Homeಅಂತರಾಷ್ಟ್ರೀಯಕತ್ತಲೆ ತುಂಬಿದ ಬಡವರ ಬಾಳಲ್ಲಿ ಹೊಸ ಸೂರ್ಯನ ರೀತಿ ಉದಯಿಸಿದ ಯುವಕನ ಕುರಿತು...

ಕತ್ತಲೆ ತುಂಬಿದ ಬಡವರ ಬಾಳಲ್ಲಿ ಹೊಸ ಸೂರ್ಯನ ರೀತಿ ಉದಯಿಸಿದ ಯುವಕನ ಕುರಿತು…

- Advertisement -
- Advertisement -

ಕೆಲಸ ಮುಗಿಸಿ ಮನೆಗೆ ಹೋಗುವ ಧಾವಂತ, ಅಯ್ಯಪ್ಪ.. ಯಾವಾಗ ಮನೆ ಸೇರುತ್ತೇವೋ ಏನೋ, ಮನೆಗೆ ಹೋದ ಮೇಲೆ ಇಡೀ ದಿನ ರೆಸ್ಟ್ ಮಾಡಬೇಕು… ಮನೆ.. ಮನೆ.. ಮನೆ, ಲಕ್ಷ ಲಕ್ಷ ರೂ. ಸೇವ್ ಮಾಡಿ ಜನ ಕನಸಿನ ಮನೆ ಖರೀದಿ ಮಾಡುತ್ತಾರೆ. ಫ್ಲಾಟ್ ಖರೀದಿಸಿ, ಸುಂದರವಾದ ಮನೆ ನಿರ್ಮಿಸಿಕೊಳ್ಳುತ್ತಾರೆ. ಜೀವಮಾನದಲ್ಲಿ ದುಡಿದ ದುಡ್ಡನ್ನೆಲ್ಲಾ ಮನೆ ಕಟ್ಟಿಕೊಳ್ಳಲು ವೆಚ್ಚ ಮಾಡುತ್ತಾರೆ…

ಆದರೆ ಕೆಲವರಿಗೆ ಮನೆ ಅಂದರೆ ಹೀಗಿರುತ್ತಾ ಅನ್ನೋದನ್ನು ಕಲ್ಪಿಸಿಕೊಳ್ಳುವುದು ಸಹ ಕಷ್ಟಸಾಧ್ಯ. ಕಿತ್ತು ತಿನ್ನುವ ಬಡತನ, ಅನಾಥ ಬದುಕು, ಎಲ್ಲಿ ನಿಲ್ಲಲು ಜಾಗ ಸಿಗುತ್ತೋ ಅದೇ ಮನೆಯಾಗಿ ಬಿಡುತ್ತೆ. ಬಸ್ ನಿಲ್ದಾಣ, ರೈಲ್ವೇ ಸ್ಟೇಷನ್, ಅಂಗಡಿಗಳ ಮುಂದಿನ ಛಾವಣಿಯ ನೆರಳೇ ಮನೆ. ತಿನ್ನಲು ಆಹಾರವಿಲ್ಲದೇ, ಉಡಲು ಬಟ್ಟೆಯಿಲ್ಲದೇ, ಸ್ನಾನ ಮಾಡಲು ಶೌಚಗೃಹವಿಲ್ಲದೇ ಅದೆಷ್ಟು ದಿನಗಳ ಕಾಲ ಹಾಗೆಯೇ ಇದ್ದು ವ್ಯಥೆ ಪಡುವವರೂ ನಮ್ಮ ನಡುವೆಯೇ ಬದುಕುತ್ತಿದ್ದಾರೆ. ಇಂಥವರನ್ನು ಕಂಡು ಮಮ್ಮಲ ಮರುಗಿದ ಜೇಕ್ ಅಸ್ಟೀನ್ ಎಂಬಾತ ಮಾಡಿದ ಕೆಲಸವೀಗ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.

ಮನೆಯಿಲ್ಲದೇ ಅಲೆಯುತ್ತಿದ್ದ ಜೇಕ್ ಅಸ್ಟೀನ್, ಹಲವು ಕಡೆಗಳಲ್ಲಿ ಸುತ್ತಾಡಿ, ಮನೆಯಿಲ್ಲದವರು, ಕಡುಬಡವರು, ಬೀದಿಬದಿಯಲ್ಲೇ ಅನಾಥವಾಗಿ ವಾಸಿಸುವವರನ್ನು ನೋಡಿದ್ದ. ಸೇಂಟ್ ಲೂಯಿಸ್, ಮಿಸೌರಿ ಏರಿಯಾಗಳಲ್ಲಿ ಸ್ನಾನಕ್ಕೂ ಗತಿಯಿಲ್ಲದೇ, ಕೆಲಸವೂ ಸಿಗದೇ ಒದ್ದಾಡುವವರ ಶೋಚನೀಯ ಸ್ಥಿತಿ ಕಂಡು ಮರುಗಿದ್ದ. ಇಂಥವರಿಗಾಗಿ ಏನಾದರೂ ಸಹಾಯ ಮಾಡಲೇಬೇಕೆಂದು ನಿರ್ಧರಿಸಿದ ಜೇಕ್, ಮೂರು ತಿಂಗಳವರೆಗೆ ಸ್ನಾನ ಮಾಡದಿರುವವರನ್ನು ಬರ್ಗರ್ ಮಾಡುವ ಕೆಲಸಕ್ಕೂ ತೆಗೆದುಕೊಳ್ಳದೇ ಇರುವುದನ್ನು ನೋಡಿದ್ದ.

ಹೀಗಾಗಿ ಮನುಷ್ಯನಿಗೆ ಹೊಸ ಬಟ್ಟೆ ಇರದಿದ್ದರೂ, ನಿತ್ಯವೂ ಸ್ನಾನ ಮಾಡುವಂಥ ವ್ಯವಸ್ಥೆ ಮಾಡಬೇಕು ಎಂದು ಆಲೋಚಿಸಿದ. ಬದಲಾವಣೆ ತರಲೇಬೇಕು ಎಂದು ತೀರ್ಮಾನಿಸಿ, ಮಿಸೌರಿ ನಗರದಲ್ಲಿ ’ಮೊಬೈಲ್ ಶವರ್ ಆನ್ ವ್ಹೀಲ್ಸ’ ಎಂಬ ಪ್ರಾಜೆಕ್ಟ್ ನ್ನು ರೆಡಿ ಮಾಡಿದ. 5 ಸಾವಿರ ಡಾಲರ್ ಗೆ ಹಳೆಯ ಟ್ರಕ್ ನ್ನು ಖರೀದಿಸಿ, ನವೀಕರಿಸಿದ. ತನ್ನ ಯೋಜನೆಗಾಗಿ ಆನ್ ಲೈನ್ ನಲ್ಲಿ ಸಂದೇಶ ಪೋಸ್ಟ್ ಮಾಡಿ, ಧನಿಕರಿಂದ ಹಣ ಸಹಾಯ ಪಡೆದುಕೊಂಡ. ಟ್ರಕ್ ನ ಸುತ್ತ ಮೊಬೈಲ್ ಶವರ್ ಯುನಿಟ್, ಶವರ್ ಯುನಿಟ್ ಟು ದಿ ಪೀಪಲ್ ( ಜನರಿಗಾಗಿ ಸ್ನಾನಗೃಹ) ಎಂದು ಬರೆಸಿದ. ಟ್ರಕ್ ಒಳಗೆ ಕೋಣೆಗಳನ್ನು ನಿರ್ಮಿಸಿ, ಸ್ನಾನಗೃಹಗಳನ್ನು ನಿರ್ಮಿಸಿದ. ಜತೆಗೆ ಸೋಪ್, ಟವೆಲ್ ಸೇರಿದಂತೆ ಬೇಕಾದ ಎಲ್ಲಾ ಸಾಮಗ್ರಿಗಳನ್ನೂ ಇರಿಸಿದ. ಸ್ವಚ್ಛ ಹಾಗೂ ಒಂದು ಕಡೆಯಿಂದ ಮತ್ತೊಂದು ಕಡೆ ಸಾಗಿಸಲು ಸಾಧ್ಯವಾಗುವಂತಹ ಸ್ನಾನದ ಕೋಣೆಗಳನ್ನು ನಿರ್ಮಿಸಿದ. ನಂತರ ಶವರ್ ಯುನಿಟ್ ಟ್ರಕ್ ಸಂಚಾರ ಆರಂಭಿಸಿತು. ಎಲ್ಲೆಲ್ಲಿ ಜನಕ್ಕೆ ಸ್ನಾನಗೃಹದ ಅವಶ್ಯಕತೆಯಿದೆಯೋ ಅಲ್ಲೆಲ್ಲಾ ಟ್ರಕ್ ಸಂಚಾರ ಮಾಡುತ್ತೆ. ಈಗ ದಿನಕ್ಕೆ 60 ಮಂದಿ ಶವರ್ ಯುನಿಟ್ ಬಳಕೆ ಮಾಡುತ್ತಿದ್ದಾರೆ.

ಶವರ್ ಟು ದಿ ಪೀಪಲ್ ಟ್ರಕ್ ಸೇವೆಯನ್ನು ಸಾಕಷ್ಟು ಜನ ಪಡೆಯುತ್ತಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೇಕ್ ಅವರ ಅದ್ಭುತ ಕಾರ್ಯದಿಂದ ತಾವು ಖುಷಿಯಾಗಿರುವುದಾಗಿ ಹೇಳುತ್ತಾರೆ. ತಮಗೆ ಸ್ನಾನ ಮಾಡಲು ಅವಕಾಶ ಮಾಡಿಕೊಟ್ಟಿರುವ ಜೇಕ್ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಜೇಕ್ ಇಂತಹ ಅವಕಾಶ ಕಲ್ಪಿಸದಿದ್ದರೆ, ತಮ್ಮ ಸ್ಥಿತಿ ಸುಧಾರಣೆ ಆಗುತ್ತಿರಲಿಲ್ಲ ಎಂದು ಕಣ್ಣೀರು ಹಾಕುತ್ತಾರೆ. ಟ್ರಕ್ ಒಳಗಡೆ, ಬಿಸಿನೀರು, ತಣ್ಣೀರಿನ ವ್ಯವಸ್ಥೆ, ಶೇವ್ ಮಾಡಿಕೊಳ್ಳಲು ಬೇಕಾದ ಸಾಮಗ್ರಿ, ಶಾಂಪೂ ಸೇರಿದಂತೆ ಎಲ್ಲವನ್ನೂ ಇರಿಸಲಾಗಿದೆ.

ಮನೆಯಿಲ್ಲದವರಿಗೆ ಸ್ನಾನ ಮತ್ತು ಸ್ವಚ್ಛತೆ ಬಗ್ಗೆ ಅರಿವು ಮೂಡಿಸುತ್ತಿರುವ ಜೇಕ್ ಅಸ್ಟೀನ್ ತಮ್ಮ ಕಾರ್ಯದ ಬಗ್ಗೆ ಹೇಳುತ್ತಾರೆ. ‘ಮನೆಯಿಲ್ಲದವರು, ಕಡು ಬಡವರಿಗೆ ಊಟ, ಬಟ್ಟೆ ಸಿಕ್ಕೇ ಸಿಗುತ್ತದೆ. ಆದರೆ ಅವರಿಗೆ ಮೂರು ತಿಂಗಳಾದರೂ ಸ್ನಾನ ಮಾಡುವ ಅವಕಾಶ ಮಾತ್ರ ಸಿಗುವುದಿಲ್ಲ. ಹೀಗಾಗಿ ಅವರಿಗೆ ಯಾರೂ ಕೆಲಸ ಕೊಡುವುದಿಲ್ಲ. ಮನೆ ಹಾಗೂ ಕೆಲಸ ಎರಡೂ ಇಲ್ಲದೇ ಅವರ ಸ್ಥಿತಿ ಶೋಚನೀಯವಾಗಿರುತ್ತದೆ. ಇದನ್ನು ಕಂಡುಕೊಂಡ ಬಳಿಕ ಶವರ್ ಟು ದಿ ಪೀಪಲ್ ಶುರು ಮಾಡಿದೆ’ ಅಂತಾರೆ.

ಅಂದಹಾಗೇ ‘ಜನರಿಗೆ ಕೇವಲ ಸ್ವಚ್ಛತೆ ಹಾಗೂ ಸ್ನಾನದ ಅರಿವು ಮೂಡಿಸಲು ಮಾತ್ರ ನಾನು ಈ ಕೆಲಸ ಮಾಡುತ್ತಿಲ್ಲ. ಬದಲಿಗೆ ಜನರ ಜತೆಗಿನ ಬಾಂಧವ್ಯ ಹೆಚ್ಚಿಸಲು, ಮನುಷ್ಯನಿಗೆ ತಲುಪಬೇಕಾದ ಮೂಲಸೌಕರ್ಯ ಒದಗಿಸಲು, ಬೀದಿ ಬದಿ ಜೀವನದಿಂದ ಮುಕ್ತಗೊಳಿಸಲು ಮತ್ತು ಉತ್ತಮ ಸೇವೆ ನೀಡಲು ಈ ಕೆಲಸ ಮಾಡುತ್ತಿದ್ದೇನೆ. ನನ್ನ ಜತೆಗೆ ಅನೇಕ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಅವರೆಲ್ಲಾ ಸಾಕಷ್ಟು ಮಂದಿಗೆ ಶವರ್ ಟು ದಿ ಪೀಪಲ್ ಸೇವೆಯನ್ನು ತಲುಪಿಸಿದ್ದಾರೆ. ಚಾಲಕರಿಗೆ ಲೈಸೆನ್ಸ್ ನೀಡಲಾಗಿದ್ದು, ನೌಕರಿಯನ್ನೂ ಪಡೆದುಕೊಂಡಿದ್ದಾರೆ’ ಎಂದು ಹೇಳುತ್ತಾರೆ.

ಶವರ್ ಟು ದಿ ಪೀಪಲ್ ಸೇವೆಯನ್ನು ಮನೆ ಹೊಂದಿರದ ಜನರಿಗಾಗಿ ಮಾಡಲಾಗುತ್ತಿದೆ. ದಿನವೂ ಅವರು ಶುಚಿಯಾಗಿ, ಪ್ರೀತಿಯಿಂದ ಜೀವಿಸುವಂತೆ ಮಾಡುವ ಒಂದು ಪ್ರಯತ್ನವೂ ಇದೆ. ಮನೆಯಿಲ್ಲದ ಇವರಿಗೆ ಕುಟುಂಬದವರೂ ಇರುವುದಿಲ್ಲ. ಯಾರೂ ಸಹಾಯ ಮಾಡಲು ಮುಂದೆ ಬರುವುದಿಲ್ಲ. ನೋವಿಗೆ ಮಿಡಿಯುವ ಮನಸ್ಸುಗಳು ಮಾತ್ರ ಸ್ಪಂದಿಸಲು ಸಾಧ್ಯ, ಕತ್ತಲೆ ತುಂಬಿದ ಬಡವರ ಬಾಳಲ್ಲಿ ಹೊಸ ಸೂರ್ಯನ ಉದಯವಾಗಲು ಸಾಧ್ಯ ಅನ್ನೋದು ಜೇಕ್ ಅಭಿಪ್ರಾಯ.

ಅದೇನೇ ಇರಲಿ, ಬೀದಿ ಬದಿಯಲ್ಲಿರುವವರು, ಕೊಳೆ ಬಟ್ಟೆ ಧರಿಸಿ ಓಡಾಡುವವರು, ಕೆಲಸವಿಲ್ಲದೆ ಅಲೆಯುವವರ ಬಾಳಲ್ಲಿ ನಗು, ಪ್ರೀತಿ, ಜೀವನೋತ್ಸಾಹ ತುಂಬುತ್ತಿರುವ ಜೇಕ್ ಕಾರ್ಯ ಶ್ಲಾಘನೀಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮಹಿಳೆಯನ್ನು ಗರ್ಭಧಾರಣೆ ಪೂರ್ಣಗೊಳಿಸುವಂತೆ ಒತ್ತಾಯಿಸಲು ಸಾಧ್ಯವಿಲ್ಲ’: ಅಪ್ರಾಪ್ತೆಗೆ 30 ವಾರಗಳ ಗರ್ಭಧಾರಣೆ ಅಂತ್ಯಗೊಳಿಸಲು ಸುಪ್ರೀಂ ಅನುಮತಿ

ನವದೆಹಲಿ: 17 ವರ್ಷದ ಬಾಲಕಿಯ 30 ವಾರಗಳ ಗರ್ಭಧಾರಣೆಯನ್ನು ವೈದ್ಯಕೀಯವಾಗಿ ಮುಕ್ತಾಯಗೊಳಿಸುವಂತೆ ನಿರ್ದೇಶಿಸಿದ ಸುಪ್ರೀಂ ಕೋರ್ಟ್, ನ್ಯಾಯಾಲಯಗಳು ಮಹಿಳೆಯನ್ನು, ಅಪ್ರಾಪ್ತ ವಯಸ್ಕಳನ್ನು ಹೊರತುಪಡಿಸಿ, ಗರ್ಭಧಾರಣೆಯನ್ನು ಮುಂದುವರಿಸಲು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಶುಕ್ರವಾರ ಹೇಳಿದೆ. ನ್ಯಾಯಮೂರ್ತಿಗಳಾದ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಶಿಯಾ ಧಾರ್ಮಿಕ ಕೇಂದ್ರದಲ್ಲಿ ಆತ್ಮಾಹುತಿ ಬಾಂಬ್ ದಾಳಿ: ಕನಿಷ್ಠ 30 ಸಾವು, 160 ಕ್ಕೂ ಹೆಚ್ಚು ಜನರಿಗೆ ಗಾಯ

ಇಸ್ಲಾಮಾಬಾದ್: ಶುಕ್ರವಾರ ಇಸ್ಲಾಮಾಬಾದ್‌ನ ಶಿಯಾ ಧಾರ್ಮಿಕ ಕೇಂದ್ರದಲ್ಲಿ ಪ್ರಾರ್ಥನೆ ವೇಳೆ ನಡೆದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 30 ಜನರು ಸಾವನ್ನಪ್ಪಿ, 160 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.  ಪಾಕಿಸ್ತಾನ ರಾಜಧಾನಿಯ ಶೆಹಜಾದ್ ಟೌನ್ ಪ್ರದೇಶದ...

ನಾಳೆ ದೊರೈರಾಜ್‌ ಅವರ ‘ನಮ್ಮ ಹಟ್ಟಿ’ ಆತ್ಮಕಥೆ ಬಿಡುಗಡೆ

ದಲಿತ ಚಳವಳಿಯ ಹಿರಿಯ ಮುಖಂಡರಾದ ತುಮಕೂರಿನ ಕೆ.ದೊರೈರಾಜ್‌ ಅವರ 'ನಮ್ಮಹಟ್ಟಿ' ಆತ್ಮಕಥೆ ಶನಿವಾರ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಬಿಡುಗಡೆಯಾಗಲಿದೆ. ಸರ್ಕಾರಿ ಅಧಿಕಾರಿಯಾಗಿದ್ದ ದೊರೈರಾಜ್‌ ಅವರು, ತಮ್ಮ ವಿದ್ಯಾರ್ಥಿ ಜೀವನದಿಂದಲೇ ದಲಿತ ಚಳವಳಿಯಲ್ಲಿ ಗುರುತಿಸಿಕೊಂಡವರು....

‘ತಿರುಪತಿ ಲಡ್ಡುಗಳಲ್ಲಿ ರಾಸಾಯನಿಕಗಳಿಂದ ಮಾಡಿದ ತುಪ್ಪ ಬಳಸಲಾಗುತ್ತಿತ್ತು’: ವೈಎಸ್ಆರ್ಸಿಪಿ ಸರ್ಕಾರದ ವಿರುದ್ಧ ಆಂಧ್ರ ಸಿಎಂ ಆರೋಪ

ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡುಗಳನ್ನು ತುಪ್ಪ ಬಳಸಿ ತಯಾರಿಸಲಾಗುತ್ತಿತ್ತು, ಅದರಲ್ಲಿ ಬಾತ್ ರೂಂ(ಸ್ನಾನಗೃಹಗಳನ್ನು) ಸ್ವಚ್ಛಗೊಳಿಸಲು ಬಳಸುವ ರಾಸಾಯನಿಕಗಳನ್ನು ಬೆರೆಸಲಾಗುತ್ತಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಶುಕ್ರವಾರ ಆರೋಪಿಸಿದ್ದಾರೆ. ಕರ್ನೂಲು...

ಜಲಂಧರ್‌ನ ಗುರುದ್ವಾರದ ಹೊರಗೆ ಎಎಪಿ ನಾಯಕ ಲಕ್ಕಿ ಒಬೆರಾಯ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ದುಷ್ಕರ್ಮಿಗಳು

ಪಂಜಾಬ್‌ನ ಜಲಂಧರ್‌ನಲ್ಲಿ ಶುಕ್ರವಾರ ಹಾಡಹಗಲೇ ಎಎಪಿ ನಾಯಕ ಲಕ್ಕಿ ಒಬೆರಾಯ್ ಅವರನ್ನು ಮಾಡೆಲ್ ಟೌನ್ ಪ್ರದೇಶದ ಗುರುದ್ವಾರದ ಬಳಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಮಾಡಿದ್ದಾರೆ.  ಈ ಘಟನೆ ಬೆಳಿಗ್ಗೆ ನಡೆದಿದ್ದು, ಗುಂಡೇಟಿನಿಂದ ಗಾಯಗೊಂಡಿದ್ದ ಅವರನ್ನು...

ದೆಹಲಿ: ಜಲ ಮಂಡಳಿ ತೋಡಿದ ಗುಂಡಿಗೆ ಬಿದ್ದು ಬೈಕ್ ಸವಾರ ಸಾವು; ತನಿಖೆಗೆ ಆದೇಶಿಸಿದ ಸರ್ಕಾರ 

ಪಶ್ಚಿಮ ದೆಹಲಿಯ ಜನಕಪುರಿ ಪ್ರದೇಶದಲ್ಲಿ ದೆಹಲಿ ಜಲ ಮಂಡಳಿ (ಡಿಜೆಬಿ) ನಿರ್ಮಾಣ ಕಾರ್ಯಕ್ಕಾಗಿ ಅಗೆದ ಹೊಂಡಕ್ಕೆ ಬೈಕ್ ಬಿದ್ದು ಸವಾರನೊಬ್ಬ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಘಟನೆಯ ಬಗ್ಗೆ ತನಿಖೆಗೆ ದೆಹಲಿ...

2025ರ ಬಿಹಾರ ವಿಧಾನಸಭಾ ಚುನಾವಣೆ ಪ್ರಶ್ನಿಸಿ ಜನ ಸುರಾಜ್ ಪಕ್ಷದಿಂದ ಅರ್ಜಿ: ವಿಚಾರಣೆ ನಿರಾಕರಿಸಿದ ಸುಪ್ರೀಂ ಕೋರ್ಟ್ 

2025 ರ ಬಿಹಾರ ವಿಧಾನಸಭಾ ಚುನಾವಣೆಯ ನಡವಳಿಕೆ ಮತ್ತು ಫಲಿತಾಂಶವನ್ನು ಪ್ರಶ್ನಿಸಿ ಪ್ರಶಾಂತ್ ಕಿಶೋರ್ ನೇತೃತ್ವದ ಜನ್ ಸುರಾಜ್ ಪಕ್ಷ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ರಾಜಕೀಯ...

ಗುಜರಾತ್‌| ನರ್ಸಿಂಗ್ ಓದುತ್ತಿದ್ದ ದಲಿತ ವಿದ್ಯಾರ್ಥಿ ಆತ್ಮಹತ್ಯೆಗೆ ಪ್ರಚೋದನೆ ಆರೋಪ; ಪ್ರಿನ್ಸಿಪಲ್ ಸೇರಿ ಐವರ ವಿರುದ್ಧ ಪ್ರಕರಣ ದಾಖಲು

ಗುಜರಾತ್‌ನ ಖೇಡಾ ಜಿಲ್ಲೆಯ ನರ್ಸಿಂಗ್ ಕಾಲೇಜಿನ 19 ವರ್ಷದ ದಲಿತ ವಿದ್ಯಾರ್ಥಿಯೊಬ್ಬ, "ಪುರಾವೆಗಳಿಲ್ಲದೆ ಮೇಡಂ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ" ಎಂದು ಚಿತ್ರಹಿಂಸೆ ಉಲ್ಲೇಖಿಸುವ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾದ...

1.50 ಕೋಟಿ ರೂ. ಐಟಿ ದಂಡ ಪ್ರಶ್ನಿಸಿ ಟಿವಿಕೆ ಮುಖ್ಯಸ್ಥ ವಿಜಯ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್ 

ಚೆನ್ನೈ: 2015–16ರ ಮೌಲ್ಯಮಾಪನ ವರ್ಷದಲ್ಲಿ ಆದಾಯ ಬಹಿರಂಗಪಡಿಸದಿದ್ದಕ್ಕಾಗಿ 1.50 ಕೋಟಿ ರೂ. ದಂಡ ವಿಧಿಸಿದ ಆದಾಯ ತೆರಿಗೆ ಇಲಾಖೆಯ ಆದೇಶವನ್ನು ಪ್ರಶ್ನಿಸಿ ನಟ-ರಾಜಕಾರಣಿ ವಿಜಯ್ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಆದಾಯ...

ಮೇಘಾಲಯ ಗಣಿ ಸ್ಫೋಟ: ಸಾವನ್ನಪ್ಪಿದ ಮೂವರು ಅಸ್ಸಾಂ ಮೂಲದ ಕಾರ್ಮಿಕರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ

ಗುವಾಹಟಿ: ಮೇಘಾಲಯದ ಪಕ್ಕದ ಕಲ್ಲಿದ್ದಲು ಗಣಿ ಸ್ಫೋಟದಲ್ಲಿ ಸಾವನ್ನಪ್ಪಿದ ಅಸ್ಸಾಂ ರಾಜ್ಯದ ಮೂವರು ಕಾರ್ಮಿಕರ ಕುಟುಂಬಗಳಿಗೆ  ಸರ್ಕಾರ ತಲಾ 5 ಲಕ್ಷ ರೂ.ಗಳ ಪರಿಹಾರ ಘೋಷಿಸಿದೆ.  ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗುರುವಾರ, ಸಂತ್ರಸ್ತರು...