ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ (ಇಸಿ) ಮಂಗಳವಾರ ಪ್ರಕಟಿಸಲಿದೆ. ಆಯೋಗವು ಮಧ್ಯಾಹ್ನ 3.30ಕ್ಕೆ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ಕರೆದು ವಿವರಗಳನ್ನು ಪ್ರಕಟಿಸಿದೆ. ಮಹಾರಾಷ್ಟ್ರ ವಿಧಾನಸಭೆಯ ಅವಧಿ ನವೆಂಬರ್ 26 ರಂದು ಕೊನೆಗೊಂಡರೆ, ಜಾರ್ಖಂಡ್ ಮುಂದಿನ ವರ್ಷ ಜನವರಿ 5 ರಂದು ಕೊನೆಗೊಳ್ಳುತ್ತದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಜಾರ್ಖಂಡ್ನಲ್ಲಿ ಹೆಮಂತ್ ಸೊರೆನ್ ನೇತೃತ್ವದ ಜೆಎಂಎಂ ಪಕ್ಷ ಆಡಳಿತದಲ್ಲಿದ್ದು, ಅಲ್ಲಿ ಬಿಜೆಪಿ ಅವರಿಗೆ ಸವಾಲು ಹಾಕುತ್ತಿದೆ. ಇತ್ತಿಚೆಗಷ್ಟೆ ಪ್ರಕಣವೊಂದಲ್ಲಿ ಕೇಂದ್ರ ತನಿಖಾ ಸಂಸ್ಥೆ ಸೊರೆನ್ ಅವರನ್ನು ಬಂಧಿಸಿತ್ತು. ಈ ವೇಳೆ ಅವರು ರಾಜೀನಾಮೆ ನೀಡಿದ್ದ ಅವರು ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಮತ್ತೆ ಅಧಿಕಾರಕ್ಕೆ ಏರಿದ್ದರು.
ಮಹಾರಾಷ್ಟ್ರದಲ್ಲಿ ಶಿವಸೇನೆ, ಬಿಜೆಪಿ ಮತ್ತು ಎನ್ಸಿಪಿ ಅಧಿಕಾರದಲ್ಲಿದೆ. ಅದಾಗ್ಯೂ ಬಿಜೆಪಿ ಆಪಾದಿತ ಆಪರೇಷನ್ ಕಮಲ ರಾಜ್ಯದಲ್ಲಿ ಅಧಿಕಾರಕ್ಕೆ ಏರಿತ್ತು. ಅಲ್ಲದೆ, ಎನ್ಸಿಪಿ ಮತ್ತು ಶಿವಸೇನೆ ಪಕ್ಷಗಳು ಒಡೆದುಹೋಗುವಂತೆ ಕೂಡಾ ಬಿಜೆಪಿ ಮಾಡಿತ್ತು ಎಂದು ಆರೋಪಿಸಲಾಗಿದೆ. ಕಾಂಗ್ರೆಸ್, ಎನ್ಸಿಪಿ ಮತ್ತು ಶಿವಸೇನೆ ಮೈತ್ರಿಯಿಂದ ಅಧಿಕಾರನ್ನು ಕಿತ್ತ ಬಿಜೆಪಿ ಶಿವಸೇನೆಯನ್ನು ಶಿವಸೇನೆ ಮತ್ತು ಶಿವಸೇನೆ(ಉದ್ಧವ್ ಠಾಕ್ರೆ) ಮತ್ತು ಎನ್ಸಿಪಿಯನ್ನು ಎನ್ಸಿಪಿ(ಶರದ್ ಪವಾರ್) ಎಂದು ವಿಭಜನೆ ಮಾಡುವಂತೆ ರಾಜಕೀಯ ತಂತ್ರ ಮಾಡಿತ್ತು.
ಇದನ್ನೂ ಓದಿ: ಬಂಗಾಳದ ಪ್ರತಿಭಟನಾನಿರತ ಕಿರಿಯ ವೈದ್ಯರ ಬೆಂಬಲಕ್ಕೆ ನಿಂತ ಐಎಂಎ; ರಾಷ್ಟ್ರವ್ಯಾಪಿ ಉಪವಾಸ ಸತ್ಯಾಗ್ರಹಕ್ಕೆ ನಿರ್ಧಾರ
288 ವಿಧಾನಸಭಾ ಕ್ಷೇತ್ರಗಳಿರುವ ಮಹಾರಾಷ್ಟ್ರದಲ್ಲಿ ಪ್ರಸ್ತುತ ಆಡಳಿತರೂಢ ಮಹಾ ಯುತಿ ಮೈತ್ರಿಯಲ್ಲಿ 202 ಶಾಸಕರಿದ್ದಾರೆ. ಇದರಲ್ಲಿ ಬಿಜೆಪಿ 102, ಅಜಿತ್ ಪವಾರ್ ನೇತೃತ್ವದ ಎನ್ಸಿಪಿ 40, ಮುಖ್ಯಮಂತ್ರಿ ಶಿಂಧೆ ನೇತೃತ್ವದ ಶಿವಸೇನೆ 38 ಹಾಗೂ ಇತರ ಪಕ್ಷಗಳ ಮತ್ತು ಪಕ್ಷೇತರರ 22 ಶಾಸಕರ ಬೆಂಬಲವಿದೆ.
ವಿಪಕ್ಷ ಮಹಾ ವಿಕಾಸ್ ಅಘಾಡಿಯಲ್ಲಿ 69 ಸ್ಥಾನಗಳಿದ್ದು, ಇದರಲ್ಲಿ ಕಾಂಗ್ರೆಸ್ 37, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ 16, ಶರಾದ್ ಪವಾರ್ ನೇತೃತ್ವದ ಎನ್ಸಿಪಿ 12, ಸಮಾಜವಾದಿ ಪಕ್ಷದ 2, ಸಿಪಿಐ(ಎಂ) 1 ಪಿಡಬ್ಲ್ಯೂಪಿಐ ಪಕ್ಷದ 1 ಶಾಸಕರಿದ್ದಾರೆ. ಇಷ್ಟೆ ಅಲ್ಲದೆ, ಎಂಐಎಂ ಪಕ್ಷದ ಇಬ್ಬರು ಶಾಸಕರು ಕೂಡಾ ವಿಪಕ್ಷದಲ್ಲಿದ್ದಾರೆ. ಅದಾಗ್ಯೂ, ರಾಜ್ಯದ 15 ಸ್ಥಾನಗಳು ವಿವಿಧ ಕಾರಣಗಳಿಗೆ ತೆರವುಗೊಂಡಿದೆ.
81 ವಿಧಾನಸಭಾ ಕ್ಷೇತ್ರಗಳಿರುವ ಜಾರ್ಖಂಡ್ನಲ್ಲಿ ಇಂಡಿಯಾ ಮೈತ್ರಿಕೂಟದ ಸರ್ಕಾರವಿದ್ದು, ಹೇಮಂತ್ ಸೋರೆನ್ ಅವರ ಜೆಎಂಎಂ ನೇತೃತ್ವದವಿದೆ. ರಾಜ್ಯದಲ್ಲಿ ಜೆಎಂಎಂ 25, ಕಾಂಗ್ರೆಸ್17, ಸಿಪಿಐಎಂಲ್ 1 ಮತ್ತು ಆರ್ಜೆಡಿಗೆ ಒಬ್ಬ ಶಾಸಕರಿದ್ದಾರೆ. ವಿಪಕ್ಷದಲ್ಲಿ ಬಿಜೆಪಿ 25, ಎಜೆಎಸ್ಯು 3, ಜೆಡಿಯು 1 ಮತ್ತು ಒಬ್ಬ ಪಕ್ಷೇತರ ಶಾಸಕರಿದ್ದಾರೆ. ಇದಲ್ಲದೆ ಜಾರ್ಖಂಡ್ ವಿಧಾನಸಭೆಯಲ್ಲಿ 7 ಸ್ಥಾನಗಳು ತೆರವುಗೊಂಡಿದೆ.
ಇದನ್ನೂ ಓದಿ: ತಮಿಳುನಾಡು| ಕಾರ್ಮಿಕ ಹಕ್ಕು ವಿಚಾರದಲ್ಲಿ ಕೇಂದ್ರದ ಬಿಜೆಪಿಗೂ, ರಾಜ್ಯದ ಡಿಎಂಕೆಗೂ ಯಾವುದೇ ವ್ಯತ್ಯಾಸವಿಲ್ಲ : ನ್ಯಾ. ಚಂದ್ರು
ಎರಡು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲದೆ, ವಿವಿಧ ಕಾರಣಗಳಿಂದ ತೆರವಾಗಿರುವ ಮೂರು ಲೋಕಸಭೆ ಮತ್ತು ಕನಿಷ್ಠ 47 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆಯನ್ನೂ ಆಯೋಗ ಇಂದು ಘೋಷಿಸುವ ಸಂಭವವಿದೆ.
ಕೇರಳದ ವಯನಾಡ್, ಮಹಾರಾಷ್ಟ್ರದ ನಾಂದೇಡ್ ಮತ್ತು ಪಶ್ಚಿಮ ಬಂಗಾಳದ ಬಸಿರ್ಹತ್ ಮೂರು ಲೋಕಸಭಾ ಸ್ಥಾನಗಳು ಖಾಲಿ ಇವೆ. ವಯನಾಡ್ ಕ್ಷೇತ್ರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರಾಯ್ ಬರೇಲಿ ಕ್ಷೇತ್ರವನ್ನು ಉಳಿಸಿಕೊಂಡಿದ್ದರಿಂದ ತೆರವಾಗಿತ್ತು. ಅವರು ಲೋಕಸಭೆ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು.
ನಾಂದೇಡ್ ಪ್ರತಿನಿಧಿಸಿದ್ದ ಕಾಂಗ್ರೆಸ್ ಸಂಸದ ವಸಂತ್ ಚವಾಣ್ ಮತ್ತು ಬಸಿರ್ ಹತ್ ಪ್ರತಿನಿಧಿಸಿದ್ದ ಟಿಎಂಸಿ ಸಂಸದ ಹಾಜಿ ಶೇಖ್ ನೂರುಲ್ ಇಸ್ಲಾಂ ಇತ್ತೀಚೆಗೆ ನಿಧನರಾಗಿದ್ದರಿಂದ ಕ್ಷೇತ್ರವು ತೆರವುಗೊಂಡಿತ್ತು.
ವಿಡಿಯೊ ನೋಡಿ: ನೋಡಬನ್ನಿ ಬಸವನಗುಡಿ ಕಡ್ಲೇಕಾಯಿ ಪರಿಷ


