜಾಮದಾರ್ ಸಂದರ್ಶನ; ರಾಜಕಾರಣಿಗಳು ತಮ್ಮ ಲಾಭಕ್ಕೆ ಸ್ವಾಮಿಗಳನ್ನು ಬಳಸಿಕೊಳ್ಳುತ್ತಿದಾರಷ್ಟೇ

ಜಾಗತಿಕ ಲಿಂಗಾಯಿತ ಮಹಾಸಭಾದ ಜಾಮದಾರ್ ಸಂದರ್ಶನ; ರಾಜಕಾರಣಿಗಳು ತಮ್ಮ ಲಾಭಕ್ಕೆ ಸ್ವಾಮಿಗಳನ್ನು ಬಳಸಿಕೊಳ್ಳುತ್ತಿದಾರಷ್ಟೇ

- Advertisement -
- Advertisement -

ಕೆಲ ದಿನಗಳ ಹಿಂದಷ್ಟೇ ಭಾರಿ ಸದ್ದು ಮಾಡಿದ್ದ ಮೀಸಲಾತಿ ಹೋರಾಟ ಈಗ ನಡೆಯುತ್ತಿರುವ ಕಲಾಪದಲ್ಲಿ ಪ್ರಸ್ತಾಪವೇ ಆಗುತ್ತಿಲ್ಲ. ಭಾರಿ ಹವಾ ಮಾಡಿದ ಪಂಚಮಸಾಲಿ ಹೋರಾಟವೂ ಸಿ.ಡಿ ಗದ್ದಲದಲ್ಲಿ ಗಾಯಬ್ ಆಗಿದೆ. ಈ ನಡುವೆ, ಲಿಂಗಾಯತ ಧರ್ಮದಲ್ಲಿ ಈ ವೀರಶೈವರದೇನು ಕೆಲಸ, ಅವರು ಲಿಂಗಾಯತ ಧರ್ಮದ 100 ಉಪಪಂಗಡಗಳಲ್ಲಿ ಒಂದು ಅಷ್ಟೇ ಎಂದು ನಿವೃತ್ತ ಐಎಎಸ್ ಅಧಿಕಾರಿ, ಜಾಗತಿಕ ಲಿಂಗಾಯತ ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಶಿವಾನಂದ್ ಜಾಮದಾರ್ ಹೇಳಿದ್ದಾರೆ. ನಾನುಗೌರಿ.ಕಾಂ ಜೊತೆಗಿನ ದೂರವಾಣಿ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.

ನಾನುಗೌರಿ: ಇತ್ತೀಚೆಗೆ ಸುದ್ದಿಯಾದ ಪಂಚಮಸಾಲಿ ಮೀಸಲಾತಿ ಹೋರಾಟ ಸದನದಲ್ಲಿ ಸುದ್ದಿಯೇ ಆಗಲಿಲ್ಲ. ಈ ಕುರಿತು ನಿಮ್ಮ ಅಭಿಪ್ರಾಯ?

ಜಾಮದಾರ್: ರೀ ಅದೊಂದು ಹೋರಾಟವಾ? ಅಮಾಯಕ ಪಂಚಮಸಾಲಿಗಳನ್ನು ದಿಕ್ಕು ತಪ್ಪಿಸಿದ ಮತ್ತು ರಾಜಕಾರಣಿಗಳು ತಮ್ಮ ಲಾಭಕ್ಕೆ ಸ್ವಾಮಿಗಳನ್ನು ಬಳಸಿಕೊಂಡ ಹೋರಾಟವಾಗಿದೆ.

ನಾನುಗೌರಿ: ಅಂದರೆ ಪಂಚಮಸಾಲಿಗಳು 2ಎ ಮೀಸಲಾತಿಗೆ ಅರ್ಹರೇ ಅಲ್ಲ ಎಂಬುದು ನಿಮ್ಮ ಅಭಿಪ್ರಾಯವೇ?

ಜಾಮದಾರ್: ಎಲ್ಲ ಸಮುದಾಯಗಳಿಗೂ ತಮ್ಮ ಪಾಲಿನ ಮೀಸಲಾತಿ ಕೇಳುವ ಹಕ್ಕಿದೆ. ಆದರೆ ಇದನ್ನು ಯಡಿಯೂರಪ್ಪ ಆಗಲಿ, ಸಿಸಿ ಪಾಟೀಲ್, ನಿರಾಣಿ ಅವರಾಗಲಿ ಏಕ್‌ಧಂ ನಿರ್ಣಯ ಮಾಡಲು ಆಗಲ್ಲ. ಅದಕ್ಕೆ ಒಂದು ಪ್ರೊಸೆಸ್ ಅಂತಾ ಇದೆ. ಈ ರಾಜಕಾರಣಿಗಳು ತಮ್ಮ ಲಾಭಕ್ಕೆ ಸ್ವಾಮಿಗಳನ್ನು ಬಳಸಿಕೊಳ್ಳುತ್ತಿದಾರಷ್ಟೇ.

ನಾನುಗೌರಿ.ಕಾಂ: 3-ಬಿಯಿಂದ 2ಎ ಗೆ ಸೇರಲು ಅವರ ಪ್ರತಿಭಟನೆ ನಡೆಯಿತು. ಈ ಕುರಿತು ನಿಮ್ಮ ಅಭಿಪ್ರಾಯ ಏನು?

ಜಾಮದಾರ್: ಲಿಂಗಾಯತ ಧರ್ಮದಲ್ಲಿ 100 ಉಪ ಪಂಗಡಗಳಿವೆ. 3-ಬಿಯಲ್ಲಿ ಉಲ್ಲೇಖ ಆಗಿರುವುದು ಕೇವಲ 23 ಲಿಂಗಾಯತ ಉಪ ಪಂಗಡಗಳಷ್ಟೆ. ಉಳಿದ 77 ಉಪ ಪಂಗಡಗಳ ಬಗ್ಗೆ ಯಾರೂ ಯೊಚಿಸುತ್ತಿಲ್ಲ. ಕೆಲವು ರಾಜಕಾರಣಿಗಳ ಪುಸಲಾವಣೆಯೊಂದಿಗೆ ಕಾವಿ ತೊಟ್ಟವರು ಪಂಚಮಸಾಲಿ ಸಮಯದಾಯದ ದಿಕ್ಕು ತಪ್ಪಿಸಲು ನೋಡಿದರು. ಅದರ ಭಾಗವೇ ಈ ಹೋರಾಟ. ಈ ಹೋರಾಟ ಲಿಂಗಾಯತರಿಗೆ ಒಂದು ಕಪ್ಪು ಚುಕ್ಕೆ.

ನಾನುಗೌರಿ: ಇದರ ಹಿಂದೆ ಒಂದು ದೊಡ್ಡ ಶಕ್ತಿಯೇ ಇದೆಯಲ್ಲವಾ?

ಜಾಮದಾರ್: ಎಲ್ಲ ಪಂಚಮಸಾಲಿಗಳಲ್ಲ. ಆದರೆ ಅವರನ್ನು ಪ್ರತಿನಿಧಿಸುತ್ತೇವೆ ಎನ್ನುವ ಸ್ವಾಮಿಗಳು, ರಾಜಕಾರಣಿಗಳ ಒಂದು ಗುಂಪಿದೆ. ಬೇಡ ಜಂಗಮರ ಹೆಸರಲ್ಲಿ ಬೇಡರ ಮೀಸಲಾತಿ ಕದಿಯುವ ಗುಂಪಿದೆ ಮತ್ತು ವೀರಶೈವ-ಲಿಂಗಾಯತ ಎನ್ನುವ ತಳಬುಡವಿಲ್ಲದ ಗುಂಪೂ ಇದೆ. ಈ ಮೂರೂ ಗುಂಪುಗಳು ಅಖಂಡ ಲಿಂಗಾಯತ ಧರ್ಮವನ್ನು ಒಡೆದು ಹಾಕುತ್ತಿವೆ.

ನಾನುಗೌರಿ: ನೀವು ವೀರಶೈವ-ಲಿಂಗಾಯತ ಎಂಬ ತಳಬುಡವಿಲ್ಲದ ಗುಂಪು ಎಂದಿರಿ. ಈಗ ಅದೇ ಹೆಸರಲ್ಲಿ ಒಂದು ನಿಗಮ ಆಗಿದೆಯಲ್ಲ?

ಜಾಮದಾರ್: ವೀರಶೈವ-ಲಿಂಗಾಯತ ಅಂದರೆ ಯಾರ‍್ರಿ ಇವರು? ವೀರಶೈವರೂ ಅಲ್ಲ, ಈ ಕಡೆ ಲಿಂಗಾಯತರೂ ಅಲ್ಲ. ಲಿಂಗಾಯತ ಧರ್ಮಧ ನೂರು ಉಪ ಪಂಗಡಗಳಲ್ಲಿ ಅದೂ ಒಂದು ಅಷ್ಟೇ. ಈ ಹೆಸರಲ್ಲಿ ಒಂದು ಸರ್ವಶ್ರೇಷ್ಠ ಧರ್ಮವಾದ ಲಿಂಗಾಯತ ಧರ್ಮವನ್ನು ಇವರೆಲ್ಲ ನಾಶ ಮಾಡಲು ಹೊರಟಿದ್ದಾರೆ. ನಾವು ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಮಾಡಿದಾಗ, ನೀವೆಲ್ಲ ಧರ್ಮ ಒಡೆಯುತ್ತಿದ್ದೀರಾ ಎಂದರು. ಈಗ ಅವರು ಮಾಡುತ್ತಿರುವುದೇನು? ಕೆಲವು ಸ್ವ ಹಿತಾಸಕ್ತಿ ಗುಂಪುಗಳು ಪುಡಿಗಾಸಿಗಾಗಿ ಧರ್ಮ ಒಡೆಯುತ್ತಿವೆ. ಇದರ ಹಿಂದೆ ಒಂದು ವ್ಯವಸ್ಥಿತ ಲಾಭಕರ ಸ್ವ ಹಿತಾಸಕ್ತಿಯ ಗುಂಪು ಇವೆ.

ನಾನುಗೌರಿ: ಈ ನಿಗಮಕ್ಕೆ 500 ಕೋಟೊ ರೂ ಕೊಟ್ಟಿದ್ದಾರಲ್ಲ?

ಜಾಮದಾರ್: ಅಲ್ರೀ ಇನ್ನೂ ಆ ನಿಗಮ ಅಧಿಕೃತವಾಗಿ ಚಾಲನೆಗೇ ಬಂದಿಲ್ಲ. ಅದಕ್ಕೆ 500 ಅಲ್ಲ, 100 ಕೋಟಿ ಅಲ್ಲ, 10 ಕೋಟಿ ರೂ ಕೂಡ ಸಿಗಲ್ಲ. ಇದೆಲ್ಲ ಒಂದು ಹುಚ್ಚಾಟ ಮತ್ತು ಪಾಲಿಟಿಕಲ್ ಗೇಮ್ ಅಷ್ಟೇ.

ನಾನುಗೌರಿ: ಅಂದರೆ ಈ ಹೋರಾಟಕ್ಕೆ ಭದ್ರ ಬುನಾದಿಯೇ ಇಲ್ಲ ಎನ್ನುತ್ತೀರಾ?

ಜಾಮದಾರ್: ಈ ಕುರಿತು ಅಂತಿಮ ತೀರ್ಮಾನ ಕೊಡಲಾರೆ, ಆದರೆ ಖಾವಿ ಧರಿಸಿ ಮೀಸಲಾತಿ ಕೇಳಿದ ಕೂಡಲೇ ಅದು ಸಿಗಲ್ಲ. ಅದಕ್ಕೆ ಪ್ರೊಸೆಸ್ ಇದೆ. ಯಡಿಯೂರಪ್ಪ ಅಂತಲ್ಲ, ಯಾರೇ ಸಿಎಂ ಆಗಿದ್ದರೂ ಆ ಪ್ರಕ್ರಿಯೆಯ ಮೂಲಕವೇ ಹೋಗಬೇಕು. ಲಿಂಗಾಯತ ಪ್ರತ್ಯೇಕ ಧರ್ಮ ಸಾಂವಿಧಾನಿಕ ಮಾನ್ಯತೆ ತಡೆದ ಬಿಜೆಪಿ-ಆರ್‌ಎಸ್‌ಎಸ್ ಇಂತಹ ದುಸ್ಸಾಹಸ ಮಾಡುತ್ತಿವೆ. ಈ ವಿಷಯದಲ್ಲಿ ಕಾಂಗ್ರೆಸ್, ಬಿಜೆಪಿ ಎಲ್ಲ ಒಂದೇ ಬಿಡಿ.

ನಾನುಗೌರಿ: ಪಂಚಮಸಾಲಿಗಳಿಗೆ 2-ಎ ಸ್ಥಾನಮಾನ ಸಿಕ್ಕಿತು ಅಂದುಕೊಳ್ಳೋಣ. ಆಗ ಏನಾಗಬಹುದು?

ಜಾಮದಾರ್: ಈಗ ಕೇಂದ್ರ ಸರ್ಕಾರ ಕಳೆದ ವರ್ಷ ಜಾರಿ ಮಾಡಿದ 10 ಪರ್ಸೆಂಟ್ ಮೀಸಲಾತಿಯಲ್ಲಿ ಪಂಚಮಸಾಲಿಗಳು, ಬೇಡ ಜಂಗಮರು, ಬಣಜಿಗರು ಕೂಡ ಬರುತ್ತಾರೆ. 2-ಎ ಮತ್ತು 10 ಪರ್ಸೆಂಟ್ ಎರಡನ್ನೂ ಪಡೆಯಲಾಗಲ್ಲ. ಈ ಕಾನೂನು ಬಗ್ಗೆ ತಿಳಿಯದೇ ಏನೇನೋ ಹೋರಾಟ ಮಾಡುತ್ತಿದ್ದಾರೆ.

ಸಂದರ್ಶನ: ಪಿ.ಕೆ. ಮಲ್ಲನಗೌಡರ್

(ಈ ಸಂದರ್ಶನದಲ್ಲಿ ತಪ್ಪು ಗ್ರಹಿಕೆಯಿಂದಾಗಿ ಖಾವಿ ಧರಿಸಿದವರ ಪುಡಿಗಾಸಿನ ಹೋರಾಟ ಎಂದು ಬಂದಿತ್ತು. ಅದಕ್ಕಾಗಿ ವಿಷಾಧಿಸುತ್ತೇವೆ)


ಇದನ್ನೂ ಓದಿ: ‘ನಾವು ಯಾರ ಮೀಸಲಾತಿಯನ್ನೂ ಕಿತ್ತುಕೊಳ್ಳಲ್ಲ’ – ಪಂಚಮಸಾಲಿ ಸ್ವಾಮೀಜಿಯ ವಿಶೇಷ ಸಂದರ್ಶನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಜಾಮದಾರರದು ತಪ್ಪು ಅಭಿಪ್ರಾಯ..
    ಈ ಹಿಂದೆ ಬೇಡಜಂಗಮರೆಂಬ ಪಂಗಡ ಲಿಂಗಾಯತ ಪಂಥದಲ್ಲಿ ಬರುವುದು ಎಂದಿದ್ದರು.
    ಜಂಗಮ, ಜಾತಿ ಪಟ್ಟಿಯಲ್ಲಿ ಏಕಿಲ್ಲ ಎಂಬುದನ್ನು ಜಾಮದಾರ ವಿವರಿಸಲಿ.
    ಮೀಸಲಾತಿ ಇರುವುದು ಜಾತಿಗೇ ಹೊರತು ಮತ, ಧರ್ಮಕ್ಕಲ್ಲ ಎನ್ನುವ ಸಾಮಾನ್ಯ ಅರಿವೂ ಜಾಮದಾರರಿಗಿಲ್ಲ.
    ಬಣಜಿಗ, 2A ದಲ್ಲಿ ಶೈಕ್ಷಣಿಕ ಮೀಸಲಾತಿ ಮತ್ತು ಕೇಂದ್ರ OBC ಯಲ್ಲಿ ಬರುತ್ತದೆ ಎನ್ನುವ ಸತ್ಯವನ್ನೂ ಮುಚ್ಚಿಡುತ್ತಾರೆ. ಮೀಸಲಾತಿ ವಂಚಿಸಿ ವೀರಶೈವ ಅಥವಾ ಲಿಂಗಾಯತರನ್ನು ಶೋಷಿಸುವುದೇ ಧರ್ಮವಾಗಬಾರದು..!!

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...