Homeಕರ್ನಾಟಕಪತ್ರಿಕೆಯ ಮೂಲಕ ಜನಪರ ಹೋರಾಟಕ್ಕೆ ಆಖಾಡ ಸಿದ್ಧ!...

ಪತ್ರಿಕೆಯ ಮೂಲಕ ಜನಪರ ಹೋರಾಟಕ್ಕೆ ಆಖಾಡ ಸಿದ್ಧ!…

- Advertisement -
- Advertisement -

ಜನವಾಹಿನಿಯ ನೆನಪುಗಳು: ಅಂಕಣ-7
ನಿಖಿಲ್ ಕೋಲ್ಪೆ

ಕೃಪೆ: ’ಆರ್ಸೋ’ ಕೊಂಕಣಿ ಪತ್ರಿಕೆ

ಮೊದಲೇ ಹೇಳಿದಂತೆ ಕಂಪ್ಯೂಟರ್ ಇತ್ಯಾದಿ ಬಂದಿದ್ದರೂ, ಆಗ ಆನ್ಲೈನ್ ಎಡಿಟಿಂಗ್ ಹೊಸ ವಿಷಯವಾಗಿದ್ದುದರಿಂದ ಅದಕ್ಕಾಗಿಯೇ ಕಂಪ್ಯೂಟರ್ ಮತ್ತು ಸಾಫ್ಟ್‌ವೇರ್ ಪೂರೈಸಿದ ಕಂಪೆನಿಯವರು ವಿಶೇಷ ತರಬೇತಿ ಏರ್ಪಡಿಸಿದ್ದರು.

ನಮ್ಮಲ್ಲಿ ಕೆಲವರು ಪೇಜ್‍ಮೇಕರ್ ಇತ್ಯಾದಿಗಳಲ್ಲಿ ನಿಷ್ಣಾತರಾಗಿದ್ದರೂ, ನನ್ನನ್ನೂ ಸೇರಿದಂತೆ ಕೆಲವರಿಗೆ ಕನ್ನಡ ಟೈಪಿಂಗ್ ಕೂಡಾ ಬರುತ್ತಿರಲಿಲ್ಲ! ವಿಭಾಗ ಮುಖ್ಯಸ್ಥರು ಸುದ್ದಿಗಳನ್ನು ಆಯ್ಕೆ ಮಾಡಿ, ಉಪಸಂಪಾದಕರಿಗೆ ಹಂಚಬೇಕು. ಉಪಸಂಪಾದಕರು ಟೈಪ್ ಮಾಡಿದ್ದನ್ನು ಮತ್ತೊಮ್ಮೆ ಓದಿ ವಿಭಾಗ ಮುಖ್ಯಸ್ಥರಿಗೆ ಆಂತರಿಕ ನೆಟ್ವರ್ಕ್ ಮೂಲಕ ಕಳಿಸಬೇಕು. ಅದನ್ನವರು ಪರಿಶೀಲಿಸಿ, ಹೆಡ್ಡಿಂಗ್ ಇತ್ಯಾದಿ ಸರಿಪಡಿಸಿ ಮರಳಿ ಪೇಜ್ ಮಾಡಲು ಕಳಿಸಬೇಕು. ಪೇಜ್ ಮಾಡಿದ ಬಳಿಕ ಅದರ ಪ್ರಿಂಟ್ ತೆಗೆದು ಮತ್ತೆ ಮುಖ್ಯಸ್ಥರಿಗೆ ತೋರಿಸಿ, ಅವರು ಅಂಗೀಕರಿಸಿದ ಬಳಿಕ ಎ3 ಪ್ರಿಂಟರಲ್ಲಿ ಬಟರ್‍ಶೀಟ್‍ನಲ್ಲಿ, ಬಣ್ಣದ ಪುಟವಾಗಿದ್ದರೆ ಫಿಲ್ಮ್ ಶೀಟ್‌ನಲ್ಲಿ ಪ್ರಿಂಟ್ ತೆಗೆದು ಪ್ರೀಪ್ರೆಸ್‍ಗೆ ಕಳುಹಿಸಬೇಕು. ಅಲ್ಲಿ ಪ್ಲೇಟ್ ತಯಾರಿಸಿ ಮುದ್ರಣ ವಿಭಾಗಕ್ಕೆ ಕಳಿಸುತ್ತಾರೆ. ಇದಕ್ಕಾಗಿ ಎಲ್ಲಾ ಕಂಪ್ಯೂಟರ್‌ಗಳಿಗೆ ಸಿರಿಯಲ್ ನಂಬರ್ ನೀಡಲಾಯಿತು. (ನಂತರ ಬಣ್ಣದ ಪುಟಗಳಿಗೆ ದುಬಾರಿ ಬೆಲೆಯ ಆ ಕಾಲದಲ್ಲಿ ಅತ್ಯಾಧುನಿಕ ಎನಿಸಿದ ಇಮೇಜ್ ಸೆಟ್ಟರ್ ಬಂತು. ಅದು ಕಲರ್ ಸೆಪರೇಶನ್ ಮಾಡಿ ಇಡೀ ಪುಟದ ಫಿಲ್ಮ್ ಹೊರತೆಗೆಯುತ್ತಿತ್ತು.)

ಆಗ ಈಗಿನಂತೆ ಎಲ್ಲವೂ ಡಿಜಿಟಲ್ ಫೋಟೋಗಳಾಗಿರಲಿಲ್ಲ. ಪ್ರಿಂಟ್‍ಗಳೂ ಇರುತ್ತಿದ್ದವು. ಅವುಗಳನ್ನು ತಾಂತ್ರಿಕ ವಿಭಾಗಕ್ಕೆ ಕಳುಹಿಸಿದರೆ, ಅಲ್ಲಿ ಸ್ಕ್ಯಾನ್ ಮಾಡಿ ಆಯಾ ಫೋಲ್ಡರ್‌ಗಳಿಗೆ ಹಾಕುತ್ತಿದ್ದರು. ದೇಶ, ವಿದೇಶಗಳ ಫೋಟೋಗಳಿಗೆ ವ್ಯವಸ್ಥೆ ಮಾಡಲಾಗಿದ್ದು, ಅವು ಸಂಜೆಯ ಹೊತ್ತಿಗೆ ಇಂಟರ್‌ನೆಟ್ ಮೂಲಕ ಬರುತ್ತಿದ್ದವು. ನೆಟ್‍ಗಾಗಿಯೇ ಡೆಡಿಕೇಟೆಡ್ ಕೇಬಲ್ ಅಳವಡಿಸಲಾಗಿತ್ತು. ಆದರೂ, ಆಗಿನ ಸ್ಪೀಡ್ ನೆನೆಸಿಕೊಂಡರೆ ನಗು ಬರುತ್ತದೆ! ಒಂದು ಫೋಟೋ ಬರಲು ಹೆಂಡತಿಯ ಹೆರಿಗೆಗಾಗಿ ಆಸ್ಪತ್ರೆಯಲ್ಲಿ ಕಾಯುವ ಗಂಡನ ಸ್ಥಿತಿ!

ಇವೆಲ್ಲವೂ ಈಗ ನೆನಸುವಷ್ಟು ಸುಲಭವಾಗಿ ಇರಲಿಲ್ಲ! ಇದಕ್ಕೆ ಹೊಂದಿಕೊಳ್ಳಲು ಕೆಲವು ದಿನಗಳೇ ಹಿಡಿದವು! ಅದಕ್ಕಾಗಿಯೇ ತರಬೇತಿ. ಕಂಪೆನಿಯಿಂದ ಸೌರಭ್ ಎಂಬ ಯುವಕ ಬಂದಿದ್ದರು. ಆತ ಒಳ್ಳೆಯ ಶಿಕ್ಷಕ. ನಡುವೆ ಪ್ರಶ್ನೆಗಳನ್ನು ಕೇಳಿ ಸರಿ ಉತ್ತರ ಹೇಳಿದವರಿಗೆ ಒಂದು ಚಾಕಲೇಟ್ ಬಹುಮಾನ! ಕಂಪ್ಯೂಟರ್ ಅಜ್ಞಾನಿಯಾಗಿದ್ದ ನನಗೆ ಮೂರು ಚಾಕಲೇಟ್ ಸಿಕ್ಕಿದ್ದು ಇವತ್ತೂ ನೆನಪಿದೆ. ನಾವೆಲ್ಲ ಬಿಡುವಿನ ಸಂದರ್ಭದಲ್ಲಿ ಕನ್ನಡ ಟೈಪಿಂಗ್ ಕಲಿತೆವು. ಮೊದಲೇ ಹೇಳಿದಂತೆ DOS ಆಧರಿತ ‘ಪ್ರಕಾಶಕ್’ ಎಂಬ ಸಾಫ್ಟ್‌ವೇರ್. ಕಲಿಯಲು ಕಷ್ಟ. ಯಾಕೆಂದರೆ ಕೀ ಬೋರ್ಡ್ ಅಸಂಬದ್ಧ ಎಂಬಂತೆ ಕಾಣುತ್ತಿತ್ತು. ಇಂಗ್ಲೀಷ್ ಅಕ್ಷರಗಳಿಗೂ ಅದಕ್ಕೂ ಸಂಬಂಧವೇ ಇಲ್ಲ! ಒಮ್ಮೆ ಕಲಿತರೆ ಅತ್ಯಂತ ಸರಳ ಮತ್ತು ಅನುಕೂಲಕರ. ನಾನಂತೂ ಸ್ವಲ್ಪ ಸಮಯದಲ್ಲೇ ಹೆಚ್ಚುಕಡಿಮೆ ಮಾತಿನ ವೇಗದಲ್ಲಿ ಟೈಪ್ ಮಾಡಲು ಕಲಿತೆ! ಆಗ ಕಲಿತ ಒಂದು ಪಾಠವೆಂದರೆ, ಏನನ್ನಾದರೂ ಕಲಿಯಲು ಇರುವ ಅಡ್ಡಿಯೆಂದರೆ ಮಾನಸಿಕ ಹಿಂಜರಿಕೆ (mental block). ಇದನ್ನು ನಿವಾರಿಸಿದ್ದಕ್ಕಾಗಿ ಸೌರಭ್‌ರನ್ನು ನೆನಪಿಸಿಕೊಳ್ಳುತ್ತೇನೆ.

ಮೊದಲೇ ದುಬಾರಿ ಕಂಪ್ಯೂಟರ್! ಏನು ಮಾಡಿದರೆ ಏನು ಹಾಳಾಗುತ್ತದೋ ಎಂಬ ಭಯ ಬೇರೆ! “ನೀವು ಇದನ್ನು ಎತ್ತಿ ಹಾಕದ ಹೊರತು ಏನೂ ಆಗುವುದಿಲ್ಲ. ಪ್ರೋಗ್ರಾಂ ಫೈಲ್ಸ್ ಮುಟ್ಟಬೇಡಿ. ಮುಟ್ಟಿದರೂ ಅದು ಕನ್ಫರ್ಮೇಶನ್ ಕೇಳುತ್ತದೆ. ಡಿಲೀಟ್ ಮಾಡಬೇಡಿ. ಉಳಿದಂತೆ ನೀವು ಕಂಪ್ಯೂಟರ್ ಹಾಳು ಮಾಡಿ ತೋರಿಸಿ. ನಾನು ಬೇರೆ ಕಂಪ್ಯೂಟರ್ ಕೊಡುತ್ತೇನೆ” ಎಂದು ಅವರು ಧೈರ್ಯ ತುಂಬಿದ್ದರು! ಇದರಿಂದ ಮುಂದೆ ನಾವಾಗಿಯೇ ಒಂದೊಂದನ್ನೇ ಧೈರ್ಯವಾಗಿ ಕಲಿಯಲು ಸಾಧ್ಯವಾಯಿತು.

ಎಷ್ಟರ ಮಟ್ಟಿಗೆ ಎಂದರೆ, ಅವರು ಫೈಲ್ ಶೇರಿಂಗ್ ಮಾಡಲು ಇ-ಮೈಲ್‍ನಂತಹ ಸಾಫ್ಟ್‌ವೇರ್ ಕೊಟ್ಟಿದ್ದರು. ಅದು ಕಿರಿಕಿರಿ ಉಂಟು ಮಾಡುತ್ತಿತ್ತು! ಮುಂದೆ ನಾವೇ explorer ಮೂಲಕ ಕಾಪಿ ಪೇಸ್ಟ್ ಮಾಡುವ ಸರಳ ಉಪಾಯ ಕಂಡು ಹಿಡಿದೆವು!

ನಾವು ಸೀನಿಯರ್‌ಗಳಿಗೆ ಈ ತರಬೇತಿಗಳಲ್ಲಿ ನಿರಂತರ ಭಾಗವಹಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದೆ. ಕಾರಣ ನಾವು ಪತ್ರಿಕೆಯಲ್ಲಿ ಇರಬೇಕಾದ ಸ್ಥಿರ ಶೀರ್ಷಿಕೆ, ವಿಭಾಗಗಳು ಇತ್ಯಾದಿಗಳ ಬಗ್ಗೆ ತಲೆಕೆರೆದುಕೊಳ್ಳುತ್ತಿದ್ದೆವು. ಪಟ್ಟಣಗಳ ಸುದ್ದಿ ಪುಟಗಳಿಗೆ ‘ಪೇಟೆ-ಪಟ್ಟಣ’, ಗ್ರಾಮೀಣ ಸುದ್ದಿಗಳ ಪುಟಗಳಿಗೆ ’ಊರು-ಕೇರಿ’, ಕ್ರೀಡಾಪುಟಗಳಿಗೆ ‘ಆಟ-ಕೂಟ’ ಹೀಗೆ ಹೆಸರುಗಳನ್ನು ಪಟ್ಟಿ ಮಾಡಿ ಅಂತಿಮಗೊಳಿಸುವುದೂ ದೊಡ್ಡ ಕೆಲಸವಾಗಿತ್ತು.

ಇನ್ನೊಂದು ದೊಡ್ಡ ಕೆಲಸವೆಂದರೆ ಬೇರೆ ಬೇರೆ ಆವೃತ್ತಿಗಳನ್ನು ಯೋಜಿಸುವುದು! ಆಗಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಉಡುಪಿಗೆ ಒಂದು, ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯಕ್ಕೆ ಒಂದು, ಮಂಗಳೂರಿಗೆ ಒಂದು ಮತ್ತು ಅಂತಿಮವಾಗಿ ಲೇಟ್ ಸಿಟಿ ಎಡಿಷನ್! ಜೊತೆಗೆ ಉತ್ತರ ಕನ್ನಡ, ಶಿವಮೊಗ್ಗ ಇತ್ಯಾದಿ ಜಿಲ್ಲೆಗಳಿಗೆ ಪ್ರತ್ಯೇಕ- ಹೀಗೆ ಹಲವು ಆವೃತ್ತಿಗಳು! ಇವುಗಳು ಎಷ್ಟು ದೂರ ಇವೆ, ಎಷ್ಟು ಗಂಟೆಗೆ ತಲುಪಬೇಕು, ಪುಟ ಎಷ್ಟು ಗಂಟೆಗೆ ಮುಗಿಯಬೇಕು, ಅದಕ್ಕೆ ತಕ್ಕಂತೆ ಸಿಬ್ಬಂದಿಗಳಿಗೆ ಶಿಫ್ಟ್ ಮತ್ತು ಕೆಲಸಕ್ಕೆ ಹಾಜರಾಗುವ ಸಮಯ ನಿಗದಿ ಪಡಿಸುವುದು ಇತ್ಯಾದಿಯಾಗಿ ಹಲವಾರು ತಲೆನೋವಿನ ಕೆಲಸಗಳು ನಮಗಿದ್ದವು!

ಇವೆಲ್ಲವನ್ನು ಅನುಷ್ಠಾನಕ್ಕೆ ತರಲು ಬೇರೆಬೇರೆ ವಿಭಾಗಗಳನ್ನು ರಚಿಸಲಾಯಿತು. ಆ ಕುರಿತು ಮತ್ತು ಅವುಗಳಲ್ಲಿ ನನಗೆ ನೆನಪಿರುವಂತೆ ಇದ್ದವರು ಯಾರು ಇತ್ಯಾದಿಗಳ ಕುರಿತು ಮುಂದೆ ಬರೆಯುತ್ತೇನೆ.
***

ಕಚೇರಿಯೇ ಮನೆಯಾಯಿತು!

ಪತ್ರಿಕೆಗಾಗಿ ಯೋಜನೆ, ತರಬೇತಿ ನಡೆಯುತ್ತಿದ್ದಾಗ ಮತ್ತು ನಂತರ ಪತ್ರಿಕೆ ಆರಂಭಗೊಂಡ ಬಳಿಕವೂ ನಾವು ಕೆಲವರು ಕಚೇರಿಯಲ್ಲಿಯೇ ಮಲಗುತ್ತಿದ್ದೆವು. ಕೆಲಸ ಅಷ್ಟಿತ್ತು! ಮುಖಪುಟ ನೋಡಿಕೊಳ್ಳಬೇಕಾಗಿದ್ದ ನನಗಂತೂ ನಿತ್ಯ ರಾತ್ರಿ ಪಾಳಿ ಖಾಯಂ! ರಾತ್ರಿ ಎಡಿಷನ್ ಮುಗಿಸಿ ಪತ್ರಿಕೆ ಪ್ರಕಟವಾಗಿ ಬಂಟ್ವಾಳ ಎಡಿಷನ್ ಸಾಗಿಸುವ ಕಾರಿನಲ್ಲಿ ಹೋಗಿ ಪಾಣೆಮಂಗಳೂರಿನಲ್ಲಿ ಇಳಿದು ಎರಡು ಕಿ.ಮೀ. ನಿಶಾಚರ ಪಿಶಾಚಿಯಂತೆ ನಡೆದು ಮನೆ ಸೇರಬೇಕು. ಮತ್ತೆ ನಿದ್ದೆಯ ಶಾಸ್ತ್ರ ಮಾಡಿ ಮರುದಿನ ಹಾಜರಾಗಬೇಕು. ಪ್ರಯಾಣದ ಸಮಯವೂ ವ್ಯರ್ಥ! ವಿಲ್ಫ್ರೆಡ್ ಡಿ’ಸೋಜಾ ಅವರಿಗೆ ಇನ್ನೂ ದೂರ- ಉಪ್ಪಿನಂಗಡಿ ದಾಟಿ ಹೋಗಬೇಕು. ಅಲ್ಲದೆ ಉಳಿದವರೂ ಬೈಕಂಪಾಡಿಯಿಂದ ರಾತ್ರಿ ಹೊತ್ತು ಸ್ವಂತ ವಾಹನವಿಲ್ಲದೇ ಹೊರಡುವುದು ಕಷ್ಟ. ನಗರದೊಳಗಿನ ಸಿಬ್ಬಂದಿಗೆ ವಾಹನ ವ್ಯವಸ್ಥೆ ಇತ್ತು.

ಒಂದು ದಿನ ಬೆಳ್ಳಂಬೆಳಗೆ ಆಡಳಿತ ನಿರ್ದೇಶಕ ಸ್ಯಾಮುಯೆಲ್ ಸಿಕ್ವೇರಾ ಕಚೇರಿಗೆ ಬಂದವರೇ ದಂಗು ಬಡಿದುಹೋದರು! ನಾವು ಕೆಲವರು ಕಚೇರಿಯಲ್ಲಿಯೇ ಸಿಕ್ಕಸಿಕ್ಕಲ್ಲಿ ಪೇಪರ್ ಹಾಸಿ ಮಲಗಿದ್ದೆವು. “ಹಾಂ! ನೀವು ಇಲ್ಲಿಯೇ ಮಲಗುತ್ತಿದ್ದೀರಾ!?” ಎಂದವರೇ, ಆಗ ಅವರ ಬಳಿ ಮಾತ್ರವಿದ್ದ ವಾಕಿಟಾಕಿ ಗಾತ್ರದ ಮೊಬೈಲ್ ಫೋನಿನಲ್ಲಿ ಮಾತನಾಡಲಾರಂಭಿಸಿದರು.

ಮಧ್ಯಾಹ್ನದ ಹೊತ್ತಿಗೆ ನಮ್ಮ ದೊಡ್ಡ ಹಾಲ್‍ನಲ್ಲಿ ಪಾರ್ಟಿಷನ್ ಆಯಿತು. ಫ್ಯಾನ್‍ಗಳು ಫಿಕ್ಸ್ ಆದವು. ಐದು ಮಂಚಗಳು, ಹಾಸಿಗೆ, ದಿಂಬು, ಹೊದಿಕೆ, ಬಟ್ಟೆಬರೆ ಇಡಲು ಲಾಕರ್ ಎಲ್ಲವೂ ಬಂದವು. ಅದೇ ರಾತ್ರಿಯಿಂದ ನಮ್ಮ ಪೇಪರ್ ಹಾಸಿಗೆಗೆ ವಿದಾಯ ಹೇಳಿದೆವು. ಇದಕ್ಕಾಗಿಯೇ ನಾನವರನ್ನು ಇಂದೂ ನೆನಪಿಸಿಕೊಳ್ಳುತ್ತೇನೆ. ನಾವೂ ಕೂಡಾ ಇಮ್ಮಡಿ ಪ್ರೀತಿಯಿಂದ ದುಡಿಯಲಾರಂಭಿಸಿದೆವು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Thanks for this great write up on Janawahini by Nikhil Kolpe sir.. it manifests their struggle to get the newspaper published in time with perfection must be applauded.. Waiting for further episodes.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...