Homeಅಂತರಾಷ್ಟ್ರೀಯಕತ್ತಲೆ ತುಂಬಿದ ಬಡವರ ಬಾಳಲ್ಲಿ ಹೊಸ ಸೂರ್ಯನ ರೀತಿ ಉದಯಿಸಿದ ಯುವಕನ ಕುರಿತು...

ಕತ್ತಲೆ ತುಂಬಿದ ಬಡವರ ಬಾಳಲ್ಲಿ ಹೊಸ ಸೂರ್ಯನ ರೀತಿ ಉದಯಿಸಿದ ಯುವಕನ ಕುರಿತು…

- Advertisement -
- Advertisement -

ಕೆಲಸ ಮುಗಿಸಿ ಮನೆಗೆ ಹೋಗುವ ಧಾವಂತ, ಅಯ್ಯಪ್ಪ.. ಯಾವಾಗ ಮನೆ ಸೇರುತ್ತೇವೋ ಏನೋ, ಮನೆಗೆ ಹೋದ ಮೇಲೆ ಇಡೀ ದಿನ ರೆಸ್ಟ್ ಮಾಡಬೇಕು… ಮನೆ.. ಮನೆ.. ಮನೆ, ಲಕ್ಷ ಲಕ್ಷ ರೂ. ಸೇವ್ ಮಾಡಿ ಜನ ಕನಸಿನ ಮನೆ ಖರೀದಿ ಮಾಡುತ್ತಾರೆ. ಫ್ಲಾಟ್ ಖರೀದಿಸಿ, ಸುಂದರವಾದ ಮನೆ ನಿರ್ಮಿಸಿಕೊಳ್ಳುತ್ತಾರೆ. ಜೀವಮಾನದಲ್ಲಿ ದುಡಿದ ದುಡ್ಡನ್ನೆಲ್ಲಾ ಮನೆ ಕಟ್ಟಿಕೊಳ್ಳಲು ವೆಚ್ಚ ಮಾಡುತ್ತಾರೆ…

ಆದರೆ ಕೆಲವರಿಗೆ ಮನೆ ಅಂದರೆ ಹೀಗಿರುತ್ತಾ ಅನ್ನೋದನ್ನು ಕಲ್ಪಿಸಿಕೊಳ್ಳುವುದು ಸಹ ಕಷ್ಟಸಾಧ್ಯ. ಕಿತ್ತು ತಿನ್ನುವ ಬಡತನ, ಅನಾಥ ಬದುಕು, ಎಲ್ಲಿ ನಿಲ್ಲಲು ಜಾಗ ಸಿಗುತ್ತೋ ಅದೇ ಮನೆಯಾಗಿ ಬಿಡುತ್ತೆ. ಬಸ್ ನಿಲ್ದಾಣ, ರೈಲ್ವೇ ಸ್ಟೇಷನ್, ಅಂಗಡಿಗಳ ಮುಂದಿನ ಛಾವಣಿಯ ನೆರಳೇ ಮನೆ. ತಿನ್ನಲು ಆಹಾರವಿಲ್ಲದೇ, ಉಡಲು ಬಟ್ಟೆಯಿಲ್ಲದೇ, ಸ್ನಾನ ಮಾಡಲು ಶೌಚಗೃಹವಿಲ್ಲದೇ ಅದೆಷ್ಟು ದಿನಗಳ ಕಾಲ ಹಾಗೆಯೇ ಇದ್ದು ವ್ಯಥೆ ಪಡುವವರೂ ನಮ್ಮ ನಡುವೆಯೇ ಬದುಕುತ್ತಿದ್ದಾರೆ. ಇಂಥವರನ್ನು ಕಂಡು ಮಮ್ಮಲ ಮರುಗಿದ ಜೇಕ್ ಅಸ್ಟೀನ್ ಎಂಬಾತ ಮಾಡಿದ ಕೆಲಸವೀಗ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.

ಮನೆಯಿಲ್ಲದೇ ಅಲೆಯುತ್ತಿದ್ದ ಜೇಕ್ ಅಸ್ಟೀನ್, ಹಲವು ಕಡೆಗಳಲ್ಲಿ ಸುತ್ತಾಡಿ, ಮನೆಯಿಲ್ಲದವರು, ಕಡುಬಡವರು, ಬೀದಿಬದಿಯಲ್ಲೇ ಅನಾಥವಾಗಿ ವಾಸಿಸುವವರನ್ನು ನೋಡಿದ್ದ. ಸೇಂಟ್ ಲೂಯಿಸ್, ಮಿಸೌರಿ ಏರಿಯಾಗಳಲ್ಲಿ ಸ್ನಾನಕ್ಕೂ ಗತಿಯಿಲ್ಲದೇ, ಕೆಲಸವೂ ಸಿಗದೇ ಒದ್ದಾಡುವವರ ಶೋಚನೀಯ ಸ್ಥಿತಿ ಕಂಡು ಮರುಗಿದ್ದ. ಇಂಥವರಿಗಾಗಿ ಏನಾದರೂ ಸಹಾಯ ಮಾಡಲೇಬೇಕೆಂದು ನಿರ್ಧರಿಸಿದ ಜೇಕ್, ಮೂರು ತಿಂಗಳವರೆಗೆ ಸ್ನಾನ ಮಾಡದಿರುವವರನ್ನು ಬರ್ಗರ್ ಮಾಡುವ ಕೆಲಸಕ್ಕೂ ತೆಗೆದುಕೊಳ್ಳದೇ ಇರುವುದನ್ನು ನೋಡಿದ್ದ.

ಹೀಗಾಗಿ ಮನುಷ್ಯನಿಗೆ ಹೊಸ ಬಟ್ಟೆ ಇರದಿದ್ದರೂ, ನಿತ್ಯವೂ ಸ್ನಾನ ಮಾಡುವಂಥ ವ್ಯವಸ್ಥೆ ಮಾಡಬೇಕು ಎಂದು ಆಲೋಚಿಸಿದ. ಬದಲಾವಣೆ ತರಲೇಬೇಕು ಎಂದು ತೀರ್ಮಾನಿಸಿ, ಮಿಸೌರಿ ನಗರದಲ್ಲಿ ’ಮೊಬೈಲ್ ಶವರ್ ಆನ್ ವ್ಹೀಲ್ಸ’ ಎಂಬ ಪ್ರಾಜೆಕ್ಟ್ ನ್ನು ರೆಡಿ ಮಾಡಿದ. 5 ಸಾವಿರ ಡಾಲರ್ ಗೆ ಹಳೆಯ ಟ್ರಕ್ ನ್ನು ಖರೀದಿಸಿ, ನವೀಕರಿಸಿದ. ತನ್ನ ಯೋಜನೆಗಾಗಿ ಆನ್ ಲೈನ್ ನಲ್ಲಿ ಸಂದೇಶ ಪೋಸ್ಟ್ ಮಾಡಿ, ಧನಿಕರಿಂದ ಹಣ ಸಹಾಯ ಪಡೆದುಕೊಂಡ. ಟ್ರಕ್ ನ ಸುತ್ತ ಮೊಬೈಲ್ ಶವರ್ ಯುನಿಟ್, ಶವರ್ ಯುನಿಟ್ ಟು ದಿ ಪೀಪಲ್ ( ಜನರಿಗಾಗಿ ಸ್ನಾನಗೃಹ) ಎಂದು ಬರೆಸಿದ. ಟ್ರಕ್ ಒಳಗೆ ಕೋಣೆಗಳನ್ನು ನಿರ್ಮಿಸಿ, ಸ್ನಾನಗೃಹಗಳನ್ನು ನಿರ್ಮಿಸಿದ. ಜತೆಗೆ ಸೋಪ್, ಟವೆಲ್ ಸೇರಿದಂತೆ ಬೇಕಾದ ಎಲ್ಲಾ ಸಾಮಗ್ರಿಗಳನ್ನೂ ಇರಿಸಿದ. ಸ್ವಚ್ಛ ಹಾಗೂ ಒಂದು ಕಡೆಯಿಂದ ಮತ್ತೊಂದು ಕಡೆ ಸಾಗಿಸಲು ಸಾಧ್ಯವಾಗುವಂತಹ ಸ್ನಾನದ ಕೋಣೆಗಳನ್ನು ನಿರ್ಮಿಸಿದ. ನಂತರ ಶವರ್ ಯುನಿಟ್ ಟ್ರಕ್ ಸಂಚಾರ ಆರಂಭಿಸಿತು. ಎಲ್ಲೆಲ್ಲಿ ಜನಕ್ಕೆ ಸ್ನಾನಗೃಹದ ಅವಶ್ಯಕತೆಯಿದೆಯೋ ಅಲ್ಲೆಲ್ಲಾ ಟ್ರಕ್ ಸಂಚಾರ ಮಾಡುತ್ತೆ. ಈಗ ದಿನಕ್ಕೆ 60 ಮಂದಿ ಶವರ್ ಯುನಿಟ್ ಬಳಕೆ ಮಾಡುತ್ತಿದ್ದಾರೆ.

ಶವರ್ ಟು ದಿ ಪೀಪಲ್ ಟ್ರಕ್ ಸೇವೆಯನ್ನು ಸಾಕಷ್ಟು ಜನ ಪಡೆಯುತ್ತಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೇಕ್ ಅವರ ಅದ್ಭುತ ಕಾರ್ಯದಿಂದ ತಾವು ಖುಷಿಯಾಗಿರುವುದಾಗಿ ಹೇಳುತ್ತಾರೆ. ತಮಗೆ ಸ್ನಾನ ಮಾಡಲು ಅವಕಾಶ ಮಾಡಿಕೊಟ್ಟಿರುವ ಜೇಕ್ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಜೇಕ್ ಇಂತಹ ಅವಕಾಶ ಕಲ್ಪಿಸದಿದ್ದರೆ, ತಮ್ಮ ಸ್ಥಿತಿ ಸುಧಾರಣೆ ಆಗುತ್ತಿರಲಿಲ್ಲ ಎಂದು ಕಣ್ಣೀರು ಹಾಕುತ್ತಾರೆ. ಟ್ರಕ್ ಒಳಗಡೆ, ಬಿಸಿನೀರು, ತಣ್ಣೀರಿನ ವ್ಯವಸ್ಥೆ, ಶೇವ್ ಮಾಡಿಕೊಳ್ಳಲು ಬೇಕಾದ ಸಾಮಗ್ರಿ, ಶಾಂಪೂ ಸೇರಿದಂತೆ ಎಲ್ಲವನ್ನೂ ಇರಿಸಲಾಗಿದೆ.

ಮನೆಯಿಲ್ಲದವರಿಗೆ ಸ್ನಾನ ಮತ್ತು ಸ್ವಚ್ಛತೆ ಬಗ್ಗೆ ಅರಿವು ಮೂಡಿಸುತ್ತಿರುವ ಜೇಕ್ ಅಸ್ಟೀನ್ ತಮ್ಮ ಕಾರ್ಯದ ಬಗ್ಗೆ ಹೇಳುತ್ತಾರೆ. ‘ಮನೆಯಿಲ್ಲದವರು, ಕಡು ಬಡವರಿಗೆ ಊಟ, ಬಟ್ಟೆ ಸಿಕ್ಕೇ ಸಿಗುತ್ತದೆ. ಆದರೆ ಅವರಿಗೆ ಮೂರು ತಿಂಗಳಾದರೂ ಸ್ನಾನ ಮಾಡುವ ಅವಕಾಶ ಮಾತ್ರ ಸಿಗುವುದಿಲ್ಲ. ಹೀಗಾಗಿ ಅವರಿಗೆ ಯಾರೂ ಕೆಲಸ ಕೊಡುವುದಿಲ್ಲ. ಮನೆ ಹಾಗೂ ಕೆಲಸ ಎರಡೂ ಇಲ್ಲದೇ ಅವರ ಸ್ಥಿತಿ ಶೋಚನೀಯವಾಗಿರುತ್ತದೆ. ಇದನ್ನು ಕಂಡುಕೊಂಡ ಬಳಿಕ ಶವರ್ ಟು ದಿ ಪೀಪಲ್ ಶುರು ಮಾಡಿದೆ’ ಅಂತಾರೆ.

ಅಂದಹಾಗೇ ‘ಜನರಿಗೆ ಕೇವಲ ಸ್ವಚ್ಛತೆ ಹಾಗೂ ಸ್ನಾನದ ಅರಿವು ಮೂಡಿಸಲು ಮಾತ್ರ ನಾನು ಈ ಕೆಲಸ ಮಾಡುತ್ತಿಲ್ಲ. ಬದಲಿಗೆ ಜನರ ಜತೆಗಿನ ಬಾಂಧವ್ಯ ಹೆಚ್ಚಿಸಲು, ಮನುಷ್ಯನಿಗೆ ತಲುಪಬೇಕಾದ ಮೂಲಸೌಕರ್ಯ ಒದಗಿಸಲು, ಬೀದಿ ಬದಿ ಜೀವನದಿಂದ ಮುಕ್ತಗೊಳಿಸಲು ಮತ್ತು ಉತ್ತಮ ಸೇವೆ ನೀಡಲು ಈ ಕೆಲಸ ಮಾಡುತ್ತಿದ್ದೇನೆ. ನನ್ನ ಜತೆಗೆ ಅನೇಕ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಅವರೆಲ್ಲಾ ಸಾಕಷ್ಟು ಮಂದಿಗೆ ಶವರ್ ಟು ದಿ ಪೀಪಲ್ ಸೇವೆಯನ್ನು ತಲುಪಿಸಿದ್ದಾರೆ. ಚಾಲಕರಿಗೆ ಲೈಸೆನ್ಸ್ ನೀಡಲಾಗಿದ್ದು, ನೌಕರಿಯನ್ನೂ ಪಡೆದುಕೊಂಡಿದ್ದಾರೆ’ ಎಂದು ಹೇಳುತ್ತಾರೆ.

ಶವರ್ ಟು ದಿ ಪೀಪಲ್ ಸೇವೆಯನ್ನು ಮನೆ ಹೊಂದಿರದ ಜನರಿಗಾಗಿ ಮಾಡಲಾಗುತ್ತಿದೆ. ದಿನವೂ ಅವರು ಶುಚಿಯಾಗಿ, ಪ್ರೀತಿಯಿಂದ ಜೀವಿಸುವಂತೆ ಮಾಡುವ ಒಂದು ಪ್ರಯತ್ನವೂ ಇದೆ. ಮನೆಯಿಲ್ಲದ ಇವರಿಗೆ ಕುಟುಂಬದವರೂ ಇರುವುದಿಲ್ಲ. ಯಾರೂ ಸಹಾಯ ಮಾಡಲು ಮುಂದೆ ಬರುವುದಿಲ್ಲ. ನೋವಿಗೆ ಮಿಡಿಯುವ ಮನಸ್ಸುಗಳು ಮಾತ್ರ ಸ್ಪಂದಿಸಲು ಸಾಧ್ಯ, ಕತ್ತಲೆ ತುಂಬಿದ ಬಡವರ ಬಾಳಲ್ಲಿ ಹೊಸ ಸೂರ್ಯನ ಉದಯವಾಗಲು ಸಾಧ್ಯ ಅನ್ನೋದು ಜೇಕ್ ಅಭಿಪ್ರಾಯ.

ಅದೇನೇ ಇರಲಿ, ಬೀದಿ ಬದಿಯಲ್ಲಿರುವವರು, ಕೊಳೆ ಬಟ್ಟೆ ಧರಿಸಿ ಓಡಾಡುವವರು, ಕೆಲಸವಿಲ್ಲದೆ ಅಲೆಯುವವರ ಬಾಳಲ್ಲಿ ನಗು, ಪ್ರೀತಿ, ಜೀವನೋತ್ಸಾಹ ತುಂಬುತ್ತಿರುವ ಜೇಕ್ ಕಾರ್ಯ ಶ್ಲಾಘನೀಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಏಳು ವರ್ಷಗಳ ನಂತರ ಯುಎಪಿಎ ಪ್ರಕರಣದಲ್ಲಿ ಇಬ್ಬರು ಕಾಶ್ಮೀರಿ ಯುವಕರನ್ನು ಖುಲಾಸೆಗೊಳಿಸಿದ ದೆಹಲಿ ನ್ಯಾಯಾಲಯ

ಏಳು ವರ್ಷಗಳಿಗೂ ಹೆಚ್ಚು ಕಾಲದ ನಂತರ, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಬಂಧಿಸಲ್ಪಟ್ಟ ಇಬ್ಬರು ಕಾಶ್ಮೀರಿ ಯುವಕರನ್ನು ಗುರುವಾರ ದೆಹಲಿ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಪ್ರಾಸಿಕ್ಯೂಷನ್ ತನ್ನ ಆರೋಪಗಳನ್ನು ಸಾಬೀತುಪಡಿಸಲು ವಿಫಲವಾಗಿದೆ ಮತ್ತು ದೆಹಲಿ ಪೊಲೀಸರು...

‘ನಾವು ಯುದ್ಧವನ್ನು ಶಾಶ್ವತವಾಗಿ ಕೊನೆಗೊಳಿಸಲು ಪ್ರಯತ್ನಿಸುತ್ತೇವೆ’; ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ: ವರದಿ

ಟೆಹ್ರಾನ್: ಇಸ್ರೇಲ್ ಮತ್ತು ಅಮೆರಿಕದ ದಾಳಿಗಳ ನಂತರ ಇರಾನ್‌ನ ಉನ್ನತ ಅಧಿಕಾರಿಗಳು ಮತ್ತು ಮಾಜಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಸೇರಿದಂತೆ ಸಾವಿರಾರು ಜನರು ಸಾವನ್ನಪ್ಪಿದ ನಂತರ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ...

‘ಅಮೆರಿಕ ಇಲ್ಲದೆ, ನ್ಯಾಟೋ ಒಂದು ಕಾಗದದ ಹುಲಿ’: ಅಟ್ಲಾಂಟಿಕ್ ಮೈತ್ರಿಕೂಟದ ದೇಶಗಳನ್ನು ‘ಹೇಡಿಗಳು’ ಎಂದ ಡೊನಾಲ್ಡ್ ಟ್ರಂಪ್  

ಇರಾನ್ ವಿರುದ್ಧದ ಅಮೆರಿಕ - ಇಸ್ರೇಲ್ ಯುದ್ಧಕ್ಕೆ ಬೆಂಬಲ ನೀಡದ ನ್ಯಾಟೋ ಮಿತ್ರರಾಷ್ಟ್ರಗಳ ವಿರುದ್ಧ ಶುಕ್ರವಾರ ವಾಗ್ದಾಳಿ ನಡೆಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದೀರ್ಘಕಾಲದ ಅಮೆರಿಕದ ಮಿತ್ರರಾಷ್ಟ್ರಗಳನ್ನು "ಹೇಡಿಗಳು" ಎಂದು ಕರೆದಿದ್ದಾರೆ. "ಯುಎಸ್ಎ ಇಲ್ಲದೆ,...

ಮುಖ್ಯಮಂತ್ರಿಗಳಿಗೆ ವರ್ಗಾವಣೆಗಳಲ್ಲಿ ಹಸ್ತಕ್ಷೇಪ ಮಾಡುವುದಕ್ಕಿಂತ ಮಹತ್ವದ ಕೆಲಸವಿದೆ: ಕರ್ನಾಟಕ ಹೈಕೋರ್ಟ್ 

ಸರ್ಕಾರಿ ನೌಕರರ ವರ್ಗಾವಣೆ ಮತ್ತು ನೇಮಕಾತಿಗಳಲ್ಲಿ ಹಸ್ತಕ್ಷೇಪ ಮಾಡುವುದಕ್ಕಿಂತ ಮುಖ್ಯಮಂತ್ರಿಗಳು ನಿರ್ವಹಿಸಬೇಕಾದ ಕೆಲಸ ಉತ್ತಮ ಮತ್ತು ಹೆಚ್ಚು ಮುಖ್ಯವಾದುದು ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚಿನ ತೀರ್ಪೊಂದರಲ್ಲಿ ಹೇಳಿದೆ.  ಬೆಸ್ಕಾಂ ಎಂಜಿನಿಯರ್ ವರ್ಗಾವಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ...

ಪಶ್ಚಿಮ ಏಷ್ಯಾ ಸಂಘರ್ಷ: ಪ್ರತ್ಯೇಕ ಘಟನೆಗಳಲ್ಲಿ ಈವರೆಗೆ ಆರು ಭಾರತೀಯರ ಸಾವು, ಒಬ್ಬರು ಕಾಣೆ; ವಿದೇಶಾಂಗ ಸಚಿವಾಲಯ ಮಾಹಿತಿ

ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯೆ ಗಲ್ಫ್ ಪ್ರದೇಶದಾದ್ಯಂತ ನಡೆದ ಪ್ರತ್ಯೇಕ ಘಟನೆಗಳಲ್ಲಿ ಆರು ಭಾರತೀಯ ಪ್ರಜೆಗಳು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಒಬ್ಬರು ಕಾಣೆಯಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (MEA) ಶುಕ್ರವಾರ ತಿಳಿಸಿದೆ.  ಭಾರತೀಯ ಕಾರ್ಯಾಚರಣೆಗಳು...

ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಇರಾನ್‌ನ ಮತ್ತೊಬ್ಬ ನಾಯಕ, ಐಆರ್‌ಜಿಸಿ ವಕ್ತಾರ ಅಲಿ ಮೊಹಮ್ಮದ್ ನೈನಿ ಸಾವು

ಟೆಹ್ರಾನ್: ಇಸ್ರೇಲಿ-ಅಮೆರಿಕನ್ ಕ್ಷಿಪಣಿ ದಾಳಿಯಲ್ಲಿ ಇರಾನ್ ವಕ್ತಾರ ಜನರಲ್ ಅಲಿ ಮೊಹಮ್ಮದ್ ನೈನಿ ಸಾವನ್ನಪ್ಪಿದ್ದಾರೆ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಶುಕ್ರವಾರ ದೃಢಪಡಿಸಿದೆ. ಸರ್ಕಾರಿ ಸ್ವಾಮ್ಯದ ತಸ್ನಿಮ್ ಸುದ್ದಿ ಸಂಸ್ಥೆ...

ಶಿವಮೊಗ್ಗ: ಚಿಕಿತ್ಸೆ ನೀಡಲು ತೆರಳಿದ್ದ ವೇಳೆ ನೀರಾನೆ ದಾಳಿ; 26 ವರ್ಷದ ಪಶುವೈದ್ಯೆ ಸಾವು

ಶಿವಮೊಗ್ಗದ ತ್ಯಾವರೆಕೊಪ್ಪ ಸಿಂಹ ಮತ್ತು ಹುಲಿ ಸಫಾರಿ ಮೃಗಾಲಯದಲ್ಲಿ ಗುರುವಾರ ತಡರಾತ್ರಿ ನೀರಾನೆ ದಾಳಿಗೆ ಒಳಗಾಗಿದ್ದ 26 ವರ್ಷದ ತರಬೇತಿ ವನ್ಯಜೀವಿ ಪಶುವೈದ್ಯೆ ಸಮೀಕ್ಷಾ ರೆಡ್ಡಿ ಶುಕ್ರವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಬೆಂಗಳೂರಿನ ಬನ್ನೇರುಘಟ್ಟದವರಾದ ಸಮೀಕ್ಷಾ,...

ಸಾಮೂಹಿಕ ಮತಾಂತರಕ್ಕೆ ಕಾರಣವಾದವರಿಗೆ ಜೀವಾವಧಿ ಶಿಕ್ಷೆ; ಮಸೂದೆ ಅಂಗೀಕರಿಸಿದ ಛತ್ತೀಸ್‌ಗಢ ವಿಧಾನಸಭೆ

ಬಲವಂತ, ಪ್ರಚೋದನೆ, ವಂಚನೆ ಅಥವಾ ತಪ್ಪು ನಿರೂಪಣೆಯ ಮೂಲಕ ನಡೆಸಲಾಗುವ ಧಾರ್ಮಿಕ ಮತಾಂತರಗಳನ್ನು ತಡೆಗಟ್ಟುವ ಗುರಿಯನ್ನು ಹೊಂದಿರುವ ಮಸೂದೆಯನ್ನು ಛತ್ತೀಸ್‌ಗಢ ವಿಧಾನಸಭೆಯು ಗುರುವಾರ ಅಂಗೀಕರಿಸಿದೆ. ಸಾಮೂಹಿಕ ಮತಾಂತರ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಸೇರಿದಂತೆ...

6 ವರ್ಷಗಳ ಜೈಲುವಾಸದ ನಂತರ ಮಧ್ಯಂತರ ಜಾಮೀನು; ಜೈಲಿನಿಂದ ಹೊರಬಂದ ಶಾರ್ಜೀಲ್ ಇಮಾಮ್‌

ಸಹೋದರನ ಮದುವೆಯಲ್ಲಿ ಭಾಗವಹಿಸಲು ಮತ್ತು ಅನಾರೋಗ್ಯ ಪೀಡಿತ ತಾಯಿಯನ್ನು ನೋಡಿಕೊಳ್ಳಲು ದೆಹಲಿ ನ್ಯಾಯಾಲಯವು 10 ದಿನಗಳ ಮಧ್ಯಂತರ ಜಾಮೀನು ನೀಡಿದ ನಂತರ ವಿದ್ಯಾರ್ಥಿ ಕಾರ್ಯಕರ್ತ ಶಾರ್ಜೀಲ್ ಇಮಾಮ್ ಶುಕ್ರವಾರ ಸುಮಾರು ಆರು ವರ್ಷಗಳ...

ಉತ್ತಮ್ ನಗರದಲ್ಲಿ ಗೌರವಯುತ-ಶಾಂತಿಯುತ ಈದ್ ಆಚರಿಸುವಂತೆ ನೋಡಿಕೊಳ್ಳಿ: ಅಧಿಕಾರಿಗಳಿಗೆ ಎಂದು ದೆಹಲಿ ಹೈಕೋರ್ಟ್ ನಿರ್ದೇಶನ

ರಾಷ್ಟ್ರ ರಾಜಧಾನಿಯ ದೆಹಲಿಯ ಉತ್ತಮ್ ನಗರ ಪ್ರದೇಶದಲ್ಲಿ ಹೆಚ್ಚುತ್ತಿರುವ ಕೋಮು ಉದ್ವಿಗ್ನತೆಯ ನಡುವೆ, ಸಮುದಾಯಗಳ ನಡುವೆ ಶಾಂತಿ ಕಾಪಾಡಿಕೊಳ್ಳುವ ಜೊತೆಗೆ ಶಾಂತಿಯುತ ಮತ್ತು ಘನತೆಯ ಈದ್ ಆಚರಣೆಯನ್ನು ಖಚಿತಪಡಿಸಿಕೊಳ್ಳಲು ಕಾನೂನಿನಡಿಯಲ್ಲಿ ಅನುಮತಿಸಬಹುದಾದ ಎಲ್ಲಾ...