Homeಚಳವಳಿಮಸ್ಕಿಯಿಂದ ರಾಜ್ಯದೆಲ್ಲೆಡೆ ಹೋರಾಟದ ಹಾಡುಗಳನ್ನು ಪಸರಿಸಿದ ಜನಕವಿ ದಾನಪ್ಪ ನಿಲೋಗಲ್

ಮಸ್ಕಿಯಿಂದ ರಾಜ್ಯದೆಲ್ಲೆಡೆ ಹೋರಾಟದ ಹಾಡುಗಳನ್ನು ಪಸರಿಸಿದ ಜನಕವಿ ದಾನಪ್ಪ ನಿಲೋಗಲ್

ಚಳವಳಿಯ ಸಂಗಾತಿಯಾಗಿ, ಆಯಾ ಕಾಲದ ಬಿಕ್ಕಟ್ಟುಗಳನ್ನು, ಜನರನ್ನು ಎಚ್ಚರಿಸಬೇಕಾದ ವಿದ್ಯಮಾನಗಳನ್ನು ಸರಳವಾಗಿ ಜನರ ಲಯದಲ್ಲಿ ಹಾಡು ಕಟ್ಟಿ ಹಾಡುತ್ತಾರೆ. ನಂತರ ಈ ಹಾಡಿಗೆ ಕಾಲು ಬಂದೋ, ರೆಕ್ಕೆ ಬಂದೋ ಬೇರೆ ಬೇರೆ ಕಡೆಗಳಿಗೆ ಚಲಿಸುತ್ತವೆ. ಹೀಗೆ ಚಲಿಸುತ್ತಾ ಚಳವಳಿಗಳ ಸಂಗಾತಿಗಳಾಗುತ್ತವೆ.

- Advertisement -
- Advertisement -

ಎಲೆಮರೆ-26

  • ಅರುಣ್‌ ಜೋಳದ ಕೂಡ್ಲಿಗಿ

ಕರ್ನಾಟಕದ ಜನಪರ ಚಳವಳಿ, ಕಾರ್ಯಾಗಾರ, ಸಭೆಗಳ ಹೋರಾಟದ ಹಾಡುಗಳಲ್ಲಿ ಒಂದಾದರೂ ಮಸ್ಕಿಯ ದಾನಪ್ಪ ನಿಲೋಗಲ್ ರಚನೆ ಇದ್ದೇ ಇರುತ್ತೆ. ಹೀಗೆ ಹಾಡುವಾಗ ಕೆಲವೊಮ್ಮೆ ಈ ಹಾಡನ್ನು ದಾನಪ್ಪ ಕಟ್ಟಿದ್ದು ಎನ್ನುವುದೂ ಮರೆಯಾಗುತ್ತದೆ. ಅಂದರೆ ದಾನಪ್ಪನ ಹಾಡುಗಳು ಜನಪದ ಗೀತೆಗಳಂತೆ ನಾಡಿನಾದ್ಯಂತ ಹೆಸರಿನ ಹಂಗಿಲ್ಲದೆ ಚಲಿಸುತ್ತಿವೆ. ಹೀಗೆ ಜನರನ್ನು ತಲುಪುವುದೇ ಮುಖ್ಯ ನನ್ನ ಹೆಸರನ್ನು ಹೇಳುವ ಅಗತ್ಯವಿಲ್ಲ ಎಂದು ಸ್ವತಃ ದಾನಪ್ಪ ತನ್ನ ಹಾಡನ್ನು ಸಾರ್ವಜನಿಕ ವಲಯಕ್ಕೆ ಒಪ್ಪಿಸಿದ್ದಾರೆ. ಹೀಗೆ ಎಂಬತ್ತರ ದಶಕದಿಂದಲೂ ದಲಿತ ಚಳವಳಿಯ ಸಂಗಾತಿಯಾಗಿ, ಆಯಾ ಕಾಲದ ಬಿಕ್ಕಟ್ಟುಗಳನ್ನು, ಜನರನ್ನು ಎಚ್ಚರಿಸಬೇಕಾದ ವಿದ್ಯಮಾನಗಳನ್ನು ಸರಳವಾಗಿ ಜನರ ಲಯದಲ್ಲಿ ಹಾಡು ಕಟ್ಟಿ ಹಾಡುತ್ತಾರೆ. ನಂತರ ಈ ಹಾಡಿಗೆ ಕಾಲು ಬಂದೋ, ರೆಕ್ಕೆ ಬಂದೋ ಬೇರೆ ಬೇರೆ ಕಡೆಗಳಿಗೆ ಚಲಿಸುತ್ತವೆ. ಹೀಗೆ ಚಲಿಸುತ್ತಾ ಚಳವಳಿಗಳ ಸಂಗಾತಿಗಳಾಗುತ್ತವೆ.

ದಾನಪ್ಪ ಮಸ್ಕಿಯಲ್ಲೇ ಇದ್ದರೂ ಆತನ ಹಾಡುಗಳು ದಣಿವರಿಯದೆ ಚಳವಳಿಯಲ್ಲಿ ನಿರತವಾಗಿರುತ್ತವೆ. ‘ದಾನಪ್ಪನ ಜತೆ ಹಾಡಿದವರು, ಹಾಡುಕಟ್ಟಿದವರು ಅದನ್ನೇ ಏಣಿ ಮಾಡಿಕೊಂಡು ಕಳೆದು ಹೋದರೂ, ದಾನಪ್ಪ ಮಾತ್ರ ಈಗಲೂ ಹಾಡನ್ನೇ ಬದುಕುತ್ತಿದ್ದಾರೆ. ಇದೇ ನನ್ನಂಥವರಿಗೆ ಸೋಜಿಗ’ ಎನ್ನುವ ಕೊಟಗಾನಹಳ್ಳಿ ರಾಮಯ್ಯನವರ ಮಾತುಗಳು ದಾನಪ್ಪನವರ ಬದ್ಧತೆಗೆ ಸಾಕ್ಷಿಯಾಗಿವೆ.

’ಹೈದರಾಬಾದ್ ಕರ್ನಾಟಕ ಅಂದ್ರೆ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದದ್ದು ಅಂತಾರೆ ಅದು ಸತ್ಯ, ಅದರ ಜೊತೆಗೆ ಹಿಂದುಳಿಯೋಕೆ ಕಾರಣ ಏನು ಅಂತ ನೋಡುವಾಗ ಇಲ್ಲಿ ಫ್ಯೂಡಲ್ ಸಂಸ್ಕೃತಿ ಜೀವಂತವಾಗಿರುವ ನೆಲ. ಅಂತೆಯೇ ಸ್ವಾತಂತ್ರ್ಯ ಸಿಕ್ಕು ಒಂದು ವರ್ಷದ ನಂತರ ಸ್ವಾತಂತ್ರ್ಯ ಸಿಕ್ಕ ಪ್ರದೇಶ. ಹೈದರಾಬಾದ್ ನಿಜಾಮನ ಆಡಳಿತವಿದ್ದ ಕಾರಣ ಫ್ಯೂಡಲ್ ವ್ಯವಸ್ಥೆಯೂ ಜೀವಂತವಾಗಿದ್ದು, ಪ್ರತಿಯೊಂದು ಹಳ್ಳಿಯಲ್ಲಿಯೂ ದಲಿತ ಮತ್ತು ಅಸ್ಪೃಶ್ಯರ ಜೀವನ ಗಂಭೀರವಾದ ಕಡು ಬಡತನದಲ್ಲಿತ್ತು. ಇವರಿಗೆ ಭೂಮಿ ಇಲ್ಲ, ಓದು ಇಲ್ಲ. ಹೀಗಿರುವಾಗ ಗೌಡ್ರು, ಜಮೀನ್ದಾರರ ದಬ್ಬಾಳಿಕೆಯ ಆಡಳಿತ. ಈ ಸ್ಥಿತಿಯಲ್ಲಿ ನನಗೆ ಓದಲು ಅವಕಾಶ ಸಿಕ್ಕದ್ದೇ ದೊಡ್ ವಿಷ್ಯ. ನಮ್ದು ನಿಲೋಗಲ್ ಆದ್ರೂ ಸಹ ಹತ್ತನ್ನೆರಡು ಕಿ.ಮೀ ದೂರದ ಹಟ್ಟಿ ಗೋಲ್ಡ್ ಮೈನ್ಸ್‌ನಲ್ಲಿ ನಮ್ಮಪ್ಪ ಕಾರ್ಮಿಕ ಆಗಿದ್ದ ಕಾರಣ ನನಗೆ ಓದೋಕೆ ಅವಕಾಶ ಸಿಕ್ತು. ಗೆದ್ದಲಗಟ್ಟಿ, ನಿಲೋಗಲ್‌ಗಳು ಧಣಿಗಳ ದರ್ಬಾರ್ ಇರೋ ಊರುಗಳು. ಅಕಸ್ಮಾತ್ ಕೂಲಿ ಆಗಿ ಕಳೆದು ಹೋಗೋನು ಓದಿ ಉಳಕಂಡೆ’ ಎಂದು ಬಾಲ್ಯದ ಅನುಭವಗಳನ್ನು ಹೇಳುತ್ತಾರೆ ದಾನಪ್ಪ.

’ನಮ್ಮ ಮನೆ ಎದುರು ಈರಣ್ಣನ ಕಟ್ಟೆ ಇತ್ತು. ಅಲ್ಲಿ ಭಜನಿ ಮಾಡತಿದ್ದರು. ನಾನು ಮಕ್ಕಂಡೇ ಈ ಭಜನಿ ಹಾಡುಗಳನ್ನು ಕೇಳಿಸಿಕೊಂಡು ಗುನುಗ್ತಾ ಇದ್ದೆ. ಹಿಮ್ಮೇಳವಾಗಿ ಭಜನಿಯಲ್ಲಿ ಕೂತು ಹಾಡತಿದ್ದೆ. ಕ್ರಿಶ್ಚಿಯನ್ ಮಾಸ್ ಗೀತೆಗಳ ಜತೆ ಹಾಡ್ತಿದ್ದೆ. ನಮ್ಮಪ್ಪ ಭಜನೆ ಪದಾನ ಚೊಲೋ ಹಾಡತಿದ್ದ. `ಗೂಳಿ ಬಂತು ಗೂಳಿ ಬಂತಣ್ಣಾ, ಗುರುಮಠಕೆ ತಕ್ಕ ಗೂಳಿ ಬಂತು ಗೂಳಿ ಬಂತಣ್ಣಾ..’ ತರಹದ ಜನಪದ ಭಜನೆಗಳು ನನ್ನೊಳಗೆ ಹಾಡಿನ ಲಯವನ್ನು ಕೂರಿಸ್ತಾ ಇದ್ವು. ’ನೀರ ನಿಲ್ಲದ ಬಾವಿ ತುಂಬುವುದೋ/ತುಂಬಿ ತುಳಕುವುದೋ/ಇರುವಿ ನೀರಡಿಸಿ ಬಂದು ಕುಡಿಯುವುದೋ/ಜಲ ಬತ್ತುವುದೋ/ ರೆಕ್ಕೆ ಇಲ್ಲದ ಪಕ್ಷಿ ಸುತ್ತುವುದೋ..’ ಈ ತರಹದ ತತ್ವಪದಗಳು ನನಗೆ ಹೆಚ್ಚು ಪ್ರಭಾವ ಬರ‍್ತಾ ಇದ್ವು. ಇಂತಹ ಹಿನ್ನೆಲೆಯ ಕಾರಣ ಇದೇ ಹಾಡಿಕೆ ಲಯಗಾರಿಕೆ ಚಳವಳಿಗೆ ದುಮುಕಿದ ಮೇಲೆ ಮತ್ತೆ ನನ್ನೊಳಗೆ ಹೊಸ ರೂಪ ಪಡೆದವು. ದಲಿತ ಕಲಾ ಮಂಡಳಿಯ ಹಾಡಿಕೆ, ಪದ ರಚನೆಗಳೂ ಆ ಕಾಲಕ್ಕೆ ನಮ್ಮನ್ನು ತುಂಬಾ ಪ್ರಭಾವ ಬೀರಿದ್ವು. ಪಿಚ್ಚಳ್ಳಿ ಶ್ರೀನಿವಾಸರ ಹಾಡುಗಳು ಆಗ ದೊಡ್ಡಮಟ್ಟದಲ್ಲಿ ಚಳವಳಿಯಲ್ಲಿ ಹಾಡಿಕೆಗೆ ಬಂದಿದ್ದವು. ಹೀಗಿರುವಾಗ ಹಿರೇನಗನೂರು ಹೋಟೆಲ್ ಪ್ರವೇಶ ಹೋರಾಟದ ಸಂದರ್ಭದಲ್ಲಿ ’ಅವತ್ತು ಸೋಮವಾರ, ಅಪ್ಪ ಬಸವನ ವಾರ’ ಅನ್ನೋ ಮೊದಲ ಹಾಡನ್ನ ಬರದೆ. ಎಂಬತ್ತರ ದಶಕದಲ್ಲಿ ಕ್ರಾಂತಿಕಾರಿ ಕವಿ ಗದ್ದರ್ ಅವರ ಕಾರ್ಯಕ್ರಮ ನೋಡಲು ಸಿಕ್ಕಿತು. ಜನಪರ ಸಾಹಿತ್ಯದ ಒಳ ತಿರುಳು ನನ್ನನ್ನು ಮತ್ತಷ್ಟು ಗಟ್ಟಿಗೊಳಿಸಿತು. ’ವಂಚಿತರೇ ಈ ದೇಶದ ವಾರಸುದಾರರು’ ಎನ್ನುವ ಸ್ಪಷ್ಟ ಕಲ್ಪನೆ ಬಂದಿತು. ಜನ ಕಲಾ ಮಂಡಳಿಯ ನಂಟಿನಿಂದ ಚೌಡಕಿ ಕತೆ, ನೀಲಗಿರಿ, ಹೆಸರಾದ ತವರೂರು, ಕೊಡಗು ಹೀಗೆ ಆಯಾ ಕಾಲದ ವಿಷ್ಯಗಳನ್ನು ಹಾಡುಗಳನ್ನಾಗಿ ಬರೆಯೋದು ಹಾಡೋದು ಶುರುವಾತು.

ನನ್ನ ಪ್ರತಿಯೊಂದು ಹಾಡಿನ ಮೊದಲ ತಾಲೀಮು ನನ್ನ ಮನೆ. ನನ್ನ ಹೆಂಡ್ತಿ ಮೇರಿ (ಮರಿಯಮ್ಮ) ಮಕ್ಕಳಾದ ಸ್ನೇಹಲತಾ, ಪ್ರಶಾಂತ್, ಪ್ರಮೋದ್ ಇವರನ್ನು ಅದೆಷ್ಟೋ ರಾತ್ರಿಗಳು ನಿದ್ದೆಗೆಡಿಸಿ ಕೋರಸ್ಸಿಗೆ ಎಬ್ಸಿದ್ದು, ರಾಗ ಲಯ ತಿದ್ದಿ ತೀಡಿ ಹಾಡು ಹೊರಬರೋ ಹೊತ್ತಿಗೆ ಬೆಳಕರಿದದ್ದೂ ಇದೆ’ ಎಂದು ಹಾಡಿಕೆಯ ಜಾಡನ್ನು ದಾನಪ್ಪ ನೆನೆಯುತ್ತಾರೆ.

ಅಂಬೇಡ್ಕರ್ ಹೇಳುವ `ಓದು-ಹೋರಾಟ’ ಒಟ್ಟೊಟ್ಟಿಗೆ ಆಗಬೇಕೆಂಬ ಮಾತನ್ನು ದಾನಪ್ಪ ಅಕ್ಷರಶಃ ಪಾಲಿಸಿದ್ದರು. ಬಿ.ಕೆ ಅವರ ಮಾರ್ಗದರ್ಶನ, ದಲಿತ ಕಲಾ ಮಂಡಳಿಯ ಪಿಚ್ಚಳ್ಳಿ ಶ್ರೀನಿವಾಸ, ಮುನಿಸ್ವಾಮಿ ಮೊದಲಾದವರ ಹೋರಾಟದ ಹಾಡುಗಳ ಸ್ಪೂರ್ತಿ, ಇದೆಲ್ಲದರ ಪರಿಣಾಮ ಧಾರವಾಡ ಜಿಲ್ಲೆಯ ದ.ಸಂ.ಸದ ಚಟುವಟಿಕೆಗಳು ಹಳ್ಳಿಗಳತ್ತ ನಡೆದದ್ದು, ಬ್ಯಾಡಗಿ ತಾಲೂಕಿನ ದುಮ್ಮಿಹಾಳ ಘಾಳ ಪೂಜೆ ಭೂ ಹೋರಾಟ, ಧರಣಿ ಹೋರಾಟ, ಅರೆಸ್ಟು, ಧಿಕ್ಕಾರಗಳು ಇವೆಲ್ಲ ದಾನಪ್ಪನ ನಿತ್ಯದ ಒಡನಾಡಿಗಳಾದವು. ’ಬಿ.ಕೆಯವರ ನಿರಂತರ ಒಡನಾಟ, ರಾಮದೇವ ರಾಕೆ, ಹೆಚ್.ಗೋವಿಂದಯ್ಯ, ಶಿವಲಿಂಗಪ್ಪ (ಶಿವಮೊಗ್ಗ), ಸಿ.ಎಂ.ಮುನಿಯಪ್ಪ (ಕೋಲಾರ) ಎಂ.ವೆಂಕಟಸ್ವಾಮಿ, ದೇವನೂರ ಮಹಾದೇವ, ಕವಿ ಸಿದ್ಧಲಿಂಗಯ್ಯ, ಮೊದಲಾದವರ ಭೇಟಿ ಚರ್ಚೆ ಮಾತುಕತೆ ನನ್ನನ್ನು ಮತ್ತಷ್ಟು ಗಟ್ಟಿಯಾಗಿಸಿದವು’ ಎಂದು ದಾನಪ್ಪ ನೆನೆಯುತ್ತಾರೆ.

ಹೀಗೆ ದಾನಪ್ಪ ನಿಲೋಗಲ್ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಹೀಗೊಂದು ಹೋರಾಟದ ಹಾಡಿನ ಪರಂಪರೆಯನ್ನು ಹುಟ್ಟುಹಾಕಿದ್ದಾರೆ. ಇದೀಗ ದಾನಪ್ಪನ ಮಗ ಪ್ರಶಾಂತನೂ ಈ ಪರಂಪರೆ ಮುಂದುವರಿಸಿದ್ದಾನೆ. ಗಂಗಾವತಿಯ ರಮೇಶ್ ಗಬ್ಬೂರು ಈ ಪರಂಪರೆಯನ್ನು ತಮ್ಮ ವಿದ್ಯಾರ್ಥಿಗಳ ಮೂಲಕ ಈ ಹಾಡಿಕೆಯ ಪರಂಪರೆಯನ್ನು ಮತ್ತಷ್ಟು ವಿಸ್ತರಿಸುತ್ತಿದ್ದಾರೆ.


ಇದನ್ನೂ ಓದಿ: ರೆಡ್ಡಿ ಸಹೋದರರ ವಿರುದ್ಧ ಪಟ್ಟುಬಿಡದೇ ಹೋರಾಡಿ ಗೆದ್ದ ದಿಟ್ಟ ಯುವತಿಯ ಕಥೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...