Homeಮುಖಪುಟಕನ್ಯಾಕುಮಾರಿ: ಮಾತು ಕೊಟ್ಟಂತೆ ಬಾಲಕನಿಗೆ ಶೂ ಕಳುಹಿಸಿದ ರಾಹುಲ್ ಗಾಂಧಿ!

ಕನ್ಯಾಕುಮಾರಿ: ಮಾತು ಕೊಟ್ಟಂತೆ ಬಾಲಕನಿಗೆ ಶೂ ಕಳುಹಿಸಿದ ರಾಹುಲ್ ಗಾಂಧಿ!

- Advertisement -
- Advertisement -

ಕನ್ಯಾಕುಮಾರಿ ಭೇಟಿ ವೇಳೆ, 12 ವರ್ಷದ ಬಾಲಕನೊಬ್ಬ ಕೇಳಿದ್ದ ಅಥ್ಲೆಟಿಕ್ ಸ್ಪರ್ಧೆಯ ಶೂಗಳನ್ನು ಮಾತು ಕೊಟ್ಟಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಖರೀದಿಸಿ ಕಳುಹಿಸಿ ಕೊಟ್ಟಿರುವ ಘಟನೆ ಕನ್ಯಾಕುಮಾರಿಯಲ್ಲಿ ನಡೆದಿದೆ.

ರಾಹುಲ್ ಗಾಂಧಿ ಮಾರ್ಚ್ 1 ರಂದು ಕನ್ಯಾಕುಮಾರಿ ಜಿಲ್ಲೆಗೆ ಭೇಟಿ ನೀಡಿದ್ದರು. ಮುಲಕುಮುಡು ಶಾಲೆಗೆ ಹೋದಾಗ, ತಮ್ಮ ವಾಹನವನ್ನು ಪರೈಕೋಡುನಲ್ಲಿ ನಿಲ್ಲಿಸಿ ರಸ್ತೆ ಬದಿಯ ಬೇಕರಿಯೊಂದರ ಬಳಿ ನಡೆದುಕೊಂಡು ಹೋಗಿದ್ದರು. ಅಲ್ಲಿ ಆಂಥೋನಿ ಫಿಲಿಕ್ಸ್ ಎಂಬ ವಿದ್ಯಾರ್ಥಿಯನ್ನು ಮಾತನಾಡಿಸಿದ್ದರು.

ಏನಾಗಬೇಕು ಎಂದು ಕೇಳಿದ್ದಕ್ಕೆ ತಾನು ಅಥ್ಲೆಟಿಕ್ಸ್‌ನಲ್ಲಿ ಏನನ್ನಾದರೂ ಸಾಧಿಸಬೇಕು. ಆದರೆ ಅಥ್ಲೆಟಿಕ್ ತರಬೇತಿಗಾಗಿ ತಾನು ಶೂಗಳನ್ನು ಹೊಂದಿಲ್ಲ ಎಂದು ಬಾಲಕ ಆಂಥೋನಿ ಫಿಲಿಕ್ಸ್ ಹೇಳಿದ್ದರು. ತಕ್ಷಣ ತಾನು ಶೂ ಕೊಡಿಸುವುದಾಗಿ ರಾಹುಲ್ ಗಾಂಧಿ ಮಾತು ಕೊಟ್ಟಿದ್ದರು.

ಇದನ್ನೂ ಓದಿ: 50ನೇ ವರ್ಷದಲ್ಲಿಯೂ ಫಿಟ್ನೆಸ್ ತೋರಿಸಿದ ರಾಹುಲ್ ಗಾಂಧಿ: ಪುಷ್-ಅಪ್ ವಿಡಿಯೋ ವೈರಲ್

ಅದರಂತೆ ನಿನ್ನೆ ಕೊರಿಯರ್‌ ಮೂಲಕ ವಿದ್ಯಾರ್ಥಿ ಆಂಥೋನಿ ಫಿಲಿಕ್ಸ್ ಅವರ ಮನೆಗೆ 5,900 ರೂಪಾಯಿ ಬೆಲೆ ಬಾಳುವ ಶೂಗಳು ಬಂದಿವೆ. ಇದಕ್ಕೆ ಸಂತಸ ವ್ಯಕ್ತಪಡಿಸಿರುವ ಆಂಥೋನಿ ಫಿಲಿಕ್ಸ್ , “ನಾನು 5 ನೇ ತರಗತಿ ಓದುತ್ತಿದ್ದೇನೆ. ನನ್ನ ತಂದೆಯ ಹೊಲಿಗೆ ಅಂಗಡಿ ಇದೆ. 2017 ರಲ್ಲಿ, ತಿರುಚ್ಚಿಯಲ್ಲಿ ನಡೆದ ಬಾಲಕರ ಮ್ಯಾರಥಾನ್‌ನಲ್ಲಿ ನಾನು 51 ನೇ ಸ್ಥಾನ ಗಳಿಸಿದೆ. ಕಳೆದ ವರ್ಷದ ನಾಗರ್‌ಕೋಯಿಲ್‌ನಲ್ಲಿ ನಡೆದ ಮ್ಯಾರಥಾನ್‌ನಲ್ಲಿ ನಾನು 11 ನೇ ಸ್ಥಾನ ಪಡೆದಿದ್ದೇನೆ. ಇದನ್ನೆಲ್ಲ ಅಂದು ರಾಹುಲ್ ಗಾಂಧಿ ಅವರಿಗೆ ಹೇಳಿದೆ. ಅವರು ನನ್ನನ್ನು ಪ್ರೋತ್ಸಾಹಿಸಿ, ಶೂ ಕೊಡಿಸುವುದಾಗಿ ಮಾತು ನೀಡಿದ್ದರು. ಅವರು ಹೇಳಿದಂತೆ ಕೊರಿಯರ್ ಮೂಲಕ ಶೂ ಸಿಕ್ಕಿದೆ’ ಎಂದು ಧನ್ಯವಾದ ಸಲ್ಲಿಸಿದ್ದಾರೆ.

rahul-gandhu-bought-shoe-for-kumari-student
PC: hindutamil

’ಶೂ ತಲುಪಿದ ಮೇಲೆ ರಾಹುಲ್ ಗಾಂಧಿ ಅವರು ನನಗೆ ಕರೆ ಮಾಡಿ ಶೂ ಸೈಜ್ ಸರಿ ಇದೆಯೇ…? ಇಷ್ಟವಾಯಿತೇ? ಎಂದು ಕೇಳಿದರು. ಜೊತೆಗೆ ಶೀಘ್ರದಲ್ಲೇ ಕ್ರೀಡಾಪಟುಗಳಿಗೆ ತರಬೇತಿ ನೀಡಲು ಕೋಚ್‌ ಒಬ್ಬರನ್ನು ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಇದನ್ನು ನಾನು ನನ್ನ ಜೀವನದಲ್ಲಿ ಎಂದಿಗೂ ಮರೆಯುವುದಿಲ್ಲ’ ಎಂದು ಬಾಲಕ ಸಂತಸ ವ್ಯಕ್ತಪಡಿಸಿದ್ದಾನೆ.


ಇದನ್ನೂ ಓದಿ: ಪ್ರಧಾನಿಯನ್ನು ಪ್ರೀತಿ, ಅಹಿಂಸೆಯಿಂದ ಸೋಲಿಸುತ್ತೇವೆ: ಬಿಜೆಪಿ ವಿರುದ್ಧ ರಾಹುಲ್ ವಾಗ್ದಾಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...